Quote"ಒಂದು ಶಿವಶಕ್ತಿ ಸ್ಥಳವು ಚಂದ್ರನ ಮೇಲಿದೆ, ಇನ್ನೊಂದು ಕಾಶಿಯಲ್ಲಿದೆ"
Quote"ಕಾಶಿಯಲ್ಲಿನ ಅಂತಾರರಾಷ್ಟ್ರೀಯ ಕ್ರೀಡಾಂಗಣದ ವಿನ್ಯಾಸವು ಭಗವಾನ್ ಮಹಾದೇವ್‌ಗೆ ಸಮರ್ಪಿತವಾಗಿದೆ"
Quote"ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಿದಾಗ, ಅದು ಯುವ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವಲ್ಲಿ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಸ್ಥಳೀಯ ಆರ್ಥಿಕತೆಗೆ ವರದಾನವಾಗುತ್ತದೆ"
Quote"ಈಗ ರಾಷ್ಟ್ರದ ಮನಸ್ಥಿತಿ - ʻಜೋ ಖೇಲೆಗಾ ವೋ ಹಿ ಖಿಲೇಗಾʼ ಎಂಬಂತಿದೆ"
Quote"ಸರ್ಕಾರವು ಕ್ರೀಡಾಪಟುಗಳ ಜೊತೆಯಲ್ಲಿ ಶಾಲೆಯಿಂದ ಒಲಿಂಪಿಕ್ಸ್ ವೇದಿಕೆಗೆ ತಂಡದ ಸದಸ್ಯರಂತೆ ಹೋಗುತ್ತಿದೆ"
Quote"ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಬಂದ ಯುವಕರು ಇಂದು ರಾಷ್ಟ್ರದ ಹೆಮ್ಮೆಯಾಗಿದ್ದಾರೆ"
Quote"ರಾಷ್ಟ್ರದ ಅಭಿವೃದ್ಧಿಗೆ ಕ್ರೀಡಾ ಮೂಲಸೌಕರ್ಯಗಳ ವಿಸ್ತರಣೆ ಅತ್ಯಗತ್ಯ"
Quoteಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿರುವ ಆಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ವಾರಣಾಸಿಯ ಗಂಜಾರಿ, ರಜತಲಾಬ್ ನಲ್ಲಿ ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಹರ ಹರ ಮಹಾದೇವ್!

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ವೇದಿಕೆಯಲ್ಲಿ ಉಪಸ್ಥಿತರಿರುವ ಉತ್ತರ ಪ್ರದೇಶ ಸರ್ಕಾರದ ಎಲ್ಲಾ ಸಚಿವರುಗಳೇ, ಪ್ರತಿನಿಧಿಗಳೇ, ಕ್ರೀಡಾ ಜಗತ್ತಿನ ಗಣ್ಯ ಅತಿಥಿಗಳೇ ಮತ್ತು ಕಾಶಿಯ ನನ್ನ ಪ್ರೀತಿಯ ಕುಟುಂಬ ಸದಸ್ಯರೇ!

ಮತ್ತೊಮ್ಮೆ ಬನಾರಸ್ ಗೆ ಬರುವ ಅವಕಾಶ ಸಿಕ್ಕಿದೆ. ಬನಾರಸ್ ನಲ್ಲಿರುವ ಸಂತೋಷವನ್ನು ವಿವರಿಸುವುದು ತುಂಬಾ ಕಷ್ಟ. ಮತ್ತೊಮ್ಮೆ ಹೇಳುವುದರಲ್ಲಿ ನನ್ನೊಂದಿಗೆ ಒಟ್ಟಾಗಿ ಹೇಳಿ... ಓಂ ನಮಃ ಪಾರ್ವತಿ ಪತಯೇ, ಹರ-ಹರ ಮಹಾದೇವ್! 

ಚಂದ್ರನ ಮೇಲ್ಮೈಯಲ್ಲಿರುವ  ಶಿವಶಕ್ತಿ ಬಿಂದುವನ್ನು ತಲುಪಿ ಭಾರತವು ಒಂದು ತಿಂಗಳು ಪೂರೈಸಿದ ದಿನದಂದು ನಾನು ಇಂದು ಕಾಶಿಗೆ ಬಂದಿದ್ದೇನೆ. ಕಳೆದ ತಿಂಗಳು 23 (ಆಗಸ್ಟ್) ರಂದು ನಮ್ಮ ಚಂದ್ರಯಾನ ಬಂದಿಳಿದ ಸ್ಥಳವೇ ಶಿವಶಕ್ತಿ. ಒಂದು ಶಿವಶಕ್ತಿ ಚಂದ್ರನ ಮೇಲಿದೆ, ಇನ್ನೊಂದು ಶಿವಶಕ್ತಿ ನನ್ನ ಕಾಶಿಯಲ್ಲಿದೆ. ಇಂದು, ಆ ಶಿವಶಕ್ತಿಯ ಸ್ಥಾನದ ಮೇಲೆ ಭಾರತದ ವಿಜಯಕ್ಕಾಗಿ ನಾನು ಈ ಶಿವಶಕ್ತಿಯ ಸ್ಥಳದಿಂದ ಮತ್ತೊಮ್ಮೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

