ಚೆಸ್ ಸ್ಪರ್ಧಿ: ಸರ್, ಭಾರತವು ಎರಡೂ ಚಿನ್ನದ ಪದಕಗಳನ್ನು ಗೆದ್ದಿರುವುದು ಇದೇ ಮೊದಲು, ಮತ್ತು ತಂಡದ ಪ್ರದರ್ಶನ ಗಮನಾರ್ಹವಾಗಿದೆ. ಬಾಲಕರು 22 ರಲ್ಲಿ 21 ಅಂಕಗಳನ್ನು ಗಳಿಸಿದರೆ, ಬಾಲಕಿಯರು 22 ರಲ್ಲಿ 19 ಅಂಕಗಳನ್ನು ಗಳಿಸಿದರು. ಒಟ್ಟಾರೆಯಾಗಿ, ನಾವು 44 ರಲ್ಲಿ 40 ಅಂಕಗಳನ್ನು ಗಳಿಸಿದ್ದೇವೆ. ಇಷ್ಟು ದೊಡ್ಡ ಮತ್ತು ಪ್ರಭಾವಶಾಲಿ ಪ್ರದರ್ಶನವು ಹಿಂದೆಂದೂ ಆಗಿಲ್ಲ.

ಪ್ರಧಾನ ಮಂತ್ರಿ : ಅಲ್ಲಿನ ವಾತಾವರಣ ಹೇಗಿತ್ತು?

ಚೆಸ್ ಸ್ಪರ್ಧಿ: ನಾವು ಮೊದಲ ಬಾರಿಗೆ ಗೆದ್ದದ್ದರಿಂದ, ಎಲ್ಲರೂ ನಮಗಾಗಿ ಬಹಳ ಸಂತೋಷಪಟ್ಟರು,  ನಾವು ತುಂಬಾ ಸಂಭ್ರಮದಿಂದ ಆ ಗೆಲುವನ್ನು ಆಚರಿಸಿದ್ದ್ದೇವೆ. ವಾಸ್ತವವಾಗಿ, ಪ್ರತಿಯೊಬ್ಬ ಎದುರಾಳಿಯೂ ಬಂದು ನಮ್ಮನ್ನು ಅಭಿನಂದಿಸಿದರು, ಮತ್ತು ಅವರು ನಮ್ಮ ಬಗ್ಗೆ ನಿಜವಾಗಿಯೂ ಸಂತೋಷಪಟ್ಟರು. ನಮ್ಮ ವಿರೋಧಿಗಳು ಕೂಡ!

ಚೆಸ್ ಸ್ಪರ್ಧಿ: ಸರ್, ಇತ್ತೀಚಿನ ವರ್ಷಗಳಲ್ಲಿ, ಅನೇಕ ಪ್ರೇಕ್ಷಕರು ನಮ್ಮನ್ನು ಹುರಿದುಂಬಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಅವರು ಪಂದ್ಯವನ್ನು ವೀಕ್ಷಿಸಲು ದೂರದಿಂದ ಬಂದಿದ್ದರು, ಇದೆಲ್ಲ ಈ  ಮೊದಲೂ ಆಗುತ್ತಿತ್ತು  ಎಂದು ನಾನು ಭಾವಿಸುವುದಿಲ್ಲ. ಆದ್ದರಿಂದ, ಚೆಸ್ ನ ಜನಪ್ರಿಯತೆ ಹೆಚ್ಚಾಗಿದೆ ಎಂದು ನಾನು ನಂಬುತ್ತೇನೆ. ಜನರು ನಮಗಾಗಿ ಬರುವುದನ್ನು ನೋಡುವುದು ನಿಜವಾಗಿಯೂ ಸಂತೋಷದ ಸಂಗತಿ. ಸ್ವಲ್ಪ ಒತ್ತಡವಿತ್ತು, ಆದರೆ ಬೆಂಬಲವು ಉತ್ತಮವಾಗಿತ್ತು. ನಾವು ಗೆದ್ದಾಗ, ಎಲ್ಲರೂ "ಭಾರತ, ಭಾರತ!" ಎಂದು ಜಪಿಸುತ್ತಿದ್ದರು.

ಚೆಸ್ ಸ್ಪರ್ಧಿಗಳು: ಈ ಬಾರಿ 180 ದೇಶಗಳು ಭಾಗವಹಿಸಿದ್ದವು. ಚೆನ್ನೈನಲ್ಲಿ ನಡೆದ ಒಲಿಂಪಿಯಾಡ್ ನಲ್ಲಿ ಎರಡೂ ಭಾರತೀಯ ತಂಡಗಳು (ಪುರುಷರು ಮತ್ತು ಮಹಿಳೆಯರು) ಕಂಚಿನ ಪದಕ ಗೆದ್ದವು. ಮಹಿಳಾ ತಂಡದ ಕೊನೆಯ ಪಂದ್ಯದಲ್ಲಿ, ನಾವು ಯುಎಸ್ಎ ವಿರುದ್ಧ ಆಡಿದ್ದೇವೆ, ಮತ್ತು ನಾವು ಸೋತಿದ್ದೇವೆ, ಚಿನ್ನದ ಪದಕದ ಅವಕಾಶವನ್ನು ಕಳೆದುಕೊಂಡಿದ್ದೇವೆ. ಆದರೆ ಈ ಬಾರಿ, ನಾವು ಮತ್ತೆ ಅವರ ವಿರುದ್ಧ ಆಡಿದ್ದೇವೆ ಮತ್ತು ಭಾರತಕ್ಕೆ ಚಿನ್ನದ ಪದಕ ಗೆಲ್ಲಲು ಹೆಚ್ಚು ಉತ್ಸಾಹ, ಪ್ರೇರಣೆ ನಮಗೆ ದೊರೆತಿದೆ. ಈ ಬಾರಿ ನಾವು ಅವರನ್ನು ಸೋಲಿಸಬೇಕಾಗಿತ್ತು.

