Quote"ರಾಷ್ಟ್ರೀಯ ರಕ್ಷಣೆ ಮತ್ತು ಶ್ರದ್ಧೆಯ ಈ ನೆಲದಲ್ಲಿ ನಿಮ್ಮೊಂದಿಗೆ ಇರಲು ನಾನು ಅದೃಷ್ಟ ಮಾಡಿದ್ದೇನೆ"
Quote"ಉತ್ತರಾಖಂಡದ ಪ್ರಗತಿ ಮತ್ತು ಅದರ ನಾಗರಿಕರ ಯೋಗಕ್ಷೇಮವು ನಮ್ಮ ಸರ್ಕಾರದ ಧ್ಯೇಯೋದ್ದೇಶದ ತಿರುಳಾಗಿದೆ"
Quote"ಈ ದಶಕವು ಉತ್ತರಾಖಂಡದ ದಶಕವಾಗಲಿದೆ"
Quote“ಉತ್ತರಾಖಂಡದ ಪ್ರತಿಯೊಂದು ಹಳ್ಳಿಯಲ್ಲೂ ದೇಶದ ರಕ್ಷಕರಿದ್ದಾರೆ”
Quote“ಹಳ್ಳಿಗಳನ್ನು ತೊರೆದಿರುವ ಜನರನ್ನು ಮರಳಿ ಕರೆತರುವುದು ನಮ್ಮ ಪ್ರಯತ್ನವಾಗಿದೆ. ಈ ಗ್ರಾಮಗಳಲ್ಲಿ ಪ್ರವಾಸೋದ್ಯಮವನ್ನು ವೃದ್ಧಿಸಲು ನಾವು ಬಯಸುತ್ತೇವೆ”
Quote"ನಮ್ಮ ಸರ್ಕಾರವು ತಾಯಂದಿರು ಮತ್ತು ಸಹೋದರಿಯರ ಪ್ರತಿಯೊಂದು ತೊಂದರೆ ಮತ್ತು ಅಸೌಕರ್ಯಗಳನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ"
Quote"ಉತ್ತರಾಖಂಡದಲ್ಲಿ ಪ್ರವಾಸೋದ್ಯಮ ಮತ್ತು ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳು ಈಗ ಫಲ ನೀಡುತ್ತಿವೆ"
Quote"ಉತ್ತರಾಖಂಡದ ಸಂಪರ್ಕದ ವಿಸ್ತರಣೆಯು ರಾಜ್ಯದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ"
Quote"ಅಮೃತ ಕಾಲವು ದೇಶದ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವರ್ಗವನ್ನು ಸೌಲಭ್ಯಗಳು, ಗೌರವ ಮತ್ತು ಸಮೃದ್ಧಿಯೊಂದಿಗೆ ಸಂಪರ್ಕಿಸುವ ಸಮಯವಾಗಿದೆ"

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!
 
ಉತ್ತರಾಖಂಡದ ಜನಪ್ರಿಯ ಮತ್ತು ಯುವ ಮುಖ್ಯಮಂತ್ರಿ ಭಾಯಿ ಪುಷ್ಕರ್ ಸಿಂಗ್ ಧಾಮಿ ಜಿ, ಕೇಂದ್ರ ಸಚಿವ ಶ್ರೀ ಅಜಯ್ ಭಟ್ ಜಿ, ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜಿ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಜಿ, ಉತ್ತರಾಖಂಡ ಸರ್ಕಾರದ ಸಚಿವರು, ಎಲ್ಲಾ ಸಂಸದರು, ಶಾಸಕರು, ಇಲ್ಲಿ ನೆರೆದಿರುವ ಗಣ್ಯರು ಮತ್ತು ದೈವಭೂಮಿಯ ನನ್ನ ಆತ್ಮೀಯ ಕುಟುಂಬ ಸದಸ್ಯರೆ, ನಿಮ್ಮೆಲ್ಲರಿಗೂ ಶುಭಾಶಯಗಳು! ಇಂದು ಉತ್ತರಾಖಂಡ ಅದ್ಭುತಗಳನ್ನು ಮಾಡಿದೆ. ಇಂತಹ ದೃಶ್ಯವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಈ ಹಿಂದೆ ಯಾರಿಗೂ ಸಿಕ್ಕಿರಲಿಕ್ಕಿಲ್ಲ. ನಾನು ಬೆಳಗ್ಗೆಯಿಂದ ಉತ್ತರಾಖಂಡದಾದ್ಯಂತ ಹೋದಾಗ, ನಾನು ಅಪಾರ ಪ್ರೀತಿ ಮತ್ತು ಆಶೀರ್ವಾದಗಳನ್ನು ಪಡೆದಿದ್ದೇನೆ. ಅದು ಪ್ರೀತಿ ನದಿ (ಗಂಗೆ) ಹರಿಯುತ್ತಿರುವಂತೆ ಭಾಸವಾಗುತ್ತಿತ್ತು.
 
ಆಧ್ಯಾತ್ಮಿಕತೆ ಮತ್ತು ಸರಿಸಾಟಿಯಿಲ್ಲದ ಶೌರ್ಯದ ಈ ನೆಲೆವೀಡಿಗೆ ನಾನು ವಂದಿಸುತ್ತೇನೆ. ನಾನು ವಿಶೇಷವಾಗಿ ಧೈರ್ಯಶಾಲಿ ತಾಯಂದಿರನ್ನು ಅಭಿನಂದಿಸುತ್ತೇನೆ. ಬದರಿನಾಥ್ ಧಾಮದಲ್ಲಿ "ಜೈ ಬದ್ರಿ-ವಿಶಾಲ್" ಎಂಬ ಕದನದ ಕೂಗು ಎದ್ದಾಗ, ಗರ್ವಾಲ್ ರೈಫಲ್ಸ್‌ನ ಧೈರ್ಯಶಾಲಿಗಳ ಉತ್ಸಾಹ ಮತ್ತು ಹುರುಪು ಮೂಡುತ್ತದೆ. ಗಂಗೊಳ್ಳಿಹತ್‌ನ ಕಾಳಿಕಾ ದೇವಸ್ಥಾನದ ಗಂಟೆಗಳು "ಜೈ ಮಹಾಕಾಳಿ" ಎಂಬ ರಣಘೋಷದೊಂದಿಗೆ ಪ್ರತಿಧ್ವನಿಸಿದಾಗ, ಕುಮಾವೂನ್ ರೆಜಿಮೆಂಟ್‌ನ ವೀರರಲ್ಲಿ ಅದಮ್ಯ ಧೈರ್ಯ ಹರಿಯಲಾರಂಭಿಸುತ್ತದೆ. ಇಲ್ಲಿ ನಾವು ಮಾನಸಖಂಡದ ಬಾಗೇಶ್ವರನ ವೈಭವ ಹೊಂದಿದ್ದೇವೆ, ಬೈಜನಾಥ, ನಂದಾದೇವಿ, ಗೋಲು ದೇವತಾ, ಪೂರ್ಣಗಿರಿ, ಕಾಸರ್ ದೇವಿ, ಕೈಂಚಿ ಧಾಮ್, ಕತರ್ಮಲ್, ನಾನಕಮಟ್ಟಾ, ರೀತಾ ಸಾಹಿಬ್ ಮತ್ತು ಅಸಂಖ್ಯಾತ ಯಾತ್ರಾ ಸ್ಥಳಗಳನ್ನು ಹೊಂದಿದ್ದೇವೆ. ನಾವು ಶ್ರೀಮಂತ ಪರಂಪರೆ ಹೊಂದಿದ್ದೇವೆ. ನಾನು ರಾಷ್ಟ್ರೀಯ ಸಂರಕ್ಷಣೆ ಮತ್ತು ಆಧ್ಯಾತ್ಮಿಕತೆಯ ಈ ಯಾತ್ರಾ ಕೇಂದ್ರಕ್ಕೆ ಬಂದಾಗ ಮತ್ತು ನಿಮ್ಮೆಲ್ಲರ ಬಗ್ಗೆ ಯೋಚಿಸಿದಾಗ, ನಾನು ನಿಜಕ್ಕೂ ಆಶೀರ್ವದಿಸಲ್ಪಡುತ್ತಿದ್ದೇನೆ.

 

|

 ನನ್ನ ಕುಟುಂಬ ಸದಸ್ಯರೆ,
ಇಲ್ಲಿಗೆ ಬರುವ ಮೊದಲು ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ಧಾಮದಲ್ಲಿ ಪೂಜೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಪ್ರತಿಯೊಬ್ಬ ದೇಶವಾಸಿಯ ಉತ್ತಮ ಆರೋಗ್ಯಕ್ಕಾಗಿ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಂಕಲ್ಪ ಬಲಪಡಿಸಲು ಮತ್ತು ನನ್ನ ಉತ್ತರಾಖಂಡದ ಎಲ್ಲಾ ಕನಸುಗಳು ಮತ್ತು ನಿರ್ಣಯಗಳನ್ನು ಈಡೇರಿಸಲು ನಾನು ದೇವರ ಆಶೀರ್ವಾದ ಕೋರಿದ್ದೇನೆ. ಸ್ವಲ್ಪ ಸಮಯದ ಹಿಂದೆ, ನಾನು ನಮ್ಮ ಗಡಿ ಕಾವಲುಗಾರರನ್ನು ಮತ್ತು ನಮ್ಮ ಸೈನಿಕರನ್ನು ಭೇಟಿಯಾಗಿದ್ದೆ. ಸ್ಥಳೀಯ ಕಲೆ ಮತ್ತು ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ನಮ್ಮ ಎಲ್ಲಾ ಸಹೋದರ ಸಹೋದರಿಯರನ್ನು ಭೇಟಿ ಮಾಡುವ ಅವಕಾಶವೂ ನನಗೆ ಸಿಕ್ಕಿತು. ಈ ರೀತಿಯಾಗಿ, ನನ್ನ ಹೊಸ ರೀತಿಯ ಪ್ರಯಾಣವು ಭಾರತದ ಸಂಸ್ಕೃತಿ, ಭಾರತದ ಭದ್ರತೆ ಮತ್ತು ಭಾರತದ ಸಮೃದ್ಧಿಗೆ ಸಂಬಂಧಿಸಿದ ಈ 3 ಅಂಶಗಳೊಂದಿಗೆ ಸಂಬಂಧ ಹೊಂದಿದೆ. ಈ ಒಂದೇ ಪ್ರಯಾಣದಲ್ಲಿ ಎಲ್ಲದರ ದರ್ಶನ ಪಡೆದೆ. ಉತ್ತರಾಖಂಡದ ಈ ಶಕ್ತಿ ಅದ್ಭುತ ಮತ್ತು ಅಪ್ರತಿಮವಾಗಿದೆ. ಅದಕ್ಕಾಗಿಯೇ ನಾನು ಬಾಬಾ ಕೇದಾರನ ಪಾದದಲ್ಲಿ ಒಂದು ಹರಕೆ ಹೊತ್ತಿದ್ದೇನೆ. ಈ ದಶಕವು ಉತ್ತರಾಖಂಡದ ದಶಕವಾಗಲಿದೆ ಎಂದು ನಾನು ನಂಬುತ್ತೇನೆ. ಇಂದು ನಾನು ಆದಿ ಕೈಲಾಸಕ್ಕೆ ಹೋಗಿದ್ದೆ. ಹಾಗಾಗಿ ಮತ್ತೊಮ್ಮೆ ನನ್ನ ನಂಬಿಕೆಯನ್ನು ಪುನರುಚ್ಚರಿಸುತ್ತೇನೆ.
ಉತ್ತರಾಖಂಡವು ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಮಗೆ ಜೀವನವನ್ನು ಸುಲಭಗೊಳಿಸಲು, ನಮ್ಮ ಸರ್ಕಾರವು ಇಂದು ಸಂಪೂರ್ಣ ಪ್ರಾಮಾಣಿಕತೆ, ಸಂಪೂರ್ಣ ಸಮರ್ಪಣೆ ಮತ್ತು ಒಂದೇ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಇದೀಗ 4,000 ಕೋಟಿ ರೂ.ಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳು ಉದ್ಘಾಟನೆ ಮತ್ತು ಶಂಕುಸ್ಥಾಪನೆಯಾಗಿದೆ. ಒಂದೇ ಕಾರ್ಯಕ್ರಮದಲ್ಲಿ 4,000 ಕೋಟಿ ರೂ.! ಉತ್ತರಾಖಂಡದ ನನ್ನ ಸಹೋದರ ಸಹೋದರಿಯರು ನೀವೆಲ್ಲಾ ಊಹಿಸಬಲ್ಲಿರಾ? ಈ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
 