ಇಂದು ನಾವೆಲ್ಲರೂ ಕೂಡಿದ ಸ್ಥಳವು ಒಂದು ಪವಿತ್ರ ಸ್ಥಳವಾಗಿದೆ. ಈ ಸ್ಥಳವು ಮಾತೆ ವಿಂಧ್ಯವಾಸಿನಿಯ ನಿವಾಸ ಮತ್ತು ಕಾಶಿ ನಗರವನ್ನು ಸಂಪರ್ಕಿಸುತ್ತದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಭಾರತದ ಪ್ರಜಾಪ್ರಭುತ್ವದ ಗಣ್ಯ ವ್ಯಕ್ತಿ ಮತ್ತು ಮಾಜಿ ಕೇಂದ್ರ ಸಚಿವ ಶ್ರೀ ರಾಜ್ ನಾರಾಯಣ್ ಜೀ ಅವರ ಹುಟ್ಟೂರ ಗ್ರಾಮ ಮೋತಿ ಕೋಟ್ ಇದೆ. ನಾನು ಈ ಭೂಮಿಗೆ ಮತ್ತು ಶ್ರೀ ರಾಜ್ ನಾರಾಯಣ್ ಅವರ ಜನ್ಮಸ್ಥಳಕ್ಕೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ.

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

ಕಾಶಿಯಲ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ಈ ಕ್ರೀಡಾಂಗಣವು ವಾರಣಾಸಿಗೆ ಮಾತ್ರವಲ್ಲದೆ ಪೂರ್ವಾಂಚಲ್ ನ ಯುವಕರಿಗೂ ವರದಾನವಾಗಲಿದೆ. ಈ ಕ್ರೀಡಾಂಗಣ ಪೂರ್ಣಗೊಂಡರೆ, 30,000 ಕ್ಕೂ ಹೆಚ್ಚು ಜನರು ಒಟ್ಟಿಗೆ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಮತ್ತು ಈ ಕ್ರೀಡಾಂಗಣದ ಚಿತ್ರಗಳು ಬಹಿರಂಗವಾದಾಗಿನಿಂದ, ಕಾಶಿಯ ಪ್ರತಿಯೊಬ್ಬ ನಿವಾಸಿಗಳು ಹರ್ಷಗೊಂಡಿದ್ದಾರೆ ಎಂದು ನನಗೆ ತಿಳಿದಿದೆ. ಭಗವಾನ್ ಮಹಾದೇವನ ನಗರದಲ್ಲಿ, ಈ ಕ್ರೀಡಾಂಗಣವು ಇದರ ವಿನ್ಯಾಸ ಮತ್ತು ಉತ್ಕೃಷ್ಟತೆಯಲ್ಲಿ ಎಲ್ಲವೂ ಅವನಿಗೆ ಸಮರ್ಪಿತವಾಗಿದೆ. ಇದು ಕೇವಲ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಿಲ್ಲ , ಜೊತೆಗೆ ಸ್ಥಳೀಯ ಯುವ ಆಟಗಾರರಿಗೆ ಅಂತರರಾಷ್ಟ್ರೀಯ ಮಟ್ಟದ  ತರಬೇತಿ ನೀಡಲು ಈ ಕ್ರೀಡಾಂಗಣ ಅವಕಾಶವನ್ನು ಒದಗಿಸುತ್ತದೆ. ಇದರಿಂದ ನನ್ನ ಕಾಶಿಗೆ ಬಹಳ ಅನುಕೂಲವಾಗುತ್ತದೆ.

