Quote"ಸರ್ಕಾರದ ಮೇಲೆ ತಮ್ಮ ನಂಬಿಕೆಯನ್ನು ಪದೇ ಪದೇ ತೋರಿಸಿದ್ದಕ್ಕಾಗಿ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಂದಿದ್ದೇನೆ"
Quote"ಪ್ರತಿಪಕ್ಷಗಳು ರಾಜಕೀಯಕ್ಕೇ ಹೆಚ್ಚು ಮಹತ್ವ ನೀಡಿದ್ದರಿಂದ ಸದನದಲ್ಲಿ ಅನೇಕ ಮಹತ್ವದ ಶಾಸನಗಳು ಅತ್ಯಗತ್ಯ ಚರ್ಚೆಯಿಂದ ವಂಚಿತವಾಗಿವೆ"
Quote"21ನೇ ಶತಮಾನದ ಈ ಅವಧಿಯು ಮುಂದಿನ ಸಾವಿರ ವರ್ಷಗಳವರೆಗೆ ದೇಶದ ಮೇಲೆ ಪರಿಣಾಮ ಬೀರುತ್ತದೆ. ನಾವೆಲ್ಲರೂ ಒಂದೇ ಗುರಿಯ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು"
Quote"ನಾವು ಭಾರತದ ಯುವಕರಿಗೆ ಹಗರಣಗಳಿಂದ ಮುಕ್ತವಾದ ಸರ್ಕಾರವನ್ನು ನೀಡಿದ್ದೇವೆ"
Quote"ಇಂದು ಬಡವರ ಹೃದಯದಲ್ಲಿ ಅವರ ಕನಸುಗಳನ್ನು ಈಡೇರುವ ವಿಶ್ವಾಸ ಮೂಡಿದೆ"
Quote"ಪ್ರತಿಪಕ್ಷಗಳು ಅಪನಂಬಿಕೆಯಲ್ಲಿ ಆಳವಾಗಿ ಮುಳುಗಿರುವುದರಿಂದ ಜನರ ವಿಶ್ವಾಸವನ್ನು ನೋಡಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ"
Quote"2028ರಲ್ಲಿ, ನೀವು ಅವಿಶ್ವಾಸ ನಿಲುವಳಿಯನ್ನು ಮಂಡಿಸುವ ಹೊತ್ತಿಗೆ ದೇಶವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ"
Quote"ಪ್ರತಿಪಕ್ಷಗಳು ಹೆಸರುಗಳನ್ನು ಬದಲಾಯಿಸುವುದರಲ್ಲಿ ನಂಬಿಕೆ ಇರಿಸಿವೆ, ಆದರೆ ಅವರು ತಮ್ಮ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ"
Quote"ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶದ ಸಂಸ್ಥಾಪಕರು ಸದಾ ವಂಶಪಾರಂಪರ್ಯ ರಾಜಕೀಯವನ್ನು ವಿರೋಧಿಸಿದರು"
Quote"ಮಹಿಳೆಯರ ವಿರುದ್ಧದ ಅಪರಾಧಗಳನ್ನು ಒಪ್ಪಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೆಲಸ ಮಾಡಲಿವೆ"
Quote"ಮಣಿಪುರದಲ್ಲಿ ಶಾಂತಿ ನೆಲೆಸಲಿದೆ ಮತ್ತು ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ"
Quote"ಮಣಿಪುರದ ಜನರಿಗೆ, ಮಣಿಪುರದ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಮತ್ತು ಸದನವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಭರವಸೆ ನೀಡುತ್ತೇನೆ"
Quote"ಮಣಿಪುರವನ್ನು ಮತ್ತೆ ಅಭಿವೃದ್ಧಿಯ ಹಾದಿಗೆ ತರಲು ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ"
Quote"ನಮ್ಮ ಸರ್ಕಾರ ಈಶಾನ್ಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದೆ"
Quote"ನಮಗೆ, ʻಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ʼ ಒಂದು ಘೋಷಣೆಯಲ್ಲ, ಅದೊಂದು ನಂಬಿಕೆ, ಅದೊಂದು ಬದ್ಧತೆ"
Quote"ಸಂಸತ್ತು ಯಾವುದೇ ಒಂದು ಪಕ್ಷಕ್ಕೆ ವೇದಿಕೆಯಲ್ಲ. ಸಂಸತ್ತು ದೇಶದ ಗೌರವಾನ್ವಿತ ಅತ್ಯುನ್ನತ ಸಂಸ್ಥೆ. ಇಲ್ಲಿರುವ ಪ್ರತಿ ಸೆಕೆಂಡನ್ನು ದೇಶಕ್ಕಾಗಿ ಸದ್ವಿನಿಯೋಗವಾಗಬೇಕು"
Quote"ಇಂದಿನ ಭಾರತವು ಒತ್ತಡದಲ್ಲಿ ಕುಸಿಯುವುದಿಲ್ಲ. ಇಂದಿನ ಭಾರತವು ಬಾಗುವುದಿಲ್ಲ, ಆಯಾಸಗೊಳ್ಳುವುದಿಲ್ಲ ಮತ್ತು ನಿಲ್ಲುವುದಿಲ್ಲ"

ಗೌರವಾನ್ವಿತ ಸ್ಪೀಕರ್,

ಕಳೆದ 3 ದಿನಗಳಿಂದ ಗೌರವಾನ್ವಿತ ಹಲವು ಹಿರಿಯ ಸದಸ್ಯರು ತಮ್ಮ ಆಲೋಚನೆ, ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಅವರ ಬಹುತೇಕ ಎಲ್ಲಾ ಅಭಿಪ್ರಾಯಗಳು ನನಗೆ ವಿವರವಾಗಿ ಮುಟ್ಟಿವೆ. ಕೆಲವು ಭಾಷಣಗಳನ್ನು ನಾನೇ ಕೇಳಿದ್ದೇನೆ. ಗೌರವಾನ್ವಿತ ಸಭಾಧ್ಯಕ್ಷರೇ, ಇಂದು, ನಮ್ಮ ಸರ್ಕಾರದ ಮೇಲೆ ಪದೇಪದೆ ಅಪಾರ ನಂಬಿಕೆ ತೋರಿಸುತ್ತಿರುವ ಈ ದೇಶದ ಕೋಟ್ಯಂತರ ನಾಗರಿಕರಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸಲು ನಾನು ಇಲ್ಲಿದ್ದೇನೆ. ಗೌರವಾನ್ವಿತ ಸ್ಪೀಕರ್, ದೇವರು ತುಂಬಾ ಕರುಣಾಮಯಿ ಎಂದು ಹೇಳಲಾಗುತ್ತದೆ. ಅವನು ತನ್ನ ಆಸೆಗಳನ್ನು ಯಾರಾದರೂ ಅಥವಾ ಇನ್ನೊಬ್ಬರ ಮೂಲಕ ಪೂರೈಸುತ್ತಾನೆ, ಯಾರನ್ನಾದರೂ ಮಾಧ್ಯಮವನ್ನಾಗಿ ಮಾಡುವುದು ದೇವರ ಇಚ್ಛೆಯಾಗಿದೆ. ದೇವರ ಇಚ್ಛೆಯಂತೆ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ. 2018ರಲ್ಲಿ ವಿರೋಧ ಪಕ್ಷದ ನನ್ನ ಸಹೋದ್ಯೋಗಿಗಳು ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ದೇವರ ಆಜ್ಞೆಯೂ ಇದೇ ಆಗಿತ್ತು. ಅವಿಶ್ವಾಸ ಗೊತ್ತುವಳಿಯು ನಮ್ಮ ಸರ್ಕಾರಕ್ಕೆ ಸದನದ ಪರೀಕ್ಷೆ ಅಲ್ಲ, ಬದಲಿಗೆ ಅದು ಅವರ ಸ್ವಂತ ಅಂತಸ್ತಿನ ಪರೀಕ್ಷೆ ಎಂದು ನಾನು ಆ ಸಮಯದಲ್ಲಿ ಹೇಳಿದ್ದೆ. ಆ ದಿನವೂ ಹೇಳಿದ್ದೆ. ಮತ್ತು ಅದು ಬದಲಾದಂತೆ, ಪ್ರತಿಪಕ್ಷಗಳು ಮತದಾನ ನಡೆದಾಗ ಅವರು ಹೊಂದಿದ್ದಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ನಾವು ಜನರ ಬಳಿಗೆ (ಮತ ಕೇಳಲು) ಹೋದಾಗ, ಜನರು ಪೂರ್ಣ ಬಲದಿಂದ ಅವರ ಮೇಲೆ ಅವಿಶ್ವಾಸ ಘೋಷಿಸಿದರು. ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತು. ಚುನಾವಣೆಯಲ್ಲಿ ಬಿಜೆಪಿಯೂ ಸಹ ಹೆಚ್ಚು ಸ್ಥಾನಗಳನ್ನು ಗಳಿಸಿತು. ಒಂದು ರೀತಿಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ನಮಗೆ ಮಂಗಳಕರವಾಗಿದ್ದು, 2024ರ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಬಿಜೆಪಿ ಜನರ ಆಶೀರ್ವಾದದೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಅಭೂತಪೂರ್ವ ಗೆಲುವು ಸಾಧಿಸಲು ನೀವೆಲ್ಲಾ ನಿರ್ಧರಿಸಿದ್ದೀರಿ ಎಂದು ನಾನು ಇಂದೇ ನೋಡುತ್ತಿದ್ದೇನೆ.

ಗೌರವಾನ್ವಿತ ಸ್ಪೀಕರ್,

ಕಳೆದ 3 ದಿನಗಳಿಂದ ಪ್ರತಿಪಕ್ಷಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ ನಾನಾ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಸದನದ ಆರಂಭದಿಂದಲೇ ಪ್ರತಿಪಕ್ಷಗಳು ಗಂಭೀರವಾಗಿ ಸದನದ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರೆ ಉತ್ತಮವಾಗಿರುತ್ತಿತ್ತು. ಕಳೆದ ಕೆಲವು ದಿನಗಳಲ್ಲಿ, ಈ ಸದನ (ಲೋಕಸಭೆ) ಮತ್ತು ರಾಜ್ಯಸಭೆ ಜನ ವಿಶ್ವಾಸ ಮಸೂದೆ, ಮಧ್ಯಸ್ಥಿಕೆ ಮಸೂದೆ, ದಂತ ಆಯೋಗದ ಮಸೂದೆ, ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ಮಸೂದೆಗಳು, ಡಿಜಿಟಲ್ ಡೇಟಾ ಸಂರಕ್ಷಣಾ ಮಸೂದೆ ಸೇರಿದಂತೆ ಹಲವಾರು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿವೆ. ನ್ಯಾಶನಲ್ ರಿಸರ್ಚ್ ಫೌಂಡೇಶನ್ ಬಿಲ್, ಕೋಸ್ಟಲ್ ಆಕ್ವಾ ಕಲ್ಚರ್‌ಗೆ ಸಂಬಂಧಿಸಿದ ಮಸೂದೆ ಮತ್ತು ಇತರ ಹಲವು ನಿರ್ಣಾಯಕ ವಿಧೇಯಕಗಳು ಇದರಲ್ಲಿ ಸೇರಿವೆ. ಇವುಗಳು ನಮ್ಮ ಮೀನುಗಾರರ ಹಕ್ಕುಗಳನ್ನು ಕಾಪಾಡುವ ಉದ್ದೇಶದ ಮಸೂದೆಗಳಾಗಿದ್ದು, ಕೇರಳ ಹೆಚ್ಚಿನ ಪ್ರಯೋಜನವನ್ನು ನಿರೀಕ್ಷಿಸುತ್ತದೆ. ಆದ್ದರಿಂದ, ಕೇರಳದ ಸಂಸದರು ಅಂತಹ ಮಸೂದೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂಬ ಹೆಚ್ಚಿನ ನಿರೀಕ್ಷೆಗಳು ಇದ್ದವು. ಆದರೆ, ಅವರ ಮೇಲೆ ರಾಜಕೀಯ ಎಷ್ಟು ಪ್ರಬಲವಾಗಿದೆ ಎಂದರೆ ಮೀನುಗಾರರ ಹಿತದ ಬಗ್ಗೆ ಅವರಿಗೆ ಕಾಳಜಿ ಇಲ್ಲದಂತಾಗಿದೆ.

ಇಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮಸೂದೆ ಮಂಡಿಸಲಾಯಿತು. ಇದು ದೇಶದ ಯುವಜನರ ಆಕಾಂಕ್ಷೆಗಳಿಗೆ ಹೊಸ ದಿಕ್ಕು ಒದಗಿಸುವ ಉದ್ದೇಶದ ಮಸೂದೆಯಾಗಿತ್ತು. ಭಾರತವು ಹೇಗೆ ವಿಜ್ಞಾನದ ಶಕ್ತಿಯಾಗಿ ಹೊರಹೊಮ್ಮಬಹುದು ಎಂಬುದರ ಕುರಿತು ದೀರ್ಘಾವಧಿಯ ದೃಷ್ಟಿಕೋನದಿಂದ ಇದನ್ನು ರೂಪಿಸಲಾಗಿದೆ.  ಆದರೆ ಅದನ್ನು ನೀವು ವಿರೋಧಿಸಿದ್ದೀರಿ. ಡಿಜಿಟಲ್ ಡೇಟಾ ಸಂರಕ್ಷಣಾ ಮಸೂದೆಯು ದೇಶದ ಯುವಜನರ ನಿರೀಕ್ಷೆಗಳೊಂದಿಗೆ ಸಂಪರ್ಕ ಹೊಂದಿದೆ. ಏಕೆಂದರೆ ಭವಿಷ್ಯವು ತಂತ್ರಜ್ಞಾನ-ಚಾಲಿತವಾಗಿರುತ್ತದೆ. ಇಂದು, ಡೇಟಾವನ್ನು ತೈಲ ಅಥವಾ ಚಿನ್ನದಂತೆ ಮೌಲ್ಯಯುತವೆಂದು ಪರಿಗಣಿಸಲಾಗುತ್ತದೆ, ಇದರ ಗಂಭೀರ ಚರ್ಚೆಯ ಅಗತ್ಯವಿದೆ. ಆದರೆ ರಾಜಕೀಯ ನಿಮ್ಮ ಆದ್ಯತೆಯಾಗಿತ್ತು. ಹಳ್ಳಿಗಳು, ಬಡವರು, ದಲಿತರು, ನಿರ್ಲಕ್ಷಿತರು ಮತ್ತು ಬುಡಕಟ್ಟು ಸಮುದಾಯಗಳಿಗೆ ಚರ್ಚೆಗಳು ಮತ್ತು ಅವರ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಹಲವಾರು ಮಸೂದೆಗಳು ಇದ್ದವು. ಈ ವಿಧೇಯಕಗಳನ್ನು ಅವರ ಭವಿಷ್ಯಕ್ಕೆ ಸಂಪರ್ಕಿಸಲಾಗಿದೆ. ಆದರೆ ಅವರಿಗೆ (ಪ್ರತಿಪಕ್ಷಗಳಿಗೆ) ಇದರಲ್ಲಿ ಯಾವುದೇ ಆಸಕ್ತಿ ಇಲ್ಲ. ಯಾವ ಕೆಲಸಕ್ಕಾಗಿ ಅವರನ್ನು ನಾಡಿನ ಜನತೆ ಇಲ್ಲಿಗೆ ಕಳುಹಿಸಿದ್ದಾರೋ, ಆ ನಂಬಿಕೆಗೂ ದ್ರೋಹ ಬಗೆದಿದ್ದಾರೆ. ಕೆಲವು ವಿಪಕ್ಷಗಳು ತಮ್ಮ ನಡವಳಿಕೆ ಮತ್ತು ನಡತೆಯ ಮೂಲಕ ದೇಶಕ್ಕಿಂತ ತಮ್ಮ ಪಕ್ಷದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತವೆ ಎಂದು ಸಾಬೀತುಪಡಿಸಿವೆ. ಅವರಿಗೆ ದೇಶಕ್ಕಿಂತ ಪಕ್ಷ ದೊಡ್ಡದು, ಪಕ್ಷವು ದೇಶದ ಮುಂದೆ ಬರುತ್ತದೆ. ಬಡವರ ಹಸಿವಿನ ಬಗ್ಗೆ ನಿಮಗೆ ಕಾಳಜಿ ಇಲ್ಲ ಎಂದು ನಾನು ಭಾವಿಸುತ್ತೇನೆ; ನಿಮ್ಮ ಅಧಿಕಾರದ ಹಸಿವು ನಿಮ್ಮನ್ನು ಮುನ್ನಡೆಸುತ್ತಿದೆ. ದೇಶದ ಯುವಕರ ಭವಿಷ್ಯದ ಬಗ್ಗೆ ನಿಮಗೆ ಕಾಳಜಿ ಇಲ್ಲ. ನಿಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಿಮಗೆ ಸದಾ ಚಿಂತೆ ಇದೆ.

ಗೌರವಾನ್ವಿತ ಶ್ರೀ ಸ್ಪೀಕರ್,

ಒಂದು ದಿನವಾದರೂ ಸದನ ನಡೆಸಲು ಅವಕಾಶ ನೀಡಿದ್ದೀರಾ? ಅವಿಶ್ವಾಸ ಮತಕ್ಕಾಗಿ ಮಾತ್ರ ನೀವು ಒಟ್ಟುಗೂಡಿದ್ದೀರಾ? ನೀವು ನಿಮ್ಮ ನಿಷ್ಠಾವಂತ ಭ್ರಷ್ಟ ಸಹೋದ್ಯೋಗಿಗಳೊಂದಿಗೆ, ಅವರ ಷರತ್ತುಗಳನ್ನು ಅನುಸರಿಸಲು ಮತ್ತು ಈ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚಿಸಲು ಒತ್ತಾಯಿಸಲಾಯಿತು. ಈ ವಿಷಯದಲ್ಲಿ ನೀವು ಯಾವ ರೀತಿಯ ಚರ್ಚೆ ನಡೆಸಿದ್ದೀರಿ? ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಬೆಂಬಲಿಗರು ಸಹ ತುಂಬಾ ನಿರಾಶೆಗೊಂಡಿರುವುದನ್ನು ನಾನು ನೋಡುತ್ತೇನೆ. ಇದು ನಿಮ್ಮ ಪ್ರಸ್ತುತ ಪರಿಸ್ಥಿತಿಯಾಗಿದೆ.

ಗೌರವಾನ್ವಿತ ಸ್ಪೀಕರ್,

ಈ ಚರ್ಚೆಯ ಮೋಜಿನ ಭಾಗವೆಂದರೆ ಪ್ರತಿಪಕ್ಷಗಳು ಫೀಲ್ಡಿಂಗ್ ಅನ್ನು ಆಯೋಜಿಸಿದವು, ಆದರೆ ಇದು ಖಜಾನೆ ಬೆಂಚ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆದವು. ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯದ ಮೇಲೆ ನಿರಂತರವಾಗಿ ನೋ ಬಾಲ್ ಎಸೆಯುತ್ತಿವೆ. ಖಜಾನೆಯ ಬೆಂಚುಗಳಿಂದ ಶತಕ ಗಳಿಸಲಾಗುತ್ತಿದೆ, ಆದರೆ ಪ್ರತಿಪಕ್ಷದ ತುದಿಯಿಂದ ಯಾವುದೇ ಎಸೆತಗಳಿಲ್ಲ.

ಸ್ಪೀಕರ್ ಜಿ,

ವಿರೋಧ ಪಕ್ಷದ ನಮ್ಮ ಸಹೋದ್ಯೋಗಿಗಳಿಗೆ ನಾನು ಒತ್ತಾಯಿಸುತ್ತೇನೆ: ನೀವೇಕೆ ಸಿದ್ಧರಾಗಿ ಬರಬಾರದು? ಸ್ವಲ್ಪ ಪ್ರಯತ್ನ ಮಾಡಿ. ಕಷ್ಟಪಟ್ಟು ಕೆಲಸ ಮಾಡಲು ನಾನು ನಿಮಗೆ 5 ವರ್ಷಗಳನ್ನು ನೀಡಿದ್ದೇನೆ. ನಾನು 2018ರಲ್ಲಿ 2023ಕ್ಕೆ ಸಿದ್ಧರಾಗಿ ಬನ್ನಿ ಎಂದು ಹೇಳಿದ್ದೆ.  ನೀವು 5 ವರ್ಷಗಳನ್ನು ಸಹ ನಿರ್ವಹಿಸಲು ಸಾಧ್ಯವಾಗಲಿಲ್ಲ. ನೀವು ಎಂತಹ ದುಸ್ಥಿತಿಯಲ್ಲಿದ್ದೀರಿ, ಎಷ್ಟು ಕರುಣಾಜನಕ!

ಮಾನ್ಯ ಸ್ಪೀಕರ್,

ನಮ್ಮ ವಿರೋಧ ಪಕ್ಷದ ಸಹೋದ್ಯೋಗಿಗಳು ಪ್ರಭಾವ ಬೀರಲು ಮತ್ತು ಮುಖ್ಯಾಂಶಗಳನ್ನು ಮಾಡಲು ಬಲವಾದ ಬಯಕೆ ಮತ್ತು ಸಹಜ ಒಲವು ಹೊಂದಿದ್ದಾರೆ. ಆದರೆ ರಾಷ್ಟ್ರವೂ ನಿಮ್ಮನ್ನು ಗಮನಿಸುತ್ತಿದೆ ಎಂಬುದನ್ನು ಮರೆಯಬೇಡಿ. ನಿಮ್ಮ ಪ್ರತಿಯೊಂದು ಮಾತುಗಳನ್ನು ದೇಶವು ಎಚ್ಚರಿಕೆಯಿಂದ ಕೇಳುತ್ತಿದೆ. ಆದರೆ, ಪ್ರತಿ ಬಾರಿಯೂ ನೀವು ದೇಶಕ್ಕೆ ನಿರಾಶೆಯನ್ನಷ್ಟೇ ನೀಡಿದ್ದೀರಿ. ವಿರೋಧ ಪಕ್ಷದ ವರ್ತನೆಗೆ ಸಂಬಂಧಿಸಿದಂತೆ, ಅವರ ದಾಖಲೆಗಳು ಅಸ್ತವ್ಯಸ್ತವಾಗಿರುವವರು ಸಹ ನಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಹೇಳಲೇಬೇಕು.

ಮಾನ್ಯ ಸ್ಪೀಕರ್ ಜಿ,

ಈ ಅವಿಶ್ವಾಸ ನಿರ್ಣಯದಲ್ಲಿ ಕೆಲವು ವಿಷಯಗಳು ಎಷ್ಟು ಅಸಾಮಾನ್ಯ ಮತ್ತು ಅಭೂತಪೂರ್ವವಾಗಿದ್ದವು ಎಂದರೆ ನಾವು ಈ ಹಿಂದೆ ಕೇಳಿಲ್ಲ ಅಥವಾ ನೋಡಿಲ್ಲ, ಅಥವಾ ಊಹಿಸಲೂ ಇಲ್ಲ ಎಂಬುದು ನಿಜಕ್ಕೂ ಕುತೂಹಲಕಾರಿಯಾಗಿದೆ. ದೊಡ್ಡ ವಿರೋಧ ಪಕ್ಷದ ನಾಯಕನ ಹೆಸರು ಸ್ಪೀಕರ್‌ಗಳ ಪಟ್ಟಿಯಲ್ಲಿ ಇರಲಿಲ್ಲ. ಹಿಂದಿನ ಉದಾಹರಣೆಗಳನ್ನು ನೋಡಿ. 1999ರಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ ಶರದ್ ಪವಾರ್ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಚರ್ಚೆಯ ನೇತೃತ್ವ ವಹಿಸಿದ್ದರು. 2003ರಲ್ಲಿ, ಅಟಲ್ ಜಿ ಅವರ ಸರ್ಕಾರದ ಅವಧಿಯಲ್ಲಿ ಸೋನಿಯಾ ಜಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರು, ಅವರು ಅವಿಶ್ವಾಸ ನಿರ್ಣಯದ ನೇತೃತ್ವ ವಹಿಸಿದ್ದರು. 2018ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಖರ್ಗೆ ಜಿ ಅವರು ಅವಿಶ್ವಾಸ ಮತವನ್ನು ಪ್ರಮುಖವಾಗಿ ಮುನ್ನಡೆಸಿದರು ಮತ್ತು ಮಂಡಿಸಿದರು. ಆದರೆ ಈ ಬಾರಿ ಅಧೀರ್ ಬಾಬುಗೆ ಏನಾಯಿತು? ಅವರದೇ ಪಕ್ಷದವರೇ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದನ್ನು ನಿನ್ನೆ ಅಮಿತ್ ಭಾಯ್ ಅವರು ಜವಾಬ್ದಾರಿಯ ಪ್ರಜ್ಞೆಯಿಂದ ಒಪ್ಪಿಕೊಂಡಿದ್ದಾರೆ (ಅಧೀರ್ ಬಾಬು ಅವರನ್ನು ಬದಿಗಿಟ್ಟಿದ್ದಾರೆ). ಸಮಯ ಕಳೆದರೂ ಇವತ್ತಿಗೂ ನಿಮಗೆ ಮಾತನಾಡಲು ಅವಕಾಶ ನೀಡಿದ್ದು ಅಮಿತ್ ಭಾಯ್ ಅವರ ಔದಾರ್ಯ. ಆದರೆ ಎಲ್ಲವನ್ನೂ ಕಗ್ಗಂಟು ಮಾಡುವಲ್ಲಿ ನಿಪುಣರು. ನಿಮ್ಮ ಒತ್ತಾಯ ಏನೆಂಬುದು ನನಗೆ ಗೊತ್ತಿಲ್ಲ. ಅಧೀರ್ ಬಾಬು ಸೈಡ್ ಲೈನ್ ಮಾಡಿದ್ದು ಯಾಕೆ? ನಿನ್ನೆ ಕೋಲ್ಕತ್ತಾದಿಂದ ಯಾರೋ ಕರೆ ಮಾಡಿ ಕಾಂಗ್ರೆಸ್ ಪದೇಪದೆ ಅವಮಾನ ಮಾಡ್ತಾ ಇದ್ರೆ ಯಾರಿಗೆ ಗೊತ್ತು. ಕೆಲವೊಮ್ಮೆ, ಚುನಾವಣೆಯ ನೆಪದಲ್ಲಿ ಅವರನ್ನು ತಾತ್ಕಾಲಿಕವಾಗಿ ಸದನದ ನಾಯಕ ಸ್ಥಾನದಿಂದ ತೆಗೆದುಹಾಕುತ್ತಾರೆ. ಅಧೀರ್ ಬಾಬು ಅವರಿಗೆ ನಮ್ಮ ಸಂಪೂರ್ಣ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ. ಅಧೀರ್ ಬಾಬು, ಸುರೇಶ್ ಜೀ, ದಯವಿಟ್ಟು ಜೋರಾಗಿ ನಕ್ಕು ಬಿಡಿ.

ಮಾನ್ಯ ಸ್ಪೀಕರ್ ಜಿ,

ಯಾವುದೇ ರಾಷ್ಟ್ರದ ಜೀವನ ಮತ್ತು ಇತಿಹಾಸ ನೋಡಿದರೆ, ಅದು ಹಳೆಯ ಸಂಕೋಲೆಗಳಿಂದ ಹೊರಬಂದು ಹೊಸ ಶಕ್ತಿ, ಹೊಸ ಆಕಾಂಕ್ಷೆಗಳು, ಹೊಸ ಕನಸುಗಳು ಮತ್ತು ಹೊಸ ಸಂಕಲ್ಪಗಳೊಂದಿಗೆ ಹೆಜ್ಜೆಗಳನ್ನು ಇಡುವ ಸಮಯ ಬರುತ್ತದೆ. ಈ 21ನೇ ಶತಮಾನದ ಯುಗದಲ್ಲಿ, ನಾನು ಪ್ರಜಾಪ್ರಭುತ್ವದ ಈ ಪವಿತ್ರ ದೇವಾಲಯದಲ್ಲಿ ಬಹಳ ಗಂಭೀರತೆಯಿಂದ ಮಾತನಾಡುತ್ತಿದ್ದೇನೆ, ಹಲವು ವರ್ಷಗಳ ಅನುಭವದ ನಂತರ ನಾನು ಮಾತನಾಡುತ್ತಿದ್ದೇನೆ. ಈ ಯುಗವು ಸಾಧ್ಯತೆಗಳ ಯುಗವಾಗಿದೆ, ಪ್ರತಿ ಕನಸನ್ನು ನನಸಾಗಿಸುವ ಅವಕಾಶ ಹೊಂದಿರುವ ಯುಗ ಭಾರತದ್ದು. ನಾವೆಲ್ಲರೂ ಈ ಅವಧಿಯಲ್ಲಿ ಇದ್ದೇವೆ, ಅದು ನೀವಾಗಲಿ, ನಾನಾಗಲಿ ಅಥವಾ ಈ ದೇಶದ ಕೋಟ್ಯಂತರ ಜನರಾಗಲಿ. ಈ ಅವಧಿಯು ಅತ್ಯಂತ ಮಹತ್ವದ್ದಾಗಿದೆ.