ನನ್ನ ಕುಟುಂಬ ಸದಸ್ಯರೆ,
ಈ ದಾರಿಗಳು ನನಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಉತ್ತರಾಖಂಡಕ್ಕೆ ಸೇರಿದ ಈ ಭಾವ ನನ್ನಲ್ಲಿ ಸದಾ ಉಳಿದಿದೆ. ನೀವು ಸಹ ನನ್ನೊಂದಿಗೆ ಅದೇ ರೀತಿಯ ಸಂಬಂಧ ಮತ್ತು ಪ್ರೀತಿಯೊಂದಿಗೆ ಸಂಪರ್ಕದಲ್ಲಿರುವುದನ್ನು ನಾನು ನೋಡಿದ್ದೇನೆ. ಉತ್ತರಾಖಂಡದ ದೂರದ ಹಳ್ಳಿಗಳಿಂದಲೂ ಅನೇಕ ಸ್ನೇಹಿತರು ನನಗೆ ಪತ್ರಗಳನ್ನು ಬರೆಯುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಅವರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ಕುಟುಂಬದಲ್ಲಿ ಹೊಸ ಸದಸ್ಯರು ಜನಿಸಿದರೆ, ಅವರು ನನಗೆ ಸುದ್ದಿ ಕಳುಹಿಸುತ್ತಾರೆ. ಅವರ ಮಗಳು ತನ್ನ ಅಧ್ಯಯನದಲ್ಲಿ ಮೇಲುಗೈ ಸಾಧಿಸಿದರೆ, ಅವರು ಪತ್ರಗಳನ್ನು ಬರೆಯುತ್ತಾರೆ. ಅಂದರೆ, ನಾನು ಇಡೀ ಉತ್ತರಾಖಂಡ ಕುಟುಂಬದ ಸದಸ್ಯನಂತೆ. ಈಗ ಉತ್ತರಾಖಂಡ ನನ್ನೊಂದಿಗೆ ಸಂಪೂರ್ಣ ಸಂಪರ್ಕ ಹೊಂದಿದೆ.
ದೇಶವು ಏನಾದರೂ ದೊಡ್ಡದನ್ನು ಸಾಧಿಸಿದಾಗ ನೀವು ಸಂತೋಷ ಹಂಚಿಕೊಳ್ಳುತ್ತೀರಿ. ನೀವು ಸುಧಾರಣೆಯ ಯಾವುದೇ ಅವಕಾಶ ನೋಡಿದರೆ, ಅದನ್ನು ಹೇಳಲು ನೀವು ಎಂದಿಗೂ ಹಿಂಜರಿಯುವುದಿಲ್ಲ. ಇತ್ತೀಚೆಗೆ ದೇಶವು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ಮಹತ್ವದ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. 30-40 ವರ್ಷಗಳಿಂದ ಬಾಕಿಯಿದ್ದ ಕೆಲಸವನ್ನು ನಿಮ್ಮ ಸಹೋದರ, ನಿಮ್ಮ ಮಗನು ತನ್ನ ತಾಯಿ ಮತ್ತು ಸಹೋದರಿಯರ ಆಶೀರ್ವಾದದಿಂದ ಸಾಧಿಸಿದ್ದಾನೆ. ಕುತೂಹಲಕಾರಿ ಎಂದರೆ, ಆ ಸಮಯದಲ್ಲಿ ಸಹ ಇಲ್ಲಿನ ಸಹೋದರಿಯರು ನನಗೆ ಹಲವಾರು ಪತ್ರಗಳನ್ನು ಕಳುಹಿಸಿದ್ದಾರೆ.

 

|

 ನನ್ನ ಕುಟುಂಬ ಸದಸ್ಯರೆ,
ನಿಮ್ಮೆಲ್ಲರ ಆಶೀರ್ವಾದದಿಂದ ಇಂದು ಭಾರತವು ಅಭಿವೃದ್ಧಿಯ ಹೊಸ ಎತ್ತರದತ್ತ ಸಾಗುತ್ತಿದೆ. ಭಾರತ ಮತ್ತು ಭಾರತೀಯರನ್ನು ವಿಶ್ವಾದ್ಯಂತ ಪ್ರಶಂಸಿಸಲಾಗುತ್ತಿದೆ. ಇದು ನಡೆಯುತ್ತಿದೆ, ಅಲ್ಲವೇ? ವಿಶ್ವಾದ್ಯಂತ ಭಾರತದ ಧ್ವನಿ ಕೇಳಿಬರುತ್ತಿದೆ, ಅಲ್ಲವೇ? ಒಂದು ಕಾಲದಲ್ಲಿ ಸುತ್ತಲೂ ಹತಾಶೆಯ ವಾತಾವರಣವಿತ್ತು. ಇಡೀ ದೇಶವೇ ಹತಾಶೆಯಲ್ಲಿ ಮುಳುಗಿದಂತೆ ಕಾಣುತ್ತಿತ್ತು. ಆ ಸಮಯದಲ್ಲಿ ಭಾರತವು ತನ್ನ ಸವಾಲುಗಳಿಂದ ಆದಷ್ಟು ಬೇಗ ಹೊರಬರಲಿ ಎಂದು ಪ್ರತಿ ದೇವಸ್ಥಾನಕ್ಕೂ ಹೋಗಿ ಪ್ರಾರ್ಥಿಸುತ್ತಿದ್ದೆವು. ಪ್ರತಿಯೊಬ್ಬ ಭಾರತೀಯ ದೇಶವನ್ನು ಸಾವಿರಾರು ಕೋಟಿ ರೂ. ಹಗರಣಗಳಿಂದ ಮುಕ್ತಗೊಳಿಸಲು ಬಯಸಿದ್ದ. ಭಾರತವು ಖ್ಯಾತಿ ಮತ್ತು ಜನಪ್ರಿಯತೆ ಗಳಿಸಲಿ ಎಂದು ಎಲ್ಲರೂ ಹಾರೈಸಿದರು.
ಇಂದು ಈ ಜಗತ್ತು ವಿವಿಧ ಸವಾಲುಗಳಿಂದ ಸುತ್ತುವರಿದಿದೆ. ನೀವು ಪ್ರಪಂಚದ ಸ್ಥಿತಿಯನ್ನು ನೋಡಬಹುದು. ಆದರೆ ಸವಾಲುಗಳಿಂದ ಸುತ್ತುವರಿದ ಜಗತ್ತಿನಲ್ಲಿ ಭಾರತದ ಧ್ವನಿ ದೃಢವಾಗುತ್ತಿದೆ. ಕೆಲವೇ ವಾರಗಳ ಹಿಂದೆ ಜಿ-20 ಅಂತಹ ಅದ್ಧೂರಿ ಕಾರ್ಯಕ್ರಮ ಇಲ್ಲಿ ನಡೆಯಿತು. ಅಲ್ಲಿಯೂ ಕೂಡ ನಮ್ಮ ಭಾರತೀಯರ ಶಕ್ತಿಯನ್ನು ಜಗತ್ತು ಹೇಗೆ ಗುರುತಿಸಿದೆ ಎಂಬುದನ್ನು ನೀವು ನೋಡಿದ್ದೀರಿ. ನೀವೇ ಹೇಳಿ, ಜಗತ್ತು ಭಾರತವನ್ನು ಹೊಗಳಿದಾಗ, ಭಾರತದ ಧ್ವನಿ ಜಗತ್ತಿನಲ್ಲಿ ಪ್ರತಿಧ್ವನಿಸಿದಾಗ ನಿಮಗೆ ಇಷ್ಟವಾಗುತ್ತದೆಯೇ? ನೀವು ನನಗೆ ಉತ್ತರಿಸುವಿರಾ? ನಾನು ನಿಮ್ಮನ್ನು ಕೇಳಬಹುದೇ, ಮತ್ತು ನೀವು ನನಗೆ ಹೇಳುವಿರಾ? ಭಾರತದ ಹೆಸರು ಜಗತ್ತಿನಲ್ಲಿ ಬೆಳಗಿದಾಗ ನೀವು ಇಷ್ಟಪಡುತ್ತೀರಾ? ಜೋರಾಗಿ ಹೇಳಿ, ನಿಮಗೆ ಇಷ್ಟವಾಯಿತೇ? ಭಾರತವು ಜಗತ್ತಿಗೆ ಒಂದು ದಿಕ್ಕು ತೋರಿಸಿದಾಗ ನೀವು ಅದನ್ನು ಇಷ್ಟಪಡುತ್ತೀರಾ ತಾನೆ?
ಇದನ್ನೆಲ್ಲಾ ಮಾಡಿದ್ದು ಯಾರು? ಇದನ್ನೆಲ್ಲಾ ಮಾಡಿದ್ದು ಯಾರು? ಮೋದಿ ಇದನ್ನು ಮಾಡಿಲ್ಲ. ಎಲ್ಲವನ್ನೂ ನೀವು ಮತ್ತು ನನ್ನ ಕುಟುಂಬ ಸದಸ್ಯರು ಮಾಡಿದ್ದೀರಾ. ಇದರ ಶ್ರೇಯಸ್ಸು ಸಾರ್ವಜನಿಕರಾದ ನಿಮ್ಮೆಲ್ಲರಿಗೂ ಸಲ್ಲುತ್ತದೆ. ಏಕೆ? ಏಕೆ ಎಂದು ನೆನಪಿಸಿಕೊಳ್ಳಿ! ಏಕೆಂದರೆ 30 ವರ್ಷಗಳ ನಂತರ, ದೆಹಲಿಯಲ್ಲಿ ಸ್ಥಿರ ಮತ್ತು ಬಲಿಷ್ಠ ಸರ್ಕಾರವನ್ನು ತರುವ ಮೂಲಕ ನಿಮ್ಮ ಸೇವೆ ಮಾಡಲು ನೀವು ನನಗೆ ಅವಕಾಶ ನೀಡಿದ್ದೀರಿ. ನಿಮ್ಮ ಮತದಲ್ಲಿ ಶಕ್ತಿ ಇದೆ. ವಿಶ್ವಾದ್ಯಂತ ಪ್ರಮುಖ ವ್ಯಕ್ತಿಗಳೊಂದಿಗೆ ನಾನು ಹಸ್ತಲಾಘವ ಮಾಡಿದಾಗ, ನಾನು ಅವರೊಂದಿಗೆ ಕಣ್ಣಿನ ಸಂಪರ್ಕ  ಮಾಡುವುದನ್ನು ನೀವು ನೋಡಿರಬೇಕು. ಅವರು ನನ್ನನ್ನು ನೋಡಿದಾಗ, 140 ಕೋಟಿ ಭಾರತೀಯರನ್ನು ನೋಡುತ್ತಾರೆ.
 