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

ಜಗತ್ತು ಇಂದು ಕ್ರಿಕೆಟ್ ಮೂಲಕ ಭಾರತ ಜಗತ್ತಿನೊಂದಿಗೆ ವಿಶೇಷ ಸಂಪರ್ಕ ಸಾಧಿಸುತ್ತಿದೆ. ಕ್ರಿಕೆಟ್ ಆಡಲು ಹೊಸ ಹೊಸ ದೇಶಗಳು ಹುಟ್ಟಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ರಿಕೆಟ್ ಪಂದ್ಯಗಳ ಸಂಖ್ಯೆ ಹೆಚ್ಚಾಗುವುದು ಸ್ಪಷ್ಟವಾಗಿದೆ. ಮತ್ತು ಕ್ರಿಕೆಟ್ ಪಂದ್ಯಗಳು ಹೆಚ್ಚಾದಂತೆ, ಹೊಸ ಕ್ರೀಡಾಂಗಣಗಳ ಅವಶ್ಯಕತೆ ಇರುತ್ತದೆ. ಬನಾರಸ್ ನಲ್ಲಿರುವ ಈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆ ಬೇಡಿಕೆಯನ್ನು ಈಡೇರಿಸಲಿದ್ದು, ಇಡೀ ಪೂರ್ವಾಂಚಲ್ ಪ್ರದೇಶಕ್ಕೆ ಕಂಗೊಳಿಸುವ ನಕ್ಷತ್ರವಾಗಿ ಮಿಂಚಲಿದೆ. ಇದು ಉತ್ತರ ಪ್ರದೇಶದ ಮೊದಲ ಕ್ರೀಡಾಂಗಣವಾಗಿದ್ದು, ಇದರ ನಿರ್ಮಾಣದಲ್ಲಿ ಬಿಸಿಸಿಐಯ ಗಮನಾರ್ಹ ಬೆಂಬಲವಿದೆ. ಕಾಶಿಯ ಸಂಸದನಾಗಿ ಮತ್ತು ನಿಮ್ಮ ಪ್ರತಿನಿಧಿಯಾಗಿ ನಾನು ಬಿಸಿಸಿಐ ಅಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದಾಗ ಮತ್ತು ಈ ಪ್ರಮಾಣದ ಕ್ರೀಡಾಂಗಣವನ್ನು ನಿರ್ಮಿಸಿದಾಗ, ಇದು ಕ್ರೀಡೆಗಳ ಮೇಲೆ ಪರಿಣಾಮ ಬೀರುವುದಲ್ಲದೆ ಸ್ಥಳೀಯ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ದೊಡ್ಡ ಕ್ರೀಡಾ ಕೇಂದ್ರಗಳು ನಿರ್ಮಾಣವಾದಾಗ ಅವುಗಳಲ್ಲಿ ದೊಡ್ಡ ಕ್ರೀಡಾಕೂಟಗಳು ನಡೆಯುತ್ತವೆ. ದೊಡ್ಡ ಕ್ರೀಡಾಕೂಟಗಳು ನಡೆಯುವಾಗ, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮತ್ತು ಆಟಗಾರರು ಇಲ್ಲಿ ಸೇರುತ್ತಾರೆ. ಇದು ಹೋಟೆಲ್ ಮಾಲೀಕರು, ಸಣ್ಣ ಮತ್ತು ದೊಡ್ಡ ಆಹಾರ ಮಾರಾಟಗಾರರು, ರಿಕ್ಷಾ-ಆಟೋ-ಟ್ಯಾಕ್ಸಿ ಚಾಲಕರು ಮತ್ತು ದೋಣಿಗಳನ್ನು ನಿರ್ವಹಿಸುವವರಿಗೆ ಆರ್ಥಿಕ ಪ್ರಯೋಜನವನ್ನು ನೀಡುತ್ತದೆ. ಅಂತಹ ದೊಡ್ಡ ಕ್ರೀಡಾಂಗಣಕ್ಕೆ ಧನ್ಯವಾದಗಳು. ಇವುಗಳು ಹೊಸ ಕ್ರೀಡಾ ತರಬೇತಿ ಕೇಂದ್ರಗಳು ತೆರೆಯಲ್ಪಡುತ್ತವೆ, ಕ್ರೀಡಾ ನಿರ್ವಹಣೆ ಶಿಕ್ಷಣಕ್ಕೆ ಅವಕಾಶಗಳನ್ನು ಒದಗಿಸುತ್ತವೆ. ಬನಾರಸ್ ನಲ್ಲಿರುವ ನಮ್ಮ ಯುವಜನರು ಈಗ ಹೊಸ ಕ್ರೀಡಾ ಪ್ರಾರಂಭದಲ್ಲಿ ವೃತ್ತಿಜೀವನವನ್ನು ಪರಿಗಣಿಸಬಹುದು. ಫಿಸಿಯೋಥೆರಪಿ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಹಲವು ಕೋರ್ಸ್ ಗಳು ಆರಂಭವಾಗಲಿದ್ದು, ವಾರಣಾಸಿಗೆ ಮಹತ್ವದ ಕ್ರೀಡಾ ಉದ್ಯಮವೂ ನೂತನವಾಗಿ ಬರಲಿದೆ.

