Quote"ವಿಶ್ವದ ಅತಿದೊಡ್ಡ ಆರ್ಥಿಕತೆಗಳು ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ, ಭಾರತವು ಬಿಕ್ಕಟ್ಟಿನಿಂದ ಹೊರಬಂದು, ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ"
Quote"2014ರ ನಂತರ ನಮ್ಮ ಸರ್ಕಾರ ತಂದ ನೀತಿಗಳಲ್ಲಿ, ಆರಂಭಿಕ ಪ್ರಯೋಜನಗಳಿಗೆ ಮಾತ್ರ ಕಾಳಜಿ ವಹಿಸದೆ, 2ನೇ ಮತ್ತು 3ನೇ ಕ್ರಮಾಂಕದ ಪರಿಣಾಮಗಳಿಗೂ ಆದ್ಯತೆ ನೀಡಲಾಗಿದೆ"
Quote"ದೇಶದಲ್ಲಿ ಮೊದಲ ಬಾರಿಗೆ ಬಡವರಿಗೆ ಭದ್ರತೆ ಮತ್ತು ಘನತೆ ಸಿಕ್ಕಿದೆ"
Quote“ದೇಶವು ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್‌)ಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ಅಧಿಕಾರ ಮನಸ್ಥಿತಿಯನ್ನು ಸೇವಾ ಮನಸ್ಥಿತಿಗೆ ಬದಲಾಯಿಸಿದ್ದೇವೆ, ನಾವು ಬಡವರ ಕಲ್ಯಾಣವನ್ನು ನಮ್ಮ ಮಾಧ್ಯಮವಾಗಿ ಮಾಡಿಕೊಂಡಿದ್ದೇವೆ.
Quote"ಕಳೆದ 9 ವರ್ಷಗಳಲ್ಲಿ ದಲಿತರು, ಸೌಲಭ್ಯವಂಚಿತರು, ಆದಿವಾಸಿಗಳು, ಮಹಿಳೆಯರು, ಬಡವರು, ಮಹಿಳೆಯರು, ಮಧ್ಯಮ ವರ್ಗದ ಎಲ್ಲರೂ ಬದಲಾವಣೆ ಅನುಭವಿಸುತ್ತಿದ್ದಾರೆ"
Quote"ಪ್ರಧಾನಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ದೇಶದ ದೊಡ್ಡ ವರ್ಗದ ಜನರಿಗೆ ರಕ್ಷಣಾತ್ಮಕ ಗುರಾಣಿಯಾಗಿದೆ"
Quote“ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಸ್ವಾವಲಂಬನೆಯ ಮಾರ್ಗ ಆರಿಸಿಕೊಂಡಿದೆ. ಭಾರತವು ವಿಶ್ವದ ಅತಿದೊಡ್ಡ, ಅತ್ಯಂತ ಯಶಸ್ವಿ ಲಸಿಕಾ ಆಂದೋಲನ ಪ್ರಾರಂಭಿಸಿತು”
Quote"ಈ ಪರಿವರ್ತನೆಯ ಪಯಣವು ಸಮಕಾಲೀನವಾಗಿದೆ, ಅದು ಭವಿಷ್ಯದಂತೆಯೇ ಇದೆ" ಭ್ರಷ್ಟಾಚಾರದ ಮೇಲಿನ ದಾಳಿ ಮುಂದುವರಿಯಲಿದೆ.

ಅರ್ನಾಬ್ ಗೋಸ್ವಾಮಿ ಅವರೇ, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಎಲ್ಲಾ ಸಹೋದ್ಯೋಗಿಗಳೇ, ದೇಶ ಮತ್ತು ವಿದೇಶಗಳಲ್ಲಿನ ರಿಪಬ್ಲಿಕ್ ಟಿವಿಯ ಎಲ್ಲಾ ವೀಕ್ಷಕರೇ, ಮಹಿಳೆಯರೇ ಮತ್ತು ಮಹನೀಯರೇ! ನಾನು ಮೊದಲು, ನನ್ನ ಬಾಲ್ಯದಲ್ಲಿ ಕೇಳಿದ ಒಂದು ಹಾಸ್ಯ ಪ್ರಸಂಗವನ್ನು ಹೇಳಲು ಬಯಸುತ್ತೇನೆ. ʼಒಬ್ಬ ಪ್ರಾಧ್ಯಾಪಕರು ಇದ್ದರು, ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು, ಜೀವನದಿಂದ ಬೇಸತ್ತಿದ್ದೇನೆ, ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು  ಬರೆದ ಪತ್ರವಿತ್ತು. ಏನಾದರು ಕುಡಿದು ಕಂಕರಿಯಾ ಕೆರೆಗೆ ಹಾರಿ ಸಾಯುತ್ತೇನೆ ಎಂದು ಆಕೆ ಬರೆದಿದ್ದಳು. ಮರುದಿನ ಬೆಳಿಗ್ಗೆ, ತನ್ನ ಮಗಳು ಮನೆಯಲ್ಲಿ ಇಲ್ಲದಿರುವುದು ಪ್ರಾಧ್ಯಾಪಕರಿಗೆ ತಿಳಿಯಿತು. ಅವರು ಅವಳ ಕೋಣೆಗೆ ಹೋಗಿ ನೋಡದಾಗ ಪತ್ರ ಸಿಕ್ಕಿತು. ಪತ್ರವನ್ನು ಓದಿದ ಅವರಿಗೆ ತುಂಬಾ ಕೋಪ ಬಂತು.  ‘ನಾನು ಪ್ರೊಫೆಸರ್ ಆಗಿದ್ದೇನೆ, ನಾನು ಇಷ್ಟು ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ಆತ್ಮಹತ್ಯೆ ಪತ್ರದಲ್ಲಿ ಅವಳು ಕಂಕಾರಿಯಾ ಕಾಗುಣಿತವನ್ನು ತಪ್ಪಾಗಿ ಬರೆದಿದ್ದಾಳೆ.’ ಅರ್ನಾಬ್ ಉತ್ತಮ ಹಿಂದಿ ಮಾತನಾಡಲು ಪ್ರಾರಂಭಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅವರು ಏನು ಮಾತುನಾಡುತ್ತಿದ್ದಾರೆ ಎಂದು ನಾನು ಕೇಳಿಸಿಕೊಳ್ಳಲಿಲ್ಲ, ಆದರೆ ಅವರ ಹಿಂದಿ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿದ್ದೆ. ಬಹುಶಃ, ಮುಂಬೈನಲ್ಲಿ ವಾಸಿಸಿದ ನಂತರ ನಿಮ್ಮ ಹಿಂದಿ ಸುಧಾರಿಸಿದೆ. 

|

ಸ್ನೇಹಿತರೇ,

ನಿಮ್ಮೊಂದಿಗೆ ಇರುವುದನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ರಿಪಬ್ಲಿಕ್ ಟಿವಿ ಮುಂದಿನ ತಿಂಗಳು ಆರು ವರ್ಷಗಳನ್ನು ಪೂರೈಸುತ್ತಿದೆ. ನೇಷನ್ ಫಸ್ಟ್ ಎಂಬ ನಿಮ್ಮ ಅಚಲವಾದ ಧ್ಯೇಯಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಎಲ್ಲಾ ರೀತಿಯ ಅಡೆತಡೆಗಳು ಮತ್ತು ಅಡಚಣೆಗಳ ನಡುವೆಯೂ ನೀವು ಅದನ್ನು ಕಾಪಾಡಿಕೊಂಡಿದ್ದೀರಿ. ಕೆಲವೊಮ್ಮೆ ಅರ್ನಾಬ್ ಅವರಿಗೆ ಗಂಟಲು ನೋವು ಬರುತ್ತಿತ್ತು ಮತ್ತು ಕೆಲವೊಮ್ಮೆ ಕೆಲವರು ಅವರ ಕೊರಳು ಹಿಡಿಯಲು ಪ್ರಯತ್ನಿಸಿದರು, ಆದರೆ ಚಾನಲ್ ನಿಲ್ಲಿಸಲಿಲ್ಲ. ಅದು ಶಕ್ತಿಗುಂದಲಿಲ್ಲ ಅಥವಾ ವಿರಾಮ ತೆಗೆದುಕೊಳ್ಳಲಿಲ್ಲ.

