ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿ.ಸಿ.ಇ.ಎ.) 2023-24 ರ ಮಾರ್ಕೆಟಿಂಗ್ ಸೀಸನ್ ಗಾಗಿ ಎಲ್ಲಾ ಕಡ್ಡಾಯ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂ.ಎಸ್.ಪಿ) ಹೆಚ್ಚಿಸಲು ಅನುಮೋದಿಸಿದೆ.

ರೈತರಿಗೆ(ಬೆಳೆಗಾರರಿಗೆ) ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಕೆಳಗಿನ ಕೋಷ್ಟಕದಲ್ಲಿ ಒದಗಿಸಿದಂತೆ ಬೆಳೆ ವೈವಿಧ್ಯತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2023-24 ರ ಮಾರುಕಟ್ಟೆಗಾಗಿ ಮುಂಗಾರು ಬೆಳೆಗಳ ಎಂ.ಎಸ್.ಪಿ. ಅನ್ನು ಹೆಚ್ಚಿಸಿದೆ:

ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆ.ಎಂ.ಸಿ) 2023-24 ಕ್ಕೆ ಕನಿಷ್ಠ ಬೆಂಬಲ ಬೆಲೆಗಳು

(ಕ್ವಿಂಟಲ್ ಗೆ ರೂ.) 

ಬೆಳೆಗಳು

ಎಂ.ಎಸ್.ಪಿ 2014-15

ಎಂ.ಎಸ್.ಪಿ 2022-23

ಎಂ.ಎಸ್.ಪಿ 2023-24

ಕೆ.ಎಂ.ಸಿ 2023-24 ಆಧಾರಿತ ವೆಚ್ಚ*

2022-23ರ ಎಂ.ಎಸ್.ಪಿ. ಗಿಂತ ಹೆಚ್ಚಳ

ಸೆಂಟ್ ಆಧಾರದಲ್ಲಿ ವೆಚ್ಚದ ಮೇಲಿನ ಮಾರ್ಜಿನ್ ಮೊತ್ತ

ಭತ್ತ -ಸಾಮಾನ್ಯ

1360

2040

2183

1455

143

50

ಭತ್ತ-ದರ್ಜೆ ಎ ^

1400

2060

2203

-

143

-

ಜೋಳ-ಹೈಬ್ರಿಡ್

1530

2970

3180

2120

210

50

ಜೋಳಮಾಲ್ದಂಡಿ^

1550

2990

3225

-

235

-

ಸಜ್ಜೆ

1250

2350

2500

1371

150

82

ರಾಗಿ

1550

3578

3846

2564

268

50

ಮೆಕ್ಕೆಜೋಳ

1310

1962

2090

1394

128

50

ತೊಗರಿ ಬೇಳೆ

4350

6600

7000

4444

400

58

ಹೆಸರು ಬೇಳೆ

4600

7755

8558

5705

803

50

ಉದ್ದು

4350

6600

6950

4592

350

51

ನೆಲಗಡಲೆ

4000

5850

6377

4251

527

50

ಸೂರ್ಯಕಾಂತಿ ಬೀಜ

3750

6400

6760

4505

360

50

ಸೋಯಾಬೀನ್ (ಹಳದಿ)

2560

4300

4600

3029

300

52

ಸಾಸಿವೆ

4600

7830

8635

5755

805

50

ಕಪ್ಪು ಎಳ್ಳು

3600

7287

7734

5156

447

50

ಹತ್ತಿ (ಮಧ್ಯಮ ಸ್ಟೇಪಲ್)

3750

6080

6620

4411

540

50

ಹತ್ತಿ (ಉದ್ದನೆಯ ಸ್ಟೇಪಲ್) ^

4050

6380

7020

-

640

-

 

* ಮಾನವ ಕೂಲಿ ಕಾರ್ಮಿಕರು, ಎತ್ತಿನ-ಗೂಳಿ ಗಾಡಿ ಕಾರ್ಮಿಕರು/ಯಂತ್ರ ಕಾರ್ಮಿಕರು, ಭೂಮಿಯಲ್ಲಿ ಗುತ್ತಿಗೆಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕ, ಕೃಷಿ ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯಾಚರಣೆಗೆ ಡೀಸೆಲ್/ ವಿದ್ಯುತ್ ಇತ್ಯಾದಿ., ವಿವಿಧ ವೆಚ್ಚಗಳು ಮತ್ತು ಕುಟುಂಬದ ದುಡಿಮೆಯ ಲೆಕ್ಕಹಾಕಿದ ಮೌಲ್ಯ, ಒಳಹರಿವಿನ ವೆಚ್ಚಗಳಂತಹ ಎಲ್ಲಾ ಪಾವತಿಸಿದ ಕೃಷಿ ಪೂರಕ ವೆಚ್ಚಗಳನ್ನು ಒಳಗೊಂಡಿರುವ ಒಟ್ಟಾರೆ ವೆಚ್ಚವನ್ನು ಉಲ್ಲೇಖಿಸುತ್ತದೆ.

