Quote"ತಮಿಳುನಾಡು ಭಾರತೀಯ ರಾಷ್ಟ್ರೀಯತೆಯ ಭದ್ರಕೋಟೆಯಾಗಿದೆ"
Quote"ಅಧೀನಮ್ ಮತ್ತು ರಾಜಾ ಜಿ ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಪವಿತ್ರ ಪ್ರಾಚೀನ ತಮಿಳು ಸಂಸ್ಕೃತಿಯಿಂದ ಆಶೀರ್ವಾದದ ಮಾರ್ಗವನ್ನು ಕಂಡುಕೊಂಡಿದ್ದೇವೆ - ಸೆಂಗೋಲ್ ಮಾಧ್ಯಮದ ಮೂಲಕ ಅಧಿಕಾರದ ವರ್ಗಾವಣೆಯ ಮಾರ್ಗ"
Quote“1947ರಲ್ಲಿ ತಿರುವಾಡುತುರೈ ಅಧೀನಂ ಅವರು ವಿಶೇಷ ರಾಜದಂಡ(ಸೆಂಗೋಲ್) ಅನ್ನು ನಿರ್ಮಿಸಿದರು. ಇಂದು, ಆ ಕಾಲದ ಚಿತ್ರಗಳು ತಮಿಳು ಸಂಸ್ಕೃತಿ ಮತ್ತು ಆಧುನಿಕ ಪ್ರಜಾಪ್ರಭುತ್ವವಾಗಿ ಭಾರತದ ವಿಧಿಯ ನಡುವಿನ ಆಳವಾದ ಭಾವನಾತ್ಮಕ ಬಂಧವನ್ನು ನಮಗೆ ನೆನಪಿಸುತ್ತಿವೆ.
Quote"ಅಧೀನಂ ಅವರ ಸೆಂಗೋಲ್ ನೂರಾರು ವರ್ಷಗಳ ಗುಲಾಮಗಿರಿಯ ಪ್ರತೀಕದಿಂದ ಭಾರತವನ್ನು ಮುಕ್ತಗೊಳಿಸುವ ಆರಂಭವಾಗಿದೆ"
Quote"ಗುಲಾಮಗಿರಿಯ ಮೊದಲು ಅಸ್ತಿತ್ವದಲ್ಲಿದ್ದ ರಾಷ್ಟ್ರದ ಯುಗಕ್ಕೆ ಸ್ವತಂತ್ರ ಭಾರತವನ್ನು ಸೇರಿಸಿದ್ದೇ ಸೆಂಗೋಲ್"
Quote"ಪ್ರಜಾಪ್ರಭುತ್ವದ ದೇವಾಲಯದಲ್ಲಿ ಸೆಂಗೋಲ್ ಅರ್ಹವಾದ ಸ್ಥಾನವನ್ನು ಪಡೆಯುತ್ತಿದೆ"

ನನೈವರುಕ್ಕುಮ್ ವನಕ್ಕಂ

ಓಂ ನಮಃ ಶಿವಾಯ! ಶಿವಾಯ ನಮಃ!

ಹರ ಹರ ಮಹಾದೇವ!

ಮೊದಲನೆಯದಾಗಿ, ನಾನು ತಲೆಬಾಗಿ ನಮಸ್ಕರಿಸುತ್ತೇನೆ ಮತ್ತು ವಿವಿಧ 'ಆಧೀನಂ'ಗಳೊಂದಿಗೆ ಸಂಬಂಧ ಹೊಂದಿರುವ ನಿಮ್ಮಂತಹ ಎಲ್ಲಾ ಪೂಜ್ಯ ಋಷಿಗಳನ್ನು ಅಭಿನಂದಿಸುತ್ತೇನೆ. ಇಂದು ನನ್ನ ನಿವಾಸದಲ್ಲಿ ನಿಮ್ಮನ್ನು ಕಾಣಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಶಿವನ ಅನುಗ್ರಹದಿಂದಾಗಿ ನಿಮ್ಮಂತಹ ಶಿವನ ಎಲ್ಲಾ ಭಕ್ತರನ್ನು ಒಟ್ಟಿಗೆ ನೋಡುವ ಅವಕಾಶ ನನಗೆ ಸಿಕ್ಕಿದೆ. ನಾಳೆ ನೂತನ ಸಂಸತ್ ಭವನದ ಉದ್ಘಾಟನೆಗೆ ನೀವೆಲ್ಲರೂ ಖುದ್ದಾಗಿ ಆಗಮಿಸಿ ಆಶೀರ್ವಾದ ಮಾಡಲಿದ್ದೀರಿ ಎಂಬುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.

