QuotePM to inaugurate dedicate to nation and lay the foundation stone of multiple development projects worth more than Rs. 52,250 crore
QuoteProjects encompasses important sectors like health, road, rail, energy, petroleum & natural gas, tourism among others
QuotePM to dedicate Sudarshan Setu connecting Okha mainland and Beyt Dwarka
QuoteIt is India’s longest cable stayed bridge
QuotePM to dedicate five AIIMS at Rajkot, Bathinda, Raebareli, Kalyani and Mangalagiri
QuotePM to lay the foundation stone and dedicate to the nation more than 200 Health Care Infrastructure Projects
QuotePM to inaugurate and dedicate to the nation 21 projects of ESIC
QuotePM to lay foundation stone of the New Mundra-Panipat pipeline project

ಫೆಬ್ರವರಿ 24 ಮತ್ತು 25 , 2024 ರಂದು ಪ್ರಧಾನಮಂತ್ರಿಯವರು ಗುಜರಾತ್‌ ಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 25 ರಂದು ಬೆಳಿಗ್ಗೆ 7:45 ರ ಸುಮಾರಿಗೆ ಪ್ರಧಾನಮಂತ್ರಿಯವರು ಬೇಂಟ್ ದ್ವಾರಕಾ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನವನ್ನು ಮಾಡಲಿದ್ದಾರೆ.  ಇದರ ನಂತರ ಬೆಳಗ್ಗೆ ಸುಮಾರು 8:25 ಕ್ಕೆ ಸುದರ್ಶನ ಸೇತುಗೆ ಭೇಟಿ ನೀಡಲಾಗುವುದು.  ನಂತರ ಅವರು ಬೆಳಗ್ಗೆ 9:30 ರ ಸುಮಾರಿಗೆ ದ್ವಾರಕಾಧೀಶ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 1.೦೦ ಗಂಟೆ ಸುಮಾರಿಗೆ, ಪ್ರಧಾನಮಂತ್ರಿ ಅವರು ದ್ವಾರಕಾದಲ್ಲಿ ರೂ.4150 ಕೋಟಿಗೂ ಅಧಿಕ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಮಧ್ಯಾಹ್ನ 3:30 ರ ಸುಮಾರಿಗೆ ಪ್ರಧಾನಮಂತ್ರಿಯವರು ರಾಜ್‌ಕೋಟ್ ಏಮ್ಸ್‌ ಗೆ ಭೇಟಿ ನೀಡಲಿದ್ದಾರೆ.  ಸಂಜೆ 4:30 ರ ಸುಮಾರಿಗೆ, ಪ್ರಧಾನಮಂತ್ರಿ ಅವರು ರಾಜ್‌ಕೋಟ್‌ನ ರೇಸ್ ಕೋರ್ಸ್ ಮೈದಾನದಲ್ಲಿ ರೂ.48,100 ಕೋಟಿಗಿಂತ ಆಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

 ದ್ವಾರಕಾದಲ್ಲಿ ಪ್ರಧಾನಮಂತ್ರಿ

ದ್ವಾರಕಾದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ, ಪ್ರಧಾನಮಂತ್ರಿಯವರು ಸುಮಾರು ರೂ 980.೦೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಓಖಾ ಮುಖ್ಯಭೂಮಿ ಮತ್ತು ಬೇಂಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಸುದರ್ಶನ ಸೇತುವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ಇದು ಸುಮಾರು 2.32 ಕಿಮೀ ಉದ್ದವಿದ್ದು, ದೇಶದಲ್ಲೇ ಅತಿ ಉದ್ದದ ಕೇಬಲ್-ತೂಗು ಸೇತುವೆಯಾಗಿದೆ.

 ಸುದರ್ಶನ ಸೇತು ಒಂದು ವಿಶಿಷ್ಟ ವಿನ್ಯಾಸವನ್ನು ಹೊಂದಿದೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳಿಂದ ಅಲಂಕರಿಸಲ್ಪಟ್ಟ ಕಾಲುದಾರಿ ಮತ್ತು ಎರಡೂ ಬದಿಗಳಲ್ಲಿ ಭಗವಾನ್ ಕೃಷ್ಣನ ಚಿತ್ರಗಳನ್ನು ಒಳಗೊಂಡಿದೆ.  ಇದು ಫುಟ್‌ಪಾತ್‌  ಮೇಲಿನ ಭಾಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು, ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.  ಈ ಸೇತುವೆಯು ಸಾರಿಗೆಯನ್ನು ಸುಗಮಗೊಳಿಸುತ್ತದೆ ಮತ್ತು ದ್ವಾರಕಾ ಮತ್ತು ಬೇಂಟ್-ದ್ವಾರಕಾ ನಡುವೆ ಪ್ರಯಾಣಿಸುವ ಭಕ್ತರ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.  ಸೇತುವೆಯ ನಿರ್ಮಾಣದ ಮೊದಲು, ಯಾತ್ರಾರ್ಥಿಗಳು ಬೇಂಟ್ ದ್ವಾರಕಾವನ್ನು ತಲುಪಲು ದೋಣಿ ಸಾರಿಗೆ ವವ್ಯವಸ್ಥೆಯನ್ನು ಅವಲಂಬಿಸಬೇಕಾಗಿತ್ತು.  ಈ ಸಾಂಪ್ರದಾಯಿಕ ಸೇತುವೆಯು ದೇವಭೂಮಿ ದ್ವಾರಕಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿಯೂ ಕಾರ್ಯನಿರ್ವಹಿಸಲಿದೆ.

