Quoteʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ ಯೋಜನೆಯು ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಲ್ಲಿ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಅನುವು ಮಾಡಿಕೊಡುವ ತಡೆರಹಿತ ಆನ್‌ಲೈನ್ ವೇದಿಕೆಯನ್ನು ಸೃಷ್ಟಿಸಲಿದೆ
Quoteʻಜೆಎಎಂ ಟ್ರಿನಿಟಿʼಗಿಂತಲೂ (ಜನ್‌ಧನ್‌ ಖಾತೆ-ಆಧಾರ್‌ ಸಂಖ್ಯೆ-ಮೊಬೈಲ್‌ ಸಂಖ್ಯೆ ಆಧರಿತ ನೇರ ನಗದು ವರ್ಗಾವಣೆ ವ್ಯವಸ್ಥೆ) ಮಿಗಿಲಾದ ಅತಿದೊಡ್ಡ ಸಂಪರ್ಕಿತ ಮೂಲಸೌಕರ್ಯವು ಇಡೀ ವಿಶ್ವದಲ್ಲೇ ಎಲ್ಲಿಯೂ ಇಲ್ಲವೆಂದ ಪ್ರಧಾನಿ
Quote"ಡಿಜಿಟಲ್ ಮೂಲಸೌಕರ್ಯವು 'ಪಡಿತರದಿಂದ ಹಿಡಿದು ಆಡಳಿತದವರೆಗೂʼ ಎಲ್ಲವನ್ನೂ ವೇಗವಾಗಿ ಮತ್ತು ಪಾರದರ್ಶಕರೀತಿಯಲ್ಲಿ ಜನಸಾಮಾನ್ಯರ ಬಳಿಗೆ ತಲುಪಿಸುತ್ತಿದೆ”
Quote"ಟೆಲಿಮೆಡಿಸಿನ್‌ನ ವ್ಯವಸ್ಥೆಯೂ ಅಭೂತಪೂರ್ವ ರೀತಿಯಲ್ಲಿ ವಿಸ್ತರಣೆಯಾಗಿದೆ"
Quote"ಆಯುಷ್ಮಾನ್ ಭಾರತ್ ಯೋಜನೆಯು (ʻಪಿಎಂಜೆಎವೈʼ) ಬಡವರ ಜೀವನದಲ್ಲಿ ಪ್ರಮುಖ ಸಮಸ್ಯೆಯನ್ನು ಪರಿಹರಿಸಿದೆ. ಇಲ್ಲಿಯವರೆಗೆ 2 ಕೋಟಿಗೂ ಹೆಚ್ಚು ದೇಶವಾಸಿಗಳು ಈ ಯೋಜನೆಯಡಿ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆದುಕೊಂಡಿದ್ದಾರೆ, ಅವರಲ್ಲಿ ಅರ್ಧದಷ್ಟು ಮಹಿಳೆಯರಾಗಿದ್ದಾರೆ"
Quote"ಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್, ಈಗ ದೇಶಾದ್ಯಂತದ ಆಸ್ಪತ್ರೆಗಳ ನಡುವೆ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಪರಸ್ಪರ ಸಂಪರ್ಕಿಸುತ್ತದೆ"
Quote"ಸರಕಾರ ಜಾರಿಗೊಳಿಸಿರುವ ಆರೋಗ್ಯ ಸೇವೆ ಪರಿಹಾರಗಳು ದೇಶದ ವರ್ತಮಾನ ಮತ್ತು ಭವಿಷ್ಯದಲ್ಲಿ ದೊಡ್ಡ ಹೂಡ
Quote"ಡಿಜಿಟಲ್ ಮೂಲಸೌಕರ್ಯವು 'ಪಡಿತರದಿಂದ ಹಿಡಿದು ಆಡಳಿತದವರೆಗೂʼ ಎಲ್ಲವನ್ನೂ ವೇಗವಾಗಿ ಮತ್ತು ಪಾರದರ್ಶಕರೀತಿಯಲ್ಲಿ ಜನಸಾಮಾನ್ಯರ ಬಳಿಗೆ ತಲುಪಿಸುತ್ತಿದೆ”

ನಮಸ್ಕಾರ್!

ಈ ಕಾರ್ಯಕ್ರಮದಲ್ಲಿ ಹಾಜರಿರುವ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಜೀ, ನನ್ನ ಎಲ್ಲಾ ಸಂಪುಟ ಸಹೋದ್ಯೋಗಿಗಳೇ, ಹಿರಿಯ ಅಧಿಕಾರಿಗಳೇ, ದೇಶಾದ್ಯಂತದ ಸರಕಾರೀ ವೈದ್ಯರೇ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೇ, ಆರೋಗ್ಯಾಡಳಿತಕ್ಕೆ  ಸಂಬಂಧಪಟ್ಟ ಮತ್ತು ಈ ಕಾರ್ಯಕ್ರಮದಲ್ಲಿ ಹಾಜರಿರುವ ಎಲ್ಲಾ ಗಣ್ಯರೇ ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ.

21 ನೇ ಶತಮಾನದ ಪಯಣದಲ್ಲಿ ಇಂದು ಭಾರತಕ್ಕೆ ಬಹಳ ಮಹತ್ವದ ದಿನ. ದೇಶದ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವ ಕಳೆದ ಏಳು ವರ್ಷಗಳ ಆಂದೋಲನ ಇಂದಿನಿಂದ ಹೊಸ ಹಂತ ಪ್ರವೇಶಿಸುತ್ತಿದೆ ಮತ್ತು ಇದು ಸಾಮಾನ್ಯ ಹಂತ ಅಲ್ಲ,  ಇದು ಅಸಾಮಾನ್ಯ ಹಂತ. ಇಂದು ಆರಂಭವಾಗುತ್ತಿರುವ ಆಂದೋಲನ ಭಾರತದಲ್ಲಿಯ ಆರೋಗ್ಯ ಸವಲತ್ತುಗಳನ್ನು ಕ್ರಾಂತಿಕಾರಕವಾಗಿ ಬದಲಾಯಿಸಲಿದೆ.

ಸ್ನೇಹಿತರೇ,

ಮೂರು ವರ್ಷಗಳ ಹಿಂದೆ, ಆಯುಷ್ಮಾನ್ ಭಾರತ್ ಯೋಜನೆಯನ್ನು ಪಂಡಿತ್ ದೀನ ದಯಾಳ ಉಪಾಧ್ಯಾಯ ಜೀ ಅವರ ಜನ್ಮದಿನದಂದು ಅವರಿಗೆ ಅರ್ಪಿಸಲಾಯಿತು ಮತ್ತು ಇಡೀ ದೇಶಾದ್ಯಂತ ಅನುನಕ್ಕೆ ತರಲಾಯಿತು. ಇಂದಿನಿಂದ ಆಯುಷ್ಮಾನ ಡಿಜಿಟಲ್ ಆಂದೋಲನವನ್ನು ಇಡೀ ದೇಶಾದ್ಯಂತ ಜಾರಿಗೆ ತರಲಾಗುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಈ ಆಂದೋಲನ  ದೇಶದ ಬಡವರ ಮತ್ತು ಮಧ್ಯಮ ವರ್ಗದವರ ಸಮಸ್ಯೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ. ದೇಶಾದ್ಯಂತ ರೋಗಿಗಳನ್ನು ತಂತ್ರಜ್ಞಾನದ ಮೂಲಕ ಸಾವಿರಾರು ಆಸ್ಪತ್ರೆಗಳ ಜೊತೆ ಬೆಸೆದಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಇಂದು ಬಲಿಷ್ಟ ತಂತ್ರಜ್ಞಾನ ವೇದಿಕೆಯ ಮೂಲಕ ವಿಸ್ತರಿಸಲಾಗುತ್ತಿದೆ.

