QuoteStartups makes presentations before PM on six themes
Quote“It has been decided to celebrate January 16 as National Start-up Day to take the Startup culture to the far flung areas of the country”
Quote“Three aspects of government efforts: first, to liberate entrepreneurship, innovation from the web of government processes, and bureaucratic silos, second, creating an institutional mechanism to promote innovation; third, handholding of young innovators and young enterprises”
Quote“Our Start-ups are changing the rules of the game. That's why I believe Start-ups are going to be the backbone of new India.”
Quote“Last year, 42 unicorns came up in the country. These companies worth thousands of crores of rupees are the hallmark of self-reliant and self-confident India”
Quote“Today India is rapidly moving towards hitting the century of the unicorns. I believe the golden era of India's start-ups is starting now”
Quote“Don't just keep your dreams local, make them global. Remember this mantra

ನಮಸ್ಕಾರ,

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ ಜಿ, ಮನ್ಸುಖ್ ಮಾಂಡವಿಯಾ ಜಿ, ಅಶ್ವಿನಿ ವೈಷ್ಣವ್ ಜಿ, ಸರ್ಬಾನಂದ್ ಸೋನೊವಾಲ್ ಜಿ, ಪರ್ಶೋತ್ತಮ್ ರುಪಾಲ ಜಿ, ಜಿ. ಕಿಶನ್ ರೆಡ್ಡಿ ಜಿ, ಪಶುಪತಿ ಕುಮಾರ್ ಪಾರಸ್ ಜಿ, ಜಿತೇಂದ್ರ ಸಿಂಗ್ ಜಿ, ಸೋಮ್ ಪ್ರಕಾಶ್ ಜಿ, ದೇಶಾದ್ಯಂತ ಇರುವ ನವೋದ್ಯಮಗಳ ಉದ್ಯಮಶೀಲ ದಿಗ್ಗಜರೇ, ನನ್ನ ಯುವ ಸ್ನೇಹಿತರೆ, ವೇದಿಕೆಯಲ್ಲಿರುವ ಎಲ್ಲಾ ಗಣ್ಯರೇ, ಸಹೋದರ ಸಹೋದರಿಯರೇ,

ಭಾರತದ ನವೋದ್ಯಮಗಳ ಯಶಸ್ಸಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನವೋದ್ಯಮಗಳ ಪಾಲುದಾರರ ಯಶೋಗಾಥೆಯ ಪ್ರಸ್ತುತಿಗಳನ್ನು ಸಹ ಕಣ್ತುಂಬಿಕೊಂಡಿದ್ದೇವೆ. ನೀವೆಲ್ಲರೂ ಬಹುದೊಡ್ಡ, ಮಹತ್ವಪೂರ್ಣ ಕಾರ್ಯಗಳನ್ನು ಮಾಡುತ್ತಿದ್ದೀರಿ.  2022 ಹೊಸ ವರ್ಷವು ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಗೆ ಇನ್ನಷ್ಟು ಅವಕಾಶಗಳು ಮತ್ತು ಸಾಧ್ಯತೆಗಳನ್ನು ತಂದಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷದಲ್ಲಿ 'ಭಾರತೀಯ ನವೋದ್ಯಮ ನಾವೀನ್ಯತಾ ಸಪ್ತಾಹ' ಕಾರ್ಯಕ್ರಮವು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸುವ ಸಂದರ್ಭದಲ್ಲಿ ಭವ್ಯ ಭಾರತ ಕಟ್ಟುವಲ್ಲಿ ನಿಮ್ಮ ಪಾತ್ರ ಅಪಾರವಾಗಿದೆ.

ನವೋದ್ಯಮ ಜಗತ್ತಿನಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುತ್ತಿರುವ ದೇಶದ ಎಲ್ಲಾ ನವೋದ್ಯಮಗಳು ಮತ್ತು ಸದಸ ಹೊಸತನ್ನು ಹುಡುಕುವ ತುಡಿತದ ಯುವ ಸಮುದಾಯವನ್ನು ನಾನಿಲ್ಲಿ ಅಭಿನಂದಿಸುತ್ತೇನೆ. ಪ್ರತಿ ವರ್ಷ ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದರಿಂದ ನವೋದ್ಯಮಗಳ ಈ ಸಂಸ್ಕೃತಿಯು ದೇಶದ ದೂರದ ಭಾಗಗಳಿಗೆ, ಮೂಲೆ ಮೂಲೆಗೆ ತಲುಪುತ್ತದೆ.

ಸ್ನೇಹಿತರೆ,

ನವೋದ್ಯಮ ಭಾರತ ನಾವೀನ್ಯತಾ ಸಪ್ತಾಹವು ಕಳೆದ ವರ್ಷದ ಯಶಸ್ಸನ್ನು ಆಚರಿಸಲು ಆಯೋಜಿಸಿರುವ ಕಾರ್ಯಕ್ರಮವಾಗಿದೆ. ಜತೆಗೆ, ಭವಿಷ್ಯದ ಕಾರ್ಯತಂತ್ರಗಳನ್ನು ವಿಸ್ತೃತವಾಗಿ ಚರ್ಚಿಸುವ ವೇದಿಕೆಯಾಗಿದೆ. ಈ ದಶಕವನ್ನು ‘ಭಾರತದ ತಂತ್ರಜ್ಞಾನ ದಶಕ’(ಟೆಕೇಡ್ ಆಫ್ ಇಂಡಿಯಾ) ಎಂದು ಕರೆಯಲಾಗುತ್ತಿದೆ. ನಾವೀನ್ಯತೆ, ಉದ್ಯಮಶೀಲತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆ ಬಲಪಡಿಸುವ ಪ್ರಮುಖ ಮೂರು ಅಂಶಗಳಿಗೆ ಕೇಂದ್ರ ಸರ್ಕಾರವು ಈ ದಶಕದಲ್ಲಿ ಬೃಹತ್ ಬದಲಾವಣೆಗಳನ್ನು ತರುತ್ತಿದೆ.

ಮೊದಲನೆಯದಾಗಿ, ಸರ್ಕಾರಿ ಪ್ರಕ್ರಿಯೆಗಳು ಮತ್ತು ಅಧಿಕಾರಶಾಹಿ ಹಿಡಿತದಿಂದ ಉದ್ಯಮಶೀಲತೆ ಮತ್ತು ಹೊಸತನ ಶೋಧದ ಕ್ಷೇತ್ರವನ್ನು ಮುಕ್ತಗೊಳಿಸುವುದು; ಎರಡನೆಯದಾಗಿ, ನಾವೀನ್ಯತೆ  ಉತ್ತೇಜಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ರಚಿಸುವುದು; ಮೂರನೆಯದಾಗಿ, ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾದಂತಹ ಕಾರ್ಯಕ್ರಮಗಳಿಗೆ ಯುವ ನವೋದ್ಯಮಿಗಳು ಮತ್ತು ಯುವ ಉದ್ಯಮಶೀಲರನ್ನು ಹಿಡಿದಿಡುವುದು ನಮ್ಮ ಪ್ರಯತ್ನಗಳ ಭಾಗವಾಗಿದೆ.

ಸ್ನೇಹಿತರೆ,

ಪ್ರೋತ್ಸಾಹಕ ಹೂಡಿಕೆ ತೆರಿಗೆ ಅಥವಾ ಧನ ಪ್ರೋತ್ಸಾಹ ತೆರಿಗೆ(ಏಂಜೆಲ್ ಟ್ಯಾಕ್ಸ್‌) ತೊಂದರೆಗಳನ್ನು ತೊಡೆದುಹಾಕುವುದು, ತೆರಿಗೆ ಸಲ್ಲಿಕೆ ಸರಳೀಕರಣ, ಸಾಲ ಲಭ್ಯತೆ ಸುಲಭಗೊಳಿಸುವಿಕೆ ಮತ್ತು ಸಾವಿರಾರು ಕೋಟಿ ರೂಪಾಯಿ ಸರ್ಕಾರದ ನಿಧಿಯನ್ನು ಖಚಿತಪಡಿಸುವ ಸರ್ಕಾರದ ಕ್ರಮಗಳು  ನಮ್ಮ ಬದ್ಧತೆಯನ್ನು ಬಿಂಬಿಸುತ್ತಿವೆ. ಸ್ಟಾರ್ಟ್-ಅಪ್ ಇಂಡಿಯಾ ಅಡಿ, 9  ಕಾರ್ಮಿಕ ಮತ್ತು 3 ಪರಿಸರ ಕಾನೂನುಗಳಿಗೆ ಸಂಬಂಧಿಸಿದ ಅನುಸರಣಾ ವಿಧಿವಿಧಾನಗಳನ್ನು ಸ್ವಯಂ-ಪ್ರಮಾಣೀಕರಿಸುವ ಸೌಲಭ್ಯವನ್ನು ನವೋದ್ಯಮಗಳಿಗೆ ನೀಡಲಾಗಿದೆ.