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

ಮಕ್ಕಳು ಯಾವಾಗಲಾದರೂ ಆಟವಾಡುತ್ತಿರುತ್ತಾರೆ, ಓದುತ್ತಾ ಇರುವುದಿಲ್ಲ, ಇಲ್ಲವೇ ಸದಾ ಕ್ರೀಡೆಯಲ್ಲಿ ಮಗ್ನರಾಗಿರುತ್ತಾರೆ ಎಂದು ಪಾಲಕರು ತಮ್ಮ ಮಕ್ಕಳನ್ನು ಬೈಯುತ್ತಿದ್ದ ಕಾಲವೊಂದಿತ್ತು. ಮಕ್ಕಳು ಇದನ್ನೆಲ್ಲ ಕೇಳುತ್ತಿದ್ದರು. ಸಮಾಜದ ದೃಷ್ಟಿಕೋನ ಈಗ ಬದಲಾಗಿದೆ. ಮಕ್ಕಳು ಯಾವಾಗಲೂ ಕ್ರೀಡೆಯ ಬಗ್ಗೆ ಗಂಭೀರವಾಗಿರುತ್ತಿದ್ದರು, ಮತ್ತು ಈಗ ಪೋಷಕರು ಸಹ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಕ್ರೀಡಾಸಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಯಾರೇ ಆಡಿದರೂ ಮಿಂಚುತ್ತಾರೆ ಎಂಬಂತಾಗಿದೆ ದೇಶದ ಇಂದಿನ ಮನಸ್ಥಿತಿ.

ಸ್ನೇಹಿತರೇ,

ಸುಮಾರು ಒಂದು ಅಥವಾ ಎರಡು ತಿಂಗಳ ಹಿಂದೆ, ನಾನು ಮಧ್ಯಪ್ರದೇಶದ ಶಹದೋಲ್ ನ ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದೆ, ಅಲ್ಲಿ ನನಗೆ ಕೆಲವು ಯುವಕರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅಲ್ಲಿನ ವಾತಾವರಣ ಮತ್ತು ಅವರ ಮಾತುಗಳಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೆ. ಇದು ನಮ್ಮ ಮಿನಿ ಬ್ರೆಜಿಲ್ ಎಂದು ಯುವಕರು ನನಗೆ ಹೇಳಿದರು. ಮಿನಿ ಬ್ರೆಜಿಲ್ ಹೇಗೆ ಎಂದು ನಾನು ಅವರನ್ನು ಕೇಳಿದೆ, ಮತ್ತು ಅವರು ತಮ್ಮ ಹಳ್ಳಿಯಲ್ಲಿ, ಪ್ರತಿ ಮನೆಯಲ್ಲೂ ಫುಟ್ಬಾಲ್ ಆಟಗಾರರಿದ್ದಾರೆ ಎಂದು ಉತ್ತರಿಸಿದರು ಮತ್ತು ಕೆಲವರು ತಮ್ಮ ಕುಟುಂಬದಲ್ಲಿ ಮೂರು ತಲೆಮಾರುಗಳು ರಾಷ್ಟ್ರೀಯ ಫುಟ್ಬಾಲ್ ಆಟಗಾರರಾಗಿದ್ದಾರೆ ಎಂದು ಹೇಳಿದರು. ಒಬ್ಬ ಆಟಗಾರ ನಿವೃತ್ತಿ ಹೊಂದಿ ತನ್ನ ಪೂರ್ತಿ ಜೀವನವನ್ನು ಕ್ರೀಡೆಗಾಗಿ ಮುಡಿಪಾಗಿಟ್ಟಿದ್ದಾರೆ, ಪರಿಣಾಮವಾಗಿ, ಇಂದು, ಆ ಪ್ರದೇಶದಲ್ಲಿ ಪ್ರತಿ ಪೀಳಿಗೆಯು ವೈಯಕ್ತಿಕ ಫುಟ್ಬಾಲ್ ಆಡುವುದನ್ನು ನೀವು ಕಾಣಬಹುದು. ತಮ್ಮ ವಾರ್ಷಿಕ ಸಮಾರಂಭದಲ್ಲಿ ಮನೆಯಲ್ಲಿ ಯಾರೂ ಸಿಗುವುದಿಲ್ಲ ಎನ್ನುತ್ತಾರೆ. ಇಡೀ ಪ್ರದೇಶದ ನೂರಾರು ಹಳ್ಳಿಗಳ ಲಕ್ಷಗಟ್ಟಲೆ ಜನರು ಎರಡರಿಂದ ನಾಲ್ಕು ದಿನಗಳ ಕಾಲ ಮೈದಾನದಲ್ಲಿಯೇ ಇರುತ್ತಾರೆ. ಈ ಸಂಸ್ಕೃತಿಯನ್ನು ನೋಡಿದಾಗ ದೇಶದ ಉಜ್ವಲ ಭವಿಷ್ಯದ ಬಗ್ಗೆ ನನ್ನ ನಂಬಿಕೆ ಹೆಚ್ಚುತ್ತದೆ. ಮತ್ತು ಕಾಶಿಯ ಸಂಸದನಾಗಿ ನಾನು ಇಲ್ಲಿ ಈ ಬದಲಾವಣೆಗಳಿಗೆ ಇಂದು ಸಾಕ್ಷಿಯಾಗಿದ್ದೇನೆ.