|

ಸ್ನೇಹಿತರೇ,

ಭಾರತದಲ್ಲಿ ಉತ್ತಮ ಆಡಳಿತ ಮತ್ತು ಮತ್ತು ಆಡಳಿತ ಸುಧಾರಣೆಗಾಗಿ ತಂತ್ರಜ್ಞಾನವನ್ನು ಮುಖ್ಯ ಸ್ಥಾನದಲ್ಲಿಡಲಾಗಿದ್ದು, ಅದು ಸಾಮಾನ್ಯ ಜನರನ್ನು ಸಶಕ್ತೀಕರಣ ಮಾಡುತ್ತಿದೆ ಮತ್ತು ಅದು ಅಭೂತಪೂರ್ವವೂ ಆಗಿದೆ. ಡಿಜಿಟಲ್ ಇಂಡಿಯಾ ಆಂದೋಲನ ಭಾರತದ ಜನ ಸಾಮಾನ್ಯನನ್ನು ಸಂಪರ್ಕಿಸುವ ಮೂಲಕ ದೇಶವನ್ನು ಹಲವು ಪಟ್ಟು ಸಶಕ್ತೀಕರಣಗೊಳಿಸಿದೆ.  ಮತ್ತು ನಮಗೆ ಬಹಳ ಚೆನ್ನಾಗಿ ಗೊತ್ತಿದೆ, ನಮ್ಮ  ರಾಷ್ಟ್ರವು ಹೆಮ್ಮೆಯಿಂದ ಹೇಳಿಕೊಳ್ಳಬಹುದು ನಮ್ಮಲ್ಲಿ 130 ಕೋಟಿ ಆಧಾರ್ ಸಂಖ್ಯೆಗಳಿವೆ, 118 ಕೋಟಿ ಮೊಬೈಲ್ ಚಂದಾದಾರರಿದ್ದಾರೆ, ಸುಮಾರು 80 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ ಮತ್ತು ಸುಮಾರು 43 ಕೋಟಿ ಜನ ಧನ್ ಬ್ಯಾಂಕ್ ಖಾತೆಗಳಿವೆ. ಇಷ್ಟೊಂದು ವಿಸ್ತಾರ ವ್ಯಾಪ್ತಿಯಲ್ಲಿ ಸಂಪರ್ಕಿತವಾದಂತಹ ಮೂಲ ಸೌಕರ್ಯ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಈ ಡಿಜಿಟಲ್ ಮೂಲಸೌಕರ್ಯ ಸಾಮಾನ್ಯ ಭಾರತೀಯನಿಗೆ ಪಡಿತರದಿಂದ ಹಿಡಿದು ಆಡಳಿತದವರೆಗೆ ಸೌಲಭ್ಯಗಳನ್ನು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಒದಗಿಸುತ್ತಿದೆ. ಇಂದು ಭಾರತವು ಯು.ಪಿ.ಐ. ಮೂಲಕ ಡಿಜಿಟಲ್ ವರ್ಗಾವಣೆಗಳನ್ನು ಮಾಡುವಲ್ಲಿ ತನ್ನದೇ ಛಾಪನ್ನು ಬೀರಿದೆ. ಇತ್ತೀಚೆಗೆ ಆರಂಭ ಮಾಡಲಾದ  ಇ-ರುಪಿ ವೋಚರ್ ಕೂಡಾ ಬಹಳ ದೊಡ್ಡ ಉಪಕ್ರಮ.

ಸ್ನೇಹಿತರೇ,

ಕೊರೊನಾ ವಿರುದ್ಧದ ಯುದ್ದದಲ್ಲಿ ಭಾರತದ ಡಿಜಿಟಲ್ ಪರಿಹಾರಗಳು ಪ್ರತಿಯೊಬ್ಬ ಭಾರತೀಯನಿಗೂ ಬಹಳ ದೊಡ್ಡ ಸಹಾಯ ಮಾಡಿವೆ. ಉದಾಹರಣೆಗೆ ಆರೋಗ್ಯ ಸೇತು ಆಪ್ ಕೊರೊನಾ ಹರಡುವಿಕೆಯನ್ನು ತಡೆಯುವಲ್ಲಿ, ಜಾಗೃತಿ ಮೂಡಿಸುವಲ್ಲಿ, ಸುತ್ತಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಮತ್ತು ಇಡೀ ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ಬಹಳ ಸಹಾಯ ಮಾಡಿದೆ. ಅದೇ ರೀತಿ, ಎಲ್ಲರಿಗೂ ಉಚಿತ ಲಸಿಕೆ ಆಂದೋಲನದಲ್ಲಿ, ಭಾರತ ಇದುವರೆಗೆ 90 ಕೋಟಿ ಲಸಿಕಾ ಡೋಸ್ ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ದಾಖಲೆಗಳನ್ನು ಮಾಡುವಲ್ಲಿ ಮತ್ತು ನಿಮಗೆ ಪ್ರಮಾಣ ಪತ್ರ ಲಭ್ಯವಾಗುವಂತೆ ಮಾಡುವಲ್ಲಿ ಕೊವಿನ್ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡಾ ನೋಂದಣೆಯಿಂದ ಹಿಡಿದು ಪ್ರಮಾಣ ಪತ್ರ ನೀಡುವಲ್ಲಿಯವರೆಗೆ ಇಂತಹ ದೊಡ್ಡ ಡಿಜಿಟಲ್ ವೇದಿಕೆಯನ್ನು ಹೊಂದಿಲ್ಲ.

|

ಸ್ನೇಹಿತರೇ,

ಕೊರೊನಾ ಅವಧಿಯಲ್ಲಿ ಟೆಲಿಮೆಡಿಸಿನ್ ಅಭೂತಪೂರ್ವವಾಗಿ ವಿಸ್ತರಣೆಯಾಗಿದೆ. ಇದುವರೆಗೆ ಇ-ಸಂಜೀವಿನಿ ಮೂಲಕ ಸುಮಾರು 1.25 ಕೋಟಿ ದೂರ ಪ್ರದೇಶದ ಸಮಾಲೋಚನೆಗಳು ಪೂರ್ಣಗೊಂಡಿವೆ. ಈ ಸೌಲಭ್ಯವು ದೇಶದ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ದೇಶವಾಸಿಗಳನ್ನು ಪ್ರತೀ ದಿನ ನಗರಗಳಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಇರುವ ಹಿರಿಯ ವೈದ್ಯರೊಂದಿಗೆ ಮನೆಯಲ್ಲಿ ಕುಳಿತುಕೊಂಡೇ  ಸಂಪರ್ಕಿಸುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಪ್ರಖ್ಯಾತ ವೈದ್ಯರ ಸೇವೆಗಳು ಬಹಳ ಸುಲಭವಾಗಿ ದೊರೆಯುತ್ತವೆ. ಈ ಸಂದರ್ಭದಲ್ಲಿ, ನಾನು ದೇಶದ ಎಲ್ಲಾ ವೈದ್ಯರು, ದಾದಿಯರು, ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಅದು ಲಸಿಕಾಕರಣ ಇರಲಿ ಅಥವಾ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಇರಲಿ ಅವರ ಪ್ರಯತ್ನಗಳು ಕೊರೊನಾ ಯುದ್ದದ ಸಂದರ್ಭದಲ್ಲಿ ದೇಶಕ್ಕೆ ಬಹಳ ದೊಡ್ಡ ಪರಿಹಾರವನ್ನು ಒದಗಿಸಿವೆ.

ಸ್ನೇಹಿತರೇ,

ಆಯುಷ್ಮಾನ ಭಾರತ್-ಪಿ.ಎಂ.-ಜೆ.ಎ.ವೈ. ಬಡವರ ಬದುಕಿನ ಬಹುತೇಕ ಭಾರೀ ಉದ್ವಿಗ್ನತೆಯನ್ನು ನಿವಾರಣೆ ಮಾಡಿದೆ. ಇದುವರೆಗೆ, ಈ ಯೋಜನೆ ಅಡಿಯಲ್ಲಿ ಎರಡು ಕೋಟಿಗೂ ಅಧಿಕ  ದೇಶವಾಸಿಗಳು ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ. ಮತ್ತು ಅರ್ಧದಷ್ಟು ಫಲಾನುಭವಿಗಳು ನಮ್ಮ ಮಾತೆಯರು ಮತ್ತು ಸಹೋದರಿಯರು ಮತ್ತು ಹೆಣ್ಣು ಮಕ್ಕಳು. ಇದು ಬಹಳ ಸಮಾಧಾನದ ಮತ್ತು ತೃಪ್ತಿಯ ಸಂಗತಿ. ನಮಗೆಲ್ಲಾ ನಮ್ಮ ಕುಟುಂಬದ ಪರಿಸ್ಥಿತಿಯ ಬಗ್ಗೆ ಅರಿವಿದೆ. ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭ್ಯ ಇಲ್ಲದ ಕಾರಣಕ್ಕೆ ದೇಶದ ತಾಯಂದಿರು ಮತ್ತು ಸಹೋದರಿಯರು ಬಹಳ ತೊಂದರೆಗಳನ್ನು ಅನುಭವಿಸುತ್ತಿದ್ದರು. ಮನೆಯ ಬಗ್ಗೆ, ಮನೆಯ ಖರ್ಚುಗಳ ಬಗ್ಗೆ, ಮತ್ತು ಕುಟುಂಬದ ಇತರ ಸದಸ್ಯರ ಬಗ್ಗೆ  ಚಿಂತೆ ಮಾಡುತ್ತಲೇ ನಮ್ಮ ತಾಯಂದಿರು ಮತ್ತು ಸಹೋದರಿಯರು ತಮ್ಮ ಚಿಕಿತ್ಸೆಯನ್ನು ಮುಂದೂಡುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ಅವರು ಅದು ತನ್ನಿಂದ ತಾನೇ ಗುಣವಾಗುತ್ತದೆ ಎಂದು ಭಾವಿಸುತ್ತಿದ್ದರು. ಮತ್ತು ಸ್ಥಳೀಯ ವೈದ್ಯರಿಂದ ಒಂದು ಡೋಸ್ ಮದ್ದು ತೆಗೆದುಕೊಂಡರೆ ಸಾಕು ಮತ್ತು ಎಲ್ಲವೂ ಸರಿಯಾಗುತ್ತದೆ ಎಂದು ನಂಬುತ್ತಿದ್ದರು. ತಾಯಿಯ ಹೃದಯ ಹೇಗೆಂದರೆ ಅವರು ತಾವೇ ನೋವು ಅನುಭವಿಸುತ್ತಾರೆಯೇ ಹೊರತು ತಮ್ಮ ಕುಟುಂಬದ ಮೇಲೆ ಯಾವುದೇ ಹಣಕಾಸಿನ ಹೊರೆ ಬೀಳಲು ಬಿಡುವುದಿಲ್ಲ.