ಸ್ನೇಹಿತರೇ,

ನಾನು 2019 ರಲ್ಲಿ ರಿಪಬ್ಲಿಕ್‌ ಟಿವಿ ಶೃಂಗಕ್ಕೆ ಬಂದಾಗ, ಅಂದಿನ ಥೀಮ್ 'ಭಾರತದ ಕಾಲ' ಎಂಬುದಾಗಿತ್ತು. ಈ ಥೀಮ್ ಹಿನ್ನೆಲೆಯಲ್ಲಿ ನಾವು ದೇಶದ ಜನರಿಂದ ಜನಾದೇಶ‌ ಪಡೆದೆವು. ಭಾರತದ ಜನತೆ ಹಲವಾರು ದಶಕಗಳ ನಂತರ ಸತತ ಎರಡನೇ ಬಾರಿಗೆ ಭರ್ಜರಿ ಬಹುಮತದೊಂದಿಗೆ ಸ್ಥಿರ ಸರ್ಕಾರವನ್ನು ರಚಿಸಿದ್ದಾರೆ. ‘ಭಾರತದ ಕಾಲ’ಬಂದಿದೆ ಎಂದು ದೇಶಕ್ಕೆ ಮನವರಿಕೆಯಾಯಿತು. ಇಂದು, ನಾಲ್ಕು ವರ್ಷಗಳ ನಂತರ, ನಿಮ್ಮ ಶೃಂಗಸಭೆಯ ಥೀಮ್ 'ಪರಿವರ್ತನೆಯ ಕಾಲ'. ಅಂದರೆ, ಆ ಪರಿವರ್ತನೆಯ ಹಿಂದಿನ ನಂಬಿಕೆ ಈಗ ವಾಸ್ತವದಲ್ಲಿ ಗೋಚರಿಸುತ್ತಿದೆ.

ಸ್ನೇಹಿತರೇ,

ಇಂದು ದೇಶದಲ್ಲಿ ಆಗುತ್ತಿರುವ ಬದಲಾವಣೆಯನ್ನು ಅಳೆಯುವ ಒಂದು ಮಾರ್ಗವೆಂದರೆ ಆರ್ಥಿಕತೆಯ ಬೆಳವಣಿಗೆ ಮತ್ತು ವಿಸ್ತರಣೆಯ ವೇಗ. ಭಾರತವು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಸುಮಾರು 60 ವರ್ಷಗಳನ್ನು ತೆಗೆದುಕೊಂಡಿತು. ಅರವತ್ತು ವರ್ಷಗಳು! 2014 ರ ಹೊತ್ತಿಗೆ, ನಾವು ಹೇಗೋ ಎರಡು ಟ್ರಿಲಿಯನ್ ಡಾಲರ್ ಮಾರ್ಕ್ ಅನ್ನು ತಲುಪಲು ಯಶಸ್ವಿಯಾದೆವು. ಏಳು ದಶಕಗಳಲ್ಲಿ ಎರಡು ಟ್ರಿಲಿಯನ್ ಡಾಲರ್ ಆರ್ಥಿಕತೆ! ಆದರೆ ಇಂದು ನಮ್ಮ ಸರ್ಕಾರ ರಚನೆಯಾದ ಒಂಬತ್ತು ವರ್ಷಗಳಲ್ಲಿ ಭಾರತವು ಸುಮಾರು 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ನಾವು 10 ನೇ ಸ್ಥಾನದಿಂದ ಭಾರೀ ಜಿಗಿತದೊಂದಿಗೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಇದೆಲ್ಲವೂ 100 ವರ್ಷಗಳ ಅತಿದೊಡ್ಡ ಬಿಕ್ಕಟ್ಟಿನ ಮಧ್ಯೆ ಸಂಭವಿಸಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಗಳು ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ, ಭಾರತವು ಬಿಕ್ಕಟ್ಟಿನಿಂದ ಹೊರಬಂದಿರುವುದು ಮಾತ್ರವಲ್ಲದೆ ವೇಗವಾಗಿ ಮುನ್ನಡೆಯುತ್ತಿದೆ.

 

|

ಸ್ನೇಹಿತರೇ,

ನೀತಿ ನಿರೂಪಕರರು ಆಗಾಗ್ಗೆ ಪ್ರಸ್ತಾಪಿಸುವ ಒಂದು ಒಂದು ವಿಷಯವನ್ನು ಕೇಳಿರಬೇಕು – First order impact (ಸಣ್ಣ ಬದಲಾವಣೆ ದೊಡ್ಡ ಪರಿಣಾಮ). ಅದು ಯಾವುದೇ ನೀತಿಯ ಮೊದಲ ಮತ್ತು ಸಹಜ ಫಲಿತಾಂಶವಾಗಿದೆ. First order impact ನೀತಿಯ ಮೊದಲ ಗುರಿಯಾಗಿದೆ ಮತ್ತು ಅದರ ಪರಿಣಾಮವು ಕಡಿಮೆ ಸಮಯದಲ್ಲಿ ಕಂಡುಬರುತ್ತದೆ. ಆದರೆ ಪ್ರತಿ ನೀತಿಯು ಎರಡನೇ ಮತ್ತು ಮೂರನೇ ಕ್ರಮಾಂಕದ ಪರಿಣಾಮಗಳನ್ನು ಹೊಂದಿರುತ್ತದೆ. ಅವುಗಳ ಪರಿಣಾಮವು ಆಳವಾಗಿರುತ್ತದೆ, ದೂರಗಾಮಿಯಾಗಿರುತ್ತದೆ, ಆದರೆ ಇದಕ್ಕೆ ಬಹಳ ಸಮಯ ಬೇಕಾಗುತ್ತದೆ.  ಅವುಗಳ ತುಲನಾತ್ಮಕ ಅಧ್ಯಯನವನ್ನು ಮಾಡಲು, ವಿವರವಾಗಿ ಅರ್ಥಮಾಡಿಕೊಳ್ಳಲು ನಾವು ಹಲವಾರು ದಶಕಗಳ ಹಿಂದೆ ಹೋಗಬೇಕಾಗಿದೆ. ಟಿವಿ ಜಗತ್ತಿನ ಜನರು ಹೇಳುವ ಹಾಗೆ - ಆಗ ಮತ್ತು ಈಗ. ನಾನು ಕೂಡ ಇಂದು ಅದೇ ರೀತಿ ಮಾಡಲಿದ್ದೇನೆ. ಆದ್ದರಿಂದ ಮೊದಲು ಗತಕಾಲದ ಬಗ್ಗೆ ಮಾತನಾಡೋಣ.

ಸ್ನೇಹಿತರೇ,

ಸ್ವಾತಂತ್ರ್ಯಾನಂತರ ಅಳವಡಿಸಿಕೊಂಡ ಲೈಸೆನ್ಸ್ ರಾಜ್ ಆರ್ಥಿಕ ನೀತಿಯಲ್ಲಿ ಸರಕಾರವೇ ನಿಯಂತ್ರಕವಾಯಿತು. ಸ್ಪರ್ಧೆಗೆ ಅವಕಾಶ ಇರಲಿಲ್ಲ ಮತ್ತು ಖಾಸಗಿ ಉದ್ಯಮ ಮತ್ತು ಎಂಎಸ್‌ಎಂಇಗಳು ಪ್ರವರ್ಧಮಾನಕ್ಕೆ ಬರಲು ಅವಕಾಶ ನೀಡಲಿಲ್ಲ. ಇದರ ಮೊದಲ ನಕಾರಾತ್ಮಕ ಪರಿಣಾಮವೆಂದರೆ ನಾವು ಇತರ ದೇಶಗಳಿಗೆ ಹೋಲಿಸಿದರೆ ಹಿಂದುಳಿದಿದ್ದೇವೆ ಮತ್ತು ಬಡವರಾಗಿದ್ದೇವೆ. ಆ ನೀತಿಗಳ ಎರಡನೇ ಆದೇಶದ (Second order) ಪರಿಣಾಮವು ಇನ್ನೂ ಕೆಟ್ಟದಾಗಿತ್ತು. ವಿಶ್ವಕ್ಕೆ ಹೋಲಿಸಿದರೆ ಭಾರತದ ಬಳಕೆಯ ಬೆಳವಣಿಗೆ ತುಂಬಾ ಕಡಿಮೆಯಾಗಿತ್ತು. ಪರಿಣಾಮವಾಗಿ, ಉತ್ಪಾದನಾ ವಲಯವು ದುರ್ಬಲಗೊಂಡಿತು ಮತ್ತು ನಾವು ಹೂಡಿಕೆ ಅವಕಾಶಗಳನ್ನು ಕಳೆದುಕೊಂಡೆವು. ಈ ನೀತಿಯ ಮೂರನೇ ಪರಿಣಾಮವೆಂದರೆ ಭಾರತದಲ್ಲಿ ನಾವೀನ್ಯತೆಯ ವಾತಾವರಣವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚು ನವೋದ್ಯಮಗಳನ್ನು ರಚಿಸಲಾಗಲಿಲ್ಲ ಅಥವಾ ಖಾಸಗಿ ಉದ್ಯೋಗಗಳನ್ನು ಸೃಷ್ಟಿಸಲಾಗಲಿಲ್ಲ. ಯುವಕರು ಸರ್ಕಾರಿ ಉದ್ಯೋಗವನ್ನೇ ಅವಲಂಬಿಸತೊಡಗಿದರು. ದೇಶದ ಅನೇಕ ಪ್ರತಿಭೆಗಳು ಕೆಲಸ ಮಾಡುವ ವಾತಾವರಣ ಇಲ್ಲದ್ದರಿಂದ ದೇಶವನ್ನು ತೊರೆಯಲು ನಿರ್ಧರಿಸಿದರು. ಈ ಎಲ್ಲಾ ಪರಿಣಾಮಗಳು ಅದೇ ಸರ್ಕಾರದ ನೀತಿಗಳ ಮೂರನೇ ಆದೇಶದ (Third order) ಪರಿಣಾಮದ ಪರಿಣಾಮವಾಗಿವೆ. ಆ ನೀತಿಗಳ ಪರಿಣಾಮವು ನಾವೀನ್ಯತೆ, ಕಠಿಣ ಪರಿಶ್ರಮ ಮತ್ತು ಉದ್ಯಮದಲ್ಲಿ ದೇಶದ ಸಾಮರ್ಥ್ಯವನ್ನು ನಾಶಮಾಡಿತು.

