QuoteReleases book 'Lachit Borphukan - Assam's Hero who Halted the Mughals'
Quote“Lachit Borphukan's life inspires us to live the mantra of 'Nation First'”
Quote“Lachit Borphukan's life teaches us that instead of nepotism and dynasty, the country should be supreme”
Quote“Saints and seers have guided our nation since time immemorial”
Quote“Bravehearts like Lachit Borphukan showed that forces of fanaticism and terror perish but the immortal light of Indian life remains eternal”
Quote“The history of India is about emerging victorious, it is about the valour of countless greats”
Quote“Unfortunately, we were taught, even after independence, the same history which was written as a conspiracy during the period of slavery”
Quote“When a nation knows its real past, only then it can learn from its experiences and treads the correct direction for its future. It is our responsibility that our sense of history is not confined to a few decades and centuries”
Quote“We have to make India developed and make Northeast, the hub of India’s growth”

ಮೋಹನ್ ನಾಯೋಕ್, ಲಾಸಿತ್ ಬೊಡ್ಫುಕೊನೊರ್ ಜಿ, ಸರಿ ಖೋ ಬೋಸೋರಿಯಾ, ಜೋಯೋಂತಿ ಉಪಲೋಖ್ಯೆ, ದೇಖೋರ್ ರಾಜಧಾನಿಲೋಯಿ ಓಹಾ, ಆರು ಇಯಾತ್, ಹೋಮೊಬೆಟೊ ಹೂವಾ, ಅಪುನಾಲುಕ್ ಹೊಕೊಲುಕೆ, ಮೂರ್ ಆಂಟೊರಿಕ್ ಒಬಿಬಾಡೋನ್, ಆರು, ಹೇವಾ ಜೊನೈಸು,

 ಅಸ್ಸಾಂನ ರಾಜ್ಯಪಾಲ ಶ್ರೀ ಜಗದೀಶ್ ಮುಖಿ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರದ ಮಂತ್ರಿ ಪರಿಷತ್ತಿನ ನನ್ನ ಸಹೋದ್ಯೋಗಿ ಶ್ರೀ ಸರ್ಬಾನಂದ ಸೋನೋವಾಲ್, ವಿಧಾನಸಭೆಯ ಸ್ಪೀಕರ್, ಶ್ರೀ ಬಿಸ್ವಜಿತ್, ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ತಪನ್ ಕುಮಾರ್ ಗೊಗೊಯ್, ಅಸ್ಸಾಂ ಸರ್ಕಾರದ ಸಚಿವ ಪಿಜುಶ್ ಹಜಾರಿಕಾ ಸರ್, ಸಂಸತ್ ಸದಸ್ಯರು ಹಾಗೂ  ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವವರು ಮತ್ತು ದೇಶ ಮತ್ತು ವಿದೇಶಗಳಲ್ಲಿನ ಅಸ್ಸಾಮಿ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರುವ ಎಲ್ಲ ಗಣ್ಯರೇ...

|

ಭಾರತಮಾತೆಗೆ ಲಾಸಿತ್ ಬೋರ್ಫುಕನ್ ಅವರಂತಹ ಅದಮ್ಯ ವೀರರನ್ನು ನೀಡಿದ ಅಸ್ಸಾಂನ ಭವ್ಯ ಭೂಮಿಗೆ ನಾನು ಮೊದಲು ನಮಸ್ಕರಿಸುತ್ತೇನೆ.  ನಿನ್ನೆ ವೀರ್ ಲಾಸಿತ್ ಬೋರ್ಫುಕನ್ ಅವರ 400ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಯಿತು.  ಈ ಸಂದರ್ಭದಲ್ಲಿ ದೆಹಲಿಯಲ್ಲಿ 3 ದಿನಗಳ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ  ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ.ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸ್ಸಾಂನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ದಿನಗಳಲ್ಲಿ ದೆಹಲಿಗೆ ಬಂದಿರುವುದನ್ನು ಸಹ ನಾನು ಗಮನಿಸಿದ್ದೇನೆ. ಈ ಸಂದರ್ಭದಲ್ಲಿ ನಾನು ನಿಮ್ಮೆಲ್ಲರಿಗೂ, ಅಸ್ಸಾಂನ ಜನತೆ ಮತ್ತು 130 ಕೋಟಿ ದೇಶವಾಸಿಗಳನ್ನು ಅಭಿನಂದಿಸುತ್ತಾ  ಶುಭಾಶಯಗಳನ್ನು ತಿಳಿಸುತ್ತೇನೆ.