 

|

ಪ್ರಧಾನ ಮಂತ್ರಿ : ನೀವು ಅವರನ್ನು ಸೋಲಿಸಬೇಕಾಗಿತ್ತು.

ಚೆಸ್ ಸ್ಪರ್ಧಿ: ಆ ಪಂದ್ಯವು ತುಂಬಾ ನಿಕಟವಾಗಿತ್ತು ಮತ್ತು ಡ್ರಾದಲ್ಲಿ ಕೊನೆಗೊಂಡಿತು. ಆದರೆ ನಾವು ಚಿನ್ನ ಗೆದ್ದೆವು. ಸರ್, ಈ ಬಾರಿ ನಾವು ನಮ್ಮ ದೇಶಕ್ಕಾಗಿ ವಿಜಯದೊಂದಿಗೆ ಮರಳಲು ನಿರ್ಧರಿಸಿದ್ದೆವು. ಎರಡನೆಯ ಆಯ್ಕೆ ಇರಲಿಲ್ಲ.

ಪ್ರಧಾನ ಮಂತ್ರಿ : ನೀವು ಅಂತಹ ದೃಢನಿಶ್ಚಯವನ್ನು ಹೊಂದಿದ್ದರೆ ಮಾತ್ರ ನಿಮಗೆ ಗೆಲುವು ಸಿಗುತ್ತದೆ. ಆದರೆ ನೀವು 22 ರಲ್ಲಿ 21 ಮತ್ತು 22 ರಲ್ಲಿ 19 ಅಂಕಗಳನ್ನು ಗಳಿಸಿದಾಗ, ಇತರ ಆಟಗಾರರು ಅಥವಾ ಈವೆಂಟ್ ನ ಸಂಘಟಕರ ಪ್ರತಿಕ್ರಿಯೆ ಏನಾಗಿತ್ತು?

ಚೆಸ್ ಸ್ಪರ್ಧಿ: ಸರ್, ಗುಕೇಶ್ ಅದಕ್ಕೆ ಉತ್ತರಿಸಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ಎಲ್ಲರಿಗೂ ಮನವರಿಕೆಯಾಗುವ ರೀತಿಯಲ್ಲಿ ವಿಶ್ವಾಸಾರ್ಹವಾಗಿ ಗೆದ್ದಿದ್ದೇವೆ ಎಂದು ನಾನು ಹೇಳಲು ಬಯಸುತ್ತೇನೆ, ವಿಶೇಷವಾಗಿ ಓಪನ್ ತಂಡದಲ್ಲಿ, ಯಾರೂ ನಮ್ಮ ಹತ್ತಿರಕ್ಕೆ ಬರಲು ಸಾಧ್ಯವಿಲ್ಲ ಎಂದು ಅನಿಸಿತು. ಮಹಿಳಾ ತಂಡದಲ್ಲಿ, ನಾವು ಸತತವಾಗಿ ಮೊದಲ ಏಳು ಪಂದ್ಯಗಳನ್ನು ಗೆದ್ದಿದ್ದೇವೆ, ಮತ್ತು ನಂತರ ಸಣ್ಣ ಹಿನ್ನಡೆಯನ್ನು ಎದುರಿಸಿದ್ದೇವೆ, ಆದರೆ ನಾವು ಸ್ಥಿತಿಸ್ಥಾಪಕತ್ವವನ್ನು ತೋರಿಸಿದ್ದೇವೆ ಮತ್ತು ಪುನರಾಗಮನ ಮಾಡಿದ್ದೇವೆ. ಆದರೆ ಓಪನ್ ತಂಡದ ಬಗ್ಗೆ ಹೇಳುವುದಾದರೆ, ಸರ್, ನಾವು ಎಷ್ಟು ಪ್ರಬಲರಾಗಿದ್ದೇವೆ ಎಂಬುದನ್ನು ನಾನು ವಿವರಿಸಲು ಸಾಧ್ಯವಿಲ್ಲ. ತಂಡದಲ್ಲಿದ್ದ  ಗುಕೇಶ್ ಅದನ್ನು ಉತ್ತಮವಾಗಿ ವಿವರಿಸಬಹುದು ಎಂದು ನಾನು ಭಾವಿಸುತ್ತೇನೆ.