ದಾಖಲೆಗಳ ಸ್ವಯಂ-ದೃಢೀಕರಣದೊಂದಿಗೆ ಪ್ರಾರಂಭವಾದ ಸರ್ಕಾರಿ ಕಾರ್ಯವಿಧಾನಗಳ ಸರಳೀಕರಣ ಪ್ರಕ್ರಿಯೆಯಿಂದಾಗಿ ಇಂದು 25,000ಕ್ಕಿಂತ ಹೆಚ್ಚಿನ ಅನಗತ್ಯ ಅನುಸರಣೆಗಳನ್ನು ತೊಡೆದುಹಾಕಿದೆ. ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ವೇದಿಕೆಯು ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಸರ್ಕಾರಕ್ಕೆ ಸುಲಭವಾಗಿ ಒದಗಿಸಲು ನವೋದ್ಯಮಗಳಿಗೆ ತುಂಬಾ ಉಪಯುಕ್ತವಾಗಿದೆ.

|

ಸ್ನೇಹಿತರೆ,

ಒಬ್ಬ ಯುವಕನ ಸಾಮರ್ಥ್ಯ ಮತ್ತು ಸೃಜನಶೀಲತೆ ಮೇಲಿನ ನಂಬಿಕೆಯು ಯಾವುದೇ ದೇಶದ ಪ್ರಗತಿಗೆ ಪ್ರಮುಖ ಆಧಾರವಾಗಿದೆ. ದೇಶದ ಯುವಕರ ಈ ಸಾಮರ್ಥ್ಯವನ್ನು ಗುರುತಿಸಿದ ಭಾರತ, ಇಂದು ಪ್ರಮುಖ ನೀತಿಗಳನ್ನು ರೂಪಿಸುತ್ತಿದೆ, ನಿರ್ಧಾರಗಳನ್ನು ಜಾರಿಗೆ ತರುತ್ತಿದೆ. ಭಾರತದಲ್ಲಿ 1,000ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು, 11,000 ಅದ್ವಿತೀಯ ಶಿಕ್ಷಣ ಸಂಸ್ಥೆಗಳು, 42,000 ಕಾಲೇಜುಗಳು ಮತ್ತು ಲಕ್ಷಾಂತರ ಶಾಲೆಗಳಿವೆ. ಇದು ಭಾರತದ ಬಹುದೊಡ್ಡ ಶಕ್ತಿಯಾಗಿದೆ.

ಬಾಲ್ಯದಿಂದಲೂ ವಿದ್ಯಾರ್ಥಿಗಳಲ್ಲಿ ಹೊಸತನದ ಶೋಧದ ಆಕರ್ಷಣೆಯನ್ನು ಹುಟ್ಟುಹಾಕುವ ಮೂಲಕ ದೇಶದಲ್ಲಿ ನಾವೀನ್ಯತೆಯನ್ನು ಸಾಂಸ್ಥಿಕಗೊಳಿಸುವುದು ನಮ್ಮ ಪ್ರಯತ್ನವಾಗಿದೆ. 9,000ಕ್ಕಿಂತ ಹೆಚ್ಚಿನ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಮಕ್ಕಳಿಗೆ ಶಾಲೆಗಳಲ್ಲಿ ಹೊಸ ಆಲೋಚನೆಗಳನ್ನು ಮತ್ತು ಕೆಲಸ ಮಾಡುವ ಅವಕಾಶವನ್ನು ನೀಡುತ್ತಿವೆ. ಅಟಲ್ ಇನ್ನೋವೇಶನ್ ಮಿಷನ್ ನಮ್ಮ ಯುವಕರಿಗೆ ಅವರ ನವೀನ ಆಲೋಚನೆಗಳನ್ನು ಆನ್ವಯಿಸಿ ಕೆಲಸ ಮಾಡಲು ಹೊಸ ವೇದಿಕೆಗಳನ್ನು ಖಾತ್ರಿಪಡಿಸುತ್ತಿದೆ. ಜತೆಗೆ, ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ಸಾವಿರಾರು ಪ್ರಯೋಗಾಲಯಗಳ ಜಾಲದ ಮೂಲಕ ಪ್ರತಿ ಕ್ಷೇತ್ರದಲ್ಲೂ ಹೊಸತನ ಉತ್ತೇಜಿಸಲಾಗುತ್ತಿದೆ. ದೇಶದ ಸವಾಲುಗಳನ್ನು ಎದುರಿಸಲು ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳಿಗೆ ನಾವು ಒತ್ತು ನೀಡುತ್ತಿದ್ದೇವೆ. ನಾವು ಅನೇಕ ಹ್ಯಾಕಥಾನ್‌ಗಳನ್ನು ಆಯೋಜಿಸುವ ಮೂಲಕ ಯುವಕರನ್ನು ತೊಡಗಿಸಿಕೊಂಡಿದ್ದೇವೆ. ಅವರು ನಮಗೆ ದಾಖಲೆ ಸಮಯದಲ್ಲಿ ಅನೇಕ ನವೀನ ಪರಿಹಾರಗಳನ್ನು ನೀಡಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಯುವಕರು ಮತ್ತು ನವೋದ್ಯಮಗಳೊಂದಿಗೆ ಹೇಗೆ ಸಂಪರ್ಕದಲ್ಲಿವೆ ಮತ್ತು ಅವರ ಹೊಸ ಆಲೋಚನೆಗಳನ್ನು ಹೇಗೆ ಪ್ರೋತ್ಸಾಹಿಸುತ್ತಿವೆ ಎಂಬುದನ್ನು ನೀವೇ ನೋಡುತ್ತಿದ್ದೀರಿ, ಅನುಭವಿಸುತ್ತಿದ್ದೀರಿ. ಹೊಸ ಡ್ರೋನ್ ನಿಯಮಗಳಾಗಲಿ ಅಥವಾ ಹೊಸ ಬಾಹ್ಯಾಕಾಶ ನೀತಿಯಾಗಲಿ, ಸಾಧ್ಯವಾದಷ್ಟು ಯುವಕರಿಗೆ ನಾವೀನ್ಯತೆ, ಆವಿಷ್ಕಾರಗಳಿಗೆ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ.

ನಮ್ಮ ಸರ್ಕಾರ ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್) ನೋಂದಣಿಗೆ ಸಂಬಂಧಿಸಿದ ನಿಯಮಗಳನ್ನು ಕೂಡ ಸರಳಗೊಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಇಂದು ದೇಶದಲ್ಲಿ ನೂರಾರು ತಂತ್ರಜ್ಞಾನ ಪೋಷಣಾ ಕೇಂದ್ರ(ಇನ್ ಕ್ಯುಬೇಟರ್)ಗಳನ್ನು ಬೆಂಬಲಿಸುತ್ತಿವೆ. ಇಂದು, ಐಕ್ರಿಯೇಟ್ ನಂತಹ ಸಂಸ್ಥೆಗಳು ದೇಶದಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ. iCreate ಅಂದರೆ, ಅಂತಾರಾಷ್ಟ್ರೀಯ ಉದ್ಯಮಶೀಲತೆ  ಮತ್ತು ತಂತ್ರಜ್ಞಾನ ಕೇಂದ್ರ. ಇದು ಅನೇಕ ನವೋದ್ಯಮಗಳಿಗೆ ಶುಭಾರಂಭ ನೀಡುತ್ತಿದೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತಿದೆ.

ಸ್ನೇಹಿತರೆ,

ಸರ್ಕಾರದ ಈ ಎಲ್ಲಾ ಪ್ರಯತ್ನಗಳ ಫಲವನ್ನು ನಾವು ನೋಡಬಹುದು. 2013-14ರಲ್ಲಿ 4,000 ಪೇಟೆಂಟ್‌ಗಳನ್ನು ಅನುಮೋದಿಸಿದ್ದರೆ, ಕಳೆದ ವರ್ಷ 28,000ಕ್ಕಿಂತ ಹೆಚ್ಚಿನ ಹಕ್ಕುಸ್ವಾಮ್ಯಗಳನ್ನು ನೀಡಲಾಗಿದೆ. 2013-14ರಲ್ಲಿ ಸುಮಾರು 70,000 ಟ್ರೇಡ್‌ಮಾರ್ಕ್‌ಗಳು ನೋಂದಾಯಿಸಲ್ಪಟ್ಟಿದ್ದರೆ, 2021 ರಲ್ಲಿ 2.5 ಲಕ್ಷಕ್ಕೂ ಹೆಚ್ಚು ಟ್ರೇಡ್‌ಮಾರ್ಕ್‌ಗಳು ನೋಂದಾಯಿಸಲ್ಪಟ್ಟಿವೆ. 2013-14ರಲ್ಲಿ ಕೇವಲ 4,000 ಹಕ್ಕುಸ್ವಾಮ್ಯಗಳನ್ನು ನೀಡಲಾಗಿತ್ತು. ಆದರೆ ಕಳೆದ ವರ್ಷ ಈ ಸಂಖ್ಯೆ 16,000 ದಾಟಿದೆ. ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ನಡೆಯುತ್ತಿರುವ ಅಭಿಯಾನದಿಂದಾಗಿ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಸಾಕಷ್ಟು ಸುಧಾರಿಸಿದೆ. 2015ರಲ್ಲಿ ಭಾರತ ಈ ಶ್ರೇಯಾಂಕದಲ್ಲಿ 81ಕ್ಕೆ ಸೀಮಿತವಾಗಿತ್ತು. ಈಗ ಭಾರತವು ನಾವೀನ್ಯತೆ ಸೂಚ್ಯಂಕದಲ್ಲಿ 50ರಿಂದ 46ನೇ ಸ್ಥಾನಕ್ಕೆ ಜಿಗಿದಿದೆ.