 ಸ್ನೇಹಿತರೇ ....

ಸಾವಿರಾರು ವರ್ಷಗಳ ಮಾನವ ಇತಿಹಾಸದಲ್ಲಿ, ವಿಶ್ವದಲ್ಲಿ ಅನೇಕ  ನಾಗರಿಕತೆಗಳು ಹುಟ್ಟಿವೆ.  ಯಶಸ್ಸಿನ ದೊಡ್ಡ ಎತ್ತರವನ್ನು ಸಹ ಏರಿರುವಂತಹ ನಾಗರಿಕತೆಗಳು ಸಹ ಇತಿಹಾಸದಲ್ಲಿ ಹುಟ್ಟಿವೆ. ಇದೆಲ್ಲವನ್ನು ನೋಡಿದಾಗ ಅಸ್ಸಾಮಿನ ನಾಗರಿಕರು ಅಮರರು, ಅಜೇಯರು ಎಂಬುದು ಕಂಡು ಬರುತ್ತದೆ.  ಆದರೆ, ಸಮಯದ ಪರೀಕ್ಷೆಯು ಅನೇಕ ನಾಗರಿಕತೆಗಳನ್ನು ಸೋಲಿಸಿ ಛಿದ್ರಗೊಳಿಸಿದೆ.  ಇಂದು ಜಗತ್ತು ಲಾಸಿತ್ ಬೋರ್ಫುಕನ್ ಅವರ ವೀರತ್ವ  ದೇಶಕ್ಕೆ ಅವರು ನೀಡಿದ ಕೊಡುಗೆಗಳಿಂದಾಗಿ  ಅವಶೇಷಗಳಿಂದಾಗಿ ಭಾರತದ  ಇತಿಹಾಸವನ್ನು ನಿರ್ಣಯಿಸುತ್ತದೆ.  ಭವ್ಯ ಭಾರತದಲ್ಲಿ ನಾವು  ಅನಿರೀಕ್ಷಿತ ಚಂಡಮಾರುತಗಳನ್ನು  ಎದುರಿಸಿದ್ದೇವೆ.  ನಮ್ಮ ಪೂರ್ವಜರು ವಿದೇಶದಿಂದ ಬಂದ ಭಯೋತ್ಪಾದಕರ ಊಹೆಗೂ ನಿಲುಕದ ಭಯೋತ್ಪಾದನೆಯನ್ನು ಎದುರಿಸಿದ್ದರು.ಭಾರತವು ತನ್ನ ಅದೇ ಪ್ರಜ್ಞೆ,  ಶಕ್ತಿ ಮತ್ತು ಅದೇ ಸಾಂಸ್ಕೃತಿಕ ಹೆಮ್ಮೆಯೊಂದಿಗೆ ಇನ್ನೂ ಜೀವಂತವಾಗಿದೆ, ಅಮರತ್ವವನ್ನು ಉಳಿಸಿಕೊಂಡಿದೆ.  ಯಾಕೆಂದರೆ, ಭಾರತದಲ್ಲಿ ಯಾವುದೇ ಸಂಕಷ್ಟದ ಸಮಯ ಬಂದಾಗಲೂ ಯಾವುದೇ ಸವಾಲು ಎದುರಾದರೂ ಅದನ್ನು ಎದುರಿಸಲು ಒಂದಲ್ಲ ಒಂದು ರೀತಿಯ ವಿಭೂತಿ ಅವತರಿಸಿರುತ್ತದೆ.  ನಮ್ಮ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಸಲುವಾಗಿ, ಋಷಿಮುನಿಗಳು ಬಂದರು.  ತಾಯಿ ಭಾರತಿಯ ಗರ್ಭದಿಂದ ಹುಟ್ಟಿದ ವೀರರು ಭಾರತವನ್ನು ಕತ್ತಿಯ ಬಲದಿಂದ ಹತ್ತಿಕ್ಕಲು ಬಯಸಿದ ಆಕ್ರಮಣಕಾರರ ವಿರುದ್ಧ ಪ್ರಬಲವಾಗಿ ಹೋರಾಡಿದರು.  ಲಾಸಿತ್ ಬೋರ್ಫುಕನ್ ಕೂಡ ಅಂತಹ ದೇಶದ ವೀರ ಯೋಧ.  ಮತಾಂಧತೆ ಮತ್ತು ಭಯೋತ್ಪಾದನೆಯ ಪ್ರತಿಯೊಂದು ಬೆಂಕಿಯು ಆರಿಹೋಗಿದೆ, ಆದರೆ ಭಾರತದ ಅಮರ-ಜ್ಯೋತಿ, ಜೀವನ-ಬೆಳಕು ಅಮರವಾಗಿದೆ ಎನ್ನುವುದನ್ನು ಅವರು ತೋರಿಸಿದ್ದಾರೆ.