ಬದಲಾಗುತ್ತಿರುವ ಜಗತ್ತಿನಲ್ಲಿ, ಮತ್ತು ಆಗುತ್ತಿರುವ ಬದಲಾವಣೆಗಳ ಪರಿಣಾಮವು ಮುಂದಿನ ಸಾವಿರ ವರ್ಷಗಳವರೆಗೆ ಈ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಈ ಮಾತುಗಳನ್ನು ಬಹಳ ದೃಢವಾಗಿ ಹೇಳಲು ಬಯಸುತ್ತೇನೆ. ಈ ಯುಗದಲ್ಲಿ 1.4 ಶತಕೋಟಿ ದೇಶವಾಸಿಗಳ ಪ್ರಯತ್ನಗಳು, ಅವರ ಸಾಧನೆಗಳು, ಪ್ರಯತ್ನಗಳು, ಶಕ್ತಿ ಮತ್ತು ಸಾಮರ್ಥ್ಯಗಳು ಮುಂಬರುವ ಒಂದು ಸಾವಿರ ವರ್ಷಗಳವರೆಗೆ ಬಲವಾದ ಅಡಿಪಾಯ ಹಾಕುತ್ತವೆ. ಆದ್ದರಿಂದ, ಈ ಯುಗದಲ್ಲಿ, ನಾವೆಲ್ಲರೂ ಒಂದೇ ಗಮನ  ಹೊಂದಿರಬೇಕಾದ ಮಹತ್ತರವಾದ ಜವಾಬ್ದಾರಿ ಹೊಂದಿದ್ದೇವೆ - ರಾಷ್ಟ್ರದ ಅಭಿವೃದ್ಧಿ. ನಾಡಿನ ಜನತೆಯ ಆಶೋತ್ತರಗಳನ್ನು ಈಡೇರಿಸಲು, ಸಂಕಲ್ಪವನ್ನು ಯಶಸ್ಸಿಗೆ ಪರಿವರ್ತಿಸಲು ಮನಃಪೂರ್ವಕವಾಗಿ ಒಂದಾಗಬೇಕೆಂಬುದು ಈ ಕಾಲದ ಬೇಡಿಕೆಯಾಗಿದೆ. ಈ ರಾಷ್ಟ್ರದ 1.4 ಶತಕೋಟಿ ನಾಗರಿಕರ ಸಾಮೂಹಿಕ ಶಕ್ತಿ ನಮ್ಮನ್ನು ಎತ್ತರಕ್ಕೆ ಏರಿಸಬಹುದು. ನಮ್ಮ ಯುವ ಪೀಳಿಗೆಯ ಸಾಮರ್ಥ್ಯವನ್ನು ಜಗತ್ತು ಗುರುತಿಸಿದೆ ಮತ್ತು ನಾವು ಅವರಲ್ಲಿ ನಂಬಿಕೆ ಇಡಬೇಕು. ದೊಡ್ಡ ಕನಸು ಕಾಣುತ್ತಿರುವ ನಮ್ಮ ಯುವಕರು ದೃಢಸಂಕಲ್ಪದಿಂದ ಆ ಕನಸುಗಳನ್ನು ಸಾಕಾರಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದುದರಿಂದ ಗೌರವಾನ್ವಿತ ಸಭಾಧ್ಯಕ್ಷರೇ, ದೇಶದ ಜನತೆ 30 ವರ್ಷಗಳ ನಂತರ 2014ರಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದರು. ಆ ದಾಖಲೆಯ ಆಧಾರದ ಮೇಲೆ, ರಾಷ್ಟ್ರದ ಯುವಕರು ತಮ್ಮ ಕನಸುಗಳನ್ನು ಪೋಷಿಸುವ ಮತ್ತು ಅವರ ನಿರ್ಣಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಚೆನ್ನಾಗಿ ತಿಳಿದಿದ್ದಾರೆ. ಅದಕ್ಕಾಗಿಯೇ ನಮಗೆ ಸೇವೆ ಮಾಡಲು ಅವಕಾಶವನ್ನು ನೀಡಲಾಯಿತು ಮತ್ತು 2019ರಲ್ಲಿ ಮತ್ತೊಮ್ಮೆ ಹೆಚ್ಚಿನ ಶಕ್ತಿಯೊಂದಿಗೆ ಬಂದಿದ್ದೇವೆ.

ಮಾನ್ಯ ಸ್ಪೀಕರ್,

ಭಾರತದ ಯುವಕರ ಕನಸುಗಳು, ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳಿಗೆ ಅವರ ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿ ಅವಕಾಶಗಳನ್ನು ಒದಗಿಸುವುದು ಈ ಸದನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಸರ್ಕಾರದಲ್ಲಿರುವಾಗಲೇ ಈ ಹೊಣೆಗಾರಿಕೆ ನಿಭಾಯಿಸಲು ನಾವೂ ಶ್ರಮಿಸಿದ್ದೇವೆ. ನಾವು ಭಾರತದ ಯುವಕರಿಗೆ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ್ದೇವೆ. ಇಂದಿನ ವೃತ್ತಿಪರರು, ಭಾರತದ ಯುವಕರಿಗೆ ಅವಕಾಶಗಳನ್ನು ಒದಗಿಸುವ ಮೂಲಕ ತೆರೆದ ಆಕಾಶದಲ್ಲಿ ಎತ್ತರಕ್ಕೆ ಏರುವ ಧೈರ್ಯವನ್ನು ನಾವು ತುಂಬಿದ್ದೇವೆ. ವಿಶ್ವ ಮಟ್ಟದಲ್ಲಿ ಭಾರತದ ಕಳಂಕಿತ ವರ್ಚಸ್ಸನ್ನು  ಸರಿಪಡಿಸುವ ಜವಾಬ್ದಾರಿಯನ್ನು ನಾವು ವಹಿಸಿಕೊಂಡಿದ್ದೇವೆ, ಅದನ್ನು ಹೊಸ ಎತ್ತರಕ್ಕೆ ಏರಿಸಿದ್ದೇವೆ. ಈಗಲೂ, ಕೆಲವು ವ್ಯಕ್ತಿಗಳು ನಮ್ಮ ಇಮೇಜ್‌ಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ, ಆದರೆ ಜಗತ್ತು ನಮ್ಮ ದೇಶವನ್ನು ಗುರುತಿಸಿದೆ, ಭಾರತವು ವಿಶ್ವದ ಭವಿಷ್ಯಕ್ಕೆ ಹೇಗೆ ಕೊಡುಗೆ ನೀಡಬಹುದು ಎಂದು ನಂಬುತ್ತದೆ. ಭಾರತದ ಸಾಮರ್ಥ್ಯದಲ್ಲಿ ವಿಶ್ವದ ಈ ವಿಶ್ವಾಸವು ಸ್ಥಿರವಾಗಿ ಬೆಳೆಯುತ್ತಿದೆ.

ಈ ಅವಧಿಯಲ್ಲಿ ನಮ್ಮ ವಿರೋಧ ಪಕ್ಷದ ಸಹೋದ್ಯೋಗಿಗಳು ಏನು ಮಾಡಿದ್ದಾರೆ? ಸುತ್ತಲೂ ಸಾಧ್ಯತೆಗಳಿರುವ ಇಂತಹ ಅನುಕೂಲಕರ ವಾತಾವರಣ ಇರುವಾಗ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಜನರ ಆತ್ಮಸ್ಥೈರ್ಯವನ್ನು ಛಿದ್ರಗೊಳಿಸುವ ವಿಫಲ ಯತ್ನ ನಡೆಸಿದರು. ಇಂದು ಭಾರತದ ಯುವಕರು ದಾಖಲೆ ಸಂಖ್ಯೆಯಲ್ಲಿ ಹೊಸ ಸ್ಟಾರ್ಟಪ್‌ಗಳನ್ನು ಪ್ರಾರಂಭಿಸುವ ಮೂಲಕ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಇಂದು ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ವಿದೇಶಿ ಹೂಡಿಕೆ ಹರಿದು ಬರುತ್ತಿದೆ. ಇಂದು ಭಾರತದ ರಫ್ತು ಹೊಸ ಎತ್ತರ ಮುಟ್ಟುತ್ತಿದೆ. ಆದರೆ ಅವರು(ವಿಪಕ್ಷಗಳು)  ಭಾರತದ ಬಗ್ಗೆ ಯಾವುದೇ ಒಳ್ಳೆಯ ಸುದ್ದಿ ಕೇಳಲು ಸಹಿಸುವುದಿಲ್ಲ, ಅದು ಅವರ ಮನಸ್ಥಿತಿ. ಇಂದು ಬಡವರ ಹೃದಯಗಳು ತಮ್ಮ ಕನಸುಗಳನ್ನು ಸಾಧಿಸುವ ಆತ್ಮವಿಶ್ವಾಸದಿಂದ ತುಂಬಿವೆ. ಇಂದು ದೇಶದಲ್ಲಿ ಬಡತನ ತ್ವರಿತವಾಗಿ ಕಡಿಮೆಯಾಗುತ್ತಿದೆ. ನೀತಿ ಆಯೋಗದ ವರದಿಯ ಪ್ರಕಾರ, ಕಳೆದ 5 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಬಿಡುಗಡೆ ಮಾಡಲಾಗಿದೆ.

ಮಾನ್ಯ ಸ್ಪೀಕರ್ ಜಿ,

ಭಾರತವು ಬಹುತೇಕ ಬಡತನ ನಿರ್ಮೂಲನೆ ಮಾಡಿದೆ ಎಂದು ಐಎಂಎಫ್, ತನ್ನ ವರದಿಯಲ್ಲಿ  ಹೇಳಿದೆ. ಭಾರತದ ಡಿಬಿಟಿ (ನೇರ ನಗದು ವರ್ಗಾವಣೆ) ಮತ್ತು ಇತರ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು 'ಲಾಜಿಸ್ಟಿಕ್ಸ್ ಅದ್ಭುತಗಳು' ಎಂದು ಐಎಂಎಫ್ ಉಲ್ಲೇಖಿಸಿದೆ.

ಮಾನ್ಯ ಸ್ಪೀಕರ್ ಜಿ,

ಜಲಜೀವನ್ ಮಿಷನ್‌ನಿಂದಾಗಿ ಭಾರತದಲ್ಲಿ ವಾರ್ಷಿಕ 4 ಲಕ್ಷ ಜೀವಗಳನ್ನು ಉಳಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಈ 4 ಲಕ್ಷ ವ್ಯಕ್ತಿಗಳು ನನ್ನ ಬಡವರು, ಸಂಕಷ್ಟದಲ್ಲಿರುವವರು, ನಿರ್ಲಕ್ಷಿತರು ಮತ್ತು ಹಿಂದುಳಿದ ಕುಟುಂಬದ ಸದಸ್ಯರಾಗಿದ್ದಾರೆ. ಅವರು ನಮ್ಮ ಸಮಾಜದ ಕೆಳಸ್ತರದಲ್ಲಿ ಉಳಿವಿಗಾಗಿ ಹೋರಾಡುತ್ತಿರುವ ಜನರು. ಈ 4 ಲಕ್ಷ ಜನರ ಜೀವ ಉಳಿಸಲಾಗಿದೆ ಎಂದು ಡಬ್ಲ್ಯುಎಚ್ಒ ಒತ್ತಿ ಹೇಳುತ್ತಿದೆ. ಸ್ವಚ್ಛ ಭಾರತ ಅಭಿಯಾನವು ತಡೆಗಟ್ಟಬಹುದಾದ ಸಾವುಗಳಿಂದ 3 ಲಕ್ಷ ಜೀವಗಳನ್ನು ಉಳಿಸಿದೆ ಎಂದು ಅದು ತನ್ನ ವಿಶ್ಲೇಷಣೆಯ ಮೂಲಕ ಹೇಳಿದೆ.

ಮಾನ್ಯ ಸ್ಪೀಕರ್ ಜಿ,

ಭಾರತ ಸ್ವಚ್ಛವಾದರೆ 3 ಲಕ್ಷ ಜನರ ಜೀವ ಉಳಿಯುತ್ತದೆ. ಈ 3 ಲಕ್ಷ ಜನರು ಯಾರು? ಅವರು ಕೊಳೆಗೇರಿ ಮತ್ತು ಗುಡಿಸಲುಗಳಲ್ಲಿ ವಾಸಿಸುತ್ತಿರುವವರು, ವಿವಿಧ ಕಷ್ಟಗಳ ಮೂಲಕ ಸಂಚರಿಸಬೇಕಾದವರು. ಅವರು ನನ್ನ ಬಡ ಕುಟುಂಬದ ಜನರು, ನಗರ ವಸಾಹತುಗಳಲ್ಲಿ ವಾಸಿಸುವವರು, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಮಾಜದ ಹಿಂದುಳಿದ ವರ್ಗಗಳ ಜನರು, ಅವರ ಜೀವಗಳನ್ನು ಉಳಿಸಲಾಗಿದೆ. ಯೂನಿಸೆಫ್  ಏನು ಹೇಳಿದೆ? ಸ್ವಚ್ಛ ಭಾರತ ಅಭಿಯಾನದಿಂದಾಗಿ ಬಡವರು ವಾರ್ಷಿಕವಾಗಿ 50,000 ರೂಪಾಯಿ ಉಳಿಸುತ್ತಿದ್ದಾರೆ ಎಂದು ಯೂನಿಸೆಫ್ ಹೇಳಿದೆ. ಆದಾಗ್ಯೂ, ಕಾಂಗ್ರೆಸ್ ಸೇರಿದಂತೆ ಕೆಲವು ವಿರೋಧ ಪಕ್ಷಗಳು ಭಾರತದ ಈ ಸಾಧನೆಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿವೆ. ಜಗತ್ತು ದೂರದಿಂದ ಗುರುತಿಸುವ ಸತ್ಯವು ಇಲ್ಲಿ ವಾಸಿಸುವ ಈ ವ್ಯಕ್ತಿಗಳಿಗೆ ಹೆಚ್ಚಾಗಿ ಗೋಚರಿಸುವುದಿಲ್ಲ.

ಮಾನ್ಯ ಸ್ಪೀಕರ್ ಜಿ,

ಅಪನಂಬಿಕೆ ಮತ್ತು ಅಹಂಕಾರವು ಅವರ ಸ್ವಭಾವದಲ್ಲಿ ಬೇರೂರಿದೆ. ಜನರ ನಂಬಿಕೆಯನ್ನು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈಗ, ಈ ತರಹದ ವಿಧಾನದಿಂದ ದೇಶವು ಏನು ಮಾಡಬಹುದು?

ಮಾನ್ಯ ಸ್ಪೀಕರ್,

ಹಳೆಯ ನಂಬಿಕೆಗಳಿಗೆ ಅಂಟಿಕೊಳ್ಳುವವರ ಮನಸ್ಥಿತಿಯನ್ನು ನಾನು ಒಪ್ಪುವುದಿಲ್ಲ. ಆದರೆ, ಯಾವುದಾದರೂ ಶುಭಕಾರ್ಯಗಳು ನಡೆದಾಗ, ಮನೆಯಲ್ಲಿ ಒಳ್ಳೆಯ ಸಂಗತಿಗಳು ನಡೆದಾಗ, ಮಕ್ಕಳು ಒಳ್ಳೆ ಬಟ್ಟೆಗಳನ್ನು ಧರಿಸಿ, ಅಂದವಾಗಿ ಮತ್ತು ಸ್ವಚ್ಛವಾಗಿ ಕಾಣಿಸಿಕೊಂಡಾಗ, ರಕ್ಷಣಾತ್ಮಕ ಕ್ರಮವಾಗಿ ದೃಷ್ಟಿ ಆಗದಂತೆ ಅವರ ಮೇಲೆ ಕಪ್ಪು ಚುಕ್ಕೆ ಇಡಲಾಗುತ್ತದೆ. ಇಂದು, ದೇಶವು ಸರ್ವತೋಮುಖ ಸಮೃದ್ಧಿ ಅನುಭವಿಸುತ್ತಿರುವಾಗ, ರಾಷ್ಟ್ರದಾದ್ಯಂತ ಚಪ್ಪಾಳೆ ಮತ್ತು ಹರ್ಷೋದ್ಗಾರಗಳು ಪ್ರತಿಧ್ವನಿಸುತ್ತಿರುವಾಗ, ನಾನು ನಿಮಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ರಕ್ಷಣಾತ್ಮಕ ಕ್ರಮವಾಗಿ ಇಡುವ ಕಪ್ಪು ಚುಕ್ಕೆಯಂತೆ, ಈ ಸಮೃದ್ಧಿಯನ್ನು ರಕ್ಷಿಸಲು ನೀವು ಕಪ್ಪು ಉಡುಪು ಧರಿಸಿ ಸದನಕ್ಕೆ ಬಂದಿದ್ದೀರಿ. ಇದಕ್ಕಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಮಾನ್ಯ ಸ್ಪೀಕರ್ ಜಿ,

ಕಳೆದ 3 ದಿನಗಳಿಂದ, ವಿರೋಧ ಪಕ್ಷದ ನಮ್ಮ ಸಹೋದ್ಯೋಗಿಗಳು ಧಾರಾಳವಾಗಿ ಕೆಟ್ಟ ಭಾಷೆ ಬಳಸುತ್ತಿದ್ದಾರೆ, ಸಾಧ್ಯವಾದಷ್ಟು ಆಕ್ಷೇಪಾರ್ಹ ಪದಗಳನ್ನು ಹುಡುಕಲು ನಿಘಂಟುಗಳನ್ನು ತಿರುಗಿಸುತ್ತಿದ್ದಾರೆ. ಅವರು ವಿವಿಧ ಮೂಲಗಳಿಂದ ಅವಹೇಳನಕಾರಿ ಪದಗಳ ಸಂಪೂರ್ಣ ಶ್ರೇಣಿಯನ್ನು ಸಂಗ್ರಹಿಸಿದ್ದಾರೆಂದು ತೋರುತ್ತದೆ. ಇಲ್ಲಿಯವರೆಗೆ, ಅವರು ತಮ್ಮ ಪದ ಸಂಗ್ರಹದಿಂದ ದಣಿದಿರಬೇಕು, ಹಲವಾರು ಆಕ್ಷೇಪಾರ್ಹ ಪದಗಳನ್ನು ಉಗುಳಿದ ನಂತರ ಸ್ವಲ್ಪ ಸಮಾಧಾನಗೊಂಡಿದ್ದಾರೆ. ಸಹಜವಾಗಿ, ಈ ವ್ಯಕ್ತಿಗಳು ಹಗಲು ರಾತ್ರಿ ನನ್ನನ್ನು ನಿರಂತರವಾಗಿ ಗುರಿಯಾಗಿಸುತ್ತಾರೆ. ಅದು ಅವರ ಸ್ವಭಾವ. ಅವರ ನೆಚ್ಚಿನ ಘೋಷಣೆ ಯಾವುದು? "ಮೋದಿ, ನಿಮ್ಮ ಸಮಾಧಿ ಅಗೆಯಲಾಗುತ್ತದೆ." "ಮೋದಿ, ನಿಮ್ಮ ಸಮಾಧಿ ತೋಡಲಾಗುತ್ತದೆ." ಇದು ಅವರ ಆದ್ಯತೆಯ ಘೋಷಣೆಯಾಗಿದೆ. ಆದರೆ, ಅವರ ನಿಂದನೆಗಳು, ಆಕ್ಷೇಪಾರ್ಹ ಭಾಷೆ ಮತ್ತು ಅಪ್ರಜಾಸತ್ತಾತ್ಮಕ ಭಾಷಣಗಳು ನನಗೆ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತವೆ. ನಾನು ಅವರ ನಕಾರಾತ್ಮಕತೆ ಸ್ವೀಕರಿಸಿ, ಅದನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುತ್ತೇನೆ. ಅವರು ಇದನ್ನು ಏಕೆ ಮಾಡುತ್ತಾರೆ? ಇದು ಏಕೆ ಸಂಭವಿಸುತ್ತದೆ? ಇಂದು, ನಾನು ಸದನದೊಂದಿಗೆ ಒಂದು  ರಹಸ್ಯ ಹಂಚಿಕೊಳ್ಳಲು ಬಯಸುತ್ತೇನೆ. ವಿರೋಧ ಪಕ್ಷದ ಸದಸ್ಯರಿಗೆ ರಹಸ್ಯ ವರವನ್ನು ನೀಡಲಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಹೌದು, ಅವರಿಗೆ ರಹಸ್ಯ ವರ ನೀಡಲಾಗಿದೆ. ಆ ವರವೆಂದರೆ ಅವರು ಯಾರಿಗೆ ಅನಾರೋಗ್ಯ ಬಯಸುತ್ತಾರೋ, ಅದು ಆ ವ್ಯಕ್ತಿಗೆ ಉತ್ತಮವಾಗಿರುತ್ತದೆ. ಒಂದು ಉದಾಹರಣೆ ನಿಮ್ಮ ಮುಂದೆ ಇದೆ. 20 ವರ್ಷಗಳು ಕಳೆದಿವೆ, ಮತ್ತು ಎಲ್ಲವೂ ಆಗಲಿಲ್ಲ, ಏನು ಮಾಡಲಾಗಿಲ್ಲ. ಆದರೆ ಇದು ವಾಸ್ತವವಾಗಿ ಉತ್ತಮವಾಗಿ ಹೊರಹೊಮ್ಮಿದೆ. ಆದ್ದರಿಂದ, ನಿಮಗೆ ಮಹತ್ವದ ರಹಸ್ಯ ವರ ನೀಡಲಾಗಿದೆ. ನಾನು ಈ ರಹಸ್ಯ ವರವನ್ನು 3 ಉದಾಹರಣೆಗಳೊಂದಿಗೆ ಸಮರ್ಥಿಸಬಲ್ಲೆ.

ಈ ವ್ಯಕ್ತಿಗಳಿಂದಲೇ ಬ್ಯಾಂಕಿಂಗ್ ಕ್ಷೇತ್ರ ಕುಸಿಯುತ್ತದೆ, ಅದು ಹಾಳಾಗುತ್ತದೆ ಮತ್ತು ದೇಶ ನಾಶವಾಗುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ಅವರು ಏನು ಹೇಳಲಿಲ್ಲ? ಆದರೆ ಅವರು ವಿದೇಶಿ ತಜ್ಞರನ್ನು ಕರೆತಂದರು, ಅವರ ಮೂಲಕ ಅವರ ಹೇಳಿಕೆಗಳಿಗೆ ವಿಶ್ವಾಸಾರ್ಹತೆ ನೀಡಲು ಪ್ರಯತ್ನಿಸಿದರು, ಅವರ ಸಮರ್ಥನೆಗಳು ಈ ಪ್ರಸಿದ್ಧ ವ್ಯಕ್ತಿಗಳಿಂದ ಹೊರಬಂದರೆ ಜನರು ಅವರನ್ನು ನಂಬಬಹುದು ಎಂದು ಆಶಿಸಿದರು. ಅವರು ನಮ್ಮ ಬ್ಯಾಂಕ್‌ಗಳ ಆರೋಗ್ಯದ ಬಗ್ಗೆ ನಿರಾಶೆ ಮತ್ತು ವದಂತಿಗಳನ್ನು ಹರಡಲು ವ್ಯಾಪಕ ಪ್ರಯತ್ನಗಳನ್ನು ಮಾಡಿದರು. ಅವರು ಬ್ಯಾಂಕುಗಳ ಅನಾರೋಗ್ಯ ಬಯಸಿದಾಗ ಏನಾಯಿತು? ನಮ್ಮ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನಿವ್ವಳ ಲಾಭವು ದ್ವಿಗುಣಕ್ಕಿಂತ ಹಲವು ಪಟ್ಟು ಹೆಚ್ಚುವುದರೊಂದಿಗೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಿದವು. ಇದೇ ವ್ಯಕ್ತಿಗಳು ಫೋನ್ ಬ್ಯಾಂಕಿಂಗ್ ಹಗರಣದ ಬಗ್ಗೆ ಮಾತನಾಡಿದರು. ಇದರ ಪರಿಣಾಮವಾಗಿ ದೇಶವು ಗಂಭೀರ ಅನುತ್ಪಾದ ಆಸ್ತಿ(ಎನ್‌ಪಿಎ)ಯ ಬಿಕ್ಕಟ್ಟಿಗೆ ಕಾರಣವಾಯಿತು.

ಆದರೆ ಇಂದು, ಅವರು ಸೃಷ್ಟಿಸಿದ ಎನ್‌ಪಿಎಗಳ ಪರ್ವತದಿಂದಾಗಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ತಿಳಿಗೊಳಿಸಿದ ನಂತರ ನಾವು ಹೊಸ ಶಕ್ತಿಯೊಂದಿಗೆ ಹೊರಹೊಮ್ಮಿದ್ದೇವೆ. ಇಂದು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಈ ಬ್ಯಾಂಕ್‌ಗಳಿಂದ ಗಳಿಸಿದ ಗಮನಾರ್ಹ ಲಾಭದ ಬಗ್ಗೆ ವಿವರಿಸಿದ್ದಾರೆ. ಇನ್ನೊಂದು ಉದಾಹರಣೆಯೆಂದರೆ, ರಕ್ಷಣಾ ಪಡೆಗಳಿಗೆ ಹೆಲಿಕಾಪ್ಟರ್‌ಗಳನ್ನು ತಯಾರಿಸುವ ನಮ್ಮ ಸರ್ಕಾರಿ ಸ್ವಾಮ್ಯದ ಕಂಪನಿ ಎಚ್‌ಎಎಲ್. ಈ ವ್ಯಕ್ತಿಗಳು ಎಚ್‌ಎಎಲ್ ಬಗ್ಗೆ ಹಲವಾರು ಹೇಳಿಕೆಗಳನ್ನು ನೀಡಿದ್ದರು. ಎಚ್‌ಎಎಲ್ ಬಗ್ಗೆ ಅವರು ಏನು ಹೇಳಲಿಲ್ಲ? ಅವರು ಬಳಸಿದ ಭಾಷೆ ಜಾಗತಿಕವಾಗಿ ಗಮನಾರ್ಹ ಹಾನಿ ಉಂಟುಮಾಡುವ ಉದ್ದೇಶ ಹೊಂದಿತ್ತು. ಎಚ್‌ಎಎಲ್ ಪಾಳು ಬಿದ್ದಿದೆ, ಭಾರತದಲ್ಲಿ ರಕ್ಷಣಾ ಉದ್ಯಮ ನಾಶವಾಗಿದೆ ಮತ್ತು ಇನ್ನೂ ಹೆಚ್ಚಿನದನ್ನು ಅವರು ಪ್ರತಿಪಾದಿಸಿದರು.

ಅಷ್ಟೇ ಅಲ್ಲ, ಇತ್ತೀಚಿಗೆ ನಾವು ನೋಡಿದಂತೆ, ಒಂದು ನಿರ್ದಿಷ್ಟ ನಿರೂಪಣೆಯನ್ನು ಬಿಂಬಿಸಲು ಹೊಲಗಳಲ್ಲಿ ವೀಡಿಯೊಗಳನ್ನು ಚಿತ್ರೀಕರಿಸಲಾಗುತ್ತಿದೆ, ಅದೇ ರೀತಿ, ಎಚ್‌ಎಎಲ್ ಕಾರ್ಖಾನೆಯ ಗೇಟ್‌ಗಳಲ್ಲಿ ವೀಡಿಯೊಗಳನ್ನು ಚಿತ್ರೀಕರಿಸಲಾಗಿದೆ, ಕಾರ್ಮಿಕರನ್ನು ಸಭೆಗೆ ಕರೆದು ಅವರನ್ನು ಕೆರಳಿಸಲು ಪ್ರಯತ್ನಿಸಲಾಗಿದೆ. ಅವರಿಗೆ ಭವಿಷ್ಯವಿಲ್ಲ, ಅವರ ಮಕ್ಕಳು ಹಸಿವಿನಿಂದ ಸಾಯುತ್ತಾರೆ, ಎಚ್‌ಎಎಲ್ ಮುಳುಗುತ್ತಿದೆ ಎಂದು ಹೇಳಿದರು. ಇಂತಹ ನಕಾರಾತ್ಮಕ ಸಂದೇಶಗಳು ನಮ್ಮ ದೇಶದ ಅಂತಹ ಪ್ರಮುಖ ಸಂಸ್ಥೆಯ ಬಗ್ಗೆ ಹರಡಿದವು. ಆದರೆ ಇಂದು ಎಚ್‌ಎಎಲ್ ಯಶಸ್ಸಿನ ಹೊಸ ಎತ್ತರ ಮುಟ್ಟುತ್ತಿದೆ. ಎಚ್‌ಎಎಲ್ ತನ್ನ ಅತ್ಯಧಿಕ ಆದಾಯ ಸಾಧಿಸಿದೆ. ಗಂಭೀರ ಆರೋಪಗಳನ್ನು ಮಾಡಲು ಮತ್ತು ಅದರ ಕಾರ್ಮಿಕರನ್ನು ಪ್ರಚೋದಿಸಲು ಅವರ ಸಂಘಟಿತ ಪ್ರಯತ್ನಗಳ ಹೊರತಾಗಿಯೂ, ಎಚ್‌ಎಎಲ್ ಭಾರತದ ಪ್ರಗತಿ ಮತ್ತು ಪ್ರತಿಷ್ಠೆಯ ಸಂಕೇತವಾಗಿ ಹೊರಹೊಮ್ಮಿದೆ.

ಮಾನ್ಯ ಸ್ಪೀಕರ್ ಜಿ,

ನೀವು ಯಾರಿಗೆ ಅನಾರೋಗ್ಯ ಬಯಸುತ್ತೀರಿ, ಅವರು ಹೇಗೆ ಮುಂದುವರಿಯುತ್ತಾರೆ, ಎಂಬುದಕ್ಕೆ ನಾನು 3ನೇ ಉದಾಹರಣೆ ನೀಡುತ್ತೇನೆ. ಎಲ್ಐಸಿ (ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಬಗ್ಗೆ ಹೇಳಿದ್ದೇನು ಗೊತ್ತಾ. ಎಲ್‌ಐಸಿ ಪಾಳು ಬಿದ್ದಿದೆ, ಬಡವರ ಹಣ ಮುಳುಗುತ್ತಿದೆ, ಕಷ್ಟಪಟ್ಟು ದುಡಿದ ಹಣವನ್ನು ಎಲ್‌ಐಸಿಗೆ ಹಾಕಿದ ಬಡವರು ಎಲ್ಲಿ ಹೋಗುತ್ತಾರೆ? ಎಂತಹ ಊಹಾಪೋಹಗಳು, ಅವರಿಗೆ ಎಷ್ಟು ಕಲ್ಪನಾ ಶಕ್ತಿ ಇತ್ತು, ಅವರ ಬೆಂಬಲಿಗರು ಎಷ್ಟು ಆರೋಪಗಳನ್ನು ಮಾಡಿದರು, ಎಲ್ಲವನ್ನೂ ಅವರು ಹೇಳುತ್ತಿದ್ದರು. ಆದರೆ ಇಂದು, ಎಲ್ಐಸಿ ಸತತವಾಗಿ ಬಲವಾಗಿ ಬೆಳೆಯುತ್ತಿದೆ. ಷೇರುಪೇಟೆಯಲ್ಲೂ ಷೇರುಗಳ ಮೇಲೆ ಕಣ್ಣಿಡಲು ಆಸಕ್ತಿ ಹೊಂದಿರುವವರಿಗೆ ಈ ಸಲಹೆಯು ನಿಜವಾಗಿದೆ. ಅವರು ಟೀಕಿಸುವ ಸರ್ಕಾರಿ ಕಂಪನಿಗಳ ಮೇಲೆ ನೀವು ಬಾಜಿ ಕಟ್ಟಬೇಕು, ಇವೆಲ್ಲವೂ ಉತ್ತಮವಾಗಿ ಹೊರಹೊಮ್ಮುತ್ತಿವೆ.

