QuoteIndia is moving forward with the goal of reaching connectivity to every village in the country: PM
Quote21st century India, 21st century Bihar, now moving ahead leaving behind all old shortcomings: PM
QuoteNew farm bills passed are "historic and necessary" for the country to move forward: PM Modi

ಬಿಹಾರ ರಾಜ್ಯಪಾಲ ಶ್ರೀ ಫಗು ಚೌಹಾಣ್ ಜೀ, ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರವಿಶಂಕರ ಪ್ರಸಾದ್ ಜೀ, ಶ್ರೀ ವಿ.ಕೆ.ಸಿಂಗ್ ಜೀ, ಶ್ರೀ ಆರ್.ಕೆ.ಸಿಂಗ್ ಜೀ, ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಜೀ, ಇತರ ಸಚಿವರೇ, ಸಂಸತ್ ಸದಸ್ಯರೇ ಮತ್ತು ಶಾಸಕರೇ, ಹಾಗು ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ !

ಬಿಹಾರದ ಅಭಿವೃದ್ಧಿಯ ಪ್ರಯಾಣದಲ್ಲಿ ಇಂದಿನದ್ದು ಇನ್ನೊಂದು ಪ್ರಮುಖ ದಿನವಾಗಿದೆ. ಸ್ವಲ್ಪ ಸಮಯದ ಹಿಂದೆ , ಬಿಹಾರದಲ್ಲಿ ಸಂಪರ್ಕ ಅಭಿವೃದ್ಧಿ ಮಾಡುವ ಒಂಭತ್ತು ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಈ ಯೋಜನೆಗಳಲ್ಲಿ ಚತುಷ್ಪಥ ಮತ್ತು ಷಟ್ಪಥ ಹೆದ್ದಾರಿಗಳ ನಿರ್ಮಾಣ ಜೊತೆಗೆ ನದಿಗಳ ಮೇಲೆ 3 ಬೃಹತ್ ಸೇತುವೆಗಳ ನಿರ್ಮಾಣವೂ ಸೇರಿದೆ. ಈ ಯೋಜನೆಗಳಿಗಾಗಿ ಬಿಹಾರದ ಜನತೆಗೆ ಹಾರ್ದಿಕ ಶುಭಾಶಯಗಳು. 

ಸ್ನೇಹಿತರೇ,

ಈ ದಿನ ಬಿಹಾರಕ್ಕೆ ಬಹಳ ಮಹತ್ವದ  ದಿನ ಮಾತ್ರವಲ್ಲ ಇಡೀ ದೇಶಕ್ಕೇ ಹಾಗು   ಯುವ ಭಾರತಕ್ಕೂ ಅಷ್ಟೇ ಮಹತ್ವದ ಮುಖ್ಯ  ದಿನವಾಗಿದೆ.  ಇಂದು ಭಾರತವು  ತನ್ನ ಗ್ರಾಮಗಳನ್ನು ಆತ್ಮನಿರ್ಭರ ಭಾರತದಡಿಯಲ್ಲಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ದಾಪುಗಾಲುಗಳನ್ನಿಡುತ್ತಿದೆ. ಈ ಕಾರ್ಯಕ್ರಮ ಇಡೀ ದೇಶದ್ದಾದರೂ ಅದು  ಅದು ಇಂದು ಬಿಹಾರದಿಂದ ಆರಂಭಗೊಳ್ಳುತ್ತಿದೆ ಎಂಬುದು ನನಗೆ ಸಂತೋಷ ತಂದಿದೆ. ಈ ಯೋಜನೆ ಅಡಿಯಲ್ಲಿ 1000 ದಿನಗಳಲ್ಲಿ ಆಪ್ಟಿಕಲ್ ಫೈಬರ್ ಮೂಲಕ ದೇಶದ 6 ಲಕ್ಷ ಗ್ರಾಮಗಳಿಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.  ನಿತೀಶ್ ಜೀ ಅವರ ಉತ್ತಮ ಆಡಳಿತದಲ್ಲಿ, ದೃಢ ನಿರ್ಧಾರದಿಂದ ಮುಂದುವರೆದರೆ , ಈ ಯೋಜನೆಯು ಬಿಹಾರದಲ್ಲಿ ತ್ವರಿತಗತಿಯಲ್ಲಿ ಅನುಷ್ಟಾನವಾಗಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕೆಲವು ವರ್ಷಗಳ ಹಿಂದಿನವರೆಗೂ ಅಂತರ್ಜಾಲ ಬಳಸುವವರಲ್ಲಿ ಭಾರತದ ಹಳ್ಳಿಗಳಲ್ಲಿಯ ಜನರ ಸಂಖ್ಯೆ ನಗರ ಜನತೆಗಿಂತ ಹೆಚ್ಚಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ.  ಹಳ್ಳಿಗಳ ಯುವಜನತೆ, ರೈತರು, ಮಹಿಳೆಯರು ಸುಲಭದಲ್ಲಿ ಅಂತರ್ಜಾಲ ಬಳಸುವುದಕ್ಕೆ ಸಮರ್ಥರಾದಾರು ಎಂಬುದನ್ನು ಅಂದಾಜು ಮಾಡುವುದಕ್ಕೂ ಹಲವರಿಗೆ ಸಾಧ್ಯವಿರಲಿಲ್ಲ. ಈಗ ಇಂತಹ ಪರಿಸ್ಥಿತಿಯೇ ಬದಲಾಗಿದೆ.  ಇಂದು ಭಾರತವು ಡಿಜಿಟಲ್ ವರ್ಘಾವಣೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿ ದೇಶಗಳ ಸಾಲಿನಲ್ಲಿದೆ. ನೀವು ಆಗಸ್ಟ್ ನ ಅಂಕಿ–ಅಂಶಗಳನ್ನು ಗಮನಿಸಿದರೆ ಈ ಅವಧಿಯಲ್ಲಿ ಮೊಬೈಲ್ ಫೋನ್ ಮತ್ತು ಯು.ಪಿ.ಐ. ಮೂಲಕ ಸುಮಾರು  3  ಲಕ್ಷ ಕೋ.ರೂ. ಗಳನ್ನು ವರ್ಗಾಯಿಸಲಾಗಿದೆ. ಕೊರೋನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ, ಡಿಜಿಟಲ್ ಇಂಡಿಯಾ ಪ್ರಚಾರಾಂದೋಲನವು ದೇಶದ ಸಾಮಾನ್ಯ ಜನರಿಗೆ ಬಹಳ ದೊಡ್ಡ ಸಹಾಯವನ್ನು ಮಾಡಿದೆ.

ಸ್ನೇಹಿತರೇ,

ಅಂತರ್ಜಾಲ ಬಳಕೆ ಹೆಚ್ಚುತ್ತಿರುವಂತೆಯೇ , ಈಗ ದೇಶದ ಗ್ರಾಮಗಳಿಗೂ ಉತ್ತಮ ಗುಣಮಟ್ಟದ, ಹೆಚ್ಚಿನ ವೇಗದ ಅಂತರ್ಜಾಲ ಅವಶ್ಯವಾಗಿದೆ. ಸರಕಾರದ ಪ್ರಯತ್ನಗಳ ಫಲವಾಗಿ , ಈಗಾಗಲೇ ದೇಶದ ಸುಮಾರು 1.5 ಲಕ್ಷ ಪಂಚಾಯತ್ ಗಳಿಗೆ ಅಪ್ಟಿಕಲ್ ಫೈಬರ್ ತಲುಪಿದೆ. ಅದಕ್ಕಿಂತ ಹೆಚ್ಚಾಗಿ 3 ಲಕ್ಷಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳು ಕಳೆದ 6 ವರ್ಷಗಳಲ್ಲಿ ಆನ್ ಲೈನ್ ಆಗಿವೆ. ಈಗ ದೇಶವು ಈ ಸಂಪರ್ಕವನ್ನು ದೇಶದ ಪ್ರತೀ ಹಳ್ಳಿಗಳಿಗೆ ವಿಸ್ತರಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ವೇಗದ ಅಂತರ್ಜಾಲ ಪ್ರತೀ ಹಳ್ಳಿಗಳಿಗೆ ತಲುಪಿದಾಗ ಗ್ರಾಮಗಳಲ್ಲಿರುವ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವುದು ಸುಲಭ ಸಾಧ್ಯವಾಗಲಿದೆ. ಹಳ್ಳಿಗಳ ಮಕ್ಕಳು , ನಮ್ಮ ಗ್ರಾಮೀಣ ಯುವಕರು ವಿಶ್ವದ ಪುಸ್ತಕಗಳನ್ನು, ಮತ್ತು ತಂತ್ರಜ್ಞಾನವನ್ನು ಮೌಸ್ ಮೇಲೆ ಕ್ಲಿಕ್ ಮಾಡುವುದರಿಂದ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇದಲ್ಲದೆ ಟೆಲಿ ವೈದ್ಯಕೀಯದ ಮೂಲಕ ಈಗ ಕೈಗೆಟಕುವ ದರದಲ್ಲಿ ಮತ್ತು ಅತ್ಯಂತ ದೂರ ಪ್ರದೇಶದಲ್ಲಿರುವ ಬಡವರಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸಲು ಸಾಧ್ಯವಾಗುತ್ತದೆ.