ಸ್ನೇಹಿತರೇ...

ಅಸ್ಸಾಂನ ಇತಿಹಾಸವು ಭಾರತದ ಪ್ರವಾಸ ಮತ್ತು ಸಂಸ್ಕೃತಿಯ ಅಮೂಲ್ಯವಾದ ಪರಂಪರೆಯಾಗಿದೆ.  ನಾವು ವಿಭಿನ್ನ ವಿಚಾರಗಳು-ಸಿದ್ಧಾಂತಗಳು, ಸಮಾಜಗಳು-ಸಂಸ್ಕೃತಿಗಳು, ನಂಬಿಕೆಗಳು-ಸಂಪ್ರದಾಯಗಳನ್ನು ಒಟ್ಟಿಗೆ ಜೋಡಿಸುತ್ತೇವೆ. ಅಹೋಮ್ ಆಳ್ವಿಕೆಯಲ್ಲಿ ಎಲ್ಲರನ್ನೂ ಕರೆದುಕೊಂಡು ಹೋರಾಡಿದ ಶಿವಸಾಗರ್ ಶಿವ್ ಡೌಲ್, ದೇವಿ ಡೌಲ್ ಮತ್ತು ವಿಷ್ಣು ಡೌಲ್ ಇಂದಿಗೂ ಇದಕ್ಕೆ ಉದಾಹರಣೆಗಳಾಗಿದ್ದಾರೆ. ಆದರೆ, ಯಾರಾದರೂ ನಮ್ಮನ್ನು ಕತ್ತಿಯ ಬಲದಿಂದ ಬಗ್ಗಿಸಲು ಬಯಸಿದರೆ, ನಮ್ಮ ಶಾಶ್ವತ ಗುರುತನ್ನು ಬದಲಾಯಿಸಲು ಬಯಸಿದರೆ, ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ತಕ್ಕಪಾಠ ಕಲಿಸಬೇಕೆನ್ನುವುದು ನಮಗೆ ತಿಳಿದೇ ಇದೆ.  ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳು ಇದಕ್ಕೆ ಸಾಕ್ಷಿಯಾಗಿದೆ. ಅಸ್ಸಾಂನ ಜನರು ತುರ್ಕರು, ಆಫ್ಘನ್ನರು, ಮೊಘಲರ ಆಕ್ರಮಣಗಳ ವಿರುದ್ಧ ಅನೇಕ ಬಾರಿ ಹೋರಾಡಿ ಆಕ್ರಮಣಕಾರರನ್ನು ಹಿಂದಕ್ಕೆ ಓಡಿಸಿದರು.  ತಮ್ಮೆಲ್ಲ ಶಕ್ತಿಯನ್ನು ಪ್ರಯೋಗಿಸಿ ಮೊಘಲರು ಗುವಾಹಟಿಯನ್ನು ವಶಪಡಿಸಿಕೊಂಡರಾದರೂ ಮತ್ತೊಮ್ಮೆ ಲಾಸಿತ್ ಬೋರ್ಫುಕನ್‌ನಂತಹ ಯೋಧರು ಬಂದು ಗುವಾಹಟಿಯನ್ನು ದಬ್ಬಾಳಿಕೆಯ ಮೊಘಲ್ ಸುಲ್ತಾನರ ಕೈಯಿಂದ ಮುಕ್ತಗೊಳಿಸಿದರು.  ಔರಂಗಜೇಬ್‌ನ   ಕೃತ್ಯವನ್ನು  ವಿಫಲಗೊಳಿಸಿದರು.  ವೀರ್ ಲಾಸಿತ್ ಬೋರ್ಫುಕನ್ ತೋರಿದ ಶೌರ್ಯ, ಸಾರಾಘಾಟ್‌ನಲ್ಲಿ ತೋರಿದ ಧೈರ್ಯ, ಮಾತೃಭೂಮಿಯ ಮೇಲಿನ ಅಪಾರ ಪ್ರೀತಿಯ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತದೆ.  ಅಸ್ಸಾಂ ತನ್ನ ಸಾಮ್ರಾಜ್ಯದ ಪ್ರತಿಯೊಬ್ಬ ಪ್ರಜೆಯನ್ನು ಅಗತ್ಯವಿದ್ದಾಗ ತಮ್ಮ ತಾಯ್ನಾಡನ್ನು ರಕ್ಷಿಸಲು ಸಿದ್ಧವಿರಬೇಕೆನ್ನುವುದನ್ನು ತೋರಿಸಿಕೊಟ್ಟು ಪ್ರತಿಯೊಬ್ಬ ಯುವಕನು  ಮಣ್ಣಿನ ಸೈನಿಕನಾಗಿರಬೇಕೆಂಬ ಸಂದೇಶ ಸಾರಿದ್ದು ಈ "ಲಾಸಿತ್ ಬೋರ್ಪುಕನ್ ".  ಲಾಸಿತ್ ಬೋರ್ಫುಕನ್ ಅವರಂತಹ ಧೈರ್ಯ ಮತ್ತು ನಿರ್ಭಯತೆ ಅಸ್ಸಾಮಿನ ಗುರುತಾಗಿದೆ.ಇದೇ ಕಾರಣಕ್ಕಾಗಿಯೇ ಇಂದಿಗೂ ಅವರನ್ನು ಸ್ಮರಿಸಿಕೊಳ್ಳುತ್ತೇವೆ. 