ಸ್ನೇಹಿತರೇ,

ಈಗ ನಾನು ನಿಮಗೆ ಹೇಳಲು ಹೊರಟಿರುವುದು ರಿಪಬ್ಲಿಕ್ ಟಿವಿ ವೀಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. 2014 ರ ನಂತರ ನಮ್ಮ ಸರ್ಕಾರವು ಯಾವುದೇ ನೀತಿಯನ್ನು ರೂಪಿಸಿದರೂ, ತ್ವರಿತ ಪ್ರಯೋಜನಗಳ ಬಗ್ಗೆ ಮಾತ್ರ ಕಾಳಜಿ ವಹಿಸಲಿಲ್ಲ, ಆದರೆ ಎರಡನೇ ಮತ್ತು ಮೂರನೇ ಕ್ರಮದ ಪರಿಣಾಮಗಳಿಗೂ ಆದ್ಯತೆ ನೀಡಲಾಯಿತು. 2019 ರ ರಿಪಬ್ಲಿಕ್ ಟಿವಿ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಐದು ವರ್ಷಗಳಲ್ಲಿ 1.5 ಕೋಟಿ ಕುಟುಂಬಗಳಿಗೆ ಮನೆಗಳನ್ನು ನೀಡುವುದಾಗಿ ನಾನು ಪ್ರಸ್ತಾಪಿಸಿದ್ದು ನಿಮಗೆ ನೆನಪಿರಬಹುದು. ಈಗ ಈ ಅಂಕಿ ಅಂಶವು 3.75 ಕೋಟಿಗೂ ಹೆಚ್ಚು ಮನೆಗಳಿಗೆ ಜಿಗಿದಿದೆ. ಇವುಗಳಲ್ಲಿ ಹೆಚ್ಚಿನ ಮನೆಗಳ ಮಾಲೀಕತ್ವದ ಹಕ್ಕುಗಳು ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿವೆ ಮತ್ತು ಇಂದು ನಿರ್ಮಿಸಲಾದ ಪ್ರತಿಯೊಂದು ಮನೆಯು ಲಕ್ಷಾಂತರ ರೂಪಾಯಿಗಳ ಮೌಲ್ಯದ್ದಾಗಿದೆ ಎಂದು ನಿಮಗೆ ತಿಳಿದಿದೆ. ಕೋಟಿಗಟ್ಟಲೆ ಬಡ ಸಹೋದರಿಯರು ‘ಲಕ್ಷಾಪತಿ ದೀದಿ’ ಆಗಿದ್ದಾರೆ ಎಂದು ಇಂದು ನಾನು ಅತ್ಯಂತ ತೃಪ್ತಿಯಿಂದ ಹೇಳುತ್ತೇನೆ. ಬಹುಶಃ ಇದಕ್ಕಿಂತ ದೊಡ್ಡ ರಕ್ಷಾ ಬಂಧನ ಇರಲಾರದು! ಇದು ಮೊದಲ ಪರಿಣಾಮ. ಇದರ ಎರಡನೇ ಪರಿಣಾಮವೆಂದರೆ ಈ ಯೋಜನೆಯಡಿಯಲ್ಲಿ ಹಳ್ಳಿಗಳಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಯಿತು. ಯಾರಾದರೂ ಸ್ವಂತ ಮನೆಯನ್ನು ಹೊಂದಿದ್ದರೆ, ಶಾಶ್ವತವಾದ ಮನೆಯನ್ನು ಹೊಂದಿದ್ದರೆ, ಅವರ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಅವರ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚಾಗುತ್ತದೆ ಎಂದು ನಿಮಗೆ ತಿಳಿದಿದೆ. ಅವರ ಕನಸುಗಳು ಆಕಾಶವನ್ನು ಮುಟ್ಟಲು ಪ್ರಾರಂಭಿಸುತ್ತವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯು ದೇಶದ ಬಡವರ ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಏರಿಸಿದೆ.

ಸ್ನೇಹಿತರೇ,

ಕೆಲ ದಿನಗಳ ಹಿಂದೆಯಷ್ಟೇ ಮುದ್ರಾ ಯೋಜನೆ ಎಂಟು ವರ್ಷ ಪೂರೈಸಿದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮುದ್ರಾ ಯೋಜನೆಯಡಿ 40 ಕೋಟಿಗೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಶೇ.70ರಷ್ಟು ಮಹಿಳೆಯರು ಇದ್ದಾರೆ. ಈ ಯೋಜನೆಯ ಮೊದಲ ಪರಿಣಾಮ ಸ್ವಯಂ ಉದ್ಯೋಗ ಹೆಚ್ಚಳದ ರೂಪದಲ್ಲಿ ನಮ್ಮ ಮುಂದಿದೆ. ಮುದ್ರಾ ಯೋಜನೆಯಾಗಲಿ, ಮಹಿಳೆಯರ ಜನ್ ಧನ್ ಖಾತೆಗಳ ತೆರೆಯುವಿಕೆಯಾಗಲಿ ಅಥವಾ ಸ್ವಸಹಾಯ ಗುಂಪುಗಳಿಗೆ ಉತ್ತೇಜನವಾಗಲಿ, ಇಂದು ಈ ಯೋಜನೆಗಳ ಮೂಲಕ ದೇಶದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಯನ್ನು ನಾವು ನೋಡಬಹುದು. ಈ ಯೋಜನೆಗಳು ಇಂದು ಕುಟುಂಬದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಬಲವಾದ ಪಾತ್ರವನ್ನು ಸ್ಥಾಪಿಸಿವೆ. ಈಗ ಹೆಚ್ಚು ಹೆಚ್ಚು ಮಹಿಳೆಯರು ಉದ್ಯೋಗ ಸೃಷ್ಟಿಕರ್ತರಾಗುತ್ತಿದ್ದಾರೆ ಮತ್ತು ದೇಶದ ಬೆಳೆಯುತ್ತಿರುವ ಆರ್ಥಿಕತೆಗೆ ಶಕ್ತಿ ನೀಡುತ್ತಿದ್ದಾರೆ.