ನನ್ನ ಕುಟುಂಬ ಸದಸ್ಯರೆ,
ದೂರದ ಪರ್ವತಗಳಲ್ಲಿ ಮತ್ತು ದೇಶದ ಪ್ರತಿಯೊಂದು ಅನತಿ ಮೂಲೆಯಲ್ಲಿ ವಾಸಿಸುವ ಜನರ ಬಗ್ಗೆಯೂ ನಾವು ಯೋಚಿಸಿದ್ದೇವೆ. ಹಾಗಾಗಿ ಕೇವಲ 5 ವರ್ಷಗಳಲ್ಲಿ ದೇಶದ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 13.5 ಕೋಟಿ ಜನರು - ಈ ಅಂಕಿ ಅಂಶ ನಿಮಗೆ ನೆನಪಿದೆಯೇ? ನೀವು ಆಕೃತಿಯನ್ನು ನೆನಪಿಸಿಕೊಳ್ಳುತ್ತೀರಾ? ಐದು ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬರುತ್ತಿರುವುದು ಜಗತ್ತಿಗೆ ಅಚ್ಚರಿ ತಂದಿದೆ. ಈ 13.5 ಕೋಟಿ ಜನರು ಯಾರು? ಈ ಜನರಲ್ಲಿ ಅನೇಕರು ನಿಮ್ಮಂತೆ ಪರ್ವತಗಳಲ್ಲಿ ಮತ್ತು ಅನತಿ ದೂರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತವು ತನ್ನ ಬಡತನವನ್ನು ನಿರ್ಮೂಲನೆ ಮಾಡುತ್ತದೆ ಎಂಬುದಕ್ಕೆ ಈ 13.5 ಕೋಟಿ ಜನರು ಉದಾಹರಣೆಯಾಗಿದ್ದಾರೆ.

|

ಸ್ನೇಹಿತರೆ,
ಇದಕ್ಕೂ ಮುನ್ನ 'ಗರೀಬಿ ಹಠಾವೋ' ಘೋಷಣೆಗಳು ಮೊಳಗಿದವು. ಇದರರ್ಥ ನೀವು ಅದನ್ನು ನಿರ್ಮೂಲನೆ ಮಾಡಬೇಕು; ಅವರು ಬಡತನ ತೊಡೆದುಹಾಕಲು ನಿಮ್ಮನ್ನು ಕೇಳಿದರು. ಆದರೆ ಮೋದಿ ಅವರು ಒಟ್ಟಾಗಿ ಬಡತನ ನಿರ್ಮೂಲನೆಯನ್ನು ಮುಂದುವರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ನಮ್ಮೆಲ್ಲಾ ಪ್ರಯತ್ನಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡುತ್ತೇವೆ. ಇಂದು ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಂದು ಕ್ಷೇತ್ರ ಮತ್ತು ಪ್ರತಿಯೊಂದು ವಲಯದಲ್ಲೂ ಎತ್ತರಕ್ಕೆ ಹಾರುತ್ತಿದೆ. ನಮ್ಮ ಚಂದ್ರಯಾನ ಜಗತ್ತಿನ ಯಾವುದೇ ದೇಶ ತಲುಪಲು ಸಾಧ್ಯವಾಗದ ಸ್ಥಳಕ್ಕೆ ತಲುಪಿದೆ. ಭಾರತವು ಚಂದ್ರಯಾನದಿಂದ ಮುಟ್ಟಿದ ಸ್ಥಳಕ್ಕೆ ಶಿವ-ಶಕ್ತಿ ಎಂದು ಹೆಸರಿಸಿದೆ. ನನ್ನ ಉತ್ತರಾಖಂಡದ ಜನರೇ, ಶಿವ-ಶಕ್ತಿಯ ಕಲ್ಪನೆಯಿಂದ ನಿಮಗೆ ಸಂತೋಷವಾಗಿದೆಯೇ ಅಥವಾ ಇಲ್ಲವೇ? ಅಂದರೆ ನನ್ನ ಉತ್ತರಾಖಂಡದ ಗುರುತು ಅಲ್ಲಿಗೂ ತಲುಪಿದೆ. ಶಿವ ಮತ್ತು ಶಕ್ತಿಯ ಈ ಏಕೀಕರಣದ ಅರ್ಥವನ್ನು ಉತ್ತರಾಖಡದಲ್ಲಿ ಕಲಿಸುವ ಅಗತ್ಯವಿಲ್ಲ. ಇದು ಇಲ್ಲಿ ಪ್ರತಿ ಹಂತದಲ್ಲೂ ಸ್ಪಷ್ಟವಾಗಿ ಅದು ಗೋಚರಿಸುತ್ತದೆ.
 
ಸ್ನೇಹಿತರೆ,
ಬಾಹ್ಯಾಕಾಶದಲ್ಲಿ ಮಾತ್ರವಲ್ಲದೆ ಕ್ರೀಡೆಯಲ್ಲೂ ಭಾರತದ ಶಕ್ತಿಯನ್ನು ಇಂದು ಜಗತ್ತು ನೋಡುತ್ತಿದೆ. ಇತ್ತೀಚೆಗೆ ಏಷ್ಯನ್ ಗೇಮ್ಸ್ ಮುಗಿದಿದೆ. ಕ್ರೀಡಾಕೂಟದಲ್ಲಿ ಭಾರತವು ಎಲ್ಲಾ ಐತಿಹಾಸಿಕ ದಾಖಲೆಗಳನ್ನು ಮುರಿದಿದೆ. ಇದೇ ಮೊದಲ ಬಾರಿಗೆ ಭಾರತದ ಆಟಗಾರರು ಶತಕ ಸಿಡಿಸಿ 100ಕ್ಕೂ ಹೆಚ್ಚು ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ದಯವಿಟ್ಟು ಸ್ವಲ್ಪ ಜೋರಾಗಿ ಚಪ್ಪಾಳೆ ತಟ್ಟಿ. ಉತ್ತರಾಖಂಡದ 8 ಪುತ್ರರು ಮತ್ತು ಪುತ್ರಿಯರು ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿದರು. ನಮ್ಮ ಲಕ್ಷ್ಯ ಸೇನ್ ಅವರ ತಂಡವು ಪದಕ ಗೆದ್ದಿದೆ. ವಂದನಾ ಕಟಾರಿಯಾ ಅವರ ಹಾಕಿ ತಂಡವು ದೇಶಕ್ಕೆ ಪದಕ ತಂದಿದೆ. ಉತ್ತರಾಖಂಡದ ಈ ಮಕ್ಕಳು ಅದ್ಭುತಗಳನ್ನು ಮಾಡಿದ್ದಾರೆ! ನೀವು ಒಂದು ಕೆಲಸ ಮಾಡುತ್ತೀರಾ? ನಿಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆಯಿರಿ ಮತ್ತು ಅವುಗಳ ಬ್ಯಾಟರಿ ದೀಪಗಳನ್ನು ಆನ್ ಮಾಡಿ. ನಿಮ್ಮ ಬ್ಯಾಟರಿ ದೀಪಗಳನ್ನು ಬಳಸಿಕೊಂಡು ಈ ಎಲ್ಲಾ ಆಟಗಾರರನ್ನು ಅಭಿನಂದಿಸಿ. ಎಲ್ಲರೂ, ನಿಮ್ಮ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಫ್ಲ್ಯಾಷ್‌ಲೈಟ್‌ಗಳನ್ನು ಆನ್ ಮಾಡಿ. ಇದು ಉತ್ತರಾಖಂಡದ ಮಕ್ಕಳಿಗೆ, ನಮ್ಮ ಆಟಗಾರರಿಗೆ ನಾವು ಸಲ್ಲಿಸುವ ಅಭಿನಂದನೆಗಳಾಗಿವೆ. ನಾನು ಮತ್ತೊಮ್ಮೆ ದೇವಭೂಮಿಯ ನನ್ನ ಯುವ ಪುತ್ರರು ಮತ್ತು ಪುತ್ರಿಯರನ್ನು ಮತ್ತು ಈ ಆಟಗಾರರನ್ನು ಅಭಿನಂದಿಸುತ್ತೇನೆ. ನೀವೂ ಕೂಡ ಇಂದು ಗರಿಯನ್ನು ಸೇರಿಸಿದ್ದೀರಿ.
 