|

ಆದ್ದರಿಂದಲೇ ಇಂದಿಗೂ ನಾವು ಅಸ್ಸಾಮಿಯಲ್ಲಿ ಹೇಳುವುದು -" ಹುಣಿಸಾನೆ ಲೋರಾಹೋಟ್, ಲಸಿತರ್ ಕೊಥಾ ಮುಗೊಲ್ ಬಿಜೋಯಿ ಬೀರ್, ಇತಿಹಾಖ್ ಲಿಖಾ" ಅಂದರೆ ಮಕ್ಕಳೇ, ನೀವು ಲಾಸಿತ್ ಕಥೆಯನ್ನು ಕೇಳಿದ್ದೀರಾ?  ಮೊಘಲ್-ವಿಜಯ ವೀರನ ಹೆಸರು ಇತಿಹಾಸದಲ್ಲಿ ದಾಖಲಾಗಿದೆ.

ಸ್ನೇಹಿತರೇ...

ಸಾವಿರಾರು ವರ್ಷಗಳ ಜೀವನೋತ್ಸಾಹ, ನಮ್ಮ ಶಕ್ತಿಯ ನಿರಂತರತೆ, ಇದು ಭಾರತದ ಇತಿಹಾಸ.  ಆದರೆ, ನಮ್ಮನ್ನು ಯಾವಾಗಲೂ ಲೂಟಿಕೋರರು, ಸೋತವರು ಎಂದು ಹೇಳುತ್ತಾ ಶತಮಾನಗಳಿಂದಲೂ ಪ್ರಯತ್ನ ಮಾಡಲಾಗುತ್ತಿದೆ. ಭಾರತದ ಇತಿಹಾಸವು ಕೇವಲ ಗುಲಾಮಗಿರಿಯ ಇತಿಹಾಸವಲ್ಲ.  ಭಾರತದ ಇತಿಹಾಸವೆಂದರೆ ಯೋಧರ ಇತಿಹಾಸ, ವಿಜಯದ ಇತಿಹಾಸ.  ದಬ್ಬಾಳಿಕೆಗಾರರ ​​ವಿರುದ್ಧ ಅಭೂತಪೂರ್ವ ಶೌರ್ಯ ಮತ್ತು ಶೌರ್ಯ ಪ್ರದರ್ಶಿಸಿದ ಇತಿಹಾಸವೇ ಭಾರತದ ಇತಿಹಾಸ.  ಭಾರತದ ಇತಿಹಾಸ ಎಂದರೆ ವಿಜಯ. ಭಾರತದ ಇತಿಹಾಸವೆನ್ನುವುದು ಯುದ್ಧ, ಭಾರತದ ಇತಿಹಾಸ ತ್ಯಾಗ, ತಪಸ್ಸು, ಭಾರತದ ಇತಿಹಾಸ ಶೌರ್ಯ, ತ್ಯಾಗ, ಶ್ರೇಷ್ಠ ಸಂಪ್ರದಾಯ.  ಆದರೆ ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರವೂ ನಮಗೆ ಅದೇ ಇತಿಹಾಸವನ್ನು ಕಲಿಸಲಾಯಿತು, ಅದು ಕೂಡ ಗುಲಾಮಗಿರಿಯ ಅವಧಿಯಲ್ಲಿ ಹುಟ್ಟಿಕೊಂಡಿತು.  