ಚೆಸ್ ಸ್ಪರ್ಧಿ: ಈ ಅನುಭವವು, ಸಾಧನೆಯು  ನಿಜವಾಗಿಯೂ ಉತ್ತಮವಾದ  ತಂಡ ಪ್ರಯತ್ನವಾಗಿತ್ತು. ನಮ್ಮಲ್ಲಿ ಪ್ರತಿಯೊಬ್ಬರೂ ಅತ್ಯುತ್ತಮ ಫಾರ್ಮ್ ನಲ್ಲಿದ್ದೆವು ಮತ್ತು ಬಹಳ ಉತ್ಸಾಹದಿಂದ ಪ್ರೇರೇಪಿತರಾಗಿದ್ದೆವು. 2022 ರ ಒಲಿಂಪಿಯಾಡ್ನಲ್ಲಿ, ನಾವು ಚಿನ್ನದ ಪದಕವನ್ನು ಗೆಲ್ಲಲು ಬಹಳ ಹತ್ತಿರದಲ್ಲಿದ್ದೆವು, ನಾನು ಗೆದ್ದು ಚಿನ್ನವನ್ನು ಭದ್ರಪಡಿಸಿಕೊಳ್ಳಬಹುದಾದ ಒಂದು ಆಟವನ್ನು ಆಡಿದೆ, ಆದರೆ ದುರದೃಷ್ಟವಶಾತ್, ನಾನು ಆ ಪಂದ್ಯವನ್ನು ಕಳೆದುಕೊಂಡೆ. ಇದು ಎಲ್ಲರಿಗೂ ಹೃದಯ ವಿದ್ರಾವಕವಾಗಿತ್ತು. ಆದ್ದರಿಂದ, ಈ ಬಾರಿ ನಾವು ಸೂಪರ್ ಪ್ರೇರೇಪಿತರಾಗಿದ್ದೆವು, ಮತ್ತು ಆರಂಭದಿಂದಲೂ, ನಾವು ಗೆಲ್ಲಲು ನಿರ್ಧರಿಸಿದ್ದೇವೆ. ನನಗೆ ನಿಜವಾಗಿಯೂ ಸಂತೋಷವಾಗಿದೆ!

ಪ್ರಧಾನ ಮಂತ್ರಿ: ಹೇಳಿ, ನಿಮ್ಮ ಆಟವನ್ನು ಸರಿಪಡಿಸಲು ಅಥವಾ ನಿಮ್ಮ ಎದುರಾಳಿಯ ಆಟವನ್ನು ಅರ್ಥಮಾಡಿಕೊಳ್ಳಲು ಎಐ ಬಳಸುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?

ಚೆಸ್ ಸ್ಪರ್ಧಿ: ಹೌದು ಸರ್. ಎಐನೊಂದಿಗೆ, ಚೆಸ್ ವಿಕಸನಗೊಂಡಿದೆ. ಹೊಸ ತಂತ್ರಜ್ಞಾನಗಳಿವೆ, ಮತ್ತು ಕಂಪ್ಯೂಟರ್ ಗಳು ಈಗ ಹೆಚ್ಚು ಬಲಿಷ್ಠವಾಗಿವೆ, ಚೆಸ್ ನಲ್ಲಿ ಅನೇಕ ಹೊಸ ಆಲೋಚನೆಗಳನ್ನು ಅವು ತೋರಿಸುತ್ತವೆ. ನಾವು ಇನ್ನೂ ಅದರಿಂದ ಕಲಿಯುತ್ತಿದ್ದೇವೆ, ಮತ್ತು ಕಲಿಯಲು ಬಹಳಷ್ಟು ಇದೆ ಎಂದು ನಾನು ಭಾವಿಸುತ್ತೇನೆ.

 

|

ಚೆಸ್ ಸ್ಪರ್ಧಿ: ಸರ್, ಈಗ ಎಐ ಉಪಕರಣಗಳು ಎಲ್ಲರಿಗೂ ಲಭ್ಯವಿವೆ ಮತ್ತು ಅವುಗಳನ್ನು ಎಲ್ಲರೂ ಪ್ರವೇಶಿಸಬಹುದಾಗಿದೆ ಎಂದು ನಾನು ಭಾವಿಸುತ್ತೇನೆ.  ನಾವು ಖಂಡಿತವಾಗಿಯೂ ಅದನ್ನು ನಮ್ಮ ಸಿದ್ಧತೆಯಲ್ಲಿ ಬಳಸುತ್ತೇವೆ.

ಪ್ರಧಾನ ಮಂತ್ರಿ: ಇನ್ನಷ್ಟು ಹೇಳಿ.

ಚೆಸ್ ಸ್ಪರ್ಧಿ: ಹೆಚ್ಚೇನೂ ಇಲ್ಲ ಸರ್, ಇದೊಂದು  ದೊಡ್ಡ ಅನುಭವ.

ಪ್ರಧಾನ ಮಂತ್ರಿ: ಹೆಚ್ಚೇನೂ ಇಲ್ಲವೇ? ನೀವು ಗೆದ್ದಿದ್ದೀರಿ, ಅದೇ ರೀತಿ ... ಚಿನ್ನ (ಪದಕ) ಸುಲಭವಾಗಿ ಬಂದಿದೆಯೇ?

ಚೆಸ್ ಸ್ಪರ್ಧಿ: ಇಲ್ಲ ಸರ್, ಅದು ಸುಲಭವಾಗಿರಲಿಲ್ಲ. ನಾವು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಪುರುಷರು ಸೇರಿದಂತೆ ನನ್ನ ಎಲ್ಲಾ ಸಹ ಆಟಗಾರರು ಅಂತಿಮವಾಗಿ ಈ ಹಂತವನ್ನು ತಲುಪಲು ತುಂಬಾ ಶ್ರಮಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.

ಪ್ರಧಾನ ಮಂತ್ರಿ : ನಿಮ್ಮ ಹೆತ್ತವರಲ್ಲಿ ಅನೇಕರು ವೈದ್ಯರಾಗಿರುವುದನ್ನು ನಾನು ಗಮನಿಸಿದ್ದೇನೆ.