|

ಸ್ನೇಹಿತರೆ,
ಕುಳಿತು ಕೊಳ್ಳಿ, ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಭಾರತದ ಆಟಗಾರರಿಗೆ ಸರ್ಕಾರವು ಸಂಪೂರ್ಣ ಬೆಂಬಲ ನೀಡುತ್ತಿದೆ, ಇದರಿಂದಾಗಿ ಅವರು ದೇಶದೊಳಗೆ ಮತ್ತು ವಿಶ್ವಾದ್ಯಂತ ಯಶಸ್ಸಿನ ಎತ್ತರ ಮುಟ್ಟಬಹುದು. ಆಟಗಾರರ ಆಹಾರದಿಂದ ಹಿಡಿದು ಆಧುನಿಕ ತರಬೇತಿಯವರೆಗೆ ಸರಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ, ಇದು ನಿಜ. ಸರ್ಕಾರವು ಆಟಗಾರರಿಗಾಗಿ ಇದನ್ನು ಮಾಡುತ್ತಿದೆ. ಆದರೆ ಲಕ್ಷ್ಯ ಕುಟುಂಬ ಮತ್ತು ಲಕ್ಷ್ಯಾ ಅವರು ಗೆದ್ದಾಗಲೆಲ್ಲಾ ನನಗೆ ವಿಶೇಷ ಸಿಹಿತಿಂಡಿಗಳನ್ನು ತರುತ್ತಾರೆ. ಆಟಗಾರರು ಹೆಚ್ಚು ದೂರ ಪ್ರಯಾಣಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ವಿವಿಧ ಸ್ಥಳಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸುತ್ತಿದೆ. ಇಂದು ಸ್ವತಃ ಹಲ್ದ್ ವಾನಿಯಲ್ಲಿ ಹಾಕಿ ಮೈದಾನ ಮತ್ತು ರುದ್ರಪುರದ ವೆಲೋಡ್ರೋಮ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನನ್ನ ಯುವಕರೇ, ದೊಡ್ಡ ಚಪ್ಪಾಳೆ ನೀಡಿ. ನಿಮಗಾಗಿ ಕೆಲಸ ಮಾಡಲಾಗುತ್ತಿದೆ. ನನ್ನ ಉತ್ತರಾಖಂಡದ ಯುವಕರು ಇದರಿಂದ ಪ್ರಯೋಜನ ಪಡೆಯುತ್ತಾರೆ. ರಾಷ್ಟ್ರೀಯ ಕ್ರೀಡಾಕೂಟಕ್ಕೆ ಉತ್ಸಾಹದಿಂದ ತಯಾರಿ ನಡೆಸುತ್ತಿರುವ ಧಾಮಿ ಜಿ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ನಿಮಗೆ ಮತ್ತು ನಿಮ್ಮ ಇಡೀ ತಂಡಕ್ಕೆ ಅನೇಕ ಅಭಿನಂದನೆಗಳು!
ನನ್ನ ಕುಟುಂಬ ಸದಸ್ಯರೆ,
ಉತ್ತರಾಖಂಡದ ಪ್ರತಿ ಹಳ್ಳಿಯಲ್ಲೂ ದೇಶ ರಕ್ಷಕರಿದ್ದಾರೆ. ಇಲ್ಲಿನ ವೀರ ತಾಯಂದಿರು ನನ್ನ ದೇಶವನ್ನು ರಕ್ಷಿಸುವ ವೀರ ಪುತ್ರರಿಗೆ ಜನ್ಮ ನೀಡಿದ್ದಾರೆ. ‘ಒಂದು ಶ್ರೇಣಿ ಒಂದು ಪಿಂಚಣಿ’ ಎಂಬ ಅವರ ದಶಕಗಳ ಬೇಡಿಕೆಯನ್ನು ನಮ್ಮದೇ ಸರ್ಕಾರ ಈಡೇರಿಸಿದೆ. ಇದುವರೆಗೆ ನಮ್ಮ ಸರ್ಕಾರ ಮಾಜಿ ಸೈನಿಕರಿಗೆ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಅಡಿ, 70 ಸಾವಿರ ಕೋಟಿ ರೂ. ಒದಗಿಸಿದ್ದು, ಉತ್ತರಾಖಂಡದ 75,000ಕ್ಕೂ ಹೆಚ್ಚು ಮಾಜಿ ಸೈನಿಕರ ಕುಟುಂಬಗಳೂ ಇದರ ಪ್ರಯೋಜನ ಪಡೆದಿವೆ. ಗಡಿ ಭಾಗದ ಅಭಿವೃದ್ಧಿಯೂ ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಇಂದು ಗಡಿ ಪ್ರದೇಶಗಳಲ್ಲಿ ಸೌಲಭ್ಯಗಳ ಅಭಿವೃದ್ಧಿ ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಹಿಂದಿನ ಸರ್ಕಾರಗಳು ಇದನ್ನು ಏಕೆ ಮಾಡಲಿಲ್ಲ? ಇದು ನಿಮ್ಮ ತಪ್ಪು ಅಲ್ಲ. ಶತ್ರುಗಳು ಇದರ ಲಾಭ ಪಡೆದು ಗಡಿಯನ್ನು ನುಸುಳಬಹುದೆಂಬ ಭಯದಿಂದ ಹಿಂದಿನ ಸರ್ಕಾರಗಳು ಗಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಿಲ್ಲ. ಇದು ಅವರು ನೀಡಿದ ವಾದವಾಗಿತ್ತು. ಹಿಂದಿನ ಸರಕಾರಗಳ ಈ ಭಯದ ಚಿಂತನೆ ಬಿಟ್ಟು ಇಂದಿನ ನವ ಭಾರತ ಮುನ್ನಡೆಯುತ್ತಿದೆ. ನಾವು ಹೆದರುವುದಿಲ್ಲ ಅಥವಾ ಜನರನ್ನು ಹೆದರಿಸುವುದಿಲ್ಲ.
 
ನಾವು ಭಾರತದ ಗಡಿ ಭಾಗಗಳಲ್ಲಿ ಆಧುನಿಕ ರಸ್ತೆಗಳು, ಸುರಂಗಗಳು ಮತ್ತು ಸೇತುವೆಗಳನ್ನು ನಿರ್ಮಿಸುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ ಗಡಿ ಪ್ರದೇಶವೊಂದರಲ್ಲೇ 4,200 ಕಿಲೋಮೀಟರ್‌ಗೂ ಹೆಚ್ಚಿನ ರಸ್ತೆಗಳನ್ನು ನಿರ್ಮಿಸಲಾಗಿದೆ. ನಾವು ಗಡಿಯಲ್ಲಿ ಸುಮಾರು 250 ಪ್ರಮುಖ ಸೇತುವೆಗಳು ಮತ್ತು 22 ಸುರಂಗಗಳನ್ನು ನಿರ್ಮಿಸಿದ್ದೇವೆ. ಇಂದಿಗೂ ಈ ಕಾರ್ಯಕ್ರಮದಲ್ಲಿ ಹಲವು ಹೊಸ ಸೇತುವೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈಗ ಗಡಿ ಪ್ರದೇಶಗಳಿಗೂ ರೈಲು ತರಲು ಸಿದ್ಧತೆ ನಡೆಸಿದ್ದೇವೆ. ಈ ಬದಲಾದ ಮನಸ್ಥಿತಿಯ ಲಾಭವನ್ನು ಉತ್ತರಾಖಂಡವೂ ಪಡೆಯಲಿದೆ.
 

|

ನನ್ನ ಕುಟುಂಬ ಸದಸ್ಯರೆ,
ಮೊದಲು ಗಡಿ ಪ್ರದೇಶಗಳು, ಗಡಿ ಗ್ರಾಮಗಳನ್ನು ದೇಶದ ಕಟ್ಟಕಡೆಯ ಗ್ರಾಮಗಳೆಂದು ಪರಿಗಣಿಸಲಾಗಿತ್ತು. ಕೊನೆಯದು ಎಂದು ಪರಿಗಣಿಸಲಾದ ಯಾವುದನ್ನಾದರೂ ಅಭಿವೃದ್ಧಿಯ ವಿಷಯದಲ್ಲಿ ಕನಿಷ್ಠ ಆದ್ಯತೆ ನೀಡಲಾಗುತ್ತಿತ್ತು. ಇದು ಕೂಡ ಹಳೆಯ ವಿಚಾರವಾಗಿತ್ತು. ನಾವು ಗಡಿ ಗ್ರಾಮಗಳನ್ನು ದೇಶದ ಕೊನೆಯ ಗ್ರಾಮವನ್ನಲ್ಲ, ಆದ್ಯತೆಯ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಆರಂಭಿಸಿದ್ದೇವೆ. ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದಡಿ, ಇದೇ ರೀತಿಯ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿಂದ ವಲಸೆ ಹೋಗಿರುವ ಜನರು ಮರಳಿ ಬರಬೇಕು ಎಂಬುದು ನಮ್ಮ ಪ್ರಯತ್ನ. ಈ ಹಳ್ಳಿಗಳಲ್ಲಿ ಪ್ರವಾಸೋದ್ಯಮ ವಿಸ್ತರಿಸಲು ಮತ್ತು ತೀರ್ಥಯಾತ್ರೆ ವಿಸ್ತರಿಸಲು ನಾವು ಬಯಸುತ್ತೇವೆ.
 
ನನ್ನ ಕುಟುಂಬ ಸದಸ್ಯರೆ,
'ಬೆಟ್ಟಗಳ ನೀರು ಮತ್ತು ಯುವ ಶಕ್ತಿ ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶದಿಂದ ಬಳಕೆಯಾಗದೆ ಉಳಿಯುತ್ತದೆ' ಎಂಬ ಹಳೆಯ ಮಾತು ಇದೆ. ನಾನು ಈ ಪರಿಕಲ್ಪನೆಯನ್ನು ಸಹ ಬದಲಾಯಿಸುತ್ತೇನೆ ಎಂದು ನಿರ್ಧರಿಸಿದೆ. ಹಿಂದಿನ ತಪ್ಪು ನೀತಿಗಳಿಂದಾಗಿ ಉತ್ತರಾಖಂಡದ ಅನೇಕ ಹಳ್ಳಿಗಳು ನಿರ್ಜನವಾಗಿರುವುದನ್ನು ನೀವು ನೋಡಿದ್ದೀರಿ. ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಔಷಧ, ಆದಾಯ, ಎಲ್ಲದರ ಕೊರತೆ ಇತ್ತು. ಈ ಸೌಕರ್ಯಗಳ ಕೊರತೆಯಿಂದಾಗಿ ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಈಗ ಪರಿಸ್ಥಿತಿಗಳು ಬದಲಾಗುತ್ತಿವೆ. ಉತ್ತರಾಖಂಡದಲ್ಲಿ ಹೊಸ ಅವಕಾಶಗಳು ಮತ್ತು ಹೊಸ ಸೌಲಭ್ಯಗಳು ಅಭಿವೃದ್ಧಿಯಾಗುತ್ತಿದ್ದಂತೆ, ಅನೇಕ ಸ್ನೇಹಿತರು ತಮ್ಮ ಹಳ್ಳಿಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಸರ್ಕಾರದ ಡಬಲ್ ಇಂಜಿನ್ ಪ್ರಯತ್ನದಿಂದಾಗಿ ಜನರು ಹಳ್ಳಿಗಳಿಗೆ ಮರಳಲು ಸಹಾಯ ಮಾಡುವ ಈ ಕಾರ್ಯ ವೇಗವಾಗಿ ನಡೆಯುತ್ತಿದೆ. ಅದಕ್ಕಾಗಿಯೇ ಈ ರಸ್ತೆಗಳು, ವಿದ್ಯುತ್ ಯೋಜನೆಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು ಮತ್ತು ಮೊಬೈಲ್ ಫೋನ್ ಟವರ್‌ಗಳ ಮೇಲೆ ಇಂತಹ ಬೃಹತ್ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಇಂದು ಇವುಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಇಲ್ಲಿ ಪ್ರಾರಂಭಿಸಲಾಗಿದೆ.
ಇಲ್ಲಿ ಸೇಬಿನ ತೋಟಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲು ಸಾಕಷ್ಟು ಸಾಧ್ಯತೆಗಳಿವೆ. ಈಗ ಇಲ್ಲಿ ರಸ್ತೆ ನಿರ್ಮಿಸಿ ನೀರು ಪೂರೈಕೆ ಆಗುತ್ತಿರುವುದರಿಂದ ನನ್ನ ರೈತ ಬಂಧುಗಳಿಗೂ ಪ್ರೋತ್ಸಾಹ ಸಿಗುತ್ತಿದೆ. ಇಂದು ಪಾಲಿಹೌಸ್ ನಿರ್ಮಿಸಿ ಸೇಬು ತೋಟ ಅಭಿವೃದ್ಧಿಪಡಿಸುವ ಯೋಜನೆಗಳೂ ಆರಂಭಗೊಂಡಿವೆ. ಈ ಯೋಜನೆಗಳ ಮೇಲೆ 1,100 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು. ಉತ್ತರಾಖಂಡದ ನಮ್ಮ ಸಣ್ಣ ರೈತರ ಜೀವನ ಸುಧಾರಿಸಲು ಇಷ್ಟೊಂದು ಹಣ ವಿನಿಯೋಗಿಸಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿ, ಉತ್ತರಾಖಂಡದ ರೈತರು ಇದುವರೆಗೆ 2200 ಕೋಟಿ ರೂ. ಪ್ರಯೋಜನ ಪಡೆದಿದ್ದಾರೆ.
 
ಸ್ನೇಹಿತರೆ,
ಅನೇಕ ತಲೆಮಾರುಗಳಿಂದ ಇಲ್ಲಿ ಸಿರಿಧಾನ್ಯಗಳು ಅಥವಾ 'ಶ್ರೀ ಅನ್ನ' ಬೆಳೆಯಲಾಗುತ್ತಿದೆ. ನಾನು ಇಲ್ಲಿ ವಾಸವಾಗಿದ್ದಾಗ ನಿಮ್ಮ ಮಧ್ಯೆ ಸಾಕಷ್ಟು ಸಮಯ ಕಳೆದಿದ್ದೇನೆ. ಆ ಸಮಯದಲ್ಲಿ, ಪ್ರತಿ ಮನೆಯಲ್ಲೂ ಸಿರಿಧಾನ್ಯಗಳನ್ನು ಹೇರಳವಾಗಿ ಸೇವಿಸಲಾಗುತ್ತದೆ. ಈಗ ಕೇಂದ್ರ ಸರ್ಕಾರವು ಈ ಸಿರಿಧಾನ್ಯವನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯಲು ಬಯಸಿದೆ. ಇದಕ್ಕಾಗಿ ದೇಶಾದ್ಯಂತ ಅಭಿಯಾನ ಆರಂಭಿಸಲಾಗಿದೆ. ಉತ್ತರಾಖಂಡದ ನಮ್ಮ ಸಣ್ಣ ರೈತರು ಕೂಡ ಈ ಕ್ರಮಗಳಿಂದ ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ.
 
ನನ್ನ ಕುಟುಂಬ ಸದಸ್ಯರೆ,
ತಾಯಂದಿರು ಮತ್ತು ಸಹೋದರಿಯರ ಪ್ರತಿಯೊಂದು ಸವಾಲು ಮತ್ತು ಅನನುಕೂಲತೆಯನ್ನು ತೆಗೆದುಹಾಕಲು ನಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ಬಡ ಸಹೋದರಿಯರಿಗೆ ಪಕ್ಕಾ ಮನೆಗಳನ್ನು ನೀಡಿದೆ. ನಮ್ಮ ತಂಗಿ, ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಿಸಿ, ಗ್ಯಾಸ್ ಸಂಪರ್ಕ, ಬ್ಯಾಂಕ್ ಖಾತೆ, ಉಚಿತ ಚಿಕಿತ್ಸೆ ನೀಡಿದ್ದೇವೆ. ಇಂದಿಗೂ ಬಡವರಿಗೆ ಅಡುಗೆ ಸ್ಥಗಿತವಾಗದಂತೆ ಉಚಿತ ಪಡಿತರ ಕಾರ್ಯಕ್ರಮ ಮುಂದುವರಿಸಲಾಗುತ್ತಿದೆ.
ಹರ್ ಘರ್ ಜಲ ಯೋಜನೆಯಡಿ ಉತ್ತರಾಖಂಡದ 11 ಲಕ್ಷ ಕುಟುಂಬಗಳ ಸಹೋದರಿಯರು ಪೈಪ್‌ಲೈನ್‌ನಲ್ಲಿ ನೀರಿನ ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಸಹೋದರಿಯರಿಗಾಗಿ ಮತ್ತೊಂದು ಕೆಲಸ ಮಾಡಲಾಗುತ್ತಿದೆ. ಈ ವರ್ಷ ಕೆಂಪು ಕೋಟೆಯ ಆವರಣದಿಂದ, ನಾನು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವ ಘೋಷಣೆ ಮಾಡಿದ್ದೇನೆ. ಕೀಟನಾಶಕಗಳು, ಗೊಬ್ಬರಗಳು, ಬೀಜಗಳು ಮತ್ತು ಅಂತಹ ಅನೇಕ ವಸ್ತುಗಳನ್ನು ಡ್ರೋನ್‌ಗಳ ಸಹಾಯದಿಂದ ಹೊಲಗಳಲ್ಲಿ ಬಳಸಬಹುದು. ಈಗ ಅಂತಹ ಡ್ರೋನ್‌ಗಳನ್ನು ತಯಾರಿಸಲಾಗುತ್ತಿದೆ, ಇದು ಹಣ್ಣುಗಳು ಮತ್ತು ತರಕಾರಿಗಳನ್ನು ಹತ್ತಿರದ ತರಕಾರಿ ಮಾರುಕಟ್ಟೆಗೆ ತಲುಪಿಸುತ್ತದೆ. ಪರ್ವತ ಪ್ರದೇಶಗಳಲ್ಲಿ ಡ್ರೋನ್‌ಗಳ ಮೂಲಕ ಔಷಧಗಳನ್ನು ತ್ವರಿತವಾಗಿ ತಲುಪಿಸಬಹುದು. ಅಂದರೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಒದಗಿಸಲಾದ ಈ ಡ್ರೋನ್‌ಗಳು ಉತ್ತರಾಖಂಡವನ್ನು ಆಧುನಿಕತೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ.
 

|

ನನ್ನ ಕುಟುಂಬ ಸದಸ್ಯರೆ,
ಉತ್ತರಾಖಂಡದ ಪ್ರತಿ ಹಳ್ಳಿಯಲ್ಲೂ ಗಂಗಾ ಮತ್ತು ಗಂಗೋತ್ರಿ ಇದೆ. ಭಗವಾನ್ ಶಿವ ಮತ್ತು ನಂದ ಇಲ್ಲಿ ಹಿಮದಿಂದ ಆವೃತವಾದ ಶಿಖರಗಳ ಮೇಲೆ ನೆಲೆಸಿದ್ದಾರೆ. ಉತ್ತರಾಖಂಡದ ಜಾತ್ರೆಗಳು, ಕೌತಿಗ್, ತಾವುಲ್, ಹಾಡುಗಳು, ಸಂಗೀತ ಮತ್ತು ಆಹಾರಗಳು ತಮ್ಮದೇ ಆದ ವಿಶಿಷ್ಟ ಗುರುತು ಹೊಂದಿವೆ. ಈ ಭೂಮಿ ಪಾಂಡವರ ನೃತ್ಯ, ಛೋಲಿಯಾ ನೃತ್ಯ, ಮಂಗಲ್ ಗೀತ್, ಫೂಲ್ ದೇಯಿ ಉತ್ಸವ, ಹರೇಲಾ, ಬಾಗ್ವಾಲ್ ಮತ್ತು ರಮ್ಮನ್ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮೃದ್ಧವಾಗಿದೆ. ಜನಪದ ಜೀವನದ ಅಭಿರುಚಿಯನ್ನು ಯಾರು ಮರೆಯಲು ಸಾಧ್ಯ: ರೊಟ್ಟ್, ಆರ್ಸೆ, ಝಂಗೋರ್ ಕಿ ಖೀರ್, ಕಾಫುಲಿ, ಪಕೋರಾ, ರೈತ, ಅಲ್ಮೋರಾದ ಬಾಲ್ ಮಿಠಾಯಿ, ಸಿಂಗೋರಿ. ಮತ್ತು ಕಾಳಿ ಗಂಗೆಯ ಈ ಭೂಮಿಯೊಂದಿಗೆ ನನಗೆ ಬಲವಾದ ಸಂಪರ್ಕವಿದೆ. ಇಲ್ಲಿ ಚಂಪಾವತ್‌ನಲ್ಲಿರುವ ಅದ್ವೈತ ಆಶ್ರಮದೊಂದಿಗೆ ನನಗೆ ಆಳವಾದ ಸಂಪರ್ಕವಿದೆ. ಅದು ನನ್ನ ಜೀವನದ ಒಂದು ಅಧ್ಯಾಯ.
ಇಲ್ಲಿನ ನೆಲದ ಪ್ರತಿ ಇಂಚಿನಲ್ಲೂ ನನ್ನ ಹಲವಾರು ನೆನಪುಗಳು ಕೆತ್ತಿವೆ. ಈ ಸಮಯದಲ್ಲಿ ನಾನು ನಿಜವಾಗಿಯೂ ಈ ದೈವಿಕ ಪ್ರದೇಶದಲ್ಲಿ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ಆದರೆ ನಾಳೆ ದೆಹಲಿಯಲ್ಲಿ ಜಿ-20ಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಸಮ್ಮೇಳನವಿದೆ. ವಿಶ್ವಾದ್ಯಂತ  ಜಿ-20 ದೇಶಗಳ ಸಂಸತ್ತಿನ ಸ್ಪೀಕರ್‌ಗಳು ಪ್ರಮುಖ ಶೃಂಗಸಭೆ ನಡೆಸಲಿದ್ದಾರೆ. ಅದರಿಂದಾಗಿ ನಾನು ಚಂಪಾವತ್‌ನ ಅದ್ವೈತ ಆಶ್ರಮಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಶೀಘ್ರದಲ್ಲೇ ಈ ಆಶ್ರಮಕ್ಕೆ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
 