ಸ್ನೇಹಿತರೇ,

ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆಯಲ್ಲಿಯೂ ಸಹ, ನೀವು ಮೊದಲ, ಎರಡನೇ ಮತ್ತು ಮೂರನೇ ಕ್ರಮಾಂಕದ ಪರಿಣಾಮವನ್ನು ಪ್ರತ್ಯೇಕವಾಗಿ ನೋಡಬಹುದು. ಇದರ ಅಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬಡವರಿಗೆ ಆಸ್ತಿ ಕಾರ್ಡ್‌ಗಳನ್ನು ನೀಡಲಾಯಿತು, ಇದು ಅವರಿಗೆ ಆಸ್ತಿ ಭದ್ರತೆಯ ಭರವಸೆಯನ್ನು ನೀಡಿತು. ಬೇಡಿಕೆ ಮತ್ತು ವಿಸ್ತರಣೆಯ ಸಾಧ್ಯತೆಗಳು ನಿರಂತರವಾಗಿ ಹೆಚ್ಚುತ್ತಿರುವ ಡ್ರೋನ್ ವಲಯದ ಮೇಲೆ ಈ ಯೋಜನೆಯ ಪರಿಣಾಮವನ್ನು ಕಾಣಬಹುದು. ಪ್ರಧಾನಮಂತ್ರಿ ಸ್ವಾಮಿತ್ವ ಯೋಜನೆ ಪ್ರಾರಂಭವಾಗಿ ಸುಮಾರು ಎರಡರಿಂದ ಎರಡೂವರೆ ವರ್ಷಗಳು ಕಳೆದಿವೆ, ಹೆಚ್ಚು ಸಮಯವಾಗಿಲ್ಲ, ಆದರೆ ಅದರ ಸಾಮಾಜಿಕ ಪರಿಣಾಮವೂ ಗೋಚರಿಸುತ್ತಿದೆ. ಆಸ್ತಿ ಕಾರ್ಡ್ ಪಡೆದ ನಂತರ ಪರಸ್ಪರ ವಿವಾದದ ಸಾಧ್ಯತೆಗಳು ಕಡಿಮೆಯಾಗಿವೆ. ಇದು ನಮ್ಮ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ತ್ತಡವನ್ನು ಕಡಿಮೆ ಮಾಡುತ್ತದೆ. ಹಳ್ಳಿಗಳಲ್ಲಿ ಆಸ್ತಿ ಪತ್ರ ಪಡೆದವರಿಗೆ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಪಡೆಯುವುದು ಈಗ ಸುಲಭವಾಗಿದೆ. ಹಳ್ಳಿಗಳಲ್ಲಿ ಈ ಆಸ್ತಿಗಳ ಬೆಲೆಯೂ ಹೆಚ್ಚಾಗಿದೆ. 

|

ಸ್ನೇಹಿತರೇ,

ಮೊದಲ, ಎರಡನೆಯ ಮತ್ತು ಮೂರನೆಯ ಪರಿಣಾಮವನ್ನು ಕುರಿತ ಹಲವಾರು ಪ್ರಕರಣ ಅಧ್ಯಯನಗಳು (ಕೇಸ್ ಸ್ಟಡೀಸ್) ನನ್ನ ಬಳಿ ಇವೆ, ನಿಮ್ಮ ಟಿವಿಯಲ್ಲಿ ತೋರಿಸಲು ಇದಕ್ಕೆ ಸಾಕಷ್ಟು ಸಮಯ ವ್ಯಯವಾಗುತ್ತದೆ. ಡಿಬಿಟಿ ಇರಲಿ, ಬಡ ಜನರಿಗೆ ವಿದ್ಯುತ್, ನೀರು, ಶೌಚಾಲಯದಂತಹ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳಿರಲಿ, ಇವೆಲ್ಲವೂ ನೆಲಮಟ್ಟದಲ್ಲಿ ಕ್ರಾಂತಿಯನ್ನು ತಂದಿವೆ. ಈ ಯೋಜನೆಗಳು ದೇಶದ ಅತ್ಯಂತ ಬಡವರಿಗೂ ಗೌರವ ಮತ್ತು ಭದ್ರತೆಯ ಭಾವನೆಯನ್ನು ನೀಡಿವೆ. ದೇಶದಲ್ಲೇ ಪ್ರಥಮ ಬಾರಿಗೆ ಬಡವರಿಗೆ ಭದ್ರತೆ ಜತೆಗೆ ಘನತೆಯೂ ಸಿಕ್ಕಿದೆ. ದೇಶದ ಅಭಿವೃದ್ಧಿಗೆ ಹೊರೆ ಎಂದು ದಶಕಗಳ ಕಾಲ ಬಿಂಬಿತವಾಗಿದ್ದವರೇ ಇಂದು ದೇಶದ ಅಭಿವೃದ್ಧಿಗೆ ವೇಗ ನೀಡುತ್ತಿದ್ದಾರೆ. ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಾಗ ಕೆಲವರು ನಮ್ಮನ್ನು ಗೇಲಿ ಮಾಡುತ್ತಿದ್ದರು. ಆದರೆ ಇಂದು ಈ ಯೋಜನೆಗಳು ಭಾರತದ ತ್ವರಿತ ಅಭಿವೃದ್ಧಿಗೆ ವೇಗವನ್ನು ನೀಡಿವೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಆಧಾರವಾಗಿವೆ.

ಸ್ನೇಹಿತರೇ,

ಬಡವರು, ದಲಿತರು, ವಂಚಿತರು, ಹಿಂದುಳಿದವರು, ಬುಡಕಟ್ಟು ಜನರು, ಸಾಮಾನ್ಯ ವರ್ಗ ಅಥವಾ ಮಧ್ಯಮ ವರ್ಗದ ಪ್ರತಿಯೊಬ್ಬರೂ ಕಳೆದ ಒಂಬತ್ತು ವರ್ಷಗಳಿಂದ ತಮ್ಮ ಜೀವನದಲ್ಲಿ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ. ಇಂದು ದೇಶವು ಅತ್ಯಂತ ವ್ಯವಸ್ಥಿತವಾದ ವಿಧಾನ ಮತ್ತು ಮಿಷನ್ ಮೋಡ್‌ನಲ್ಲಿ ಮುನ್ನಡೆಯುತ್ತಿದೆ. ಅಧಿಕಾರದಲ್ಲಿರುವವರ ಮನಸ್ಥಿತಿಯನ್ನೂ ಬದಲಾಯಿಸಿದ್ದೇವೆ. ಸೇವಾ ಮನೋಭಾವನೆಯನ್ನು ಪರಿಚಯಿಸಿದ್ದೇವೆ. ಬಡವರ ಕಲ್ಯಾಣವನ್ನೇ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದೇವೆ. ಓಲೈಕೆಯ ಬದಲು ಸಂತೃಪ್ತಿಯನ್ನು ನಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದೇವೆ. ಈ ವಿಧಾನವು ದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ರಕ್ಷಣಾತ್ಮಕ ಕವಚವನ್ನು ಸೃಷ್ಟಿಸಿದೆ. ಈ ರಕ್ಷಣಾ ಕವಚವು ದೇಶದ ಬಡವರು ಕಡು ಬಡವರಾಗುವುದನ್ನು ತಪ್ಪಿಸಿದೆ. ಆಯುಷ್ಮಾನ್ ಯೋಜನೆಯು ದೇಶದ ಬಡವರು 80,000 ಕೋಟಿ ರೂಪಾಯಿಗಳನ್ನು ತಮ್ಮ ಜೇಬಿನಿಂದ ಖರ್ಚು ಮಾಡುವುದರಿಂದ ಉಳಿಸಿದೆ. ಈ ಯೋಜನೆ ಇಲ್ಲದಿದ್ದರೆ ಬಡವರು ತಮ್ಮ ಜೇಬಿನಿಂದ ಇಷ್ಟೇ ಮೊತ್ತವನ್ನು ಖರ್ಚು ಮಾಡಬೇಕಾಗುತ್ತಿತ್ತು. ಊಹಿಸಿಕೊಳ್ಳಿ, ನಾವು ಎಷ್ಟೋ ಬಡವರನ್ನು ಕಡು ಬಡವರಾಗದಂತೆ ಉಳಿಸಿದ್ದೇವೆ. ಬಿಕ್ಕಟ್ಟಿನ ಸಮಯದಲ್ಲಿ ಉಪಯೋಗಕ್ಕೆ ಬಂದ ಯೋಜನೆ ಇದೊಂದೇ ಅಲ್ಲ.