ಗೌರವಾನ್ವಿತ ಶ್ರೀಗಳೇ,

ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳುನಾಡು ಎಷ್ಟು ಪ್ರಮುಖ ಪಾತ್ರ ವಹಿಸಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ವೀರಮಂಗೈ ವೇಲು ನಾಚಿಯಾರ್ ನಿಂದ ಹಿಡಿದು ಮಾರುತು ಸಹೋದರರವರೆಗೆ, ಸುಬ್ರಮಣ್ಯ ಭಾರತಿಯಿಂದ ಹಿಡಿದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಕೈಜೋಡಿಸಿದ ಅನೇಕ ತಮಿಳರವರೆಗೆ, ತಮಿಳುನಾಡು ಯುಗಾಂತರಗಳಿಂದ ಭಾರತೀಯ ರಾಷ್ಟ್ರೀಯತೆಯ ಭದ್ರಕೋಟೆಯಾಗಿದೆ. ತಮಿಳು ಜನರು ಯಾವಾಗಲೂ ಭಾರತ ಮಾತೆಯ ಬಗ್ಗೆ ಮತ್ತು ಭಾರತದ ಕಲ್ಯಾಣಕ್ಕಾಗಿ ಸೇವಾ ಮನೋಭಾವವನ್ನು ಹೊಂದಿದ್ದಾರೆ. ಇದರ ಹೊರತಾಗಿಯೂ, ಭಾರತದ ಸ್ವಾತಂತ್ರ್ಯದಲ್ಲಿ ತಮಿಳು ಜನರ ಕೊಡುಗೆಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ನೀಡದಿರುವುದು ತುಂಬಾ ದುರದೃಷ್ಟಕರ. ಈಗ ಬಿಜೆಪಿ ಈ ವಿಷಯವನ್ನು ಪ್ರಮುಖವಾಗಿ ಎತ್ತಲು ಪ್ರಾರಂಭಿಸಿದೆ. ಶ್ರೇಷ್ಠ ತಮಿಳು ಸಂಪ್ರದಾಯ ಮತ್ತು ದೇಶಭಕ್ತಿಯ ಸಂಕೇತವಾದ ತಮಿಳುನಾಡಿಗೆ ನೀಡಲಾದ ರೀತಿಯನ್ನು ಈಗ ದೇಶದ ಜನರು ಅರಿತುಕೊಳ್ಳುತ್ತಿದ್ದಾರೆ.