ಮಾನ್ಯ ಸ್ಪೀಕರ್ ಜಿ,

ದೇಶದ ಕೆಲವು ಸಂಸ್ಥೆಗಳ ಅವಸಾನ ಊಹಿಸುವ ಈ ವ್ಯಕ್ತಿಗಳು, ಆ ಸಂಸ್ಥೆಗಳ ಭವಿಷ್ಯವು ನಿಜವಾಗಿ ಹೊಳೆಯುತ್ತಿದೆ. ಅವರು ರಾಷ್ಟ್ರವನ್ನು ಶಪಿಸುವಂತೆ, ಪ್ರಜಾಪ್ರಭುತ್ವವನ್ನು ಶಪಿಸುವಂತೆ ನಾನು ನಂಬುತ್ತೇನೆ, ದೇಶವು ಬಲಗೊಳ್ಳಲಿದೆ, ಪ್ರಜಾಪ್ರಭುತ್ವವು ಬಲಗೊಳ್ಳಲಿದೆ ಮತ್ತು ನಾವು ಬಲಶಾಲಿಯಾಗಲು ಉದ್ದೇಶಿಸಿದ್ದೇವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

ಮಾನ್ಯ ಸ್ಪೀಕರ್ ಜಿ,

ದೇಶದ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲದ ಜನರು ಇವರು. ಅವರಿಗೆ ರಾಷ್ಟ್ರದ ಶ್ರಮದ ಮೇಲೆ ನಂಬಿಕೆ ಇಲ್ಲ, ದೇಶದ ಸಾಧನೆಗಳ ಮೇಲೆ ನಂಬಿಕೆ ಇಲ್ಲ. ಕೆಲವು ದಿನಗಳ ಹಿಂದೆ, ನಮ್ಮ ಸರ್ಕಾರದ ಮುಂದಿನ ಅವಧಿಯಲ್ಲಿ, 3ನೇ ಅವಧಿಯಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ನಾನು ಹೇಳಿದ್ದೆ.

ಮಾನ್ಯ ಸ್ಪೀಕರ್ ಜಿ,

ಈಗ ಅವರಿಗೆ ದೇಶದ ಭವಿಷ್ಯದ ಬಗ್ಗೆ ಸ್ವಲ್ಪವಾದರೂ ವಿಶ್ವಾಸವಿದ್ದರೆ. ಮುಂದಿನ 5 ವರ್ಷಗಳಲ್ಲಿ, 3ನೇ ಅವಧಿಯಲ್ಲಿ, ನಾವು ದೇಶದ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ಏರಿಸುತ್ತೇವೆ ಎಂದು ನಾವು ಪ್ರತಿಪಾದಿಸಿದಾಗ, ಜವಾಬ್ದಾರಿಯುತ ಪ್ರತಿಪಕ್ಷವು ಕೇಳಬೇಕಿತ್ತು, "ಸರಿ, ನೀವು ಅದನ್ನು ಹೇಗೆ ಮಾಡುತ್ತೀರಿ, ನಿರ್ಮಲಾ ಜೀ, ನಮಗೆ ತಿಳಿಸಿ. ನೀವು ಅದನ್ನು ಹೇಗೆ ಮಾಡುತ್ತೀರಿ ಎಂದು ನಮಗೆ ತಿಳಿಸಿ. ಮೋದಿ ಜೀ, ನೀವು ಅದನ್ನು ಹೇಗೆ ಸಾಧಿಸಲು ಯೋಜಿಸುತ್ತಿದ್ದೀರಿ ಎಂದು ನಮಗೆ ತಿಳಿಸಿ. ನಿಮ್ಮ ಮಾರ್ಗಸೂಚಿಯನ್ನು ನಮಗೆ ತೋರಿಸಿ - ಇದನ್ನು ಮಾಡಿ, ಅಥವಾ ಅದನ್ನು ಮಾಡಿ." ಈಗ ನಾನು ಈ ಎಲ್ಲಾ ವಿಷಯಗಳನ್ನು ಕಲಿಸಬೇಕಾಗಿದೆ. ಆದರೆ, ಅವರು ಕೆಲವು ಸಲಹೆಗಳನ್ನು ನೀಡಬಹುದಿತ್ತು. ‘ಚುನಾವಣೆ ಸಂದರ್ಭದಲ್ಲಿ ನಾವು ಜನರ ಮಧ್ಯೆ ಹೋಗಿ ಅವರು (ಆಡಳಿತ ಪಕ್ಷ) ದೇಶದ 3ನೇ ಸ್ಥಾನದ ಬಗ್ಗೆ ಮಾತನಾಡುವಾಗ, ನಾವು ದೇಶವನ್ನು ಮೊದಲ ಸ್ಥಾನಕ್ಕೆ ತಂದು ಇದು ಮತ್ತು ಅದನ್ನು ಸಾಧಿಸುತ್ತೇವೆ ಎಂದು ಅವರು ಹೇಳಬಹುದಿತ್ತು. ಆದರೆ ಇದು ನಮ್ಮ ವಿರೋಧ ಪಕ್ಷಗಳ ರಾಜಕೀಯ ಭಾಷಣಗಳ ದುರಂತ. ಕಾಂಗ್ರೆಸ್‌ನಿಂದ ಬಂದವರು ಏನು ಹೇಳುತ್ತಿದ್ದಾರೆ? ಅವರ ಕಲ್ಪನೆಯ ಅಭಾವವನ್ನು ನೋಡಿ. ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಅನನುಭವಿ ಮಾತುಗಳನ್ನು ಹೇಳುತ್ತಿರುವುದು ಏಕೆ?

ಅವರು (ಕಾಂಗ್ರೆಸ್ ಸದಸ್ಯರು) ಏನು ಹೇಳುತ್ತಾರೆ? ಈ ಗುರಿಯನ್ನು ತಲುಪಲು ಏನನ್ನೂ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ. ಈ ಮನಸ್ಥಿತಿಯಿಂದಲೇ ಅವರು ಇಷ್ಟು ವರ್ಷಗಳ ಕಾಲ ಸುಪ್ತಾವಸ್ಥೆಯಲ್ಲಿದ್ದು, ತಾವಾಗಿಯೇ ನಡೆಯುತ್ತದೆ ಎಂದು ಭಾವಿಸುತ್ತಾರೆ. ಏನನ್ನೂ ಮಾಡದೆ ದೇಶ 3ನೇ ಸ್ಥಾನಕ್ಕೆ ತಲುಪುತ್ತದೆ ಎನ್ನುತ್ತಾರೆ. ನಾವು ಕಾಂಗ್ರೆಸ್‌ನ ದೃಷ್ಟಿಕೋನ ಪರಿಗಣಿಸಿದರೆ, ಎಲ್ಲವೂ ತಾನಾಗಿಯೇ ನಡೆಯುತ್ತಿದ್ದರೆ, ಅದು ಕಾಂಗ್ರೆಸ್‌ಗೆ ನೀತಿ, ಉದ್ದೇಶ, ದೂರದೃಷ್ಟಿ, ಜಾಗತಿಕ ಆರ್ಥಿಕತೆಯ ತಿಳುವಳಿಕೆ ಮತ್ತು ಭಾರತದ ಆರ್ಥಿಕ ಶಕ್ತಿಯ ಜ್ಞಾನದ ಕೊರತೆಯನ್ನು ಸೂಚಿಸುತ್ತದೆ.

ಮಾನ್ಯ ಸ್ಪೀಕರ್ ಜಿ,

ಇದೇ ಕಾರಣಕ್ಕೆ ಕಾಂಗ್ರೆಸ್ ಆಡಳಿತದಲ್ಲಿ ಬಡತನ ಹೆಚ್ಚಿತ್ತು. 1991ರಲ್ಲಿ ದೇಶವು ದಿವಾಳಿತನದ ಅಂಚಿನಲ್ಲಿತ್ತು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆರ್ಥಿಕತೆಯು ವಿಶ್ವದ 10, 11 ಮತ್ತು 12ನೇ ಸ್ಥಾನಗಳ ನಡುವೆ ಏರಿಳಿತ ಹೊಂದಿತ್ತು. ಆದಾಗ್ಯೂ, 2014ರ ನಂತರ ಭಾರತವು ಮೊದಲ 5ರಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ. ಈ ರೂಪಾಂತರವು ಕೆಲವು ರೀತಿಯ ಮಾಂತ್ರಿಕ ದಂಡದ ಮೂಲಕ ಸಂಭವಿಸಿದೆ ಎಂದು ಕಾಂಗ್ರೆಸ್ ಸದಸ್ಯರು ಭಾವಿಸಬಹುದು. ಆದರೆ ಇಂದು, ಗೌರವಾನ್ವಿತ ಸಭಾಧ್ಯಕ್ಷರೇ, "ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ"ಯನ್ನು ನಿಖರವಾದ ಯೋಜನೆ, ಕಠಿಣ ಪರಿಶ್ರಮ, ಸತತ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಸಾಧಿಸಲಾಗಿದೆ ಎಂದು ನಾನು ಸದನಕ್ಕೆ ತಿಳಿಸಲು ಬಯಸುತ್ತೇನೆ. ಈ ಯೋಜನೆಗಳು ಮತ್ತು ಅವಿರತ ಶ್ರಮದಿಂದಾಗಿ ನಮ್ಮ ದೇಶ ಈ ಹಂತಕ್ಕೆ ತಲುಪಿದೆ. ಯೋಜನೆ ಮತ್ತು ಕಠಿಣ ಪರಿಶ್ರಮಕ್ಕೆ ಈ ಸಮರ್ಪಣೆ ಮುಂದುವರಿಯುತ್ತದೆ, ಅಗತ್ಯವಿರುವಂತೆ ಹೊಸ ಸುಧಾರಣೆಗಳೊಂದಿಗೆ, ಕಾರ್ಯಕ್ಷಮತೆಗೆ ಪೂರ್ಣ ಬಲ ನೀಡುಡುತ್ತದೆ. ಇದರ ಫಲಿತಾಂಶದಿಂದ ನಾವು 3ನೇ ಸ್ಥಾನ ತಲುಪುತ್ತೇವೆ.

ಮಾನ್ಯ ಸ್ಪೀಕರ್ ಜಿ,

ನಾನು ದೇಶದ ವಿಶ್ವಾಸವನ್ನು ಅಮೂಲ್ಯ ಪದಗಳಲ್ಲಿ ವ್ಯಕ್ತಪಡಿಸಲು ಬಯಸುತ್ತೇನೆ. 2028ರಲ್ಲಿ ನೀವು ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಈ ರಾಷ್ಟ್ರವು ಅಷ್ಟೊತ್ತಿಗೆ ವಿಶ್ವದ ಮೊದಲ 3 ಆರ್ಥಿಕತೆಗಳಲ್ಲಿ ಸೇರಿರುತ್ತದೆ ಎಂಬುದೇ ದೇಶದ ನಂಬಿಕೆಯಾಗಿದೆ.

ಮಾನ್ಯ ಸ್ಪೀಕರ್ ಜಿ,

ನಮ್ಮ ವಿರೋಧಿ ಸ್ನೇಹಿತರು ಅಪನಂಬಿಕೆಯಿಂದ ತುಂಬಿರುವ ಸ್ವಭಾವ ಹೊಂದಿದ್ದಾರೆ. ನಾವು ಕೆಂಪುಕೋಟೆಯಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ್ದೇವೆ. ಆದಾಗ್ಯೂ, ಅವರು ನಿರಂತರವಾಗಿ ಅಪನಂಬಿಕೆ ವ್ಯಕ್ತಪಡಿಸಿದರು. ಇದು ಹೇಗೆ ಸಾಧ್ಯವಾಯಿತು? ಗಾಂಧೀಜಿ ಅವರು ಸಹ ಸ್ವಚ್ಛ ಭಾರತದ ಕರೆ ನೀಡಿದ್ದರು, ಏನಾಯಿತು? ಸ್ವಚ್ಛತೆಯನ್ನು ಹೇಗೆ ಸಾಧಿಸಬಹುದು? ಎಂಬುದರ ಬಗೆಗಿನ ಅವರ ಆಲೋಚನೆಗಳು ಅಪನಂಬಿಕೆಯಿಂದ ತುಂಬಿವೆ. ತಾಯಂದಿರು ಮತ್ತು ಹೆಣ್ಣು ಮಕ್ಕಳನ್ನು ಬಯಲು ಶೌಚದಿಂದ ಮುಕ್ತಗೊಳಿಸಲು ಶೌಚಾಲಯದ ಅಗತ್ಯವನ್ನು ನಾವು ಒತ್ತಿ ಹೇಳಿದ್ದೇವೆ. ಇದನ್ನೂ ಅವರು ಪ್ರಶ್ನಿಸುತ್ತಾರೆ, ಅಂತಹ ವಿಷಯಗಳ ಬಗ್ಗೆ ಕೆಂಪುಕೋಟೆಯಿಂದ ಚರ್ಚಿಸಬಹುದೇ? "ಇದು ದೇಶದ ಆದ್ಯತೆಯೇ?" ನಾವು ಜನ್ ಧನ್ ಖಾತೆಗಳನ್ನು ತೆರೆಯುವ ಬಗ್ಗೆ ಮಾತನಾಡಿದಾಗ, ಅವರು ಅದೇ ನಿರಾಶೆಯೊಂದಿಗೆ ಪ್ರತಿಕ್ರಿಯಿಸಿದರು. “ಜನ್ ಧನ್ ಖಾತೆ ಎಂದರೇನು? ಬಡವರ ಕೈಯಲ್ಲಿ ಹಣ ಎಲ್ಲಿದೆ? ಅವರ ಜೇಬಿನಲ್ಲಿ ಏನಿದೆ? ಅವರು ಏನು ತರುತ್ತಾರೆ ಮತ್ತು ಅವರು ಏನು ಮಾಡುತ್ತಾರೆ? ” ಯೋಗದ ಬಗ್ಗೆ ಮಾತನಾಡಿದೆವು, ಆಯುರ್ವೇದದ ಬಗ್ಗೆ ಮಾತನಾಡಿದೆವು, ಅದನ್ನು ಪ್ರಚಾರ ಮಾಡುವ ಬಗ್ಗೆ ಮಾತನಾಡಿದೆವು, ಆದರೆ ಅವರು ಸಿನಿಕತನ ತೋರಿದರು.  ನಾವು "ಸ್ಟಾರ್ಟಪ್ ಇಂಡಿಯಾ" ಕುರಿತು ಚರ್ಚಿಸಿದ್ದೇವೆ, ಅವರು ಅದರ ಬಗ್ಗೆಯೂ ನಿರಾಶೆಯನ್ನು ಹರಡಿದರು. ನಾವು ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡಿದ್ದೇವೆ. “ಭಾರತದ ಜನರು ಅನಕ್ಷರಸ್ಥರು ಮತ್ತು ಅವರಿಗೆ ಮೊಬೈಲ್ ಫೋನ್ ಹೇಗೆ ಬಳಸಬೇಕೆಂದು ತಿಳಿದಿಲ್ಲ. ಭಾರತದ ಜನರು ಡಿಜಿಟಲ್ ಅನ್ನು ಹೇಗೆ ಸ್ವೀಕರಿಸುತ್ತಾರೆ? ಅದಕ್ಕೂ ಪ್ರಶ್ನೆ ಎತ್ತಿದರು. ಆದರೆ ಇಂದು ದೇಶವು ಡಿಜಿಟಲ್ ಇಂಡಿಯಾದಲ್ಲಿ ಮುನ್ನಡೆಯುತ್ತಿದೆ. ನಾವು "ಮೇಕ್ ಇನ್ ಇಂಡಿಯಾ" ಬಗ್ಗೆ ಮಾತನಾಡಿದೆವು. ಹೋದಲ್ಲೆಲ್ಲಾ ಮೇಕ್ ಇನ್ ಇಂಡಿಯಾ ಎಂದು ಗೇಲಿ ಮಾಡಿದರು.

ಮಾನ್ಯ ಸ್ಪೀಕರ್ ಜಿ,

ಕಾಂಗ್ರೆಸ್ ಪಕ್ಷ ಮತ್ತು ಅದರ ಮೈತ್ರಿಕೂಟದ ಇತಿಹಾಸವು ಭಾರತದ ಮೇಲೆ ಅಥವಾ ಅದರ ಸಾಮರ್ಥ್ಯಗಳ ಮೇಲೆ ಎಂದಿಗೂ ನಂಬಿಕೆ ಹೊಂದಿಲ್ಲ. ಅವರು ಯಾರ ಮೇಲೆ ನಂಬಿಕೆ ಇಟ್ಟರು? ನಾನು ಇಂದು ಸದನವನ್ನು ನೆನಪಿಸಲು ಬಯಸುತ್ತೇನೆ. ಗಡಿಯಲ್ಲಿ ಪಾಕಿಸ್ತಾನ ದಾಳಿ ನಡೆಸುತ್ತಿತ್ತು. ಪ್ರತಿದಿನ, ಭಯೋತ್ಪಾದಕರು ನಮ್ಮ ದೇಶಕ್ಕೆ ಬರುತ್ತಾರೆ ಮತ್ತು ಅದರ ನಂತರ, ಪಾಕಿಸ್ತಾನವು ತನ್ನ ಕೈಗಳನ್ನು ಎತ್ತುತ್ತದೆ, ಯಾವುದೇ ಜವಾಬ್ದಾರಿ ನಿರಾಕರಿಸುತ್ತದೆ, ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತದೆ. ಯಾರೂ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಇಷ್ಟೆಲ್ಲಾ ಆದರೂ ಅವರಿಗೆ ಪಾಕಿಸ್ತಾನದ ಮೇಲೆ ತುಂಬಾ ಪ್ರೀತಿ ಇತ್ತು, ಪಾಕಿಸ್ತಾನ ಏನು ಹೇಳಿದರೂ ಅವರು ತಕ್ಷಣ ನಂಬುತ್ತಿದ್ದರು. ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇರುತ್ತವೆ, ಆದರೆ ಮಾತುಕತೆಯೂ ಮುಂದುವರಿಯಬೇಕು ಎಂದು ಪಾಕಿಸ್ತಾನ ಹೇಳುತ್ತಿತ್ತು. ಪಾಕಿಸ್ತಾನ ಹೇಳಿದರೆ ಅದು ನಿಜ ಎಂದು ಭಾವಿಸುವಷ್ಟರ ಮಟ್ಟಿಗೆ ಕಾಂಗ್ರೆಸ್ ಅವರನ್ನು ನಂಬುತ್ತಿತ್ತು. ಇದು ಅವರ ಮನಸ್ಥಿತಿ. ಕಾಶ್ಮೀರ ಹಗಲು ರಾತ್ರಿ ಭಯೋತ್ಪಾದನೆಯ ಬೆಂಕಿಯಲ್ಲಿ ಉರಿಯುತ್ತಿತ್ತು. ಅದು ಉರಿಯುತ್ತಲೇ ಇತ್ತು, ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಕಾಶ್ಮೀರ ಅಥವಾ ಅದರ ಸಾಮಾನ್ಯ ನಾಗರಿಕರ ಮೇಲೆ ನಂಬಿಕೆ ಇರಲಿಲ್ಲ. ಅವರಿಗೆ ಹುರಿಯತ್ ಮೇಲೆ ನಂಬಿಕೆ ಇತ್ತು, ಪ್ರತ್ಯೇಕತಾವಾದಿಗಳಲ್ಲಿ ನಂಬಿಕೆ ಇತ್ತು, ಪಾಕಿಸ್ತಾನದ ಧ್ವಜ ಹಿಡಿದವರ ಮೇಲೆ ನಂಬಿಕೆ ಇತ್ತು. ಭಯೋತ್ಪಾದನೆ ವಿರುದ್ಧ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು. ಭಾರತವು ವೈಮಾನಿಕ ದಾಳಿಗಳನ್ನು ನಡೆಸಿತು, ಆದರೆ ಅವರಿಗೆ ಭಾರತೀಯ ಸಶಸ್ತ್ರ ಪಡೆಗಳ ಮೇಲೆ ನಂಬಿಕೆ ಇರಲಿಲ್ಲ. ನಮ್ಮ ಶತ್ರುಗಳ ಹೇಳಿಕೆಗಳಲ್ಲಿ ಅವರಿಗೆ ನಂಬಿಕೆ ಇತ್ತು. ಇದು ಅವರ ಸ್ವಭಾವವಾಗಿತ್ತು.

ಗೌರವಾನ್ವಿತ ಸ್ಪೀಕರ್,

ಇಂದು ಜಗತ್ತಿನಲ್ಲಿ ಯಾರಾದರೂ ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ಅವರು ತಕ್ಷಣ ಅದನ್ನು ನಂಬುತ್ತಾರೆ ಮತ್ತು ಅದನ್ನು ಎತ್ತಿ ಹಿಡಿಯುತ್ತಾರೆ. ಅವರು ಅಂತಹ ಕಾಂತೀಯ ಶಕ್ತಿ ಹೊಂದಿದ್ದು, ಅದು ಭಾರತದ ವಿರುದ್ಧ ಏನನ್ನೂ ತಕ್ಷಣವೇ ಗ್ರಹಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ಯಾವುದೋ ವಿದೇಶಿ ಏಜೆನ್ಸಿಯು ಹಸಿವಿನಿಂದ ಬಳಲುತ್ತಿರುವ ಅನೇಕ ದೇಶಗಳು ಭಾರತಕ್ಕಿಂತ ಉತ್ತಮವಾಗಿದೆ ಎಂದು ಹೇಳಿದರೆ, ಅದು ಸುಳ್ಳು ಹೇಳಿಕೆಯಾಗಿದ್ದರೂ, ಅವರು ಅದನ್ನು ಹಿಡಿದಿಟ್ಟುಕೊಂಡು ಅದನ್ನು ಭಾರತದಲ್ಲಿ ಹರಡಲು ಪ್ರಾರಂಭಿಸುತ್ತಾರೆ, ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ. ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುವುದರಲ್ಲಿ ಅವರು ಎಂತಹ ವಿನೋದ ಪಡೆಯುತ್ತಾರೆ. ಅವರು ಯಾವುದೇ ಮೌಲ್ಯವಿಲ್ಲದ ಆಧಾರರಹಿತ ವಿಷಯಗಳಿಗೆ ಗಮನ ಕೊಡುವ ಪ್ರವೃತ್ತಿ ಹೊಂದಿದ್ದಾರೆ. ನಂತರ ಅವರು ಅದನ್ನು ತಕ್ಷಣವೇ ಭಾರತದಲ್ಲಿ ಪ್ರಚಾರ ಹೆಚ್ಚಿಸಿ, ಹರಡಲು ಪ್ರಯತ್ನಿಸುತ್ತಾರೆ. ಕೊರೊನಾ ಸಾಂಕ್ರಾಮಿಕ ರೋಗ ಬಂದಾಗ, ಭಾರತದ ವಿಜ್ಞಾನಿಗಳು ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಅಭಿವೃದ್ಧಿಪಡಿಸಿದರು. ಆದರೆ ಅವರಿಗೆ ಭಾರತದ ಲಸಿಕೆಗಳ ಮೇಲೆ ನಂಬಿಕೆ ಇರಲಿಲ್ಲ. ಅವರು ವಿದೇಶಿ ಲಸಿಕೆಗಳಲ್ಲಿ ನಂಬಿಕೆ ಹೊಂದಿದ್ದರು. ಇದು ಅವರ ಮನಸ್ಥಿತಿ.

ಮಾನ್ಯ ಸ್ಪೀಕರ್ ಜಿ,

ದೇಶದ ಲಕ್ಷಾಂತರ ನಾಗರಿಕರು ಭಾರತದ ಲಸಿಕೆಗಳಲ್ಲಿ ತಮ್ಮ ನಂಬಿಕೆ ತೋರಿಸಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ಭಾರತದ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲ. ಅವರಿಗೆ ಭಾರತದ ಜನರ ಮೇಲೆ ನಂಬಿಕೆ ಇಲ್ಲ. ಆದರೆ ಈ ದೇಶವು ಕೂಡ ಕಾಂಗ್ರೆಸ್ ಬಗ್ಗೆ ಆಳವಾದ ವಿಶ್ವಾಸಹೊಂದಿಲ್ಲ ಎಂಬುದನ್ನು ನಾನು ಈ ಸದನಕ್ಕೆ ಹೇಳಲು ಬಯಸುತ್ತೇನೆ. ಕಾಂಗ್ರೆಸ್ ತನ್ನ ದುರಹಂಕಾರದಲ್ಲಿ ಮುಳುಗಿಹೋಗಿದೆ, ತನ್ನ ಅಹಂಕಾರದಲ್ಲಿ ಮುಳುಗಿದೆ, ಅದು ತನ್ನ ಪಾದದ ಕೆಳಗಿನ ನೆಲವನ್ನು ಸಹ ನೋಡುವುದಿಲ್ಲ.

ಮಾನ್ಯ ಸ್ಪೀಕರ್ ಜಿ,

ದೇಶದ ಹಲವೆಡೆ ಕಾಂಗ್ರೆಸ್ ಗೆಲುವು ಸಾಧಿಸಲು ದಶಕಗಳೇ ಹಿಡಿದಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ 1962ರಲ್ಲಿ ಗೆದ್ದಿತ್ತು. 61 ವರ್ಷಗಳಿಂದ ತಮಿಳುನಾಡಿನ ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ 1972ರಲ್ಲಿ ಗೆದ್ದಿದೆ. ಕಳೆದ 51 ವರ್ಷಗಳಿಂದ ಪಶ್ಚಿಮ ಬಂಗಾಳದ ಜನರು ಕಾಂಗ್ರೆಸ್ ಮೇಲೆ "ಅವಿಶ್ವಾಸ" ವ್ಯಕ್ತಪಡಿಸುತ್ತಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತ್‌ನಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ 1985ರಲ್ಲಿ ಗೆದ್ದಿದೆ. ಕಳೆದ 38 ವರ್ಷಗಳಿಂದ ಅಲ್ಲಿನ ಜನರು ಕಾಂಗ್ರೆಸ್‌ನಲ್ಲಿ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಾರೆ. ತ್ರಿಪುರಾದಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ 1988ರಲ್ಲಿ ಗೆದ್ದಿತ್ತು. 35 ವರ್ಷಗಳಿಂದ ತ್ರಿಪುರಾದ ಜನರು ಕಾಂಗ್ರೆಸ್ ಮೇಲೆ "ಅವಿಶ್ವಾಸ" ವ್ಯಕ್ತಪಡಿಸುತ್ತಿದ್ದಾರೆ. ಒಡಿಶಾದಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ 1995ರಲ್ಲಿ ಗೆದ್ದಿದೆ. ಕಳೆದ 28 ವರ್ಷಗಳಿಂದ ಒಡಿಶಾ ಅದೇ ಉತ್ತರ ನೀಡುತ್ತಿದೆ: "ಕಾಂಗ್ರೆಸ್‌ನಲ್ಲಿ ವಿಶ್ವಾಸವಿಲ್ಲ". ಕಾಂಗ್ರೆಸ್‌ನಲ್ಲಿ ವಿಶ್ವಾಸವಿಲ್ಲ.

ಮಾನ್ಯ ಸ್ಪೀಕರ್ ಜಿ,

ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ 1988ರಲ್ಲಿ ಗೆದ್ದಿದೆ. ಅಲ್ಲಿನ ಜನರು ಕಳೆದ 25 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ "ಅವಿಶ್ವಾಸ" ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ವಿಶ್ವಾಸವಿಲ್ಲ. ದೆಹಲಿ, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಒಬ್ಬನೇ ಒಬ್ಬ ಶಾಸಕನೂ ಇಲ್ಲ. ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಲ್ಲ ಎಂದು ಪದೇಪದ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾನ್ಯ ಸ್ಪೀಕರ್ ಜಿ,

ಈ ಸಂದರ್ಭದಲ್ಲಿ, ನಾನು ಪ್ರತಿಯೊಬ್ಬರ ಪ್ರಯೋಜನಕ್ಕಾಗಿ ಮಾತನಾಡಲು ಬಯಸುತ್ತೇನೆ. ನಾನು ನಿಮ್ಮ ಯೋಗಕ್ಷೇಮಕ್ಕಾಗಿ ಮಾತನಾಡುತ್ತಿದ್ದೇನೆ. ನೀವು ದಣಿದಿರುವಿರಿ, ತುಂಬಾ ದಣಿದಿರುವಿರಿ. ನಿಮ್ಮ ಒಳಿತಿಗಾಗಿ ನಾನು ಹೇಳುತ್ತಿದ್ದೇನೆ. ಇಂದು ಈ ಸಂದರ್ಭದಲ್ಲಿ, ನಾನು ನಮ್ಮ ವಿರೋಧ ಪಕ್ಷದ ಸಹೋದ್ಯೋಗಿಗಳಿಗೆ ನನ್ನ ಸಂತಾಪ ವ್ಯಕ್ತಪಡಿಸಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ, ನೀವು ಬೆಂಗಳೂರಿನಲ್ಲಿ ಸುಮಾರು 2 ದಶಕಗಳಷ್ಟು ಹಳೆಯ ಯುಪಿಎ ಅಂತ್ಯಕ್ರಿಯೆಯನ್ನು ಜಂಟಿಯಾಗಿ ನಡೆಸಿದ್ದೀರಿ. ನೀವು ಅದರ ಅಂತಿಮ ವಿಧಿವಿಧಾನಗಳನ್ನು ನಡೆಸಿದ್ದೀರಿ. ಪ್ರಜಾಸತ್ತಾತ್ಮಕ ಆಚರಣೆಗಳ ಪ್ರಕಾರ, ಆ ಕ್ಷಣದಲ್ಲಿ ನಾನು ಸಹಾನುಭೂತಿ ಮತ್ತು ಸಂತಾಪ ವ್ಯಕ್ತಪಡಿಸಬೇಕಿತ್ತು. ಆದರೆ ವಿಳಂಬ ಮಾಡಿದ್ದು ನನ್ನ ತಪ್ಪಲ್ಲ, ಏಕೆಂದರೆ ನೀವು ಒಂದೆಡೆ ಯುಪಿಎ ಅಂತ್ಯಕ್ರಿಯೆ ನಡೆಸುತ್ತಿದ್ದರೆ, ಇನ್ನೊಂದೆಡೆ ಸಂಭ್ರಮಿಸುತ್ತಿದ್ದೀರಿ. ಪಾಳು ಬಿದ್ದ ಜಾಗಕ್ಕೆ ಹೊಸ ಪ್ಲಾಸ್ಟರ್ ಹಾಕಿ ಸಂಭ್ರಮಿಸುತ್ತಿದ್ದೀರಿ, ಹಳೆ ಗೋಡೆಗೆ ಹೊಸ ಬಣ್ಣ ಹಾಕಿ ಸಂಭ್ರಮಿಸುತ್ತಿದ್ದೀರಿ. ದಶಕಗಳಷ್ಟು ಹಳೆಯದಾದ ಗುಜರಿ ಕಾರಿಗೆ ಎಲೆಕ್ಟ್ರಿಕ್ ವಾಹನ ಪ್ರದರ್ಶಿಸುವ ಇಂತಹ ಭವ್ಯವಾದ ಪ್ರದರ್ಶನವನ್ನು ನೀವು ತೂಹಲಕಾರಿಯಾಗಿ ಮಾಡಿದ್ದೀರಿ. ಪ್ರದರ್ಶನ ಮುಗಿಯುವ ಮೊದಲೇ ಅದರ ಕ್ರೆಡಿಟ್ ಯಾರು ಪಡೆಯಬೇಕು ಎಂದು ನೀವು ಜಗಳವಾಡಿದ್ದೀರಿ. ಈ ಮೈತ್ರಿಯಿಂದ ನೀವು ಜನರ ಮಧ್ಯೆ ಹೋಗುತ್ತೀರಿ. ಹಾಗಾಗಿ, ನಿಮ್ಮನ್ನು ಅನುಸರಿಸುತ್ತಿರುವವರು ಈ ದೇಶದ ಮೂಲತತ್ವ ಮತ್ತು ಮೌಲ್ಯಗಳನ್ನು ಸಹ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ನಾನು ನನ್ನ ವಿರೋಧಿ ಸಹೋದ್ಯೋಗಿಗಳಿಗೆ ಹೇಳಲು ಬಯಸುತ್ತೇನೆ. ತಲೆಮಾರುಗಳ ನಂತರ, ಈ ಜನರು ಕೆಂಪು ಮೆಣಸಿನಕಾಯಿ ಮತ್ತು ಹಸಿರು ಮೆಣಸಿನಕಾಯಿಯ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನಿಮ್ಮಲ್ಲಿ ಅನೇಕರನ್ನು ನಾನು ಬಲ್ಲೆ, ನೀವು ಭಾರತೀಯ ಮನೋಧರ್ಮ ಅರ್ಥ ಮಾಡಿಕೊಂಡವರು, ಹೊರನೋಟ ಬದಲಿಸಿ ಮೋಸ ಮಾಡಲು ಪ್ರಯತ್ನಿಸುವವರ ನೈಜತೆ ಸ್ಪಷ್ಟವಾಗುತ್ತದೆ. ಹೆಸರಿನ ಬೆಂಬಲ ಹೊಂದಿರುವವರಿಗೆ ಇದನ್ನು ಹೇಳಲಾಗುತ್ತಿದೆ.