ಬದಲಾಗಿ, ಕೋಟಿಗಟ್ಟಲೆ ಕುಟುಂಬಗಳು ಕೈಗೆಟುಕುವ ಔಷಧಿಗಳು, ಉಚಿತ ಲಸಿಕೆಗಳು, ಉಚಿತ ಡಯಾಲಿಸಿಸ್, ಅಪಘಾತ ವಿಮೆ ಮತ್ತು ಜೀವ ವಿಮೆಯ ಸೌಲಭ್ಯಗಳನ್ನು ಮೊದಲ ಬಾರಿಗೆ ಪಡೆದುಕೊಂಡಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ದೇಶದ ಹೆಚ್ಚಿನ ಜನಸಂಖ್ಯೆಗೆ ಮತ್ತೊಂದು ರಕ್ಷಣಾತ್ಮಕ ಗುರಾಣಿಯಾಗಿದೆ. ಈ ಯೋಜನೆಯು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಬಡವರು ಹಸಿವಿನಿಂದ ಮಲಗಲು ಅವಕಾಶ ನೀಡಲಿಲ್ಲ. ಇಂದು ಈ ಆಹಾರ ಯೋಜನೆಗೆ ಸರ್ಕಾರ ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಅದು ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ಆಗಿರಲಿ ಅಥವಾ ನಮ್ಮ ‘ಜೆಎಎಂ ಟ್ರಿನಿಟಿ’ ಆಗಿರಲಿ, ಇವೆಲ್ಲವೂ ರಕ್ಷಣಾತ್ಮಕ ಕವಚದ ಭಾಗವಾಗಿವೆ. ಇಂದು ಕಡುಬಡವರಿಗೆ ಸಲ್ಲಬೇಕಾದದ್ದು ಖಂಡಿತಾ ಸಿಗುತ್ತದೆ ಎಂಬ ಭರವಸೆ ಇದೆ ಮತ್ತು ಇದು ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯ ಎಂದು ನಾನು ನಂಬುತ್ತೇನೆ. ಭಾರತದಲ್ಲಿ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರಿ ಪ್ರಭಾವ ಬೀರಿದ ಇಂತಹ ಹಲವು ಯೋಜನೆಗಳಿವೆ. ನೀವು ಕೆಲವು ದಿನಗಳ ಹಿಂದೆ ಬಂದ ಐಎಂಎಫ್‌ ವರದಿಯನ್ನು ನೋಡಿರಬೇಕು. ಇಂತಹ ಯೋಜನೆಗಳಿಂದಾಗಿ, ಸಾಂಕ್ರಾಮಿಕ ರೋಗದ ಹೊರತಾಗಿಯೂ ಭಾರತದಲ್ಲಿ ತೀವ್ರ ಬಡತನವು ಕೊನೆಗೊಳ್ಳುವ ಹಂತದಲ್ಲಿದೆ ಎಂದು ಈ ವರದಿ ಹೇಳುತ್ತದೆ. ಇದೇ ಪರಿವರ್ತನೆ, ಇದಲ್ಲದಿದ್ದರೆ ಮತ್ತಾವುದು ಪರಿವರ್ತನೆ? 

|

ಸ್ನೇಹಿತರೇ,

ಎಂಎನ್‌ಆರ್‌ಇಜಿಎಯನ್ನು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸ್ಮಾರಕ ಎಂದು ನಾನು ಸಂಸತ್ತಿನಲ್ಲಿ ಹೇಳಿದ್ದನ್ನು ನೀವು ನೆನಪಿಸಿಕೊಳ್ಳಿ. 2014ಕ್ಕಿಂತ ಮೊದಲು ಎಂಎನ್‌ಆರ್‌ಇಜಿಎ ಕುರಿತು ಸಾಕಷ್ಟು ದೂರುಗಳಿದ್ದವು. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿದೆ. ಹಲವಾರು ನಿದರ್ಶನಗಳಲ್ಲಿ ಒಂದು ದಿನದ ಕೆಲಸದ ಬದಲಾಗಿ 30 ದಿನಗಳ ಹಾಜರಾತಿ ತೋರಿಸಲಾಗುತ್ತಿತ್ತು ಎಂದು ಅಧ್ಯಯನವು ಬಹಿರಂಗಪಡಿಸಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬೇರೆಯವರು ಹಣವನ್ನು ದೋಚುತ್ತಿದ್ದರು. ಯಾರು ಕಳೆದುಕೊಳ್ಳುತ್ತಿದ್ದರು? ಇದರಿಂದ ಬಡವರು, ಕೂಲಿ ಕಾರ್ಮಿಕರಿಗೆ ನಷ್ಟವಾಗುತ್ತಿತ್ತು. 2014ರ ಹಿಂದೆ ಎಂಎನ್‌ಆರ್‌ಇಜಿಎ ಅಡಿಯಲ್ಲಿ ಮಾಡಲಾದ ಯಾವ ಯೋಜನೆ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ನೀವು ಹಳ್ಳಿಗಳಿಗೆ ಹೋಗಿ ಕೇಳಿದರೆ, ನಿಮಗೆ ಏನೂ ಸಿಗುವುದಿಲ್ಲ. ಹಿಂದೆ, ಎಂಎನ್‌ಆರ್‌ಇಜಿಎ ಮೇಲೆ ಹಣವನ್ನು ಖರ್ಚು ಮಾಡುವಾಗ ಶಾಶ್ವತ ಆಸ್ತಿ ಅಭಿವೃದ್ಧಿಗೆ ಬಹಳ ಕಡಿಮೆ ಒತ್ತು ನೀಡಲಾಗಿತ್ತು. ನಾವೂ ಈ ಪರಿಸ್ಥಿತಿಯನ್ನು ಬದಲಾಯಿಸಿದ್ದೇವೆ. ನಾವು ಎಂಎನ್‌ಆರ್‌ಇಜಿಎ ಬಜೆಟ್ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿದ್ದೇವೆ. ನಾವು ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸಲು ಪ್ರಾರಂಭಿಸಿದ್ದೇವೆ ಮತ್ತು ಹಳ್ಳಿಗಳಿಗೆ ಸಂಪನ್ಮೂಲಗಳನ್ನು ಸಹ ರಚಿಸಿದ್ದೇವೆ. 2014ರ ನಂತರ ಬಡವರಿಗೆ ಲಕ್ಷಾಂತರ ಪಕ್ಕಾ ಮನೆಗಳು, ಬಾವಿಗಳು, ಮೆಟ್ಟಿಲು ಬಾವಿಗಳು, ಕಾಲುವೆಗಳು, ಕೊಟ್ಟಿಗೆಗಳು ಇತ್ಯಾದಿಗಳನ್ನು ಎಂಎನ್‌ಆರ್‌ಇಜಿಎ ಅಡಿಯಲ್ಲಿ ನಿರ್ಮಿಸಲಾಗಿದೆ. ಇಂದು, ಬಹುತೇಕ ಎಂಎನ್‌ಆರ್‌ಇಜಿಎ ಪಾವತಿಗಳನ್ನು 15 ದಿನಗಳಲ್ಲಿ ಚುಕ್ತಾ ಮಾಡಲಾಗಿದೆ. ಈಗ ಶೇಕಡಾ 90 ಕ್ಕಿಂತ ಹೆಚ್ಚು ಎಂಎನ್‌ಆರ್‌ಇಜಿಎ ಕಾರ್ಮಿಕರ ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ. ಇದರಿಂದ ಜಾಬ್ ಕಾರ್ಡ್ ಗಳಲ್ಲಿ ನಕಲಿ ಪ್ರಮಾಣ ಕಡಿಮೆಯಾಗಿದೆ. ನಾನು ನಿಮಗೆ ಇನ್ನೊಂದು ಅಂಕಿಅಂಶವನ್ನು ನೀಡುತ್ತೇನೆ. ಎಂಎನ್‌ಆರ್‌ಇಜಿಎಯಲ್ಲಿನ ವಂಚನೆ ತಡೆಗಟ್ಟುವಿಕೆಯಿಂದಾಗಿ ಸುಮಾರು 40,000 ಕೋಟಿ ರೂಪಾಯಿಗಳು ಇತರರ ಪಾಲಾಗದಂತೆ  ಉಳಿಸಲಾಗಿದೆ. ಈಗ ಎಂಎನ್‌ಆರ್‌ಇಜಿಎ ಹಣವು ಆ ಬಡ ಕೂಲಿಗಾರನಿಗೆ ಹೋಗುತ್ತಿದೆ, ಅವನು ಕಷ್ಟಪಟ್ಟು ದುಡಿದು ತನ್ನ ಬೆವರು ಸುರಿಸುತ್ತಾನೆ. ಬಡವರಿಗೆ ಆಗುತ್ತಿದ್ದವ ಅನ್ಯಾಯವನ್ನು ನಮ್ಮ ಸರ್ಕಾರ ಕೊನೆಗೊಳಿಸಿದೆ.