ಇಲ್ಲಿ ಸಂಸದ್ ಕ್ರೀಡಾ ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸುವ ಉತ್ಸಾಹದ ಮಾಹಿತಿ ನಿರಂತರವಾಗಿ ನನ್ನನ್ನು ತಲುಪುತ್ತದೆ. ಕಾಶಿಯ ಯುವಕರು ಕ್ರೀಡಾ ಲೋಕದಲ್ಲಿ ಹೆಸರು ಮಾಡುವುದನ್ನು ನೋಡಬೇಕು ಎಂಬುದು ನನ್ನ ವೈಯಕ್ತಿಕ ಬಯಕೆ. ಆದ್ದರಿಂದ, ವಾರಣಾಸಿಯ ಯುವಕರಿಗೆ ಉತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಕ್ರೀಡಾಂಗಣದ ಜತೆಗೆ ಸಿಗ್ರಾ ಕ್ರೀಡಾಂಗಣಕ್ಕೆ ಅಂದಾಜು 400 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಸಿಗ್ರಾ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಕ್ರೀಡಾಕೂಟಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮತ್ತು ಈ ಕ್ರೀಡಾಂಗಣದ ವಿಶೇಷತೆಯೆಂದರೆ, ಇದು ದಿವ್ಯಾಂಗರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ದೇಶದ ಮೊದಲ ಬಹು-ವ್ಯವಸ್ಥೆಗಳ ಕ್ರೀಡಾ ಸಂಕೀರ್ಣವಾಗಿದೆ. ಶೀಘ್ರದಲ್ಲಿಯೇ ಕಾಶಿಯ ಜನತೆಗೆ ಸಮರ್ಪಿಸಲಾಗುವುದು. ಬಡಾ ಲಾಲ್ಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಸಿಂಥೆಟಿಕ್ ಬಾಸ್ಕೆಟ್ಬಾಲ್ ಅಂಗಣ, ವಿವಿಧ ‘ಕುಸ್ತಿ ಅಖಾಡಾ’ಗಳಿಗೆ ಪ್ರೊತ್ಸಾಹ, ಹೊಸ ಮೂಲಸೌಕರ್ಯಗಳನ್ನು ನಿರ್ಮಿಸುವುದು ಮಾತ್ರವಲ್ಲದೆ, ನಗರದಲ್ಲಿ ಈಗಿರುವ ಸೌಲಭ್ಯಗಳನ್ನು  ಈ ಮೂಲಕ ಸುಧಾರಿಸುತ್ತಿದ್ದೇವೆ.

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

ಇಂದು ಕ್ರೀಡೆಯಲ್ಲಿ ಭಾರತ ಕಾಣುತ್ತಿರುವ ಯಶಸ್ಸು ದೇಶದ ದೃಷ್ಟಿಕೋನದ ಬದಲಾವಣೆಯ ಪರಿಣಾಮವಾಗಿದೆ. ನಾವು ಕ್ರೀಡೆಯನ್ನು ಯುವಕರ ಫಿಟ್ನೆಸ್ ಮತ್ತು ಅವರ ವೃತ್ತಿಜೀವನದೊಂದಿಗೆ ಸಂಪರ್ಕಿಸಿದ್ದೇವೆ. ಒಂಬತ್ತು ವರ್ಷಗಳ ಹಿಂದಿನ ಅವಧಿಗೆ ಹೋಲಿಸಿದರೆ, ಈ ವರ್ಷ ಕೇಂದ್ರ ಕ್ರೀಡಾ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಖೇಲೋ ಇಂಡಿಯಾ ಕಾರ್ಯಕ್ರಮದ ಬಜೆಟ್ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 70% ಬೆಳವಣಿಗೆಯನ್ನು ಕಂಡಿದೆ. ಶಾಲೆಗಳಿಂದ ಒಲಿಂಪಿಕ್ ವೇದಿಕೆಗಳವರೆಗೆ ಸರ್ಕಾರವು ನಮ್ಮ ಆಟಗಾರರ ಜೊತೆಯಲ್ಲಿ ಸಕಾರಾತ್ಮಕವಾಗಿ ನಡೆದುಕೊಳ್ಳುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, ಶಾಲೆಗಳಿಂದ ವಿಶ್ವವಿದ್ಯಾನಿಲಯಗಳವರೆಗೆ ದೇಶಾದ್ಯಂತ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗಿದೆ ಮತ್ತು ನಮ್ಮ ಹೆಣ್ಣುಮಕ್ಕಳು ಗಮನಾರ್ಹ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಸರ್ಕಾರ ಪ್ರತಿ ಹಂತದಲ್ಲೂ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ನೆರವು ನೀಡುತ್ತಿದೆ. ಒಲಿಂಪಿಕ್ ಪೋಡಿಯಂ ಯೋಜನೆಯು ಅಂತಹ ಒಂದು ಪ್ರಯತ್ನವಾಗಿದೆ. ಈ ಯೋಜನೆಯಡಿಯಲ್ಲಿ, ವರ್ಷವಿಡೀ ನಮ್ಮ ಉನ್ನತ ಕ್ರೀಡಾಪಟುಗಳಿಗೆ ಆಹಾರ, ಫಿಟ್ನೆಸ್ ಮತ್ತು ತರಬೇತಿಗಾಗಿ ಸರ್ಕಾರವು ಹಲವಾರು ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಇದರ ಫಲಿತಾಂಶವನ್ನು ಇಂದು ಪ್ರತಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೂ ಕಾಣಬಹುದು. ಇತ್ತೀಚೆಗೆ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಈ ಆಟಗಳಲ್ಲಿ, ನಮ್ಮ ಮಕ್ಕಳು ಸ್ಪರ್ಧೆಯ ಸಂಪೂರ್ಣ ಇತಿಹಾಸದ ಹಿಂದಿನ ದಶಕಗಳಲ್ಲಿ ಈ ವರ್ಷ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ ಇಂದು ಆರಂಭವಾಗುತ್ತಿದ್ದು, ಈ ಆಟಗಳಲ್ಲಿ ಭಾಗವಹಿಸುತ್ತಿರುವ ಭಾರತದ ಎಲ್ಲಾ ಕ್ರೀಡಾಪಟುಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೇ,