|

ನಿಮಗೆಲ್ಲಾ ಗೊತ್ತಿದೆ, ಈ ಹಿಂದೆ ರೈಲ್ವೇ ರಿಸರ್ವೇಶನ್ನಿಗಾಗಿ ನಾವು ಗ್ರಾಮಗಳಿಂದ ನಗರಗಳಿಗೆ ಹೋಗಬೇಕಿತ್ತು, ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಟಿಕೇಟ್ ಗಳನ್ನು ಕಾಯ್ದಿರಿಸಬೇಕಾಗಿತ್ತು. ಇಂದು ನೀವು ರೈಲ್ವೇ ರಿಸರ್ವೇಶನನ್ನು ನಿಮ್ಮ ಹಳ್ಳಿಗಳಲ್ಲಿ,  ಸಾಮಾನ್ಯ ಸೇವಾ ಕೇಂದ್ರಗಳಿಗೆ ಹೋಗಿ ಮಾಡಬಹುದಾಗಿದೆ. ನೀವು ಎಲ್ಲಿಗಾದರೂ ಹೋಗಬೇಕಾಗಿದ್ದರೆ , ಆಗ ರಿಸರ್ವೇಶನನ್ನು ಸುಲಭವಾಗಿ ಅಂತರ್ಜಾಲ ಸೌಲಭ್ಯದಿಂದ ಮಾಡಬಹುದು. ನಮ್ಮ ರೈತರೂ ಇದರಿಂದ ಭಾರೀ ಪ್ರಯೋಜನಗಳನ್ನು ಪಡೆಯುತ್ತಾರೆ. ಇದರೊಂದಿಗೆ ರೈತರು ಕೃಷಿಗೆ ಸಂಬಂಧಪಟ್ಟ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪಡೆಯಲು ಸಮರ್ಥರಾಗುತ್ತಾರೆ. ಹೊಸ ಬೆಳೆಗಳು, ಹೊಸ ಬೀಜಗಳು, ಹೊಸ ವಿಧಾನಗಳು, ಮತ್ತು ಬದಲಾಗುವ ಹವಾಮಾನದ ಬಗೆ ತಕ್ಷಣದ ಮಾಹಿತಿಯನ್ನು ಅವರು ಪಡೆಯಬಲ್ಲರು.ಇದರ ಜೊತೆಗೆ ಅವರು ತಮ್ಮ ಉತ್ಪಾದನೆಗಳನ್ನು ದೇಶದ ಯಾವ ಭಾಗದಲ್ಲಾದರೂ ಅಥವಾ ವಿಶ್ವದ ಯಾವ ಭಾಗದಲ್ಲಾದಲ್ಲಾದರೂ ಮಾರಾಟ ಮಾಡಲು ಸಮರ್ಥರಾಗುತ್ತಾರೆ. ಹಳ್ಳಿಗಳ ಜನರು ನಗರಗಳಲ್ಲಿರುವಂತಹ ಸವಲತ್ತುಗಳನ್ನು ಮನೆಯಲ್ಲಿಯೇ ಕುಳಿತು ಪಡೆಯುವುದನ್ನು ಖಾತ್ರಿಪಡಿಸುವ ರೀತಿಯಲ್ಲಿ ಅಗತ್ಯವಾದ ಮೂಲಸೌಕರ್ಯಗಳನ್ನು  ಅಭಿವೃದ್ಧಿ ಮಾಡಲಾಗುತ್ತಿದೆ.

ಸ್ನೇಹಿತರೇ,

ಮೂಲಸೌಕರ್ಯಗಳ ಮೇಲೆ ಗಂಭೀರವಾಗಿ ಹೂಡಿಕೆ ಮಾಡಿದ ದೇಶಗಳು ವಿಶ್ವವ್ಯಾಪ್ತಿಯಲ್ಲಿ ತ್ವರಿತಗತಿಯ ಅಭಿವೃದ್ಧಿ ಸಾಧಿಸಿರುವುದನ್ನು ಚರಿತ್ರೆ ಸಾಕ್ಷೀಕರಿಸಿದೆ. ಆದರೆ ದಶಕಗಳ ಕಾಲ ಅಂತಹ ಯೋಜನೆಗಳು , ಮೂಲಸೌಕರ್ಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಬಲ್ಲಂತಹವುಗಳಿಗೆ ಭಾರತದಲ್ಲಿ ಸಾಕಷ್ಟು ಗಮನ ಕೊಡಲಾಗಿಲ್ಲ. ಸ್ನೇಹಿತರೇ, ಅಟಲ್ ಜೀ ಸರಕಾರ ಮೂಲಸೌಕರ್ಯಗಳನ್ನು ಅಭಿವೃದ್ಧಿ ಯೋಜನೆಗಳಲ್ಲಿ ಮತ್ತು ರಾಜಕೀಯದಲ್ಲಿ  ಮುಖ್ಯವಾಹಿನಿಗೆ ತಂದಿತು. ನಿತೀಶ್ ಜೀ ಅವರು ಅಂದು ಅವರ ಸರಕಾರದಲ್ಲಿ  ರೈಲ್ವೇ ಸಚಿವರಾಗಿದ್ದರು. ಅವರಿಗೆ ಅದರ ಬಗೆಗೆ  ಹೆಚ್ಚಿನ  ಅನುಭವವಿದೆ. ಅವರು ಆಡಳಿತದಲ್ಲಿಯ ಬದಲಾವಣೆಯನ್ನು ಹೆಚ್ಚು ನಿಕಟವಾಗಿ ಗಮನಿಸಿದ್ದಾರೆ.

ಸ್ನೇಹಿತರೇ,

ಈಗ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿರುವ ವೇಗ ಮತ್ತು ಪ್ರಮಾಣ ಅಭೂತಪೂರ್ವವಾದುದು. ಇಂದು ಹೆದ್ದಾರಿಗಳನ್ನು 2014ರ ಪೂರ್ವದಲ್ಲಿ ನಡೆಯುತ್ತಿದ್ದುದಕ್ಕಿಂತ ದುಪ್ಪಟ್ಟು ವೇಗದಲ್ಲಿ ನಿರ್ಮಿಸಲಾಗುತ್ತಿದೆ. ಹೆದ್ದಾರಿ ನಿರ್ಮಾಣದ ಮೇಲಣ ಖರ್ಚು ಕೂಡಾ 2014ಕ್ಕೆ ಪೂರ್ವದ ಅವಧಿಗೆ ಹೋಲಿಸಿದರೆ 5 ಪಟ್ಟು ಹೆಚ್ಚಾಗಿದೆ. ಬರಲಿರುವ 4-5 ವರ್ಷಗಳಲ್ಲಿ 110 ಲಕ್ಷ ಕೋ.ರೂ.ಗಳನ್ನು ಮೂಲಸೌಕರ್ಯಕ್ಕಾಗಿ ವ್ಯಯಿಸುವ ಗುರಿ ಹೊಂದಲಾಗಿದೆ. ಇದರಲ್ಲಿ , 19 ಲಕ್ಷ ಕೋ.ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳು ಹೆದ್ದಾರಿಗೆ ಸಂಬಂಧಿಸಿದವು.

ಸ್ನೇಹಿತರೇ,

ರಸ್ತೆ ವಿಸ್ತರಣೆ ಮತ್ತು ಸಂಪರ್ಕ ಸಂಬಂಧಿ ಮೂಲಸೌಕರ್ಯ ಪ್ರಯತ್ನಗಳಿಂದಾಗಿ ಬಿಹಾರಕ್ಕೆ ಕೂಡಾ ಲಾಭವಾಗುತ್ತಿದೆ. ಪೂರ್ವ ಭಾರತದ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. 2015 ರಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ 3 ಸಾವಿರ ಕಿಲೋಮೀಟರ್ ಗಳಿಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪ್ರಕಟಿಸಲಾಗಿದೆ. ಇದಲ್ಲದೆ ಭಾರತಮಾಲಾ ಯೋಜನೆ ಅಡಿಯಲ್ಲಿ ಸುಮಾರು 650 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಇಂದು ಬಿಹಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲದ ಕಾಮಗಾರಿಯನ್ನು ತ್ವರಿತಗೊಳಿಸಲಾಗಿದೆ. ಪೂರ್ವ ಬಿಹಾರ ಮತ್ತು ಪಶ್ಚಿಮ ಬಿಹಾರವನ್ನು ಜೋಡಿಸುವ ಚತುಷ್ಪಥದ ನಾಲ್ಕು ಯೋಜನೆಗಳು ಮತ್ತು ಉತ್ತರ ಭಾರತವನ್ನು ದಕ್ಷಿಣ ಭಾರತದ ಜೊತೆ ಜೋಡಿಸುವ 6 ಯೋಜನೆಗಳು ಪ್ರಗತಿಯಲ್ಲಿವೆ. ಇಂದು ಶಂಕುಸ್ಥಾಪನೆ ಮಾಡಲಾದ ಹೆದ್ದಾರಿ ಅಗಲೀಕರಣ ಯೋಜನೆಗಳು ಬಿಹಾರದ ಎಲ್ಲಾ ಪ್ರಮುಖ ನಗರಗಳ ಸಂಪರ್ಕ ಜಾಲವನ್ನು ಬಲಪಡಿಸಲಿವೆ.