(ದೂರದ ಯುದ್ಧಗಳಿಂದ ಪಲಾಯನ ಮಾಡಿದವರನ್ನು, ದೂರದ ಯುದ್ಧಗಳಿಂದ ಪಲಾಯನ ಮಾಡಿದವರನ್ನು,

ಯೋಧ ರಣಧೀರ್ ಎಂದು ಹೆಸರಿಸಲಾಗಿದೆ.

ಭಾಗ್ಯಚಂದ್ ಅವರ ಹಣೆಬರಹ ಇಂದಿಗೂ ಸುಪ್ತವಾಗಿದೆ)

ಮಾನ್ಯ ಸ್ಪೀಕರ್ ಜಿ,

ತಮ್ಮ ಬದುಕನ್ನು ಉಳಿಸಿಕೊಳ್ಳಲು ಎನ್‌ಡಿಎಯಲ್ಲಿ ಆಶ್ರಯ ಪಡೆಯಬೇಕಾದ ದುಸ್ಥಿತಿ ಅವರದು. ಆದರೆ ‘ನಾನು’ ಎಂಬ ಅಕ್ಷರದಿಂದ ಸೂಚಿಸುವ ಅಹಂಕಾರದ ಅಭ್ಯಾಸ ಅವರನ್ನು ಬಿಡುವುದಿಲ್ಲ. ಆದ್ದರಿಂದ, ಅವರು ಎನ್‌ಡಿಎಯಲ್ಲಿ ಎರಡು 'ನಾನು'ಗಳನ್ನು ಸೇರಿಸಿದರು. ಇವೆರಡು ‘ನಾನು ದುರಹಂಕಾರ! ಮೊದಲನೆಯ ‘ನಾನು’ ಇಪ್ಪತ್ತಾರು ಪಕ್ಷಗಳ ದುರಹಂಕಾರ, ಮತ್ತು ಎರಡನೆಯದು ‘ನಾನು’ ಒಂದು ಕುಟುಂಬದ ಸೊಕ್ಕು. ಅವರು ಎನ್‌ಡಿಎಯನ್ನು ಕಿತ್ತುಕೊಂಡಿದ್ದಾರೆ ಮತ್ತು ಭಾರತದ ತುಂಡುಗಳನ್ನು ಛಿದ್ರಗೊಳಿಸಿದ್ದಾರೆ - 'ಐ.ಎನ್ .ಡಿ.ಐ.ಎ.

ಮಾನ್ಯ ಸ್ಪೀಕರ್ ಜಿ,

ನಮ್ಮ ಡಿಎಂಕೆ ಸಹೋದರರು ಕೇಳಲಿ, ಕಾಂಗ್ರೆಸ್ ಸದಸ್ಯರೂ ಕೇಳಲಿ. ಮಾನ್ಯ ಸ್ಪೀಕರ್ ಜಿ, ದೇಶದ ಹೆಸರು ಬಳಸುವ ಮೂಲಕ ತನ್ನ ವಿಶ್ವಾಸಾರ್ಹತೆ ಹೆಚ್ಚಿಸಬಹುದು ಎಂದು ಯುಪಿಎ ನಂಬುತ್ತಿದೆ. ಆದರೆ ಕಾಂಗ್ರೆಸ್ ಬೆಂಬಲಿಗ ಪಕ್ಷಗಳು, ಕಾಂಗ್ರೆಸ್ ನ ಅಚಲ ಸಂಗಡಿಗರು, ತಮಿಳುನಾಡು ಸರ್ಕಾರದ ಸಚಿವರಾಗಿದ್ದವರು ಎರಡು ದಿನಗಳ ಹಿಂದೆಯಷ್ಟೇ 'ಐ.ಎನ್ .ಡಿ.ಐ.ಎ. ಅವರಿಗೆ ಯಾವುದೇ ಪ್ರಾಮುಖ್ಯತೆಯನ್ನು ಹೊಂದಿಲ್ಲ. 'ಐ.ಎನ್.ಡಿ.ಐ.ಎ.' ಅವರಿಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಅವರ ಪ್ರಕಾರ, ತಮಿಳುನಾಡು ಭಾರತದೊಳಗೆ ಅಸ್ತಿತ್ವದಲ್ಲಿಲ್ಲ.

ಮಾನ್ಯ ಸ್ಪೀಕರ್ ಜಿ,

ದೇಶಭಕ್ತಿಯ ಹೊಳೆಗಳು ಸದಾ ಹರಿಯುತ್ತಿರುವ ಆ ರಾಜ್ಯ ತಮಿಳುನಾಡು ಎಂದು ಇಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ನಮಗೆ ರಾಜಾಜಿ ಕೊಟ್ಟ ರಾಜ್ಯ, ಕಾಮರಾಜ್ ಕೊಟ್ಟ ರಾಜ್ಯ, ಎಂಜಿಆರ್ ಕೊಟ್ಟ ರಾಜ್ಯ, ಅಬ್ದುಲ್ ಕಲಾಂ ಕೊಟ್ಟ ರಾಜ್ಯ. ಇಂದು ಈ ತಮಿಳುನಾಡು ಈ ಧ್ವನಿಗಳಿಂದ ಪ್ರತಿಧ್ವನಿಸುತ್ತಿದೆ.

ಮಾನ್ಯ ಸ್ಪೀಕರ್ ಜಿ,

ನಿಮ್ಮ ಮೈತ್ರಿಯೊಳಗೆ ತಮ್ಮದೇ ದೇಶದ ಅಸ್ತಿತ್ವ ನಿರಾಕರಿಸುವ ವ್ಯಕ್ತಿಗಳು ಇದ್ದಾಗ, ನಿಮ್ಮ ವಾಹನವು ಎಲ್ಲಿ ನಿಲ್ಲುತ್ತದೆ? ಆತ್ಮಾವಲೋಕನಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ, ಆತ್ಮಸಾಕ್ಷಿಯ ಒಂದು ಚೂರು ಉಳಿದಿದ್ದರೆ, ಅದರ ಬಗ್ಗೆ ಯೋಚಿಸಿ.

ಮಾನ್ಯ ಸ್ಪೀಕರ್ ಜಿ,

ತಮ್ಮ ಹೆಸರಿನ ಬಗ್ಗೆ ಅವರ ದೃಷ್ಟಿಕೋನ ಇವತ್ತಲ್ಲ, ತಮ್ಮ ಹೆಸರಿನ ಬಗ್ಗೆ ಅವರಿಗಿರುವ ಮೋಹ ಇವತ್ತಲ್ಲ. ಈ ದೃಷ್ಟಿಕೋನವು ದಶಕಗಳಷ್ಟು ಹಳೆಯದು. ತಮ್ಮ ಹೆಸರನ್ನು ಬದಲಾಯಿಸುವ ಮೂಲಕ ದೇಶವನ್ನು ಆಳಬಹುದು ಎಂದು ಅವರು ನಂಬುತ್ತಾರೆ. ಬಡವರು ಅವರ ಹೆಸರನ್ನು ಎಲ್ಲೆಡೆ ನೋಡುತ್ತಾರೆ, ಆದರೆ ಅವರ ಕಾರ್ಯಗಳು ಎಲ್ಲಿಯೂ ಕಂಡುಬರುವುದಿಲ್ಲ. ಅವರ ಹೆಸರು ಆಸ್ಪತ್ರೆಗಳಲ್ಲಿವೆ, ಆದರೆ ಚಿಕಿತ್ಸೆ ಇಲ್ಲ. ಶಿಕ್ಷಣ ಸಂಸ್ಥೆಗಳು, ರಸ್ತೆಗಳು, ಉದ್ಯಾನವನಗಳ ಮೇಲೆ ಅವರ ಹೆಸರು ತೂಗುಹಾಕಿವೆ, ಬಡವರ ಕಲ್ಯಾಣ ಯೋಜನೆಗಳು, ಕ್ರೀಡಾ ಪ್ರಶಸ್ತಿಗಳು, ವಿಮಾನ ನಿಲ್ದಾಣಗಳು, ವಸ್ತುಸಂಗ್ರಹಾಲಯಗಳಲ್ಲಿ ಅವರ ಹೆಸರು ಇದೆ. ಅವರು ತಮ್ಮ ಹೆಸರಿನಲ್ಲಿ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ನಂತರ ಅವರು ಆ ಯೋಜನೆಗಳ ಅಡಿ, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದರು. ಸಮಾಜದ ಕಟ್ಟಕಡೆಯ ಮೈಲಿನಲ್ಲಿರುವ ವ್ಯಕ್ತಿಯು ತಳಮಟ್ಟದಲ್ಲಿ ಕೆಲಸ ನಡೆಯುವುದನ್ನು ನೋಡಲು ಬಯಸುತ್ತಿದ್ದ.  ಆದರೆ ಅವರಿಗೆ ಸಿಕ್ಕಿದ್ದು ಕೇವಲ ಕುಟುಂಬದ ಹೆಸರುಗಳು ಮಾತ್ರ.

ಗೌರವಾನ್ವಿತ ಸ್ಪೀಕರ್,

ಕಾಂಗ್ರೆಸ್‌ನ ಗುರುತಿಗೆ ಸಂಬಂಧಿಸಿದ ಯಾವುದೂ ಅವರಿಗೆ ಸೇರಿಲ್ಲ. ಅವರಿಗೆ ಸೇರಿದ್ದು ಏನೂ ಇಲ್ಲ. ಚುನಾವಣಾ ಚಿಹ್ನೆಗಳಿಂದ ಹಿಡಿದು ಸಿದ್ಧಾಂತಗಳವರೆಗೆ ಕಾಂಗ್ರೆಸ್ ತನ್ನದು ಎಂದು ಹೇಳಿಕೊಳ್ಳುವ ಎಲ್ಲವೂ ಬೇರೆಯವರಿಂದ ಎರವಲು ಪಡೆದಿದೆ.

ಮಾನ್ಯ ಸ್ಪೀಕರ್ ಜಿ,

ತಮ್ಮ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಚುನಾವಣಾ ಚಿಹ್ನೆಗಳು ಮತ್ತು ಸಿದ್ಧಾಂತಗಳನ್ನು ಮಾತ್ರ ಎರವಲು ಪಡೆದಿದ್ದಾರೆ, ಆದರೆ ಇದು ನಡೆದಿರುವ ಬದಲಾವಣೆಗಳಿಗೆ ಪಕ್ಷದ ದುರಹಂಕಾರವನ್ನು ತೋರಿಸುತ್ತದೆ. 2014ರಿಂದ ಅವರು ಹೇಗೆ ನಿರಾಕರಣೆಯ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಪಕ್ಷದ ಸಂಸ್ಥಾಪಕರು ಯಾರು? ಎ.ಒ. ಹ್ಯೂಮ್ ಆ ಪಕ್ಷವನ್ನು ಸ್ಥಾಪಿಸಿದ ವಿದೇಶಿ ವ್ಯಕ್ತಿ. 1920ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿದ್ದು ನಿಮಗೆ ಗೊತ್ತೇ ಇದೆ. ಹೊಸ ಧ್ವಜ ಹಾರಿಸಲಾಯಿತು, ರಾಷ್ಟ್ರವು ಅದನ್ನು ಸ್ವೀಕರಿಸಿತು. ಆದರೆ, ಆ ಧ್ವಜದ ಶಕ್ತಿ ನೋಡಿದ ಕಾಂಗ್ರೆಸ್ ಅದನ್ನೂ ಕಿತ್ತೊಗೆಯಲು ನಿರ್ಧರಿಸಿದೆ. ಅವರು ಚಿಹ್ನೆಯನ್ನು ನೋಡಿದರು ಮತ್ತು ರಾಜಕೀಯ ವಾಹನ ಓಡಿಸಲು ಸೂಕ್ತವಾಗಿದೆ ಎಂದು ಅವರು ಭಾವಿಸಿದರು. 1920ರಿಂದ ಈ ಆಟ ನಡೆಯುತ್ತಿದ್ದು, ತ್ರಿವರ್ಣ ಧ್ವಜ ಕಂಡರೆ ಜನರು ತಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಭಾವಿಸಿದ್ದರು. ಮತದಾರರನ್ನು ಓಲೈಸಲು ಗಾಂಧಿ ಹೆಸರನ್ನೂ ಬಳಸಿಕೊಂಡು ಈ ಆಟ ಆಡಿದ್ದಾರೆ. ಪ್ರತಿ ಬಾರಿಯೂ ಅದನ್ನೇ ಕದ್ದೊಯ್ದಿದ್ದಾರೆ. ಕಾಂಗ್ರೆಸ್ಸಿನ ಚುನಾವಣಾ ಚಿಹ್ನೆಗಳನ್ನು ನೋಡಿ - ಎರಡು ಎತ್ತುಗಳು, ಒಂದು ಕರು ಮತ್ತು ಬಿಗಿಯಾದ ಮುಷ್ಟಿ. ಈ ಚಿಹ್ನೆಗಳು ಅವರ ಕ್ರಿಯೆಗಳು, ಅವರ ಮನಸ್ಥಿತಿಯನ್ನು ಪ್ರತಿನಿಧಿಸುತ್ತವೆ. ಇವೆಲ್ಲವೂ ಒಂದು ಕುಟುಂಬದ ನಿಯಂತ್ರಣದ ಸುತ್ತ ಕೇಂದ್ರೀಕೃತವಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ.

ಮಾನ್ಯ ಸ್ಪೀಕರ್ ಜಿ,

ಇದು I.N.D.I.A ಅಲ್ಲ, ಮೈತ್ರಿ, ಇದು I.N.D.I.A ಅಲ್ಲ ಮೈತ್ರಿ. ಇದು ‘ಘಮಾಂಡಿಯಾ’ (ಅಹಂಕಾರಿ) ಮೈತ್ರಿ. ಪ್ರತಿಯೊಬ್ಬರೂ ಈ ಮೆರವಣಿಗೆಯಲ್ಲಿ ವರನಾಗಲು ಬಯಸುತ್ತಾರೆ. ಎಲ್ಲರಿಗೂ ಪ್ರಧಾನಿ ಆಗಬೇಕು ಎಂಬ ಆಸೆ ಇದೆ.

ಮಾನ್ಯ ಸ್ಪೀಕರ್ ಜಿ,

ನೀವು ಯಾವ ರಾಜ್ಯದಲ್ಲಿ ಯಾರೊಂದಿಗೆ ಇದ್ದೀರಿ ಎಂಬುದನ್ನೂ ಈ ಮೈತ್ರಿ ಪರಿಗಣಿಸಿಲ್ಲ. ಪಶ್ಚಿಮ ಬಂಗಾಳದಲ್ಲಿ ನೀವು ಟಿಎಂಸಿ ಮತ್ತು ಕಮ್ಯುನಿಸ್ಟ್ ಪಕ್ಷದ ವಿರುದ್ಧ ಇದ್ದೀರಿ, ಆದರೆ ದೆಹಲಿಯಲ್ಲಿ ನೀವು ಒಟ್ಟಿಗೆ ಇದ್ದೀರಿ ಮತ್ತು ಅಧೀರ್ ಬಾಬು. 1991ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದೊಂದಿಗೆ ನಿಮ್ಮ ವರ್ತನೆ ಹೇಗಿತ್ತು. ಇದು ಇಂದಿಗೂ ಇತಿಹಾಸದಲ್ಲಿ ದಾಖಲಾಗಿದೆ. ಅಂದ ಹಾಗೆ, ಈಗ 1991 ಹಿಂದಿನದು, ಆದರೆ ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಕಚೇರಿ ಧ್ವಂಸ ಮಾಡಿದವರು ಈಗ ಅವರೊಂದಿಗೆ ಸ್ನೇಹದಿಂದಿದ್ದಾರೆ. ಅವರು ತಮ್ಮ ಲೇಬಲ್ ಅನ್ನು ಹೊರಗಿನಿಂದ ಬದಲಾಯಿಸಬಹುದು, ಆದರೆ ಅವರ ಹಳೆಯ ಪಾಪಗಳ ಬಗ್ಗೆ ಏನು? ಆ ಪಾಪಗಳೇ ನಿನ್ನನ್ನು ಮುಳುಗಿಸುತ್ತವೆ. ಈ ಪಾಪಗಳನ್ನು ನೀವು ಸಾರ್ವಜನಿಕರಿಂದ ಹೇಗೆ ಮರೆ ಮಾಡುತ್ತೀರಿ? ನೀವು ಮರೆ ಮಾಡಲು ಸಾಧ್ಯವಿಲ್ಲ, ಅವರು ಇಂದಿನ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅದಕ್ಕಾಗಿಯೇ ನಾನು ಹೇಳಲು ಬಯಸುತ್ತೇನೆ:

(ಈಗಿನ ಪರಿಸ್ಥಿತಿ ಹೀಗಿದೆ, ಈಗಿನ ಪರಿಸ್ಥಿತಿ ಹೀಗಿದೆ

ಅದಕ್ಕಾಗಿಯೇ ಕೈಯಲ್ಲಿ ಕೈಗಳು,

ಅಲ್ಲಿ ಪರಿಸ್ಥಿತಿಗಳು ಬದಲಾಗುತ್ತವೆ,

ಚಾಕುಗಳನ್ನು ಸಹ ಇರಿಯಲಾಗುತ್ತದೆ)

ಮಾನ್ಯ ಸ್ಪೀಕರ್ ಜಿ,

ಈ ದುರಹಂಕಾರದ ಮೈತ್ರಿಯು ದೇಶದ ವಂಶ ಪಾರಂಪರ್ಯ ರಾಜಕೀಯದ ದೊಡ್ಡ ಪ್ರಾತಿನಿಧ್ಯವಾಗಿದೆ. ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ಸಂವಿಧಾನ ರಚನೆಕಾರರು ಯಾವಾಗಲೂ ವಂಶ ಪಾರಂಪರ್ಯ ರಾಜಕೀಯವನ್ನು ವಿರೋಧಿಸಿದರು. ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್, ಮೌಲಾನಾ ಆಜಾದ್, ಗೋಪಿನಾಥ್ ಬೋರ್ದೊಲೊಯ್, ಲೋಕನಾಥ್ ಜಯಪ್ರಕಾಶ್ ನಾರಾಯಣ್, ಡಾ. ಲೋಹಿಯಾ ಹೀಗೆ ನೀವು ನೋಡುವ ಎಲ್ಲ ಹೆಸರುಗಳು ವಂಶ ಪಾರಂಪರ್ಯ  ರಾಜಕಾರಣವನ್ನು ಬಹಿರಂಗವಾಗಿ ಟೀಕಿಸಿದರು. ಏಕೆಂದರೆ ಅದು ದೇಶದ ಸಾಮಾನ್ಯ ನಾಗರಿಕರಿಗೆ ಹಾನಿ ಮಾಡುತ್ತದೆ. ವಂಶ ಪಾರಂಪರ್ಯ  ರಾಜಕೀಯವು ಸಾಮಾನ್ಯ ನಾಗರಿಕರ ಹಕ್ಕುಗಳು ಮತ್ತು ಸವಲತ್ತುಗಳನ್ನು ಕಸಿದುಕೊಳ್ಳುತ್ತದೆ. ಈ ಶ್ರೇಷ್ಠ ವ್ಯಕ್ತಿಗಳು ಯಾವಾಗಲೂ ಕುಟುಂಬ, ಹೆಸರು ಮತ್ತು ಹಣದ ಆಧಾರದ ಮೇಲೆ ದೇಶವು ವ್ಯವಸ್ಥೆಯಿಂದ ದೂರ ಹೋಗಬೇಕು ಎಂದು ಒತ್ತಿ ಹೇಳಿದರು. ಆದರೆ, ಈ ವಿಚಾರವನ್ನು ಕಾಂಗ್ರೆಸ್ ಎಂದಿಗೂ ಇಷ್ಟಪಡಲಿಲ್ಲ.

ಮಾನ್ಯ ಸ್ಪೀಕರ್ ಜಿ,

ವಂಶ ಪಾರಂಪರ್ಯ  ರಾಜಕಾರಣ ವಿರೋಧಿಸುವವರನ್ನು ದ್ವೇಷದಿಂದ ನಡೆಸಿಕೊಳ್ಳುವುದನ್ನು ನಾವು ಯಾವಾಗಲೂ ನೋಡಿದ್ದೇವೆ. ಕಾಂಗ್ರೆಸ್ ಪಕ್ಷವು ವಂಶ ಪಾರಂಪರ್ಯ  ರಾಜಕಾರಣಕ್ಕೆ ಒಲವು ತೋರುತ್ತಿದೆ. ಕಾಂಗ್ರೆಸ್ ಪಕ್ಷವು ಊಳಿಗಮಾನ್ಯ ಪದ್ಧತಿ ಬೆಂಬಲಿಸುತ್ತದೆ, ಅಲ್ಲಿ ದೊಡ್ಡ ನಾಯಕರು ಮತ್ತು ಅವರ ಪುತ್ರರು ಮತ್ತು ಪುತ್ರಿಯರು ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಕುಟುಂಬ ವಲಯದಿಂದ ಹೊರಗಿರುವವರಿಗೂ ಸಹ, ಸಂದೇಶವು ಸ್ಪಷ್ಟವಾಗಿದೆ: ನೀವು ಈ ವಂಶ ಪಾರಂಪರ್ಯ  ರಾಜಕೀಯದ ಭಾಗವಾಗದ ಹೊರತು, ನಿಮಗೆ ಭವಿಷ್ಯವಿಲ್ಲ. ಇದು ಅವರ ವಿಧಾನವಾಗಿತ್ತು. ಈ ಊಳಿಗಮಾನ್ಯ ವ್ಯವಸ್ಥೆಯು ಹಲವಾರು ವಿಕೆಟ್‌ಗಳ ಪತನಕ್ಕೆ ಕಾರಣವಾಗಿದೆ, ಹಲವರ ಹಕ್ಕುಗಳನ್ನು ಹಾನಿಗೊಳಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು 2 ಬಾರಿ ಸೋಲಿಸಲು ಕಾಂಗ್ರೆಸ್ ತನ್ನ ಎಲ್ಲಾ ಶಕ್ತಿಯನ್ನು ಬಳಸಿತು. ಕಾಂಗ್ರೆಸ್ ನಾಯಕರು ಡಾ. ಅಂಬೇಡ್ಕರ್ ಅವರ ಬಟ್ಟೆಯನ್ನು ಲೇವಡಿ ಮಾಡಿದರು; ಬಾಬು ಜಗಜೀವನ್ ರಾಮ್ ಅವರು ತುರ್ತು ಪರಿಸ್ಥಿತಿಯನ್ನು ಪ್ರಶ್ನಿಸಿದರು, ಅವರನ್ನೂ ಕಾಂಗ್ರೆಸ್ ಬಿಡಲಿಲ್ಲ. ಆವರಿಗೆ ಚಿತ್ರಹಿಂಸೆ ನೀಡಲಾಯಿತು. ಮೊರಾರ್ಜಿ ದೇಸಾಯಿ, ಚೌಧರಿ ಚರಣ್ ಸಿಂಗ್, ಚಂದ್ರಶೇಖರ್ ಅವರಂತಹ ಹಲವಾರು ವ್ಯಕ್ತಿಗಳಿದ್ದಾರೆ, ಅವರ ಹಕ್ಕುಗಳು ಊಳಿಗಮಾನ್ಯ ಮನಸ್ಥಿತಿಯಿಂದಾಗಿ ನಿರಂತರವಾಗಿ ದುರ್ಬಲಗೊಂಡಿವೆ. ಈ ಊಳಿಗಮಾನ್ಯ ವ್ಯವಸ್ಥೆಯ ಭಾಗವಾಗದವರು, ವಂಶ ಪಾರಂಪರ್ಯ ರಾಜಕಾರಣದ ಭಾಗವಾಗದವರು, ಸಂಸತ್ತಿನಲ್ಲಿ ತಮ್ಮ ಭಾವಚಿತ್ರಗಳನ್ನು ಇಡುವುದಕ್ಕೂ ಪ್ರತಿರೋಧ ಎದುರಿಸಬೇಕಾಯಿತು. 1990ರ ನಂತರ ಬಿಜೆಪಿ ನೇತೃತ್ವದ ಕಾಂಗ್ರೆಸ್ಸೇತರ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಸೆಂಟ್ರಲ್ ಹಾಲ್‌ನಲ್ಲಿ ಅವರ ಭಾವಚಿತ್ರಗಳಿಗೆ ಅವಕಾಶ ನೀಡಲಾಯಿತು. 1991ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾದಾಗ ಲೋಹಿಯಾ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಇರಿಸಲಾಗಿತ್ತು. 1978ರಲ್ಲಿ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ನೇತಾಜಿ ಅವರ ಭಾವಚಿತ್ರ ಹಾಕಲಾಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಚೌಧರಿ ಚರಣ್ ಸಿಂಗ್ ಅವರ ಭಾವಚಿತ್ರಗಳನ್ನು 1993ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಇರಿಸಿತ್ತು. ಕಾಂಗ್ರೆಸ್ ಯಾವಾಗಲೂ ಸರ್ದಾರ್ ಪಟೇಲ್ ಅವರ ಕೊಡುಗೆಗಳನ್ನು ಕಡಿಮೆ ಮಾಡಿದೆ. ಅವರ ಪರಂಪರೆಯ ಗೌರವಾರ್ಥವಾಗಿ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ನಿರ್ಮಿಸುವ ಸೌಭಾಗ್ಯ ನಮ್ಮ ಸರ್ಕಾರದ್ದಾಯಿತು. ನಾವು ದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದ್ದೇವೆ, ಎಲ್ಲಾ ಮಾಜಿ ಪ್ರಧಾನಿಗಳಿಗೆ ಗೌರವ ಸಲ್ಲಿಸಿದ್ದೇವೆ. ಪಿಎಂ ಮ್ಯೂಸಿಯಂ ಪಕ್ಷದ ರೇಖೆಗಳನ್ನು ಮೀರಿ ನಿಂತಿದೆ. ತಮ್ಮ ಕುಟುಂಬದ ಹೊರಗಿನವರು ಪ್ರಧಾನಿಯಾದರೆ ಅದನ್ನು ಒಪ್ಪಿಕೊಳ್ಳುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂಬ ಅರಿವೂ ಅವರಿಗಿಲ್ಲ.

ಮಾನ್ಯ ಸ್ಪೀಕರ್,

ಅನೇಕ ಬಾರಿ, ನಕಾರಾತ್ಮಕವಾಗಿ ಏನನ್ನಾದರೂ ಹೇಳುವ ಉದ್ದೇಶದಿಂದ, ಪ್ರಯತ್ನಗಳನ್ನು ಮಾಡುವಾಗ, ಕೆಲವು ಸತ್ಯಗಳು ಹೊರಹೊಮ್ಮುತ್ತವೆ. ಸತ್ಯವು ಹೊರಬರುವುದನ್ನು ನಾವೆಲ್ಲರೂ ಕೆಲವೊಮ್ಮೆ ಅನುಭವಿಸಿದ್ದೇವೆ ಎಂಬುದು ನಿಜ. ಹನುಮಂತನು ಲಂಕೆಯನ್ನು ಸುಡಲಿಲ್ಲ; ಅಹಂಕಾರವೇ ಬೆಂಕಿಗೆ ಕಾರಣವಾಯಿತು. ಇದು ಸಂಪೂರ್ಣವಾಗಿ ನಿಜ. ನೋಡಿ, ಸಾರ್ವಜನಿಕರೂ ಶ್ರೀರಾಮನ ರೂಪವೇ. ಹನುಮಂತ ಲಂಕೆ  ಸುಡಲಿಲ್ಲ; ದುರಹಂಕಾರವೇ ಅದನ್ನು ಸುಟ್ಟುಹಾಕಿತು. ಆದ್ದರಿಂದಲೇ ಅದು 400ರಿಂದ 40 ಆಯಿತು.