ಸ್ನೇಹಿತರೇ,

ಪರಿವರ್ತನೆಯ ಈ ಪ್ರಯಾಣವು ವರ್ತಮಾನದಂತೆ ಭವಿಷ್ಯಕ್ಕೂ ಇದೆ. ಇಂದು ನಾವು ಮುಂಬರುವ ಹಲವು ದಶಕಗಳಿಗೆ ತಯಾರಿ ನಡೆಸುತ್ತಿದ್ದೇವೆ. ಈ ಹಿಂದೆ ಯಾವುದೇ ತಂತ್ರಜ್ಞಾನ ಬಂದರೂ ಅದು ಹಲವಾರು ದಶಕಗಳ ಅಥವಾ ವರ್ಷಗಳ ನಂತರ ಭಾರತವನ್ನು ತಲುಪುತ್ತಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವೂ ಈ ಪ್ರವೃತ್ತಿಯನ್ನು ಬದಲಾಯಿಸಿದೆ. ಭಾರತವು ಏಕಕಾಲದಲ್ಲಿ ಮೂರು ಕಾರ್ಯಗಳನ್ನು ಪ್ರಾರಂಭಿಸಿತು. ಮೊದಲನೆಯದಾಗಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ್ದೇವೆ. ಎರಡನೆಯದಾಗಿ, ಭಾರತದ ಅಗತ್ಯಗಳಿಗೆ ಅನುಗುಣವಾಗಿ ಭಾರತದಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ನಾವು ಬೆಂಬಲ ನೀಡಿದ್ದೇವೆ. ಮೂರನೆಯದಾಗಿ, ಭವಿಷ್ಯದ ತಂತ್ರಜ್ಞಾನಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವು ಮಿಷನ್ ಮೋಡ್ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ದೇಶದಲ್ಲಿ 5ಜಿ ಎಷ್ಟು ವೇಗವಾಗಿ ಹೊರಹೊಮ್ಮಿದೆ ಎಂಬುದನ್ನು ಇಂದು ನೀವು ನೋಡಬಹುದು. ನಾವು ಜಗತ್ತಿನಲ್ಲೇ ಅತ್ಯಂತ ವೇಗದಲ್ಲಿ ಬೆಳೆದಿದ್ದೇವೆ. 5ಜಿಗೆ ಸಂಬಂಧಿಸಿದಂತೆ ಭಾರತ ತೋರಿದ ವೇಗ, ಭಾರತ ತನ್ನದೇ ಆದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ರೀತಿ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ.

ಸ್ನೇಹಿತರೇ,

ಕೊರೊನಾ ಸಮಯದಲ್ಲಿ ಲಸಿಕೆಗಳ ಸಮಸ್ಯೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹಳೆಯ ಚಿಂತನೆ ಮತ್ತು ವಿಧಾನವನ್ನು ಹೊಂದಿರುವ ಜನರು 'ಭಾರತದಲ್ಲಿ ತಯಾರಿಸಿದ' ಲಸಿಕೆಗಳನ್ನು ಅನುಮಾನಿಸಿದರು. ಇತರ ದೇಶಗಳು ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ, ಅವರು ಇವತ್ತಲ್ಲ ನಾಳೆ ನಮಗೆ ಲಸಿಕೆಗಳನ್ನು ನೀಡುತ್ತಾರೆ ಎಂಬುದು ಅವರ ಸಾಮಾನ್ಯ ರಾಗವಾಗಿತ್ತು. ಆದರೆ ಬಿಕ್ಕಟ್ಟಿನ ಸಮಯದಲ್ಲೂ, ಭಾರತವು ಸ್ವಾವಲಂಬನೆಯ ಮಾರ್ಗವನ್ನು ಆರಿಸಿಕೊಂಡಿತು ಮತ್ತು ಫಲಿತಾಂಶಗಳು ಇಂದು ನಮ್ಮ ಮುಂದಿವೆ. ಸ್ನೇಹಿತರೇ, ಇಂದು ನೀವು ತುಂಬಾ ಸಂತೋಷವಾಗಿದ್ದೀರಿ. ಆದರೆ ಆ ಸಮಯದಲ್ಲಿ ನಾವು ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದ ಸಮಯದ ಬಗ್ಗೆ ಊಹಿಸಿಕೊಳ್ಳಿ. ನಮ್ಮ ಲಸಿಕೆಗಳನ್ನು ತೆಗೆದುಕೊಳ್ಳಿ ಎಂದು ಜಗತ್ತು ಹೇಳುತ್ತಿದ್ದಾಗ, ಲಸಿಕೆಗಳಿಲ್ಲದೆ ತೊಂದರೆ ಇದೆ ಮತ್ತು ನಾವು ಸಾಯುತ್ತೇವೆ ಎಂದು ಜನರು ಹೇಳುತ್ತಿದ್ದಾಗಿನ ಸಮಯದಲ್ಲಿ ನಿಮ್ಮನ್ನು ಇಟ್ಟುಕೊಂಡು ನೋಡಿ. ಸಂಪಾದಕೀಯಗಳು ಮತ್ತು ಟಿವಿ ಚರ್ಚೆಗಳು ಅಪಾಯಗಳನ್ನು ಎತ್ತಿ ತೋರಿಸುತ್ತಿದ್ದವು. ಲಸಿಕೆಗಳನ್ನು ತರುವಂತೆ ಒತ್ತಡ ಹೇರುತ್ತಿದ್ದವು. ಸ್ನೇಹಿತರೇ, ನಾನು ನನ್ನ ದೇಶಕ್ಕಾಗಿ ದೊಡ್ಡ ರಾಜಕೀಯ ಅಪಾಯವನ್ನು ತೆಗೆದುಕೊಂಡೆ. ಇಲ್ಲದಿದ್ದರೆ, ನಾನು ಖಜಾನೆಯನ್ನು ಬಳಸಿ, ಲಸಿಕೆಗಳನ್ನು ಆಮದು ಮಾಡಿಕೊಳ್ಳಬಹುದಿತ್ತು. ಜನರಿಗೆ ಒಮ್ಮೆ ಲಸಿಕೆ ಹಾಕಿಸಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರೆ ಮುಗಿಯುತ್ತಿತ್ತು. ಆದರೆ ಸ್ನೇಹಿತರೇ, ನಾವು ಆ ಮಾರ್ಗವನ್ನು ಆರಿಸಿಕೊಳ್ಳಲಿಲ್ಲ. ನಾವು ಅತ್ಯಂತ ಕಡಿಮೆ ಸಮಯದಲ್ಲಿ ವಿಶ್ವದ ಅತ್ಯುತ್ತಮ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಾವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಲಸಿಕೆ ಅಭಿಯಾನವನ್ನು ತ್ವರಿತವಾಗಿ ಪ್ರಾರಂಭಿಸಿದೆವು. ಜನವರಿ-ಫೆಬ್ರವರಿಯಲ್ಲಿ ಭಾರತದಲ್ಲಿ ಕೋವಿಡ್ ಹರಡಲು ಪ್ರಾರಂಭಿಸಿತು ಮತ್ತು ಮೇ ತಿಂಗಳ ವೇಳೆಗೆ ಲಸಿಕೆಗಳಿಗಾಗಿ ಭಾರತವು ಕಾರ್ಯಪಡೆಯನ್ನು ರಚಿಸಿತ್ತು ಎಂಬುದು ನಿಮಗೆ ಗೊತ್ತಿರಲಿ. ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂಚಿತವಾಗಿ ಯೋಜನೆಗಳನ್ನು ರೂಪಿಸಿದೆವು. ಇದು ಕೆಲವರು ‘ಭಾರತದಲ್ಲಿ ತಯಾರಿಸಿದ’ಲಸಿಕೆಗಳ ಬಗ್ಗೆ ಕೊಂಕು ನುಡಿಯುತ್ತಿದ್ದ ಸಮಯವಾಗಿತ್ತು. ಯಾವ ರೀತಿಯ ಪದಗಳನ್ನು ಬಳಸಲಾಯಿತು? ಯಾರ ಒತ್ತಡ ಇತ್ತೋ ಗೊತ್ತಿಲ್ಲ? ವಿದೇಶಿ ಲಸಿಕೆಗಳ ಆಮದಿಗಾಗಿ ಪ್ರತಿಪಾದಿಸುತ್ತಿದ್ದ ಇವರ ಸ್ವಹಿತಾಸಕ್ತಿ ಏನಿತ್ತು ಎಂದು ನನಗೆ ಗೊತ್ತಿಲ್ಲ? 