ಸ್ವಾತಂತ್ರ್ಯಾನಂತರ ನಮ್ಮನ್ನು ಗುಲಾಮರನ್ನಾಗಿಸುವ ಪರಕೀಯರ ಅಜೆಂಡಾವನ್ನು ಬದಲಾಯಿಸುವ ಅಗತ್ಯವಿತ್ತು, ಆದರೆ ಇದನ್ನು ಮಾಡಲಿಲ್ಲ.  ದೇಶದ ಮೂಲೆಮೂಲೆಯಲ್ಲಿ, ಭಾರತಮಾತೆಯ ವೀರ ಪುತ್ರರು ಯಾವ ರೀತಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ತಮ್ಮ ಜೀವನವನ್ನು ಮುಡುಪಾಗಿಟ್ಟರೆನ್ನುವ ಇತಿಹಾಸವನ್ನು ಉದ್ದೇಶಪೂರ್ವಕವಾಗಿಯೇ ಹತ್ತಿಕ್ಕಲಾಯಿತು.ಹಾಗಾದರೆ,   ಲಾಸಿತ್ ಬೊರ್ಪುಕನ ಶೌರ್ಯ ಪರವಾಗಿಲ್ಲವೇ?  ದೇಶದ ಅಸ್ಮಿತೆಗಾಗಿ ಮೊಘಲರ ವಿರುದ್ಧ ಯುದ್ಧದಲ್ಲಿ ಹೋರಾಡಿದ ಅಸ್ಸಾಂನ ಸಾವಿರಾರು ಜನರ ಬಲಿದಾನವು ಲೆಕ್ಕಕ್ಕಿಲ್ಲವೇ?  ದುಷ್ಕೃತ್ಯಗಳ ಸುಧೀರ್ಘ ಕಾಲಘಟ್ಟದಲ್ಲಿ ದಮನಿತರ ವಿರುದ್ಧ ವಿಜಯದ ಸಾವಿರಾರು ಕಥೆಗಳಿವೆ, ಯಶಸ್ಸು ಎಂಬ ಕಥೆಗಳಿವೆ, ತ್ಯಾಗದ ಕಥೆಗಳಿವೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ.  ಇವರಿಗೆ ಇತಿಹಾಸದ ಮುಖ್ಯವಾಹಿನಿಯಲ್ಲಿ ಸ್ಥಾನ ನೀಡದೆ ಈ ಹಿಂದೆ ಮಾಡಿದ ತಪ್ಪನ್ನು ದೇಶ ಸರಿಪಡಿಸುತ್ತಿದೆ.  ದೆಹಲಿಯಲ್ಲಿ ನಡೆಯುತ್ತಿರುವ ಈ ಘಟನೆಯೇ ಇದಕ್ಕೆ ಪ್ರತಿಬಿಂಬ.  ಮತ್ತು ದೆಹಲಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಿದ್ದಕ್ಕಾಗಿ ನಾನು ಹಿಮಂತ ಜಿ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.