ಮಾನ್ಯ ಸ್ಪೀಕರ್ ಜಿ,

30 ವರ್ಷಗಳ ನಂತರ ದೇಶದ ಜನತೆ 2 ಬಾರಿ ಪೂರ್ಣ ಬಹುಮತದ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂಬುದು ಸತ್ಯ. ಆದರೆ ಬಡವನ ಮಗ ಇಲ್ಲಿಗೆ ಬಂದದ್ದು ಹೇಗೆ? ನೀವು ಹೊಂದಿದ್ದ ಹಕ್ಕುಗಳು, ನಿಮ್ಮ ಕುಟುಂಬದ ಪೀಳಿಗೆಗೆ ನೀವು ಹೊಂದಿದ್ದ ಮೌಲ್ಯಗಳು, ಅವನು ಇಲ್ಲಿಗೆ ಹೇಗೆ ಬಂದ? ಈ ಮುಳ್ಳು ಇನ್ನೂ ನಿಮಗೆ ತೊಂದರೆ ಕೊಡುತ್ತದೆ, ಅದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ. ದೇಶದ ಜನರು ನಿಮ್ಮನ್ನು ಮಲಗಲು ಬಿಡುವುದಿಲ್ಲ, 2024 ರಲ್ಲೂ ಅವರು ನಿಮ್ಮನ್ನು ಮಲಗಲು ಬಿಡುವುದಿಲ್ಲ.

ಮಾನ್ಯ ಸ್ಪೀಕರ್ ಜಿ,

ವಿಮಾನದಲ್ಲಿ ಅವರ ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಕಾಲವಿತ್ತು. ಇಂದು, ಅದೇ ವಿಮಾನವು ಬಡವರಿಗೆ ಲಸಿಕೆಗಳನ್ನು ಒಯ್ಯುತ್ತದೆ. ಅಷ್ಟೇ ವ್ಯತ್ಯಾಸ.

ಮಾನ್ಯ ಸ್ಪೀಕರ್ ಜಿ,

ಡ್ರೈ ಕ್ಲೀನಿಂಗ್‌ಗೆ ಬಟ್ಟೆಗಳು ವಿಮಾನದಲ್ಲಿ ಬರುತ್ತಿದ್ದ ಕಾಲವೊಂದಿತ್ತು. ಇಂದು ಬಡವರು ‘ಹವಾಯಿ ಚಪ್ಪಲಿ’ ಧರಿಸಿ ವಿಮಾನದಲ್ಲಿ ಹಾರಾಡುತ್ತಿದ್ದಾರೆ!

ಸನ್ಮಾನ್ಯ ಸ್ಪೀಕರ್,

ನೌಕಾಪಡೆಯ ಯುದ್ಧನೌಕೆಗಳನ್ನು ವಿಹಾರಕ್ಕೆ ಮತ್ತು ಮೋಜು ಮಾಡಲು ಬಳಸುತ್ತಿದ್ದ ಕಾಲವಿತ್ತು. ಇಂದು ಅದೇ ನೌಕಾಪಡೆಯ ಹಡಗುಗಳನ್ನು ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಅವರ ಮನೆಗಳಿಗೆ ಕರೆತರಲು ಮತ್ತು ಬಡವರನ್ನು ಅವರ ಮನೆಗಳಿಗೆ ಕರೆತರಲು ಬಳಸಲಾಗುತ್ತಿದೆ.

ಸನ್ಮಾನ್ಯ ಸ್ಪೀಕರ್,

ತಮ್ಮ ನಡತೆ, ವರ್ತನೆ ಮತ್ತು ಚಾರಿತ್ರ್ಯದಲ್ಲಿ ವಂಶ ಪಾರಂಪರ್ಯ ಹಿನ್ನೆಲೆಯವರು ಆಧುನಿಕ ರಾಜನಂತೆ ಕೆಲಸ ಮಾಡುವ ಮನಸ್ಸು ಹೊಂದಿರುವವರು ಇಲ್ಲಿ ನಿಂತಿರುವ ಬಡವನ ಮಗನೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ನಂತರ, ಅವರು ಹೆಸರಿನಿಂದ ಪ್ರಸಿದ್ಧ ವ್ಯಕ್ತಿಗಳು ಆದರೆ ನಾನು ಅವರ ಕೆಲಸವನ್ನು ನಂಬುತ್ತೇನೆ.

ಸನ್ಮಾನ್ಯ ಸ್ಪೀಕರ್,

ಕೆಲವು ಸಂದರ್ಭಗಳಲ್ಲಿ ಕೆಲವು ವಿಷಯಗಳನ್ನು ಹೇಳಲು ನನಗೆ ಅವಕಾಶ ಸಿಗುತ್ತದೆ ಅದಕ್ಕಾಗಿ ನಾನು ಮೊದಲೇ ನಿರ್ಧರಿಸಬೇಕಾಗಿಲ್ಲ. ಈ ಸಂಗತಿಗಳು ಸಂಭವಿಸಿದಾಗ ಇಂತಹ ಅನೇಕ ಕಾಕತಾಳೀಯಗಳಿವೆ. ಕಾಕತಾಳೀಯವನ್ನು ನೋಡಿ - ನಿನ್ನೆ, ಯಾರೋ ಹೃದಯದಿಂದ ಮಾತನಾಡುವುದನ್ನು ಪ್ರಸ್ತಾಪಿಸಿದ್ದಾರೆ. ದೇಶವು ಅವರ ಸ್ಥಿತಿಯನ್ನು ಬಹಳ ಹಿಂದಿನಿಂದಲೂ ತಿಳಿದಿತ್ತು, ಆದರೆ ಈಗ ಅವರ ಹೃದಯದ ಬಗ್ಗೆ ಜನರಿಗೆ ತಿಳಿದಿದೆ.

ಸನ್ಮಾನ್ಯ ಸ್ಪೀಕರ್,

ಮೋದಿ ಮೇಲಿನ ಅವರ ಪ್ರೀತಿ ಎಷ್ಟು ಪ್ರಬಲವಾಗಿದೆ ಎಂದರೆ ಅವರು ದಿನದ 24 ಗಂಟೆಗಳ ಕಾಲ ಮತ್ತು ತಮ್ಮ ಕನಸಿನಲ್ಲಿಯೂ ಮೋದಿಯ ಬಗ್ಗೆ ಯೋಚಿಸುತ್ತಾರೆ. ಭಾಷಣದ ಮಧ್ಯದಲ್ಲಿ ಮೋದಿ ನೀರು ಕುಡಿದರೆ, ಮೋದಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಸಾರ್ವಜನಿಕರನ್ನು ನೋಡಲು ಹೊರಟರೆ, ಬೆವರು ಒರೆಸಲು ಮುಂದಾದರೆ ಅವರು ಮತ್ತೆ ಹೇಳುತ್ತಾರೆ... "ನೋಡಿ, ಮೋದಿ ಬೆವರುತ್ತಿದ್ದಾರೆ". ಅವರ ಬದುಕುಳಿಯುವ ವಿಧಾನವನ್ನು ನೋಡಿ! ನಾನು ಈ ಹಾಡಿನ ಸಾಲುಗಳಿಂದ ಉಲ್ಲೇಖಿಸುತ್ತೇನೆ:

 

ಮುಳುಗುವವನಿಗೆ ಒಣಹುಲ್ಲಿನ ಆಸರೆ ಸಾಕು.

ಹೃದಯ ತಲ್ಲಣಿಸಿದರೆ ಈ ಸುಳಿವು ಸಾಕು.

ಇದರ ನಂತರವೂ, ಆಕಾಶವು ಮಿಂಚು ಮೂಡುವಂತೆ ಮಾಡಬಹುದು,

ನಾನು ಮುಳುಗಿದರೆ ಏನು ಮಾಡಬೇಕೆಂದು ಯಾರಾದರೂ ಹೇಳಿ.

 

ಗೌರವಾನ್ವಿತ ಸ್ಪೀಕರ್,

ಅನೇಕ ವರ್ಷಗಳಿಂದ ನನಗೆ ಕಾಂಗ್ರೆಸ್ ಸಮಸ್ಯೆ ಅರ್ಥವಾಗಿದೆ. ಅವರು ಅದೇ ಹಳೆಯ ವಿಫಲ ಉತ್ಪನ್ನವನ್ನು ಮತ್ತೆ ಮತ್ತೆ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿ ಬಾರಿ ಆ ಉಡಾವಣೆ ವಿಫಲಗೊಳ್ಳುತ್ತದೆ. ಇದರಿಂದಾಗಿ ಮತದಾರರ ಮೇಲಿನ ದ್ವೇಷವೂ ಆಕಾಶ ಮುಟ್ಟಿದೆ. ಅವರ ಉಡಾವಣೆ ವಿಫಲಗೊಳ್ಳುತ್ತದೆ. ಇದರ ಪರಿಣಾಮವಾಗಿ ಅವರು ಸಾರ್ವಜನಿಕರ ಕಡೆಗೆ ಆ ಹತಾಶೆ ಮತ್ತು ದ್ವೇಷವನ್ನು ನಿರ್ದೇಶಿಸುತ್ತಾರೆ. ಆದರೆ ಸಾರ್ವಜನಿಕ ಸಂಪರ್ಕ ವಿಭಾಗದಜನರು ಏನು ಪ್ರಚಾರ ಮಾಡುತ್ತಾರೆ? ಅವರು ಅದನ್ನು 'ಮೊಹಬ್ಬತ್ ಕಿ ದುಕಾನ್' (ಪ್ರೀತಿಯ ಅಂಗಡಿ) ಎಂದು ಕರೆಯುತ್ತಾರೆ.  ಅವರ ಪರಿಸರ ವ್ಯವಸ್ಥೆಯು ಅಲ್ಲಿಂದ ಪ್ರಾರಂಭವಾಗುತ್ತದೆ. ಆದರೆ ದೇಶದ ಜನರು ಇದನ್ನು ಲೂಟ್ ಕಿ ದುಕಾನ್ ಎಂದು ಕರೆದು ಸುಳ್ಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ದ್ವೇಷವಿದೆ, ಹಗರಣಗಳಿವೆ, ಸಮಾಧಾನ ಮತ್ತು ತಿರುಚಿದ ಮನಸ್ಸುಗಳಿವೆ. ದೇಶವು ದಶಕಗಳಿಂದ ವಂಶ ಪಾರಂಪರ್ಯ ರಾಜಕಾರಣದ ಬೆಂಕಿಯಲ್ಲಿ ಉರಿಯುತ್ತಿತ್ತು. ನಿಮ್ಮ ಅಂಗಡಿಯು ತುರ್ತುಸ್ಥಿತಿ, ವಿಭಜನೆ, ಸಿಖ್ಖರ ಮೇಲಿನ ದೌರ್ಜನ್ಯಗಳು ಮತ್ತು ಹಲವಾರು ಸುಳ್ಳುಗಳನ್ನು ಮಾರಾಟ ಮಾಡಿದೆ; ಇದು ಬೆಂಕಿಯ ಸತ್ಯದ ಇತಿಹಾಸ ಮತ್ತು ಪುರಾವೆಗಳನ್ನು ಮಾರಾಟ ಮಾಡಿದೆ! ದ್ವೇಷದ ಮಾರಾಟಗಾರರಿಗೆ ನಾಚಿಕೆಯಾಗಬೇಕು, ಏಕೆಂದರೆ ನೀವು ಸೈನ್ಯದ ಸ್ವಾಭಿಮಾನವನ್ನೇ ಮಾರಿದ್ದೀರಿ!

ಗೌರವಾನ್ವಿತ ಸ್ಪೀಕರ್,

ಇಲ್ಲಿ ಕುಳಿತಿರುವ ನಮ್ಮಲ್ಲಿ ಹಲವರು ಗ್ರಾಮೀಣ ಅಥವಾ ಬಡ ಹಿನ್ನೆಲೆಯಿಂದ ಬಂದವರು. ಇಲ್ಲಿ ಈ ಮನೆಯಲ್ಲಿ ಹಳ್ಳಿಗಳಿಂದ, ಸಣ್ಣ ಪಟ್ಟಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹಳ್ಳಿಯ ವ್ಯಕ್ತಿ ವಿದೇಶಕ್ಕೆ ಹೋದರೆ, ಅವರು ಅದರ ಬಗ್ಗೆ ವರ್ಷಗಳವರೆಗೆ ಮಾತನಾಡುತ್ತಾರೆ. ಒಂದೋ ಎರಡೋ ಬಾರಿ ವಿದೇಶಕ್ಕೆ ಹೋದರೂ ವರ್ಷಗಟ್ಟಲೆ ಆ ಭೇಟಿಯನ್ನು ಹೇಳುತ್ತಲೇ ಇರುತ್ತಾರೆ. ದೆಹಲಿ ಅಥವಾ ಮುಂಬೈಗೆ ಭೇಟಿ ನೀಡದ, ಆದರೆ ಅಮೆರಿಕ ಅಥವಾ ಯುರೋಪ್‌ಗೆ ಭೇಟಿ ನೀಡುವ ಅವಕಾಶ ಪಡೆದ ಹಳ್ಳಿಯ ಬಡ ವ್ಯಕ್ತಿ ತನ್ನ ಪ್ರವಾಸಗಳ ಬಗ್ಗೆ ಪ್ರಸ್ತಾಪಿಸುತ್ತಲೇ ಇರುವುದು ಸಹಜ. ಅದೇ ರೀತಿ, ಮಡಕೆಯಲ್ಲಿ ಮೂಲಂಗಿ ಬೆಳೆಯದವರು ಇಡೀ ಹೊಲವನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ.

ಗೌರವಾನ್ವಿತ ಸ್ಪೀಕರ್,

ಯಾವತ್ತೂ ನೆಲದ ಮೇಲೆ ಇರದ, ಕಾರಿನ ಕಿಟಕಿಯನ್ನು ಕೆಳಗಿಳಿಸಿ ಕಾರಿನ ಒಳಗಿನಿಂದ ಯಾವಾಗಲೂ ಇತರರ ಬಡತನವನ್ನು ನೋಡುವ ಈ ಜನರು ಎಲ್ಲವನ್ನೂ ಆಶ್ಚರ್ಯಪಡುತ್ತಾರೆ. ಇಂಥವರು ಭಾರತದ ಸ್ಥಿತಿಗತಿ ವಿವರಿಸಿದಾಗ ಅವರ ಕುಟುಂಬ 50 ವರ್ಷಗಳ ಕಾಲ ಭಾರತವನ್ನು ಆಳಿದೆ ಎಂಬುದನ್ನು ಮರೆತುಬಿಡುತ್ತಾರೆ. ಒಂದು ರೀತಿಯಲ್ಲಿ, ಭಾರತದ ಈ ಸ್ವರೂಪವನ್ನು ವಿವರಿಸುವಾಗ, ಅವರು ತಮ್ಮ ಪೂರ್ವಜರ ವೈಫಲ್ಯಗಳನ್ನು ಉಲ್ಲೇಖಿಸುತ್ತಿದ್ದಾರೆ. ಇದಕ್ಕೆ ಇತಿಹಾಸವೇ ಸಾಕ್ಷಿ. ಆದರೆ ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ; ಅದಕ್ಕಾಗಿಯೇ ಅವರು ಹೊಸ ವಿಧಾನಗಳು ಅಥವಾ ಮಾದರಿಗಳನ್ನು ಪ್ರಾರಂಭಿಸುತ್ತಾರೆ.

ಗೌರವಾನ್ವಿತ ಸ್ಪೀಕರ್,

ಈ ಜನರಿಗೆ ತಮ್ಮ ಹೊಸ ಅಂಗಡಿಯು ಕೆಲವೇ ದಿನಗಳಲ್ಲಿ ಮುಚ್ಚುತ್ತದೆ ಎಂಬುದು ತಿಳಿದಿದೆ. ಇಂದು ಈ ಚರ್ಚೆಯ ಮಧ್ಯೆ, ಈ ದುರಹಂಕಾರಿ ಮೈತ್ರಿಕೂಟದ ಆರ್ಥಿಕ ನೀತಿಯ ಬಗ್ಗೆ ನಾನು ದೇಶದ ಜನರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ದೇಶದ ಈ ದುರಹಂಕಾರದ ಮೈತ್ರಿಕೂಟವು ದೇಶವನ್ನು ಬಲಿಷ್ಠಗೊಳಿಸುವ ಬದಲು ದುರ್ಬಲಗೊಳಿಸುವ ಇಂತಹ ಆರ್ಥಿಕತೆಯನ್ನು ಬಯಸುತ್ತದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಮ್ಮ ಸುತ್ತಲಿನ ದೇಶಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳೊಂದಿಗೆ ಮುಂದುವರಿಯಲು ಬಯಸುತ್ತವೆ ಎಂಬುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಖಜಾನೆ ದುರುಪಯೋಗ ಮಾಡಿಕೊಂಡು ಮತ ಪಡೆಯುವ ನಾಟಕವಾಡುತ್ತಿದ್ದಾರೆ. ನಮ್ಮ ಸುತ್ತಲಿನ ದೇಶಗಳ ಸ್ಥಿತಿಯನ್ನು ನೋಡಿ. ಅವರು ಬದಲಾಗುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಎಂಬುದನ್ನು ನಾನು ದೇಶಕ್ಕೆ ಹೇಳಲು ಬಯಸುತ್ತೇನೆ, ಆದರೆ ಸಾರ್ವಜನಿಕರು ಖಂಡಿತವಾಗಿಯೂ ಅವರ ಮಾರ್ಗಗಳನ್ನು ಸರಿಪಡಿಸಲು ಒತ್ತಾಯಿಸುತ್ತಾರೆ.

ಗೌರವಾನ್ವಿತ ಸ್ಪೀಕರ್,

ಈ ಘಟನೆಗಳು ನಮ್ಮ ದೇಶ ಹಾಗೂ ನಮ್ಮ ರಾಜ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಚುನಾವಣೆಯಲ್ಲಿ ಗೆಲ್ಲಲು ನೀಡಿದ ಪೊಳ್ಳು ಭರವಸೆಗಳಿಂದಾಗಿ ಈ ರಾಜ್ಯಗಳ ಜನರು ಪರಿಣಾಮಗಳನ್ನು ಮತ್ತು ಹೊಸ ಹೊರೆಗಳನ್ನು ಎದುರಿಸುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುವ ಘೋಷಣೆಗಳನ್ನು ಮಾಡಲಾಗುತ್ತಿದೆ.

ಗೌರವಾನ್ವಿತ ಸ್ಪೀಕರ್,

ಈ ದುರಹಂಕಾರಿ ಮೈತ್ರಿಕೂಟದ ಆರ್ಥಿಕ ನೀತಿಗಳ ಫಲಿತಾಂಶವನ್ನು ನಾನು ಸ್ಪಷ್ಟವಾಗಿ ನೋಡುತ್ತಿದ್ದೇನೆ. ಅದಕ್ಕಾಗಿಯೇ ನಾನು ದೇಶವಾಸಿಗಳನ್ನು ಎಚ್ಚರಿಸಲು ಬಯಸುತ್ತೇನೆ, ಅವರಿಗೆ ಸತ್ಯವನ್ನು ಹೇಳುತ್ತೇನೆ. ಈ ಜನರು, ಈ ದುರಹಂಕಾರಿ ಮೈತ್ರಿ, ಭಾರತದ ದಿವಾಳಿತನದ ಖಾತ್ರಿಯಾಗಿದೆ. ಇದು ಆರ್ಥಿಕತೆಯನ್ನು ಮುಳುಗಿಸುವುದು ಗ್ಯಾರಂಟಿ. ಇದು ಎರಡಂಕಿಯ ಹಣದುಬ್ಬರ ಗ್ಯಾರಂಟಿ. ಇದು ನೀತಿ ಪಾರ್ಶ್ವವಾಯು ಗ್ಯಾರಂಟಿಯಾಗಿದೆ. ಇದು ಅಸ್ಥಿರತೆಯ ಭರವಸೆ. ಇದು ಭ್ರಷ್ಟಾಚಾರದ ಗ್ಯಾರಂಟಿ. ಇದು ಸಮಾಧಾನಕರ ಭರವಸೆ. ಇದು ವಂಶಾಡಳಿತ ರಾಜಕಾರಣ ಗ್ಯಾರಂಟಿ. ಇದು ಬೃಹತ್ ನಿರುದ್ಯೋಗದ ಭರವಸೆಯಾಗಿದೆ. ಇದು ಭಯೋತ್ಪಾದನೆ ಮತ್ತು ಹಿಂಸಾಚಾರದ ಖಾತರಿಯಾಗಿದೆ. ಇದು ಭಾರತವನ್ನು ಎರಡು ಶತಕ ಹಿಂದಕ್ಕೆ ಎಳೆಯುವುದು ಗ್ಯಾರಂಟಿ.

ಗೌರವಾನ್ವಿತ ಸ್ಪೀಕರ್,

ಭಾರತವನ್ನು ವಿಶ್ವದ ಅಗ್ರ 3 ಆರ್ಥಿಕತೆಯನ್ನಾಗಿ ಮಾಡುವ ಭರವಸೆಯನ್ನು ಅವರು ಎಂದಿಗೂ ನೀಡಲು ಸಾಧ್ಯವಿಲ್ಲ. ನನ್ನ 3ನೇ ಅವಧಿಯಲ್ಲಿ ಭಾರತವನ್ನು ಅಗ್ರ 3 ಸ್ಥಾನಕ್ಕೆ ತರುತ್ತೇನೆ ಎಂದು ಮೋದಿ ದೇಶಕ್ಕೆ ಭರವಸೆ ನೀಡಿದ್ದಾರೆ. ಇದು ದೇಶಕ್ಕೆ ನನ್ನ ಭರವಸೆ. ಆದರೆ, ಅವರು ದೇಶವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಈ ಜನರು ಆ ದಿಕ್ಕಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ.

ಗೌರವಾನ್ವಿತ ಸ್ಪೀಕರ್,

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಮೊದಲು ನಿರೂಪಣೆ ಮಾಡಲು ಸಿದ್ಧರಿರುತ್ತಾರೆ ಆದರೆ ಕೇಳುವ ತಾಳ್ಮೆ ಇಲ್ಲ. ಅವರು ಮೌಖಿಕವಾಗಿ ನಿಂದಿಸುತ್ತಾರೆ ಮತ್ತು ಓಡಿಹೋಗುತ್ತಾರೆ; ಕಸವನ್ನು ಎಸೆದು ಓಡಿಹೋಗುತ್ತಾರೆ, ಸುಳ್ಳುಗಳನ್ನು ಹರಡಿ ಓಡಿಹೋಗುತ್ತಾರೆ. ಇದು ಅವರ ಆಟ. ಇವರಿಂದ ಈ ದೇಶ ಹೆಚ್ಚೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮಣಿಪುರ ಕುರಿತು ಗೃಹ ಸಚಿವರ ಚರ್ಚೆಗೆ ಅವರು ಸ್ವಲ್ಪ ಆಸಕ್ತಿ ತೋರಿಸಿದ್ದರೆ, ಆಗ ಮಾತ್ರ ಮಣಿಪುರದ ಬಗ್ಗೆ ವಿವರವಾಗಿ ಚರ್ಚಿಸಬಹುದಿತ್ತು. ಪ್ರತಿಯೊಂದು ಅಂಶವನ್ನೂ ಚರ್ಚಿಸಬಹುದಿತ್ತು. ಅವರಿಗೂ ಸಾಕಷ್ಟು ವಿಷಯಗಳನ್ನು ಹೇಳುವ ಅವಕಾಶ ಸಿಗಬಹುದಿತ್ತು. ಆದರೆ ಅವರು ಚರ್ಚೆಯಲ್ಲಿ ಆಸಕ್ತಿ ವಹಿಸಲಿಲ್ಲ.  ನಿನ್ನೆ ಅಮಿತ್ ಭಾಯ್ ವಿಷಯವನ್ನು ವಿವರವಾಗಿ ಹೇಳಿದಾಗ, ಈ ಜನರು ಆ ಮಟ್ಟಿಗೆ ಸುಳ್ಳುಗಳನ್ನು ಹರಡುವುದನ್ನು ನೋಡಿ ದೇಶವೇ ಆಶ್ಚರ್ಯ ಪಟ್ಟಿತು. ಇಂತಹ ಘೋರ ಪಾಪಗಳನ್ನು ಮಾಡಿರುವ ಇವರು ಇಂದು ಅವಿಶ್ವಾಸ ಗೊತ್ತುವಳಿ ಮಂಡಿಸಿ ಇಡೀ ಅವಿಶ್ವಾಸದ ವಿಷಯವಾಗಿ ಮಾತನಾಡಿದಾಗ ದೇಶದ ವಿಶ್ವಾಸವನ್ನು ಬಯಲಿಗೆಳೆಯುವ, ಹೊಸ ಶಕ್ತಿ ತುಂಬುವ ಜವಾಬ್ದಾರಿ ಖಜಾನೆ ಪೀಠದ ಮೇಲಿದೆ. ದೇಶದ ವಿಶ್ವಾಸ ಮತ್ತು ನಂಬಿಕೆ ಇಲ್ಲದವರಿಗೆ ತಕ್ಕ ಉತ್ತರ ನೀಡಿ. ನಾವು ಮಣಿಪುರಕ್ಕೆ ಮಾತ್ರ ಚರ್ಚೆಗಳನ್ನು ನಡೆಸಲು ಬಯಸಿದ್ದೇವೆ. ಈ ಕುರಿತು ಗೃಹ ಸಚಿವರು ಪತ್ರ ಬರೆದಿದ್ದರು. ಅದು ಅವರ ಇಲಾಖೆಗೆ ಸಂಬಂಧಿಸಿದ ವಿಚಾರವಾಗಿತ್ತು. ಆದರೆ ಅವರ ಕಡೆಯಿಂದ ಧೈರ್ಯವಿರಲಿಲ್ಲ; ಯಾವುದೇ ಉದ್ದೇಶ ಇರಲಿಲ್ಲ, ಯಾವುದೇ ಇಚ್ಛೆ ಇರಲಿಲ್ಲ ಆದರೆ ಕೆಟ್ಟ ಉದ್ದೇಶಗಳು ಮಾತ್ರ ಇದ್ದವು.

ಗೌರವಾನ್ವಿತ ಸ್ಪೀಕರ್,

ಮಣಿಪುರ ಪರಿಸ್ಥಿತಿ ಕುರಿತು, ದೇಶದ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ನಿನ್ನೆ 2 ಗಂಟೆಗಳ ಕಾಲ ಸಂಪೂರ್ಣ ವಿಷಯವನ್ನು ವಿವರವಾಗಿ ಮತ್ತು ರಾಜಕೀಯದ ಯಾವುದೇ ಅಂಶವಿಲ್ಲದೆ ಬಹಳ ತಾಳ್ಮೆಯಿಂದ ವಿವರಿಸಿದರು. ಸರ್ಕಾರ ಮತ್ತು ದೇಶದ ಕಾಳಜಿಯನ್ನು ವ್ಯಕ್ತಪಡಿಸಿದ ಅವರು, ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಇಡೀ ಸದನದ ಪರವಾಗಿ ಮಣಿಪುರಕ್ಕೆ ವಿಶ್ವಾಸದ ಸಂದೇಶ ರವಾನಿಸಲು ಉದ್ದೇಶಿಸಲಾಗಿತ್ತು. ಜನಸಾಮಾನ್ಯರಿಗೆ ತಿಳಿವಳಿಕೆ ನೀಡುವ ಪ್ರಯತ್ನವೂ ನಡೆದಿದೆ. ದೇಶದ ಒಳಿತಿಗಾಗಿ ಮತ್ತು ಮಣಿಪುರ ಸಮಸ್ಯೆಯನ್ನು ನಿವಾರಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವಾಗಿತ್ತು. ಆದರೆ ಅವರಿಗೆ ರಾಜಕೀಯ ಬಿಟ್ಟು ಬೇರೇನನ್ನೂ ಯೋಚಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅವರು ಈ ಆಟಗಳನ್ನು ಆಡಲು ನಿರ್ಧರಿಸಿದರು.

ಗೌರವಾನ್ವಿತ ಸ್ಪೀಕರ್,

ನಿನ್ನೆ ಅಮಿತ್ ಭಾಯ್ ಎಲ್ಲವನ್ನೂ ವಿವರವಾಗಿ ಹೇಳಿದ್ದರೂ, ಮಣಿಪುರ ನ್ಯಾಯಾಲಯವು ತನ್ನ ತೀರ್ಪು ನೀಡಿತು. ಈಗ, ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಷಯಗಳು ಮತ್ತು ಅದರ ಪರವಾಗಿ ಮತ್ತು ವಿರೋಧವಾಗಿ ಸೃಷ್ಟಿಯಾದ ಸಂದರ್ಭಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಹಿಂಸಾಚಾರದ ಅವಧಿ ಪ್ರಾರಂಭವಾಗಿದೆ ಮತ್ತು ಅನೇಕ ಕುಟುಂಬಗಳು ಹಲವಾರು ತೊಂದರೆಗಳನ್ನು ಎದುರಿಸುತ್ತಿವೆ. ಅನೇಕರು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡರು. ಮಹಿಳೆಯರ ಮೇಲೆ ಗಂಭೀರ ಅಪರಾಧ ನಡೆದಿದ್ದು, ಈ ಅಪರಾಧ ಅಕ್ಷಮ್ಯವಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ.  ಪ್ರಯತ್ನಗಳು ನಡೆಯುತ್ತಿರುವ ರೀತಿಯಲ್ಲಿ, ಮುಂದಿನ ದಿನಗಳಲ್ಲಿ ಶಾಂತಿ ಖಂಡಿತವಾಗಿಯೂ ಮೇಲುಗೈ ಸಾಧಿಸುತ್ತದೆ ಎಂದು ನಾನು ದೇಶದ ಎಲ್ಲಾ ನಾಗರಿಕರಿಗೆ ಭರವಸೆ ನೀಡಲು ಬಯಸುತ್ತೇನೆ. ಮಣಿಪುರ ಮತ್ತೊಮ್ಮೆ ಹೊಸ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಲಿದೆ. ನಾನು ಮಣಿಪುರದ ಜನರನ್ನು ಒತ್ತಾಯಿಸಲು ಬಯಸುತ್ತೇನೆ. ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ದೇಶವು ನಿಮ್ಮೊಂದಿಗಿದೆ ಎಂದು ಹೇಳಲು ಬಯಸುತ್ತೇನೆ, ಈ ಮನೆ ನಿಮ್ಮೊಂದಿಗೆ ನಿಂತಿದೆ. ಯಾರಾದ್ರೂ ಇರಲಿ, ಇಲ್ಲದಿರಲಿ, ನಾವೆಲ್ಲರೂ ಸೇರಿ ಈ ಸವಾಲಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಅಲ್ಲಿ ಮತ್ತೊಮ್ಮೆ ಶಾಂತಿ ನೆಲೆಸುತ್ತದೆ. ಮಣಿಪುರವು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಸಂದರ್ಭವನ್ನು ಬಿಡುವುದಿಲ್ಲ ಎಂದು ನಾನು ಮಣಿಪುರದ ಜನರಿಗೆ ಭರವಸೆ ನೀಡುತ್ತೇನೆ.