ಸ್ನೇಹಿತರೆ,

ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ಇಂದು ಇಡೀ ವಿಶ್ವದಲ್ಲೇ ಅಲೆಗಳನ್ನು ಸೃಷ್ಟಿಸುತ್ತಿದೆ. ಇದು ಉತ್ಸಾಹ, ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ತುಂಬಿದ್ದು, ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯ ಶಕ್ತಿಯಾಗಿದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ನಿರಂತರವಾಗಿ ತನ್ನನ್ನು ತಾನು ಸಂಶೋಧಿಸಿಕೊಳ್ಳುತ್ತಿದೆ, ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿದೆ ಮತ್ತು ಮಹಾಶಕ್ತಿಯಾಗಿ ಬೆಳೆಯುತ್ತಿದೆ. ಇದು ನಿರಂತರ ಕಲಿಕೆಯ ಕ್ರಮದಲ್ಲಿ, ಬದಲಾಗುತ್ತಿರುವ ಕ್ರಮದಲ್ಲಿ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಿದೆ. ಇಂದು ಭಾರತದ ನವೋದ್ಯಮಗಳು 55 ವಿವಿಧ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡಿದರೆ ಯಾರು ಹೆಮ್ಮೆ ಪಡುವುದಿಲ್ಲ ಹೇಳಿ? ಎಲ್ಲರೂ ಅದರ ಬಗ್ಗೆ ಹೆಮ್ಮೆಪಡುತ್ತಾರೆ. 5 ವರ್ಷಗಳ ಹಿಂದೆ ದೇಶದಲ್ಲಿ 500 ನವೋದ್ಯಮಗಳು ಇರಲಿಲ್ಲ, ಇಂದು ಈ ಸಂಖ್ಯೆ 60,000ಕ್ಕೆ ಏರಿದೆ. ನೀವು ಹೊಸತನದ ಶಕ್ತಿ ಹೊಂದಿದ್ದೀರಿ, ಹೊಸ ಆಲೋಚನೆಗಳನ್ನು ಹೊಂದಿದ್ದೀರಿ, ನೀವು ಯುವ ಶಕ್ತಿಯಿಂದ ತುಂಬಿದ್ದೀರಿ ಮತ್ತು ನೀವು ವ್ಯಾಪಾರ ಮಾಡುವ ವಿಧಾನವನ್ನು ಬದಲಾಯಿಸುತ್ತಿದ್ದೀರಿ. ನಮ್ಮ ನವೋದ್ಯಮಗಳು ಉದ್ಯಮ ವ್ಯವಹಾರಗಳ ನಿಯಮಗಳನ್ನೇ ಬದಲಾಯಿಸುತ್ತಿವೆ. ಅದಕ್ಕಾಗಿಯೇ ನವೋದ್ಯಮಗಳು ನವ ಭಾರತದ ಬೆನ್ನೆಲುಬಾಗಲಿವೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಉದ್ಯಮಶೀಲತೆಯಿಂದ ಸಬಲೀಕರಣದವರೆಗಿನ ಈ ಸ್ಫೂರ್ತಿಯು ನಮ್ಮ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಮತ್ತು ಲಿಂಗ ಅಸಮಾನತೆ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಮೊದಲು, ದೊಡ್ಡ ವ್ಯಾಪಾರಗಳು ಬೃಹತ್ ನಗರಗಳು ಮತ್ತು ಮಹಾನಗರಗಳಲ್ಲಿ ಮಾತ್ರ ಪ್ರವರ್ಧಮಾನಕ್ಕೆ ಬಂದವು; ಇಂದು 625ಕ್ಕಿಂತ ಹೆಚ್ಚಿನ  ಜಿಲ್ಲೆಗಳಲ್ಲಿ ಹರಡಿರುವ ದೇಶದ ಪ್ರತಿ ರಾಜ್ಯದಲ್ಲಿ ಕನಿಷ್ಠ 1 ನವೋದ್ಯಮ ತಲೆಎತ್ತಿದೆ. ಇಂದು ಬಹುತೇಕ ಅರ್ಧದಷ್ಟು ನವೋದ್ಯಮಗಳು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಇವು ಸಾಮಾನ್ಯ ಮತ್ತು ಬಡ ಕುಟುಂಬದ ಯುವಕರ ಆಲೋಚನೆಗಳನ್ನು ವ್ಯವಹಾರಗಳಾಗಿ ಪರಿವರ್ತಿಸುತ್ತಿವೆ. ಇಂದು ಲಕ್ಷಾಂತರ ಯುವಕರು ಈ ನವೋದ್ಯಮಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ.

|

ಸ್ನೇಹಿತರೆ,

ಭಾರತದ ಯುವ ಸಮುದಾಯ ನವೋದ್ಯಮಗಳನ್ನು ಸ್ಥಾಪಿಸುತ್ತಿರುವ ವೇಗ ಮತ್ತು ಪ್ರಮಾಣವು ಜಾಗತಿಕ ಕೋವಿಡ್-19 ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಭಾರತೀಯರ ಬಲವಾದ ಇಚ್ಛಾಶಕ್ತಿ ಮತ್ತು ನಿರ್ಣಯಕ್ಕೆ ಸಾಕ್ಷಿಯಾಗಿದೆ. ಮೊದಲು, ಕೆಲವು ಕಂಪನಿಗಳು ಮಾತ್ರ ಉತ್ತಮ ಸಮಯದಲ್ಲಿ ಬೃಹತ್ತಾಗಿ ಬೆಳೆಯಬಹುದಿತ್ತು. ಆದರೆ, ಇದೀಗ ಕಳೆದ ವರ್ಷವೊಂದರಲ್ಲೇ ನಮ್ಮ ದೇಶದಲ್ಲಿ 42 ಯುನಿಕಾರ್ನ್‌ಗಳು ಹೊರಹೊಮ್ಮಿವೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಈ ಕಂಪನಿಗಳು ಸ್ವಾವಲಂಬಿ, ಆತ್ಮವಿಶ್ವಾಸದ ಭಾರತದ ಹೆಗ್ಗುರುತಾಗಿವೆ.. ಇಂದು ಭಾರತವು 100 ಯುನಿಕಾರ್ನ್ ಗಳನ್ನು ಸ್ಥಾಪಿಸುವತ್ತ ಶರವೇಗದಲ್ಲಿ ಸಾಗುತ್ತಿದೆ. ಭಾರತದ ನವೋದ್ಯಮಗಳ  ಸುವರ್ಣಯುಗ ಈಗ ಪ್ರಾರಂಭವಾಗುತ್ತಿದೆ ಎಂದು ನಾನು ನಂಬುತ್ತೇನೆ. ಭಾರತದ ವಿವಿಧತೆಯೇ ನಮ್ಮ ದೊಡ್ಡ ಶಕ್ತಿ. ನಮ್ಮ ವೈವಿಧ್ಯವೇ ನಮ್ಮ ಜಾಗತಿಕ ಗುರುತಾಗಿದೆ.

ನಮ್ಮ ಯುನಿಕಾರ್ನ್‌ಗಳು ಮತ್ತು ನವೋದ್ಯಮಗಳು ಈ ವೈವಿಧ್ಯದ ಸಂದೇಶವಾಹಕವಾಗಿವೆ.  ಸರಳ ವಿತರಣಾ ಸೇವೆಗಳಿಂದ ಹಿಡಿದು ಪಾವತಿ ಪರಿಹಾರಗಳು ಮತ್ತು ಕ್ಯಾಬ್ ಸೇವೆಗಳ ತನಕ, ನಿಮ್ಮ ವ್ಯಾಪ್ತಿಯು ಬಹುದೊಡ್ಡದಾಗಿದೆ. ಭಾರತದಲ್ಲಿಯೇ ವೈವಿಧ್ಯಮಯ ಮಾರುಕಟ್ಟೆಗಳು ಮತ್ತು ವೈವಿಧ್ಯಮಯ ಸಂಸ್ಕೃತಿಗಳಲ್ಲಿ ಕೆಲಸ ಮಾಡಿದ ಅನುಭವ ನಿಮಗೆ ಇದೆ. ಆದ್ದರಿಂದ, ಭಾರತದ ನವೋದ್ಯಮಗಳು ವಿಶ್ವದ ಇತರ ದೇಶಗಳಿಗೆ ಸುಲಭವಾಗಿ ತಲುಪಬಹುದು. ಹಾಗಾಗಿ ನಿಮ್ಮ ಕನಸುಗಳನ್ನು ಸ್ಥಳೀಯವಾಗಿ ಇರಿಸಬೇಡಿ, ಅವುಗಳನ್ನು ಜಾಗತಿಕವಾಗಿಸಿ. ಈ ಮಂತ್ರವನ್ನು ನೆನಪಿಡಿ - ಭಾರತಕ್ಕಾಗಿ ನಾವು ಹೊಸತನವನ್ನು ಮಾಡೋಣ, ಭಾರತದಿಂದಲೇ ಹೊಸತನವನ್ನು ಕಂಡುಕೊಳ್ಳೋಣ!

ಸ್ನೇಹಿತರೆ,

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭ ಎಲ್ಲರೂ ಸಜ್ಜುಗೊಳ್ಳಲು ಸಕಾಲ. 'ಸಬ್ಕಾ ಪ್ರಯಾಸ್ (ಸಾಮೂಹಿಕ ಪ್ರಯತ್ನಗಳು) ಮೂಲಕ ಗುರಿಗಳತ್ತ ಸಾಗುವ ಸಮಯ ಇದು. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಗೆ ಸಂಬಂಧಿಸಿದಂತೆ ಒಂದು ಗುಂಪು ಪ್ರಮುಖ ಸಲಹೆಗಳನ್ನು ನೀಡಿದಾಗ ನನಗೆ ಸಂತೋಷವಾಯಿತು. ಗತಿಶಕ್ತಿ ಯೋಜನೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಅವಕಾಶವನ್ನು ಇವಿ ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸಲು ಬಳಸಬಹುದು. ಈ ಮಾಸ್ಟರ್ ಪ್ಲಾನ್ ಅಡಿ, ಸಾರಿಗೆ, ವಿದ್ಯುತ್, ದೂರಸಂಪರ್ಕ ಸೇರಿದಂತೆ ಸಂಪೂರ್ಣ ಮೂಲಸೌಕರ್ಯ ಗ್ರಿಡ್ ಅನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತಿದೆ. ಬಹುಮಾದರಿ ಮತ್ತು ವಿವಿಧೋದ್ದೇಶ ಸ್ವತ್ತುಗಳ ಸೃಷ್ಟಿಯ ಈ ಅಭಿಯಾನದಲ್ಲಿ ನಿಮ್ಮ ಭಾಗವಹಿಸುವಿಕೆ ಬಹಳ ಮುಖ್ಯ.