|

ಕೆಲವು ದಿನಗಳ ಹಿಂದೆ, ಅಸ್ಸಾಂ ಸರ್ಕಾರವು ವೀರ್ ಲಾಸಿತ್ ಬೋರ್ಫುಕನ್ ಅವರ ಶೌರ್ಯ ಸಾಹಸವನ್ನು ಹೆಚ್ಚುಹೆಚ್ಚು ಜನರಿಗೆ ಪ್ರವೇಶಿಸಲು ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿತು.  ಹಿಮಂತಜಿ ಅವರ ಸರ್ಕಾರವು ಅಸ್ಸಾಂನ ಐತಿಹಾಸಿಕ ವೀರರ ಗೌರವಾರ್ಥ ಸ್ಮಾರಕವನ್ನು ಸ್ಥಾಪಿಸಲು ಯೋಜಿಸಿದೆ.ಈ ಮೂಲಕ ನಿಸ್ಸಂಶಯವಾಗಿ, ಇಂತಹ ಪ್ರಯತ್ನಗಳಿಂದ, ನಮ್ಮ ಯುವಜನರು ಮತ್ತು ಭವಿಷ್ಯದ ಪೀಳಿಗೆಗೆ ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ.  ಅಸ್ಸಾಂ ಸರ್ಕಾರವು ತನ್ನ ದೃಷ್ಟಿಯೊಂದಿಗೆ ಜನರನ್ನು ಸಂಪರ್ಕಿಸಲು ಥೀಮ್ ಹಾಡನ್ನು ಸಹ ಪ್ರಾರಂಭಿಸಿದೆ.  ಇದರ ಸಾಹಿತ್ಯವು ಕೂಡ ಅದ್ಭುತವಾಗಿದೆ.  ಓಖೋಮೋರ್ ಅಕಾಖೋರ್, ಓಖೋಮೋರ್ ಅಕಾಖೋರ್, ಭೂತತೋರಾ ತುಮಿ, ಹಹಾಹೋರ್ ಹೊಕೋಟಿ, ಪೋರಿಭಾಖಾ ತುಮಿ, ಅಂದರೆ ನೀವು ಅಸ್ಸಾಮಿನ ಆಕಾಶದಲ್ಲಿ ಧೃವತಾರೆ.  ಧೈರ್ಯದ ವ್ಯಾಖ್ಯಾನ ನೀನು.  ವಾಸ್ತವವಾಗಿ, ವೀರ್ ಲಾಸಿತ್ ಬೋರ್ಫುಕನ್ ಅವರ ಜೀವನವು ದೇಶವು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳನ್ನು ಎದುರಿಸಲು ನಮಗೆ ಸ್ಫೂರ್ತಿ ನೀಡುತ್ತದೆ.  ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡದೆ ದೇಶದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲು ಅವರ ಜೀವನ ನಮಗೆ ಸ್ಫೂರ್ತಿ ನೀಡುತ್ತದೆ.  ಅವರ ಜೀವನವು ನಮಗೆ ಸ್ಫೂರ್ತಿ ನೀಡುತ್ತದೆ- ನಮಗೆ ಕುಟುಂಬವಾದ, ಸ್ವಜನಪಕ್ಷಪಾತವಲ್ಲ, ಆದರೆ ದೇಶವು ದೊಡ್ಡದಾಗಿರಬೇಕು.

 ವೀರ್ ಲಾಸಿತ್ ಅವರು ರಾಷ್ಟ್ರವನ್ನು ರಕ್ಷಿಸುವ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗದ್ದಕ್ಕೆ  "ಮೆಮೊಯ್" ಗೆ  ಶಿಕ್ಷೆ ವಿಧಿಸಿದ್ದರು ಎಂದು ಹೇಳಲಾಗುತ್ತದೆ.   "ದೇಖೋತ್ ಕೋಯಿ, ಮೊಮೈ ದಂಗೋರ್ ನೋಹೋಯ್" ಅಂದರೆ, ಮೊಮೈ ದೇಶಕ್ಕಿಂತ ದೊಡ್ಡದಲ್ಲ.  ಅಂದರೆ ಯಾವುದೇ ವ್ಯಕ್ತಿ, ಯಾವ ಸಂಬಂಧವೂ ದೇಶಕ್ಕಿಂತ ದೊಡ್ಡದಲ್ಲ ಎಂದು ವೀರ್ ಲಾಸಿತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.  ತಮ್ಮ ಕಮಾಂಡರ್ ದೇಶಕ್ಕೆ ಎಷ್ಟು ಪ್ರಾಧಾನ್ಯ ನೀಡುತ್ತಾನೆ ಎಂದು ವೀರ್ ಲಾಸಿತ್ ಸೈನ್ಯ ಕೇಳಿದಾಗ, ಆ ಪುಟ್ಟ ಸೈನಿಕನ ಧೈರ್ಯ ಎಷ್ಟು ಹೆಚ್ಚಾಗಬಹುದೆನ್ನುವುದನ್ನು ನೀವು ಊಹಿಸಬಹುದಾಗಿದೆ.  

|

ಸ್ನೇಹಿತರೇ.....

ಧೈರ್ಯವೇ ಗೆಲುವಿಗೆ ಆಧಾರ.  ಇಂದಿನ ನವ ಭಾರತ, ನೇಷನ್ ಫಸ್ಟ್, ನೇಷನ್ ಫಸ್ಟ್ ಎಂಬ ಈ ಆದರ್ಶದೊಂದಿಗೆ ಮುನ್ನಡೆಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.