^  ಭತ್ತ (ಗ್ರೇಡ್ ಎ), ಜೋಳ(ಮಾಲ್ದಂಡಿ) ಮತ್ತು ಹತ್ತಿ (ಉದ್ದನೆಯ ಸ್ಟೇಪಲ್) ಗಾಗಿ ವೆಚ್ಚದ ಡೇಟಾವನ್ನು ಪ್ರತ್ಯೇಕವಾಗಿ ಸಂಕಲಿಸಲಾಗಿಲ್ಲ

2023-24 ರ ಮಾರ್ಕೆಟಿಂಗ್ ಸೀಸನ್ ಗಾಗಿ ಮುಂಗಾರು(ಖಾರಿಫ್)ಬೆಳೆಗಳಿಗೆ ನೀಡುವ ಎಮ್.ಎಸ್.ಪಿ ಹೆಚ್ಚಳವು ಕೇಂದ್ರ ಬಜೆಟ್ 2018-19 ರ ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂ.ಎಸ್.ಪಿ.ಯನ್ನು ನಿಗದಿಪಡಿಸುವ ತನ್ನ ಘೋಷಣೆಗೆ ಅನುಗುಣವಾಗಿದೆ, ಹಾಗೂ ಇದು ರೈತರಿಗೆ ಸಮಂಜಸ ಹಾಗೂ ನ್ಯಾಯಯುತ ಸಂಭಾವನೆಯ ಗುರಿಯನ್ನು ಹೊಂದಿದೆ. ರೈತರಿಗೆ ಅವರ ಬೆಳೆಗಳ ಉತ್ಪಾದನಾ ವೆಚ್ಚದ ಮೇಲೆ ನಿರೀಕ್ಷಿತ ಮಾರ್ಜಿನ್ ಗಳು ಸಜ್ಜೆ (82%) ನಂತರ ತೊಗರಿಬೇಳೆ (58%), ಸೋಯಾಬೀನ್ (52%) ಮತ್ತು ಉದ್ದು (51%) ಸಂದರ್ಭದಲ್ಲಿ ಅತ್ಯಧಿಕ ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ಅವರ ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ಮಾರ್ಜಿನ್ ಗಳನ್ನು ಕನಿಷ್ಠ 50% ಎಂದು ಅಂದಾಜಿಸಲಾಗಿದೆ.   

ಇತ್ತೀಚಿನ ವರ್ಷಗಳಲ್ಲಿ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಸಿರಿಧಾನ್ಯ(ಶ್ರೀಅನ್ನ)ಗಳಂತಹ ಧಾನ್ಯಗಳನ್ನು ಹೊರತುಪಡಿಸಿ, ಇತರ ಬೆಳೆಗಳಿಗೆ ಹೆಚ್ಚಿನ ಎಮ್.ಎಸ್.ಪಿ.ಯನ್ನು ನೀಡುವ ಮೂಲಕ ಸರ್ಕಾರವು ಇತರ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ. ಹೆಚ್ಚುವರಿಯಾಗಿ, ರೈತರು ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸುವುದನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ನಂತಹ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳನ್ನು ಕೂಡಾ ಸರ್ಕಾರವು ಪ್ರಾರಂಭಿಸಿದೆ.

2022-23ರ ಮೂರನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು ದಾಖಲೆಯ 330.5 ದಶಲಕ್ಷ ಟನ್ ಗಳನ್ನು ಮೀರಿದೆ ಎಂದು ಅಂದಾಜಿಸಲಾಗಿದೆ, ಹಿಂದಿನ 2021-22 ವರ್ಷಕ್ಕೆ ಹೋಲಿಸಿದರೆ ಇದು 14.9 ದಶಲಕ್ಷ ಟನ್ ಗಳಷ್ಟು ಹೆಚ್ಚಾಗಿದೆ. ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಆಹಾರ ಧಾನ್ಯ ಉತ್ಪಾದನೆಯ ಏರಿಕೆಯಾಗಿದೆ. 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”