ಭಾರತದ ಹಳ್ಳಿಗಳ ಮೂಲೆ ಮೂಲೆಗಳಲ್ಲಿ ಪ್ರತಿಭೆಗಳಿವೆ, ಮತ್ತು ಕ್ರೀಡಾ ಚಾಂಪಿಯನ್ ಗಳು ಅನ್ವೇಷಣೆಗಾಗಿ ಕಾಯುತ್ತಿದ್ದಾರೆ. ಅವರನ್ನು ಹುಡುಕುವುದು ಮತ್ತು ಅವರ ಸಾಮರ್ಥ್ಯವನ್ನು ಪೋಷಿಸುವುದು ಅತ್ಯಗತ್ಯ. ಇಂದು, ಚಿಕ್ಕ ಚಿಕ್ಕ ಹಳ್ಳಿಗಳ ಯುವ ವ್ಯಕ್ತಿಗಳು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಮೂಲವಾಗಿದ್ದಾರೆ. ನಮ್ಮ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಇರುವ ಅದ್ಭುತ ಪ್ರತಿಭೆಯ ಉದಾಹರಣೆಗಳಾಗಿ ಅವು ಕಾರ್ಯನಿರ್ವಹಿಸುತ್ತವೆ. ಅವರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ನಾವು ಈ ಪ್ರತಿಭೆಯನ್ನು ಪೋಷಿಸಬೇಕು. ಖೇಲೋ ಇಂಡಿಯಾ ಅಭಿಯಾನವು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೇಶದ ಪ್ರತಿಯೊಂದು ಮೂಲೆಯ ಪ್ರತಿಭೆಯನ್ನು ಗುರುತಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಈ ಕ್ರೀಡಾಪಟುಗಳನ್ನು ಗುರುತಿಸುವ ಮೂಲಕ ಅವರನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ಪರಿವರ್ತಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂದು ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ಆಟಗಾರರು ನಮ್ಮ ನಡುವೆ ಇದ್ದಾರೆ, ಅವರು ಕ್ರೀಡಾ ಜಗತ್ತಿನಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಾಶಿಯ ಬಗ್ಗೆಅಭಿಮಾನ ತೋರಿದ್ದಕ್ಕೆ ಅವರೆಲ್ಲರಿಗೂ  ನನ್ನ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