ಸ್ನೇಹಿತರೇ,

ಇದುವರೆಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ ಚಿಕಿತ್ಸೆ ಪಡೆದವರು ಅಥವಾ ಚಿಕಿತ್ಸೆ ಪಡೆಯುತ್ತಿರುವವರು ಈ ಮೊದಲು,  ಈ ಯೋಜನೆಗಿಂತ ಮೊದಲು ಆಸ್ಪತ್ರೆಗಳಿಗೆ ಹೋಗುವ ಧೈರ್ಯ ಮಾಡುತ್ತಿರಲಿಲ್ಲ ಮತ್ತು ಆಸ್ಪತ್ರೆಗೆ ಹೋಗುವುದನ್ನು ಮುಂದೂಡುತ್ತಿದ್ದರು. ಅವರು ನೋವನ್ನು ಅನುಭವಿಸುತ್ತಿದ್ದರು. ತಮ್ಮನ್ನು ತಾವು ಹೇಗೋ ಸಂಭಾಳಿಸಿಕೊಳ್ಳುತ್ತಿದ್ದರು ಹೊರತು ಹಣ ಇಲ್ಲದ ಕಾರಣಕ್ಕೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಈ ನೋವಿನ ಅರಿವು ನಮ್ಮನ್ನು ಅಲುಗಾಡಿಸಿತು. ಅಂತಹ ಕುಟುಂಬಗಳನ್ನು ನಾನು ಈ ಕೊರೊನಾ ಅವಧಿಯಲ್ಲಿ ಭೇಟಿಯಾಗಿದ್ದೆ. ಮತ್ತು ಜನರು ಆಯುಷ್ಮಾನ್ ಸೇವೆಗಳನ್ನು ಪಡೆಯುವುದಕ್ಕೆ ಮೊದಲೂ ಇಂತಹ ಕುಟುಂಬಗಳನ್ನು ನಾನು ನೋಡಿದ್ದೆ. ಅನೇಕ ಹಿರಿಯರು ನಮ್ಮ ಮಕ್ಕಳು ಸಾಲದ ಹೊರೆಯಲ್ಲಿ ಸಿಲುಕಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ತಾವು ಚಿಕಿತ್ಸೆ ಪಡೆಯುವುದಕ್ಕೆ ಹಿಂಜರಿದಿರುವುದಾಗಿ ಹೇಳುತ್ತಿದ್ದರು. ಅವರು ತಾವೇ ನೋವನ್ನು ಅನುಭವಿಸುತ್ತಿದ್ದರು ಮತ್ತು ಜಗತ್ತನ್ನು ಬಿಟ್ಟು ಹೋಗಲು ತಯಾರಾಗುತ್ತಿದ್ದರೇ ಹೊರತು ತಮ್ಮ ಮಕ್ಕಳು ಸಾಲದ ಉರುಳಿನಲ್ಲಿ ಸಿಕ್ಕಿ ಬೀಳಬಾರದು ಎಂದು ಹೇಳುತ್ತಿದ್ದರು. ಆದುದರಿಂದ ಅವರು  ಚಿಕಿತ್ಸೆ ಪಡೆಯುತ್ತಿರಲಿಲ್ಲ. ಇಲ್ಲಿರುವ ಬಹುತೇಕ ಜನರು ನಮ್ಮ ಕುಟುಂಬಗಳಲ್ಲಿ ಮತ್ತು ನೆರೆ ಹೊರೆಯಲ್ಲಿ ಇಂತಹ ಅನೇಕರನ್ನು ಕಂಡಿರಬಹುದು. ನಮ್ಮಲ್ಲಿ ಬಹುತೇಕ ಮಂದಿ ಕೂಡಾ ಇಂತಹದೇ ಆತಂಕದಲ್ಲಿ ಸಾಗುತ್ತಿರಬಹುದು.

|

ಸ್ನೇಹಿತರೇ,

ಕೊರೊನಾಕ್ಕೆ ಮೊದಲು ರಾಜ್ಯಗಳಿಗೆ ಹೋದಾಗೆಲ್ಲ ಆಯುಷ್ಮಾನ್ ಭಾರತದ ಫಲಾನುಭವಿಗಳನ್ನು ಭೇಟಿಯಾಗುವುದು ನನ್ನ ಅಭ್ಯಾಸ. ನಾನು ಅವರನ್ನು ಭೇಟಿಯಾಗುತ್ತಿದ್ದೆ,  ಮಾತನಾಡುತ್ತಿದ್ದೆ, ಅವರ ನೋವನ್ನು ಮತ್ತು ಅನುಭವಗಳನ್ನು ತಿಳಿದುಕೊಳ್ಳುತ್ತಿದ್ದೆ ಮತ್ತು ಅವರ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೆ. ಇದು ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಅಷ್ಟಾಗಿ ಚರ್ಚೆಯಾಗುತ್ತಿರಲಿಲ್ಲ, ಆದರೆ ನಾನದನ್ನು ಆಗಾಗ ನಡೆಸುತ್ತಿದ್ದೆ. ನಾನು ವೈಯಕ್ತಿಕವಾಗಿ ಆಯುಷ್ಮಾನ್ ಭಾರತ್ ಯೋಜನೆಯ ನೂರಾರು ಫಲಾನುಭವಿಗಳನ್ನು ಭೇಟಿಯಾಗಿದ್ದೇನೆ ಮತ್ತು ನಾನು ಆ ಹಿರಿಯ ತಾಯಿಯನ್ನು ಹೇಗೆ ಮರೆಯಲಿ, ಅವರು ಹಲವು ವರ್ಷಗಳ ಕಾಲ ಕಿಡ್ನಿ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿದ್ದರು, ಕಡೆಗೊಂದು ದಿನ ಅವರು ಅದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಮತ್ತೋರ್ವ ಯುವಕ ಕೂಡಾ ಕಿಡ್ನಿಗೆ ಸಂಬಂಧಪಟ್ಟ ಖಾಯಿಲೆಯಿಂದ ಬಳಲುತ್ತಿದ್ದರು.  ಕಾಲಿನಲ್ಲಿ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದ ಅಥವಾ ಬೆನ್ನು ಹುರಿ ನೋವಿನ ಜೊತೆ ಹೋರಾಡುತ್ತಿದ್ದ ಆ ಕೆಲವು ರೋಗಿಗಳ ಮುಖಗಳನ್ನು ಮರೆಯಲಾರೆ. ಇಲ್ಲಿ ಕೆಲ ಸಮಯದ ಹಿಂದೆ ತೋರಿಸಲಾದ ಸಾಕ್ಷ್ಯಚಿತ್ರ ಮತ್ತು ಬಿಡುಗಡೆ ಮಾಡಲಾದ ಕಾಫಿ ಟೇಬಲ್ ಪುಸ್ತಕ ಆ ತಾಯಂದಿರ ಮತ್ತು ಸಹೋದರಿಯರ ವಿವರಗಳನ್ನು ಒಳಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಸರಕಾರ ಖರ್ಚು ಮಾಡಿದ ಸಾವಿರಾರು ಕೋಟಿ ರೂಪಾಯಿ ಬಡತನದ ವಿಷವರ್ತುಲದಲ್ಲಿ ಸಿಲುಕಿದ್ದ ಲಕ್ಷಾಂತರ ಕುಟುಂಬಗಳನ್ನು ರಕ್ಷಿಸಿದೆ. ಯಾರೂ ಬಡವರಾಗಿ ಉಳಿಯಲು ಆಶಿಸುವುದಿಲ್ಲ. ಪ್ರತಿಯೊಬ್ಬರೂ ಕಠಿಣ ದುಡಿಮೆ ಮಾಡುವ ಮೂಲಕ ಬಡತನದಿಂದ ಹೊರಬರಲು ಪ್ರಯತ್ನಿಸುತ್ತಾರೆ ಮತ್ತು ಅವಕಾಶಗಳಿಗೆ ಹುಡುಕಾಡುತ್ತಾರೆ. ಕೆಲವೊಮ್ಮೆ ಆ ವ್ಯಕ್ತಿ ಬಹಳ ಬೇಗ ಬಡತನದ ವಿಷವರ್ತುಲದಿಂದ ಪಾರಾಗುತ್ತಾರೆ ಎಂಬಂತೆ ಕಾಣುತ್ತದೆ, ಆದರೆ ಕುಟುಂಬದ ಯಾರಾದರೊಬ್ಬರಿಗೆ ಖಾಯಿಲೆ ಬರುತ್ತದೆ, ಆಗ ಎಲ್ಲಾ ಕಠಿಣ ದುಡಿಮೆ ನಿರರ್ಥಕವಾಗುತ್ತದೆ.  ಆಗ ಅವರು 5-10 ವರ್ಷ ಹಿಂದೆ ಬೀಳುತ್ತಾರೆ ಮತ್ತು ಬಡತನದ ವರ್ತುಲದಲ್ಲಿ ಸಿಕ್ಕಿ ಬೀಳುತ್ತಾರೆ. ಖಾಯಿಲೆಯು ಆ ಕುಟುಂಬಕ್ಕೆ ಬಡತನದ ವಿಷವರ್ತುಲದಿಂದ ಹೊರಬರಲು ಅವಕಾಶ ಕೊಡುವುದಿಲ್ಲ. ಮತ್ತು ಅದರಿಂದಾಗಿ ಆಯುಷ್ಮಾನ್ ಭಾರತ ಸಹಿತ ಸರಕಾರ ಜಾರಿಗೆ ತಂದಿರುವ  ಆರೋಗ್ಯ ಸಂಬಂಧಿ ಪರಿಹಾರಗಳು ದೇಶದ ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲಕ್ಕೆ ಬಹಳ ದೊಡ್ಡ ಹೂಡಿಕೆಗಳು.