ಚೆಸ್ ಸ್ಪರ್ಧಿ: ಹೌದು, ನನ್ನ ಪೋಷಕರು ಇಬ್ಬರೂ ವೈದ್ಯರು, ಮತ್ತು ನನ್ನ ಸಹೋದರಿ ಕೂಡ ವೈದ್ಯೆ. ನಾನು ಚಿಕ್ಕವನಿದ್ದಾಗ, ಅವರು ಮುಂಜಾನೆ 2 ಗಂಟೆಗೆ ರೋಗಿಗಳಿಂದ ಫೋನ್ ಕರೆಗಳನ್ನು ಪಡೆಯುವುದನ್ನು ನಾನು ನೋಡುತ್ತಿದ್ದೆ, ಮತ್ತು ಅವರು ಅವರನ್ನು ನೋಡಲು ಹೋಗಬೇಕಾಗಿತ್ತು. ಆದ್ದರಿಂದ ನಾನು ಹೆಚ್ಚು ಸ್ಥಿರವಾದ ವೃತ್ತಿಜೀವನವನ್ನು ಆರಿಸಬೇಕೆಂದು ಭಾವಿಸಿದೆ, ಆದರೆ ನಂತರ ಕ್ರೀಡೆಗಳಿಗೆ ಸಾಕಷ್ಟು ಓಡುವ ಅಗತ್ಯವಿದೆ ಎಂದು ನಾನು ಅರಿತುಕೊಂಡೆ!

ಚೆಸ್ ಸ್ಪರ್ಧಿ: ಸರ್, ನೀವು ಪ್ರತಿ ಕ್ರೀಡೆ ಮತ್ತು ಪ್ರತಿಯೊಬ್ಬ ಕ್ರೀಡಾಪಟುವನ್ನು ಪ್ರೋತ್ಸಾಹಿಸುತ್ತಿರುವುದನ್ನು ಮತ್ತು ಬೆಂಬಲಿಸುತ್ತಿರುವುದನ್ನು ನಾನು ಸದಾ ಗಮನಿಸಿದ್ದೇನೆ. ನೀವು ಕ್ರೀಡೆಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಾನು ಅದರ ಹಿಂದಿನ ಕಥೆಯನ್ನು ತಿಳಿಯಲು ಬಯಸುತ್ತೇನೆ – ಏಕೆ ಅದು ?

ಪ್ರಧಾನ ಮಂತ್ರಿ: ನಾನು ನಿಮಗೆ ಹೇಳುತ್ತೇನೆ. ಒಂದು ದೇಶವು ಕೇವಲ ಅದರ ಸಂಪತ್ತು, ಉದ್ಯಮ ಅಥವಾ ಜಿಡಿಪಿಯಿಂದ ಅಭಿವೃದ್ಧಿ ಹೊಂದುವುದಿಲ್ಲ ಎಂದು ನಾನು ನಂಬುತ್ತೇನೆ. ಒಂದು ರಾಷ್ಟ್ರವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಕೃಷ್ಟವಾಗಿರಬೇಕು. ಇದು ಚಲನಚಿತ್ರೋದ್ಯಮವಾಗಿದ್ದರೆ, ನಾವು ಗರಿಷ್ಠ ಆಸ್ಕರ್ ಗೆಲ್ಲುವ ಗುರಿಯನ್ನು ಹೊಂದಿರಬೇಕು. ಇದು ವಿಜ್ಞಾನವಾಗಿದ್ದರೆ, ನಾವು ಹೆಚ್ಚಿನ ನೊಬೆಲ್ ಪ್ರಶಸ್ತಿಗಳನ್ನು ಗುರಿಯಾಗಿಸಬೇಕು. ಅಂತೆಯೇ, ಕ್ರೀಡೆಯಲ್ಲಿ, ನಮ್ಮ ಮಕ್ಕಳು ಗರಿಷ್ಠ ಚಿನ್ನದ ಪದಕಗಳನ್ನು ಮನೆಗೆ ತರಬೇಕು. ಒಂದು ದೇಶವು ಈ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ  ಅದು ನಿಜವಾಗಿಯೂ ಶ್ರೇಷ್ಠವಾಗುತ್ತದೆ. ನಾನು ಗುಜರಾತಿನಲ್ಲಿದ್ದಾಗ, ನಾನು "ಖೇಲ್ ಮಹಾಕುಂಭ" (ಕ್ರೀಡಾ ಉತ್ಸವ) ವನ್ನು ಪ್ರಾರಂಭಿಸಿದೆ, ಅಲ್ಲಿ ಲಕ್ಷಾಂತರ ಮಕ್ಕಳು ಭಾಗವಹಿಸಿದ್ದರು. ನಾನು ಹಿರಿಯರಿಗೂ  ಆಡಲು ಪ್ರೋತ್ಸಾಹಿಸಿದೆ. ಪರಿಣಾಮವಾಗಿ, ಪ್ರತಿಭಾವಂತ ಮಕ್ಕಳು ಹೊರಹೊಮ್ಮಲು ಪ್ರಾರಂಭಿಸಿದರು. ನಮ್ಮ ಯುವಜನರಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಎರಡನೆಯದಾಗಿ, ದೇಶದಲ್ಲಿ ಉತ್ತಮ ಸಾಮಾಜಿಕ ವಾತಾವರಣಕ್ಕಾಗಿ, ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ಜೀವನದ ಎಲ್ಲಾ ಅಂಶಗಳಲ್ಲೂ ಕ್ರೀಡಾ ಮನೋಭಾವವು ಸಾಂಸ್ಕೃತಿಕ ಮಾನದಂಡವಾಗಿರಬೇಕು ಎಂದು ನಾನು ಭಾವಿಸುತ್ತೇನೆ.