ಇದು ನಮ್ಮ ಉತ್ಪಾದನಾ ವಲಯದಲ್ಲಿ ಹೊಸ ಚಾಂಪಿಯನ್‌ಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ. ರಕ್ಷಣಾ ಉತ್ಪನ್ನಗಳ ತಯಾರಿಕೆ, ಚಿಪ್ ತಯಾರಿಕೆ, ಸ್ವಚ್ಛ ಇಂಧನ ಮತ್ತು ಡ್ರೋನ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ದೇಶದ ಮಹತ್ವಾಕಾಂಕ್ಷೆಯ ಯೋಜನೆಗಳು ನಿಮ್ಮ ಮುಂದಿವೆ. ಇತ್ತೀಚೆಗೆ ಹೊಸ ಡ್ರೋನ್ ನೀತಿ ಜಾರಿಗೊಳಿಸಿದ ನಂತರ ದೇಶ ಮತ್ತು ವಿದೇಶಗಳ ಅನೇಕ ಹೂಡಿಕೆದಾರರು ಡ್ರೋನ್ ನವೋದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಡ್ರೋನ್ ಕಂಪನಿಗಳು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯಿಂದ ಸುಮಾರು 500 ಕೋಟಿ ರೂ. ಮೌಲ್ಯದ ಆರ್ಡರ್ ಪಡೆದಿವೆ. ಸ್ವಾಮಿತ್ವ ಯೋಜನೆಗಾಗಿ ಗ್ರಾಮಗಳ ಆಸ್ತಿಗಳನ್ನು ಮ್ಯಾಪಿಂಗ್ ಮಾಡಲು ಸರ್ಕಾರವು ಡ್ರೋನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದೆ. ಈಗ ಮನೆ ಮನೆಗೆ ಔಷಧಗಳ ವಿತರಣೆ ಮತ್ತು ಕೃಷಿಯಲ್ಲಿ ಡ್ರೋನ್‌ಗಳ ವ್ಯಾಪ್ತಿ ಹೆಚ್ಚುತ್ತಿದೆ. ಆದ್ದರಿಂದ ಇದು ಸಾಕಷ್ಟು ಸಾಮರ್ಥ್ಯ ಮತ್ತು ವಿಫುಲ ಅವಕಾಶಗಳನ್ನು ಹೊಂದಿದೆ.

ಸ್ನೇಹಿತರೆ,

ನಮ್ಮ ಕ್ಷಿಪ್ರ ನಗರೀಕರಣವು ಸಹ ಒಂದು ದೊಡ್ಡ ಗಮನ ಕೇಂದ್ರೀಕೃತ ವಲಯವಾಗಿದೆ. ಇಂದು,  ಅಸ್ತಿತ್ವದಲ್ಲಿರುವ ನಮ್ಮ ನಗರಗಳನ್ನು ಅಭಿವೃದ್ಧಿಪಡಿಸುವ ಮತ್ತು ಹೊಸ ನಗರಗಳನ್ನು ನಿರ್ಮಿಸುವ ಕೆಲಸವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ನಗರ ಯೋಜನೆಯಲ್ಲಿ ಮಾಡಬೇಕಾದ್ದು ಬಹಳಷ್ಟಿದೆ. ಸಮಗ್ರ ಕೈಗಾರಿಕಾ ವಸಾಹತುಗಳನ್ನು ನಾವು ರಚಿಸಬೇಕಾಗಿದೆ. ನಗರ ಯೋಜನೆಯಲ್ಲಿ ಹೊಸ ಸಾಧ್ಯತೆಗಳು ನಿಮಗಾಗಿ ಕಾಯುತ್ತಿವೆ. ಉದಾಹರಣೆಗೆ, ಒಂದು ಗುಂಪು ಇದೀಗ ರಾಷ್ಟ್ರೀಯ ಸೈಕ್ಲಿಂಗ್ ಯೋಜನೆ ಮತ್ತು ದೊಡ್ಡ ನಗರಗಳಿಗೆ ಕಾರ್-ಮುಕ್ತ ವಲಯಗಳ ನಿರ್ಮಾಣ ಪ್ರಸ್ತಾವನೆಯನ್ನು ಉಲ್ಲೇಖಿಸಿದೆ. ನಗರಗಳಲ್ಲಿ ಸುಸ್ಥಿರ ಜೀವನಶೈಲಿ ಉತ್ತೇಜಿಸಲು ಇದು ಬಹಳ ಮುಖ್ಯ. ನಾನು ಸಿಒಪಿ-26 ಶೃಂಗಸಭೆಗೆ ಹೋದಾಗ ನೀವು ತಿಳಿದಿರಲೇಬೇಕು, ನಾನು ಮಿಷನ್ ಲೈಫ್ ಬಗ್ಗೆ ಮಾತನಾಡಿದ್ದೇನೆ. ನನ್ನ ಪರಿಕಲ್ಪನೆಯಾದ ಜೀವನವೇ ಪರಿಸರಕ್ಕೆ ಜೀವನಶೈಲಿ(ಲೈಫ್ ಈಸ್ ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ತಂತ್ರಜ್ಞಾನವನ್ನು ಬಳಸಿಕೊಂಡು ಆ ವಸ್ತುಗಳ ಬಳಕೆಯ ಬಗ್ಗೆ ನಾವು ಜನರಿಗೆ ಅರಿವು ಮೂಡಿಸಬೇಕು ಎಂದು ನಾನು ನಂಬುತ್ತೇನೆ. ಉದಾಹರಣೆಗೆ, P-3 ಚಳವಳಿ ಇಂದು ಅನಿವಾರ್ಯವಾಗಿದೆ. P-3 ಚಳವಳಿ, ಅಂದರೆ, ಪೃಥ್ವಿ ಪರ ಜನರು! ನಾವು ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸದಿದ್ದರೆ ಮತ್ತು ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಅವರನ್ನು ಸೈನಿಕರನ್ನಾಗಿ ಮಾಡದಿದ್ದರೆ, ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ, ಈ ಮಿಷನ್ ಲೈಫ್‌ ಗೆ ಭಾರತವು ಅನೇಕ ದೇಶಗಳನ್ನು ಒಳಪಡಿಸುತ್ತಿದೆ.

ಸ್ನೇಹಿತರೆ,

ಸ್ಮಾರ್ಟ್ ಮೊಬಿಲಿಟಿಯು ನಗರಗಳ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಇಂಗಾಲ ಹೊರಸೂಸುವಿಕೆ ನಿಯಂತ್ರಿಸುವ ನಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಭಾರತವು ವಿಶ್ವದ ಅತಿದೊಡ್ಡ ಸಹಸ್ರಮಾನದ ಮಾರುಕಟ್ಟೆಯಾಗಿ ತನ್ನ ಗುರುತು ಬಲಪಡಿಸುವುದನ್ನು ಮುಂದುವರಿಸಿದೆ. ಇದು ಸಹಸ್ರಾರು ಕುಟುಂಬಗಳ ಏಳಿಗೆಗೆ ಹಾಗೂ ರಾಷ್ಟ್ರದ ಸ್ವಾವಲಂಬನೆಗೆ ಮೂಲಾಧಾರವಾಗಿದೆ. ನಮ್ಮ ಅಗತ್ಯಗಳು ಮತ್ತು ನಮ್ಮ ಸಾಮರ್ಥ್ಯವು ಗ್ರಾಮೀಣ ಆರ್ಥಿಕತೆಯಿಂದ ಉದ್ಯಮ 4.0ರ ವರೆಗೆ ಅಪರಿಮಿತವಾಗಿದೆ. ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಇಂದು ಸರ್ಕಾರದ ಆದ್ಯತೆಯಾಗಿದೆ. ಆದರೆ ಇದರಲ್ಲಿ ಉದ್ಯಮವೂ ತನ್ನ ಕೊಡುಗೆ ವಿಸ್ತರಿಸಿದರೆ ಉತ್ತಮ.

ಸ್ನೇಹಿತರೆ,

21ನೇ ಶತಮಾನದ ಈ ದಶಕದಲ್ಲಿ ನೀವು ಇನ್ನೂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳ ಬೇಕು. ದೇಶದಲ್ಲೂ ಬೃಹತ್ ಮಾರುಕಟ್ಟೆ ತೆರೆದುಕೊಳ್ಳುತ್ತಿದೆ. ನಾವೀಗ ಡಿಜಿಟಲ್ ಜೀವನಶೈಲಿಗೆ ಕಾಲಿಟ್ಟಿದ್ದೇವೆ. ನಮ್ಮ ಜನಸಂಖ್ಯೆಯ ಅರ್ಧದಷ್ಟು ಮಾತ್ರ ಆನ್‌ಲೈನ್‌ ಸೇವೆ ಬಳಸುತ್ತಿದ್ದಾರೆ. ಬಡವರಿಗೆ ಮತ್ತು ಹಳ್ಳಿಗಳಿಗೆ ಡಿಜಿಟಲ್ ಪ್ರವೇಶ ಒದಗಿಸಲು ಸರ್ಕಾರವು ಕಾರ್ಯ ನಿರ್ವಹಿಸುತ್ತಿರುವ ವೇಗ, ಪ್ರಮಾಣ ಗಮನಿಸಿದರೆ, ಭಾರತವು ಅತಿ ಕಡಿಮೆ ಸಮಯದಲ್ಲಿ ಸುಮಾರು 100 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಲಿದೆ.

ದೂರದ ಪ್ರದೇಶಗಳಲ್ಲಿ ಕೊನೆಯ ಮೈಲಿ ವಿತರಣೆ ಸಶಕ್ತಗೊಂಡಂತೆ, ಇದು ಗ್ರಾಮೀಣ ಮಾರುಕಟ್ಟೆಯನ್ನು ಮತ್ತು ಗ್ರಾಮೀಣ ಪ್ರತಿಭೆಗಳ ದೊಡ್ಡ ಸಮೂಹವನ್ನು ಸೃಷ್ಟಿಸುತ್ತಿದೆ. ಅದಕ್ಕಾಗಿಯೇ ನಾನು ಭಾರತದ ನವೋದ್ಯಮಗಳನ್ನು ಹಳ್ಳಿಗಳತ್ತ ಸಾಗುವಂತೆ ವಿನಂತಿಸುತ್ತೇನೆ. ಇದೊಂದು ಅವಕಾಶ ಹಾಗೂ ಸವಾಲು. ಮೊಬೈಲ್ ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಸಂಪರ್ಕ ಅಥವಾ ಭೌತಿಕ ಸಂಪರ್ಕವಿರಲಿ, ಇಂದು ಹಳ್ಳಿಗಳ ಆಕಾಂಕ್ಷೆಗಳು ಹೆಚ್ಚುತ್ತಿವೆ. ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳು ವಿಸ್ತರಣೆಯ ಹೊಸ ಅಲೆಯನ್ನು ಎದುರು ನೋಡುತ್ತಿವೆ.