ನನ್ನ ಕುಟುಂಬ ಸದಸ್ಯರೆ,
ಉತ್ತರಾಖಂಡದ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆ ಅಭಿವೃದ್ಧಿಗೆ ಸಂಬಂಧಿಸಿದ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳು ಈಗ ಫಲ ನೀಡುತ್ತಿವೆ. ಈ ವರ್ಷ ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆಗೆ ಬರುವ ಭಕ್ತರ ಸಂಖ್ಯೆ ಎಲ್ಲಾ ದಾಖಲೆಗಳನ್ನು ಮುರಿದು ಸುಮಾರು 50 ಲಕ್ಷಕ್ಕೆ ಏರಿದೆ. ಬಾಬಾ ಕೇದಾರರ ಆಶೀರ್ವಾದದೊಂದಿಗೆ, ಕೇದಾರನಾಥ ಧಾಮದ ಪುನರ್ನಿರ್ಮಾಣಕ್ಕೆ ಸಂಬಂಧಿಸಿದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಶ್ರೀ ಬದರಿನಾಥ ಧಾಮದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅನೇಕ ಯೋಜನೆಗಳು ಸಹ ಪೂರ್ಣಗೊಳ್ಳುತ್ತಿವೆ. ಕೇದಾರನಾಥ ಧಾಮ ಮತ್ತು ಶ್ರೀ ಹೇಮಕುಂಡ್ ಸಾಹಿಬ್‌ನಲ್ಲಿ ರೋಪ್‌ವೇ ಕಾಮಗಾರಿ ಪೂರ್ಣಗೊಂಡ ತಕ್ಷಣ, ದಿವ್ಯಾಂಗರು ಮತ್ತು ಹಿರಿಯ ಯಾತ್ರಾರ್ಥಿಗಳು ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಕೇದಾರಖಂಡದ ಜೊತೆಗೆ ಮಾನಸ ಖಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮ್ಮ ಸರ್ಕಾರವೂ ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ನಾನು ಇಂದು ಇಲ್ಲಿಗೆ ಬಂದಿದ್ದೇನೆ. ನಾವು ಕೇದಾರಖಂಡ ಮತ್ತು ಮಾನಸಖಂಡದ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಭೇಟಿ ನೀಡುವವರು ಸುಲಭವಾಗಿ ಜಾಗೇಶ್ವರ ಧಾಮ, ಆದಿ ಕೈಲಾಸ ಮತ್ತು ಓಂ ಪರ್ವತಕ್ಕೆ ಭೇಟಿ ನೀಡಬಹುದು ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಾನಸಖಂಡ್ ಮಂದಿರ ಮಾಲಾ ಮಿಷನ್‌ನಿಂದಾಗಿ, ಕುಮಾನ್‌ನ ಅನೇಕ ದೇವಾಲಯಗಳನ್ನು ತಲುಪಲು ತುಂಬಾ ಸುಲಭವಾಗುತ್ತದೆ.
ನನ್ನ ಅನುಭವದ ಪ್ರಕಾರ, ಬದರಿನಾಥ ಮತ್ತು ಕೇದಾರನಾಥಕ್ಕೆ ಬರುವ ಜನರು ಭವಿಷ್ಯದಲ್ಲಿ ಖಂಡಿತವಾಗಿಯೂ ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಈ ಪ್ರದೇಶದ ಬಗ್ಗೆ ಅರಿವಿಲ್ಲ. ಇಂದು ಜನರು ಈ ಸ್ಥಳಕ್ಕೆ ಮೋದಿ ಭೇಟಿ ನೀಡಿದ ವೀಡಿಯೊವನ್ನು ಟಿವಿಯಲ್ಲಿ ನೋಡಿದಾಗ, ಅವರು 'ಈ ಸ್ಥಳದಲ್ಲಿ ಏನಾದರೂ ವಿಶೇಷತೆ ಇರಬೇಕು' ಎಂದು ಭಾವಿಸುತ್ತಾರೆ. ಹಾಗಾಗಿ, ನೀವು ಸಿದ್ಧವಾಗಿರಿ, ಸಂದರ್ಶಕರ ಸಂಖ್ಯೆಯು ಹಲವಾರು ಪಟ್ಟು ಹೆಚ್ಚಾಗುತ್ತದೆ. ಮಾನಸಖಂಡ ಜನರಿಂದ ತುಂಬಿ ತುಳುಕುತ್ತದೆ.
 
ಸ್ನೇಹಿತರೆ,
ಉತ್ತರಾಖಂಡದ ಹೆಚ್ಚುತ್ತಿರುವ ಸಂಪರ್ಕವು ಇಲ್ಲಿನ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಚಾರ್ ಧಾಮ್ ಮಹಾ ಪರಿಯೋಜನಾ ಮತ್ತು ಸರ್ವಋತು ರಸ್ತೆಯಿಂದ ನೀವು ಸಾಕಷ್ಟು ಪ್ರಯೋಜನ ಪಡೆದಿದ್ದೀರಿ. ಋಷಿಕೇಶ-ಕರ್ಣಪ್ರಯಾಗ ರೈಲು ಯೋಜನೆ ಪೂರ್ಣಗೊಂಡ ನಂತರ, ಇಡೀ ಪ್ರದೇಶವನ್ನು ನವೀಕರಿಸಲಾಗುತ್ತದೆ. ಉಡಾನ್ ಯೋಜನೆಯಡಿ, ಕೈಗೆಟುಕುವ ಬೆಲೆಗೆ ವಿಮಾನ ಸೇವೆಗಳನ್ನು ಈ ಇಡೀ ಪ್ರದೇಶದಲ್ಲಿ ವಿಸ್ತರಿಸಲಾಗುತ್ತಿದೆ. ಇಂದು ಬಾಗೇಶ್ವರದಿಂದ ಕನಲಿಚಿನ್ನ, ಗಂಗೊಳ್ಳಿಹಾಟ್‌ನಿಂದ ಅಲ್ಮೋರಾ ಮತ್ತು ತನಕ್‌ಪುರ ಘಾಟ್‌ನಿಂದ ಪಿಥೋರಗಢದವರೆಗಿನ ರಸ್ತೆಗಳ ಕಾಮಗಾರಿ ಆರಂಭವಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುವುದಲ್ಲದೆ, ಪ್ರವಾಸೋದ್ಯಮದ ಮೂಲಕ ಆದಾಯದ ಅವಕಾಶಗಳೂ ಹೆಚ್ಚಲಿವೆ. ಇಲ್ಲಿನ ಸರಕಾರ ಹೋಂಸ್ಟೇಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸ ತಂದಿದೆ. ಪ್ರವಾಸೋದ್ಯಮವು ಗರಿಷ್ಠ ಉದ್ಯೋಗ ಮತ್ತು ಕನಿಷ್ಠ ಬಂಡವಾಳದ ಅಗತ್ಯವಿರುವ ಕ್ಷೇತ್ರವಾಗಿದೆ. ಪ್ರವಾಸೋದ್ಯಮ ಕ್ಷೇತ್ರವು ಮುಂಬರುವ ದಿನಗಳಲ್ಲಿ ಸಾಕಷ್ಟು ವಿಸ್ತರಿಸಲಿದೆ. ಏಕೆಂದರೆ ಇಡೀ ಜಗತ್ತು ಇಂದು ಭಾರತಕ್ಕೆ ಬರಲು, ಭಾರತವನ್ನು ಅನ್ವೇಷಿಸಲು ಮತ್ತು ಭಾರತವನ್ನು ತಿಳಿದುಕೊಳ್ಳಲು ಬಯಸುತ್ತದೆ. ಭಾರತಕ್ಕೆ ಭೇಟಿ ನೀಡಲು ಬಯಸುವವರು ಉತ್ತರಾಖಂಡಕ್ಕೆ ಬರದೆ ಅವರ ಪ್ರವಾಸವು ಪೂರ್ಣಗೊಳ್ಳುವುದಿಲ್ಲ.
 
ನನ್ನ ಕುಟುಂಬ ಸದಸ್ಯರೆ,
ಉತ್ತರಾಖಂಡವು ಈ ಹಿಂದೆ ನೈಸರ್ಗಿಕ ವಿಕೋಪಗಳಿಂದ ಸುತ್ತುವರಿದ ರೀತಿ ನನಗೆ ಚೆನ್ನಾಗಿ ತಿಳಿದಿದೆ. ನಾವು ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದೇವೆ. ನೈಸರ್ಗಿಕ ವಿಕೋಪಗಳನ್ನು ಎದುರಿಸಲು ನಾವು ನಮ್ಮ ಸನ್ನದ್ಧತೆಯನ್ನು ಸುಧಾರಿಸಿಕೊಳ್ಳಬೇಕು. ನಾವು ಅದನ್ನು ಮುಂದುವರಿಸುತ್ತೇವೆ. ಇದಕ್ಕಾಗಿ ಉತ್ತರಾಖಂಡದಲ್ಲಿ ಮುಂಬರುವ 4-5 ವರ್ಷಗಳಲ್ಲಿ 4,000 ಕೋಟಿ ರೂ. ವೆಚ್ಚದಲ್ಲಿ ಇಂತಹ ಸೌಲಭ್ಯಗಳನ್ನು ಉತ್ತರಾಖಂಡದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ದುರಂತ ಸಂದರ್ಭಗಳಲ್ಲಿ  ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಮಾಡಬಹುದು.
 