 ಒಂದು ರಾಷ್ಟ್ರವು ತನ್ನ ನಿಜವಾದ ಹಿಂದಿನ ಇತಿಹಾಸವನ್ನು ತಿಳಿದಾಗ, ಅದು ತನ್ನ ಅನುಭವಗಳಿಂದ ಮಾತ್ರ ಕಲಿಯಲು ಸಾಧ್ಯವಾಗುತ್ತದೆ.  ನೈಜ ಇತಿಹಾಸವನ್ನು ಬಲ್ಲವನೆಂದಿಗೂ ತನ್ನ ದೇಶದ  ಭವಿಷ್ಯಕ್ಕಾಗಿ ಸರಿಯಾದ ದಿಕ್ಕನ್ನು ಪಡೆಯುತ್ತಾನೆ.  ನಮ್ಮ ಇತಿಹಾಸದ ದೃಷ್ಟಿಯನ್ನು  ಶತಶತಮಾನಗಳವರೆಗೆ ಸೀಮಿತಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ.  ಇಂದು ನಾನು ಅಸ್ಸಾಂನ ಪ್ರಸಿದ್ಧ ಗೀತರಚನೆಕಾರ ಮತ್ತು ಭಾರತ ರತ್ನ ಭೂಪೇನ್ ಹಜಾರಿಕಾ ರಚಿಸಿದ ಹಾಡಿನ ಎರಡು ಸಾಲುಗಳನ್ನು ಪುನರಾವರ್ತಿಸಲು ಬಯಸುತ್ತೇನೆ.  ಅದು ಹೇಳುತ್ತದೆ - ಮೋಯಿ ಲಾಸಿತ್ ಕೊಯಿಸು, ಮೋಯಿ ಲಾಸಿತ್ ಕೊಯಿಸು, ಮುರ್ ಹೋಹೋನೈ ನಾಮ್ ಲುವಾ, ಲುಯಿಟ್ ಪೊರಿಯಾ ದೇಕಾ ಡೋಲ್.  ಅಂದರೆ, ನಾನು ಬ್ರಹ್ಮಪುತ್ರ ಬ್ಯಾಂಕಿನ ಯುವಕ ಲಾಸಿತ್ ಮಾತನಾಡುತ್ತಿದ್ದೇನೆ, ನನ್ನ ಹೆಸರನ್ನು ಮತ್ತೆ ಮತ್ತೆ ತೆಗೆದುಕೊಳ್ಳಿ.  ನಿರಂತರ ಸ್ಮರಣೆಯಿಂದ ಮಾತ್ರ ನಾವು ಮುಂದಿನ ಪೀಳಿಗೆಗೆ ಸರಿಯಾದ ಇತಿಹಾಸವನ್ನು ಪರಿಚಯಿಸಬಹುದು.  ಸ್ವಲ್ಪ ಸಮಯದ ಹಿಂದೆ ನಾನು ಲಾಸಿತ್ ಬೋರ್ಫುಕನ್ ಜಿ ಅವರ ಜೀವನವನ್ನು ಆಧರಿಸಿದ ಪ್ರದರ್ಶನವನ್ನು ನೋಡಿದೆ, ಅದು ತುಂಬಾ ಸ್ಫೂರ್ತಿದಾಯಕವಾಗಿತ್ತು, ಶೈಕ್ಷಣಿಕವಾಗಿತ್ತು.  ಇದರೊಂದಿಗೆ ಅವರ ಶೌರ್ಯ ಸಾಹಸದ ಕುರಿತು ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡುವ ಸೌಭಾಗ್ಯವೂ ನನ್ನದಾಯಿತು.  ಇಂತಹ ಘಟನೆಗಳಿಂದ ಮಾತ್ರ ದೇಶದ ನಿಜವಾದ ಇತಿಹಾಸ ಮತ್ತು ಐತಿಹಾಸಿಕ ಘಟನೆಗಳೊಂದಿಗೆ ಜನರನ್ನು ಸಂಪರ್ಕಿಸಲು ಸಾಧ್ಯ.

|

ಸ್ನೇಹಿತರೇ...