ಇಂದು, ಉತ್ತಮ ತರಬೇತುದಾರರು ಮತ್ತು ತರಬೇತಿ ಸೌಲಭ್ಯಗಳನ್ನು ಹೊಂದುವುದು ಕ್ರೀಡಾಪಟುಗಳ ತಯಾರಿಗೆ ಮುಖ್ಯವಾಗಿದೆ. ಇಲ್ಲಿರುವ ಖ್ಯಾತ ಆಟಗಾರರು ಇದರ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅವರು ಅದನ್ನು ಚೆನ್ನಾಗಿ ತಿಳಿದಿದ್ದಾರೆ ಕೂಡಾ. ಅದಕ್ಕಾಗಿಯೇ ಸರ್ಕಾರವೂ ಇಂದು ಕ್ರೀಡಾಪಟುಗಳಿಗೆ ಉತ್ತಮ ತರಬೇತಿಯನ್ನು ಖಾತ್ರಿಪಡಿಸುತ್ತಿದೆ. ಪ್ರಮುಖ ಸ್ಪರ್ಧೆಗಳಲ್ಲಿ ಭಾಗವಹಿಸಿದ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ಆಟಗಾರರನ್ನು ತರಬೇತುದಾರರಾಗಿ ಕ್ರೀಡಾ ಕೆಲಸ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ದೇಶದ ಯುವಕರು ವಿವಿಧ ಕ್ರೀಡಾಕೂಟಗಳಿಗೆ ನೇರವಾಗಿ  ಸಂಪರ್ಕ ಹೊಂದಿದ್ದಾರೆ.

ಸ್ನೇಹಿತರೇ,

ಸರ್ಕಾರವು ಪ್ರತಿ ಹಳ್ಳಿಯಲ್ಲಿ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಮತ್ತು ಇದು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ ಆಟಗಾರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಹಿಂದೆ, ದೆಹಲಿ, ಮುಂಬೈ, ಕೋಲ್ಕತ್ತಾ, ಮತ್ತು ಚೆನ್ನೈನಂತಹ ದೊಡ್ಡ ನಗರಗಳಲ್ಲಿ ಮಾತ್ರ ಉತ್ತಮ ಕ್ರೀಡಾಂಗಣಗಳು ಲಭ್ಯವಿದ್ದವು. ಈಗ, ದೇಶದ ಮೂಲೆ ಮೂಲೆಯಲ್ಲಿರುವ ಆಟಗಾರರಿಗೆ, ದೂರದ ಪ್ರದೇಶಗಳಲ್ಲೂ ಈ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಕ್ರೀಡಾ ಮೂಲಸೌಕರ್ಯಗಳು ನಮ್ಮ ಹೆಣ್ಣುಮಕ್ಕಳಿಗೆ ಗಣನೀಯವಾಗಿ ಪ್ರಯೋಜನವನ್ನು ನೀಡುತ್ತಿರುವುದು ನನಗೆ ಸಂತಸ ತಂದಿದೆ. ಈಗ, ಸನಿಹದಲ್ಲೇ ಕ್ರೀಡಾ ತರಬೇತಿ ಲಭ್ಯವಾಗುವ ಕಾರಣ, ಹುಡುಗಿಯರು ಆಟವಾಡಲು ಮತ್ತು ಕ್ರೀಡಾ ತರಬೇತಿಗಾಗಿ ಮನೆಯಿಂದ ದೂರ ಪ್ರಯಾಣಿಸುವ ಬಲವಂತವನ್ನು ಕಡಿಮೆ ಮಾಡುತ್ತಿದ್ದಾರೆ.

ಸ್ನೇಹಿತರೇ,

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಕ್ರೀಡೆಗಳನ್ನು ವಿಜ್ಞಾನ, ವಾಣಿಜ್ಯ ಅಥವಾ ಇತರ ಯಾವುದೇ ಅಧ್ಯಯನದಂತಹ ಇತರ ಶೈಕ್ಷಣಿಕ ವಿಷಯಗಳಿಗೆ ಸಮನಾಗಿ ಇರಿಸಿದೆ. ಹಿಂದೆ, ಕ್ರೀಡೆಗಳನ್ನು ಕೇವಲ ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಅದು ಇನ್ನು ಮುಂದೆ ಅಲ್ಲ. ಈಗ ಶಾಲೆಗಳಲ್ಲಿ ಕ್ರೀಡೆಯನ್ನು ಒಂದು ವಿಷಯವಾಗಿ ಔಪಚಾರಿಕವಾಗಿ ಕಲಿಸಲಾಗುತ್ತಿದೆ. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಮಣಿಪುರದಲ್ಲಿ ಸ್ಥಾಪಿಸಿದ್ದು ನಮ್ಮದೇ ಸರ್ಕಾರ. ಉತ್ತರ ಪ್ರದೇಶದಲ್ಲೂ ಕ್ರೀಡಾ ಸೌಲಭ್ಯಗಳಿಗಾಗಿ ಸುಮಾರು ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ಗೋರಖ್ ಪುರದ ಕ್ರೀಡಾ ಕಾಲೇಜಿನ ವಿಸ್ತರಣೆಯಿಂದ ಹಿಡಿದು ಮೀರತ್ ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಸ್ಥಾಪನೆಯವರೆಗೆ ನಮ್ಮ ಆಟಗಾರರಿಗಾಗಿ ಹೊಸ ಕ್ರೀಡಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ಸ್ನೇಹಿತರೇ,