|

ಸ್ನೇಹಿತರೇ,

ಬಿಹಾರವು ಪ್ರಮುಖ ನದಿಗಳಿಂದಾಗಿ ಸಂಪರ್ಕಕ್ಕೆ ಸಂಬಂಧಿಸಿ ಬಹಳ ದೊಡ್ಡ ಅಡೆ ತಡೆಗಳನ್ನು ಎದುರಿಸಬೇಕಾಗಿದೆ. ಇದರಿಂದಾಗಿಯೇ ಪ್ರಧಾನ ಮಂತ್ರಿ ಪ್ಯಾಕೇಜನ್ನು ಘೋಷಿಸಿದಾಗ ಸೇತುವೆಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಯಿತು. ಪ್ರಧಾನ ಮಂತ್ರಿ ಪ್ಯಾಕೇಜಿನಡಿಯಲ್ಲಿ ಒಟ್ಟು 17 ಸೇತುವೆಗಳನ್ನು ಗಂಗಾ ಜೀ ಮೇಲೆ ನಿರ್ಮಿಸಲಾಯಿತು. ಸ್ವಲ್ಪ ಸಮಯದ ಹಿಂದೆ ಸುಶೀಲ್ ಜೀ ನಿಮ್ಮ ಮುಂದೆ ನೀಲ ನಕಾಶೆಯನ್ನು ವಿವರವಾಗಿ ಮಂಡಿಸಿದರು, ಅವುಗಳಲ್ಲಿ ಬಹುಪಾಲು ಪೂರ್ಣಗೊಂಡಿವೆ. ಅದೇ ರೀತಿ ಗಂಡಕ್ ಮತ್ತು ಕೋಸಿ ನದಿಗಳ ಮೇಲೂ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕನುಗುಣವಾಗಿ  ಇಂದು 3 ಹೊಸ ಚತುಷ್ಪಥ ಸೇತುವೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಇವುಗಳಲ್ಲಿ ಎರಡು ಸೇತುವೆಗಳನ್ನು ಗಂಗಾ ಜೀ ಯ ಮೇಲೆ ಮತ್ತು ಒಂದನ್ನು ಕೋಸಿ ನದಿಯ ಮೇಲೆ ನಿರ್ಮಿಸಲಾಗುತ್ತದೆ. ಈ ಸೇತುವೆಗಳ ನಿರ್ಮಾಣದ ಬಳಿಕ ಗಂಗಾ ಮತ್ತು ಕೋಸಿ ನದಿಗಳ ಮೇಲಣ ಚತುಷ್ಪಥ ಸೇತುವೆಗಳ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ.

ಸ್ನೇಹಿತರೇ,

ಬಿಹಾರದ ಜೀವನ ರೇಖೆಯಂತಿರುವ ಮಹಾತ್ಮಾ ಗಾಂಧಿ ಸೇತುವಿನ ದುಸ್ಥಿತಿಯನ್ನು ನಾವು ನೋಡಿದ್ದೆವು. ಆದರೆ ಇಂದು ಅದು ಹೊಸ ಮಾದರಿಯಲ್ಲಿ ಮತ್ತು ಹೊಸ ನೋಟದಲ್ಲಿ ಸೇವೆಗಳನ್ನು ನೀಡುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಭವಿಷ್ಯದ ಆವಶ್ಯಕತೆಗಳಿಗಾಗಿ , ಈಗ ಮಹಾತ್ಮಾ ಗಾಂಧಿ ಸೇತುಗೆ ಸಮಾನಾಂತರವಾಗಿ ಹೊಸ ಚತುಷ್ಪಥ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಹೊಸ ಸೇತುವೆಗೆ ಜೊತೆಯಾಗಿ 8 ಪಥಗಳ ಸಂಪರ್ಕ ರಸ್ತೆಯೂ ಬರಲಿದೆ. ಇದೇ ರೀತಿ ಬಿಹಾರದ ಸಂಪರ್ಕವು ಗಂಗಾ ನದಿಗೆ ವಿಕ್ರಮ ಶಿಲಾ ಸೇತುಗೆ ಸಮಾನಾಂತರವಾಗಿ ನಿರ್ಮಾಣವಾಗುವ ಹೊಸ ಸೇತುವೆ ಮತ್ತು ಕೋಸಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುವ ಸೇತುನಿಂದಾಗಿ ಸುಧಾರಿಸಲಿದೆ.

ಸ್ನೇಹಿತರೇ,

ಸಂಪರ್ಕ ವಿಷಯ ಇಡೀಯಾಗಿ ಬೋಧಿಸಬೇಕಾದ ವಿಷಯ . ಇಲ್ಲಿ ಸೇತುವೆಯನ್ನು ನಿರ್ಮಿಸಲಾಯಿತು , ಅಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಯಿತು, ಇಲ್ಲೆ ರೈಲ್ವೇ ಮಾರ್ಗವಿದೆ, ಮತ್ತು ಅಲ್ಲಿ ರೈಲ್ವೇ ನಿಲ್ದಾಣವನ್ನು ನಿರ್ಮಿಸಲಾಗಿದೆ–ಇಂತಹ ಧೋರಣೆ ದೇಶಕ್ಕೆ ಬಹಳ ಹಾನಿಯನ್ನುಂಟು ಮಾಡಿದೆ. ಮೊದಲು ರಸ್ತೆಗಳು ಮತ್ತು ಹೆದ್ದಾರಿಗಳು ರೈಲ್ವೇ ಜಾಲದ ಜೊತೆ ಸಂಪರ್ಕಿತಗೊಂಡಿರಲಿಲ್ಲ. ಅದೇ ರೀತಿ ರೈಲು ಕೂಡಾ ಬಂದರುಗಳ ಜೊತೆ ಮತ್ತು ಬಂದರುಗಳು ವಿಮಾನ ನಿಲ್ದಾಣದ ಜೊತೆ ಸಂಪರ್ಕಗಳನ್ನು ಹೊಂದಿರಲಿಲ್ಲ. 21 ನೇ ಶತಮಾನದ ಭಾರತ ಮತ್ತು 21 ನೇ ಶತಮಾನದ ಬಿಹಾರ ಈ ಎಲ್ಲಾ ಕೊರತೆಗಳನ್ನು ದಾಟಿ ಮುಂದುವರೆಯುತ್ತಿವೆ. ಇಂದು ದೇಶದಲ್ಲಿ  ಬಹು ಮಾದರಿ ಸಂಪರ್ಕ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಇಂದು ರೈಲ್ವೇ ಮಾರ್ಗ ಮತ್ತು ವಾಯು ಮಾರ್ಗವನ್ನು ಜೋಡಿಸುವ , ಬೆಂಬಲಿಸುವ ರೀತಿಯಲ್ಲಿ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರೈಲ್ವೇ ಮಾರ್ಗಗಳನ್ನು ಅವುಗಳು ಬಂದರುಗಳ ಜೊತೆ ಬೆಸೆದಿರುವಂತೆ ನಿರ್ಮಾಣ ಮಾಡಲಾಗುತ್ತಿದೆ. ಅದೆಂದರೆ ಒಂದು ಮಾದರಿಯ ಸಾರಿಗೆ ಇನ್ನೊಂದು ಮಾದರಿಯ ಸಾರಿಗೆಯನ್ನು ಬೆಂಬಲಿಸುವುದನ್ನು ಖಾತ್ರಿಪಡಿಸುವುದು ಇದರ ಹಿಂದಿರುವ ಚಿಂತನೆ. ಇದರೊಂದಿಗೆ ಸಾಗಾಣಿಕೆಗೆ ಸಂಬಂಧಿಸಿ ಭಾರತದಲ್ಲಿರುವ ಸಮಸ್ಯೆ ಬಹುಪಾಲು ನಿವಾರಣೆಯಾಗಲಿದೆ.