ಗೌರವಾನ್ವಿತ ಸ್ಪೀಕರ್,

ಇಲ್ಲಿ ಸದನದಲ್ಲಿ ಭಾರತ ಮಾತೆಯ ಬಗ್ಗೆ ಏನೇ ಹೇಳಿದರೂ ಅದು ಪ್ರತಿಯೊಬ್ಬ ಭಾರತೀಯನ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಏನು ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ. ಅಧಿಕಾರವಿಲ್ಲದೆ ಯಾರಿಗಾದರೂ ಅದೇ ಆಗುತ್ತದೆಯೇ? ಅವರು ಅಧಿಕಾರವಿಲ್ಲದೆ ಬದುಕಲು ಸಾಧ್ಯವಿಲ್ಲವೇ? ಮತ್ತು ಅವರು ಯಾವ ರೀತಿಯ ಭಾಷೆಯನ್ನು ಬಳಸುತ್ತಿದ್ದಾರೆ?

ಗೌರವಾನ್ವಿತ ಸ್ಪೀಕರ್,

ಕೆಲವರು ಭಾರತ ಮಾತೆಗೆ ಮರಣವನ್ನು ಏಕೆ ಬಯಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಇನ್ನೇನಿದೆ? ಇವರು ಕೆಲವೊಮ್ಮೆ ಪ್ರಜಾಪ್ರಭುತ್ವವನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಾರೆ, ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ವಾಸ್ತವವಾಗಿ, ಅವರ ಮನಸ್ಸಿನಲ್ಲಿ ಏನಿದೆಯೋ ಅದು ಅವರ ಕೆಲಸದಲ್ಲಿ ಪ್ರತಿಫಲಿಸುತ್ತದೆ. ನನಗೆ ಆಶ್ಚರ್ಯವಾಗಿದೆ ಮತ್ತು ಈ ಜನರು ಯಾರು? ಈ ದೇಶ ವಿಭಜನೆಯ ದಿನವಾದ ಆಗಸ್ಟ್ 14 ಅನ್ನು ಮರೆತಿದ್ದಾರಾ? ಈ ದಿನವು ಇಂದಿಗೂ ನಮಗೆ ನೋವು, ಸಂಕಟ ಮತ್ತು ಕಿರುಚಾಟಗಳನ್ನು ನೆನಪಿಸುತ್ತದೆ. ಭಾರತ ಮಾತೆಯನ್ನು 3 ತುಂಡು ಮಾಡಿದವರು ಇವರು. ಭಾರತ ಮಾತೆಯನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಬೇಕಾದಾಗ ಮತ್ತು ಸಂಕೋಲೆಗಳನ್ನು ಮುರಿಯಬೇಕಾದಾಗ, ಈ ಜನರು ಭಾರತ  ಮಾತೆಯ ತೋಳುಗಳನ್ನು ಕತ್ತರಿಸಿದರು. ಭಾರತ ಮಾತೆಯನ್ನು 3 ತುಂಡುಗಳಾಗಿ ಕತ್ತರಿಸಲಾಯಿತು. ಹೀಗಿರುವಾಗ ಈ ಜನರು ಇಂತಹ ವಿಷಯದ ಬಗ್ಗೆ ಮಾತನಾಡಲು ಎಷ್ಟು ಧೈರ್ಯ ಮಾಡುತ್ತಾರೆ.

ಗೌರವಾನ್ವಿತ ಸ್ಪೀಕರ್,

ದೇಶದ ಮೂಲೆ ಮೂಲೆಯಲ್ಲಿ ಜಾಗೃತಿಯ ಧ್ವನಿಯಾಗಿ ಹೊರಹೊಮ್ಮಿದ ಮಹಾನ್ ವ್ಯಕ್ತಿಗಳನ್ನು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಲು ಪ್ರೇರೇಪಿಸಿದ ವಂದೇ ಮಾತರಂ ಗೀತೆಯನ್ನು ಸಹ ವಿಂಗಡಿಸಿದವರು ಇವರು. ತುಷ್ಟೀಕರಣದ ರಾಜಕಾರಣದಿಂದಾಗಿ ಭಾರತ ಮಾತೆಯನ್ನು ತುಂಡುತುಂಡಾಗಿಸಿದ್ದಲ್ಲದೆ, ವಂದೇ ಮಾತರಂ ಗೀತೆಯನ್ನೂ ತುಂಡರಿಸಿದರು. ಸನ್ಮಾನ್ಯ ಸಭಾಧ್ಯಕ್ಷರೇ, ‘ಭಾರತ್ ತೇರೆ ತುಕ್ದೇ ಹೊಂಗೆ’ ಎಂಬ ಘೋಷಣೆ ಕೂಗುವ ಜನರು ಇವರೇ. ಅಂತಹ ಘೋಷಣೆ ಕೂಗುವ ಗುಂಪುಗಳನ್ನು ಅವರು ಪ್ರೋತ್ಸಾಹಿಸುತ್ತಾರೆ. ‘ಭಾರತ್ ತೇರೆ ತುಕ್ದೇ ಹೊಂಗೆ’ ಎಂಬ ಘೋಷಣೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈಶಾನ್ಯವನ್ನು ಸಂಪರ್ಕಿಸುವ ಸಿಲಿಗುರಿ ಬಳಿಯ ಸಣ್ಣ ಕಾರಿಡಾರ್ ಕಡಿತಗೊಂಡರೆ, ಈಶಾನ್ಯ ಪ್ರತ್ಯೇಕವಾಗುತ್ತದೆ ಎಂದು ಹೇಳುವವರಿಗೆ ಅವರು ಬೆಂಬಲ ನೀಡುತ್ತಿದ್ದಾರೆ. ಅಂಥವರನ್ನು ಬೆಂಬಲಿಸುವವರು ಅವರೇ.

ಗೌರವಾನ್ವಿತ ಸ್ಪೀಕರ್,

ಹೊರನಡೆದ ಈ ಜನರು ಎಲ್ಲೇ ಇದ್ದರೂ ಕಚ್ಚತೀವು ಎಂದರೆ ಏನೆಂದು ಕೇಳುತ್ತಾರೆಯೇ? ಕಚ್ಚತೀವು ಏನೆಂದು ಯಾರಾದರೂ ಕೇಳುತ್ತಾರೆಯೇ? ಅವರು ದೊಡ್ಡ ಸಮರ್ಥನೆಗಳನ್ನು ಮಾಡುತ್ತಾರೆ, ಆದರೆ ಇಂದು ನಾನು ಅವರಿಗೆ ಕಚ್ಚತ್ತೀವು ಎಂದರೇನು ಮತ್ತು ಈ ಕಚ್ಚತೀವು ಎಲ್ಲಿಂದ ಬಂತು? ಸುಮ್ಮನೆ ಕೇಳಿ, ಇಂತಹ ಬರಹಗಳ ಮೂಲಕ ದೇಶವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಡಿಎಂಕೆಯ ಈ ಜನರು, ಅವರ ಸರ್ಕಾರ, ಅವರ ಮುಖ್ಯಮಂತ್ರಿ ನನಗೆ ಪತ್ರಗಳನ್ನು ಬರೆಯುತ್ತಾರೆ. ಅವರು ಈಗಲೂ ಬರೆಯುತ್ತಾರೆ ಮತ್ತು ಹೇಳುತ್ತಾರೆ, ಮೋದಿ ಜೀ ಕಚ್ಚತೀವು ಮರಳಿ ತರುತ್ತಾರೆ. ಏನಿದು ಕಚ್ಚತೀವು? ಯಾರು ಮಾಡಿದರು? ತಮಿಳುನಾಡಿನ ಆಚೆ, ಮತ್ತು ಶ್ರೀಲಂಕಾಕ್ಕಿಂತ ಮುಂಚೆಯೇ, ಯಾರೋ ಒಂದು ದ್ವೀಪವನ್ನು ಬೇರೆ ದೇಶಕ್ಕೆ ಬಿಟ್ಟುಕೊಟ್ಟಿದ್ದರು. ಅದನ್ನು ಯಾವಾಗ ನೀಡಲಾಯಿತು? ಎಲ್ಲಿ ಹೋಯಿತು? ಅದು ಭಾರತ ಮಾತೆಯ ಭಾಗವಾಗಿರಲಿಲ್ಲವೇ? ನೀವು ಅದನ್ನು ಸಹ ಕತ್ತರಿಸಿದ್ದೀರಿ. ಆ ಸಮಯದಲ್ಲಿ ಯಾರು ಅಧಿಕಾರದಲ್ಲಿದ್ದರು? ಇದು ಶ್ರೀಮತಿ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಸಂಭವಿಸಿತು. ಕಾಂಗ್ರೆಸ್‌ನ ಇತಿಹಾಸವೇ ಭಾರತ ಮಾತೆಯನ್ನು ವಿಭಜಿಸುವುದಾಗಿದೆ.

ಗೌರವಾನ್ವಿತ ಸ್ಪೀಕರ್,

ಭಾರತ ಮಾತೆಯ ಮೇಲಿನ ಕಾಂಗ್ರೆಸ್‌ನ ಪ್ರೀತಿ ಏನು? ಭಾರತದ ಜನರ ಮೇಲಿನ ಪ್ರೀತಿ ಏನು? ನಾನು ಈ ಸದನದ ಮುಂದೆ ಒಂದು ಸತ್ಯವನ್ನು ಬಹಳ ನೋವಿನಿಂದ ಇಡಲು ಬಯಸುತ್ತೇನೆ. ಅವರಿಗೆ ಈ ನೋವು ಅರ್ಥವಾಗುವುದಿಲ್ಲ. ನಾನು ಈಶಾನ್ಯದಲ್ಲಿ ತಿರುಗಾಡುತ್ತಿದ್ದೆ, ನಾನು ರಾಜಕೀಯದಲ್ಲಿ ಇರದಿದ್ದಾಗಲೂ ಅಲ್ಲಿದ್ದೆ. ಆ ಕ್ಷೇತ್ರದ ಬಗ್ಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಆದರೆ ಅವರಿಗೆ ಕಲ್ಪನೆಯೇ ಇಲ್ಲ.

ಗೌರವಾನ್ವಿತ ಸ್ಪೀಕರ್,

3 ಸಂದರ್ಭಗಳನ್ನು ಸದನದಲ್ಲಿ ನಿಮ್ಮ ಮುಂದೆ ಇಡಬಯಸುತ್ತೇನೆ. ದೇಶವಾಸಿಗಳು ಆಲಿಸುತ್ತಾರೆ ಎಂದು ಭಾವಿಸಿ ನಾನು ಬಹಳ ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ಮೊದಲ ಘಟನೆ 1966 ಮಾರ್ಚ್ 5 - ಈ ದಿನ ಕಾಂಗ್ರೆಸ್ ತನ್ನ ವಾಯುಪಡೆಯ ಮೂಲಕ ಮಿಜೋರಾಂನಲ್ಲಿ ಅಸಹಾಯಕ ನಾಗರಿಕರ ಮೇಲೆ ದಾಳಿ ಮಾಡಿತು. ಅಲ್ಲಿ  ಗಂಭೀರ ವಿವಾದವಿತ್ತು. ಅದು ಬೇರೆ ಯಾವುದಾದರೂ ದೇಶದ ವಾಯುಸೇನೆಯೇ ಎಂದು ಕಾಂಗ್ರೆಸ್ ಉತ್ತರಿಸಬೇಕು. ಮಿಜೋರಾಂ ಜನರು ನನ್ನ ದೇಶದ ಪ್ರಜೆಗಳಲ್ಲವೇ? ಅವರ ಭದ್ರತೆ ಭಾರತ ಸರ್ಕಾರದ ಜವಾಬ್ದಾರಿಯೇ ಅಥವಾ ಇಲ್ಲವೇ? 1966 ಮಾರ್ಚ್ 5 - ವಾಯುಪಡೆಯ ದಾಳಿ; ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಲಾಯಿತು.

ಗೌರವಾನ್ವಿತ ಸ್ಪೀಕರ್,

ಈಗಲೂ, ಮಾರ್ಚ್ 5ರಂದು ಇಡೀ ಮಿಜೋರಾಂ ಶೋಕದಲ್ಲಿರುತ್ತದೆ. ಆ ನೋವನ್ನು ಮರೆಯಲು ಮಿಜೋರಾಂಗೆ ಸಾಧ್ಯವಾಗುತ್ತಿಲ್ಲ. ಗಾಯವನ್ನು ಸರಿಪಡಿಸಲು ಅವರು ಎಂದಿಗೂ ಪ್ರಯತ್ನಿಸಲಿಲ್ಲ. ಅದಕ್ಕಾಗಿ ಅವರು ಎಂದಿಗೂ ದುಃಖ ಅನುಭವಿಸಲಿಲ್ಲ. ಕಾಂಗ್ರೆಸ್ ಈ ಸತ್ಯವನ್ನು ದೇಶದಿಂದ ಮರೆಮಾಚಿದೆ ಸ್ನೇಹಿತರೇ. ಈ ಸತ್ಯವನ್ನು ಅವರು ದೇಶದಿಂದ ಮುಚ್ಚಿಟ್ಟಿದ್ದಾರೆ. ನಮ್ಮ ದೇಶದಲ್ಲೇ ನಾಗರಿಕರ ಮೇಲೆ ವಾಯುಪಡೆ ದಾಳಿ ನಡೆಸುವುದು ಸರಿಯೇ? ಆ ಸಮಯದಲ್ಲಿ ಯಾರು ಆಳುತ್ತಿದ್ದರು - ಇಂದಿರಾ ಗಾಂಧಿ. ಅಕಾಲ್ ತಖ್ತ್ ಮೇಲೆ ದಾಳಿ ನಡೆಸಲಾಯಿತು. ಅದು ಇನ್ನೂ ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಮಿಜೋರಾಂನಲ್ಲಿ ಅವರು ಈ ಅಭ್ಯಾಸ  ಬೆಳೆಸಿಕೊಂಡಿದ್ದರು. ಅದಕ್ಕಾಗಿಯೇ ಅವರು ನನ್ನ ಸ್ವಂತ ದೇಶದಲ್ಲಿ ಅಕಾಲ್ ತಖ್ತ್ ಮೇಲೆ ದಾಳಿ ಮಾಡಲು ಹೋದರು. ಆದರೆ ಈಗ ಅವರು ನಮಗೆ ಉಪದೇಶ ಮಾಡುತ್ತಿದ್ದಾರೆ.

ಗೌರವಾನ್ವಿತ ಸ್ಪೀಕರ್,

ಈಶಾನ್ಯ ಭಾಗದ ಜನರ ನಂಬಿಕೆಯನ್ನು ಕೊಂದು ಹಾಕಿದ್ದಾರೆ. ಆ ಗಾಯಗಳು ಒಂದಲ್ಲ ಒಂದು ಸಮಸ್ಯೆಯ ರೂಪದಲ್ಲಿ ಹೊರಹೊಮ್ಮುತ್ತಿವೆ, ಇದು ಅವರ ಸ್ವಂತ ಕಾರ್ಯಗಳಿಂದಾಗಿ.

ಗೌರವಾನ್ವಿತ ಸ್ಪೀಕರ್,

ನಾನು ಇನ್ನೊಂದು ಘಟನೆ ಉಲ್ಲೇಖಿಸಲು ಬಯಸುತ್ತೇನೆ. ಆ ಘಟನೆಯು 1962ರ ಭಯಾನಕ ರೇಡಿಯೊ ಪ್ರಸಾರವಾಗಿದೆ, ಇದು ಈಶಾನ್ಯದ ಜನರನ್ನು ಇನ್ನೂ ಮೊನಚಾದ ಸರಳಿನಂತೆ ಕುಟುಕುತ್ತಿದೆ. ಚೀನಾ ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ, ದೇಶದ ಮೂಲೆ ಮೂಲೆಯ ಜನರು ಭಾರತವು ತಮ್ಮನ್ನು ರಕ್ಷಿಸುತ್ತದೆ ಎಂದು ನಿರೀಕ್ಷಿಸುತ್ತಿದ್ದರು, ಅವರಿಗೆ ಸ್ವಲ್ಪ ಸಹಾಯ ನೀಡಬಹುದು, ಅವರು ತಮ್ಮ ಪ್ರಾಣ ಮತ್ತು ಆಸ್ತಿ ಉಳಿಸುತ್ತಾರೆ, ದೇಶವನ್ನು ಉಳಿಸುತ್ತಾರೆ ಎಂದು ನಿರೀಕ್ಷಿಸುತ್ತಿದ್ದರು. ಜನರು ತಮ್ಮ ಕೈಗಳಿಂದ ಹೋರಾಡಲು ಹೊರಟರು, ಆದರೆ ಪಂಡಿತ್ ನೆಹರೂ ಅವರು ಅಂತಹ ನಿರ್ಣಾಯಕ ಸಮಯದಲ್ಲಿ ದೆಹಲಿಯಿಂದ ಆಳುವ ರೇಡಿಯೊದಲ್ಲಿ ಏನು ಹೇಳಿದರು? ಆ ಸಮಯದಲ್ಲಿ ಅವರೊಬ್ಬರೇ ನಾಯಕರಾಗಿದ್ದರು. ಆದರೆ ಅವರು ಹೇಳಿದರು... "ನನ್ನ ಹೃದಯವು ಅಸ್ಸಾಂನ ಜನರಿಗೆ ಹೋಗುತ್ತದೆ". ಅದಾಗಿತ್ತು ಅವರ ಅಂದಿನ ಸ್ಥಿತಿ. ಆ ಪ್ರಸಾರ ಇಂದಿಗೂ ಅಸ್ಸಾಂ ಜನರನ್ನು ಕುಟುಕುತ್ತಲೇ ಇದೆ. ನೆಹರೂ ಜೀ ಅವರನ್ನು ಅವರ ಹಣೆಬರಹಕ್ಕೆ ಹೇಗೆ ಬಿಟ್ಟರು. ನಾವು ಈಗ ಉತ್ತರಗಳನ್ನು ಬಯಸುತ್ತೇವೆ.

ಗೌರವಾನ್ವಿತ ಸ್ಪೀಕರ್,

ಲೋಹಿಯಾವಾದಿಗಳು ಈಗಾಗಲೇ ಹೊರಟು ಹೋಗಿದ್ದಾರೆ, ಆದರೆ ನಾನು ಅವರಿಗೆ ಏನನ್ನಾದರೂ ಹೇಳಲು ಬಯಸುತ್ತೇನೆ. ತಮ್ಮನ್ನು ಲೋಹಿಯಾ ಜಿ ಅವರ ವಾರಸುದಾರರು ಎಂದು ಕರೆದುಕೊಳ್ಳುವ ಮತ್ತು ನಿನ್ನೆ ಸದನದಲ್ಲಿ ತಮ್ಮ ಮುಷ್ಟಿಯನ್ನು ಗಾಳಿಯಲ್ಲಿ ಎತ್ತಿ ಮಾತನಾಡುವ ಈ ಜನರಿದ್ದಾರೆ. ಲೋಹಿಯಾ ಜಿ ಅವರು ನೆಹರೂ ಜಿ ವಿರುದ್ಧ ಒಮ್ಮೆ ಗಂಭೀರ ಆರೋಪ ಮಾಡಿದ್ದರು. ಇದು ಲೋಹಿಯಾ ಜಿ ಅವರ ಮಾತುಗಳು - ಇದು ಎಷ್ಟು ನಿರ್ಲಕ್ಷ್ಯ ಮತ್ತು ಎಷ್ಟು ಅಪಾಯಕಾರಿ! 30,000 ಚದರ ಮೈಲಿಗಿಂತಲೂ ದೊಡ್ಡ ಪ್ರದೇಶವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಮುಚ್ಚಲಾಗಿದೆ, ಇದು ಯಾವುದೇ ಅಭಿವೃದ್ಧಿಯಿಂದ ವಂಚಿತವಾಗಿದೆ. ಲೋಹಿಯಾ ಜಿ ಅವರು ನೆಹರೂ ಜಿ ಅವರನ್ನು ಆರೋಪಿಸಿದ್ದರು - 'ಈಶಾನ್ಯದ ಬಗ್ಗೆ ನಿಮ್ಮ ಧೋರಣೆ ಏನು? ಈಶಾನ್ಯ ಜನರ ಹೃದಯ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನೀವು ಎಂದಿಗೂ ಪ್ರಯತ್ನಿಸಲಿಲ್ಲ. ನನ್ನ ಸಚಿವಾಲಯದ 400 ಸಚಿವರು ರಾಜ್ಯದ ಕೇಂದ್ರ ಕಚೇರಿಯಲ್ಲಿ ಮಾತ್ರವಲ್ಲ, ಜಿಲ್ಲಾ ಕೇಂದ್ರದಲ್ಲೂ ರಾತ್ರಿಗಳನ್ನು ಕಳೆದಿದ್ದಾರೆ.

ನಾನು 50 ಬಾರಿ ಭೇಟಿ ನೀಡಿದ್ದೇನೆ. ಇದು ಕೇವಲ ಆಕೃತಿಯಲ್ಲ, ಇದು ನಮ್ಮ ಸಮರ್ಪಣೆ. ಇದು ಈಶಾನ್ಯದ ಕಡೆಗೆ ನಮ್ಮ ಸಮರ್ಪಣೆಯಾಗಿದೆ.

ಗೌರವಾನ್ವಿತ ಸ್ಪೀಕರ್,

ಕಾಂಗ್ರೆಸ್‌ನ ಪ್ರತಿಯೊಂದು ಕೆಲಸವೂ ರಾಜಕೀಯ, ಚುನಾವಣೆ ಮತ್ತು ಸರ್ಕಾರದ ಸುತ್ತ ಸುತ್ತುತ್ತದೆ. ಅವರು ಹೆಚ್ಚು ಸ್ಥಾನಗಳನ್ನು ಗೆದ್ದ ಪ್ರದೇಶಗಳು, ಅವರಿಗೆ ತಮ್ಮ ರಾಜಕೀಯ ಆಡಲು ಸುಲಭವಾಗುತ್ತದೆ. ಅವರು ಅಲ್ಲಿ ಏನನ್ನಾದರೂ ಮಾಡಲು ಒತ್ತಾಯಿಸುತ್ತಾರೆ. ಆದರೆ ಈಶಾನ್ಯದಲ್ಲಿ? ದೇಶ ಕೇಳುತ್ತಿದೆ. ಈಶಾನ್ಯದಲ್ಲಿ ಅವರು ಕೆಲವೇ ಸ್ಥಾನಗಳನ್ನು ಹೊಂದಿದ್ದರು, ಆ ಪ್ರದೇಶವು ಅವರಿಗೆ ಸ್ವೀಕಾರಾರ್ಹವಲ್ಲ. ಅವರತ್ತ ಗಮನ ಹರಿಸಲಿಲ್ಲ. ಅವರಿಗೆ ದೇಶದ ನಾಗರಿಕರ ಹಿತಾಸಕ್ತಿಗಳ ಬಗ್ಗೆ ಯಾವುದೇ ಸಹಾನುಭೂತಿ ಇರಲಿಲ್ಲ.

ಗೌರವಾನ್ವಿತ ಸ್ಪೀಕರ್,

ಅದಕ್ಕಾಗಿಯೇ ಅವರು ಕೆಲವೇ ಆಸನಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಮಲತಾಯಿ ಧಓರಣೆಯ ಚಿಕಿತ್ಸೆಯನ್ನು ಪಡೆದರು. ಇದು ಕಾಂಗ್ರೆಸ್‌ನ ಡಿಎನ್‌ಎಯಲ್ಲಿದೆ. ಕಳೆದ ಹಲವು ವರ್ಷಗಳ ಇತಿಹಾಸವನ್ನು ಒಮ್ಮೆ ನೋಡಿ. ಅವರು ಈಶಾನ್ಯದ ಕಡೆಗೆ ಇದೇ ಮನೋಭಾವ ಹೊಂದಿದ್ದರು; ಆದರೆ ಈಗ ನೋಡಿ, ಕಳೆದ 9 ವರ್ಷಗಳಲ್ಲಿ ನನ್ನ ಪ್ರಯತ್ನದಿಂದಾಗಿ, ನಮಗೆ ಈಶಾನ್ಯವು ಅತ್ಯಂತ ಪ್ರೀತಿಯ ಭಾಗವಾಗಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಇಂದು ಮಣಿಪುರದ ಸಮಸ್ಯೆಗಳನ್ನು ಒಂದು ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ, ಈ ಪರಿಸ್ಥಿತಿ ಈಗ ಉದ್ಭವಿಸಿದೆ. ನಿನ್ನೆ ಅಮಿತ್ ಭಾಯ್ ಅವರು ಸಮಸ್ಯೆ ಏನು ಮತ್ತು ಅದು ಹೇಗೆ ಸಂಭವಿಸಿತು ಎಂದು ವಿವರವಾಗಿ ಹೇಳಿದರು. ಆದರೆ ಇಂದು ನಾನು ಈಶಾನ್ಯದಲ್ಲಿ ಈ ಸಮಸ್ಯೆಗಳಿಗೆ ಮೂಲ ಕಾರಣ ಕಾಂಗ್ರೆಸ್ ಎಂದು ಬಹಳ ಗಂಭೀರವಾಗಿ ಹೇಳಲು ಬಯಸುತ್ತೇನೆ. ಇದಕ್ಕೆ ಈಶಾನ್ಯದ ಜನರು ಹೊಣೆಗಾರರಲ್ಲ, ಆದರೆ ಕಾಂಗ್ರೆಸ್‌ನ ರಾಜಕೀಯವೇ ಇದಕ್ಕೆ ಕಾರಣ.

ಗೌರವಾನ್ವಿತ ಸ್ಪೀಕರ್,

ಮಣಿಪುರವು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಮಣಿಪುರವು ಭಕ್ತಿಯ ಶ್ರೀಮಂತ ಪರಂಪರೆ ಹೊಂದಿದೆ. ಮಣಿಪುರವು ಸ್ವಾತಂತ್ರ್ಯ ಹೋರಾಟ ಮತ್ತು ಆಜಾದ್ ಹಿಂದ್ ಫೌಜ್ ಪರಂಪರೆ ಹೊಂದಿದೆ. ಮಣಿಪುರ ಅಸಂಖ್ಯಾತ ತ್ಯಾಗ ಮಾಡಿದೆ. ಇಂತಹ ಭವ್ಯ ನಾಡು ಕಾಂಗ್ರೆಸ್ ಆಡಳಿತದಲ್ಲಿ ಪ್ರತ್ಯೇಕತಾವಾದದ ಬೆಂಕಿಗೆ ಆಹುತಿಯಾಗುತ್ತಿತ್ತು.

ಗೌರವಾನ್ವಿತ ಸ್ಪೀಕರ್,

ಸ್ನೇಹಿತರೇ, ಈಶಾನ್ಯದಿಂದ ಬಂದಿರುವ ನನ್ನ ಸಹೋದರರು ಎಲ್ಲವನ್ನೂ ತಿಳಿದಿದ್ದಾರೆ ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ಮಣಿಪುರದಲ್ಲಿ ಪ್ರತಿ ವ್ಯವಸ್ಥೆಯೂ ಉಗ್ರ ಸಂಘಟನೆಗಳ ಆಶಯದಂತೆ ನಡೆಯುತ್ತಿದ್ದ ಕಾಲವೊಂದಿತ್ತು. ಎಲ್ಲವೂ ಅವರವರ ಇಚ್ಛೆಯಂತೆಯೇ ನಡೆದಿದ್ದು, ಆ ಸಮಯದಲ್ಲಿ ಮಣಿಪುರದಲ್ಲಿ ಯಾವ ಸರಕಾರವಿತ್ತು? ಕಾಂಗ್ರೆಸ್! ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮಾ ಗಾಂಧಿ ಅವರ ಫೋಟೊ ಹಾಕದಿದ್ದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು? ಅದು ಕಾಂಗ್ರೆಸ್. ಮೊರಾಂಗ್‌ನ ಆಜಾದ್ ಹಿಂದ್ ಫೌಜ್ ಮ್ಯೂಸಿಯಂನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯ ಮೇಲೆ ಬಾಂಬ್ ಎಸೆದಾಗ ಮಣಿಪುರದಲ್ಲಿ ಯಾವ ಸರ್ಕಾರವಿತ್ತು? ಅದು ಕಾಂಗ್ರೆಸ್. ಆಗ ಮಣಿಪುರದಲ್ಲಿ ಯಾವ ಸರ್ಕಾರ ಇತ್ತು? ಅದು ಕಾಂಗ್ರೆಸ್.

ಗೌರವಾನ್ವಿತ ಸ್ಪೀಕರ್,

ಮಣಿಪುರದ ಶಾಲೆಗಳಲ್ಲಿ ರಾಷ್ಟ್ರಗೀತೆ ನುಡಿಸಲು ಬಿಡುವುದಿಲ್ಲ ಎಂದು ನಿರ್ಧರಿಸಿದಾಗ ಮಣಿಪುರದಲ್ಲಿ ಯಾವ ಸರ್ಕಾರ ಇತ್ತು? ಅದು ಕಾಂಗ್ರೆಸ್. ಗ್ರಂಥಾಲಯಗಳಲ್ಲಿರುವ ಎಲ್ಲಾ ಪುಸ್ತಕಗಳನ್ನು, ಎಲ್ಲಾ ಅಮೂಲ್ಯ ಜ್ಞಾನ ಮತ್ತು ಪರಂಪರೆಯನ್ನು ಸುಡುವ ಅಭಿಯಾನ ಪ್ರಾರಂಭಿಸಲಾಯಿತು, ಆ ಅಭಿಯಾನ ಸಮಯದಲ್ಲಿ ಯಾವ ಸರ್ಕಾರ ಇತ್ತು? ಕಾಂಗ್ರೆಸ್. ಮಣಿಪುರದ ದೇವಸ್ಥಾನದ ಗಂಟೆಗಳು ಸಂಜೆ 4 ಗಂಟೆಗೆ ನಿಂತಾಗ, ಎಲ್ಲವನ್ನೂ ಲಾಕ್‌ಡೌನ್‌ಗೆ ಒಳಪಡಿಸಲಾಯಿತು. ಎಲ್ಲವನ್ನೂ ಸೈನ್ಯದಿಂದ ಕಾಪಾಡಬೇಕಾಗಿರುವುದರಿಂದ ಪೂಜೆ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಆಗ ಮಣಿಪುರದಲ್ಲಿ ಯಾವ ಸರಕಾರವಿತ್ತು? ಕಾಂಗ್ರೆಸ್.