|

ನನ್ನ ಕುಟುಂಬ ಸದಸ್ಯರೆ,
ಇದು ಭಾರತದ ‘ಅಮೃತ ಕಾಲ’. ಈ 'ಅಮೃತ ಕಾಲ' ದೇಶದ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವಿಭಾಗವನ್ನು ಸೌಲಭ್ಯಗಳು, ಗೌರವ ಮತ್ತು ಸಮೃದ್ಧಿಯೊಂದಿಗೆ ಸಂಪರ್ಕಿಸುವ ಅವಧಿಯಾಗಿದೆ. ಬಾಬಾ ಕೇದಾರ್ ಮತ್ತು ಬದ್ರಿ ವಿಶಾಲ್ ಅವರ ಆಶೀರ್ವಾದದಿಂದ, ಆದಿ ಕೈಲಾಸನ ಆಶೀರ್ವಾದದಿಂದ, ನಾವು ನಮ್ಮ ಸಂಕಲ್ಪಗಳನ್ನು ತ್ವರಿತವಾಗಿ ಪೂರೈಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ. ನನಗೆ ತುಂಬಾ ಪ್ರೀತಿ ನೀಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು! ನಿಜವಾಗಿಯೂ, ನನ್ನ ಭಾವನೆಯನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ನಾನು ಹೆಲಿಕಾಪ್ಟರ್‌ನಿಂದ ಇಳಿದ ನಂತರ ಇಲ್ಲಿಗೆ ಬರಲು 7 ಕಿಲೋ ಮೀಟರ್ ಪ್ರಯಾಣಿಸಿದೆ. ಆ 7 ಕಿಲೋಮೀಟರ್ ಪ್ರಯಾಣದಲ್ಲಿ ಎರಡೂ ಬದಿ ಸೇರಿದ್ದ ಅಸಂಖ್ಯಾತರ ಜನರಿಂದಾಗಿ ಇಲ್ಲಿಗೆ ಬರಲು ತಡವಾಯಿತು. ಕುಟುಂಬದ ಹಬ್ಬದಲ್ಲಿ ಪಾಲ್ಗೊಂಡಂತೆ ಅಲ್ಲಿ ಜನಜಂಗುಳಿ ಸೇರಿತ್ತು. ಎಲ್ಲರೂ ಹಬ್ಬದ ಉಡುಗೆ ತೊಟ್ಟಿದ್ದು, ಹಬ್ಬದ ವಾತಾವರಣವಂತೂ ಕಾಣುತ್ತಿತ್ತು. ತಾಯಂದಿರು ತಮ್ಮ ಕೈಯಲ್ಲಿ ಆರತಿ, ಹೂಗುಚ್ಛಗಳೊಂದಿಗೆ ಆಶೀರ್ವಾದ ನೀಡಲು ಸಿದ್ಧರಾಗಿದ್ದರು. ಇದು ನನಗೆ ತುಂಬಾ ಭಾವನಾತ್ಮಕ ಕ್ಷಣಗಳು. ಇಂದು ನನ್ನ ಮಾನಸಖಂಡವು ನನಗೆ ಅಂತಹ ಪ್ರೀತಿ ಮತ್ತು ಉತ್ಸಾಹ ತೋರಿಸಿದೆ. ಆದ್ದರಿಂದ, ನಾನು ಪಿಥೋರಗಢ್ ಮತ್ತು ಪಿಥೋರಗಢ ಜಿಲ್ಲೆಯ ಎಲ್ಲಾ ಜನರಿಗೆ ಮತ್ತು ಈ ಇಡೀ ಪ್ರದೇಶಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • Reena chaurasia August 30, 2024

    बीजेपी
  • JBL SRIVASTAVA May 27, 2024

    मोदी जी 400 पार
  • Sarvesh Pandey March 08, 2024

    अबकी बार 400 पार
  • Girendra Pandey social Yogi March 04, 2024

    जय हो
  • Vaishali Tangsale February 12, 2024

    🙏🏻🙏🏻
  • ज्योती चंद्रकांत मारकडे February 11, 2024

    जय हो
  • KRISHNA DEV SINGH February 09, 2024

    jai shree ram
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Modi’s India hits back: How Operation Sindoor is the unveiling of a strategic doctrine

Media Coverage

Modi’s India hits back: How Operation Sindoor is the unveiling of a strategic doctrine
NM on the go

Nm on the go

Always be the first to hear from the PM. Get the App Now!
...
From the land of Sindoor Khela, India showcased its strength through Operation Sindoor: PM Modi in Alipurduar, West Bengal
May 29, 2025
QuoteThis is a decisive moment for West Bengal’s young generation. You hold the key to transforming the future of Bengal: PM in Alipurduar
QuoteFrom the land of Sindoor Khela, India showcased its strength through Operation Sindoor: PM Modi in West Bengal
QuoteTMC deliberately deny these benefits to Bengal’s poor, SC/ST/OBC communities, and tribal populations: PM’s strike against the TMC governance
QuoteThe voice of Bengal is loud and clear: Banglar chitkar, lagbe na nirmam shorkar! (Bengal’s cry: We reject a ruthless government!): PM Modi
QuoteA BJP-NDA government would bring development, security, and justice to every citizen: PM Modi’s reassurance in Bengal
QuoteTMC’s brutal governance has led to violence, unemployment, and corruption: PM while addressing Alipurduar

भारत माता की जय! जय जोहार
नॉमोश्कार।
बोरोरा आमार प्रोणाम नेबेन, छोटोरा भालोबाशा !
आप इतनी विशाल संख्या में यहां हमें आशीर्वाद देने आए हैं…मैं हृदय से बंगाल की जनता का अभिनंदन करता हूं। आज एवरेस्ट डे भी है। आज के दिन तेनजिंग नॉर्गे जी ने एवरेस्ट पर अपना परचम लहराया था। उनके सम्मान में हम भी अपना तिरंगा फहराएंगे। और आज ही महान स्वतंत्रता सेनानी रामानंद चटर्जी की जयंती भी है। ये महान संतानें, हमें प्रेरित करती हैं…बड़े संकल्पों की सिद्धि के लिए हौसला देती हैं।

साथियों,
21वीं सदी में भारत नए सामर्थ्य के साथ समृद्धि की नई गाथा लिख रहा है। आज देश का हर नागरिक…भारत को विकसित राष्ट्र बनाने के लिए जुटा है दिन रात जुटा हुआ है। और विकसित भारत बनाने के लिए पश्चिम बंगाल का विकसित होना बहुत ज़रूरी है। इसलिए... पश्चिम बंगाल को भी नई ऊर्जा के साथ जुटना है। बंगाल को फिर उसी भूमिका में आना होगा, जो कभी यहां की पहचान थी। इसके लिए ज़रूरी है कि पश्चिम बंगाल फिर से नॉलेज का...ज्ञान-विज्ञान का केंद्र बने। बंगाल- मेक इन इंडिया का एक बहुत बड़ा सेंटर बने। बंगाल, देश में पोर्ट लेड डवलपमेंट को गति दे। बंगाल अपनी विरासत पर गर्व करते हुए..उसे संरक्षित करते हुए तेज गति से आगे बढ़े।

|

साथियों,
केंद्र की भाजपा सरकार...इसी संकल्प के साथ काम कर रही है। भाजपा, पूर्वोदय की नीति पर चल रही है। बीते दशक में बीजेपी सरकार ने यहां के विकास के लिए हजारों करोड़ का निवेश किया है। अब से कुछ देर पहले यहां सिटी गैस डिस्ट्रीब्यूशन नेटवर्क का शुभारंभ भी हुआ है। केंद्र सरकार के प्रयासों से ही..कल्याणी एम्स बना है। न्यू अलीपुरद्वार और न्यू जलपाईगुड़ी जैसे रेलवे स्टेशनों का पुनर्विकास किया जा रहा है। बंगाल की व्यापारिक गतिविधियों को उत्तर भारत से जोड़ने के लिए.....डेडिकेटेड फ्रेट कॉरिडोर बन रहा है। कोलकाता मेट्रो का अभूतपूर्व विस्तार किया गया है। ऐेसे अनेक प्रोजेक्ट हैं जो भारत सरकार यहां पूरे करवाने का प्रयास कर रही है। भाजपा सरकार ईमानदारी से सबका साथ सबका विकास के मंत्र को लेकर बंगाल की प्रगति के लिए समर्पित है।
क्योंकि-
बांग्लार उदय तबेई,
विकशित भारोतेर जॉय!

साथियों,
ये समय पश्चिम बंगाल के लिए बहुत अहम है। ऐसे में, पश्चिम बंगाल के हर नौजवान पर आप सब पर बहुत बड़ा दायित्व है। आप सबने मिलकर के बंगाल का भविष्य तय करना है। आज पश्चिम बंगाल एक साथ कई संकटों से घिरा हुआ है। एक संकट समाज में फैली हिंसा और अराजकता का है। दूसरा संकट- माताओं-बहनों की असुरक्षा का है, उन पर हो रहे जघन्य अपराधों का है। तीसरा संकट- नौजवानों में फैल रही घोर निराशा का है, बेतहाशा बेरोजगारी का है। चौथा संकट, घनघोर करप्शन का है, यहां के सिस्टम पर लगातार कम होते जन विश्वास का है। और पांचवां संकट, गरीबों का हक छीनने वाली सत्ताधारी पार्टी की स्वार्थी राजनीति का है।

साथियों,
यहां मुर्शीदाबाद में जो कुछ हुआ...मालदा में जो कुछ हुआ… वो यहां की सरकार की निर्ममता का उदाहरण हैं। दंगों में गरीब माताओं-बहनों की जीवनभर की पूंजी राख कर दी गई। तुष्टीकरण के नाम पर गुंडागर्दी को खुली छूट दे दी गई है। जब सरकार चलाने वाले एक पार्टी के लोग, विधायक, कॉर्पोरेटर ही लोगों के घरों को चिन्हित करके जलाते हैं… और पुलिस तमाशा देखती है… तो उस भयावह स्थिति की कल्पना की जा सकती है। मैं बंगाल की भद्र जनता से पूछता हूं...क्या सरकारें ऐसे चलती हैं? ऐई भाबे शोरकार चले की ?

|

साथियों,
बंगाल की जनता पर हो रहे इन अत्याचारों से यहां की निर्मम सरकार को कोई फर्क नहीं पड़ता। यहां बात-बात पर कोर्ट को दखल देना पड़ता है। बिना कोर्ट के बीच में आए, कोई भी मामला सुलझता ही नहीं है। बंगाल की जनता को अब टीएमसी सरकार के सिस्टम पर भरोसा नहीं है। यहां की जनता के पास अब सिर्फ कोर्ट का आसरा ही है। इसलिए पूरा बंगाल कह रहा है---
बंगाल में मची चीख-पुकार...
नहीं चाहिए निर्मम सरकार
बांग्लार चीत्कार
लागबे ना निर्मम शोरकार

साथियों,
भ्रष्टाचार का सबसे बुरा असर नौजवानों पर पड़ता है, गरीब और मिडिल क्लास परिवारों पर होता है। भ्रष्टाचार कैसे चारों तरफ बर्बादी लाता है, ये हमने टीचर भर्ती घोटाले में देखा है। टीएमसी सरकार ने अपने शासनकाल में हज़ारों टीचर्स का फ्यूचर बर्बाद कर दिया है। उनके परिवारों को तबाह कर दिया, उनके बच्चों को असहाय छोड़ दिया। टीएमसी के घोटालेबाज़ों ने सैकड़ों गरीब परिवार के बेटे-बेटियों को अंधकार में धकेल दिया है। ये सिर्फ कुछ हज़ार टीचर्स के भविष्य के साथ खिलवाड़ नहीं है… बल्कि पश्चिम बंगाल के पूरे एजुकेशन सिस्टम को बर्बाद किया जा रहा है। टीचर्स के अभाव में लाखों बच्चों का भविष्य दांव पर है। इतना बड़ा पाप टीएमसी के नेताओं ने किया है। हद तो ये है कि ये लोग आज भी अपनी गलती मानने को तैयार नहीं है। उलटा देश की अदालत को न्यायपालिका को, कोर्ट को दोषी ठहराते हैं।

