QuoteThe GST spirit is about growing stronger together. I hope the same GST spirit prevails in the session: PM
QuoteGST shows the good that can be achieved when all parties come together and work for the nation: PM

ಸಂಸತ್ತಿನ ಮಳೆಗಾಲದ ಅಧಿವೇಶನವು ಇಂದಿನಿಂದ ಆರಂಭವಾಗುತ್ತಿದೆ. ಬೇಸಿಗೆಯ ಬಳಿಕ, ಬರುವ ಪ್ರಥಮ ಮಳೆ ಇಳೆಗೆ ಹೊಸ ಸುಗಂಧವನ್ನು ತರುತ್ತದೆ. ಅದೇ ರೀತಿ ಈ ಮಳೆಗಾಲದ ಅಧಿವೇಶನ ಕೂಡ ಜಿಎಸ್ಟಿಯ ಯಶಸ್ವೀ ಅನುಷ್ಠಾನದ ಬಳಿಕ ಹೊಸ ಸ್ಫೂರ್ತಿಯನ್ನು ತರಲಿದೆ. ಯಾವಾಗ ರಾಜಕೀಯ ಪಕ್ಷಗಳು ಮತ್ತು ಸರ್ಕಾರ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತವೆಯೋ ಆಗ, ಜನತೆಗೆ ಒಳಿತನ್ನು ಮಾಡುವ ಅವರ ಬದ್ಧತೆ ವ್ಯಕ್ತವಾಗುತ್ತದೆ.ಇದು ಜಿಎಸ್ಟಿಯ ಯಶಸ್ವೀ ಅನುಷ್ಠಾನದೊಂದಿಗೆ ಸಾಬೀತಾಗಿದೆ. ಜಿಎಸ್ಟಿಯ ಸ್ಪೂರ್ತಿ ಒಟ್ಟಿಗೆ ಬಲವಾಗಿ ಬೆಳೆಯುವುದರ ಸಂಕೇತವಾಗಿದೆ. ಮಳೆಗಾಲದ ಅಧಿವೇಶನವು ಹಲವು ಲೆಕ್ಕಾಚಾರದಿಂದ ಮಹತ್ವವಾದ್ದಾಗಿದೆ.

2017ರ ಆಗಸ್ಟ್ 15ಕ್ಕೆ ದೇಶವು ಸ್ವಾತಂತ್ರ್ಯ ಪಡೆದು 7 ದಶಕವಾಗುತ್ತದೆ. 2017ರ ಆಗಸ್ಟ್ 9ಕ್ಕೆ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಗೆ 75 ವರ್ಷವಾಗುತ್ತದೆ. ಈ ಅಧಿವೇಶನದ ಕಾಲದಲ್ಲಿ, ದೇಶಕ್ಕೆ ನೂತನ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಅವಕಾಶವೂ ದೊರಕಿದೆ. ಈ ನಿಟ್ಟಿನಲ್ಲಿ ಈ ಅವಧಿಯು ದೇಶಕ್ಕೆ ಹಲವು ಮಹತ್ವದ ಘಟನೆಗಳಿಂದ ಕೂಡಿರಲಿದೆ.

ಹೀಗಾಗಿ ಈ ವರ್ಷದ ಮಳೆಗಾಲದ ಅಧಿವೇಶನದ ಮೇಲೆ ಜನರ ಹೆಚ್ಚಿನ ಗಮನ ನೆಟ್ಟಿದೆ. ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ, ತಮ್ಮ ಕಠಿಣ ಪರಿಶ್ರಮದಿಂದ ದೇಶದ ಆಹಾರ ಭದ್ರತೆಯನ್ನು ಖಾತ್ರಿ ಪಡಿಸುತ್ತಿರುವ ಅನ್ನದಾತರಾದ ರೈತರಿಗೆ ನಾವು ನಮನ ಸಲ್ಲಿಸಲಿದ್ದೇವೆ.

ಈ ಮಳೆಗಾಲದ ಅಧಿವೇಶನವು ಎಲ್ಲ ರಾಜಕೀಯ ಪಕ್ಷಗಳಿಗೆ ಮತ್ತು ಸಂಸತ್ ಸದಸ್ಯರಿಗೆ ಒಗ್ಗೂಡಿ ದೇಶದ ಹಿತಕ್ಕಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಮೌಲ್ಯವರ್ಧಿತವಾದ ಉತ್ಕೃಷ್ಟ ಗುಣಮಟ್ಟದ ಚರ್ಚೆಗೆ ಅವಕಾಶ ಒದಗಿಸುತ್ತದೆ ಎಂಬುದು ನನ್ನ ಅಛಲ ವಿಶ್ವಾಸವಾಗಿದೆ.

ತುಂಬಾ ತುಂಬಾ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Average Electricity Supply Rises: 22.6 Hours In Rural Areas, 23.4 Hours in Urban Areas

Media Coverage

India’s Average Electricity Supply Rises: 22.6 Hours In Rural Areas, 23.4 Hours in Urban Areas
NM on the go

Nm on the go

Always be the first to hear from the PM. Get the App Now!
...
PM pays tributes to revered Shri Kushabhau Thackeray in Bhopal
February 23, 2025

Prime Minister Shri Narendra Modi paid tributes to the statue of revered Shri Kushabhau Thackeray in Bhopal today.

In a post on X, he wrote:

“भोपाल में श्रद्धेय कुशाभाऊ ठाकरे जी की प्रतिमा पर श्रद्धा-सुमन अर्पित किए। उनका जीवन देशभर के भाजपा कार्यकर्ताओं को प्रेरित करता रहा है। सार्वजनिक जीवन में भी उनका योगदान सदैव स्मरणीय रहेगा।”