ಗೌರವಾನ್ವಿತ ಸ್ಪೀಕರ್,

ಇಂಫಾಲ್‌ನ ಇಸ್ಕಾನ್ ದೇವಾಲಯಕ್ಕೆ ಬಾಂಬ್ ಎಸೆದು ಭಕ್ತರನ್ನು ಕೊಂದಾಗ ಮಣಿಪುರದಲ್ಲಿ ಯಾವ ಸರ್ಕಾರ ಇತ್ತು? ಕಾಂಗ್ರೆಸ್. ಐಎಎಸ್, ಐಪಿಎಸ್ ಅಧಿಕಾರಿಗಳು ಅಲ್ಲಿ ಕೆಲಸ ಮಾಡಬೇಕಾದರೆ ತಮ್ಮ ಸಂಬಳದ ಒಂದು ಭಾಗವನ್ನು ಈ ಉಗ್ರರಿಗೆ ನೀಡಬೇಕಿತ್ತು. ಆಗ ಮಾತ್ರ ಅಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ. ಆಗಲೂ ಯಾವ ಸರ್ಕಾರ ಇತ್ತು? ಕಾಂಗ್ರೆಸ್.

ಗೌರವಾನ್ವಿತ ಸ್ಪೀಕರ್,

ಅವರ ನೋವು ಆಯ್ಕೆಯಾಗಿದೆ, ಅವರ ಸೂಕ್ಷ್ಮತೆಯು ಆಯ್ಕೆಯಾಗಿದೆ. ಅವರ ವ್ಯಾಪ್ತಿಯು ರಾಜಕೀಯದಿಂದ ಪ್ರಾರಂಭವಾಗಿ ರಾಜಕೀಯದಿಂದ ಮುಂದುವರಿಯುತ್ತದೆ. ಅವರು ಮಾನವೀಯತೆಗಾಗಿ ಯೋಚಿಸಲಾರರು, ದೇಶಕ್ಕಾಗಿ ಯೋಚಿಸಲಾರರು. ಅವರು ದೇಶದ ಸಮಸ್ಯೆಗಳ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಅವರಿಗೆ ರಾಜಕೀಯ ಬಿಟ್ಟು ಬೇರೇನೂ ಅರ್ಥವಾಗುತ್ತಿಲ್ಲ.

ಗೌರವಾನ್ವಿತ ಸ್ಪೀಕರ್,

ಈಗ ಮತ್ತು ಕಳೆದ 6 ವರ್ಷಗಳಿಂದ ಮಣಿಪುರದಲ್ಲಿರುವ ಸರ್ಕಾರವು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮರ್ಪಣಾ ಮನೋಭಾವದಿಂದ ನಿರಂತರವಾಗಿ ಪ್ರಯತ್ನಿಸುತ್ತಿದೆ. ಬಂದ್ ಮತ್ತು ನಿರ್ಬಂಧಗಳ ಕಾಲವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮಣಿಪುರದಲ್ಲಿ ಬಂದ್‌ಗಳು, ದಿಗ್ಬಂಧನಗಳು ನಡೆಯುತ್ತಿದ್ದವು. ಇಂದು ಅದು ಹಿಂದಿನ ವಿಷಯವಾಗಿ ಮಾರ್ಪಟ್ಟಿದೆ. ಶಾಂತಿ ಸ್ಥಾಪನೆಗಾಗಿ ಎಲ್ಲರನ್ನೂ ಜೊತೆಗೆ ಕರೆದೊಯ್ಯಲು ವಿಶ್ವಾಸ ಮೂಡಿಸಲು ನಿರಂತರವಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಇದು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ. ನಾವು ರಾಜಕೀಯವನ್ನು ಎಷ್ಟು ದೂರವಿಟ್ಟಿದ್ದೇವೆಯೋ, ಅಷ್ಟೇ ವೇಗವಾಗಿ ಶಾಂತಿ ಸ್ಥಾಪನೆಯಾಗುತ್ತಿದೆ. ಇದನ್ನೇ ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ.

ಗೌರವಾನ್ವಿತ ಸ್ಪೀಕರ್,

ಈಶಾನ್ಯ ಇಂದು ನಮಗೆ ದೂರವಾಗಿ ಕಾಣಿಸಬಹುದು, ಆದರೆ ಆಗ್ನೇಯ ಏಷ್ಯಾ ಅಭಿವೃದ್ಧಿ ಹೊಂದುತ್ತಿರುವ ರೀತಿ, ಆಸಿಯಾನ್ ದೇಶಗಳ ಪ್ರಾಮುಖ್ಯತೆ ಹೆಚ್ಚುತ್ತಿರುವ ರೀತಿ, ನಮ್ಮ ಈಶಾನ್ಯ ಕೇಂದ್ರ ಬಿಂದುವಾಗುವ ದಿನ ದೂರವಿಲ್ಲ, ಇದು ನಮ್ಮ ಪೂರ್ವದ ಪ್ರಗತಿಯೊಂದಿಗೆ ಜಾಗತಿಕ ದೃಷ್ಟಿಕೋನದಿಂದ. ನಾವು ಇದನ್ನು ಸ್ಪಷ್ಟವಾಗಿ ನೋಡಬಹುದು. ಅದಕ್ಕಾಗಿಯೇ ಇಂದು ನಾನು ಈಶಾನ್ಯ ಭಾಗದ ಪ್ರಗತಿಗಾಗಿ ನನ್ನ ಶಕ್ತಿಪೂರ್ತಿ ಶ್ರಮಿಸುತ್ತಿದ್ದೇನೆ, ಮತಕ್ಕಾಗಿ ಅಲ್ಲ. ವಿಶ್ವದ ಹೊಸ ರಚನೆಯು ಆಗ್ನೇಯ ಏಷ್ಯಾ ಮತ್ತು ಆಸಿಯಾನ್ ದೇಶಗಳಿಗೆ ಹೇಗೆ ಪ್ರಭಾವ ಉಂಟುಮಾಡುತ್ತದೆ ಮತ್ತು ಈಶಾನ್ಯದ ಪ್ರಾಮುಖ್ಯತೆಯು ಹೇಗೆ ಹೆಚ್ಚಾಗುತ್ತದೆ, ಈಶಾನ್ಯದ ವೈಭವವನ್ನು ಹೇಗೆ ಹೆಚ್ಚಿಸಲಿದೆ ಎಂಬುದರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಇದು ಸಂಭವಿಸುವುದನ್ನು ನಾನು ನೋಡಬಹುದು, ಅದಕ್ಕಾಗಿಯೇ ನಾನು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.

ಗೌರವಾನ್ವಿತ ಸ್ಪೀಕರ್,

ಅದಕ್ಕಾಗಿಯೇ ನಮ್ಮ ಸರ್ಕಾರವು ಈಶಾನ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕಳೆದ 9 ವರ್ಷಗಳಲ್ಲಿ ನಾವು ಈಶಾನ್ಯ ಭಾಗದ ಮೂಲಸೌಕರ್ಯಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಇಂದು ಆಧುನಿಕ ಹೆದ್ದಾರಿಗಳು, ಆಧುನಿಕ ರೈಲ್ವೆಗಳು, ಆಧುನಿಕ ಹೊಸ ವಿಮಾನ ನಿಲ್ದಾಣಗಳು ಈಶಾನ್ಯದ ಗುರುತಾಗುತ್ತಿವೆ. ಇಂದು ಮೊದಲ ಬಾರಿಗೆ ಅಗರ್ತಲಾ ರೈಲ್ವೆಯೊಂದಿಗೆ ಸಂಪರ್ಕ ಹೊಂದಿದೆ. ಗೂಡ್ಸ್ ರೈಲು ಮೊದಲ ಬಾರಿಗೆ ಮಣಿಪುರ ತಲುಪಿದೆ. ಮೊದಲ ಬಾರಿಗೆ, ವಂದೇ ಭಾರತ್‌ನಂತಹ ಆಧುನಿಕ ರೈಲುಗಳು ಈಶಾನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದೇ ಮೊದಲ ಬಾರಿಗೆ ಅರುಣಾಚಲ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಮೊದಲ ಬಾರಿಗೆ ಸಿಕ್ಕಿಂ ಮತ್ತು ಅರುಣಾಚಲದಂತಹ ರಾಜ್ಯಗಳು ವಿಮಾನ ಸಂಪರ್ಕ ಹೊಂದಿವೆ. ಮೊದಲ ಬಾರಿಗೆ, ಈಶಾನ್ಯವು ಜಲಮಾರ್ಗಗಳ ಮೂಲಕ ಅಂತರರಾಷ್ಟ್ರೀಯ ವ್ಯಾಪಾರದ ಹೆಬ್ಬಾಗಿಲು ಆಯಿತು. ಮೊದಲ ಬಾರಿಗೆ ಈಶಾನ್ಯದಲ್ಲಿ ಏಮ್ಸ್‌ನಂತಹ ವೈದ್ಯಕೀಯ ಸಂಸ್ಥೆಯನ್ನು ತೆರೆಯಲಾಗಿದೆ. ಮೊದಲ ಬಾರಿಗೆ ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ಮಣಿಪುರದಲ್ಲಿ ಆರಂಭವಾಗಿದೆ. ಮೊದಲ ಬಾರಿಗೆ, ಮಿಜೋರಾಂನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‌ನಂತಹ ಸಂಸ್ಥೆಗಳು ತೆರೆಯುತ್ತಿವೆ. ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಈಶಾನ್ಯ ಭಾಗಗಳ ಭಾಗವಹಿಸುವಿಕೆ ಬಹುಪಟ್ಟು ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ನ ಮಹಿಳಾ ಸಂಸದರೊಬ್ಬರು ರಾಜ್ಯಸಭೆಗೆ ಬಂದಿದ್ದಾರೆ. ಇದೇ ಮೊದಲ ಬಾರಿಗೆ ಈಶಾನ್ಯ ಭಾಗದ ಜನರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಮೊದಲ ಬಾರಿಗೆ, ಈಶಾನ್ಯದಿಂದ ಲಚಿತ್ ಬೋರ್ಫುಕನ್ ಅವರಂತಹ ನಾಯಕನ ಟ್ಯಾಬ್ಲೋವನ್ನು ಗಣರಾಜ್ಯೋತ್ಸವದಲ್ಲಿ ಸೇರಿಸಲಾಗಿದೆ. ಮಣಿಪುರದಲ್ಲಿ ಮೊದಲ ಬಾರಿಗೆ, ಈಶಾನ್ಯದ ರಾಣಿ ಗೈಡಿನ್ಲಿಯು ಹೆಸರಿನ ಮೊದಲ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ ಸ್ಥಾಪಿಸಲಾಗಿದೆ.

ಗೌರವಾನ್ವಿತ ಸ್ಪೀಕರ್,

ನಾವು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂದು ಹೇಳಿದಾಗ ಅದು ನಮಗೆ ಸ್ಲೋಗನ್ ಅಲ್ಲ ಮತ್ತು ಇವು ಕೇವಲ ಪದಗಳಲ್ಲ. ಇದು ನಮಗೆ ನಂಬಿಕೆಯ ಲೇಖನವಾಗಿದೆ. ನಮ್ಮ ಬಗ್ಗೆ ಬದ್ಧತೆ ಇದೆ ಮತ್ತು ನಾವು ದೇಶಕ್ಕಾಗಿ ಸಮರ್ಪಿತ ಜನರಾಗಿದ್ದೇವೆ. ಒಂದು ದಿನ ಇಂತಹ ಸ್ಥಳದಲ್ಲಿರಲು ನಮಗೆ ಅವಕಾಶ ಸಿಗುತ್ತದೆ ಎಂದು ನಾವು ಎಂದಿಗೂ ಯೋಚಿಸಿರಲಿಲ್ಲ. ಆದರೆ ನಾಡಿನ ಜನತೆಯ ಕೃಪೆಯಿಂದ ನಮಗೆ ಅವಕಾಶ ಸಿಕ್ಕಿದೆ. ಹಾಗಾಗಿ ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ -

ನಮ್ಮ ಅಸ್ತಿತ್ವದ ಪ್ರತಿಯೊಂದು ಅಣು ಮತ್ತು ನಮ್ಮ ಸಮಯದ ಪ್ರತಿ ಕ್ಷಣವೂ ದೇಶವಾಸಿಗಳಿಗೆ ಮಾತ್ರ!

ಗೌರವಾನ್ವಿತ ಸ್ಪೀಕರ್,

ಇಂದು ನಾನು ನನ್ನ ವಿರೋಧಿ ಸಹೋದ್ಯೋಗಿಗಳನ್ನು ಒಂದು ವಿಷಯಕ್ಕಾಗಿ ಹೊಗಳಲು ಬಯಸುತ್ತೇನೆ. ಮನೆಯ ನಾಯಕನನ್ನು ನಾಯಕನನ್ನಾಗಿ ಸ್ವೀಕರಿಸಲು ಅವರು ಸಿದ್ಧರಿಲ್ಲದಿದ್ದರೂ, ಅವರು ನನ್ನ ಯಾವುದೇ ಭಾಷಣ ಮಾಡಲು ಬಿಡಲಿಲ್ಲ. ಆದರೆ ನನಗೆ ತಾಳ್ಮೆ, ತ್ರಾಣವಿದೆ ಮತ್ತು ನಾನು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳಬಲ್ಲೆ ಮತ್ತು ಅವರು ಸುಸ್ತಾಗುತ್ತಾರೆ. ಆದರೆ ನಾನು ಒಂದು ವಿಷಯ ಮೆಚ್ಚುತ್ತೇನೆ. 2023ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವಂತೆ 2018ರಲ್ಲಿ ಸಭಾನಾಯಕನಾಗಿ ಅವರಿಗೆ ಟಾಸ್ಕ್ ನೀಡಿದ್ದೆ, ಅವರು ನನ್ನ ಮಾತಿಗೆ ಮಣಿದಿದ್ದರು. ಆದರೆ ದುಃಖಕರವೆಂದರೆ ಅವರು ಚಲನೆ ಉಂಟು ಮಾಡುವ ಉತ್ತಮ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅವರು 2018 ಮತ್ತು 2023ರ ನಡುವೆ 5 ವರ್ಷಗಳನ್ನು ಪಡೆದರು, ಆದರೆ ಯಾವುದೇ ಸಿದ್ಧತೆ ಇರಲಿಲ್ಲ. ಯಾವುದೇ ಹೊಸತನ ಇರಲಿಲ್ಲ, ಯಾವುದೇ ಸೃಜನಶೀಲತೆ ಇರಲಿಲ್ಲ. ಅವರು ಸಮಸ್ಯೆಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅವರು ದೇಶವನ್ನು ಅಪಾರವಾಗಿ ನಿರಾಶೆಗೊಳಿಸಿದ್ದಾರೆ. ಸಭಾಧ್ಯಕ್ಷರೇ, ಚೆನ್ನಾಗಿದೆ. 2028ರಲ್ಲಿ ನಾವು ಅವರಿಗೆ ಮತ್ತೊಂದು ಅವಕಾಶ ನೀಡುತ್ತೇವೆ. ಆದರೆ ಈ ಬಾರಿ 2028ರಲ್ಲಿ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮುಂಚಿತವಾಗಿ ಸ್ವಲ್ಪ ತಯಾರಿಯೊಂದಿಗೆ ತರಲು ನಾನು ಅವರನ್ನು ಒತ್ತಾಯಿಸುತ್ತೇನೆ. ಮೊದಲು ಕೆಲವು ಸಮಸ್ಯೆಗಳನ್ನು ಕಂಡುಹಿಡಿಯಿರಿ. ನಿಷ್ಪ್ರಯೋಜಕ ಮತ್ತು ಕ್ಷುಲ್ಲಕ ಅಜೆಂಡಾಗಳನ್ನು ಏಕೆ ತರುತ್ತೀರಿ? ನೀವು ಕನಿಷ್ಠ ಪಕ್ಷ ವಿರೋಧ ಪಕ್ಷದಲ್ಲಿರಲು ಸಮರ್ಥರಿದ್ದೀರಿ ಎಂಬ ವಿಶ್ವಾಸ ದೇಶದ ಜನತೆಗೆ ಮೂಡಬೇಕು. ಆ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದೀರಿ. ನೀವು ಸ್ವಲ್ಪ ಹೋಮ್ ವರ್ಕ್ ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ವಾದಗಳನ್ನು, ಕೂಗು ಮತ್ತು ಘೋಷಣೆಗಳನ್ನು ಕೈಗೊಳ್ಳಲು ನೀವು ಸಾಕಷ್ಟು ಜನರನ್ನು ಬಳಸುತ್ತೀರಿ, ಆದರೆ ಸ್ವಲ್ಪ ಮನಸ್ಸನ್ನು ಬಳಸಿ.

ಗೌರವಾನ್ವಿತ ಸ್ಪೀಕರ್,

ರಾಜಕೀಯಕ್ಕೆ ತನ್ನದೇ ಆದ ಸ್ಥಾನವಿದೆ. ಸಂಸತ್ತು ಅದಕ್ಕೆ ವೇದಿಕೆಯಲ್ಲ. ಸಂಸತ್ತು ದೇಶದ ಅತ್ಯುನ್ನತ ಗೌರವಾನ್ವಿತ ಸಂಸ್ಥೆಯಾಗಿದೆ. ಅದಕ್ಕಾಗಿಯೇ ಸಂಸದರು ಕೂಡ ಇದರ ಬಗ್ಗೆ ಗಂಭೀರವಾಗಿರಬೇಕು. ದೇಶವು ಅನೇಕ ಸಂಪನ್ಮೂಲಗಳನ್ನು ಹೂಡಿಕೆ ಮಾಡುತ್ತಿದೆ. ದೇಶದ ಬಡವರಿಗೆ ನ್ಯಾಯಯುತವಾಗಿ ಸೇರಿರುವ ಸಂಪನ್ಮೂಲಗಳನ್ನು ಇಲ್ಲಿ ಬಳಸಲಾಗುತ್ತದೆ. ಇಲ್ಲಿರುವ ಪ್ರತಿ ಕ್ಷಣವನ್ನು ದೇಶಕ್ಕಾಗಿ ಬಳಸಬೇಕು. ಆದರೆ ವಿರೋಧ ಪಕ್ಷದಲ್ಲಿ ಈ ಗಂಭೀರತೆ ಕಾಣುತ್ತಿಲ್ಲ. ಆದುದರಿಂದಲೇ ಸಭಾಧ್ಯಕ್ಷರೇ, ಈ ರಾಜಕೀಯ ಹೀಗೆ ಮುಂದುವರೆಯಲು ಸಾಧ್ಯವಿಲ್ಲ. ಅವರಿಗೆ ಸ್ವಲ್ಪ ಬಿಡುವಿನ ಸಮಯವಿದೆ, ಆದ್ದರಿಂದ ಅವರು ಸಂಸತ್ತಿಗೆ ಬರುತ್ತಾರೆ. ಸಂಸತ್ತಿನ ಕೆಲಸ ಹೀಗೇನಾ? ಇದು ಸರಿಯಲ್ಲ.

ಗೌರವಾನ್ವಿತ ಸ್ಪೀಕರ್,

ಬಿಡುವಿನ ವೇಳೆಯಲ್ಲಿ ಸಂಸತ್ತಿಗೆ ಹೋಗಿ ಬರೋಣ. ಈ ಮನೋಭಾವದಿಂದ ರಾಜಕೀಯ ನಡೆಸಬಹುದು, ಆದರೆ ದೇಶವನ್ನು ನಡೆಸಲಾಗುವುದಿಲ್ಲ. ಇಲ್ಲಿ ನಮಗೆ ದೇಶವನ್ನು ನಡೆಸುವ ಕೆಲಸ ನೀಡಲಾಗಿದೆ. ಅವರು ಜವಾಬ್ದಾರಿಯನ್ನು ಪೂರೈಸದಿದ್ದರೆ, ಅವರು ತಮ್ಮ ಮತದಾರರಿಗೆ ದ್ರೋಹ ಮಾಡಿದಂತಾಗುತ್ತದೆ.

ಗೌರವಾನ್ವಿತ ಸ್ಪೀಕರ್,

ನನಗೆ ಈ ದೇಶದ ಜನರಲ್ಲಿ ಅಚಲವಾದ, ಅಪಾರವಾದ ನಂಬಿಕೆ ಇದೆ. ನಾನು ವಿಶ್ವಾಸದಿಂದ ಹೇಳುತ್ತೇನೆ. ನಮ್ಮ ದೇಶದ ಜನರು ಒಂದು ರೀತಿಯಲ್ಲಿ ಅಪಾರ ವಿಶ್ವಾಸ ಮತ್ತು ನಂಬಿಕೆ ಹೊಂದಿದ್ದಾರೆ. ಸಾವಿರ ವರ್ಷಗಳ ಗುಲಾಮಗಿರಿಯ ಅವಧಿಯಲ್ಲಿಯೂ ಅವರು ತಮ್ಮ ಆಂತರಿಕ ನಂಬಿಕೆಯನ್ನು ಅಲುಗಾಡಿಸಲು ಬಿಡಲಿಲ್ಲ. ಅದೊಂದು ಅಖಂಡ ನಂಬಿಕೆಯ ಸಮಾಜ, ಅಖಂಡ ಪ್ರಜ್ಞೆಯಿಂದ ಕೂಡಿದ ಸಮಾಜ. ಸಂಕಲ್ಪಗಳನ್ನು ಈಡೇರಿಸಲು ಸಮರ್ಪಣೆ’ ಎಂಬ ಸಂಪ್ರದಾಯವನ್ನು ಅನುಸರಿಸುವ ಸಮಾಜವಿದು. ವಯಮ್ರಾಷ್ಟ್ರ ಭೂತ ಎಂಬ ಮಂತ್ರ ಅನುಸರಿಸಿ, ಅದೇ ಸೂಕ್ಷ್ಮತೆಯಿಂದ ದೇಶಕ್ಕಾಗಿ ದುಡಿಯುವ ಸಮಾಜ ಇದಾಗಿದೆ.

ಆದ್ದರಿಂದ ಗೌರವಾನ್ವಿತ ಸ್ಪೀಕರ್,

ಗುಲಾಮಗಿರಿಯ ಕಾಲದಲ್ಲಿ ನಮ್ಮ ಮೇಲೆ ಸಾಕಷ್ಟು ದಾಳಿಗಳು ನಡೆದವು ನಿಜ, ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ನಮ್ಮ ನಾಡಿನ ವೀರರು, ನಮ್ಮ ನಾಡಿನ ಮಹಾಪುರುಷರು, ನಮ್ಮ ದೇಶದ ಚಿಂತಕರು, ನಮ್ಮ ಸಾಮಾನ್ಯ ನಾಗರಿಕರು ಆ ವಿಶ್ವಾಸದ ಜ್ಯೋತಿಯನ್ನು ಎಂದಿಗೂ ನಂದಿಸಲಿಲ್ಲ. ಆ ಜ್ವಾಲೆಯು ಎಂದಿಗೂ ಆರಲಿಲ್ಲ. ನಾವು ಬೆಳಕಿನ ಕಿರಣದ ನೆರಳಿನಲ್ಲಿ ಆ ಸಂತೋಷ ಅನುಭವಿಸುತ್ತಿದ್ದೇವೆ.

ಗೌರವಾನ್ವಿತ ಸ್ಪೀಕರ್,

ಕಳೆದ 9 ವರ್ಷಗಳಲ್ಲಿ, ದೇಶದ ಶ್ರೀಸಾಮಾನ್ಯನ ಆತ್ಮವಿಶ್ವಾಸವು ಹೊಸ ಎತ್ತ ಮುಟ್ಟುತ್ತಿದೆ, ಹೊಸ ಆಕಾಂಕ್ಷೆಗಳನ್ನು ಮುಟ್ಟುತ್ತಿದೆ. ನನ್ನ ದೇಶದ ಯುವಕರು ಜಗತ್ತಿನೊಂದಿಗೆ ಸ್ಪರ್ಧಿಸುವ ಕನಸು ಕಾಣತೊಡಗಿದ್ದಾರೆ. ಇದಕ್ಕಿಂತ ಹೆಚ್ಚಿನ ಅದೃಷ್ಟ ಏನು? ಪ್ರತಿಯೊಬ್ಬ ಭಾರತೀಯನಲ್ಲೂ ಆತ್ಮವಿಶ್ವಾಸ ತುಂಬಿದೆ.

ಗೌರವಾನ್ವಿತ ಸ್ಪೀಕರ್,

ಇಂದಿನ ಭಾರತವು ಒತ್ತಡಕ್ಕೆ ಒಳಗಾಗುವುದಿಲ್ಲ, ಒತ್ತಡವನ್ನು ಸ್ವೀಕರಿಸುವುದಿಲ್ಲ. ಇಂದಿನ ಭಾರತ ಯಾರ ಮುಂದೆಯೂ ಬಾಗುವುದಿಲ್ಲ, ಇಂದಿನ ಭಾರತ ದಣಿದಿಲ್ಲ; ಇಂದಿನ ಭಾರತ ನಿಲ್ಲುವುದಿಲ್ಲ. ಇದು ಶ್ರೀಮಂತ ಪರಂಪರೆ ಮತ್ತು ಸಂಕಲ್ಪಗಳನ್ನು ವಿಶ್ವಾಸದಿಂದ ಸ್ವೀಕರಿಸುತ್ತದೆ. ಇದೇ ಕಾರಣಕ್ಕಾಗಿ, ದೇಶದ ಸಾಮಾನ್ಯ ಜನರು ದೇಶವನ್ನು ನಂಬಲು ಪ್ರಾರಂಭಿಸಿದಾಗ, ಅದು ಭಾರತವನ್ನು ನಂಬಲು ಜಗತ್ತನ್ನು ಪ್ರೇರೇಪಿಸುತ್ತದೆ. ಇಂದು ಜಗತ್ತೇ ಭಾರತದ ಮೇಲೆ ನಂಬಿಕೆ ಇಟ್ಟಿರುವುದರಿಂದ ಭಾರತದ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಿರುವುದು ಒಂದು ಕಾರಣ. ಇದೇ ನಿಜವಾದ ಶಕ್ತಿ, ದಯವಿಟ್ಟು ಈ ನಂಬಿಕೆಯನ್ನು ಮುರಿಯಲು ಪ್ರಯತ್ನಿಸಬೇಡಿ. ದೇಶವನ್ನು ಮುನ್ನಡೆಸಲು ಇದೊಂದು ಅವಕಾಶ. ನಿಮಗೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ದಯವಿಟ್ಟು ಮೌನವಾಗಿರಿ. ಸ್ವಲ್ಪ ಸಮಯ ಕಾಯಿರಿ. ಆದರೆ ದ್ರೋಹ ಮಾಡುವ ಮೂಲಕ ದೇಶದ ನಂಬಿಕೆ ಮುರಿಯಲು ಪ್ರಯತ್ನಿಸಬೇಡಿ.

ಗೌರವಾನ್ವಿತ ಸ್ಪೀಕರ್,

ಕಳೆದ ವರ್ಷಗಳಲ್ಲಿ, ನಾವು ಅಭಿವೃದ್ಧಿ ಹೊಂದಿದ ಭಾರತದ ಬಲವಾದ ಅಡಿಪಾಯ  ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ದೇಶವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ 2047ರ ಕನಸು ಕಂಡಿದ್ದೇವೆ. ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡ ತಕ್ಷಣ ‘ಅಮೃತ ಕಾಲ’ ಪ್ರಾರಂಭವಾಯಿತು. ನಾವು ‘ಅಮೃತಕಾಲ’ದ ಆರಂಭಿಕ ವರ್ಷಗಳಲ್ಲಿ ಇದ್ದೇವೆ. ಹಾಗಾಗಿ ಇಂದು ಶಕ್ತಿಯುತವಾಗಿ ಮುನ್ನಡೆಯುತ್ತಿರುವ ಪ್ರತಿಷ್ಠಾನದ ಶಕ್ತಿಯೇ 2047ರಲ್ಲಿ ಭಾರತ ಅಭಿವೃದ್ಧಿ ಹೊಂದಲಿದೆ ಎಂದು ನಾನು ಈ ವಿಶ್ವಾಸದಿಂದ ಹೇಳುತ್ತೇನೆ. ದೇಶವಾಸಿಗಳ ಪರಿಶ್ರಮದಿಂದ, ದೇಶವಾಸಿಗಳ ವಿಶ್ವಾಸದಿಂದ, ದೇಶವಾಸಿಗಳ ದೃಢಸಂಕಲ್ಪದಿಂದ, ದೇಶವಾಸಿಗಳ ಸಾಮೂಹಿಕ ಶಕ್ತಿಯಿಂದ ಮತ್ತು ದೇಶವಾಸಿಗಳ ಅಖಂಡ ಪ್ರಯತ್ನದಿಂದ ಇದು ಸಾಧ್ಯವಾಗುತ್ತದೆ. ಇದನ್ನೇ ನಾನು ನಂಬುತ್ತೇನೆ.