 

|

ಚೆಸ್ ಸ್ಪರ್ಧಿ: ನೀವು ಪ್ರತಿದಿನ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಒತ್ತಡದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ನೀವು ನಮಗೆ ಯಾವ ಸಲಹೆ ನೀಡುತ್ತೀರಿ?

ಪ್ರಧಾನ ಮಂತ್ರಿ: ದೈಹಿಕ ಸಾಮರ್ಥ್ಯವು ಬಹಳ ಮುಖ್ಯ. ನಮ್ಮಲ್ಲಿ ಅನೇಕರು ದೈಹಿಕವಾಗಿ ಸದೃಢರಾಗಿದ್ದಾರೆ, ಮತ್ತು ನೀವು ಬಹುಶಃ ತರಬೇತಿ ನಿಯಮವನ್ನು ಅನುಸರಿಸುತ್ತೀರಿ. ಆಟಕ್ಕೆ ಮೊದಲು ಏನು ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ನಿಮಗೆ ಹೇಳಿರಬೇಕು. ಈ ವಿಷಯಗಳ ಸುತ್ತ ನಾವು ಅಭ್ಯಾಸಗಳನ್ನು ಬೆಳೆಸಿಕೊಂಡರೆ, ನಾವು ಎಲ್ಲಾ ರೀತಿಯ ಸಮಸ್ಯೆಗಳನ್ನು ಜೀರ್ಣಿಸಿಕೊಳ್ಳಬಹುದು ಎಂದು ನಾನು ನಂಬುತ್ತೇನೆ. ಉತ್ತಮ ನಿರ್ಧಾರ ತೆಗೆದುಕೊಳ್ಳಲು, ನಿಮಗೆ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಮಾಹಿತಿಯ ಅಗತ್ಯವಿದೆ. ಆಹ್ಲಾದಕರವಾದದ್ದನ್ನು ಮಾತ್ರ ಕೇಳಲು ಬಯಸುವುದು ಮಾನವ ಸ್ವಭಾವ, ಆದರೆ ಅದು ನಿರ್ಧಾರಗಳಲ್ಲಿ ತಪ್ಪುಗಳಿಗೆ ಕಾರಣವಾಗಬಹುದು. ನೀವು ಎಲ್ಲಾ ರೀತಿಯ ಮಾಹಿತಿಯನ್ನು ಕೇಳಲು ಪ್ರಯತ್ನಿಸಿದರೆ, ವಿಭಿನ್ನ ದೃಷ್ಟಿಕೋನಗಳನ್ನು ಅರ್ಥಮಾಡಿಕೊಂಡರೆ, ಅವುಗಳನ್ನು ನೀವೇ ವಿಶ್ಲೇಷಿಸಿದರೆ, ಮತ್ತು ಯಾವುದೇ ಹಿಂಜರಿಕೆಯಿಲ್ಲದೆ, ಏನಾದರೂ ಅಸ್ಪಷ್ಟವಾಗಿದ್ದರೆ ತಜ್ಞರನ್ನು ಕೇಳಿದರೆ, ಸವಾಲುಗಳನ್ನು ನಿಭಾಯಿಸುವುದು ನಿಮಗೆ ಸುಲಭವಾಗುತ್ತದೆ. ಕೆಲವು ವಿಷಯಗಳು ಅನುಭವದೊಂದಿಗೆ ಬರುತ್ತವೆ, ಮತ್ತು ನಾನು ಹಿಂದೆಯೇ ಹೇಳಿದಂತೆ, ಯೋಗ ಮತ್ತು ಧ್ಯಾನಕ್ಕೆ ನಿಜವಾದ ಶಕ್ತಿ ಇದೆ.

ಚೆಸ್ ಸ್ಪರ್ಧಿ: ಸರ್, ನಾವು ಎರಡು ವಾರಗಳ ಕಾಲ ಆಡಿದ್ದೇವೆ, ಮತ್ತು ನಾವು ಈಗ ದಣಿದಿದ್ದೇವೆ. ಆದರೆ ನೀವು ವಿರಾಮ ತೆಗೆದುಕೊಳ್ಳದೆ ವರ್ಷಗಳ ಕಾಲ ಹಗಲು ರಾತ್ರಿ ಕೆಲಸ ಮಾಡುತ್ತೀರಿ. ಆದ್ದರಿಂದ ನಾನು ಕೇಳಲು ಬಯಸುತ್ತೇನೆ - ನಿಮ್ಮ ಶಕ್ತಿಯ ರಹಸ್ಯವೇನು? ನಿಮಗೆ ಬಹಳಷ್ಟು ತಿಳಿದಿದೆ, ನೀವು ಯಾವಾಗಲೂ ಕಲಿಕೆಗೆ ಮುಕ್ತರಾಗಿದ್ದೀರಿ, ಜಗತ್ತಿಗೆ ತೆರೆದುಕೊಂಡಿದ್ದೀರಿ ಮತ್ತು ನೀವು ಪ್ರತಿಯೊಬ್ಬ ಕ್ರೀಡಾ ವ್ಯಕ್ತಿಗೆ ಪ್ರದರ್ಶನ ನೀಡಲು ತುಂಬಾ ಉತ್ಸಾಹ ತುಂಬುತ್ತೀರಿ, ಹುರಿದುಂಬಿಸುತ್ತೀರಿ. ನಾನು ಕೇಳಲು ಬಯಸುತ್ತೇನೆ, ನೀವು ನಮಗೆ ಒಂದು ಸಲಹೆ ನೀಡಬಹುದಾದರೆ, ನೀವು ಚೆಸ್ ಅನ್ನು ಎಲ್ಲಿ ನೋಡಲು ಬಯಸುತ್ತೀರಿ?