ಸ್ನೇಹಿತರೇ,

ಸಮಾಜದ ಅತ್ಯಂತ ದುರ್ಬಲ ವಲಯಕ್ಕೆ, ಬಡವರಿಗೆ ಮೂಲಸೌಕರ್ಯದಿಂದ ಬಹಳ ಪ್ರಯೋಜನವಾಗಲಿದೆ. ನಮ್ಮ ರೈತರೂ ಇದರಿಂದ ಬಹಳ ಪ್ರಯೋಜನಗಳನ್ನು ಪಡೆಯುತ್ತಾರೆ. ರೈತರಿಗೆ ಉತ್ತಮ ರಸ್ತೆಗಳು ದೊರೆತರೆ  ಮತ್ತು ನದಿಗಳ ಮೇಲೆ ಸೇತುವೆಗಳು ನಿರ್ಮಾಣವಾದರೆ ಕೃಷಿ ಕ್ಷೇತ್ರಗಳು ಮತ್ತು ನಗರದ ಮಾರುಕಟ್ಟೆಗಳ ನಡುವಣ  ಅಂತರ ಬಹಳಷ್ಟು ಕಡಿಮೆಯಾಗುತ್ತದೆ. ಸ್ನೇಹಿತರೇ ದೇಶದ ಸಂಸತ್ತು ನಿನ್ನೆ ದೇಶದ ರೈತರಿಗೆ ಹೊಸ ಹಕ್ಕುಗಳನ್ನು ನೀಡುವ ಚಾರಿತ್ರಿಕ ಕಾನೂನುಗಳನ್ನು ಅಂಗೀಕರಿಸಿತು. ಇಂದು ಬಿಹಾರದ ಜನತೆಯೊಂದಿಗೆ ಮಾತನಾಡುವಾಗ , ನಾನು ದೇಶದ ರೈತರನ್ನು , ಭಾರತದ ಭವ್ಯ ಭವಿಷ್ಯಕ್ಕೆ ಕಾತರಿಸುವವರನ್ನು ಅಭಿನಂದಿಸುತ್ತೇನೆ. ಈ ಸುಧಾರಣೆಗಳು 21 ನೇ ಶತಮಾನದ ಅಗತ್ಯಗಳಾಗಿವೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಇದುವರೆಗೆ ಉತ್ಪಾದನೆ ವ್ಯವಸ್ಥೆ ಮತ್ತು ಮಾರಾಟದ ಕಾನೂನುಗಳು ರೈತರ ಕೈ–ಕಾಲುಗಳನ್ನು ಕಟ್ಟಿ ಹಾಕಿದ್ದವು. ಈ ಕಾನೂನುಗಳ ಆಧಾರದಲ್ಲಿ ದೇಶದಲ್ಲಿ ನಿಸ್ಸಹಾಯಕರಾದ ರೈತರಿಂದ ಲಾಭ ಹೊಡೆಯುವ ಬಲಿಷ್ಟ ಲಾಬಿಯೊಂದು ಹುಟ್ಟಿಕೊಂಡಿತು. ಅದೆಲ್ಲಾ ಎಷ್ಟು ಸಮಯ ನಡೆದೀತು ?. ಆದುದರಿಂದ , ಈ ವ್ಯವಸ್ಥೆಯನ್ನು ಬದಲಿಸುವುದು ಅವಶ್ಯವಿತ್ತು ಮತ್ತು ನಮ್ಮ ಸರಕಾರ ಈ ಬದಲಾವಣೆಗಳನ್ನು ತಂದಿತು. ಹೊಸ ಕೃಷಿ ಸುಧಾರಣೆಗಳು ದೇಶದ ಪ್ರತಿಯೊಬ್ಬ ರೈತರಿಗೂ ಅವರ ಬೆಳೆಯನ್ನು, ಹಣ್ಣುಗಳನ್ನು, ಮತ್ತು ತರಕಾರಿಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ  ಮಾರಾಟ ಮಾಡಬಹುದಾದ ಅವಕಾಶವನ್ನು ನೀಡುತ್ತವೆ. ಈಗ ರೈತರಿಗೆ ಅವರ ಪ್ರದೇಶದಲ್ಲಿರುವ ಮಂಡಿ ಅಲ್ಲದೆ ಇತರ ಆಯ್ಕೆಯ ಅವಕಾಶಗಳು ಲಭಿಸುತ್ತವೆ. ಮಂಡಿಗಳಲ್ಲಿ ರೈತರಿಗೆ ಹೆಚ್ಚು ಲಾಭ ಸಿಗುತ್ತದೆಯಾದರೆ ಅವರಾಗ ಮಂಡಿಗಳಿಗೆ ಹೋಗುತ್ತಾರೆ ಮತ್ತು ತಮ್ಮ ಉತ್ಪಾದನೆಯನ್ನು ಮಾರಾಟ ಮಾಡುತ್ತಾರೆ. ಅವರಿಗೆ ಬೇರೆ ಕಡೆಗಳಲ್ಲಿ ಹೆಚ್ಚು ಹಣ ಸಿಗುತ್ತದೆ ಎಂದಾದರೆ , ಆಗ ಅವರಲ್ಲಿಗೆ ಹೋಗಿ ಮಾರಾಟ ಮಾಡುತ್ತಾರೆ. ಈಗ ಅವರು ಯಾವುದೇ ರೀತಿಯ ನಿರ್ಬಂಧಗಳಿಂದ ಮುಕ್ತರು. ಈಗಿರುವ ಪ್ರಶ್ನೆ ಎಂದರೆ , ಇದು ಯಾವ ಬದಲಾವಣೆಯನ್ನು ತರುತ್ತದೆ ?, ಎಂಬುದಾಗಿದೆ. ಇದರಿಂದ ರೈತರಿಗೆ ಲಾಭವೇನು?, ಈ ನಿರ್ಧಾರವು ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ರೈತರಿಗೆ ಲಾಭದಾಯಕವಾಗುವುದು ಹೇಗೆ ?. ಈ ಪ್ರಶ್ನೆಗಳಿಗೆ ತಳಮಟ್ಟದ ವರದಿಗಳಿಂದ  ಉತ್ತರವನ್ನು ಪಡೆಯಲಾಗಿದೆ.

|

ರೈತರಿಗೆ ಈ ಹೊಸ ಸ್ವಾತಂತ್ರ್ಯದ ಹಲವಾರು ಪ್ರಯೋಜನಗಳು ಈಗಾಗಲೇ ಗೋಚರಕ್ಕೆ ಬಂದಿವೆ. ಕೆಲವು ತಿಂಗಳ ಹಿಂದೆ ಸುಗ್ರೀವಾಜ್ಞೆಯನ್ನು ಹೊರಡಿಸಿದಾಗ ಬಟಾಟೆ ಬೆಳೆಯುವ ಪ್ರದೇಶದ ರೈತರಿಂದ ಬಂದಿರುವ ವರದಿಗಳು ಜೂನ್ –ಜುಲೈ ತಿಂಗಳಲ್ಲಿ ದೊಡ್ಡ ಪ್ರಮಾಣದ ಖರೀದಿದಾರರು ರೈತರಿಗೆ ಉತ್ತಮ ದರ ನೀಡಿ ಶೀತಲೀಕೃತ ದಾಸ್ತಾನುಗಾರಗಳಿಂದ ನೇರವಾಗಿ ಬಟಾಟೆಗಳನ್ನು ಖರೀದಿ ಮಾಡಿದ್ದಾರೆ. ಹೊರಗೆ ರೈತರಿಗೆ ಬಟಾಟೆಗೆ ಹೆಚ್ಚಿನ ಬೆಲೆ ದೊರೆತರೆ ಮಂಡಿಗೆ ಹೋಗಿ ಮಾರಾಟ ಮಾಡುವ ರೈತರಿಗೂ ಹೆಚ್ಚಿನ ಬೆಲೆ ದೊರೆಯಿತು. ಇದಕ್ಕೆ ಕಾರಣ ಹೊರಭಾಗದಲ್ಲಿ ಇದ್ದ ಹೆಚ್ಚಿನ ಬೆಲೆಯ ಒತ್ತಡ. ಅದೇ ರೀತಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿಯೂ ತೈಲ ಗಿರಣಿಗಳು ಸಾಸಿವೆಯನ್ನು 20 ರಿಂದ 30 ಶೇಖಡಾ ಹೆಚ್ಚು ದರ ನೀಡಿ ರೈತರಿಂದಲೇ ನೇರವಾಗಿ ಖರೀದಿಸಿದ ವರದಿಗಳಿವೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬೇಳೆ ಕಾಳುಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ರಾಜ್ಯಗಳಲ್ಲಿ , ರೈತರು ಕಳೆದ ವರ್ಷಗಳಿಗೆ ಹೋಲಿಸಿದಾಗ 15-25  ಶೇಖಡಾ ಹೆಚ್ಚಿನ ಬೆಲೆಯನ್ನು ನೇರವಾಗಿ ಗಳಿಸಿದ್ದಾರೆ. ಅಲ್ಲಿಯ ಬೇಳೆ ಕಾಳುಗಳ ಗಿರಣಿಗಳು ರೈತರಿಂದ ನೇರ ಖರೀದಿ ಮಾಡಿವೆ ಮತ್ತು ಅವರಿಗೆ ನೇರ ಪಾವತಿ ಮಾಡಿವೆ.

ಕೆಲವು ವ್ಯಕ್ತಿಗಳು ಅಸಂತುಷ್ಟರಾಗಿದ್ದಾರೆ ಯಾಕೆ ಎಂಬುದನ್ನು ಈಗ ದೇಶವು ಅಂದಾಜು ಮಾಡಬಹುದು. ಹಲವು ಕಡೆಗಳಲ್ಲಿ ಕೃಷಿ ಮಂಡಿಗಳಿಗೆ ಏನಾಗುತ್ತದೆ ?  ಎಂಬ ಪ್ರಶ್ನೆಯನ್ನು ಎತ್ತಲಾಗುತ್ತಿದೆ. ಕೃಷಿ ಮಂಡಿಗಳನ್ನು ಮುಚ್ಚಲಾಗುತದೆಯೇ, ಅಲ್ಲಿ  ಖರೀದಿ ಸ್ಥಗಿತಗೊಳ್ಳುತ್ತದೆಯೇ ?. ಇಲ್ಲ , ಅಂತಹದ್ದು ಆಗುವುದೇ ಇಲ್ಲ. ಮತ್ತು ನಾನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ ಏನೆಂದರೆ , ಈ ಕಾನೂನುಗಳು , ಈ ಬದಲಾವಣೆಗಳು ಕೃಷಿ ಮಂಡಿಗಳ ವಿರುದ್ದ ಅಲ್ಲ. ಕೃಷಿ ಮಾರುಕಟ್ಟೆಗಳು ಈ ಹಿಂದೆ ಇದ್ದಂತೆಯೇ ಕಾರ್ಯ ನಿರ್ವಹಿಸುತ್ತವೆ. ಎನ್.ಡಿ.ಎ. ಸರಕಾರವು ದೇಶದಲ್ಲಿಯ ಕೃಷಿ ಮಂಡಿಗಳನ್ನು ಆಧುನೀಕರಿಸಲು ಸತತವಾಗಿ ಕೆಲಸ ಮಾಡಿದೆ . ಕಳೆದ 5-6 ವರ್ಷಗಳಲ್ಲಿ ಕೃಷಿ ಮಂಡಿಗಳ ಕಚೇರಿಗಳನ್ನು ನಿರ್ದಿಷ್ಟಪಡಿಸಿ ಅವುಗಳನ್ನು ಕಂಪ್ಯೂಟರೀಕರಣಗೊಳಿಸಲು ಬೃಹತ್ ಆಂದೋಲನವೇ ನಡೆದಿದೆ. ಆದುದರಿಂದ , ಹೊಸ ಕೃಷಿ ಸುಧಾರಣೆಗಳ ಬಳಿಕ , ಕೃಷಿ ಮಂಡಿಗಳು ಕೊನೆಯುಸಿರೆಳೆಯುತ್ತವೆ ಎಂದು ಯಾರೇ ಹೇಳುತ್ತಿದ್ದರೂ, ಅವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ.