ಸಹೋದರರೇ ಮತ್ತು ಸಹೋದರಿಯರೇ,

ಆಯುಷ್ಮಾನ್ ಭಾರತ್-ಡಿಜಿಟಲ್ ಆಂದೋಲನ ಆಸ್ಪತ್ರೆಗಳಲ್ಲಿಯ ಪ್ರಕ್ರಿಯೆಗಳನ್ನು ಸರಳೀಕರಣ ಮಾಡುವ ಮೂಲಕ ಜೀವನಕ್ಕೆ ಅನುಕೂಲಕರ ವ್ಯವಸ್ಥೆಯನ್ನು ನಿರ್ಮಾಣ ಮಾಡಿದೆ. ಪ್ರಸ್ತುತ, ಆಸ್ಪತ್ರೆಗಳಲ್ಲಿ ತಂತ್ರಜ್ಞಾನದ ಬಳಕೆ ಒಂದೇ ಒಂದು ಆಸ್ಪತ್ರೆಗೆ ಅಥವಾ ಒಂದು ಸರಣಿಯ ಆಸ್ಪತ್ರೆಗೆ ಮಾತ್ರ ಸೀಮಿತವಾಗಿದೆ. ರೋಗಿ ಹೊಸ ಆಸ್ಪತ್ರೆಗೆ ಹೋದಾಗ ಅಥವಾ ಹೊಸ ನಗರಕ್ಕೆ ಹೋದಾಗ ಆತ ಅದೇ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕಾಗುತ್ತದೆ. ಡಿಜಿಟಲ್ ಆರೋಗ್ಯ ದಾಖಲೆಗಳು ಲಭ್ಯ ಇಲ್ಲದಿದ್ದರೆ ಅವರು ಹಳೆಯ ಕೆಲವು ವರ್ಷಗಳ ಕಡತವನ್ನು ಕೊಂಡೊಯ್ಯಬೇಕಾಗುತ್ತದೆ. ತುರ್ತುಪರಿಸ್ಥಿತಿಗಳಲ್ಲಿ ಇದು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ರೋಗಿ ಮತ್ತು ವೈದ್ಯರ ಬಹಳ ಸಮಯದ ಅಪವ್ಯಯ ಆಗುತ್ತದೆ. ಸಮಸ್ಯೆ ಗಂಭೀರವಾಗುತ್ತದೆ ಮತ್ತು  ಚಿಕಿತ್ಸಾ ವೆಚ್ಚವೂ ಏರುತ್ತದೆ. ನಾವು ಹೆಚ್ಚಾಗಿ ನೋಡುವಾಗ ಹಲವು ಜನರಲ್ಲಿ ಅವರು ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಅವರಲ್ಲಿ ವೈದ್ಯಕೀಯ ದಾಖಲೆಗಳು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಮಾಲೋಚನೆ, ಪರೀಕ್ಷೆ ಮತ್ತು ರೋಗ ಪತ್ತೆ ಇತ್ಯಾದಿಗಳನ್ನು ಹೊಸದಾಗಿ ಮಾಡಬೇಕಾಗುತ್ತದೆ. ವೈದ್ಯಕೀಯ ಇತಿಹಾಸದ ಗೈರುಹಾಜರಿಯಲ್ಲಿ ಅದು ಸಮಯವನ್ನು ಕಬಳಿಸುತ್ತದೆ ಮತ್ತು ಬಹಳ ವೆಚ್ಚದಾಯಕವಾಗಿರುತ್ತದೆ ಮತ್ತು ಕೆಲವೊಮ್ಮೆ ಪರಸ್ಪರ ವಿರೋಧಾಭಾಸದ ಚಿಕಿತ್ಸೆ ನೀಡುವಂತಾಗುತ್ತದೆ ಮತ್ತು ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ವಾಸಿಸುವ ನಮ್ಮ ಸಹೋದರರು ಹಾಗು ಸಹೋದರಿಯರು ಬಹಳಷ್ಟು ಸಂಕಷ್ಟಗಳನ್ನು ಎದುರಿಸುವಂತಾಗುತ್ತದೆ. ವೈದ್ಯರು ವೃತ್ತಪತ್ರಿಕೆಗಳಲ್ಲಿ ಜಾಹೀರಾತು ನೀಡದಿರುವುದರಿಂದ ಬರೇ ಬಾಯಿ ಮಾತಿನಿಂದ ಒಳ್ಳೆಯ ವೈದ್ಯರ ಬಗ್ಗೆ ತಿಳಿದುಕೊಳ್ಳಬೇಕಾಗಿರುತ್ತದೆ. ಈಗ ಎಲ್ಲಾ ವೈದ್ಯರ ಮಾಹಿತಿ, ಅವರ ಪ್ರಾವೀಣ್ಯತಾ ಕ್ಷೇತ್ರ, ಹತ್ತಿರದಲ್ಲಿ ಲಭ್ಯ ಇರುವ ವೈದ್ಯರು, ತಕ್ಷಣ ಎಲ್ಲಿಗೆ ಹೋಗಬೇಕು ಎಂಬಿತ್ಯಾದಿ ಮಾಹಿತಿ ಕೂಡಲೇ ಲಭ್ಯವಾಗುತ್ತದೆ. ಮತ್ತು ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ-ಆಯುಷ್ಮಾನ ಡಿಜಿಟಲ್ ಆಂದೋಲನ ಇಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ.

ಸ್ನೇಹಿತರೇ,

ಆಯುಷ್ಮಾನ್ ಭಾರತ್ –ಡಿಜಿಟಲ್ ಆಂದೋಲನ ಈಗ ದೇಶಾದ್ಯಂತ ಇರುವ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಪರಸ್ಪರ ಜೋಡಿಸಲಿದೆ. ಇದರಡಿಯಲ್ಲಿ ದೇಶವಾಸಿಗಳು ಈಗ ಡಿಜಿಟಲ್ ಆರೋಗ್ಯ ಗುರುತಿನ ಕಾರ್ಡ್ ಪಡೆಯುತ್ತಾರೆ. ಪ್ರತೀ ನಾಗರಿಕರ ಆರೋಗ್ಯ ದಾಖಲೆ ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲ್ಪಡಲಿದೆ. ಡಿಜಿಟಲ್ ಆರೋಗ್ಯ ಗುರುತಿನ ಕಾರ್ಡ್ ಮೂಲಕ ರೋಗಿಯು ತಾನೇ ಹಳೆಯ ದಾಖಲೆಗಳನ್ನು ಪರಿಶೀಲಿಸಬಹುದು ಅಥವಾ ಅಗತ್ಯ ಬಿದ್ದರೆ ವೈದ್ಯರು ಕೂಡಾ ಹಳೆಯ ದಾಖಲೆಗಳನ್ನು ಪರಿಶೀಲಿಸಬಹುದು. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಿ ವೈದ್ಯರ, ದಾದಿಯರ, ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳ ನೋಂದಣೆ ಇರುತ್ತದೆ. ದೇಶದಲ್ಲಿಯ ಎಲ್ಲಾ ಆಸ್ಪತ್ರೆಗಳು, ಕ್ಲಿನಿಕ್ ಗಳು ಪ್ರಯೋಗಾಲಯಗಳು, ಕೆಮಿಸ್ಟ್ ಅಂಗಡಿಗಳು  ನೋಂದಾಯಿಸಲ್ಪಟ್ಟಿರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಡಿಜಿಟಲ್ ಆಂದೋಲನ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ಭಾಗೀದಾರರನ್ನೂ ಏಕ ವೇದಿಕೆಯಲ್ಲಿ ಒಗ್ಗೂಡಿಸಲಿದೆ.

