ಮಹನೀಯರೇ,

ಆತ್ಮೀಯರೇ,

ಈ ವಿಶೇಷ ಕಾರ್ಯಕ್ರಮಕ್ಕಾಗಿ ನಾನು ನಿಮ್ಮೆಲ್ಲರಿಗೂ ಆತ್ಮೀಯ ಮತ್ತು ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ.

ನನ್ನ ಸ್ನೇಹಿತ ಅಮೆರಿಕ ಅಧ್ಯಕ್ಷ ಬಿಡೆನ್ ಅವರೊಂದಿಗೆ ಈ ಕಾರ್ಯಕ್ರಮದ ಸಹ-ಅಧ್ಯಕ್ಷರಾಗಲು ನಾನು ಸಂತಸಪಡುತ್ತೇನೆ.

ಇಂದು, ನಾವೆಲ್ಲರೂ ಮಹತ್ವದ ಮತ್ತು ಐತಿಹಾಸಿಕ ಒಪ್ಪಂದವನ್ನು ಅಂಗೀಕರಿಸಿರುವುದನ್ನು ನೋಡಿದ್ದೇವೆ.

ಮುಂಬರುವ ಸಮಯದಲ್ಲಿ, ಇದು ಭಾರತ, ಪಶ್ಚಿಮ ಏಷ್ಯಾ ಮತ್ತು ಯುರೋಪ್ ನಡುವೆ ಆರ್ಥಿಕ ಏಕೀಕರಣದ ಪರಿಣಾಮಕಾರಿ ಮಾಧ್ಯಮವಾಗಲಿದೆ.

ಇದು ಜಾಗತಿಕ ಸಂಪರ್ಕ ಮತ್ತು ಅಭಿವೃದ್ಧಿಗೆ ಸುಸ್ಥಿರ ನಿರ್ದೇಶನವನ್ನು ನೀಡುತ್ತದೆ.

ಅಭಿನಂದನೆಗಳು,
ಘನತೆವೆತ್ತ ಅಧ್ಯಕ್ಷ ಬಿಡೆನ್ ಅವರೇ,
ರಾಯಲ್ ಹೈನೆಸ್, ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್,
ರಾಯಲ್ ಹೈನೆಸ್, ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್,
ಘನತೆವೆತ್ತ ಅಧ್ಯಕ್ಷರಾದ ಮ್ಯಾಕ್ರನ್,
ಹಿಸ್ ಎಕ್ಸಲೆನ್ಸಿ, ಚಾನ್ಸೆಲರ್ ಸ್ಕೋಲ್ಜ್,
ಗೌರವಾನ್ವಿತ, ಪ್ರಧಾನ ಮಂತ್ರಿ ಮೆಲೋನಿ, ಮತ್ತು
ಗೌರವಾನ್ವಿತ, ಅಧ್ಯಕ್ಷ ವಾನ್ ಡೆರ್ ಲೇಯೆನ್,

ಈ ವಿಶೇಷ ಸಂದರ್ಭದಲ್ಲಿ 

ಸ್ನೇಹಿತರೇ,

ದೃಢವಾದ ಸಂಪರ್ಕ ಮತ್ತು ಮೂಲಸೌಕರ್ಯಗಳು ಮಾನವ ನಾಗರಿಕತೆಯ ಪ್ರಗತಿಗೆ ಆಧಾರ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತವೆ.

ಭಾರತವು ತನ್ನ ಅಭಿವೃದ್ಧಿಯ ಪಯಣದಲ್ಲಿ ಈ ಡೊಮೇನ್ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ.

ಭೌತಿಕ ಮೂಲಸೌಕರ್ಯದ ಜೊತೆಗೆ, ಸಾಮಾಜಿಕ, ಡಿಜಿಟಲ್ ಮತ್ತು ಆರ್ಥಿಕ ಮೂಲಸೌಕರ್ಯಗಳ ಕಡೆಗೆ ಅಭೂತಪೂರ್ವ ಪ್ರಮಾಣದ ಹೂಡಿಕೆಯನ್ನು ನಿರ್ದೇಶಿಸಲಾಗುತ್ತಿದೆ.

ಈ ಪ್ರಯತ್ನಗಳ ಮೂಲಕ ನಾವು ಅಭಿವೃದ್ಧಿ ಹೊಂದಿದ ಭಾರತದ ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ.