ಸ್ನೇಹಿತರೇ,

ಏಕತೆಯಲ್ಲಿ ಬಲವಿದೆ ಎಂಬುದು ಬಹಳ ಹಳೆಯ ಮಾತು. ಕೃಷಿ ಸುಧಾರಣೆಗಳಿಗೆ ಸಂಬಂಧಿಸಿದ ಎರಡನೆ ಕಾನೂನು ಇದರಿಂದ ಪ್ರೇರಣೆ ಪಡೆದಂತಹದು. ಇಂದು  ನಮ್ಮಲ್ಲಿರುವ ಶೇಖಡಾ 85 ರಷ್ಟು ರೈತರು ಸಣ್ಣ ಪ್ರಮಾಣದ ಹಿಡುವಳಿದಾರರು. ಕೆಲವರಿಗೆ 1 ಎಕರೆ , ಕೆಲವರಿಗೆ 2 ಎಕರೆ , ಕೆಲವರಿಗೆ 1 ಹೆಕ್ಟೇರ್ , ಇನ್ನು ಕೆಲವರಿಗೆ 2 ಹೆಕ್ಟೇರ್ ಭೂಮಿ ಇರಬಹುದು. ಅವರೆಲ್ಲಾ ಸಣ್ಣ ರೈತರು. ಅವರು ಸಣ್ಣ ಪ್ರದೇಶದಲ್ಲಿ ಕೃಷಿ ಮಾಡುವ ಮೂಲಕ ಜೀವನೋಪಾಯ ಸಾಗಿಸುತ್ತಾರೆ. ಇದರಿಂದಾಗಿ ಅವರ ಖರ್ಚುಗಳು ಏರುತ್ತವೆ. ಅವರು ತಮ್ಮ ಉತ್ಪಾದನೆಗಳಲ್ಲಿ ಸ್ವಲ್ಪ ಪ್ರಮಾಣವನ್ನು ಮಾರಾಟ ಮಾಡಿದರೂ ಅದಕ್ಕೆ ಸರಿಯಾದ ಬೆಲೆ ಸಿಗುವುದಿಲ್ಲ. ಆದರೆ ಆ ವಲಯದ ರೈತರು ಗುಂಪಾಗಿ ಕೃಷಿ ಮಾಡಿದರೆ , ಆಗ ಅವರ ಖರ್ಚುಗಳು ಕಡಿಮೆಯಾಗುತ್ತವೆ ಮತ್ತು ಸರಿಯಾದ ದರವೂ ಖಾತ್ರಿಯಾಗುತ್ತದೆ. ಹೊರಗಿನ ಖರೀದಿದಾರರು ಈ ರೈತರ ಗುಂಪುಗಳ ಜೊತೆ ಚರ್ಚಿಸಬಹುದು ಮತ್ತು ಅವರ ಉತ್ಪಾದನೆಗಳನ್ನು ನೇರವಾಗಿ ಖರೀದಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಎರಡನೆ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಇದೊಂದು ವಿಶಿಷ್ಟ ಕಾಯ್ದೆಯಾಗಿದ್ದು, ಅಲ್ಲಿ ರೈತರಿಗೆ ಯಾವುದೇ ಬಂಧನದ ಸಂಕೋಲೆಗಳಿಲ್ಲ. ಇದು ರೈತರ ಕೃಷಿ ಭೂಮಿಯ ಭದ್ರತೆ ಮತ್ತು ಮಾಲಕತ್ವದ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಖರೀದಿ ಮತ್ತು ಗೊಬ್ಬರದ ಖರೀದಿ ಇತ್ಯಾದಿಗಳ ಜವಾಬ್ದಾರಿ ಗುತ್ತಿಗೆದಾರನದ್ದು ಅಂದರೆ ಅಂತಿಮ ಉತ್ಪಾದನೆಯನ್ನು ಖರೀದಿಸುವ ಗ್ರಾಹಕನದ್ದಾಗಿರುತ್ತದೆ.

|

ಸ್ನೇಹಿತರೇ,

ಈ ಸುಧಾರಣೆಗಳು ಕೃಷಿ  ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸಲಿವೆ ಮತ್ತು ರೈತರಿಗೆ ಆಧುನಿಕ ತಂತ್ರಜ್ಞಾನ ಲಭಿಸಲಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ರೈತರ ಉತ್ಪನ್ನಗಳು ಸುಲಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಇಲ್ಲಿ ಬಿಹಾರದಲ್ಲಿ ಇತ್ತೀಚೆಗೆ 5 ಕೃಷಿ ಉತ್ಪಾದಕರ ಸಂಘಟನೆಗಳು ಬಹಳ ಪ್ರಖ್ಯಾತವಾದ ಅಕ್ಕಿ ಮಾರಾಟ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂದು ನನಗೆ ತಿಳಿಸಲಾಗಿದೆ. ಈ ಒಪ್ಪಂದದಡಿಯಲ್ಲಿ , ಕಂಪೆನಿಯು ಬಿಹಾರದ ಎಫ್.ಪಿ.ಒ. ಗಳಿಂದ 4,000 ಟನ್ ಭತ್ತವನ್ನು ಖರೀದಿ ಮಾಡಲಿದೆ. ಈಗ ಈ ಎಫ್.ಪಿ.ಒ. ಗಳ ಜೊತೆ ಇರುವ ರೈತರು ಮಂಡಿಗಳಿಗೆ ಹೋಗಬೇಕಿಲ್ಲ. ಅವರ ಉತ್ಪನ್ನ ಈಗ ನೇರವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ತಲುಪುತ್ತದೆ. ಈ ಸುಧಾರಣೆಗಳ ಬಳಿಕ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳಿಗೆ ಮತ್ತು ದೇಶಕ್ಕೆ ಗ್ರಾಮೀಣ ಕೈಗಾರಿಕೆಗಳತ್ತ ನೇರವಾಗಿ ಸಾಗುವ ಹಾದಿ ನಿರ್ಮಾಣವಾಗಲಿದೆ. ನಾನು ನಿಮಗೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಒಂದು ವೇಳೆ ಓರ್ವ ಯುವಕರು ಕೃಷಿ ವಲಯದಲ್ಲಿ ನವೋದ್ಯಮವನ್ನು ಆರಂಭಿಸಲು ಇಚ್ಚಿಸಿದರೆ ಆತ ಚಿಪ್ಸ್ ಕಾರ್ಖಾನೆ ಆರಂಭಿಸಬಹುದು. ಇದುವರೆಗೆ ಅವರು ಮಂಡಿಗೆ ಹೋಗಬೇಕು ಮತ್ತು ಬಟಾಟೆಗಳನ್ನು ಖರೀದಿಸಬೇಕು . ಆ ಬಳಿಕವಷ್ಟೇ ಅವರು ತನ್ನ ಕೆಲಸವನ್ನು ಆರಂಭಿಸಬಹುದು. ಆದರೆ ಈಗ ಆ ಯುವಕರು , ಹೊಸ ಕನಸುಗಳೊಂದಿಗೆ ನೇರವಾಗಿ ಗ್ರಾಮೀಣ ರೈತರಲ್ಲಿ ತೆರಳಿ , ಬಟಾಟೆಗಳಿಗಾಗಿ ಒಪ್ಪಂದ ಮಾಡಿಕೊಳ್ಳಲು ಸಮರ್ಥರಾಗುತ್ತಾರೆ. ಅವರು ಗುಣಮಟ್ಟದ ಬಗ್ಗೆ ರೈತರಿಗೆ ಹೇಳಬಹುದು ಮತ್ತು ತನಗೆ ಬೇಕಾದ ಪ್ರಮಾಣದ ಬಗ್ಗೆ ತಿಳಿಸಬಹುದು. ಅವರು ಅವಶ್ಯವಾದ ಎಲ್ಲಾ ತಾಂತ್ರಿಕ ಸಹಾಯವನ್ನು ಉತ್ತಮ ಗುಣಮಟ್ಟದ ಬಟಾಟೆ ಉತ್ಪಾದನೆಗಾಗಿ ರೈತರಿಗೆ  ನೀಡಬಹುದು.