साथियों,
टीएमसी ने चाय बगान में काम करने वाले साथियों को भी नहीं छोड़ा है। यहां सरकार की कुनीतियों के कारण, टी गार्डन लगातार बंद होते जा रहे हैं...मजदूरों के हाथ से काम निकलता जा रहा है। यहां PF को लेकर जो कुछ भी हुआ है, वो बहुत शर्मनाक है। ये गरीब मेहनतकश लोगों की कमाई पर डाका डाला जा रहा है। TMC सरकार इसके दोषी लोगों को बचाने की कोशिश कर रही है। और मैं बंगाल के भाई-बहन आपको विश्वास दिलाने आया हूं कि भाजपा ये नहीं होने देगी।

साथियों,
राजनीति अपनी जगह पर है...लेकिन गरीब, दलित, पिछड़े, आदिवासी और महिलाओं से TMC क्यों दुश्मनी निकाल रही है? पश्चिम बंगाल के गरीब, SC/ST/OBC के लिए जो भी योजनाएं देश में चल रही हैं... उनमें से बहुत सारी योजनाएं यहां लागू ही नहीं होने दी जा रही है। पूरे देश में करोड़ों लोगों को आयुष्मान योजना के तहत मुफ्त इलाज मिल चुका है। लेकिन मुझे दुख के साथ कहना पड़ रहा है कि इसका फायदा पश्चिम बंगाल के मेरे भाइयो-बहनों को नहीं मिल रहा है। पश्चिम बंगााल का कोई साथी अगर दिल्ली, बेंगलुरू, चेन्नई गया है...उसको वहां मुफ्त इलाज नहीं मिल पाता है। क्योंकि निर्मम सरकार ने बंगाल के अपने लोगों को आयुष्मान कार्ड देने ही नही दिया। आज देशभर में 70 वर्ष से ऊपर के बुजुर्गों को 5 लाख रुपए तक मुफ्त इलाज की सुविधा मिल रही है। मैं तो चाहता हूं कि पश्चिम बंगाल में भी 70 वर्ष से ऊपर के सभी बुजुर्गों को मुफ्त इलाज की सुविधा मिले। लेकिन टीएमसी सरकार ये नहीं करने दे रही है। केंद्र की बीजेपी सरकार, देशभर में गरीब परिवारों को पक्के घर बनाकर दे रही है। लेकिन पश्चिम बंगाल में लाखों परिवारों का घर नहीं बन पा रहा है। क्योंकि टीएमसी के लोग इसमें कट-कमीशन की मांग कर रहे हैं। आखिर TMC सरकार आप लोगों को लेकर इतनी निर्मम क्यों हैं?

|

साथियों,
यहां की निर्मम सरकार के जितने उदाहरण दूं...वो कम हैं। पश्चिम बंगाल में बहुत बड़ी संख्या में हमारे विश्वकर्मा भाई-बहन है। ये लोग हाथ के हुनर से अनेक प्रकार के काम करते हैं। इनके लिए पहली बार भाजपा सरकार विश्वकर्मा योजना लाई है। इसके तहत देश के लाखों लोगों को ट्रेनिंग मिली है, पैसा मिला है, नए टूल मिले हैं, आसान ऋण मिला है। लेकिन पश्चिम बंगाल में 8 लाख एप्लीकेशन अभी लटकी पडी है। निर्मम सरकार उसपर बैठ गई है क्योंकि टीएममसी सरकार इस योजना को भी लागू नहीं कर रही है।

साथियों,
टीएमसी सरकार की मेरे आदिवासी भाई-बहनों से भी दुश्मनी कुछ कम नहीं है। देश में पहली बार जनजातियों में भी सबसे पिछड़ी जनजातियों के लिए पीएम जनमन योजना बनाई गई है। पश्चिम बंगाल में बहुत बड़ा आदिवासी समाज है। TMC सरकार, गरीब आदिवासियों का विकास भी नहीं होने दे रही है। उसने पीएम जनमन योजना को यहां लागू नहीं किया। टीएमसी हमारे आदिवासी समाज को भी वंचित ही रखना चाहती है।

साथियों,
TMC को आदिवासी समाज के सम्मान की परवाह नहीं है। 2022 में जब NDA ने एक आदिवासी महिला को राष्ट्रपति उम्मीदवार बनाया,
तो सबसे पहले विरोध करने वाली पार्टी TMC थी। बंगाल के आदिवासी इलाकों की उपेक्षा भी यही दिखाती है... कि इन्हें आदिवासी समाज से टीएमसी वालों कोई लगाव नहीं है, कोई लेनादेना नहीं है।

साथियों,
कुछ दिन पहले दिल्ली में नीति आयोग की गवर्निंग काउंसिल की बहुत महत्वपूर्ण बैठक हुई। ये एक अहम मंच होता है, जहां देशभर के मुख्यमंत्री मिलकर विकास पर चर्चा करते हैं। लेकिन अफसोस की बात है कि इस बार बंगाल सरकार इस बैठक में मौजूद ही नहीं रही। दूसरे गैर-भाजपा शासित राज्य आए, सभी दल के नेता आए। हमने साथ बैठकर चर्चा की। लेकिन TMC को तो सिर्फ और सिर्फ 24 घंटा पॉलिटिक्स करना है और कुछ करना ही नहीं है। पश्चिम बंगाल का विकास, देश की प्रगति...उनकी प्राथमिकता में है ही नहीं।

|

साथियों,
केंद्र सरकार की जिन योजनाओं को यहां लागू किया भी है, उनको पूरा नहीं किया जा रहा। पीएम ग्राम सड़क योजना के तहत पश्चिम बंगाल के गांवों के लिए 4 हजार किलोमीटर की सड़कें स्वीकृत की गई हैं। इनको पिछले साल तक पूरा हो जाना था। चार हज़ार किलोमीटर तो छोड़िए...यहां चार सौ किलोमीटर सड़कें भी नहीं बन पाई हैं।

साथियों,
इंफ्रास्ट्रक्चर के काम से सुविधाएं भी बनती हैं, और रोजगार भी बनते हैं। लेकिन हालत ये है कि पश्चिम बंगाल में 16 बड़े इंफ्रास्ट्रक्चर प्रोजेक्ट यहां की सरकार ने अटकाए हुए हैं। ये 90 हज़ार करोड़ रुपए से अधिक के प्रोजेक्ट हैं। कहीं रेल लाइन आनी थी, रुकी पड़ी है कहीं मेट्रो बननी थी रुकी पड़ी है, कहीं हाईवे बनना था, बंद पड़ा है , कहीं अस्पताल बनना था..कोई पूछने वाला नहीं। ऐसे प्रोजेक्ट्स को ये टीएमसी ने लटका कर रखा है। ये पश्चिम बंगाल के आप लोगों के साथ बहुत बड़ा धोखा है।

साथियों,
आज जब सिंदूर खेला की इस धरती पर आया हूं...तो आतंकवाद को लेकर भारत के नए संकल्प की चर्चा स्वभाविक है। 22 अप्रैल को पहलगाम में जम्मू-कश्मीर में आतंकियों ने जो बर्बरता की, उसके बाद पश्चिम बंगाल में भी बहुत गुस्सा था। आपके भीतर जो आक्रोश था...आपका जो गुस्सा था...उसको मैं भलीभांति समझता था। आतंकवादियों ने हमारी बहनों का सिंदूर मिटाने का दुस्साहस किया...हमारी सेना ने उनको सिंदूर की शक्ति का अहसास करा दिया... हमने आतंक के उन ठिकानों को तबाह किया...जिनकी पाकिस्तान ने कल्पना तक नहीं की थी।

साथियों,
आतंक को पालने वाले पाकिस्तान के पास दुनिया को देने के लिए कुछ भी पॉजिटिव नहीं है। जबसे वो अस्तित्व में आया है...तबसे ही उसने सिर्फ आतंक को पाला है। 1947 में बंटवारे के बाद से ही उसने भारत पर आतंकी हमला किया। कुछ सालों के बाद, उसने यहां पड़ोस में...आज के बांग्लादेश में जो आतंक फैलाया...पाकिस्तान की सेनाओं ने जिस प्रकार बांग्लादेश में रेप किए, मर्डर किए....वो कोई भूल नहीं सकता। आतंक और नरसंहार...ये पाकिस्तानी सेना की सबसे बड़ी expertise है। जब सीधा युद्ध लड़ा जाता है, तो उसकी हार तय होती है। उसका पराजय निश्चित होता है, उसको मुंह की खानी पड़ती है। यही कारण है कि – पाकिस्तान की सेना आतंकियों का सहारा लेती है। लेकिन पहलगाम हमले के बाद अब भारत ने दुनिया को बता दिया है...भारत पर अब आतंकी हमला हुआ...तो दुश्मन को उसकी बड़ी कीमत चुकानी पड़ेगी। और पाकिस्तान समझ ले, तीन बार घर में घुसकर मारा है तुमको। हम शक्ति को पूजने वाले लोग हैं...हम महिषासुरमर्दिनी को पूजते हैं... बंगाल टाइगर की इस धरती से ये 140 करोड़ भारतीयों का ऐलान है...ऑपरेशन सिंदूर अभी खत्म नहीं हुआ है।

|

साथियों,
पश्चिम बंगाल को, अब हिंसा की, तुष्टिकरण की, दंगों की, महिला अत्याचार की, घोटालों की राजनीति से मुक्ति चाहिए। अब पश्चिम बंगाल के सामने भाजपा का विकास मॉडल है। आज भाजपा, देश के कई राज्यों में सरकारें चला रही है। देश के लोग बार-बार भाजपा को अवसर दे रहे हैं। पड़ोस में असम हो..त्रिपुरा हो या फिर ओडिशा...यहां भाजपा सरकारें, तेजी से विकास कार्यों में जुटी हैं। मैं बंगाल के सभी भाजपा कार्यकर्ता साथियों से कहूंगा...हमें कमर कसकर तैयार रहना है। हमारे सामने एक बड़ी चुनौती है...कि लोकतंत्र पर पश्चिम बंगाल की जनता के विश्वास को फिर से कैसे बहाल करें। हमें पश्चिम बंगाल के हर परिवार को सुरक्षा की, सुशासन की और समृद्धि की गारंटी देनी है। इसके लिए आने वाले दिनों में अपने प्रयासों को हमें और तेज़ करना होगा।

साथियों,
विकसित भारत बनाने के लिए, पश्चिम बंगाल का तेज़ विकास बहुत ज़रूरी है। हमें पश्चिम बंगाल को उसका पुराना गौरव लौटाना है। ये हम सभी मिलकर करेंगे...और करके रहेंगे।
एक बार फिर आप सभी को इतनी बड़ी संख्या में यहां आने के लिए बहुत-बहुत आभार व्यक्त करता हूं!
मेरे साथ तिरंगा ऊंचा कर के बोलिए...
भारत माता की...

भारत माता की...

भारत माता की...

भारत माता की...

बहुत-बहुत धन्यवाद