ಪ್ರಧಾನ ಮಂತ್ರಿ : ನೋಡಿ, ಜೀವನದಲ್ಲಿ ಎಂದಿಗೂ ತೃಪ್ತಿಯನ್ನು ಬಯಸಬೇಡಿ. ನೀವು ಎಂದಿಗೂ ಯಾವುದರಿಂದಲೂ ತೃಪ್ತರಾಗಬಾರದು ಏಕೆಂದರೆ ಆಗ ನೀವು ಸಂತೃಪ್ತರಾಗಲು ಪ್ರಾರಂಭಿಸುತ್ತೀರಿ.

ಚೆಸ್ ಸ್ಪರ್ಧಿ: ಅದಕ್ಕಾಗಿಯೇ ನೀವು ಕೇವಲ ಮೂರು ಗಂಟೆಗಳ ಕಾಲ ನಿದ್ರೆ ಮಾಡುತ್ತೀರಾ, ಸರ್!

ಪ್ರಧಾನ ಮಂತ್ರಿ : ನಮ್ಮೊಳಗೆ ಯಾವಾಗಲೂ ಹಸಿವು ಇರಬೇಕು- ಹೊಸದನ್ನು ಮಾಡಲು, ಇನ್ನೂ ಹೆಚ್ಚಿನದನ್ನು ಮಾಡಲು.

ಚೆಸ್ ಸ್ಪರ್ಧಿ: ನಾವು ಆಗಷ್ಟೇ ಪಂದ್ಯಾವಳಿಯನ್ನು ಗೆದ್ದಿದ್ದೆವು, ಮತ್ತು ನಿಮ್ಮ ಭಾಷಣವನ್ನು ಲೈವ್ ನೋಡಿದಾಗ ನಾವು ಬಸ್ ನಲ್ಲಿ ಹಿಂದಿರುಗುತ್ತಿದ್ದೆವು. ಭಾರತವು ಎರಡು ಐತಿಹಾಸಿಕ ಚಿನ್ನದ ಪದಕಗಳನ್ನು ಗೆದ್ದಿದೆ ಎಂದು ನೀವು ಜಗತ್ತಿಗೆ ಘೋಷಿಸಿದ್ದೀರಿ, ಮತ್ತು ನಾವೆಲ್ಲರೂ ಬಸ್ಸಿನಲ್ಲಿ ಒಟ್ಟಿಗೆ ಇದ್ದೆವು. ಇದು ನಮಗೆ ತುಂಬಾ ಸಂತೋಷವನ್ನುಂಟುಮಾಡಿತು, ನೀವು ಅದನ್ನು ಇಡೀ ಪ್ರಪಂಚದ ಮುಂದೆ ಘೋಷಿಸಿದ್ದೀರಿ. ನಾನು 1998 ರಲ್ಲಿ ನನ್ನ ಮೊದಲ ಒಲಿಂಪಿಯಾಡ್ ಆಡಿದೆ, ಮತ್ತು ಆ ಸಮಯದಲ್ಲಿ, ಗ್ಯಾರಿ ಕಾಸ್ಪರೋವ್ ಮತ್ತು ಕಾರ್ಪೊವ್ ಅವರಂತಹ ಆಟಗಾರರು ಆಡುತ್ತಿದ್ದರು, ಮತ್ತು ನಾವು ಅವರ ಆಟೋಗ್ರಾಫ್ ಪಡೆಯಲು ಓಡುತ್ತಿದ್ದೆವು. ಆಗ ಭಾರತದ ಶ್ರೇಯಾಂಕ ತುಂಬಾ ಕೆಳಮಟ್ಟದಲ್ಲಿತ್ತು. ಆದರೆ ಈ ಬಾರಿ ನಾನು ತರಬೇತುದಾರನಾಗಿ ಹೋದಾಗ, ಗುಕೇಶ್, ಬ್ರಹ್ಮಾನಂದ, ಅರ್ಜುನ್, ದಿವ್ಯಾ, ಹರಿಕಾ ಬರುತ್ತಿರುವುದನ್ನು ನೋಡಿದೆ, ಈಗ ಜನರು ಅವರ ಆಟೋಗ್ರಾಫ್ ಪಡೆಯಲು ಓಡುತ್ತಿದ್ದಾರೆ. ಈ ಬದಲಾವಣೆ, ಹೊಸ ತಲೆಮಾರಿನ ಆಟಗಾರರ ಮೇಲಿನ ಈ ವಿಶ್ವಾಸ - ನಿಮ್ಮ ಚಿಂತನೆ/ದೃಷ್ಟಿಕೋನದಿಂದಾಗಿದೆ ಮತ್ತು  ಭಾರತವು ನಂಬರ್ ಒನ್ ಆಗಬೇಕು ಎಂದು ನಾನು ಭಾವಿಸುತ್ತೇನೆ. ಬದಲಾವಣೆ ಈಗ ಆಗುತ್ತಿದೆ ಎಂದು ನಾನು ನಂಬುತ್ತೇನೆ, ಸರ್.