ಸ್ನೇಹಿತರೇ,

ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಈ ಆಂದೋಲನದ ಬಹಳ ದೊಡ್ಡ ಫಲಾನುಭವಿಗಳು. ಇದರ ಪ್ರಯೋಜನಗಳಲ್ಲಿ ಒಂದೆಂದರೆ ದೇಶದ ಯಾವುದೇ ಭಾಗದಲ್ಲಿದ್ದರೂ ತನ್ನ ಭಾಷೆಯನ್ನು ಬಲ್ಲ ಮತ್ತು ತನಗೆ ಗೊತ್ತಿರುವ ಹಾಗು ತನ್ನನ್ನು ಬಾಧಿಸುತ್ತಿರುವ ನಿರ್ದಿಷ್ಟ ಖಾಯಿಲೆಯ ತಜ್ಞ ವೈದ್ಯರನ್ನು ಹುಡುಕುವುದು ರೋಗಿಗೆ ಬಹಳ ಸುಲಭವಾಗಲಿದೆ. ಇದು  ರೋಗಿಗೆ ದೇಶದ ಯಾವುದೇ ಭಾಗದಲ್ಲಿರುವ ತಜ್ಞ ವೈದ್ಯರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ವೈದ್ಯರಲ್ಲದೆ, ಅದು ಉತ್ತಮ ಪರೀಕ್ಷೆಗಳಿಗಾಗಿ ಪ್ರಯೋಗಾಲಯಗಳನ್ನು ಹುಡುಕಲು ಮತ್ತು ಔಷಧಿ ಮಳಿಗೆಗಳನ್ನು ಹುಡುಕಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಈ ಆಂದೋಲನದ ಬಹಳ ದೊಡ್ಡ ಫಲಾನುಭವಿಗಳು. ಇದರ ಪ್ರಯೋಜನಗಳಲ್ಲಿ ಒಂದೆಂದರೆ ದೇಶದ ಯಾವುದೇ ಭಾಗದಲ್ಲಿದ್ದರೂ ತನ್ನ ಭಾಷೆಯನ್ನು ಬಲ್ಲ ಮತ್ತು ತನಗೆ ಗೊತ್ತಿರುವ ಹಾಗು ತನ್ನನ್ನು ಬಾಧಿಸುತ್ತಿರುವ ನಿರ್ದಿಷ್ಟ ಖಾಯಿಲೆಯ ತಜ್ಞ ವೈದ್ಯರನ್ನು ಹುಡುಕುವುದು ರೋಗಿಗೆ ಬಹಳ ಸುಲಭವಾಗಲಿದೆ. ಇದು  ರೋಗಿಗೆ ದೇಶದ ಯಾವುದೇ ಭಾಗದಲ್ಲಿರುವ ತಜ್ಞ ವೈದ್ಯರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ವೈದ್ಯರಲ್ಲದೆ, ಅದು ಉತ್ತಮ ಪರೀಕ್ಷೆಗಳಿಗಾಗಿ ಪ್ರಯೋಗಾಲಯಗಳನ್ನು ಹುಡುಕಲು ಮತ್ತು ಔಷಧಿ ಮಳಿಗೆಗಳನ್ನು ಹುಡುಕಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಈ ಆಧುನಿಕ ವೇದಿಕೆಯಿಂದಾಗಿ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗೆ ಸಂಬಂಧಿಸಿದ ನೀತಿ ರೂಪಿಸುವ ಇಡೀ ಪರಿಸರ ವ್ಯವಸ್ಥೆ ಹೆಚ್ಚು ಸಮರ್ಪಕವಾಗಲಿದೆ. ದೇಶದ ದೂರದ ದುರ್ಗಮ ಭಾಗಗಳಿಗೆ ತಮ್ಮ ಸೇವೆಗಳನ್ನು ಒದಗಿಸಲು ವೈದ್ಯರು ಮತ್ತು ಆಸ್ಪತ್ರೆಗಳು ಈ ವೇದಿಕೆಯನ್ನು ಬಳಸಲು ಸಮರ್ಥವಾಗುತ್ತವೆ. ಸಮರ್ಪಕ ಮತ್ತು ವಿಶ್ವಾಸಾರ್ಹ ದತ್ತಾಂಶಗಳಿಂದಾಗಿ ಚಿಕಿತ್ಸೆಯಲ್ಲಿ ಸುಧಾರಣೆಯಾಗಲಿದೆ ಮತ್ತು ರೋಗಿಗಳಿಗೆ ಹಣ ಉಳಿತಾಯವಾಗಲಿದೆ. ಸಹೋದರರೇ ಮತ್ತು ಸಹೋದರಿಯರೇ,

ದೇಶದಲ್ಲಿ ಆರೋಗ್ಯ ಸೇವೆಗಳು ಸುಲಭದಲ್ಲಿ ಲಭ್ಯವಾಗಬೇಕು ಎಂಬ ಕಾರಣಕ್ಕೆ ಇಂದು ದೇಶಾದ್ಯಂತ ಆಂದೋಲನವನ್ನು ಆರಂಭಿಸಲಾಗಿದೆ. ಇದು 6-7 ವರ್ಷಗಳ ಕಾಲ ನಡೆಯುವ ನಿರಂತರ ಪ್ರಕ್ರಿಯೆಯ ಭಾಗ. ಹಲವಾರು ವರ್ಷಗಳಲ್ಲಿ ಭಾರತವು ಆರೋಗ್ಯಕ್ಕೆ ಸಂಬಂಧಿಸಿ ದಶಕಗಳಷ್ಟು ಹಳೆಯ ಚಿಂತನೆಯನ್ನು ಮತ್ತು ಧೋರಣೆಯನ್ನು ಬದಲು ಮಾಡಿದೆ. ಈಗ ಸಮಗ್ರವಾದಂತಹ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಆರೋಗ್ಯ ಮಾದರಿಯನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ಖಾಯಿಲೆಗಳು ಬಾರದಂತೆ ತಡೆಗಟ್ಟುವ ಮಾದರಿಗೆ  ಆದ್ಯತೆ ನೀಡಲಾಗುತ್ತಿದೆ; ಅಂದರೆ ರೋಗ ತಡೆಗಟ್ಟುವ ಆರೋಗ್ಯ ಸೇವೆ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ, ಮತ್ತು ಅದು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ನಮ್ಮ ಸಾಂಪ್ರದಾಯಿಕ ಆಯುಷ್ ವ್ಯವಸ್ಥೆಗಳಾದ  ಯೋಗ ಮತ್ತು ಆಯುರ್ವೇದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ, ಈ ಎಲ್ಲಾ ಕಾರ್ಯಕ್ರಮಗಳನ್ನು ಬಡವರು ಮತ್ತು ಮಧ್ಯಮವರ್ಗದವರನ್ನು  ರೋಗಗಳೆಂಬ ವಿಷವರ್ತುಲದಿಂದ ರಕ್ಷಿಸುವುದಕ್ಕಾಗಿ ಆರಂಭ ಮಾಡಲಾಗಿದೆ. ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಮತ್ತು ದೇಶದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳಿಗಾಗಿ ಹೊಸ ಆರೋಗ್ಯ ನೀತಿಯನ್ನು ರೂಪಿಸಲಾಗಿದೆ. ಇಂದು ಎ.ಐ.ಐ.ಎಂ.ಎಸ್. ನಂತಹ ಆಧುನಿಕ ಆರೋಗ್ಯ ಸಂಸ್ಥೆಗಳ ಬಹಳ ದೊಡ್ಡ ಜಾಲವನ್ನು ದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರತೀ ಮೂರು ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಒಂದು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಕೆಲಸ ಪ್ರಗತಿಯಲ್ಲಿದೆ.