ಸ್ವಾತಂತ್ರ್ಯದ ಸಮಯದಲ್ಲಿ, ಅಧಿಕಾರ ಹಸ್ತಾಂತರದ ಚಿಹ್ನೆಯ ಬಗ್ಗೆ ಪ್ರಶ್ನೆ ಉದ್ಭವಿಸಿತು. ಇದಕ್ಕಾಗಿ ನಮ್ಮ ದೇಶದಲ್ಲಿ ವಿಭಿನ್ನ ಸಂಪ್ರದಾಯಗಳಿವೆ. ವಿಭಿನ್ನ ಪದ್ಧತಿಗಳೂ ಇವೆ. ಆದರೆ ಆ ಸಮಯದಲ್ಲಿ ರಾಜಾಜಿ ಮತ್ತು ಅದೀನಂ ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಪ್ರಾಚೀನ ತಮಿಳು ಸಂಸ್ಕೃತಿಯಿಂದ ಒಂದು ಸದ್ಗುಣ ಮಾರ್ಗವನ್ನು ಕಂಡುಕೊಂಡಿದ್ದೇವೆ. ಇದು ಸೆಂಗೋಲ್ ಮೂಲಕ ಅಧಿಕಾರ ವರ್ಗಾವಣೆಯ ಮಾರ್ಗವಾಗಿತ್ತು. ತಮಿಳು ಸಂಪ್ರದಾಯದಲ್ಲಿ, ಸೆಂಗೋಲ್ ಅನ್ನು ಆಡಳಿತಗಾರನಿಗೆ ನೀಡಲಾಯಿತು. ಸೆಂಗೋಲ್ ಅನ್ನು ಹೊಂದಿರುವ ವ್ಯಕ್ತಿಯು ದೇಶದ ಕಲ್ಯಾಣಕ್ಕೆ ಜವಾಬ್ದಾರನಾಗಿರುತ್ತಾನೆ ಮತ್ತು ಎಂದಿಗೂ ಕರ್ತವ್ಯದ ಮಾರ್ಗದಿಂದ ವಿಮುಖನಾಗುವುದಿಲ್ಲ ಎಂಬ ಅಂಶದ ಸಂಕೇತವಾಗಿತ್ತು. ಅಧಿಕಾರ ಹಸ್ತಾಂತರದ ಸಂಕೇತವಾಗಿ, 1947 ರಲ್ಲಿ ಪವಿತ್ರ ತಿರುವದುತುರೈ ಆಧಿನಂನಿಂದ ವಿಶೇಷ ಸೆಂಗೋಲ್ ಅನ್ನು ತಯಾರಿಸಲಾಯಿತು. ಇಂದು, ಆ ಯುಗದ ಛಾಯಾಚಿತ್ರಗಳು ತಮಿಳು ಸಂಸ್ಕೃತಿ ಮತ್ತು ಆಧುನಿಕ ಪ್ರಜಾಪ್ರಭುತ್ವವಾಗಿ ಭಾರತದ ಹಣೆಬರಹದ ನಡುವಿನ ಭಾವೋದ್ರಿಕ್ತ ಮತ್ತು ನಿಕಟ ಸಂಬಂಧವನ್ನು ನಮಗೆ ನೆನಪಿಸುತ್ತವೆ. ಇಂದು, ಆ ಆಳವಾದ ಸಂಬಂಧಗಳ ಕಥೆಯು ಇತಿಹಾಸದ ಹೂತುಹೋದ ಪುಟಗಳಿಂದ ಮತ್ತೊಮ್ಮೆ ಜೀವಂತವಾಗಿದೆ. ಇದು ಆ ಕಾಲದ ಘಟನೆಗಳನ್ನು ಅರ್ಥಮಾಡಿಕೊಳ್ಳಲು ಸರಿಯಾದ ದೃಷ್ಟಿಕೋನವನ್ನು ನೀಡುತ್ತದೆ. ಮತ್ತು ಅದೇ ಸಮಯದಲ್ಲಿ, ಅಧಿಕಾರ ವರ್ಗಾವಣೆಯ ಈ ಮಹಾನ್ ಸಂಕೇತಕ್ಕೆ ಏನಾಯಿತು ಎಂಬುದರ ಬಗ್ಗೆ ನಾವು ಕಲಿತಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ನಾನು ರಾಜಾಜಿ ಮತ್ತು ವಿವಿಧ ಆಧೀನಂಗಳ ದರ್ಶನಕ್ಕೆ ನನ್ನ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಅಧೀನಂನ ಸೆಂಗೋಲ್, ನೂರಾರು ವರ್ಷಗಳ ಗುಲಾಮಗಿರಿಯ ಪ್ರತಿಯೊಂದು ಸಂಕೇತದಿಂದ ಭಾರತವನ್ನು ಮುಕ್ತಗೊಳಿಸಲು ಪ್ರಾರಂಭಿಸಿತು. ಭಾರತದ ಸ್ವಾತಂತ್ರ್ಯದ ಮೊದಲ ಕ್ಷಣದಲ್ಲಿ, ಸೆಂಗೋಲ್ ವಸಾಹತುಶಾಹಿ ಪೂರ್ವ ಅವಧಿಯನ್ನು ಸ್ವತಂತ್ರ ಭಾರತದ ಆರಂಭಿಕ ಕ್ಷಣದೊಂದಿಗೆ ಸುಂದರವಾಗಿ ಜೋಡಿಸಿದರು. ಆದ್ದರಿಂದ, ಈ ಪವಿತ್ರ ಸೆಂಗೋಲ್ ಮುಖ್ಯವಾಗಿದೆ ಏಕೆಂದರೆ ಇದು 1947 ರಲ್ಲಿ ಅಧಿಕಾರ ವರ್ಗಾವಣೆಯ ಸಂಕೇತವಾಯಿತು ಮಾತ್ರವಲ್ಲದೆ ಇದು ಸ್ವತಂತ್ರ ಭಾರತದ ಭವಿಷ್ಯವನ್ನು ವಸಾಹತುಶಾಹಿ ಆಳ್ವಿಕೆಗೆ ಮುಂಚಿನ ವೈಭವಯುತ ಭಾರತದೊಂದಿಗೆ, ಅದರ ಸಂಪ್ರದಾಯಗಳೊಂದಿಗೆ ಸಂಪರ್ಕಿಸಿತು. ಸ್ವಾತಂತ್ರ್ಯದ ನಂತರ ಈ ಪವಿತ್ರ ಸೆಂಗೋಲ್ ಗೆ ಸಾಕಷ್ಟು ಗೌರವ ಮತ್ತು ಹೆಮ್ಮೆಯ ಸ್ಥಾನವನ್ನು ನೀಡಿದ್ದರೆ ಉತ್ತಮವಾಗಿತ್ತು. ಆದರೆ ಈ ಸೆಂಗೋಲ್ ಅನ್ನು ಪ್ರಯಾಗ್ರಾಜ್ನಲ್ಲಿ, ಆನಂದ್ ಭವನದಲ್ಲಿ ಕೇವಲ ವಾಕಿಂಗ್ ಸ್ಟಿಕ್ನಂತೆ ಪ್ರದರ್ಶನಕ್ಕೆ ಇಡಲಾಗಿತ್ತು. ನಿಮ್ಮ ಮತ್ತು ನಮ್ಮ ಸರ್ಕಾರದ ಈ ಸೇವಕ ಈಗ ಆ ಸೆಂಗೋಲ್ ಅನ್ನು ಆನಂದ್ ಭವನದಿಂದ ಹೊರತಂದಿದ್ದಾರೆ. ಇಂದು, ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಅನ್ನು ಇರಿಸುವ ಮೂಲಕ ಸ್ವಾತಂತ್ರ್ಯದ ಮೊದಲ ಆರಂಭಿಕ ಕ್ಷಣವನ್ನು ಪುನರುಜ್ಜೀವನಗೊಳಿಸಲು ನಮಗೆ ಅವಕಾಶ ಸಿಕ್ಕಿದೆ. ಇಂದು ಸೆಂಗೋಲ್ ಪ್ರಜಾಪ್ರಭುತ್ವದ ದೇವಾಲಯದಲ್ಲಿ ತನ್ನ ಸರಿಯಾದ ಸ್ಥಾನವನ್ನು ಪಡೆಯುತ್ತಿದೆ. ಭಾರತದ ಶ್ರೇಷ್ಠ ಸಂಪ್ರದಾಯದ ಸಂಕೇತವಾದ ಅದೇ ಸೆಂಗೋಲ್ ಅನ್ನು ಈಗ ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಲಾಗುವುದು ಎಂದು ನನಗೆ ಸಂತೋಷವಾಗಿದೆ. ನಾವು ಕರ್ತವ್ಯದ ಹಾದಿಯಲ್ಲಿ ನಡೆಯಬೇಕು ಮತ್ತು ಜನರಿಗೆ ಉತ್ತರದಾಯಿಯಾಗಿರಬೇಕು ಎಂದು ಈ ಸೆಂಗೋಲ್ ನಮಗೆ ನೆನಪಿಸುತ್ತಲೇ ಇರುತ್ತದೆ.