 

|

ಚೆಸ್ ಸ್ಪರ್ಧಿ: ಇಷ್ಟು ಕಡಿಮೆ ಸಮಯದಲ್ಲಿ ನಮ್ಮನ್ನು ಭೇಟಿ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನೀವು ಯುಎಸ್ ನಲ್ಲಿದ್ದಿರಿ, ಆದಾಗ್ಯೂ ನೀವು ನಮಗಾಗಿ ಸಮಯವನ್ನು ಮೀಸಲಿಟ್ಟಿದ್ದೀರಿ, ಮತ್ತು ನಾವು ಇದರಿಂದ ನಿಜವಾಗಿಯೂ ಬಹಳ ದೊಡ್ಡ ಪ್ರೇರಣೆ ಪಡೆದಿದ್ದೇವೆ.

ಪ್ರಧಾನ ಮಂತ್ರಿ : ನನ್ನ ಮೌಲ್ಯ ನಿಮ್ಮಲ್ಲಿ ಇದೆ. ಇದು ನಮಗೆ ಮಾತ್ರವಲ್ಲ, ಚೆಸ್ ಆಡುವ ಇತರರಿಗೂ ದೊಡ್ಡ ಸ್ಫೂರ್ತಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಉತ್ತಮವಾಗಿ ಆಡಲು ಮತ್ತು ನಿಮ್ಮನ್ನು ಭೇಟಿಯಾಗಲು ಪ್ರೇರೇಪಿಸಲ್ಪಡುತ್ತಾರೆ, ಇದು ಅವರಿಗೆ ಇನ್ನಷ್ಟು ಸ್ಫೂರ್ತಿ ನೀಡುತ್ತದೆ.

ಹೌದು, ಕೆಲವೊಮ್ಮೆ ಇತರರು ಯಶಸ್ವಿಯಾಗುವುದನ್ನು ನೋಡುವುದು, ಅವರು ಅದನ್ನು ಮಾಡಲು ಸಾಧ್ಯವಾದರೆ, ನಾವೂ ಅದನ್ನು ಮಾಡಬಹುದು ಎಂಬುದನ್ನು ನಮಗೆ ತೋರಿಸುತ್ತದೆ. ಒಮ್ಮೆ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಒಂದು ದೊಡ್ಡ ಚೆಸ್ ಸ್ಪರ್ಧೆಯನ್ನು ಆಯೋಜಿಸಿದ್ದೆ.

ಚೆಸ್ ಸ್ಪರ್ಧಿ: ಆ ಕಾರ್ಯಕ್ರಮದಲ್ಲಿ ಇಪ್ಪತ್ತು ಸಾವಿರ ಜನರು ಒಟ್ಟಿಗೆ ಚೆಸ್ ಆಡಿದರು, ಮತ್ತು ಸರ್, ಅವರಲ್ಲಿ ಅನೇಕರು ಹಿಂದೆಂದೂ ಚೆಸ್ ಆಡಿರಲಿಲ್ಲ.

ಪ್ರಧಾನ ಮಂತ್ರಿ : ಆ ಸಮಯದಲ್ಲಿ, ಕೆಲವರು ಮೋದಿ ಏನು ಮಾಡುತ್ತಿದ್ದಾರೆ ಎಂದು ಆಶ್ಚರ್ಯಪಟ್ಟರು. 20,000 ಜನರಿಗೆ ಆಸನಗಳನ್ನು ವ್ಯವಸ್ಥೆ ಮಾಡಲು ದೊಡ್ಡ ಸ್ಥಳದ ಅಗತ್ಯವಿದೆ, ಆದ್ದರಿಂದ ನಾನು ದೊಡ್ಡ ಟೆಂಟ್ ನಿರ್ಮಿಸಿದೆ. ಅಷ್ಟೊಂದು ಹಣವನ್ನು ಏಕೆ ಖರ್ಚು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಹ ಕೇಳುತ್ತಿದ್ದರು. ನಾನು ಅವರಿಗೆ ಹೇಳಿದೆ, "ಇದಕ್ಕಾಗಿಯೇ ನಾನು ಖರ್ಚು ಮಾಡುತ್ತೇನೆ."

ಚೆಸ್ ಸ್ಪರ್ಧಿ: ಸರ್, ಆ ಸಮಯದಲ್ಲಿ ನೀವು ನನ್ನನ್ನು ತುಂಬಾ ಪ್ರೋತ್ಸಾಹಿಸಿದಾಗ, ನಾನು ತುಂಬಾ ಸಂತೋಷಪಟ್ಟೆ. ಆ ಕ್ಷಣದಿಂದ ನಾನು ನನ್ನ ಎಲ್ಲವನ್ನೂ ಚೆಸ್ ಗೆ ನೀಡಬೇಕಾಗಿದೆ ಎಂದು ನನಗೆ ನಾನೇ ಹೇಳಿದೆ. ಅಂದಿನಿಂದ, ಭಾರತಕ್ಕಾಗಿ ಪದಕಗಳನ್ನು ಗೆಲ್ಲುವುದು ನನ್ನ ಗುರಿಯಾಗಿತ್ತು, ಮತ್ತು ನಾನು ನಂಬಲಾಗದಷ್ಟು ಸಂತೋಷಪಟ್ಟೆ.