ಸ್ನೇಹಿತರೇ,

ಭಾರತದಲ್ಲಿ ಆರೋಗ್ಯ ಸೇವೆಗಳನ್ನು ವೃದ್ಧಿ ಮಾಡಲು ಗ್ರಾಮಗಳಲ್ಲಿ ಲಭ್ಯ ಇರುವ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸುವುದು ಬಹಳ ಅವಶ್ಯ. ಈಗ ದೇಶದಲ್ಲಿಯ ಪ್ರಾಥಮಿಕ ಆರೋಗ್ಯ ಜಾಲವನ್ನು ಗ್ರಾಮಗಳಲ್ಲಿ, ಮನೆಗಳಿಗೆ ಹತ್ತಿರದಲ್ಲಿ  ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಬಲಪಡಿಸಲಾಗುತ್ತಿದೆ. ಇದುವರೆಗೆ ಇಂತಹ 80,000 ಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ದೈನಂದಿನ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಲಸಿಕಾಕರಣ, ಗಂಭೀರ ರೋಗಗಳನ್ನು ಮುಂಚಿತವಾಗಿಯೇ ಪತ್ತೆ ಮಾಡುವ ಮತ್ತು ಇತರ ವಿವಿಧ ಪರೀಕ್ಷೆಗಳನ್ನು ನಡೆಸುವ ಸಲಕರಣೆಗಳು ಮತ್ತು ಸೌಲಭ್ಯಗಳು ಲಭ್ಯವಿವೆ. ಈ ಕೇಂದ್ರಗಳ ಮೂಲಕ ಜಾಗೃತಿ ಹೆಚ್ಚಿಸಿ ಗಂಭೀರ ಖಾಯಿಲೆಗಳನ್ನು ಸಕಾಲದಲ್ಲಿ ಪತ್ತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

ಸ್ನೇಹಿತರೇ,

ಕೊರೊನಾ ಜಾಗತಿಕ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವೈದ್ಯಕೀಯ ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಂಕೀರ್ಣ ಆರೈಕೆಯ ಬ್ಲಾಕ್ ಗಳನ್ನು ದೇಶದ ಜಿಲ್ಲಾ ಆಸ್ಪತ್ರೆಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಗಳಲ್ಲಿ ಮತ್ತು ಬ್ಲಾಕ್ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ವಿಶೇಷ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ.

ಸ್ನೇಹಿತರೇ,

ಭಾರತದ ವೈದ್ಯಕೀಯ ವಲಯವನ್ನು ಪರಿವರ್ತಿಸಲು ವೈದ್ಯಕೀಯ ಶಿಕ್ಷಣದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ತರಲಾಗುತ್ತಿದೆ. ಕಳೆದ ಏಳು-ಎಂಟು ವರ್ಷಗಳಲ್ಲಿ ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವೈದ್ಯರನ್ನು ಮತ್ತು ಅರೆ ವೈದ್ಯಕೀಯ ಮಾನವ ಸಂಪನ್ಮೂಲವನ್ನು ರೂಪಿಸಲಾಗಿದೆ. ಆರೋಗ್ಯ, ಜೀವತಂತ್ರಜ್ಞಾನದಲ್ಲಿ ಸಂಶೋಧನೆ, ಔಷಧಿಗಳಲ್ಲಿ ಮತ್ತು ಸಲಕರಣೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ತರಲು ಆದೋಲನದೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕೊರೊನಾ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಭಾರತವು ತನ್ನ ಸಾಮರ್ಥ್ಯದ ಮೂಲಕ ಜಗತ್ತಿಗೆ ದಾರಿ ತೋರಿಸಿದೆ. ಅದು ನಮಗೆ ಹೆಮ್ಮೆಯನ್ನು ತಂದಿದೆ. ಆರೋಗ್ಯ ಸಲಕರಣೆಗಳಿಗಾಗಿ ಮತ್ತು ಔಷಧಿಗಳಿಗಾಗಿ ಕಚ್ಛಾ ವಸ್ತುವಿಗೆ ಸಂಬಂಧಿಸಿದ ಪಿ.ಎಲ್.ಐ. ಯೋಜನೆಗಳು ಈ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಬಹಳ ವೇಗವನ್ನು ತಂದುಕೊಟ್ಟಿವೆ.

ಸ್ನೇಹಿತರೇ,

ಉತ್ತಮ ವೈದ್ಯಕೀಯ ವ್ಯವಸ್ಥೆಯ ಜೊತೆ ಬಡವರು ಮತ್ತು ಮಧ್ಯಮ ವರ್ಗದವರು ಔಷಧಿಗಳಿಗಾಗಿ ಅತಿ ಕಡಿಮೆ ವೆಚ್ಚ ಮಾಡುವಂತಾಗಬೇಕು. ಕೇಂದ್ರ ಸರಕಾರವು ಅವಶ್ಯಕ ಔಷಧಿಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಡಯಾಲಿಸಿಸ್ ಇತ್ಯಾದಿ ಸಾಮಗ್ರಿಗಳು ಮತ್ತು ಸೇವೆಗಳು ಕಡಿಮೆ ದರದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದೆ. ವಿಶ್ವದ ಅತ್ಯುತ್ತಮ ಜೆನರಿಕ್ ಔಷಧಿಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ ಮತ್ತು ಅದನ್ನು ಚಿಕಿತ್ಸೆಯಲ್ಲಿ ಗರಿಷ್ಟ ಪ್ರಮಾಣದಲ್ಲಿ ಬಳಸುವಂತೆ ಉತ್ತೇಜಿಸಲಾಗುತ್ತಿದೆ. 8,000 ಕ್ಕೂ ಅಧಿಕ ಜನ ಔಷಧಿ ಕೇಂದ್ರಗಳು ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಬಹಳ ದೊಡ್ಡ ಪರಿಹಾರವನ್ನು ನೀಡುತ್ತಿವೆ. ಜನ ಔಷಧಿ ಕೇಂದ್ರಗಳಿಂದ ಔಷಧಿ ಪಡೆಯುತ್ತಿರುವ ಹಲವು ರೋಗಿಗಳ ಜೊತೆಗೆ ಮಾತನಾಡುವ ಅವಕಾಶ ನನಗೆ ಲಭಿಸಿತ್ತು. ಮತ್ತು ಕೆಲವು ಕುಟುಂಬಗಳಲ್ಲಿಯ ಜನರು ದಿನ ನಿತ್ಯ ಕೆಲವು ಔಷಧಿಗಳನ್ನು ವಯೋ ಸಂಬಂಧಿ ರೋಗಗಳಿಗಾಗಿ ಅಥವಾ ಇತರ ಖಾಯಿಲೆಗಳಿಗಾಗಿ ಸೇವಿಸಬೇಕಾಗಿರುವುದೂ ನನ್ನ ಗಮನಕ್ಕೆ ಬಂದಿತು. ಜನ ಔಷಧಿ ಕೇಂದ್ರಗಳಿಂದಾಗಿ, ಇಂತಹ ಮಧ್ಯಮ ವರ್ಗದ ಕುಟುಂಬಗಳು ಪ್ರತೀ ತಿಂಗಳೂ 1,000-2,000 ರೂಪಾಯಿಗಳನ್ನು ಉಳಿಸುತ್ತಿವೆ.