ಸ್ನೇಹಿತರೇ,

ಇಂತಹ ಒಪ್ಪಂದಗಳಲ್ಲಿ ಇನ್ನೊಂದು ಮಗ್ಗುಲೂ  ಇರುತ್ತದೆ. ನೀವು ಗಮನಿಸಿರಬಹುದು, ಡೈರಿ ಇದ್ದಲ್ಲಿ ಸುತ್ತಲಿನ ಪಶುಪಾಲಕರಿಗೆ ಹಾಲು ಮಾರಾಟ ಸುಲಭ ಸಾಧ್ಯವಾಗುತ್ತದೆ. ಡೈರಿಗಳು ಪಶುಪಾಲಕರ ಮತ್ತು ಪಶುಗಳ ಆರೋಗ್ಯದ ಕಾಳಜಿಯನ್ನು ಮಾಡುತ್ತವೆ. ಜಾನುವಾರುಗಳಿಗೆ ಸೂಕ್ತ ಕಾಲದಲ್ಲಿ ಲಸಿಕೆ ಹಾಕ ಬೇಕಾಗುತ್ತದೆ. ಅವುಗಳಿಗಾಗಿ ಶೆಡ್ ಗಳನ್ನು, ಹಟ್ಟಿಗಳನ್ನು ತಯಾರು ಮಾಡಬೇಕಾಗುತ್ತದೆ. ಮತ್ತು ಜಾನುವಾರುಗಳಿಗೆ ಪೋಷಕಾಂಶಯುಕ್ತ ಆಹಾರ ದೊರೆಯಬೇಕಾಗುತ್ತದೆ. ಜಾನುವಾರುಗಳು ಅಸ್ವಸ್ಥಗೊಂಡರೆ , ಆಗ ವೈದ್ಯರುಗಳು ಸಕಾಲದಲ್ಲಿ ಆಗಮಿಸಬೇಕಾಗುತ್ತದೆ. ಮತ್ತು ನಾನು ಗುಜರಾತಿನಲ್ಲಿದ್ದೆ, ಡೈರಿಗಳು ಜಾನುವಾರುಗಳನ್ನು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಬಲ್ಲೆ. ದೊಡ್ಡ ಡೈರಿಗಳು ಹಾಲು ಉತ್ಪಾದಕರಿಗೆ ಮತ್ತು ರೈತರಿಗೆ ಸಹಾಯ ಮಾಡುತ್ತವೆ. ಮತ್ತು ಇದೆಲ್ಲದರ ಬಳಿಕವೂ ಮುಖ್ಯವಾದ ಸಂಗತಿ ಎಂದರೆ ಡೈರಿಗಳು ಹಾಲನ್ನು ಖರೀದಿಸಿದರೂ, ಪಶು ಪಾಲಕರು ಅಥವಾ ರೈತರು ಜಾನುವಾರುಗಳ ಮಾಲಕರಾಗಿಯೇ ಉಳಿಯುತ್ತಾರೆ. ಜಾನುವಾರುಗಳಿಗೆ ಬೇರೆ ಯಾರೂ ಯಜಮಾನರಾಗುವುದಿಲ್ಲ. ಅದೇ ರೀತಿ ರೈತರು ಭೂಮಿಯ ಒಡೆಯರಾಗಿರುತ್ತಾರೆ. ಇಂತಹದೇ ಸುಧಾರಣೆಗಳು ಕೃಷಿ ವಲಯದಲ್ಲಿಯೂ ಈಗ ಆಗಬಲ್ಲವು.

ಸ್ನೇಹಿತರೇ,

ಅವಶ್ಯಕ ಸಾಮಗ್ರಿಗಳ ಕಾಯ್ದೆಯ ಕೆಲವು ಪ್ರಸ್ತಾವನೆಗಳು ಕೃಷಿ ವ್ಯಾಪಾರ ಕ್ಷೇತ್ರದಲ್ಲಿಯ ನಮ್ಮ ಸ್ನೇಹಿತರ ಹಾದಿಗೆ ಅಡ್ಡ ಬರುತ್ತಿದ್ದವು. ಬದಲಾದ ಕಾಲಘಟ್ಟದಲ್ಲಿ ಅವುಗಳನ್ನೂ ತಿದ್ದುಪಡಿ ಮಾಡಲಾಗಿದೆ. ಬೇಳೆ ಕಾಳುಗಳು, ಬಟಾಟೆ, ಖಾದ್ಯ ತೈಲ, ನೀರುಳ್ಳಿಗಳನ್ನು ಈಗ ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದರಿಂದ  ದೇಶದ ರೈತರು ಅವುಗಳನ್ನು ಶೀತಲೀಕೃತ ದಾಸ್ತಾನುಗಾರಗಳಲ್ಲಿ ಸುಲಭದಲ್ಲಿ ದಾಸ್ತಾನು ಮಾಡಿಡಲು ಸಾಧ್ಯವಿದೆ. ದಾಸ್ತಾನಿಗೆ ಸಂಬಂಧಿಸಿದ ಕಾನೂನು ಸಮಸ್ಯೆ ನಿವಾರಿಸಿದ ಬಳಿಕ ಶೀತಲೀಕೃತ ದಾಸ್ತಾನು ಜಾಲವೂ ಅಭಿವೃದ್ದಿ ಹೊಂದುತ್ತದೆ ಮತ್ತು ವಿಸ್ತರಿಸುತ್ತದೆ.

ಸ್ನೇಹಿತರೇ,

ಕೃಷಿ ಕ್ಷೇತ್ರದಲ್ಲಿಯ ಮತ್ತು ವ್ಯವಸ್ಥೆಯಲ್ಲಿಯ ಈ ಚಾರಿತ್ರಿಕ ಸುಧಾರಣೆಗಳ ಬಳಿಕ , ಕೆಲವರು ತಮ್ಮ ನಿಯಂತ್ರಣದಿಂದ ಎಲ್ಲವೂ ಕೈ ಬಿಟ್ಟು ಹೋಗುತ್ತಿದೆ ಎಂಬ ಭಾವನೆಯನ್ನು ಹೊಂದಿದ್ದಾರೆ. ಆದುದರಿಂದ ಈ ಜನರು ಎಂ.ಎಸ್. ಪಿ. ಕುರಿತಂತೆ ರೈತರನ್ನು ದಾರಿ ತಪ್ಪಿಸಲು ಪ್ರಯತ್ನ ಆರಂಭಿಸಿದ್ದಾರೆ. ಎಂ.ಎಸ್.ಪಿ.ಗೆ ಸಂಬಂಧಿಸಿ ಸ್ವಾಮಿನಾಥನ್ ಶಿಫಾರಸುಗಳನ್ನು ಅನುಷ್ಟಾನಿಸದೇ ಅದನ್ನು ನೆನೆಗುದಿಗೆ ಹಾಕಿದವರು ಇದೇ ಜನರು. ನಾನು ದೇಶದ ಪ್ರತಿಯೊಬ್ಬ  ರೈತರಿಗೂ ಭರವಸೆ ನೀಡುತ್ತೇನೆ ಏನೆಂದರೆ  ಎಂ.ಎಸ್.ಪಿ. ವ್ಯವಸ್ಥೆಯು ಈ ಹಿಂದೆ ಇದ್ದಂತೆ ಮುಂದೆಯೂ ಕಾರ್ಯಾಚರಿಸುತ್ತಿರುತ್ತದೆ. ಅದೇ ರೀತಿ, ಪ್ರತೀ ಹಂಗಾಮಿನಲ್ಲಿಯೂ ಸರಕಾರಿ ಖರೀದಿ ನಡೆಯುತ್ತದೆ ಮತ್ತು ಅದು ಹಿಂದೆ ಇದ್ದಂತೆಯೇ ಇರುತ್ತದೆ.

ಸ್ನೇಹಿತರೇ,

ರೈತರಿಗಾಗಿ ಎಂ.ಎಸ್.ಪಿ.ಗೆ ಸಂಬಂಧಿಸಿ ಮತ್ತು ಸರಕಾರಿ ಖರೀದಿಗೆ ಸಂಬಂಧಿಸಿ ನಮ್ಮ ಸರಕಾರ ಮಾಡಿದಷ್ಟು ಕೆಲಸವನ್ನು ಈ ಹಿಂದೆಂದೂ ಮಾಡಲಾಗಿಲ್ಲ. ಯಾರು ಸತ್ಯ ಹೇಳುತ್ತಿದ್ದಾರೆ ಮತ್ತು ರೈತರ ಕಲ್ಯಾಣಕ್ಕಾಗಿ ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೀವು ಕಳೆದ 5 ವರ್ಷಗಳಲ್ಲಿ ಸರಕಾರ ಮಾಡಿರುವ ಖರೀದಿಯನ್ನು 2014ಕ್ಕೆ ಮುಂಚಿನ 5 ವರ್ಷಗಳ ಖರೀದಿಗೆ ತುಲನೆ ಮಾಡುವ ಮೂಲಕ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ನಿಮಗೆ ಅಲ್ಲಿ ಸಾಕ್ಷಿ ಸಿಗುತ್ತದೆ. ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳ ಸರಕಾರಿ ಖರೀದಿ ಹಿಂದೆಂದಿಗಿಂತಲೂ ಸುಮಾರು 24 ಪಟ್ಟು ಹೆಚ್ಚಳವಾಗಿದೆ. ಈ ವರ್ಷ ಕೊರೊನಾ ಅವಧಿಯಲ್ಲಿ ರಾಬಿ ಹಂಗಾಮಿನಲ್ಲಿ ರೈತರಿಂದ ದಾಖಲೆ ಪ್ರಮಾಣದ ಗೋಧಿಯನ್ನು ಖರೀದಿಸಲಾಗಿದೆ. ಈ ವರ್ಷ ರೈತರಿಗೆ 1 ಲಕ್ಷ 13 ಸಾವಿರ  ಕೋ.ರೂ. ಗಳನ್ನು ಗೋಧಿ, ಭತ್ತ, ಬೇಳೆ ಕಾಳುಗಳು, ಮತ್ತು ತೈಲ ಬೀಜಗಳ ಸಹಿತ ರಾಬಿ ಹಂಗಾಮಿನ ಬೆಳೆಗಳಿಗೆ ಎಂ.ಎಸ್.ಪಿ.ಯಾಗಿ ನೀಡಲಾಗಿದೆ. ಈ ಅಂಕಿ ಅಂಶಗಳು ಹಿಂದಿನ ವರ್ಷಕ್ಕಿಂತ 30 % ಅಧಿಕವಾಗಿವೆ. ಅಂದರೆ ಕೊರೋನಾ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಸರಕಾರಿ ಖರೀದಿಗಳನ್ನು ಮಾಡಲಾಗಿರುವುದು ಮಾತ್ರವಲ್ಲ ರೈತರಿಗೆ ದಾಖಲೆ ಪ್ರಮಾಣದ ಪಾವತಿಗಳನ್ನೂ ಮಾಡಲಾಗಿದೆ.