|

ಸ್ನೇಹಿತರೇ,

ನಮ್ಮ ಡಿಜಿಟಲ್ ಇಂಡಿಯಾ ಅಭಿಯಾನವು ಇಂದು ವಿಶ್ವಾದ್ಯಂತ ಚರ್ಚೆಯಾಗಿದೆ. ಇತ್ತೀಚೆಗೆ, ನಾನು ಜಿ-20 ಶೃಂಗಸಭೆಗಾಗಿ ಬಾಲಿಗೆ ಹೋಗಿದ್ದೆ. ನನ್ನಿಂದ ಡಿಜಿಟಲ್ ಇಂಡಿಯಾದ ವಿವರಗಳನ್ನು ತಿಳಿಯಲು ಪ್ರಯತ್ನಿಸದ ಯಾವುದೇ ದೇಶವಿರಲಿಲ್ಲ. ಒಂದು ಕಾಲದಲ್ಲಿ ಡಿಜಿಟಲ್ ಇಂಡಿಯಾವನ್ನು ಹಳಿತಪ್ಪಿಸುವ ಪ್ರಯತ್ನವೂ ನಡೆದಿತ್ತು. ಇದಕ್ಕೂ ಮೊದಲು, ದೇಶವು ಡೇಟಾ ವರ್ಸಸ್‌ ಅಟ್ಟಾ (ಹಿಟ್ಟು) ಚರ್ಚೆಯಲ್ಲಿ ಸಿಲುಕಿತ್ತು. ಈ ಟಿವಿ ಮಾಧ್ಯಮದವರು ಅದನ್ನು ಬಹಳಷ್ಟು ಆನಂದಿಸಿದರು, ಅವರು ಎರಡು ಪದಗಳನ್ನು ಹಾಕುತ್ತಿದ್ದರು - ನಿಮಗೆ ಡೇಟಾ ಬೇಕಾ ಅಥವಾ ಅಟ್ಟಾ ಬೇಕಾ. ಜನ್ ಧನ್-ಆಧಾರ್-ಮೊಬೈಲ್ ಎಂಬ ತ್ರಿಮೂರ್ತಿಗಳನ್ನು ತಡೆಯಲು ಅವರು ಸಂಸತ್ತಿನಿಂದ ನ್ಯಾಯಾಲಯದವರೆಗೆ ಯಾವೆಲ್ಲಾ ತಂತ್ರಗಳನ್ನು ಬಳಸಿದರು. 2016ರಲ್ಲಿ ದೇಶವಾಸಿಗಳಿಗೆ ಬ್ಯಾಂಕ್ ಬೆರಳ ತುದಿಯಲ್ಲಿರುತ್ತದೆ ಎಂದು ಹೇಳಿದಾಗ ಅವರು ನನ್ನನ್ನು ಗೇಲಿ ಮಾಡುತ್ತಿದ್ದರು. ಕೆಲವು ನಕಲಿ ಬುದ್ಧಿಜೀವಿಗಳು ‘ಮೋದಿ ಜೀ, ಹೇಳಿ, ಬಡವರು ಆಲೂಗಡ್ಡೆ ಮತ್ತು ಟೊಮೆಟೊಗಳನ್ನು ಡಿಜಿಟಲ್‌ನಲ್ಲಿ ಹೇಗೆ ಖರೀದಿಸುತ್ತಾರೆ?’ ಎಂದು ನನ್ನನ್ನು ಕೇಳುತ್ತಿದ್ದರು. ನಂತರ ಈ ಜನರು ಏನು ಹೇಳಿದರು? ‘ಬಡವರ ಅದೃಷ್ಟದಲ್ಲಿ ಆಲೂಗೆಡ್ಡೆ, ಟೊಮೇಟೊ ಎಲ್ಲಿದೆ?’, ಹಳ್ಳಿಗಳಲ್ಲಿ ಸಂತೆಗಳು ನಡೆಯುತ್ತವೆ, ಜನರು ಸಂತೆಯಲ್ಲಿ ಡಿಜಿಟಲ್ ಪಾವತಿ ಮಾಡುವುದು ಹೇಗೆ? ಎಂದೂ ಕೇಳಿದರು. ಇಂದು ನೀವೇ ನೋಡಿ ನಿಮ್ಮ ಫಿಲ್ಮ್ ಸಿಟಿಯಲ್ಲಿ ಟೀ ಅಂಗಡಿಯಿಂದ ಹಿಡಿದು ಲಿಟ್ಟಿ-ಚೋಖಾ ಬಂಡಿಯವರೆಗೆ ಡಿಜಿಟಲ್ ಪಾವತಿ ನಡೆಯುತ್ತಿದೆಯೋ, ಇಲ್ಲವೋ? ಪ್ರಪಂಚದಲ್ಲಿ ಇಂದು ಭಾರತವು ಡಿಜಿಟಲ್ ವಹಿವಾಟುಗಳು ಹೆಚ್ಚು ನಡೆಯುವ ದೇಶಗಳಲ್ಲಿ ಒಂದಾಗಿದೆ.

ಸ್ನೇಹಿತರೇ,

ಸರ್ಕಾರ ಏಕೆ ಇಷ್ಟೊಂದು ಕೆಲಸ ಮಾಡುತ್ತಿದೆ ಅಥವಾ ವಾಸ್ತವದಲ್ಲಿ ಜನರಿಗೂ ಅದರ ಲಾಭ ಸಿಗುತ್ತಿದೆಯೇ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು. ಇನ್ನು, ಕೆಲವರಿಗೆ ಮೋದಿಯೊಂದಿಗೆ ಸಮಸ್ಯೆಗಳಿವೆ. ಅದನ್ನು ಮಾಧ್ಯಮಗಳು ಅನುಸರಿಸುತ್ತಿವೆ. ಇಂದು ನಾನು ರಿಪಬ್ಲಿಕ್ ಟಿವಿಯ ವೀಕ್ಷಕರಿಗೆ ಇದಕ್ಕೆ ಕಾರಣಗಳನ್ನು ಹೇಳಲು ಬಯಸುತ್ತೇನೆ. ಕೆಲವರಿಗೆ ಕಪ್ಪು ಆದಾಯದ ದಾರಿಯನ್ನು ಮೋದಿಯವರು ಶಾಶ್ವತವಾಗಿ ಮುಚ್ಚಿಬಿಟ್ಟಿದ್ದಾರೆ ಎಂಬುದೇ ಕಣ್ಣಿಗೆ ರಾಚುತ್ತಿರುವ ಸಿಟ್ಟು. ಈಗ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ಅರೆಮನಸ್ಸಿನ ಅಥವಾ ಪ್ರತ್ಯೇಕವಾದ ವಿಧಾನವಿಲ್ಲ. ಈಗ ಸಂಯೋಜಿತ, ಸಾಂಸ್ಥಿಕ ವಿಧಾನವಿದೆ. ಇದು ನಮ್ಮ ಬದ್ಧತೆ. ಈಗ ಹೇಳಿ, ಕಳಂಕಿತ ಸಂಪತ್ತನ್ನು ಹೊಂದಿದವರು ನನ್ನನ್ನು ನಿಂದಿಸುವುದನ್ನು ನಿಲ್ಲಿಸುತ್ತಾರೆಯೇ ಅಥವಾ ಇಲ್ಲವೇ? ಅವರು ತಮ್ಮ ಬರಹಗಳಲ್ಲಿ ವಿಷವನ್ನು ಸಹ ಕಕ್ಕುತ್ತಾರೆ.

ಜೆಎಎಂ ಟ್ರಿನಿಟಿಯಿಂದಾಗಿ ಸುಮಾರು 10 ಕೋಟಿ ಸರ್ಕಾರಿ ಯೋಜನೆಗಳ ನಕಲಿ ಫಲಾನುಭವಿಗಳನ್ನು ಹೊರಹಾಕಲಾಗಿದೆ ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಈ ಅಂಕಿಅಂಶಗಳು ಚಿಕ್ಕದಲ್ಲ ಸರ್. ಹತ್ತು ಕೋಟಿ ನಕಲಿ ಫಲಾನುಭವಿಗಳನ್ನು ಹೊರಹಾಕಲಾಗಿದೆ. ಈ 10 ಕೋಟಿ ಜನರು ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದರು. ಈ 10 ಕೋಟಿ ಜನ ಹುಟ್ಟದೇ ಇರುವವರು, ಆದರೆ ಅವರಿಗೆ ಸರ್ಕಾರದ ಹಣವನ್ನು ಕಳುಹಿಸಲಾಗುತ್ತಿತ್ತು. ದೆಹಲಿ, ಪಂಜಾಬ್ ಮತ್ತು ಹರಿಯಾಣದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ನಕಲಿ ಫಲಾನುಭವಿಗಳಿಗೆ ಕಾಂಗ್ರೆಸ್ ಸರ್ಕಾರವು ಹಣವನ್ನು ಕಳುಹಿಸುತ್ತಿತ್ತು ಎಂಬುದನ್ನು ನೀವು ಊಹಿಸಿಕೊಳ್ಳಿ. ನಮ್ಮ ಸರ್ಕಾರವು ಈ 10 ಕೋಟಿ ನಕಲಿ ಹೆಸರುಗಳನ್ನು ವ್ಯವಸ್ಥೆಯಿಂದ ಹೊರಗಿಡದಿದ್ದರೆ, ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು. ಸ್ನೇಹಿತರೇ, ಈ ಸಾಧನೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ನಾವು ಮೊದಲು ಆಧಾರ್‌ಗೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕಿತ್ತು. ಮಿಷನ್ ಮೋಡ್‌ನಲ್ಲಿ 45 ಕೋಟಿಗೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಇದುವರೆಗೆ 28 ಲಕ್ಷ ಕೋಟಿ ರೂಪಾಯಿಗಳನ್ನು ಡಿಬಿಟಿ ಮೂಲಕ ಕೋಟ್ಯಂತರ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ನೇರ ಲಾಭ ವರ್ಗಾವಣೆ ಎಂದರೆ ಮಧ್ಯವರ್ತಿಗಳು ಇರುವುದಿಲ್ಲ, ಕಪ್ಪು ಹಣ ಮಾಡುವ ಜನರು ಇದರಲ್ಲಿ ಇರುವುದಿಲ್ಲ. ಡಿಬಿಟಿ ಎಂದರೆ ಕಮಿಷನ್ ಮತ್ತು ಕಳ್ಳತನದ ಅಂತ್ಯ ಎಂದರ್ಥ. ಈ ಒಂದು ವ್ಯವಸ್ಥೆಯು ಹತ್ತಾರು ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಪಾರದರ್ಶಕತೆಗೆ ಕಾರಣವಾಯಿತು.