ಅಸ್ತಿತ್ವದಲ್ಲಿರುವ ಕಡಲಾಚೆಯ ಮಾರ್ಗಗಳ ಬದಲಿಯಾಗಿ, ಅಸ್ತಿತ್ವದಲ್ಲಿರುವ ಪೈಪ್‌ಲೈನ್ ಎಂಡ್ ಮ್ಯಾನಿಫೋಲ್ಡ್ (ಪಿಎಲ್‌ಇಎಂ) ಮತ್ತು ಸಂಪೂರ್ಣ ವ್ಯವಸ್ಥೆಯನ್ನು (ಪೈಪ್‌ಲೈನ್‌ಗಳು, ಪಿಎಲ್‌ಇಎಮ್‌ಗಳು ಮತ್ತು ಇಂಟರ್‌ಕನೆಕ್ಟಿಂಗ್ ಲೂಪ್ ಲೈನ್) ಸ್ಥಳಾಂತರಿಸುವುದನ್ನು ಒಳಗೊಂಡಿರುವ ವಿವಿಧ ಯೋಜನೆಯನ್ನು ಪ್ರಧಾನಮಂತ್ರಿಯವರು ವಾಡಿನಾರ್‌ನಲ್ಲಿ ಸಮರ್ಪಿಸಲಿದ್ದಾರೆ.  ರಾಜ್‌ಕೋಟ್-ಓಖಾ, ರಾಜ್‌ಕೋಟ್-ಜೆಟಲ್‌ಸರ್-ಸೋಮನಾಥ್ ಮತ್ತು ಜೆಟಲ್‌ಸರ್-ವಾಂಸ್ಜಾಲಿಯಾ ರೈಲು ವಿದ್ಯುದ್ದೀಕರಣ ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-927ಡಿ ಯ ಧೋರಾಜಿ- ಜಮ್ಕಂದೋರ್ನಾ -ಕಲವಾಡ್ ವಿಭಾಗದ ಅಗಲೀಕರಣ ಕಾರ್ಯಕ್ಕೆ ಅಡಿಗಲ್ಲು ಹಾಕಲಿದ್ದಾರೆ;  ಜಾಮ್‌ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ;  ಜಾಮ್‌ನಗರದ ಸಿಕ್ಕಾ ಥರ್ಮಲ್ ಪವರ್ ಸ್ಟೇಷನ್‌ನಲ್ಲಿ ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (ಎಫ್‌ಜಿಡಿ) ಸಿಸ್ಟಮ್ ಸ್ಥಾಪನೆ ಕಾರ್ಯ ನೆರವೇರಿಸಲಿದ್ದಾರೆ.

ರಾಜ್‌ಕೋಟ್‌ನಲ್ಲಿ ಪ್ರಧಾನಮಂತ್ರಿ

ರಾಜ್‌ಕೋಟ್‌ ನಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ, ಪ್ರಧಾನಮಂತ್ರಿ ಅವರು ರೂ. 48,100 ಕೋಟಿಗಿಂತ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ರಾಷ್ಟ್ರಕ್ಕೆ ಸಮರ್ಪಿಸುವರು ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಯೋಜನೆಗಳು ಆರೋಗ್ಯ, ರಸ್ತೆ, ರೈಲು, ಇಂಧನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ.

ದೇಶದಲ್ಲಿ ತೃತೀಯ ಹಂತದ ಆರೋಗ್ಯ ರಕ್ಷಣೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್‌ಕೋಟ್ (ಗುಜರಾತ್), ಬಟಿಂಡಾ (ಪಂಜಾಬ್), ರಾಯಬರೇಲಿ (ಉತ್ತರ ಪ್ರದೇಶ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಮಂಗಳಗಿರಿ (ಆಂಧ್ರಪ್ರದೇಶ)ಗಳಲ್ಲಿ ಐದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.  