ಗೌರವಾನ್ವಿತ ಶ್ರೀಗಳೇ,

ಅಧೀನಂನ ಮಹಾನ್ ಸ್ಪೂರ್ತಿದಾಯಕ ಸಂಪ್ರದಾಯವು ನಿಜವಾದ ಸಾತ್ವಿಕ ಶಕ್ತಿಯ ಸಾರಾಂಶವಾಗಿದೆ. ನೀವೆಲ್ಲರೂ ಶೈವ ಸಂಪ್ರದಾಯದ ಅನುಯಾಯಿಗಳು. ನಿಮ್ಮ ತತ್ತ್ವಶಾಸ್ತ್ರದಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತದ ಸ್ಫೂರ್ತಿಯು ಭಾರತದ ಏಕತೆ ಮತ್ತು ಸಮಗ್ರತೆಯ ಪ್ರತಿಬಿಂಬವಾಗಿದೆ. ಇದು ನಿಮ್ಮ ಅನೇಕ ಅಧೀನಂಗಳ ಹೆಸರುಗಳಲ್ಲಿ ಪ್ರತಿಬಿಂಬಿತವಾಗಿದೆ. ನಿಮ್ಮ ಅಧೀನಂಗಳ ಕೆಲವು ಹೆಸರುಗಳಲ್ಲಿ 'ಕೈಲಾಸ' ಅನ್ನು ಉಲ್ಲೇಖಿಸಲಾಗಿದೆ. ಈ ಪವಿತ್ರ ಪರ್ವತವು ತಮಿಳುನಾಡಿನಿಂದ ಹಿಮಾಲಯದಲ್ಲಿ ಬಹಳ ದೂರದಲ್ಲಿದೆ, ಆದರೂ ಇದು ನಿಮ್ಮ ಹೃದಯಕ್ಕೆ ಹತ್ತಿರವಾಗಿದೆ. ಶೈವ ಪಂಥದ ಪ್ರಸಿದ್ಧ ಋಷಿಗಳಲ್ಲಿ ಒಬ್ಬರಾದ ತಿರುಮುಲಾರ್, ಶೈವ ಧರ್ಮವನ್ನು ಪ್ರಚಾರ ಮಾಡಲು ಕೈಲಾಸ ಪರ್ವತದಿಂದ ತಮಿಳುನಾಡಿಗೆ ಬಂದನೆಂದು ಹೇಳಲಾಗುತ್ತದೆ. ಇಂದಿಗೂ, ಅವರ ರಚನೆಯ ತಿರುಮಂತಿರಂನ ಶ್ಲೋಕಗಳನ್ನು ಶಿವನಿಗಾಗಿ ಪಠಿಸಲಾಗುತ್ತದೆ. ಅಪ್ಪರ್, ಸಂಬಂದರ್, ಸುಂದರರ್ ಮತ್ತು ಮಾಣಿಕವಸಾಗರ್ ಅವರಂತಹ ಅನೇಕ ಮಹಾನ್ ಋಷಿಗಳು ಉಜ್ಜಯಿನಿ, ಕೇದಾರನಾಥ ಮತ್ತು ಗೌರಿಕುಂಡವನ್ನು ಉಲ್ಲೇಖಿಸಿದ್ದಾರೆ. ಜನರ ಆಶೀರ್ವಾದದಿಂದ ನಾನು ಇಂದು ಮಹಾದೇವನ ನಗರ ಕಾಶಿಯ ಸಂಸದನಾಗಿದ್ದೇನೆ. ಆದ್ದರಿಂದ ನಾನು ನಿಮಗೆ ಕಾಶಿ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತೇನೆ. ಧರ್ಮಪುರಂ ಆಧೀನಂನ ಸ್ವಾಮಿ ಕುಮಾರಗುರುಪಾರ ಅವರು ತಮಿಳುನಾಡಿನಿಂದ ಕಾಶಿಗೆ ಹೋಗಿದ್ದರು. ಅವರು ಬನಾರಸ್ ನ ಕೇದಾರ ಘಾಟ್ ನಲ್ಲಿ ಕೇದಾರೇಶ್ವರ ದೇವಾಲಯವನ್ನು ಸ್ಥಾಪಿಸಿದರು. ತಮಿಳುನಾಡಿನ ತಿರುಪ್ಪನಂದಲ್ ನಲ್ಲಿರುವ ಕಾಶಿ ಮಠಕ್ಕೂ ಕಾಶಿಯ ಹೆಸರನ್ನೇ ಇಡಲಾಗಿದೆ. ಈ ಮಠದ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಸಹ ನಾನು ತಿಳಿದುಕೊಂಡಿದ್ದೇನೆ. ತಿರುಪ್ಪನಂದಲ್ ನ ಕಾಶಿ ಮಠವು ಯಾತ್ರಾರ್ಥಿಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿತ್ತು ಎಂದು ನಂಬಲಾಗಿದೆ. ತಮಿಳುನಾಡಿನ ಕಾಶಿ ಮಠದಲ್ಲಿ ಹಣವನ್ನು ಠೇವಣಿ ಮಾಡಿದ ನಂತರ, ಯಾತ್ರಿಕರು ಕಾಶಿಯಲ್ಲಿ ಪ್ರಮಾಣಪತ್ರವನ್ನು ತೋರಿಸುವ ಮೂಲಕ ಹಣವನ್ನು ಹಿಂಪಡೆಯಬಹುದು. ಈ ರೀತಿಯಾಗಿ, ಶೈವ ಸಿದ್ಧಾಂತದ ಅನುಯಾಯಿಗಳು ಶೈವ ಧರ್ಮವನ್ನು ಪ್ರಚಾರ ಮಾಡಿದ್ದಲ್ಲದೆ ನಮ್ಮನ್ನು ಪರಸ್ಪರ ಹತ್ತಿರ ತಂದರು.