ಗೌರವಾನ್ವಿತ ಸ್ಪೀಕರ್,

ಪ್ರಾಯಶಃ ಇಲ್ಲಿ ಹೇಳಿದ ಮಾತುಗಳು ದಾಖಲೆಯಾಗುತ್ತವೆ, ಆದರೆ ಸಮೃದ್ಧ ಭಾರತದ ಕನಸನ್ನು ನನಸಾಗಿಸಲು ಭದ್ರ ಬುನಾದಿಯಾಗಿರುವ ನಮ್ಮ ಕಾರ್ಯಗಳಿಗೆ, ಇತಿಹಾಸ ಸಾಕ್ಷಿಯಾಗಲಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ಈ ನಂಬಿಕೆಯಿಂದ ಇಂದು ನಾನು ಸದನದ ಮುಂದೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ಮತ್ತು ಸಾಕಷ್ಟು ಸ್ವಯಂ ನಿಯಂತ್ರಣದಿಂದ ಬಂದಿದ್ದೇನೆ, ಅವರ ಪ್ರತಿಯೊಂದು ನಿಂದನೆಗಳಿಗೆ ನಗುತ್ತಾ, ನನ್ನ ಮನಸ್ಸನ್ನು ತಂಪಾಗಿಟ್ಟುಕೊಂಡು, ನಾನು 140 ಕೋಟಿ ದೇಶವಾಸಿಗಳಿಗೆ ಪ್ರೋತ್ಸಾಹ ನೀಡಿದ್ದೇನೆ. ಅವರ ಕನಸುಗಳನ್ನು ನನಸು ಮಾಡಿ, ಸಂಕಲ್ಪಗಳನ್ನು ನನ್ನ ಕಣ್ಣ ಮುಂದೆ ಇಟ್ಟುಕೊಳ್ಳುತ್ತಾರೆ. ಇದು ನನ್ನ ಮನಸ್ಸಿನಲ್ಲಿರುವುದು. ನಾನು ಸದನದಲ್ಲಿರುವ ಸ್ನೇಹಿತರನ್ನು ಆ ಅದ್ಭುತ ಕ್ಷಣವನ್ನು ಗುರುತಿಸಲು ಮತ್ತು ಒಟ್ಟಿಗೆ ನಡೆಯಲು ಒತ್ತಾಯಿಸುತ್ತೇನೆ. ಮಣಿಪುರವು ಈ ದೇಶದಲ್ಲಿ ಮೊದಲು ಗಂಭೀರ ಸಮಸ್ಯೆಗಳನ್ನು ಎದುರಿಸಿದೆ, ಆದರೆ ನಾವು ಒಟ್ಟಾಗಿ ಪರಿಹಾರಗಳನ್ನು ಕಂಡುಕೊಂಡಿದ್ದೇವೆ. ಆದ್ದರಿಂದ ಒಗ್ಗಟ್ಟಾಗಿ ನಡೆಯೋಣ, ಮಣಿಪುರದ ಜನತೆಗೆ ಆತ್ಮವಿಶ್ವಾಸ ತುಂಬುವ ಮೂಲಕ ಮುನ್ನಡೆಯೋಣ. ಕನಿಷ್ಠ ರಾಜಕೀಯ ಮಾಡುವ ಮೂಲಕ ಮಣಿಪುರದ ಪಾತ್ರವನ್ನು ಹಾಳು ಮಾಡಬೇಡಿ. ಅಲ್ಲಿ ಏನೇ ನಡೆದರೂ ದುರದೃಷ್ಟಕರ. ಆದರೆ ಆ ನೋವನ್ನು ಅರ್ಥ ಮಾಡಿಕೊಂಡು ಆ ನೋವಿಗೆ ಔಷಧಿಯಾಗಿ ವರ್ತಿಸುವುದೇ ನಮ್ಮ ಪರಿಹಾರವಾಗಬೇಕು.

ಗೌರವಾನ್ವಿತ ಸ್ಪೀಕರ್,

ಈ ಭಾಗದಲ್ಲಿ ಸಾಕಷ್ಟು ಉತ್ಕೃಷ್ಟ ಚರ್ಚೆ ನಡೆದಿದೆ. ಒಂದೂವರೆ ಗಂಟೆಗಳ ಕಾಲ ಸರ್ಕಾರದ ಕಾರ್ಯವೈಖರಿಯನ್ನು ಒಂದೊಂದಾಗಿ ವಿವರವಾಗಿ ತಿಳಿಸುವ ಅವಕಾಶ ಸಿಕ್ಕಿದೆ. ನಮ್ಮ ವಿರುದ್ಧ ಈ ನಿರ್ಣಯ ತರದೇ ಇದ್ದಿದ್ದರೆ, ಬಹುಶಃ ಇಷ್ಟು ವಿವರವಾಗಿ ಹೇಳಲು ನಮಗೆ ಅವಕಾಶ ಸಿಗುತ್ತಿರಲಿಲ್ಲ. ಹಾಗಾಗಿ ಮತ್ತೊಮ್ಮೆ ಈ ಪ್ರಸ್ತಾವನೆಯನ್ನು ತಂದವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆದರೆ ಇದು ದೇಶ ದ್ರೋಹದ ಸಂಚಲನವಾಗಿದೆ. ಇದು ದೇಶದ ಜನರಿಂದ ತಿರಸ್ಕೃತವಾಗಬೇಕಾದ ನಿರ್ಣಯವಾಗಿದೆ. ಅದರೊಂದಿಗೆ ನಾನು ಮತ್ತೊಮ್ಮೆ ಮಾನ್ಯ ಸಭಾಧ್ಯಕ್ಷರಿಗೆ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತಾ ನನ್ನ ಭಾಷಣ ಕೊನೆಗೊಳಿಸುತ್ತೇನೆ.

ತುಂಬು ಧನ್ಯವಾದಗಳು.

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻🙏🏻👏🏻
  • ज्योती चंद्रकांत मारकडे February 11, 2024

    जय हो
  • Uma tyagi bjp January 28, 2024

    जय श्री राम
  • Shyam Mohan Singh Chauhan mandal adhayksh January 11, 2024

    जय हो
  • Alok Dixit (कन्हैया दीक्षित) December 27, 2023

    जय हो
  • Kavita Sirohi August 18, 2023

    jai hind Jai bharat
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"Huge opportunity": Japan delegation meets PM Modi, expressing their eagerness to invest in India
NM on the go

Nm on the go

Always be the first to hear from the PM. Get the App Now!
...
Today, India is not just a Nation of Dreams but also a Nation That Delivers: PM Modi in TV9 Summit
March 28, 2025
QuoteToday, the world's eyes are on India: PM
QuoteIndia's youth is rapidly becoming skilled and driving innovation forward: PM
Quote"India First" has become the mantra of India's foreign policy: PM
QuoteToday, India is not just participating in the world order but also contributing to shaping and securing the future: PM
QuoteIndia has given Priority to humanity over monopoly: PM
QuoteToday, India is not just a Nation of Dreams but also a Nation That Delivers: PM

श्रीमान रामेश्वर गारु जी, रामू जी, बरुन दास जी, TV9 की पूरी टीम, मैं आपके नेटवर्क के सभी दर्शकों का, यहां उपस्थित सभी महानुभावों का अभिनंदन करता हूं, इस समिट के लिए बधाई देता हूं।

TV9 नेटवर्क का विशाल रीजनल ऑडियंस है। और अब तो TV9 का एक ग्लोबल ऑडियंस भी तैयार हो रहा है। इस समिट में अनेक देशों से इंडियन डायस्पोरा के लोग विशेष तौर पर लाइव जुड़े हुए हैं। कई देशों के लोगों को मैं यहां से देख भी रहा हूं, वे लोग वहां से वेव कर रहे हैं, हो सकता है, मैं सभी को शुभकामनाएं देता हूं। मैं यहां नीचे स्क्रीन पर हिंदुस्तान के अनेक शहरों में बैठे हुए सब दर्शकों को भी उतने ही उत्साह, उमंग से देख रहा हूं, मेरी तरफ से उनका भी स्वागत है।

साथियों,

आज विश्व की दृष्टि भारत पर है, हमारे देश पर है। दुनिया में आप किसी भी देश में जाएं, वहां के लोग भारत को लेकर एक नई जिज्ञासा से भरे हुए हैं। आखिर ऐसा क्या हुआ कि जो देश 70 साल में ग्यारहवें नंबर की इकोनॉमी बना, वो महज 7-8 साल में पांचवे नंबर की इकोनॉमी बन गया? अभी IMF के नए आंकड़े सामने आए हैं। वो आंकड़े कहते हैं कि भारत, दुनिया की एकमात्र मेजर इकोनॉमी है, जिसने 10 वर्षों में अपने GDP को डबल किया है। बीते दशक में भारत ने दो लाख करोड़ डॉलर, अपनी इकोनॉमी में जोड़े हैं। GDP का डबल होना सिर्फ आंकड़ों का बदलना मात्र नहीं है। इसका impact देखिए, 25 करोड़ लोग गरीबी से बाहर निकले हैं, और ये 25 करोड़ लोग एक नियो मिडिल क्लास का हिस्सा बने हैं। ये नियो मिडिल क्लास, एक प्रकार से नई ज़िंदगी शुरु कर रहा है। ये नए सपनों के साथ आगे बढ़ रहा है, हमारी इकोनॉमी में कंट्रीब्यूट कर रहा है, और उसको वाइब्रेंट बना रहा है। आज दुनिया की सबसे बड़ी युवा आबादी हमारे भारत में है। ये युवा, तेज़ी से स्किल्ड हो रहा है, इनोवेशन को गति दे रहा है। और इन सबके बीच, भारत की फॉरेन पॉलिसी का मंत्र बन गया है- India First, एक जमाने में भारत की पॉलिसी थी, सबसे समान रूप से दूरी बनाकर चलो, Equi-Distance की पॉलिसी, आज के भारत की पॉलिसी है, सबके समान रूप से करीब होकर चलो, Equi-Closeness की पॉलिसी। दुनिया के देश भारत की ओपिनियन को, भारत के इनोवेशन को, भारत के एफर्ट्स को, जैसा महत्व आज दे रहे हैं, वैसा पहले कभी नहीं हुआ। आज दुनिया की नजर भारत पर है, आज दुनिया जानना चाहती है, What India Thinks Today.

|

साथियों,

भारत आज, वर्ल्ड ऑर्डर में सिर्फ पार्टिसिपेट ही नहीं कर रहा, बल्कि फ्यूचर को शेप और सेक्योर करने में योगदान दे रहा है। दुनिया ने ये कोरोना काल में अच्छे से अनुभव किया है। दुनिया को लगता था कि हर भारतीय तक वैक्सीन पहुंचने में ही, कई-कई साल लग जाएंगे। लेकिन भारत ने हर आशंका को गलत साबित किया। हमने अपनी वैक्सीन बनाई, हमने अपने नागरिकों का तेज़ी से वैक्सीनेशन कराया, और दुनिया के 150 से अधिक देशों तक दवाएं और वैक्सीन्स भी पहुंचाईं। आज दुनिया, और जब दुनिया संकट में थी, तब भारत की ये भावना दुनिया के कोने-कोने तक पहुंची कि हमारे संस्कार क्या हैं, हमारा तौर-तरीका क्या है।

साथियों,

अतीत में दुनिया ने देखा है कि दूसरे विश्व युद्ध के बाद जब भी कोई वैश्विक संगठन बना, उसमें कुछ देशों की ही मोनोपोली रही। भारत ने मोनोपोली नहीं बल्कि मानवता को सर्वोपरि रखा। भारत ने, 21वीं सदी के ग्लोबल इंस्टीट्यूशन्स के गठन का रास्ता बनाया, और हमने ये ध्यान रखा कि सबकी भागीदारी हो, सबका योगदान हो। जैसे प्राकृतिक आपदाओं की चुनौती है। देश कोई भी हो, इन आपदाओं से इंफ्रास्ट्रक्चर को भारी नुकसान होता है। आज ही म्यांमार में जो भूकंप आया है, आप टीवी पर देखें तो बहुत बड़ी-बड़ी इमारतें ध्वस्त हो रही हैं, ब्रिज टूट रहे हैं। और इसलिए भारत ने Coalition for Disaster Resilient Infrastructure - CDRI नाम से एक वैश्विक नया संगठन बनाने की पहल की। ये सिर्फ एक संगठन नहीं, बल्कि दुनिया को प्राकृतिक आपदाओं के लिए तैयार करने का संकल्प है। भारत का प्रयास है, प्राकृतिक आपदा से, पुल, सड़कें, बिल्डिंग्स, पावर ग्रिड, ऐसा हर इंफ्रास्ट्रक्चर सुरक्षित रहे, सुरक्षित निर्माण हो।

साथियों,

भविष्य की चुनौतियों से निपटने के लिए हर देश का मिलकर काम करना बहुत जरूरी है। ऐसी ही एक चुनौती है, हमारे एनर्जी रिसोर्सेस की। इसलिए पूरी दुनिया की चिंता करते हुए भारत ने International Solar Alliance (ISA) का समाधान दिया है। ताकि छोटे से छोटा देश भी सस्टेनबल एनर्जी का लाभ उठा सके। इससे क्लाइमेट पर तो पॉजिटिव असर होगा ही, ये ग्लोबल साउथ के देशों की एनर्जी नीड्स को भी सिक्योर करेगा। और आप सबको ये जानकर गर्व होगा कि भारत के इस प्रयास के साथ, आज दुनिया के सौ से अधिक देश जुड़ चुके हैं।

साथियों,

बीते कुछ समय से दुनिया, ग्लोबल ट्रेड में असंतुलन और लॉजिस्टिक्स से जुड़ी challenges का सामना कर रही है। इन चुनौतियों से निपटने के लिए भी भारत ने दुनिया के साथ मिलकर नए प्रयास शुरु किए हैं। India–Middle East–Europe Economic Corridor (IMEC), ऐसा ही एक महत्वाकांक्षी प्रोजेक्ट है। ये प्रोजेक्ट, कॉमर्स और कनेक्टिविटी के माध्यम से एशिया, यूरोप और मिडिल ईस्ट को जोड़ेगा। इससे आर्थिक संभावनाएं तो बढ़ेंगी ही, दुनिया को अल्टरनेटिव ट्रेड रूट्स भी मिलेंगे। इससे ग्लोबल सप्लाई चेन भी और मजबूत होगी।

|

साथियों,

ग्लोबल सिस्टम्स को, अधिक पार्टिसिपेटिव, अधिक डेमोक्रेटिक बनाने के लिए भी भारत ने अनेक कदम उठाए हैं। और यहीं, यहीं पर ही भारत मंडपम में जी-20 समिट हुई थी। उसमें अफ्रीकन यूनियन को जी-20 का परमानेंट मेंबर बनाया गया है। ये बहुत बड़ा ऐतिहासिक कदम था। इसकी मांग लंबे समय से हो रही थी, जो भारत की प्रेसीडेंसी में पूरी हुई। आज ग्लोबल डिसीजन मेकिंग इंस्टीट्यूशन्स में भारत, ग्लोबल साउथ के देशों की आवाज़ बन रहा है। International Yoga Day, WHO का ग्लोबल सेंटर फॉर ट्रेडिशनल मेडिसिन, आर्टिफिशियल इंटेलीजेंस के लिए ग्लोबल फ्रेमवर्क, ऐसे कितने ही क्षेत्रों में भारत के प्रयासों ने नए वर्ल्ड ऑर्डर में अपनी मजबूत उपस्थिति दर्ज कराई है, और ये तो अभी शुरूआत है, ग्लोबल प्लेटफॉर्म पर भारत का सामर्थ्य नई ऊंचाई की तरफ बढ़ रहा है।

साथियों,

21वीं सदी के 25 साल बीत चुके हैं। इन 25 सालों में 11 साल हमारी सरकार ने देश की सेवा की है। और जब हम What India Thinks Today उससे जुड़ा सवाल उठाते हैं, तो हमें ये भी देखना होगा कि Past में क्या सवाल थे, क्या जवाब थे। इससे TV9 के विशाल दर्शक समूह को भी अंदाजा होगा कि कैसे हम, निर्भरता से आत्मनिर्भरता तक, Aspirations से Achievement तक, Desperation से Development तक पहुंचे हैं। आप याद करिए, एक दशक पहले, गांव में जब टॉयलेट का सवाल आता था, तो माताओं-बहनों के पास रात ढलने के बाद और भोर होने से पहले का ही जवाब होता था। आज उसी सवाल का जवाब स्वच्छ भारत मिशन से मिलता है। 2013 में जब कोई इलाज की बात करता था, तो महंगे इलाज की चर्चा होती थी। आज उसी सवाल का समाधान आयुष्मान भारत में नजर आता है। 2013 में किसी गरीब की रसोई की बात होती थी, तो धुएं की तस्वीर सामने आती थी। आज उसी समस्या का समाधान उज्ज्वला योजना में दिखता है। 2013 में महिलाओं से बैंक खाते के बारे में पूछा जाता था, तो वो चुप्पी साध लेती थीं। आज जनधन योजना के कारण, 30 करोड़ से ज्यादा बहनों का अपना बैंक अकाउंट है। 2013 में पीने के पानी के लिए कुएं और तालाबों तक जाने की मजबूरी थी। आज उसी मजबूरी का हल हर घर नल से जल योजना में मिल रहा है। यानि सिर्फ दशक नहीं बदला, बल्कि लोगों की ज़िंदगी बदली है। और दुनिया भी इस बात को नोट कर रही है, भारत के डेवलपमेंट मॉडल को स्वीकार रही है। आज भारत सिर्फ Nation of Dreams नहीं, बल्कि Nation That Delivers भी है।

साथियों,

जब कोई देश, अपने नागरिकों की सुविधा और समय को महत्व देता है, तब उस देश का समय भी बदलता है। यही आज हम भारत में अनुभव कर रहे हैं। मैं आपको एक उदाहरण देता हूं। पहले पासपोर्ट बनवाना कितना बड़ा काम था, ये आप जानते हैं। लंबी वेटिंग, बहुत सारे कॉम्प्लेक्स डॉक्यूमेंटेशन का प्रोसेस, अक्सर राज्यों की राजधानी में ही पासपोर्ट केंद्र होते थे, छोटे शहरों के लोगों को पासपोर्ट बनवाना होता था, तो वो एक-दो दिन कहीं ठहरने का इंतजाम करके चलते थे, अब वो हालात पूरी तरह बदल गया है, एक आंकड़े पर आप ध्यान दीजिए, पहले देश में सिर्फ 77 पासपोर्ट सेवा केंद्र थे, आज इनकी संख्या 550 से ज्यादा हो गई है। पहले पासपोर्ट बनवाने में, और मैं 2013 के पहले की बात कर रहा हूं, मैं पिछले शताब्दी की बात नहीं कर रहा हूं, पासपोर्ट बनवाने में जो वेटिंग टाइम 50 दिन तक होता था, वो अब 5-6 दिन तक सिमट गया है।

साथियों,

ऐसा ही ट्रांसफॉर्मेशन हमने बैंकिंग इंफ्रास्ट्रक्चर में भी देखा है। हमारे देश में 50-60 साल पहले बैंकों का नेशनलाइजेशन किया गया, ये कहकर कि इससे लोगों को बैंकिंग सुविधा सुलभ होगी। इस दावे की सच्चाई हम जानते हैं। हालत ये थी कि लाखों गांवों में बैंकिंग की कोई सुविधा ही नहीं थी। हमने इस स्थिति को भी बदला है। ऑनलाइन बैंकिंग तो हर घर में पहुंचाई है, आज देश के हर 5 किलोमीटर के दायरे में कोई न कोई बैंकिंग टच प्वाइंट जरूर है। और हमने सिर्फ बैंकिंग इंफ्रास्ट्रक्चर का ही दायरा नहीं बढ़ाया, बल्कि बैंकिंग सिस्टम को भी मजबूत किया। आज बैंकों का NPA बहुत कम हो गया है। आज बैंकों का प्रॉफिट, एक लाख 40 हज़ार करोड़ रुपए के नए रिकॉर्ड को पार कर चुका है। और इतना ही नहीं, जिन लोगों ने जनता को लूटा है, उनको भी अब लूटा हुआ धन लौटाना पड़ रहा है। जिस ED को दिन-रात गालियां दी जा रही है, ED ने 22 हज़ार करोड़ रुपए से अधिक वसूले हैं। ये पैसा, कानूनी तरीके से उन पीड़ितों तक वापिस पहुंचाया जा रहा है, जिनसे ये पैसा लूटा गया था।

साथियों,

Efficiency से गवर्नमेंट Effective होती है। कम समय में ज्यादा काम हो, कम रिसोर्सेज़ में अधिक काम हो, फिजूलखर्ची ना हो, रेड टेप के बजाय रेड कार्पेट पर बल हो, जब कोई सरकार ये करती है, तो समझिए कि वो देश के संसाधनों को रिस्पेक्ट दे रही है। और पिछले 11 साल से ये हमारी सरकार की बड़ी प्राथमिकता रहा है। मैं कुछ उदाहरणों के साथ अपनी बात बताऊंगा।

|

साथियों,

अतीत में हमने देखा है कि सरकारें कैसे ज्यादा से ज्यादा लोगों को मिनिस्ट्रीज में accommodate करने की कोशिश करती थीं। लेकिन हमारी सरकार ने अपने पहले कार्यकाल में ही कई मंत्रालयों का विलय कर दिया। आप सोचिए, Urban Development अलग मंत्रालय था और Housing and Urban Poverty Alleviation अलग मंत्रालय था, हमने दोनों को मर्ज करके Housing and Urban Affairs मंत्रालय बना दिया। इसी तरह, मिनिस्ट्री ऑफ ओवरसीज़ अफेयर्स अलग था, विदेश मंत्रालय अलग था, हमने इन दोनों को भी एक साथ जोड़ दिया, पहले जल संसाधन, नदी विकास मंत्रालय अलग था, और पेयजल मंत्रालय अलग था, हमने इन्हें भी जोड़कर जलशक्ति मंत्रालय बना दिया। हमने राजनीतिक मजबूरी के बजाय, देश की priorities और देश के resources को आगे रखा।

साथियों,

हमारी सरकार ने रूल्स और रेगुलेशन्स को भी कम किया, उन्हें आसान बनाया। करीब 1500 ऐसे कानून थे, जो समय के साथ अपना महत्व खो चुके थे। उनको हमारी सरकार ने खत्म किया। करीब 40 हज़ार, compliances को हटाया गया। ऐसे कदमों से दो फायदे हुए, एक तो जनता को harassment से मुक्ति मिली, और दूसरा, सरकारी मशीनरी की एनर्जी भी बची। एक और Example GST का है। 30 से ज्यादा टैक्सेज़ को मिलाकर एक टैक्स बना दिया गया है। इसको process के, documentation के हिसाब से देखें तो कितनी बड़ी बचत हुई है।

साथियों,

सरकारी खरीद में पहले कितनी फिजूलखर्ची होती थी, कितना करप्शन होता था, ये मीडिया के आप लोग आए दिन रिपोर्ट करते थे। हमने, GeM यानि गवर्नमेंट ई-मार्केटप्लेस प्लेटफॉर्म बनाया। अब सरकारी डिपार्टमेंट, इस प्लेटफॉर्म पर अपनी जरूरतें बताते हैं, इसी पर वेंडर बोली लगाते हैं और फिर ऑर्डर दिया जाता है। इसके कारण, भ्रष्टाचार की गुंजाइश कम हुई है, और सरकार को एक लाख करोड़ रुपए से अधिक की बचत भी हुई है। डायरेक्ट बेनिफिट ट्रांसफर- DBT की जो व्यवस्था भारत ने बनाई है, उसकी तो दुनिया में चर्चा है। DBT की वजह से टैक्स पेयर्स के 3 लाख करोड़ रुपए से ज्यादा, गलत हाथों में जाने से बचे हैं। 10 करोड़ से ज्यादा फर्ज़ी लाभार्थी, जिनका जन्म भी नहीं हुआ था, जो सरकारी योजनाओं का फायदा ले रहे थे, ऐसे फर्जी नामों को भी हमने कागजों से हटाया है।

साथियों,

 

हमारी सरकार टैक्स की पाई-पाई का ईमानदारी से उपयोग करती है, और टैक्सपेयर का भी सम्मान करती है, सरकार ने टैक्स सिस्टम को टैक्सपेयर फ्रेंडली बनाया है। आज ITR फाइलिंग का प्रोसेस पहले से कहीं ज्यादा सरल और तेज़ है। पहले सीए की मदद के बिना, ITR फाइल करना मुश्किल होता था। आज आप कुछ ही समय के भीतर खुद ही ऑनलाइन ITR फाइल कर पा रहे हैं। और रिटर्न फाइल करने के कुछ ही दिनों में रिफंड आपके अकाउंट में भी आ जाता है। फेसलेस असेसमेंट स्कीम भी टैक्सपेयर्स को परेशानियों से बचा रही है। गवर्नेंस में efficiency से जुड़े ऐसे अनेक रिफॉर्म्स ने दुनिया को एक नया गवर्नेंस मॉडल दिया है।

साथियों,

पिछले 10-11 साल में भारत हर सेक्टर में बदला है, हर क्षेत्र में आगे बढ़ा है। और एक बड़ा बदलाव सोच का आया है। आज़ादी के बाद के अनेक दशकों तक, भारत में ऐसी सोच को बढ़ावा दिया गया, जिसमें सिर्फ विदेशी को ही बेहतर माना गया। दुकान में भी कुछ खरीदने जाओ, तो दुकानदार के पहले बोल यही होते थे – भाई साहब लीजिए ना, ये तो इंपोर्टेड है ! आज स्थिति बदल गई है। आज लोग सामने से पूछते हैं- भाई, मेड इन इंडिया है या नहीं है?

साथियों,

आज हम भारत की मैन्युफैक्चरिंग एक्सीलेंस का एक नया रूप देख रहे हैं। अभी 3-4 दिन पहले ही एक न्यूज आई है कि भारत ने अपनी पहली MRI मशीन बना ली है। अब सोचिए, इतने दशकों तक हमारे यहां स्वदेशी MRI मशीन ही नहीं थी। अब मेड इन इंडिया MRI मशीन होगी तो जांच की कीमत भी बहुत कम हो जाएगी।

|

साथियों,

आत्मनिर्भर भारत और मेक इन इंडिया अभियान ने, देश के मैन्युफैक्चरिंग सेक्टर को एक नई ऊर्जा दी है। पहले दुनिया भारत को ग्लोबल मार्केट कहती थी, आज वही दुनिया, भारत को एक बड़े Manufacturing Hub के रूप में देख रही है। ये सक्सेस कितनी बड़ी है, इसके उदाहरण आपको हर सेक्टर में मिलेंगे। जैसे हमारी मोबाइल फोन इंडस्ट्री है। 2014-15 में हमारा एक्सपोर्ट, वन बिलियन डॉलर तक भी नहीं था। लेकिन एक दशक में, हम ट्वेंटी बिलियन डॉलर के फिगर से भी आगे निकल चुके हैं। आज भारत ग्लोबल टेलिकॉम और नेटवर्किंग इंडस्ट्री का एक पावर सेंटर बनता जा रहा है। Automotive Sector की Success से भी आप अच्छी तरह परिचित हैं। इससे जुड़े Components के एक्सपोर्ट में भी भारत एक नई पहचान बना रहा है। पहले हम बहुत बड़ी मात्रा में मोटर-साइकल पार्ट्स इंपोर्ट करते थे। लेकिन आज भारत में बने पार्ट्स UAE और जर्मनी जैसे अनेक देशों तक पहुंच रहे हैं। सोलर एनर्जी सेक्टर ने भी सफलता के नए आयाम गढ़े हैं। हमारे सोलर सेल्स, सोलर मॉड्यूल का इंपोर्ट कम हो रहा है और एक्सपोर्ट्स 23 गुना तक बढ़ गए हैं। बीते एक दशक में हमारा डिफेंस एक्सपोर्ट भी 21 गुना बढ़ा है। ये सारी अचीवमेंट्स, देश की मैन्युफैक्चरिंग इकोनॉमी की ताकत को दिखाती है। ये दिखाती है कि भारत में कैसे हर सेक्टर में नई जॉब्स भी क्रिएट हो रही हैं।

साथियों,

TV9 की इस समिट में, विस्तार से चर्चा होगी, अनेक विषयों पर मंथन होगा। आज हम जो भी सोचेंगे, जिस भी विजन पर आगे बढ़ेंगे, वो हमारे आने वाले कल को, देश के भविष्य को डिजाइन करेगा। पिछली शताब्दी के इसी दशक में, भारत ने एक नई ऊर्जा के साथ आजादी के लिए नई यात्रा शुरू की थी। और हमने 1947 में आजादी हासिल करके भी दिखाई। अब इस दशक में हम विकसित भारत के लक्ष्य के लिए चल रहे हैं। और हमें 2047 तक विकसित भारत का सपना जरूर पूरा करना है। और जैसा मैंने लाल किले से कहा है, इसमें सबका प्रयास आवश्यक है। इस समिट का आयोजन कर, TV9 ने भी अपनी तरफ से एक positive initiative लिया है। एक बार फिर आप सभी को इस समिट की सफलता के लिए मेरी ढेर सारी शुभकामनाएं हैं।

मैं TV9 को विशेष रूप से बधाई दूंगा, क्योंकि पहले भी मीडिया हाउस समिट करते रहे हैं, लेकिन ज्यादातर एक छोटे से फाइव स्टार होटल के कमरे में, वो समिट होती थी और बोलने वाले भी वही, सुनने वाले भी वही, कमरा भी वही। TV9 ने इस परंपरा को तोड़ा और ये जो मॉडल प्लेस किया है, 2 साल के भीतर-भीतर देख लेना, सभी मीडिया हाउस को यही करना पड़ेगा। यानी TV9 Thinks Today वो बाकियों के लिए रास्ता खोल देगा। मैं इस प्रयास के लिए बहुत-बहुत अभिनंदन करता हूं, आपकी पूरी टीम को, और सबसे बड़ी खुशी की बात है कि आपने इस इवेंट को एक मीडिया हाउस की भलाई के लिए नहीं, देश की भलाई के लिए आपने उसकी रचना की। 50,000 से ज्यादा नौजवानों के साथ एक मिशन मोड में बातचीत करना, उनको जोड़ना, उनको मिशन के साथ जोड़ना और उसमें से जो बच्चे सिलेक्ट होकर के आए, उनकी आगे की ट्रेनिंग की चिंता करना, ये अपने आप में बहुत अद्भुत काम है। मैं आपको बहुत बधाई देता हूं। जिन नौजवानों से मुझे यहां फोटो निकलवाने का मौका मिला है, मुझे भी खुशी हुई कि देश के होनहार लोगों के साथ, मैं अपनी फोटो निकलवा पाया। मैं इसे अपना सौभाग्य मानता हूं दोस्तों कि आपके साथ मेरी फोटो आज निकली है। और मुझे पक्का विश्वास है कि सारी युवा पीढ़ी, जो मुझे दिख रही है, 2047 में जब देश विकसित भारत बनेगा, सबसे ज्यादा बेनिफिशियरी आप लोग हैं, क्योंकि आप उम्र के उस पड़ाव पर होंगे, जब भारत विकसित होगा, आपके लिए मौज ही मौज है। आपको बहुत-बहुत शुभकामनाएं।

धन्यवाद।