ಸ್ನೇಹಿತರೇ,

ಇಂದಿನ ಕಾರ್ಯಕ್ರಮ ವಿಶ್ವ ಪ್ರವಾಸೋದ್ಯಮ ದಿನದೊಂದಿಗೆ ಸಂಘಟನೆಯಾಗಿರುವುದು ಒಂದು ಯೋಗಾ ಯೋಗ. ಕೆಲವರಿಗೆ ಆಶ್ಚರ್ಯವಾಗಬಹುದು, ಆರೋಗ್ಯ ಕಾರ್ಯಕ್ರಮ ಪ್ರವಾಸೋದ್ಯಮದ ಜೊತೆ ಏನು ಮಾಡಲಿಕ್ಕಿದೆ ಎಂದು. ಆದರೆ ಆರೋಗ್ಯವು ಪ್ರವಾಸೋದ್ಯಮದ ಜೊತೆ ಬಹಳ ಬಲಿಷ್ಟವಾದ ಸಂಬಂಧವನ್ನು ಹೊಂದಿದೆ. ನಮ್ಮ ಆರೋಗ್ಯ ಮೂಲಸೌಕರ್ಯ ಸಮಗ್ರಗೊಂಡಾಗ, ಅದು ಪ್ರವಾಸೋದ್ಯಮ ವಲಯದ ಮೇಲೂ ಪರಿಣಾಮ ಬೀರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯ ಲಭ್ಯ ಇರದೇ ಇರುವಲ್ಲಿ ಪ್ರವಾಸಿಗರು ಹೋಗಲು ಇಚ್ಛಿಸುತ್ತಾರೆಯೇ?. ಮತ್ತು ಈಗ ಕೊರೊನಾ ಬಳಿಕ ಅದು ಇನ್ನಷ್ಟು ಪ್ರಮುಖ ಸಂಗತಿಯಾಗಿದೆ. ಪ್ರವಾಸಿಗರು ಗರಿಷ್ಟ ಲಸಿಕಾಕರಣ ಆಗಿರುವ ಪ್ರದೇಶಗಳಿಗೆ ಭೇಟಿ ನೀಡುವುದು ಸುರಕ್ಷೆ ಎಂದು ಭಾವಿಸುತ್ತಾರೆ. ನೀವು ನೋಡಿರಬಹುದು ಪ್ರವಾಸೀ ತಾಣಗಳಾದ ಹಿಮಾಚಲ, ಉತ್ತರಾಖಂಡ, ಸಿಕ್ಕಿಂ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಗಳು ಲಸಿಕಾಕರಣಕ್ಕೆ ಬಹಳ ಒತ್ತನ್ನು ನೀಡಿವೆ. ಆ ಮೂಲಕ ಪ್ರವಾಸಿಗರಲ್ಲಿ ವಿಶ್ವಾಸ , ಭರವಸೆ ಮೂಡಿಸಲು ಯತ್ನಿಸಿವೆ. ಬರುವ ವರ್ಷಗಳಲ್ಲಿ ಎಲ್ಲಾ ಸಂಗತಿಗಳೂ ಇನ್ನಷ್ಟು ಬಲಗೊಳ್ಳಲಿವೆ. ಎಲ್ಲೆಲ್ಲಿ ಆರೋಗ್ಯ ಮೂಲಸೌಕರ್ಯ ಉತ್ತಮವಾಗಿದೆಯೋ, ಅಲ್ಲಿ ಪ್ರವಾಸಿಗರ ಆಗಮನ ಸಾಧ್ಯತೆಯೂ ಉತ್ತಮವಾಗಿರುತ್ತದೆ. ಅಂದರೆ, ಆಸ್ಪತ್ರೆ ಮತ್ತು ಆತಿಥ್ಯ ಪರಸ್ಪರ ಜೊತೆಯಾಗಿ ಸಾಗುತ್ತದೆ.

ಸ್ನೇಹಿತರೇ,

ಇಂದು ಭಾರತದ ವೈದ್ಯರಲ್ಲಿ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ  ವಿಶ್ವದ ನಂಬಿಕೆ ಸತತ ಹೆಚ್ಚುತ್ತಿದೆ. ನಮ್ಮ ದೇಶದ ವೈದ್ಯರು ಜಗತ್ತಿನಲ್ಲಿ ಬಹಳ ಗೌರವವನ್ನು ಸಂಪಾದಿಸಿದ್ದಾರೆ ಮತ್ತು ಭಾರತದ  ಹೆಸರನ್ನು ಸ್ಥಾಪಿಸಿದ್ದಾರೆ. ನೀವು ಜಗತ್ತಿನ ಶ್ರೀಮಂತ ಜನರನ್ನು ಕೇಳಿದರೆ ಅವರು ಅವರ ಒಬ್ಬರು ವೈದ್ಯರು ಭಾರತೀಯರೆಂಬುದನ್ನು ಒಪ್ಪಿಕೊಳ್ಳುತ್ತಾರೆ. ಭಾರತದ ಮೂಲಸೌಕರ್ಯ ಉತ್ತಮವಾಗಿದ್ದರೆ ಆಗ ಚಿಕಿತ್ಸೆಗಾಗಿ ಜಗತ್ತಿನ ವಿವಿಧ ಭಾಗಗಳಿಂದ ಭಾರತಕ್ಕೆ ಬರುವ ಜನರ ಸಂಖ್ಯೆ ಹೆಚ್ಚುತ್ತದೆ. ಮೂಲಸೌಕರ್ಯದ ಮಿತಿಗಳಿದ್ದಾಗ್ಯೂ ಚಿಕಿತ್ಸೆಗಾಗಿ ಜನರು ಭಾರತಕ್ಕೆ ಬರುತ್ತಾರೆ. ಮತ್ತು ಕೆಲವೊಮ್ಮೆ ನಾವು ಭಾವನಾತ್ಮಕ ಕಥೆಗಳನ್ನು ಕೇಳುತ್ತೇವೆ. ನಮ್ಮ ನೆರೆಯ ದೇಶಗಳ ಸಣ್ಣ ಮಕ್ಕಳು ಇಲ್ಲಿಗೆ ಚಿಕಿತ್ಸೆಗೆ ಬಂದಾಗ ಮತ್ತು ಅವರಿಗೆ ಖಾಯಿಲೆ ಗುಣವಾದಾಗ, ಅವರ ಕುಟುಂಬದ ಸಂತೋಷ ಎಲ್ಲವನ್ನೂ ಹೇಳುತ್ತದೆ.

ಸ್ನೇಹಿತರೇ,

ನಮ್ಮ ಲಸಿಕಾ ಕಾರ್ಯಕ್ರಮ, ಕೊವಿನ್ ವೇದಿಕೆ ಮತ್ತು ಔಷಧಿ ವಲಯಗಳು ಭಾರತದ ಪ್ರತಿಷ್ಟೆಯನ್ನು ಇನ್ನಷ್ಟು ಎತ್ತರಿಸಿವೆ. ಆಯುಷ್ಮಾನ್ ಭಾರತ್ ಡಿಜಿಟಲ್ ಆಂದೋಲನವು  ತಂತ್ರಜ್ಞಾನದ ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದಾಗ, ಯಾವುದೇ ದೇಶದ ರೋಗಿಗಳಿಗೆ ಸಲಹೆಗಳನ್ನು ಪಡೆಯುವುದು, ಭಾರತದ ವೈದ್ಯರಿಗೆ ಅವರ ವರದಿಗಳನ್ನು ಕಳುಹಿಸುವುದು ಮತ್ತು ಚಿಕಿತ್ಸೆಯನ್ನು ಪಡೆಯುವುದು ಸುಲಭವಾಗಲಿದೆ. ಇದರಿಂದ ಖಚಿತವಾಗಿಯೂ ಆರೋಗ್ಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಉಂಟಾಗಲಿದೆ.

ಸ್ನೇಹಿತರೇ,

ಸ್ವಾತಂತ್ರ್ಯದ ಈ ಶಕೆಯಲ್ಲಿ ಬೃಹತ್ ದೃಢ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಮತ್ತು ದೊಡ್ಡ ಕನಸುಗಳನ್ನು ಸಾಕಾರಗೊಳಿಸಲು ಆರೋಗ್ಯವಂತ ಭಾರತಕ್ಕೆ ರಸ್ತೆ ನಿರ್ಮಾಣ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ನಾವು ದೃಢವಾದ ಪ್ರಯತ್ನಗಳನ್ನು ಮಾಡಬೇಕಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಜನರು, ನಮ್ಮ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳು ಈ ಹೊಸ ವ್ಯವಸ್ಥೆಯನ್ನು ತ್ವರಿತವಾಗಿ ಸ್ಥಾಪಿಸಿಕೊಳ್ಳುತ್ತವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಮತ್ತೊಮ್ಮೆ ನಾನು ಆಯುಷ್ಮಾನ್ ಭಾರತ್-ಡಿಜಿಟಲ್ ಆಂದೋಲನಕ್ಕಾಗಿ ದೇಶಕ್ಕೆ ಶುಭಾಶಯಗಳನ್ನು  ಹೇಳುತ್ತೇನೆ.

ಬಹಳ ಬಹಳ ಧನ್ಯವಾದಗಳು!

 

  • Jitender Kumar Haryana BJP State President July 04, 2024

    If indian government will can give me COVID 19 time gmail account Facebook arogya setu app than I will salute technology of india
  • Jitender Kumar Haryana BJP State President July 04, 2024

    From where I will find my old Gmail and mobile number etc. any technology Indian government has. I believe disy
  • शिवकुमार गुप्ता January 28, 2022

    जय श्री सीताराम
  • शिवकुमार गुप्ता January 28, 2022

    जय श्री राम
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mudra scheme crosses milestone of 520 mn loans worth ₹33.65 tn

Media Coverage

Mudra scheme crosses milestone of 520 mn loans worth ₹33.65 tn
NM on the go

Nm on the go

Always be the first to hear from the PM. Get the App Now!
...
MUDRA NPA rate among world's lowest for segment: PM Modi
April 08, 2025

Prime Minister Narendra Modi launched the Pradhan Mantri MUDRA Yojana (PMMY) in 2015 to provide low-cost credit to microfinance and non-banking financial institutions in order to lend to micro, small and medium enterprises and generate jobs and incomes in manufacturing, services, retail, agriculture and allied activities.