ನವೋದ್ಯಮ ಸಂಸ್ಕೃತಿಯು ಪರಿಕಲ್ಪನೆಯನ್ನು ಪ್ರಜಾಪ್ರಭುತ್ವಗೊಳಿಸಿದ ರೀತಿಯಲ್ಲೇ, ಇದು ಮಹಿಳೆಯರು ಮತ್ತು ಸ್ಥಳೀಯ ವ್ಯವಹಾರಗಳನ್ನು ಸಶಕ್ತಗೊಳಿಸಿದೆ. ಉಪ್ಪಿನಕಾಯಿ ಮತ್ತು ಹಪ್ಪಳದಿಂದ ಹಿಡಿದು ಕರಕುಶಲ ವಸ್ತುಗಳವರೆಗೆ, ಅನೇಕ ಸ್ಥಳೀಯ ಉತ್ಪನ್ನಗಳ ವ್ಯಾಪ್ತಿಯು ಇಂದು ವ್ಯಾಪಕವಾಗಿ ವಿಸ್ತರಿಸಿದೆ. ಹೆಚ್ಚುತ್ತಿರುವ ಜಾಗೃತಿಯಿಂದಾಗಿ, ಜನರು ಸ್ಥಳೀಯರಿಗೆ ಧ್ವನಿಯಾಗುತ್ತಿದ್ದಾರೆ. ಇದೀಗ ಜೈಪುರದ ನಮ್ಮ ಸ್ನೇಹಿತ ಕಾರ್ತಿಕ್ ಸ್ಥಳೀಯ ಉತ್ಪನವನ್ನು ಜಾಗತಿಕವಾಗಿ ಮಾಡುವ ಬಗ್ಗೆ ಮಾತನಾಡಿದರು, ವರ್ಚುವಲ್ ಪ್ರವಾಸೋದ್ಯಮವನ್ನು ಪ್ರಸ್ತಾಪಿಸಿದರು. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ, ತಮ್ಮ ಜಿಲ್ಲೆಗಳು ಮತ್ತು ನಗರಗಳ ಇತಿಹಾಸ ಪುಟಗಳಿಗೆ ಸೇರಿರುವ ಸ್ಮಾರಕಗಳು ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಘಟನೆಗಳ ವರ್ಚುವಲ್ ಸೃಜನಶೀಲ ಕೆಲಸದ ಬಗ್ಗೆ ಶಾಲಾ-ಕಾಲೇಜುಗಳ ಮಕ್ಕಳಿಗೆ ಸ್ಪರ್ಧೆ  ಆಯೋಜಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮಂತಹ ನವೋದ್ಯಮಗಳು ಇದನ್ನು ಕಲೆ ಹಾಕಬಹುದು. 75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕಾಗಿ ದೇಶವನ್ನು ವರ್ಚುವಲ್ ಪ್ರವಾಸಕ್ಕೆ ಆಹ್ವಾನಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನವೋದ್ಯಮಗಳಿಂದ ಇದು ದೊಡ್ಡ ಕೊಡುಗೆಯಾಗಲಿದೆ. ನೀವು ಇಷ್ಟಪಡುವ ಪರಿಕಲ್ಪನೆಯನ್ನು ಪ್ರಾರಂಭಿಸಿದರೆ, ಆ ಕಲ್ಪನೆಯನ್ನು ಹೇಗೆ ಮತ್ತು ಯಾವ ರೂಪದಲ್ಲಿ ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂಬ ಆಲೋಚನೆ ಮೂಡುತ್ತದೆ ಎಂದು ನಾನು ಭಾವಿಸಿದ್ದೇನೆ.

ಸ್ನೇಹಿತರೆ,

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಸ್ಥಳೀಯ ಮಟ್ಟದಲ್ಲಿ ಸಣ್ಣ ಆವಿಷ್ಕಾರ ಮಾದರಿಗಳು ಜನರ ಜೀವನವನ್ನು ಹೇಗೆ ಸುಲಭಗೊಳಿಸಿದವು ಎಂಬುದನ್ನು ನಾವು ನೋಡಿದ್ದೇವೆ. ಸಣ್ಣ ಸ್ಥಳೀಯ ವ್ಯವಹಾರಗಳೊಂದಿಗೆ ಸಹಯೋಗಕ್ಕಾಗಿ ನವೋದ್ಯಮಗಳಿಗೆ ದೊಡ್ಡ ಅವಕಾಶಗಳಿದೆ. ನವೋದ್ಯಮಗಳು ಈ ಸ್ಥಳೀಯ ವ್ಯವಹಾರಗಳನ್ನು ಸಶಕ್ತಗೊಳಿಸಬಹುದು ಮತ್ತು ಪರಿಣಾಮಕಾರಿಯಾಗಿ ಮಾಡಬಹುದು. ಸಣ್ಣ ಉದ್ದಿಮೆಗಳು ದೇಶದ ಅಭಿವೃದ್ಧಿಯ ಬೆನ್ನೆಲುಬು ಮತ್ತು ನವೋದ್ಯಮಗಳು ಉದ್ಯಮ ವ್ಯವಹಾರದ ರೂಪವನ್ನೇ (ಗೇಮ್ ಚೇಂಜರ್) ಬದಲಾಯಿಸುವವರಾಗಿದ್ದಾರೆ. ಈ ಪಾಲುದಾರಿಕೆಯು ನಮ್ಮ ಸಮಾಜ ಮತ್ತು ಆರ್ಥಿಕತೆ ಎರಡನ್ನೂ ಪರಿವರ್ತಿಸುತ್ತದೆ ಮತ್ತು ಮಹಿಳೆಯರ ಉದ್ಯೋಗಕ್ಕೆ ವಿಶೇಷವಾಗಿ ಇದರಿಂದ ಹೆಚ್ಚಿನ ಶಕ್ತಿ ಬರಲಿದೆ.

ಸ್ನೇಹಿತರೆ,

ಕೃಷಿ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರ ಮತ್ತು ನವೋದ್ಯಮಗಳ ನಡುವಿನ ಪಾಲುದಾರಿಕೆಗೆ ಸಂಬಂಧಿಸಿದಂತೆ ಹಲವು ಸಲಹೆಗಳು ಇಲ್ಲಿ ಬಂದಿವೆ. ನಮ್ಮ ಸ್ಥಳೀಯ ಅಂಗಡಿ ವರ್ತಕರು ತಮ್ಮ ಸಾಮರ್ಥ್ಯದ ಶೇ. 50-60 ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂಬ ಸಲಹೆಯಂತೆ, ಅವರಿಗೆ ಡಿಜಿಟಲ್ ಪರಿಹಾರ ನೀಡಿದರೆ, ಯಾವ ವಸ್ತುಗಳು ಖಾಲಿಯಾಗಿವೆ, ಯಾವ ವಸ್ತುಗಳನ್ನು ಖರೀದಿಸಬೇಕು ಎಂದು ತಿಳಿಯುತ್ತದೆ. ಅಂಗಡಿ ವರ್ತಕರನ್ನು ಅವರ ಗ್ರಾಹಕರೊಂದಿಗೆ ಸಂಪರ್ಕಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ. 3 ಅಥವಾ 7 ದಿನಗಳಲ್ಲಿ ಕೆಲವು ವಸ್ತುಗಳ ದಾಸ್ತಾನು ಖಾಲಿಯಾಗಲಿದೆ ಎಂದು ಅಂಗಡಿ ವರ್ತಕ ತಮ್ಮ ಗ್ರಾಹಕರಿಗೆ ತಿಳಿಸಬಹುದು. ಅವರಿಗೆ ಸಂದೇಶವನ್ನು ಕಳುಹಿಸಿದರೆ, ಕೆಲವು ದಿನಗಳ ನಂತರ ಯಾವ ಉತ್ಪನ್ನಗಳ ಕೊರತೆಯಿದೆ ಎಂದು ನೋಡಲು ಕುಟುಂಬಗಳು ಅಡುಗೆ ಮನೆಯಲ್ಲಿ ಪೆಟ್ಟಿಗೆಗಳನ್ನು ಹುಡುಕಬೇಕಾಗಿಲ್ಲ. ಇನ್ನು 3 ದಿನಗಳಲ್ಲಿ ಅರಿಶಿಣ  ಖಾಲಿಯಾಗಲಿದೆ ಎಂದು ಅಂಗಡಿ ವರ್ತಕ ತನ್ನ ಗ್ರಾಹಕರಿಗೆ ಸಂದೇಶ ಕಳುಹಿಸಬಹುದು. ನೀವು ಅದನ್ನು ದೊಡ್ಡ ವೇದಿಕೆಯನ್ನಾಗಿ ಪರಿವರ್ತಿಸಬಹುದ ವರ್ತಕ ಮತ್ತು ಗ್ರಾಹಕರ ನಡುವೆ ನೀವು ಸಂಪರ್ಕ ಸೇತುವಾಗಬಹುದು.