ಇದೆಲ್ಲವನ್ನು ನೋಡಿದರೆ ಅಸ್ಸಾಂನೊಂದಿಗೆ ದೇಶದ ಕಲಾವಿದರ ಸಂಪರ್ಕ ಕಲ್ಪಿಸುವ ಮೂಲಕ, ಛತ್ರಪತಿ ಶಿವಾಜಿ ಮಹಾರಾಜರ ಜನತಾ ರಾಜ ನಾಟ್ಯ ಪ್ರಯೋಗವನ್ನು ನಾವು ಯೋಚಿಸಬಹುದು ಎಂಬ ಆಲೋಚನೆ ನನ್ನ ಮನಸ್ಸಿಗೆ ಬಂದಿತು.  ಇಡೀ ಕಾರ್ಯಕ್ರಮದಲ್ಲಿ ಸುಮಾರು 250-300 ಕಲಾವಿದರು, ಆನೆಗಳು, ಕುದುರೆಗಳು ಸಹ ಪಾಲ್ಗೊಂಡು  ಅತ್ಯಂತ ಆಕರ್ಷಕವಾದ ಕಾರ್ಯಕ್ರಮವೆನಿಸಿದೆ.  ಲಾಸಿತ್ ಬೋರ್ಫುಕನ್ ಜಿ ಅವರ ಜೀವನದ ಮೇಲೆ  ಅಂತಹ ನಾಟಕೀಯ ಪ್ರಯೋಗವನ್ನು ಸಿದ್ಧಪಡಿಸುತ್ತೇವೆ ಮತ್ತು ಅದನ್ನು ಭಾರತದ ಮೂಲೆ ಮೂಲೆಗಳಿಗೆ ಕೊಂಡೊಯ್ದು  'ಒಂದು ಭಾರತ, ಅತ್ಯುತ್ತಮ ಭಾರತ' ಎಂಬ ನಿರ್ಣಯಕ್ಕೆ ಹೆಚ್ಚಿನ ಬಲವನ್ನು ನೀಡೋಣ.  ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಬೇಕು, ನಾವು ಈಶಾನ್ಯವನ್ನು ಭಾರತದ ಸಾಮರ್ಥ್ಯದ ಕೇಂದ್ರ ಬಿಂದುವನ್ನಾಗಿ ಮಾಡಬೇಕು.  ವೀರ್ ಲಾಸಿತ್ ಬೋರ್ಫುಕನ್ ಅವರ 400 ನೇ ಜನ್ಮ ವಾರ್ಷಿಕೋತ್ಸವವು ನಮ್ಮ ಈ ನಿರ್ಣಯಗಳನ್ನು ಬಲಪಡಿಸುತ್ತದೆ ಮತ್ತು ದೇಶವು ತನ್ನ ಗುರಿಗಳನ್ನು ಸಾಧಿಸುತ್ತದೆ ಎಂದು ನನಗೆ ಖಾತ್ರಿಯಿದೆ.  ಈ ಭಾವನೆಯೊಂದಿಗೆ, ನಾನು ಮತ್ತೊಮ್ಮೆ ಅಸ್ಸಾಂ ಸರ್ಕಾರಕ್ಕೆ, ಹಿಮಂತ ಜೀ ಮತ್ತು ಅಸ್ಸಾಂನ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.  ಈ ಪವಿತ್ರ ಸಮಾರಂಭದಲ್ಲಿ ಪುಣ್ಯ ಸಂಪಾದಿಸುವ ಅವಕಾಶವೂ ಸಿಕ್ಕಿತು.  ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.

 ಧನ್ಯವಾದಗಳು.

  • दिग्विजय सिंह राना September 20, 2024

    हर हर महादेव
  • JBL SRIVASTAVA May 30, 2024

    . मोदी जी 400 पार
  • Vaishali Tangsale February 13, 2024

    🙏🏻🙏🏻
  • ज्योती चंद्रकांत मारकडे February 12, 2024

    जय हो
  • Babla sengupta December 24, 2023

    Babla sengupta
  • Rohit Sinha November 24, 2023

    जय श्री राम 🙏🏻
  • DEBASHIS ROY November 27, 2022

    bharat mata ki joy
  • OX PITCH November 27, 2022

    what a thought
  • Markandey Nath Singh November 26, 2022

    वन्देमातरम
  • OTC First Year November 26, 2022

    🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ✔️ धर्म, संस्कृति और संस्कार की रक्षा हेतू भाजपा को मतदान करें। ✔️जब तक मोदी तब तक चोटी फिर बडे भाई का कुर्ता और छोटे भाई का पायजामा पहनने को तैयार रहें।
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India Eyes Rs 3 Lakh Crore Defence Production By 2025 After 174% Surge In 10 Years

Media Coverage

India Eyes Rs 3 Lakh Crore Defence Production By 2025 After 174% Surge In 10 Years
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಮಾರ್ಚ್ 2025
March 26, 2025

Empowering Every Indian: PM Modi's Self-Reliance Mission