ಸ್ನೇಹಿತರೇ,

ಆಧುನಿಕ ಚಿಂತನೆಗಳೊಂದಿಗೆ ದೇಶದ ರೈತರಿಗಾಗಿ ಹೊಸ ವ್ಯವಸ್ಥೆಯನ್ನು ರೂಪಿಸುವುದು 21 ನೇ ಶತಮಾನದ ಭಾರತದ ಜವಾಬ್ದಾರಿ. ದೇಶದ ರೈತರನ್ನು ಸ್ವಾವಲಂಬಿಯಾಗಿಸುವುದಕ್ಕೆ ನಮ್ಮ ಪ್ರಯತ್ನಗಳು ಅಡೆ ತಡೆ ಇಲ್ಲದೆ ಸಾಗುತ್ತವೆ. ಮತ್ತು ಸ್ಪಷ್ಟವಾಗಿ ಸಂಪರ್ಕ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಂತಿಮವಾಗಿ ನಾನು ಮತ್ತೊಮ್ಮೆ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳಿಗಾಗಿ ಬಿಹಾರವನ್ನು ಮತ್ತು ಇಡೀಯ ದೇಶವನ್ನು ಅಭಿನಂದಿಸುತ್ತೇನೆ. ನಾನು ಮತ್ತೊಮ್ಮೆ ಆಗ್ರಹಪೂರ್ವಕವಾಗಿ ಹೇಳುವುದೇನೆಂದರೆ ನಾವು ಕೊರೋನಾವೈರಸ್ ವಿರುದ್ದ ಹೋರಾಡುತ್ತಲೇ ಇರಬೇಕು. ನಾವು ಕೊರೋನಾವನ್ನು ಸೋಲಿಸಬೇಕು. ನಾವು ನಮ್ಮ ಕುಟುಂಬದ ಸದಸ್ಯರನ್ನು ಕೊರೋನಾದಿಂದ ರಕ್ಷಿಸಬೇಕು ಮತ್ತು ಅದಕ್ಕಾಗಿ ರೂಪಿಸಲಾದ ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ನಾವು ಯಾವುದೇ ಒಂದು ನಿಯಮವನ್ನು ಅನುಸರಿಸದೇ, ಅದನ್ನು ಕೈ ಬಿಟ್ಟರೂ , ಆಗ ಅದು ಅಪಾಯಕಾರಿಯಾಗಿರುತ್ತದೆ. ನಾವೆಲ್ಲರೂ ಅದನ್ನು ಅನುಸರಿಸಬೇಕು. ನಾನು ಮತ್ತೊಮ್ಮೆ ಬಿಹಾರದ ನನ್ನ ಪ್ರೀತಿಯ ಸಹೋದರರು ಮತ್ತು ಸಹೋದರಿಯರಿಗೆ ಧನ್ಯವಾದ ಹೇಳುತ್ತೇನೆ!

ನಮಸ್ಕಾರ !

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Economy delivers a strong start to the fiscal with GST, UPI touching new highs

Media Coverage

Economy delivers a strong start to the fiscal with GST, UPI touching new highs
NM on the go

Nm on the go

Always be the first to hear from the PM. Get the App Now!
...
India's coastal states and our port cities will become key centres of growth for a Viksit Bharat: PM Modi in Thiruvananthapuram, Kerala
May 02, 2025
QuoteThe Vizhinjam International Deepwater Multipurpose Seaport in Kerala is a significant advancement in India's maritime infrastructure: PM
QuoteToday is the birth anniversary of Bhagwan Adi Shankaracharya. Adi Shankaracharya ji awakened the consciousness of the nation. I pay tribute to him on this auspicious occasion: PM
QuoteIndia's coastal states and our port cities will become key centres of growth for a Viksit Bharat: PM
QuoteGovernment in collaboration with the state governments has upgraded the port infrastructure under the Sagarmala project enhancing port connectivity: PM
QuoteUnder PM-Gatishakti, the inter-connectivity of waterways, railways, highways and airways is being improved at a fast pace: PM
QuoteIn the last 10 years investments under Public-Private Partnerships have not only upgraded our ports to global standards, but have also made them future ready: PM
QuoteThe world will always remember Pope Francis for his spirit of service: PM

केरल के गवर्नर राजेंद्र अर्लेकर जी, मुख्यमंत्री श्रीमान पी. विजयन जी, केंद्रीय कैबिनेट के मेरे सहयोगीगण, मंच पर मौजूद अन्य सभी महानुभाव, और केरल के मेरे भाइयों और बहनों।

एल्लावर्क्कुम एन्डे नमस्कारम्। ओरिक्कल कूडि श्री अनन्तपद्मनाभंडे मण्णिलेक्क वरान् साद्धिच्चदिल् एनिक्क अतियाय सन्तोषमुण्ड।

साथियों,

आज भगवान आदि शंकराचार्य जी की जयंती है। तीन वर्ष पूर्व सितंबर में मुझे उनके जन्मभूमि क्षेत्रम में जाने का सौभाग्य मिला था। मुझे खुशी है कि मेरे संसदीय क्षेत्र काशी में विश्वनाथ धाम परिसर में आदि शंकराचार्य जी की भव्य प्रतिमा स्थापित की गई है। मुझे उत्तराखंड के केदारनाथ धाम में आदि शंकराचार्य जी की दिव्य प्रतिमा के अनावरण का भी सौभाग्य मिला है। और आज ही देवभूमि उत्तराखंड में केदारनाथ मंदिर के पट खुले हैं, केरल से निकलकर, देश के अलग-अलग कोनों में मठों की स्थापना करके आदि शंकराचार्य जी ने राष्ट्र की चेतना को जागृत किया। इस पुनीत अवसर पर मैं उन्हें श्रद्धापूर्वक नमन करता हूं।

साथियों,

यहां एक ओर अपनी संभावनाओं के साथ उपस्थित ये विशाल समुद्र है। औऱ दूसरी ओर प्रकृति का अद्भुत सौंदर्य है। और इन सबके बीच अब new age development का सिंबल, ये विझिंजम डीप-वॉटर सी-पोर्ट है। मैं केरल के लोगों को, देश के लोगों को बहुत-बहुत बधाई देता हूं।

|

साथियों,

इस सी-पोर्ट को Eight thousand eight hundred करोड़ रुपए की लागत से तैयार किया गया है। अभी इस ट्रांस-शिपमेंट हब की जो क्षमता है, वो भी आने वाले समय में बढ़कर के तीन गुनी हो जाएगी। यहां दुनिया के बड़े मालवाहक जहाज आसानी से आ सकेंगे। अभी तक भारत का 75 परसेंट ट्रांस-शिपमेंट भारत के बाहर के पोर्ट्स पर होता था। इससे देश को बहुत बड़ा revenue loss होता आया है। ये परिस्थिति अब बदलने जा रही है। अब देश का पैसा देश के काम आएगा। जो पैसा बाहर जाता था, वो केरल और विझिंजम के लोगों के लिए नई economic opportunities लेकर आएगा।

साथियों,

गुलामी से पहले हमारे भारत ने हजारों वर्ष की समृद्धि देखी है। एक समय में ग्लोबल GDP में मेजर शेयर भारत का हुआ करता था। उस दौर में हमें जो चीज दूसरे देशों से अलग बनाती थी, वो थी हमारी मैरिटाइम कैपेसिटी, हमारी पोर्ट सिटीज़ की economic activity! केरल का इसमें बड़ा योगदान था। केरल से अरब सागर के रास्ते दुनिया के अलग-अलग देशों से ट्रेड होता था। यहां से जहाज व्यापार के लिए दुनिया के कई देशों में जाते थे। आज भारत सरकार देश की आर्थिक ताकत के उस चैनल को और मजबूत करने के संकल्प के साथ काम कर रही है। भारत के कोस्टल स्टेट्स, हमारी पोर्ट सिटीज़, विकसित भारत की ग्रोथ का अहम सेंटर बनेंगे। मैं अभी पोर्ट की विजिट करके आया हूं, और गुजरात के लोगों को जब पता चलेगा, कि इतना बढ़िया पोर्ट ये अडानी ने यहां केरल में बनाया है, ये गुजरात में 30 साल से पोर्ट पर काम कर रहे हैं, लेकिन अभी तक वहां उन्होंने ऐसा पोर्ट नहीं बनाया है, तब उनको गुजरात के लोगों से गुस्सा सहन करने के लिए तैयार रहना पड़ेगा। हमारे मुख्यमंत्री जी से भी मैं कहना चाहूंगा, आप तो इंडी एलायंस के बहुत बड़े मजबूत पिलर हैं, यहां शशि थरूर भी बैठे हैं, और आज का ये इवेंट कई लोगों की नींद हराम कर देगा। वहाँ मैसेज चला गया जहां जाना था।