ಪ್ರಧಾನ ಮಂತ್ರಿ : ನೀವೂ ಕೂಡಾ ಅಲ್ಲಿದ್ದಿರಾ !

ಚೆಸ್ ಸ್ಪರ್ಧಿ: ಹೌದು, ನೀವು ಅದನ್ನು ಆಯೋಜಿಸಿದಾಗ. ಆ ಕಾರ್ಯಕ್ರಮದಲ್ಲಿ, ಅನೇಕ ಹುಡುಗಿಯರು ಸಹ ಭಾಗವಹಿಸಿದ್ದರು.

ಪ್ರಧಾನ ಮಂತ್ರಿ: ವಾವ್. ಹಾಗಾದರೆ ಅವರು ನಿಮ್ಮನ್ನು ಆ ಕಾರ್ಯಕ್ರಮಕ್ಕೆ ಹೇಗೆ ಕರೆತಂದರು?

ಚೆಸ್ ಸ್ಪರ್ಧಿ: ನಾನು ಏಷ್ಯನ್ ಅಂಡರ್ -9 ಚಾಂಪಿಯನ್ ಶಿಪ್ ಗೆದ್ದಿದ್ದೆ, ಮತ್ತು ಗುಜರಾತ್ ನ ಗಾಂಧಿನಗರದಲ್ಲಿ ನಡೆಯುತ್ತಿರುವ ದೊಡ್ಡ ಕಾರ್ಯಕ್ರಮದ ಬಗ್ಗೆ ಯಾರೋ ನನ್ನ ತಾಯಿಗೆ ಹೇಳಿದರು. ಆಗ ನನ್ನನ್ನು ಆಹ್ವಾನಿಸಲಾಯಿತು.

ಪ್ರಧಾನ ಮಂತ್ರಿ: ನಾನು ಇದನ್ನು ಇಟ್ಟುಕೊಳ್ಳಬಹುದೇ?

ಚೆಸ್ ಸ್ಪರ್ಧಿ: ಹೌದು ಸರ್. ಅದನ್ನು ಫ್ರೇಮ್ ಮಾಡಿ ನಿಮಗೆ ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿತ್ತು, ಸರ್, ಆದರೆ ...

ಪ್ರಧಾನ ಮಂತ್ರಿ: ಚಿಂತಿಸಬೇಡಿ, ಇದು ನನಗೆ ಬಹಳ ವಿಶೇಷವಾದ ನೆನಪು. ನಾನು ನಿಮಗೆ ನೀಡಿದ ಶಾಲು ಇಟ್ಟುಕೊಂಡಿದ್ದೀರಾ?

ಚೆಸ್ ಸ್ಪರ್ಧಿ: ಹೌದು, ಸರ್, ನಾನು ಅದನ್ನು ಇಟ್ಟುಕೊಂಡಿದ್ದೇನೆ.

ಪ್ರಧಾನ ಮಂತ್ರಿ: ಅದ್ಭುತ. ನನಗೆ  ನಿಜವಾಗಿಯೂ ಸಂತೋಷವಾಗಿದೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು. ಸತತವಾಗಿ ಪ್ರಗತಿ ಸಾಧಿಸುತ್ತಿರಿ!

 

  • krishangopal sharma Bjp January 11, 2025

    नमो नमो 🙏 जय भाजपा 🙏🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷
  • krishangopal sharma Bjp January 11, 2025

    नमो नमो 🙏 जय भाजपा 🙏🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 11, 2025

    नमो नमो 🙏 जय भाजपा 🙏🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 11, 2025

    नमो नमो 🙏 जय भाजपा 🙏🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 11, 2025

    नमो नमो 🙏 जय भाजपा 🙏🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷
  • Gopal Singh Chauhan November 10, 2024

    jay shree ram
  • ram Sagar pandey November 07, 2024

    🌹🙏🏻🌹जय श्रीराम🙏💐🌹जय माता दी 🚩🙏🙏🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹
  • Avdhesh Saraswat November 02, 2024

    HAR BAAR MODI SARKAR
  • Chandrabhushan Mishra Sonbhadra November 02, 2024

    jay Shri Ram
  • Chandrabhushan Mishra Sonbhadra November 02, 2024

    jay shree Ram
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Govt saved 48 billion kiloWatt of energy per hour by distributing 37 cr LED bulbs

Media Coverage

Govt saved 48 billion kiloWatt of energy per hour by distributing 37 cr LED bulbs
NM on the go

Nm on the go

Always be the first to hear from the PM. Get the App Now!
...
PM Modi greets the people of Mauritius on their National Day
March 12, 2025

Prime Minister, Shri Narendra Modi today wished the people of Mauritius on their National Day. “Looking forward to today’s programmes, including taking part in the celebrations”, Shri Modi stated. The Prime Minister also shared the highlights from yesterday’s key meetings and programmes.

The Prime Minister posted on X:

“National Day wishes to the people of Mauritius. Looking forward to today’s programmes, including taking part in the celebrations.

Here are the highlights from yesterday, which were also very eventful with key meetings and programmes…”