ಸ್ನೇಹಿತರೇ,

ನಮ್ಮ ದೇಶದಲ್ಲಿ ಸರ್ಕಾರದ ಖರೀದಿಯು ಭ್ರಷ್ಟಾಚಾರದ ಪ್ರಮುಖ ಮೂಲವಾಗಿದೆ. ಇದರಲ್ಲೂ ಈಗ ಪರಿವರ್ತನೆಯಾಗಿದೆ. ಸರ್ಕಾರಿ ಖರೀದಿಯನ್ನು ಈಗ ಸಂಪೂರ್ಣವಾಗಿ ಜಿಇಎಂ ಅಂದರೆ ಸರ್ಕಾರಿ ಇ-ಮಾರುಕಟ್ಟೆ ಪೋರ್ಟಲ್‌ನಲ್ಲಿ ಮಾಡಲಾಗುತ್ತದೆ. ಪತ್ರಿಕೆಗಳು ತೆರಿಗೆ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅತಿಯಾಗಿ ಬರೆಯುತ್ತಿದ್ದವು. ನಾವೇನು ಮಾಡಿದೆವು? ನಾವು ವ್ಯವಸ್ಥೆಯನ್ನು ಮುಖಾಮುಖಿರಹಿತಗೊಳಿಸಿದ್ದೇವೆ. ತೆರಿಗೆ ಅಧಿಕಾರಿ ಮತ್ತು ತೆರಿಗೆದಾರರು ಮುಖಾಮುಖಿಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಜಿಎಸ್‌ಟಿ ಕಪ್ಪುಹಣದ ದಾರಿಯನ್ನೂ ಮುಚ್ಚಿದೆ. ಪ್ರಾಮಾಣಿಕ ಕೆಲಸ ಮಾಡಿದಾಗ ಕೆಲವರಿಗೆ ಸಮಸ್ಯೆಗಳು ಬರುವುದು ಸಹಜ, ಸಮಸ್ಯೆಗಳನ್ನು ಎದುರಿಸುವವರು ಬೀದಿಯಲ್ಲಿರುವ ಜನರನ್ನು ನಿಂದಿಸುತ್ತಾರೆಯೇ? ಸ್ನೇಹಿತರೇ, ಈ ಭ್ರಷ್ಟಾಚಾರದ ಪ್ರತಿನಿಧಿಗಳು ಇದಕ್ಕಾಗಿಯೇ ವಿಚಲಿತರಾಗಿದ್ದಾರೆ. ದೇಶದ ಪ್ರಾಮಾಣಿಕ ವ್ಯವಸ್ಥೆಯನ್ನು ನಾಶಮಾಡಲು ಶ್ರಮ ಪಡುತ್ತಿದ್ದಾರೆ.

ಸ್ನೇಹಿತರೇ,

ಅವರ ಹೋರಾಟ ಕೇವಲ ಮೋದಿಯವರೊಂದಿಗೆ ಇದ್ದಿದ್ದರೆ, ಅವರು ಬಹಳ ಹಿಂದೆಯೇ ಯಶಸ್ವಿಯಾಗುತ್ತಿದ್ದರು. ಆದರೆ ಅವರು ಸಾಮಾನ್ಯ ಭಾರತೀಯನ ವಿರುದ್ಧ ಹೋರಾಡುತ್ತಿರುವುದರಿಂದ ತಮ್ಮ ಪಿತೂರಿಗಳಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ. ಈ ಭ್ರಷ್ಟರು ಎಷ್ಟೇ ದೊಡ್ಡ ಮೈತ್ರಿ ಮಾಡಿಕೊಂಡರೂ, ಭ್ರಷ್ಟರೆಲ್ಲ ಒಂದೇ ವೇದಿಕೆಗೆ ಬಂದರೂ, ಕುಟುಂಬ ರಾಜಕಾರಣದವರೆಲ್ಲ ಒಂದೇ ಕಡೆ ಬಂದರೂ ಮೋದಿ ಹಿಂದೆ ಸರಿಯುವುದಿಲ್ಲ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ನನ್ನ ಸ್ನೇಹಿತರು ಮತ್ತು ನಾನು ದೇಶವನ್ನು ಈ ತಪ್ಪುಗಳಿಂದ ಮುಕ್ತಗೊಳಿಸಲು ಪ್ರತಿಜ್ಞೆ ಮಾಡಿದ್ದೇವೆ.  ನನಗೆ ನಿಮ್ಮ ಆಶೀರ್ವಾದ ಬೇಕು.

ಸ್ನೇಹಿತರೇ,

ಸ್ವಾತಂತ್ರ್ಯದ ಈ ‘ಅಮೃತ ಕಾಲʼ ನಮ್ಮೆಲ್ಲರ ಪರ್ಯತ್ನಕ್ಕೆ ಸೇರಿದ್ದು. ಪ್ರತಿಯೊಬ್ಬ ಭಾರತೀಯನ ಶಕ್ತಿ ಮತ್ತು ಪರಿಶ್ರಮವನ್ನು ಅನ್ವಯಿಸಿದಾಗ, ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಧ್ಯವಾದಷ್ಟು ಬೇಗ ಈಡೇರಿಸಲು ಸಾಧ್ಯವಾಗುತ್ತದೆ. ರಿಪಬ್ಲಿಕ್ ನೆಟ್‌ವರ್ಕ್ ಈ ಉತ್ಸಾಹವನ್ನು ಬಲಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈಗ ಅರ್ನಾಬ್ ಅವರು ಜಾಗತಿಕವಾಗುತ್ತಿರುವುದಾಗಿ ಹೇಳಿದ್ದಾರೆ, ಇದರಿಂದ ಭಾರತದ ಧ್ವನಿಗೆ ಹೊಸ ಶಕ್ತಿ ಸಿಗುತ್ತದೆ. ಅವರಿಗೂ ನನ್ನ ಶುಭಾಶಯಗಳು. ಈಗ ಪ್ರಾಮಾಣಿಕತೆಯಿಂದ ಹೆಜ್ಜೆ ಹಾಕುವ ದೇಶವಾಸಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರೆ ಭವ್ಯ ಭಾರತ ಖಾತ್ರಿ. ನನ್ನ ದೇಶವಾಸಿಗಲೇ ಭವ್ಯ ಭಾರತದ ಭರವಸೆ. ಅದರಲ್ಲಿ ನಂಬಿಕೆ ಇಟ್ಟವನು ನಾನು ಎಂದು ನಿಮಗೆ ಭರವಸೆ ನೀಡುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು!

 

  • Jitendra Kumar January 26, 2025

    ❤️❤️
  • Lakshmana Bheema rao December 26, 2024

    Arnaabji and REPUBLIC TV has contributed greatly to the growth, Modiji's innovative moves, curbing anti national elements. Hearty congrats and many more contributions to INDIA'S DEVELOPEMENT and CULTURE.
  • krishangopal sharma Bjp December 26, 2024

    नमो नमो 🙏 जय भाजपा 🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
  • krishangopal sharma Bjp December 26, 2024

    नमो नमो 🙏 जय भाजपा 🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
  • krishangopal sharma Bjp December 26, 2024

    नमो नमो 🙏 जय भाजपा 🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • Musharraf Hussain choudhury July 19, 2024

    Bilkul sahi kaha hai prime minister ji ne,
  • Dr Digvijay Sirohi July 11, 2024

    ram
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
In Mann Ki Baat, PM Stresses On Obesity, Urges People To Cut Oil Consumption

Media Coverage

In Mann Ki Baat, PM Stresses On Obesity, Urges People To Cut Oil Consumption
NM on the go

Nm on the go

Always be the first to hear from the PM. Get the App Now!
...
We are proud of our Annadatas and committed to improve their lives: PM Modi
February 24, 2025

The Prime Minister Shri Narendra Modi remarked that the Government was proud of India’s Annadatas and was commitment to improve their lives. Responding to a thread post by MyGovIndia on X, he said:

“We are proud of our Annadatas and our commitment to improve their lives is reflected in the efforts highlighted in the thread below. #PMKisan”