ಜಾಗತಿಕ ದಕ್ಷಿಣದ ಅನೇಕ ದೇಶಗಳಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿ, ನಾವು ಇಂಧನ, ರೈಲ್ವೆ, ನೀರು, ತಂತ್ರಜ್ಞಾನ ಉದ್ಯಾನವನಗಳು ಮತ್ತು ಹೆಚ್ಚಿನ ಪ್ರದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ.

ಈ ಪ್ರಯತ್ನಗಳ ಉದ್ದಕ್ಕೂ, ನಾವು ಬೇಡಿಕೆ ಮತ್ತು ಪಾರದರ್ಶಕ ವಿಧಾನಕ್ಕೆ ನಿರ್ದಿಷ್ಟ ಒತ್ತು ನೀಡಿದ್ದೇವೆ.

PGII ಮೂಲಕ, ಜಾಗತಿಕ ದಕ್ಷಿಣದ ದೇಶಗಳಲ್ಲಿ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡುವಲ್ಲಿ ನಾವು ಮಹತ್ವದ ಕೊಡುಗೆ ನೀಡಬಹುದು.

ಸ್ನೇಹಿತರೇ,

ಭಾರತವು ಪ್ರಾದೇಶಿಕ ಗಡಿಗಳೊಂದಿಗೆ ಸಂಪರ್ಕವನ್ನು ಅಳೆಯುವುದಿಲ್ಲ.

ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕವನ್ನು ಹೆಚ್ಚಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ.

ಸಂಪರ್ಕವು ಪರಸ್ಪರ ವ್ಯಾಪಾರ ಮಾತ್ರವಲ್ಲದೆ ವಿವಿಧ ದೇಶಗಳ ನಡುವೆ ಪರಸ್ಪರ ನಂಬಿಕೆಯನ್ನು ಹೆಚ್ಚಿಸುವ ಮೂಲ ಎಂದು ನಾವು ನಂಬುತ್ತೇವೆ.

ಸಂಪರ್ಕ ಉಪಕ್ರಮಗಳನ್ನು ಉತ್ತೇಜಿಸುವಾಗ, ಕೆಲವು ಮೂಲಭೂತ ತತ್ವಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ, ಅವುಗಳೆಂದರೆ:

ಅಂತಾರಾಷ್ಟ್ರೀಯ ನಿಯಮಗಳು, ಮತ್ತು ಕಾನೂನುಗಳ ಅನುಸರಣೆ.

ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ.

ಸಾಲದ ಹೊರೆಗೆ ಬದಲಾಗಿ ಆರ್ಥಿಕ ಸದೃಢತೆಯನ್ನು ಉತ್ತೇಜಿಸುವುದು.

ಮತ್ತು ಎಲ್ಲಾ ಪರಿಸರ ನಿಯತಾಂಕಗಳನ್ನು ಅನುಸರಿಸಲು.

ಇಂದು ನಾವು ಸಂಪರ್ಕದ ಇಂತಹ ದೊಡ್ಡ ಉಪಕ್ರಮವನ್ನು ತೆಗೆದುಕೊಳ್ಳುತ್ತಿರುವಾಗ, ನಾವು ಮುಂದಿನ ಪೀಳಿಗೆಯ ಕನಸುಗಳನ್ನು ವಿಸ್ತರಿಸುವ ಬೀಜಗಳನ್ನು ಬಿತ್ತುತ್ತಿದ್ದೇವೆ.

ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಎಲ್ಲಾ ನಾಯಕರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ಎಲ್ಲರಿಗೂ ತುಂಬಾ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Oman, India’s Gulf 'n' West Asia Gateway

Media Coverage

Oman, India’s Gulf 'n' West Asia Gateway
NM on the go

Nm on the go

Always be the first to hear from the PM. Get the App Now!
...
Prime Minister condoles passing of renowned writer Vinod Kumar Shukla ji
December 23, 2025

The Prime Minister, Shri Narendra Modi has condoled passing of renowned writer and Jnanpith Awardee Vinod Kumar Shukla ji. Shri Modi stated that he will always be remembered for his invaluable contribution to the world of Hindi literature.

The Prime Minister posted on X:

"ज्ञानपीठ पुरस्कार से सम्मानित प्रख्यात लेखक विनोद कुमार शुक्ल जी के निधन से अत्यंत दुख हुआ है। हिन्दी साहित्य जगत में अपने अमूल्य योगदान के लिए वे हमेशा स्मरणीय रहेंगे। शोक की इस घड़ी में मेरी संवेदनाएं उनके परिजनों और प्रशंसकों के साथ हैं। ओम शांति।"