The Micro Units Development & Refinance Agency (MUDRA) was established as part of the exercise. Now in its 10th year, the scheme has allowed the government to fund the unfunded, PM Modi said in a written interview to ET on the scheme. Edited excerpts:

What were your expectations from the MUDRA Yojana and has it achieved them?

The MUDRA Yojana needs to be seen in a particular context and not as a standalone scheme. Even before I held any government position, I had travelled extensively across the country for many decades as a karyakarta. There was a common theme that I saw everywhere. A vast majority of our population, such as the poor, farmers, women and marginalised sections had aspirations for growth, strong spirit of enterprise, energy and resilience-all qualities needed to be a successful entrepreneur. But these were the very sections that had been completely excluded from the formal banking and financial system.Tell me, if you do not have a bank account, will you ever visit a bank? When people did not even have access to basic banking, funding for entrepreneurship looked like a distant dream.So, when the people voted for us in 2014, we decided to make the whole financial architecture people-centric and inclusive, so that we could give wings to their aspirations. We democratised the financial system.This started with 'banking the unbanked' with Jan Dhan Yojana. Once those who were left out and left behind began to become part of the formal financial system through this scheme, we went on to 'funding the unfunded' through the MUDRA Yojana and 'insuring the uninsured' through the Jan Suraksha portfolio of schemes.So, MUDRA is part of a larger vision to ensure that the entrepreneurial ability, innovation, creativity and self-reliance of the people at the grassroots is respected, celebrated and supported.Through the MUDRA Yojana, we wanted to give a message to every Indian, that we had trust in their abilities and we would stand as a guarantee in their journey to fulfil their aspirations. Trust begets trust. The people too responded with great zeal and today, with over 52 crore loans given worth ₹33 lakh crore, they have made MUDRA a massive success.

One of the concerns over the scheme has been high NPAs and consequently the underwriting burden on the government. Do these need to be addressed or would you say this is a justified cost for the impact the scheme has had?

There are two perspectives on the problem of NPAs. On the one hand, we have experience from the tenure of the Congress-led United Progressive Alliance. Then, the banking sector operated under a system that came to be known as 'phone banking'.Loans were sanctioned based on calls from political connections rather than on competence, or adherence to strict financial due diligence.We all know how this created the twin balance sheet problem. This period, marked by a lack of transparency and accountability, left public sector banks grappling with a legacy of stressed assets, undermining their ability to support broader economic growth.On the other hand, we lent money to the poor and the middle class through the MUDRA Yojana. It was designed to empower small and medium entrepreneurs who had no connections but had competence and conviction.Unlike the UPA's top-heavy lending model, MUDRA focused on grassroots economic activity. Today, with more than 52 crore loan accounts, MUDRA reflects the massive scale and ambition we had.When we launched this initiative, several prominent Congress leaders and commentators from their ecosystem said that extending credit to crores of small-scale borrowers will cause an NPA issue. They had no trust in the poor and middle class of our country. But the outcomes have defied these predictions.What stands out is the performance of these loans-just 3.5% have turned into NPAs. This is an exceptionally low default rate in this segment world over.While the UPA's phone banking era left banks burdened with toxic assets and favoured select elites of those who were close to power centres, MUDRA has redirected resources to the grassroots, fostering entrepreneurship without compromising financial stability.

The banking sector is in sound health today. Do you think it can take on more risks and fund those lacking formal credit access through schemes such as MUDRA, while corporate borrowers access funds through the bond market?

Due to our relentless banking reforms and deft handling of the NPA crisis, today, our banks are in good health again. Many of them have touched record profits.Over the last decade, programmes such as MUDRA, PM-Svanidhi and Standup India have benefited from the improving health of our banks. Further, due to these schemes, our banking system has also become more responsive towards the needs of small entrepreneurs. As a result, the poor and middle class have reduced their reliance on informal lending to a great extent.I am confident that our banking sector will continue to be a strong partner in the journey of ensuring financial inclusion and supporting entrepreneurship at the grassroots.When it comes to the question of funding small entrepreneurs or corporate borrowers, our banks are capable of supporting both segments and it is not a zero-sum game.This year our corporates raised more than ₹1 trillion through the bond market. This will continue to grow as bond markets are also maturing. Similarly, the MSMEs have started raising money through IPOs and people are appreciating that too. Indian banks will maintain an equilibrium when it comes to priority sector lending as well as corporate lending. This balanced strategy strengthens both financial stability and equitable growth, setting a sustainable path forward as the system continues to mature.

The scheme especially focused on the deprived and women.

Reaching out to the deprived has been the hallmark of this scheme. Vanchit ko variyata, mainstreaming the marginalised-this has been our motto.For decades, affordable credit used to be available only to the rich and well-connected. Unfortunately, the entrepreneurship efforts of the deprived were often trapped in the Chakravyuh of high compounding interest rates. Through MUDRA Yojana, even the deprived are able to get a loan without any collateral.So when we celebrate the success of MUDRA Yojana in promoting entrepreneurship, the heartening aspect is that a large number of these success stories are from women and deprived groups.With over 52 crore loans sanctioned, it has proved to be a lifeline for small and micro businesses in the non-corporate, non-farm sector-areas where SC, ST communities and women often operate. Half of all the loans have gone to people belonging to SC, ST, OBC communities. Nearly 70% of these loans went to women, which shows it's hitting the mark on women's empowerment and financial inclusion.For someone from a deprived background or a woman with a business idea-like a small shop or manufacturing unit such as MSME setup-this scheme has offered real support to turn dreams into reality. This is more than just an entrepreneurship opportunity for the deprived population but it is an inflection point in their lives where their conviction and ideas win over all kinds of doubts and challenges, with the government standing as the guarantor for their loans.

One of the goals of MUDRA was encouraging entrepreneurship and creating employment, especially in rural areas to discourage migration.

The MUDRA Yojana has brought about a fundamental mindset shift in society today. Entrepreneurship, which was considered somewhat of an elite endeavour, has now been democratised.Today, entry barriers to entrepreneurship, actual and perceived, have been reduced significantly and the MUDRA Yojana has been the force behind this change.Today, every layer of our society is thinking of entrepreneurship and growth. Small ideas are blossoming into MSMEs, MSMEs into successful startups and startups into unicorns.Out of the 52 crore loans given under MUDRA, over 10.6 crore have gone to first-time entrepreneurs! You have to understand that there are successful entrepreneurs who have been empowered by MUDRA Yojana in every part of the country, which means there is success in every part of the country.These new entrepreneurs have set off localised growth cycles. These new entrepreneurs are hiring more people, building bigger offices, supporting and collaborating with other businesses at a local level.Today, many youths in tier 2 or tier 3 cities prefer staying close to home rather than moving to metro cities. Low cost of housing, good education, ease of travel, ease of communication and increased avenues for entrepreneurship offer them a lucrative deal.The value addition of these entrepreneurs is being witnessed in our national growth.

How has the scheme evolved over the last decade and what next?

Let us look at the scale of the loans and the amount disbursed under the MUDRA Yojana. Over 52 crore loans worth ₹33 lakh crore have been disbursed.This means 1.6 loans have been given every second, which is faster than even a heartbeat. The total amount sanctioned is higher than the GDP of 100 countries.To give you an idea of how the scheme has progressed, an analysis of the total loans sanctioned/disbursed under the scheme shows that since its launch, the average ticket size of the loans has nearly tripled-from ₹39,000 in FY16 to ₹73,000 in FY23 to ₹1.05 lakh in FY25.In this year's budget, we have raised the upper threshold for loans to ₹20 lakh.Around MUDRA, we have worked on enhancing our digital public infrastructure as well. Beyond JAM and digital payments, we have the account aggregator (AA) framework that ensures paperless loans for everyone. With loans and ease of credit, we wanted to ensure ease of doing business online in a digital world, and therefore, we have the Open Network for Digital Commerce (ONDC). Think of it as UPI for online commerce, where entrepreneurs, especially the ones in second-tier towns and villages, will no longer be dependent on big platforms who they are compelled to share their profits with.The future of MUDRA is already before us with the AA framework and ONDC, and the first-time bank account holders a decade ago are now evolving with the economy, creating a rich credit history, which will tomorrow be beneficial for them in further expanding their business operations.

He regarded the India-led green initiatives as platforms for all nations to collectively address climate change, promote environmental sustainability, build disaster resilient infrastructure, and drive the global transition towards clean energy.

Source: The Economic Times