ಗೌರವಾನ್ವಿತ ಶ್ರೀಗಳೇ,

ಆಧೀನಂನಂತಹ ಮಹಾನ್ ಮತ್ತು ದೈವಿಕ ಸಂಪ್ರದಾಯವು ನಿರ್ವಹಿಸಿದ ನಿರ್ಣಾಯಕ ಪಾತ್ರದಿಂದಾಗಿ, ನೂರಾರು ವರ್ಷಗಳ ಗುಲಾಮಗಿರಿಯ ನಂತರವೂ, ತಮಿಳುನಾಡಿನ ಸಂಸ್ಕೃತಿ ಇನ್ನೂ ರೋಮಾಂಚಕ ಮತ್ತು ಸಮೃದ್ಧವಾಗಿದೆ. ಋಷಿಮುನಿಗಳು ಖಂಡಿತವಾಗಿಯೂ ಈ ಸಂಪ್ರದಾಯವನ್ನು ಜೀವಂತವಾಗಿರಿಸಿದ್ದಾರೆ, ಆದರೆ ಅದೇ ಸಮಯದಲ್ಲಿ ಅದನ್ನು ರಕ್ಷಿಸಿದ ಮತ್ತು ಮುಂದುವರಿಸಿದ ಎಲ್ಲಾ ಶೋಷಿತರು ಮತ್ತು ವಂಚಿತರಿಗೆ ಶ್ರೇಯಸ್ಸು ಸಲ್ಲುತ್ತದೆ. ನಿಮ್ಮ ಎಲ್ಲಾ ಸಂಸ್ಥೆಗಳು ರಾಷ್ಟ್ರಕ್ಕೆ ಕೊಡುಗೆ ನೀಡುವ ವಿಷಯದಲ್ಲಿ ಅದ್ಭುತ ಇತಿಹಾಸವನ್ನು ಹೊಂದಿವೆ. ಆ ಇತಿಹಾಸವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು, ಅದರಿಂದ ಸ್ಫೂರ್ತಿ ಪಡೆಯಲು ಮತ್ತು ಮುಂದಿನ ಪೀಳಿಗೆಗಾಗಿ ಕೆಲಸ ಮಾಡಲು ಇದು ಸಮಯ.