साथियों,

पोर्ट इकोनॉमी की पूरे potential का इस्तेमाल तब होता है, जब इंफ्रास्ट्रक्चर और ease of doing business, दोनों को बढ़ावा मिले। पिछले 10 वर्षों में यही भारत सरकार की पोर्ट और वॉटरवेज पॉलिसी का ब्लूप्रिंट रहा है। हमने इंडस्ट्रियल एक्टिविटीज़ और राज्य के होलिस्टिक विकास के लिए तेजी से काम आगे बढ़ाया है। भारत सरकार ने, राज्य सरकार के सहयोग से सागरमाला परियोजना के तहत पोर्ट इंफ्रास्ट्रक्चर को अपग्रेड किया है, पोर्ट कनेक्टिविटी को भी बढ़ाया है। पीएम-गतिशक्ति के तहत वॉटरवेज, रेलवेज, हाइवेज और एयरवेज की inter-connectivity को तेज गति से बेहतर बनाया जा रहा है। Ease of doing business के लिए जो reforms किए गए हैं, उससे पोर्ट्स और अन्य इंफ्रास्ट्रक्चर सेक्टर में भी इनवेस्टमेंट बढ़ा है। Indian seafarers, उनसे जुड़े नियमों में भी भारत सरकार ने Reforms किए हैं। और इसके परिणाम भी देश देख रहा है। 2014 में Indian seafarers की संख्या सवा लाख से भी कम थी। अब इनकी संख्या सवा तीन लाख से भी ज्यादा हो गई है। आज भारत seafarers की संख्या के मामले में दुनिया के टॉप थ्री देशों की लिस्ट में शामिल हो गया है।

|

Friends,

शिपिंग इंडस्ट्री से जुड़े लोग जानते हैं कि 10 साल पहले हमारे शिप्स को पोर्ट्स पर कितना लंबा इंतज़ार करना पड़ता था। उन्हें unload करने में लंबा समय लग जाता था। इससे बिजनेस, इंडस्ट्री और इकोनॉमी, सबकी स्पीड प्रभावित होती थी। लेकिन, हालात अब बदल चुके हैं। पिछले 10 वर्षों में हमारे प्रमुख बंदरगाहों पर Ship turn-around time में 30 परसेंट तक की कमी आई है। हमारे पोर्ट्स की Efficiency में भी बढ़ोतरी हुई है, जिसके कारण हम कम से कम समय में ज्यादा कार्गो हैंडल कर रहे हैं।

साथियों,

भारत की इस सफलता के पीछे पिछले एक दशक की मेहनत और विज़न है। पिछले 10 वर्षों में हमने अपने पोर्ट्स की क्षमता को दोगुना किया है। हमारे National Waterways का भी 8 गुना विस्तार हुआ है। आज global top 30 ports में हमारे दो भारतीय पोर्ट्स हैं। Logistics Performance Index में भी हमारी रैकिंग बेहतर हुई है। Global shipbuilding में हम टॉप-20 देशों में शामिल हो चुके हैं। अपने बेसिक इंफ्रास्ट्रक्चर को ठीक करने के बाद हम अब ग्लोबल ट्रेड में भारत की strategic position पर फोकस कर रहे हैं। इस दिशा में हमने Maritime Amrit Kaal Vision लॉन्च किया है। विकसित भारत के लक्ष्य तक पहुँचने के लिए हमारी मैरिटाइम strategy क्या होगी, हमने उसका रोडमैप बनाया है। आपको याद होगा, G-20 समिट में हमने कई बड़े देशों के साथ मिलकर इंडिया मिडिल ईस्ट यूरोप कॉरिडोर पर सहमति बनाई है। इस रूट पर केरल बहुत महत्वपूर्ण position पर है। केरल को इसका बहुत लाभ होने वाला है।

साथियों,

देश के मैरीटाइम सेक्टर को नई ऊंचाई देने में प्राइवेट सेक्टर का भी अहम योगदान है। Public-Private Partnerships के तहत पिछले 10 वर्षों में हजारों करोड़ रुपए का निवेश हुआ है। इस भागीदारी से न केवल हमारे पोर्ट्स ग्लोबल स्टैंडर्ड पर अपग्रेड हुए हैं, बल्कि वो फ्यूचर रेडी भी बने हैं। प्राइवेट सेक्टर की भागीदारी से इनोवेशन और efficiency, दोनों को बढ़ावा मिला है। और शायद मीडिया के लोगों ने एक बात पर ध्यान केंद्रित किया होगा, जब हमारे पोर्ट मिनिस्टर अपना भाषण दे रहे थे, तो उन्होंने कहा, अडानी का उल्लेख करते हुए, उन्होंने कहा कि हमारी सरकार के पार्टनर, एक कम्युनिस्ट गवर्नमेंट का मंत्री बोल रहा है, प्राइवेट सेक्टर के लिए, कि हमारी सरकार का पार्टनर, ये बदलता हुआ भारत है।

|

साथियों,

हम कोच्चि में shipbuilding and repair cluster स्थापित करने की दिशा में भी आगे बढ़ रहे हैं। इस cluster के तैयार होने से यहां रोजगार के अनेक नए अवसर तैयार होंगे। केरल के local talent को, केरल के युवाओं को, आगे बढ़ने का मौका मिलेगा।

Friends,

भारत की shipbuilding capabilities को बढ़ाने के लिए देश अब बड़े लक्ष्य लेकर चल रहा है। इस साल बजट में भारत में बड़े शिप के निर्माण को बढ़ाने के लिए नई पॉलिसी की घोषणा की गई है। इससे हमारे मैन्युफैक्चरिंग सेक्टर को भी बढ़ावा मिलेगा। इसका सीधा लाभ हमारे MSME को होगा, और इससे बड़ी संख्या में employment के और entrepreneurship के अवसर तैयार होंगे।

साथियों,

सही मायनों में विकास तब होता है, जब इंफ्रास्ट्रक्चर भी बिल्ड हो, व्यापार भी बढ़े, और सामान्य मानवी की बेसिक जरूरतें भी पूरी हों। केरल के लोग जानते हैं, हमारे प्रयासों से पिछले 10 वर्षों में केरल में पोर्ट इंफ्रा के साथ-साथ कितनी तेजी से हाइवेज, रेलवेज़ और एयरपोर्ट्स से जुड़ा विकास हुआ है। कोल्लम बाईपास और अलापूझा बाईपास, जैसे वर्षों से अटके प्रोजेक्ट्स को भारत सरकार ने आगे बढ़ाया है। हमने केरल को आधुनिक वंदे भारत ट्रेनें भी दी हैं।

Friends,

भारत सरकार, केरल के विकास से देश के विकास के मंत्र पर भरोसा करती है। हम कॉपरेटिव फेडरिलिज्म की भावना से चल रहे हैं। बीते एक दशक में हमने केरल को विकास के सोशल पैरामीटर्स पर भी आगे ले जाने का काम किया है। जलजीवन मिशन, उज्ज्वला योजना, आयुष्मान भारत, प्रधानमंत्री सूर्यघर मुफ्त बिजली योजना, ऐसी अनेक योजनाओं से केरल के लोगों को बहुत लाभ हो रहा है।

साथियों,

हमारे फिशरमेन का बेनिफिट भी हमारी प्राथमिकता है। ब्लू रेवोल्यूशन और प्रधानमंत्री मत्स्य संपदा योजना के तहत केरल के लिए सैकड़ों करोड़ रुपए की परियोजनाओं को मंजूरी दी गई है। हमने पोन्नानी और पुथियाप्पा जैसे फिशिंग हार्बर का भी modernization किया है। केरल में हजारों मछुआरे भाई-बहनों को किसान क्रेडिट कार्ड्स भी दिये गए हैं, जिसके कारण उन्हें सैकड़ों करोड़ रुपए की मदद मिली है।

|

साथियों,

हमारा केरल सौहार्द और सहिष्णुता की धरती रहा है। यहाँ सैकड़ों साल पहले देश की पहली, और दुनिया की सबसे प्राचीन चर्च में से एक सेंट थॉमस चर्च बनाई गई थी। हम सब जानते हैं, हम सबके लिए कुछ ही दिन पहले दु:ख की बड़ी घड़ी आई है। कुछ दिन पहले हम सभी ने पोप फ्रांसिस को खो दिया है। भारत की ओर से उनके अंतिम संस्कार में शामिल होने के लिए हमारी राष्ट्रपति, राष्ट्रपति द्रौपदी मुर्मू जी वहाँ गई थीं। उसके साथ हमारे केरल के ही साथी, हमारे मंत्री श्री जॉर्ज कुरियन, वह भी गए थे। मैं भी, केरल की धरती से एक बार फिर, इस दुःख में शामिल सभी लोगों के प्रति अपनी संवेदना प्रकट करता हूँ।

साथियों,

पोप फ्रांसिस की सेवा भावना, क्रिश्चियन परम्पराओं में सबको स्थान देने के उनके प्रयास, इसके लिए दुनिया हमेशा उन्हें याद रखेगी। मैं इसे अपना सौभाग्य मानता हूं, कि मुझे उनके साथ जब भी मिलने का अवसर मिला, अनेक विषयों पर विस्तार से मुझे उनसे बातचीत का अवसर मिला। और मैंने देखा हमेशा मुझे उनका विशेष स्नेह मिलता रहता था। मानवता, सेवा और शांति जैसे विषयों पर उनके साथ हुई चर्चा, उनके शब्द हमेशा मुझे प्रेरित करते रहेंगे।

साथियों,

मैं एक बार फिर आप सभी को आज के इस आयोजन के लिए अपनी शुभकामनाएं देता हूं। केरल global maritime trade का बड़ा सेंटर बने, और हजारों नई जॉब्स क्रिएट हों, इस दिशा में भारत सरकार, राज्य सरकार के साथ मिलकर काम करती रहेगी। मुझे पूरा विश्वास है कि केरल के लोगों के सामर्थ्य से भारत का मैरीटाइम सेक्टर नई बुलंदियों को छुएगा।

नमुक्क ओरुमिच्च् ओरु विकसित केरलम पडत्तुयर्ताम्, जइ केरलम् जइ भारत l

धन्यवाद।