ಸ್ನೇಹಿತರೆ,

ಯುವಕರ ಪ್ರತಿಯೊಂದು ಸಲಹೆ, ಪ್ರತಿ ಕಲ್ಪನೆ, ಪ್ರತಿ ಆವಿಷ್ಕಾರಗಳಿಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮುಂದಿನ 25 ವರ್ಷಗಳು, ದೇಶವನ್ನು ಸ್ವಾತಂತ್ರ್ಯದ 100ನೇ ವರ್ಷದತ್ತ ಕೊಂಡೊಯ್ಯುತ್ತಿದೆ, ಇದು ನಿಮಗೆ, ನಿಮ್ಮ ಸ್ನೇಹಿತರಿಗೆ  ಬಹಳ  ಮುಖ್ಯವಾಗಿದೆ. ಇದು ನಾವೀನ್ಯತೆಯ ಹೊಸ ಯುಗ, ಅಂದರೆ ಕಲ್ಪನೆಗಳು, ಉದ್ಯಮ ಮತ್ತು ಹೂಡಿಕೆ. ನಿಮ್ಮ ಕಸರತ್ತು, ಪ್ರಯತ್ನ ಮತ್ತು ಶ್ರಮ ಭಾರತಕ್ಕಾಗಿ, ನಿಮ್ಮ ಉದ್ಯಮ ಭಾರತಕ್ಕಾಗಿ. ನಿಮ್ಮ ಸಂಪತ್ತು ಸೃಷ್ಟಿ ಭಾರತಕ್ಕಾಗಿ ಮತ್ತು ಉದ್ಯೋಗ ಸೃಷ್ಟಿ ಭಾರತಕ್ಕಾಗಿ.

ಯುವಕರ ಶಕ್ತಿಯನ್ನು ದೇಶದ ಶಕ್ತಿಯನ್ನಾಗಿ ಪರಿವರ್ತಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ. ಹೊಸ ರೀತಿಯಲ್ಲಿ ಯೋಚಿಸುವ ಹೊಸ ತಲೆಮಾರು ಇರುವುದರಿಂದ ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಏಳು ದಿನಗಳ ಚಿಂತನ-ಮಂಥನದಿಂದ ಹೊರಹೊಮ್ಮಿದ ಆಲೋಚನೆಗಳಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಪ್ರಯೋಜನ ಪಡೆಯುತ್ತವೆ ಮತ್ತು ಸರ್ಕಾರದ ನೀತಿಗಳಲ್ಲಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತವೆ. ಅದು ಸಾಮಾಜಿಕ  ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ಖಚಿತವಾಗಿ ಹೇಳುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಏಕೆಂದರೆ ನೀವು ಕಲ್ಪನೆಗಳ ಜಗತ್ತಿಗೆ ಸೇರಿದವರು ಮತ್ತು ಆ ವಿಚಾರಗಳನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳುವುದು ಬಹಳ ಮುಖ್ಯ.

ನಾನು ನಿಮಗೆ ಶುಭ ಹಾರೈಸುತ್ತೇನೆ. ಈಗಾಗಲೇ ಮಕರ ಸಂಕ್ರಾಂತಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆದರೆ ಕೊರೊನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ಮತ್ತೊಮ್ಮೆ ತುಂಬು ಧನ್ಯವಾದಗಳು.

  • Hiraballabh Nailwal October 05, 2024

    jai shree ram
  • Shashank shekhar singh September 29, 2024

    Jai shree Ram
  • ओम प्रकाश सैनी September 05, 2024

    जय राधे
  • ओम प्रकाश सैनी September 05, 2024

    जय राधे
  • ओम प्रकाश सैनी September 05, 2024

    जय हो
  • ओम प्रकाश सैनी September 05, 2024

    जय हो
  • ओम प्रकाश सैनी September 05, 2024

    राधे राधे
  • Jayanta Kumar Bhadra August 18, 2024

    Jay Shree Ram
  • Pradhuman Singh Tomar August 16, 2024

    bjp
  • Madhusmita Baliarsingh July 08, 2024

    Under Modi ji's leadership, India's technological advancements are driving significant growth and innovation. Proud to see our nation emerging as a global tech leader. #IndiaRising #DigitalIndia #TechForGrowth
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Aspirations Over Appeasement: PM Modi Decodes Politics Of New India At Rising Bharat 2025

Media Coverage

Aspirations Over Appeasement: PM Modi Decodes Politics Of New India At Rising Bharat 2025
NM on the go

Nm on the go

Always be the first to hear from the PM. Get the App Now!
...
Navkar Mahamantra is not just a mantra, it is the core of our faith: PM Modi
April 09, 2025
QuoteNavkar Mahamantra is not just a mantra, it is the core of our faith: PM
QuoteNavkar Mahamantra embodies humility, peace and universal harmony: PM
QuoteNavkar Mahamantra along with the worship of Panch Parmeshthi symbolises the right knowledge, perception and conduct, and the path leading to salvation: PM
QuoteJain literature has been the backbone of the intellectual glory of India: PM
QuoteClimate change is today's biggest crisis and its solution is a sustainable lifestyle, which the Jain community has practiced for centuries and aligns perfectly with India's Mission LiFE: PM
QuotePM proposes 9 resolutions on Navkar Mahamantra Divas

जय जिनेन्द्र,

मन शांत है, मन स्थिर है, सिर्फ शांति, एक अद्भुत अनुभूति है, शब्दों से परे, सोच से भी परे, नवकार महामंत्र अब भी मन मस्तिष्क में गूंज रहा है। नमो अरिहंताणं॥ नमो सिद्धाणं॥ नमो आयरियाणं॥ नमो उवज्झायाणं॥ नमो लोए सव्वसाहूणं॥ एक स्वर, एक प्रवाह, एक ऊर्जा, न कोई उतार, न कोई चढ़ाव, बस स्थिरता, बस समभाव। एक ऐसी चेतना, एक जैसी लय, एक जैसा प्रकाश भीतर ही भीतर। मैं नवकार महामंत्र की इस अध्यात्मिक शक्ति को अब भी अपने भीतर अनुभव कर रहा हूं। कुछ वर्ष पूर्व मैं बैंगलुरू में एैसे ही एक सामूहिक मंत्रोच्चार का साक्षी बना था, आज वही अनुभूति हूई और उतनी ही गहराई में। इस बार देश विदेश में एक साथ, एक ही चेतना से जुड़े लाखों करोड़ों पुण्य आत्माएं, एक साथ बोले गए शब्द, एक साथ जागी ऊर्जा, ये वाकई अभुतपूर्व है।

श्रावक-श्राविकाएं, भाईयों – बहनों,

इस शरीर का जन्म गुजरात में हुआ। जहां हर गली में जैन धर्म का प्रभाव दिखता है और बचपन से ही मुझे जैन आचार्यों का सानिध्य मिला।

|

साथियों,

नवकार महामंत्र सिर्फ मंत्र नहीं है, ये हमारी आस्था का केंद्र है। हमारे जीवन का मूल स्वर और इसका महत्व सिर्फ आध्यात्मिक नहीं है। ये स्वयं से लेकर समाज तक सबको राह दिखाता है। जन से जग तक की यात्रा है। इस मंत्र का प्रत्येक पद ही नहीं, प्रत्येक अक्षर भी अपने आपमे एक मंत्र है। जब हम नवकार महामंत्र बोलते हैं, हम नमन करते हैं पंच परमेष्ठी को। कौन है पंच परमेष्ठी ? अरिहंत-जिन्होंने केवल ज्ञान प्राप्त किया, जो भव्य जीवों को बोध कराते हैं, जिनके 12 दिव्य गुण हैं। सिद्ध-जिन्होंने 8 कर्मों का क्षय किया, मोक्ष को प्राप्त किया, 8 शुद्ध गुण जिनके पास हैं। आचार्य- जो महावृत का पालन करते हैं, जो पथ प्रदर्शक हैं, 36 गुणों से युक्त उनका व्यक्तित्व है। उपाध्याय – जो मोक्ष मार्ग के ज्ञान को शिक्षा मे ढालते हैं, जो 25 गुणों से भरे हुए हैं। साधु – जो तप की अग्नि में खुद को कसते हैं। जो मोक्ष की प्राप्ति को, उस दिशा में बढ़ रहे हैं, इनमें भी हैं 27 महान गुण।

साथियों,

जब हम नवकार महामंत्र बोलते हैं, हम नमन करते हैं 108 दिव्य गुणों का, हम स्मरण करते हैं मानवता का हित, ये मंत्र हमें याद दिलाता है – ज्ञान और कर्म ही जीवन की दिशा है, गुरू ही प्रकाश है और मार्ग वही है जो भीतर से निकलता है। नवकार महामंत्र कहता है, स्वयं पर विश्वास करो, स्वयं की यात्रा शुरू करो, दुशमन बाहर नहीं है, दुशमन भीतर है। नकारात्मक सोच, अविश्वास, वैमन्सय, स्वार्थ, यही वे शत्रु हैं, जिन्हें जीतना ही असली विजय है। और यही कारण है, कि जैन धर्म हमें बाहरी दुनिया नहीं, खुद को जीतने की प्रेरणा देता है। जब हम खुद को जीतते हैं, हम अरिहंत बनते हैं। और इसलिए, नवकार महामंत्र मांग नहीं है, ये मार्ग है। एक ऐसा मार्ग जो इंसान को भीतर से शुद्ध करता है। जो इंसान को सौहार्द की राह दिखाता है।