ಕ್ರೀಡಾ ಸೌಲಭ್ಯಗಳನ್ನು ವಿಸ್ತರಿಸುವುದು ದೇಶದ ಅಭಿವೃದ್ಧಿಗೆ ನಿರ್ಣಾಯಕವಾಗಿದೆ. ಇದು ಕೇವಲ ಕ್ರೀಡೆ, ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಷ್ಟ್ರದ ಪ್ರತಿಷ್ಠೆಗೂ ಮುಖ್ಯವಾಗಿದೆ. ನಮ್ಮಲ್ಲಿ ಹಲವರು ಪ್ರಪಂಚದಾದ್ಯಂತದ ಹಲವಾರು ನಗರಗಳ ಬಗ್ಗೆ ಮಾತ್ರ ತಿಳಿದಿದ್ದಾರೆ, ಏಕೆಂದರೆ ಅವರು ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆ ನಗರಗಳಲ್ಲಿ ಆಯೋಜಿಸಿದ್ದಾರೆ. ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವಂತಹ ಕೇಂದ್ರಗಳನ್ನು ನಾವು ಭಾರತದಲ್ಲಿ ರಚಿಸಬೇಕಾಗಿದೆ. ಇಂದು ಶಿಲಾನ್ಯಾಸ ನೆರವೇರಿಸಿದ ಈ ಕ್ರೀಡಾಂಗಣ ನಮ್ಮ ಕ್ರೀಡೆಯ ಬದ್ಧತೆಗೆ ಸಾಕ್ಷಿಯಾಗಲಿದೆ. ಈ ಕ್ರೀಡಾಂಗಣವನ್ನು ಕೇವಲ ಇಟ್ಟಿಗೆ ಮತ್ತು ಕಾಂಕ್ರೀಟ್ ನಿಂದ  ಮಾಡಲಾಗುವುದಿಲ್ಲ; ಇದು ಭಾರತದ ಭವಿಷ್ಯದ ದೊಡ್ಡ ಸಂಕೇತವಾಗಿರುತ್ತದೆ. ಪ್ರತಿಯೊಂದು ಅಭಿವೃದ್ಧಿ ಯೋಜನೆಗಳಿಗೂ ಕಾಶಿ ತನ್ನ ಆಶೀರ್ವಾದವನ್ನು ನನಗೆ ದಯಪಾಲಿಸುತ್ತಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಕಾಶಿಯಲ್ಲಿ ಜನರಿಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ನಿಮ್ಮ ಆಶೀರ್ವಾದದಿಂದ ಕಾಶಿಯ ಅಭಿವೃದ್ಧಿಯ ಹೊಸ ಅಧ್ಯಾಯಗಳನ್ನು ಸದಾ ಬರೆಯುತ್ತಲೇ ಇರುತ್ತೇವೆ. ಮತ್ತೊಮ್ಮೆ, ಕ್ರಿಕೆಟ್ ಸ್ಟೇಡಿಯಂನ ಶಂಕುಸ್ಥಾಪನೆ ಸಮಾರಂಭದಲ್ಲಿ ಕಾಶಿ, ಹಾಗೂ ಇಡೀ ಪೂರ್ವಾಂಚಲ್ ಜನತೆಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಹರ್ ಹರ್ ಮಹಾದೇವ್! ಧನ್ಯವಾದಗಳು!

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • Nirakar Jena September 08, 2024

    🙏Jay SitaRam 🙏🙏🙏
  • बबिता श्रीवास्तव June 08, 2024

    सशक्त भारत समृद्ध भारत
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻👏🏻
  • ज्योती चंद्रकांत मारकडे February 11, 2024

    जय हो
  • Uma tyagi bjp January 28, 2024

    जय श्री राम
  • Tandra Gope Ghosh January 16, 2024

    Joy ho
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Global aerospace firms turn to India amid Western supply chain crisis

Media Coverage

Global aerospace firms turn to India amid Western supply chain crisis
NM on the go

Nm on the go

Always be the first to hear from the PM. Get the App Now!
...
Former UK PM, Mr. Rishi Sunak and his family meets Prime Minister, Shri Narendra Modi
February 18, 2025

Former UK PM, Mr. Rishi Sunak and his family meets Prime Minister, Shri Narendra Modi today in New Delhi.

Both dignitaries had a wonderful conversation on many subjects.

Shri Modi said that Mr. Sunak is a great friend of India and is passionate about even stronger India-UK ties.

The Prime Minister posted on X;

“It was a delight to meet former UK PM, Mr. Rishi Sunak and his family! We had a wonderful conversation on many subjects.

Mr. Sunak is a great friend of India and is passionate about even stronger India-UK ties.

@RishiSunak @SmtSudhaMurty”