ಗೌರವಾನ್ವಿತ ಶ್ರೀಗಳೇ,

ದೇಶವು ಮುಂದಿನ 25 ವರ್ಷಗಳಿಗೆ ಕೆಲವು ಗುರಿಗಳನ್ನು ನಿಗದಿಪಡಿಸಿದೆ. ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುವ ಹೊತ್ತಿಗೆ ಬಲವಾದ, ಸ್ವಾವಲಂಬಿ ಮತ್ತು ಅಂತರ್ಗತ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. 1947ರಲ್ಲಿ ನಿಮ್ಮ ಮಹತ್ವದ ಪಾತ್ರದ ಬಗ್ಗೆ ಕೋಟ್ಯಂತರ ದೇಶವಾಸಿಗಳು ಮರು ಪರಿಚಯ ಮಾಡಿಕೊಂಡಿದ್ದಾರೆ. ಇಂದು, ದೇಶವು 2047 ರ ಬೃಹತ್ ಗುರಿಗಳೊಂದಿಗೆ ಮುಂದುವರಿಯುತ್ತಿರುವಾಗ, ನಿಮ್ಮ ಪಾತ್ರವು ಇನ್ನಷ್ಟು ಮಹತ್ವದ್ದಾಗಿದೆ. ನಿಮ್ಮ ಸಂಸ್ಥೆಗಳು ಯಾವಾಗಲೂ ಸೇವೆಯ ಮೌಲ್ಯಗಳನ್ನು ಸಾಕಾರಗೊಳಿಸಿವೆ. ಜನರನ್ನು ಪರಸ್ಪರ ಸಂಪರ್ಕಿಸುವ ಮತ್ತು ಅವರಲ್ಲಿ ಸಮಾನತೆಯ ಭಾವನೆಯನ್ನು ಸೃಷ್ಟಿಸುವ ಉತ್ತಮ ಉದಾಹರಣೆಯನ್ನು ನೀವು ಪ್ರಸ್ತುತಪಡಿಸಿದ್ದೀರಿ. ಭಾರತ ಹೆಚ್ಚು ಏಕೀಕೃತವಾದಷ್ಟೂ ಅದು ಬಲಗೊಳ್ಳುತ್ತದೆ. ಅದಕ್ಕಾಗಿಯೇ ನಮ್ಮ ಪ್ರಗತಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವವರು ವಿವಿಧ ಸವಾಲುಗಳನ್ನು ಒಡ್ಡುತ್ತಾರೆ. ಭಾರತದ ಪ್ರಗತಿಗೆ ಅಡ್ಡಿಪಡಿಸುವವರು ಮೊದಲು ನಮ್ಮ ಏಕತೆಯನ್ನು ಮುರಿಯಲು ಪ್ರಯತ್ನಿಸುತ್ತಾರೆ. ಆದರೆ ನಿಮ್ಮ ಸಂಸ್ಥೆಗಳಿಂದ ದೇಶವು ಪಡೆಯುತ್ತಿರುವ ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸೇವೆಯ ಶಕ್ತಿಯೊಂದಿಗೆ, ನಾವು ಪ್ರತಿಯೊಂದು ಸವಾಲನ್ನು ಎದುರಿಸುತ್ತೇವೆ ಎಂದು ನನಗೆ ಖಾತ್ರಿಯಿದೆ. ಮತ್ತೊಮ್ಮೆ, ನೀವು ಇಲ್ಲಿಗೆ ಬಂದು ನನ್ನನ್ನು ಆಶೀರ್ವದಿಸಿರುವುದು ನನ್ನ ಅದೃಷ್ಟ ಎಂದು ನಾನು ನಂಬುತ್ತೇನೆ. ಆದ್ದರಿಂದ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ನಾನು ನಮಸ್ಕರಿಸುತ್ತೇನೆ. ನೀವೆಲ್ಲರೂ ಹೊಸ ಸಂಸತ್ ಭವನದ ಉದ್ಘಾಟನೆಗೆ ಇಲ್ಲಿಗೆ ಬಂದು ನಮ್ಮನ್ನು ಆಶೀರ್ವದಿಸಿದ್ದೀರಿ. ನಾವೆಲ್ಲರೂ ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸುತ್ತೇವೆ ಮತ್ತು ಆದ್ದರಿಂದ ಅದಕ್ಕಾಗಿ ನಾನು ನಿಮಗೆ ಸಾಕಷ್ಟು ಧನ್ಯವಾದ ಹೇಳಲು ಸಾಧ್ಯವಿಲ್ಲ. ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನಮಸ್ಕರಿಸುತ್ತೇನೆ.

ನಮಃ ಶಿವಾಯ!

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻👏🏻
  • ज्योती चंद्रकांत मारकडे February 11, 2024

    जय हो
  • Dinabsndhu Mohanta June 01, 2023

    Hindustan jinda bad
  • JyothiJonnala June 01, 2023

    om namasivaya.
  • JyothiJonnala June 01, 2023

    namasivaya
  • JyothiJonnala June 01, 2023

    Om navasivaya sivayanama
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Raj Kapoor’s Iconic Lantern Donated To PM Museum In Tribute To Cinematic Icon

Media Coverage

Raj Kapoor’s Iconic Lantern Donated To PM Museum In Tribute To Cinematic Icon
NM on the go

Nm on the go

Always be the first to hear from the PM. Get the App Now!
...
Prime Minister Narendra Modi to participate in the Post-Budget Webinar on "Agriculture and Rural Prosperity"
February 28, 2025
QuoteWebinar will foster collaboration to translate the vision of this year’s Budget into actionable outcomes

Prime Minister Shri Narendra Modi will participate in the Post-Budget Webinar on "Agriculture and Rural Prosperity" on 1st March, at around 12:30 PM via video conferencing. He will also address the gathering on the occasion.

The webinar aims to bring together key stakeholders for a focused discussion on strategizing the effective implementation of this year’s Budget announcements. With a strong emphasis on agricultural growth and rural prosperity, the session will foster collaboration to translate the Budget’s vision into actionable outcomes. The webinar will engage private sector experts, industry representatives, and subject matter specialists to align efforts and drive impactful implementation.