साथियों,

नवकार महामंत्र सही माइने में मानव ध्यान, साधना और आत्मशुद्धि का मंत्र है। इस मंत्र का एक वैश्विक परिपेक्ष्य है। यह शाश्वत महामंत्र, भारत की अन्य श्रुति–स्मृति परम्पराओं की तरह, पहले सदियों तक मौखिक रूप से, फिर शिलालेखों के माध्यम से और आखिर में प्राकृत पांडुलिपियों के द्वारा पीढ़ी दर पीढ़ी आगे बढ़ा और आज भी ये हमें निरंतर राह दिखाता है। नवकार महामंत्र पंच परमेष्ठी की वंदना के साथ ही सम्यक ज्ञान है। सम्यक दर्शन है। सम्यक चरित्र है और सबसे ऊपर मोक्ष की ओर ले जाने वाला मार्ग है।

|

हम जानते है जीवन के 9 तत्व हैं। जीवन को ये 9 तत्व पूर्णता की ओर ले जाते हैं। इसलिए, हमारी संस्कृति में 9 का विशेष महत्व है। जैन धर्म में नवकार महामंत्र, नौ तत्व, नौ पुण्य और अन्य परंपराओं में, नौ निधि, नवद्वार, नवग्रह, नवदुर्गा, नवधा भक्ति नौ, हर जगह है। हर संस्कृति में, हर साधना में। जप भी 9 बार या 27, 54, 108 बार, यानि 9 के multiples में ही। क्यों? क्योंकि 9 पूर्णता का प्रतीक है। 9 के बाद सब रिपीट होता है। 9 को किसी से भी गुणा करो, उत्तर का मूल फिर 9 ही होता है। ये सिर्फ math नहीं है, गणित नहीं है। ये दर्शन है। जब हम पूर्णता को पा लेते हैं, तो फिर उसके बाद हमारा मन, हमारा मस्तिष्क स्थिरता के साथ उर्ध्वगामी हो जाता है। नई चीज़ों की इच्छा नहीं रह जाती। प्रगति के बाद भी, हम अपने मूल से दूर नहीं जाते और यही नवकार का महामंत्र का सार है।

साथियों,

नवकार महामंत्र का ये दर्शन विकसित भारत के विज़न से जुड़ता है। मैंने लालकिले से कहा है- विकसित भारत यानि विकास भी, विरासत भी! एक ऐसा भारत जो रुकेगा नहीं, ऐसा भारत जो थमेगा नहीं। जो ऊंचाई छूएगा, लेकिन अपनी जड़ों से नहीं कटेगा। विकसित भारत अपनी संस्कृति पर गर्व करेगा। इसीलिए,हम अपने तीर्थंकरों की शिक्षाओं को सहेजते हैं। जब भगवान महावीर के दो हजार पांच सौ पचासवें निर्वाण महोत्सव का समय आया, तो हमने देश भर में उसे मनाया। आज जब प्राचीन मूर्तियां विदेश से वापस आती हैं, तो उसमें हमारे तीर्थंकर की प्रतिमाएं भी लौटती हैं। आपको जानकर गर्व होगा, बीते वर्षों में 20 से ज्यादा तीर्थंकरों की मूर्तियाँ विदेश से वापस आई हैं, ये कभी न कभी चोरी की गई थी।

साथियों,

भारत की पहचान बनाने में जैन धर्म की भूमिका अमूल्य रही है। हम इसे सहेजने के लिए प्रतिबद्ध हैं। मैं नहीं जानता हूं, आपमे से कितने लोग नया संसद भवन देखने गए होंगे। और गए भी होंगे तो ध्यान से देखा होगा, कि नहीं देखा होगा। आपने देखा, नई संसद बनी लोकतंत्र का मंदिर। वहाँ भी जैन धर्म का प्रभाव साफ दिखता है। जैसे ही आप शार्दूल द्वार से प्रवेश करते हैं। स्थापत्य गैलरी में सम्मेद शिखर दिखता है। लोकसभा के प्रवेश पर तीर्थंकर की मूर्ति है, ये मूर्ति ऑस्ट्रेलिया से लौटी है। संविधान गैलरी की छत पर भगवान महावीर की अद्भुत पेंटिंग है। साउथ बिल्डिंग की दीवार पर सभी 24 तीर्थंकर एक साथ हैं। कुछ लोगों में जान आने में समय लगता है, बड़े इंतजार के बाद आता है, लेकिन मजबूती से आता है। ये दर्शन हमारे लोकतंत्र को दिशा दिखाते हैं, सम्यक मार्ग दिखाते हैं। जैन धर्म की परिभाषाएं बड़े ही सारगर्भित सूत्रों में प्राचीन आगम ग्रंथों में निबद्ध की गर्ई हैं। जैसे- वत्थु सहावो धम्मो, चारित्तम् खलु धम्मो, जीवाण रक्खणं धम्मो, इन्हीं संस्कारों पर चलते हुए हमारी सरकार, सबका साथ-सबका विकास के मंत्र पर आगे बढ़ रही है।

साथियों,

जैन धर्म का साहित्य भारत के बौद्धिक वैभव की रीढ़ है। इस ज्ञान को संजोना हमारा कर्तव्य है। और इसीलिए हमने प्राकृत और पाली को क्लासिकल लैंग्वेज का दर्जा दिया। अब जैन साहित्य पर और रिसर्च करना संभव होगा।

|

और साथियों,

भाषा बचेगी तो ज्ञान बचेगा। भाषा बढ़ेगी तो ज्ञान का विस्तार होगा। आप जानते हैं, हमारे देश में सैकड़ों साल पुरानी जैन पांडुलिपियाँ मैन्यूस्क्रिप्ट्स हैं। हर पन्ना इतिहास का दर्पण है। ज्ञान का सागर है। "समया धम्म मुदाहरे मुणी" - समता में ही धर्म है। "जो सयं जह वेसिज्जा तेणो भवइ बंद्गो"- जो ज्ञान का गलत इस्तेमाल करता है, वो नष्ट हो जाता है। "कामो कसायो खवे जो, सो मुणी – पावकम्म-जओ।" "जो काम और कषायों को जीत लेता है, वही सच्चा मुनि है।"

लेकिन साथियों,

दुर्भाग्य से अनेक अहम ग्रंथ धीरे-धीरे लुप्त हो रहे थे। इसलिए हम ज्ञान भारतम मिशन शुरू करने जा रहे हैं। इस वर्ष बजट में इसकी घोषणा की गई है। देश में करोड़ों पांडुलिपियों का सर्वे कराने की तैयारी इसमे हो रही है। प्राचीन धरोहरों को डिजिटल करके हम प्राचीनता को आधुनिकता से जोड़ेंगे। ये बजट में बहुत महत्वपूर्ण घोषणा थी और आप लोगों को तो ज्यादा गर्व होना चाहिए। लेकिन, आपका ध्यान पूरा 12 लाख रुपया इन्कम टैक्स मुक्ति इस पर गया होगा। अकलमंद को इशारा काफी है।

साथियों,

ये जो मिशन हमने शुरू किया है, ये अपने आपमे एक अमृत संकल्प है! नया भारत AI से संभावनाएँ खोजेगा और आध्यात्म से दुनिया को राह दिखाएगा।

साथियों,

जितना मैंने जैन धर्म को जाना है, समझा है, जैन धर्म बहुत ही साइंटिफिक है, उतना ही संवेदनशील भी है। विश्व आज जिन परिस्थितियों से जूझ रहा है। जैसे युद्ध, आतंकवाद या पर्यावरण की समस्याएं हों, ऐसी चुनौतियों का हल जैन धर्म के मूल सिद्धांतों में समाहित है। जैन परम्परा के प्रतीक चिन्ह में लिखा है -"परस्परोग्रहो जीवानाम" अर्थात जगत के सभी जीव एक दूसरे पर आधारित हैं। इसलिए जैन परम्परा सूक्ष्मतम हिंसा को भी वर्जित करती है। पर्यावरण संरक्षण, परस्पर सद्भाव और शांति का यह सर्वोत्तम संदेश है। हम सभी जैन धर्म के 5 प्रमुख सिद्धांतों के बारे में भी जानते हैं। लेकिन एक और प्रमुख सिद्धांत है- अनेकांतवाद। अनेकांतवाद का दर्शन, आज के युग में और भी प्रासंगिक हो गया है। जब हम अनेकांतवाद पर विश्वास करते हैं, तो युद्ध और संघर्ष की स्थिति ही नहीं बनती। तब लोग दूसरों की भावनाएं भी समझते हैं और उनका perspective भी समझते हैं। मैं समझता हूं आज पूरे विश्व को अनेकांतवाद के दर्शन को समझने की सबसे ज्यादा जरूरत है।

|

साथियों,

आज भारत पर दुनिया का विश्वास और भी गहरा हो रहा है। हमारे प्रयास, हमारे परिणाम, अपने आपमे अब प्रेरणा बन रहे हैं। वैश्विक संस्थाएं भारत की ओर देख रही हैं। क्यों? क्योंकि भारत आगे बढ़ा है। और जब हम आगे बढ़ते हैं, ये भारत की विशेषता है, जब भारत आगे बढ़ता है, तो दूसरों के लिए रास्ते खुलते हैं। यही तो जैन धर्म की भावना है। मैं फिर कहूंगा, परस्परोपग्रह जीवानाम्! जीवन आपसी सहयोग से ही चलता है। इसी सोच के कारण भारत से दुनिया की अपेक्षाएँ भी बढ़ी हैं। और हम भी अपने प्रयास तेज कर चुके हैं। आज सबसे बड़ा संकट है, अनेक संकटों में से एक संकट की चर्चा ज्यादा है - क्लाइमेट चेंज। इसका हल क्या है? Sustainable लाइफस्टाइल। इसीलिए भारत ने शुरू किया मिशन लाइफ। Mission Life का अर्थ है Life Style for Environment’ LIFE. और जैन समाज तो सदियों से यही जीता आया है। सादगी, संयम और Sustainability आपके जीवन के मूल हैं। जैन धर्म में कहा गया है- अपरिग्रह, अब समय हैइन्हें जन-जन तक पहुँचाने का। मेरा आग्रह है, आप जहां हों, दुनिया के किसी भी कोने में हो, जिस भी देश में हो, जरूर मिशन लाइफ के ध्वजावाहक बनें।

साथियों,

आज की दुनिया Information की दुनिया है। Knowledge का भंडार नजर आने लगा है। लेकिन, न विज्जा विण्णाणं करोति किंचि! विवेक के बिना ज्ञान बस भारीपन है, गहराई नहीं। जैन धर्म हमें सिखाता है - Knowledge और Wisdom से ही Right Path मिलता है। हमारे युवाओं के लिए ये संतुलन सबसे ज़रूरी है। हमें, जहाँ tech हो, वहाँ touch भी हो। जहाँ skill हो, वहाँ soul भी तो हो, आत्मा भी तो हो। नवकार महामंत्र, इस Wisdom का स्रोत बन सकता है। नई पीढ़ी के लिए ये मंत्र केवल जप नहीं, एक दिशा है।

साथियों,

आज जब इतनी बड़ी संख्या में, विश्वभर में एक साथ नवकार महामंत्र का जाप किया है, तो मैं चाहता हूं- आज हम सब, जहां भी बैठे हों, इस कमरे में ही सिर्फ नहीं। से 9 संकल्प लेकर जाएं। ताली नहीं बजेगी, क्योंकि आपको लगेगा कि मुसीबत आ रही है। पहला संकल्प- पानी बचाने का संकल्प। आपमें से बहुत सारे साथी महुड़ी यात्रा करने गए होंगे। वहां बुद्धिसागर जी महाराज ने 100 साल पहले एक बात कही थी, वो वहां लिखी हुई है। बुद्धिसागर महाराज जी ने कहा था - "पानी किराने की दुकान में बिकेगा..." 100 साल पहले कहा। आज हम उस भविष्य को जी रहे हैं। हम किराने की दुकान से पानी पीने के लिए लेते हैं। हमें अब एक-एक बूँद की कीमत समझनी है। एक-एक बूँद उसे बचाना, ये हमारा कर्तव्य है।

दूसरा संकल्प- एक पेड़ माँ के नाम। पिछले कुछ महीनों में देश में 100 करोड़ से ज्यादा पेड़ लगे हैं। अब हर इंसान अपनी मां के नाम एक पेड़ लगाएं, माँ के आशीर्वाद जैसा उसे सींचे। मैंने एक प्रयोग किया था, जब गुजरात की धरती पर आपने मुझे सेवा का मौका दिया था। तो तारंगा जी में मैंने तीर्थंकर वन बनाया था। तारंगा जी वीरान सी अवस्था है, यात्री आते तो बैठने की जगह मिल जाए और मेरा मन था, कि इस तीर्थंकर वन में हमारे 24 तीर्थंकर जिस वृक्ष के नीचे बैठे थे, उसको मैं ढूंढ कर लगाऊंगा। मेरे प्रयासों में कोई कमी नहीं थी, लेकिन दुर्भाग्य से मैं सिर्फ 16 वृक्ष इकट्ठे कर पाया था, आठ वृक्ष मुझे नहीं मिले। जिन तीर्थंकरों ने जिस वृक्ष के नीचे साधना की हो और वो वृक्ष विलुप्त हो जाएं, क्या हमें दिल में कसक होती है क्या? आप भी तय करें, हर तीर्थंकर जिस वृक्ष के नीचे बैठे थे, वो वृक्ष मैं बोऊंगा और मेरी मां के नाम वो पेड़ बोऊंगा।

|

तीसरा संकल्प- स्वच्छता का मिशन। स्वच्छता में भी शूक्ष्म अहिंसा है, हिंसा से मुक्ति है। हमारी हर गली, हर मोहल्ला, हर शहर स्वच्छ होना चाहिए, हर व्यक्ति को उसमें योगदान करना चाहिए, नहीं करोगे? चौथा संकल्प- वोकल फॉर लोकल। एक काम करिए, खास करके मेरे युवा, नौजवान, दोस्त, बेटियां, अपने घर में सुबह उठने से लेकर के रात को सोने तक जो चीजें उपयोग करते होंगे ब्रश, कंघी, जो भी, जरा लिस्ट बनाइए कितनी चीजें विदेशी हैं। आप स्वयं चौंक जाएंगे, कि कैसी-कैसी चीजें आपकी जिंदगी में घुस गई है और फिर तय करिए, कि इस वीक में तीन कम करूंगा, अगले वीक में पांच कम करूंगा और फिर धीरे-धीरे हर दिन नौ कम करूंगा और एक-एक कम करता जाऊंगा, एक एक नवकार मंत्र बोलता जाऊंगा।

साथियों,

जब मैं वोकल फॉर लोकल कहता हूं। जो सामान बना है भारत में, जो बिके भारत में भी और दुनिया भर में। हमें Local को Global बनाना है। जिस सामान को बनाने में किसी भारतीय के पसीने की खुशबू हो, जिस सामान में भारत की मिट्टी की महक हो, हमें उसे खरीदना है और दूसरों को भी प्रेरित करना है।

पांचवा संकल्प- देश दर्शन। आप दुनिया घूमिए, लेकिन, पहले भारत जानें, अपना भारत जानें। हमारा हर राज्य, हर संस्कृति, हर कोना, हर परंपरा अद्भुत है, अनमोल है, इसे देखना चाहिए और हम नहीं देखेंगे और कहेंगे कि दुनिया देखने के लिए आए तो क्यों आएगी भई। अब घर में अपने बच्चों को महात्मय नहीं देंगे, तो मोहल्ले में कौन देगा।

छठा संकल्प- नैचुरल फार्मिंग को अपनाना। जैन धर्म में कहा गया है- जीवो जीवस्स नो हन्ता - "एक जीव को दूसरे जीव का संहारक नहीं बनना चाहिए।" हमें धरती माँ को केमिकल्स से मुक्त करना है। किसानों के साथ खड़ा होना है। प्राकृतिक खेती के मंत्र को गांव-गांव लेकर जाना है।

सातवां संकल्प- हेल्दी लाइफस्टाइल को अपनाना। खानपान में भारतीय परंपरा की वापसी होनी चाहिए। मिलेट्स श्रीअन्न ज्यादा से ज्यादा थालियों में हो। और खाने में तेल 10 परसेंट कम हो ताकि मोटापा दूर रहे! और आपको तो हिसाब-किताब आता है, पैसा बचेगा काम को और कम का।

साथियों,

जैन परंपरा कहती है – ‘तपेणं तणु मंसं होइ।’ तप और संयम से शरीर स्वस्थ और मन शांत होता है। और इसका एक बड़ा माध्यम है- योग और खेल कूद। इसलिए आठवां संकल्प है- योग और खेल को जीवन में लाना। घर हो या दफ्तर, स्कूल हो या पार्क, हमें खेलना और योग करना जीवन का हिस्सा बनाना है। नवां संकल्प है- गरीबों की सहायता का संकल्प। किसी का हाथ थामना,किसी की थाली भरना यही असली सेवा है।

|

साथियों,

इन नव संकल्पों से हमें नई ऊर्जा मिलेगी, ये मेरी गारंटी है। हमारी नई पीढ़ी को नई दिशा मिलेगी। और हमारे समाज में शांति, सद्भाव और करुणा बढ़ेगी। और एक बात मैं जरूर कहूंगा, इन नव संकल्पों में से एक भी मैंने मेरे भले के लिए किया है, तो मत करना। मेरी पार्टी की भलाई के लिए किया हो, तो भी मत करना। अब तो आपको कोई बंधन नहीं होना चाहिए। और सारे महाराज साहब भी मुझे सुन रहे हैं, मैं उनसे प्रार्थना करता हूं, कि मेरी ये बात आपके मुहं से निकलेगी तो ताकत बढ़ जाएगी।

साथियों,

हमारे रत्नत्रय, दशलक्षण, सोलह कारण, पर्युषण आदि महापर्व आत्म कल्याण का मार्ग प्रशस्त करते हैं। वही विश्व नवकार महामंत्र, ये दिवस विश्व में निरंतर सुख, शांति और समृद्धि बढ़ाएगा, मेरा हमारे आचार्यों भगवंतों पर पूरा भरोसा है और इसलिए आप पर भी भरोसा है। आज मुझे खुशी है, जो खुशी मैं व्यक्त करना चाहता हूं, क्योंकि मैं इन बातों से पहले भी जुड़ा हुआ हूं। मेरी बहुत खुशी है, कि चारों फिरके इस आयोजन में एक साथ जुटे हैं। यह स्टैंडिंग ओवेशन मोदी के लिए नहीं है, ये उन चारों फिरकों के सभी महापुरुषों के चरणों में समर्पित करता हूं। ये आयोजन, ये आयोजन हमारी प्रेरणा, हमारी एकता, हमारी एकजुटता और एकता का सामर्थ्य की अनुभूति और एकता की पहचान बना है। हमें देश में एकता का संदेश इसी तरह लेकर जाना है। जो कोई भी भारत माता की जय बोलता है, उसको हमें जोड़ना है। ये विकसित भारत के निर्माण की ऊर्जा है, उसकी नींव को मजबूत करने वाला है।

साथियों,

आज हम सौभाग्यशाली हैं, कि देश में अनेक स्थानों पर हमें गुरू भगवंतों का भी आशीर्वाद प्राप्त हो रहा है। मैं इस ग्लोबल इवेंट के आयोजन के लिए समस्त जैन परिवार को नमन करता हूं। आज पूरे देश में, विदेश में जो हमारे आचार्य भगवंत, मारा साहेब, मुनि महाराज, श्रावक-श्राविका जुटे हैं, मैं उन्हें भी श्रद्धापूर्वक प्रणाम करता हूं। और मैं विशेष रूप से JITO को भी इस आयोजन के लिए बधाई देता हूं। नवकार मंत्र के लिए जितनी ताली बजी, उससे ज्यादा JITO के लिए बज रही है। जीतो Apex के चेयरमैन पृथ्वीराज कोठारी जी, प्रेसीडेंट विजय भंडारी जी, गुजरात के गृहमंत्री हर्ष सांघवी जी, जीतो के अन्य पदाधिकारी और देश-दुनिया के कोने-कोने से जुड़े महानुभाव, आप सभी को इस ऐतिहासिक आयोजन के लिए ढेरों शुभकामनाएं। धन्यवाद।

जय जिनेन्द्र।

जय जिनेन्द्र।

जय जिनेन्द्र।