23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ರೂ. 11,500 ಕೋಟಿಗೂ ಹೆಚ್ಚು ಮೌಲ್ಯದ ಆರೋಗ್ಯ ಮೂಲಸೌಕರ್ಯ ಕ್ಷೇತ್ರದ 200ಕ್ಕೂ ಅಧಿಕ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 

 ಪುದುಚೇರಿಯ ಕಾರೈಕಲ್‌ನಲ್ಲಿರುವ ಜಿಪ್‌ಮರ್‌ನ ವೈದ್ಯಕೀಯ ಕಾಲೇಜು ಮತ್ತು ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಎಜುಕೇಷನಲ್ ರಿಸರ್ಚ್ ನ 300 ಹಾಸಿಗೆಗಳ ಕೇಂದ್ರವನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ.  ಅವರು ಪುದುಚೇರಿಯ ಯಾನಂನಲ್ಲಿ ಜಿಪ್ಮರ್‌ನ 90 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಕನ್ಸಲ್ಟಿಂಗ್ ಘಟಕವನ್ನು ಉದ್ಘಾಟಿಸಲಿದ್ದಾರೆ;  ಚೆನ್ನೈನಲ್ಲಿ ವಯಸ್ಸಾದ ರಾಷ್ಟ್ರೀಯ ಕೇಂದ್ರ;  ಬಿಹಾರದ ಪುರ್ನಿಯಾದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು;  ಐಸಿಎಂಆರ್‌ನ 2 ಕ್ಷೇತ್ರ ಘಟಕಗಳಾದ ಕೇರಳದ ಆಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಕೇರಳ ಘಟಕ ಮತ್ತು  ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆ (ಎನ್‌ಐಆರ್‌ಟಿ): ಹೊಸ ಸಂಯೋಜಿತ ಟಿಬಿ ಸಂಶೋಧನಾ ಸೌಲಭ್ಯ ಕೇಂದ್ರ, ತಿರುವಳ್ಳೂರ್, ತಮಿಳುನಾಡು, ಇವುಗಳಲ್ಲಿ ಸೇರಿದೆ.  ಪಂಜಾಬ್‌ನ ಫಿರೋಜ್‌ಪುರದಲ್ಲಿ ಪಿಜಿಐಎಂಇಆರ್‌ನ 100 ಹಾಸಿಗೆಗಳ ಉಪಗ್ರಹ ಕೇಂದ್ರ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ;  ದೆಹಲಿಯ ಆರ್.ಎಂ.ಎಲ್ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ;  ರಿಂಮ್ಸ್ ಇಂಫಾಲ್‌ನಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್;  ಜಾರ್ಖಂಡ್‌ನ ಕೊಡೆರ್ಮಾ ಮತ್ತು ದುಮ್ಕಾದಲ್ಲಿ ನರ್ಸಿಂಗ್ ಕಾಲೇಜುಗಳು, ಇವುಗಳಲ್ಲಿ ಸೇರಿದೆ

ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಪ್ರಧಾನಮಂತ್ರಿ-ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ಅಡಿಯಲ್ಲಿ, ಪ್ರಧಾನಮಂತ್ರಿ ಅವರು 115 ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಅಡಿಪಾಯ ಹಾಕುವ ಕಾರ್ಯ ನೆರವೇರಿಸಲಿದ್ದಾರೆ.  ಇವುಗಳಲ್ಲಿ 78 ಪ್ರಾಜೆಕ್ಟ್‌ಗಳು ಸೇರಿವೆ (ಕ್ರಿಟಿಕಲ್ ಕೇರ್ ಬ್ಲಾಕ್‌ಗಳ 50 ಘಟಕಗಳು, ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬ್‌ಗಳ 15 ಘಟಕಗಳು, ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳ 13 ಘಟಕಗಳು);  ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಾದರಿ ಆಸ್ಪತ್ರೆ, ಟ್ರಾನ್ಸಿಟ್ ಹಾಸ್ಟೆಲ್ ಮುಂತಾದ ವಿವಿಧ ಯೋಜನೆಗಳ 30 ಘಟಕಗಳು ಇವುಗಳಲ್ಲಿ ಸೇರಿದೆ.

ಪ್ರಧಾನಮಂತ್ರಿಯವರು ಪುಣೆಯಲ್ಲಿ ‘ನಿಸರ್ಗ್ ಗ್ರಾಮ್’ ಹೆಸರಿನ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.  ಇದು ಬಹು-ವಿಧದ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದೊಂದಿಗೆ 250 ಹಾಸಿಗೆಗಳ ಆಸ್ಪತ್ರೆಯೊಂದಿಗೆ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಒಳಗೊಂಡಿದೆ.  ಇದಲ್ಲದೆ, ಅವರು ಹರಿಯಾಣದ ಜಜ್ಜರ್‌ನಲ್ಲಿ ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಪ್ರಾದೇಶಿಕ ಸಂಶೋಧನಾ ಸಂಸ್ಥೆಯನ್ನು ಸಹ ಉದ್ಘಾಟಿಸಲಿದ್ದಾರೆ.  ಇದು ಉನ್ನತ ಮಟ್ಟದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸೌಲಭ್ಯಗಳನ್ನು ಹೊಂದಿರುತ್ತದೆ

ಪ್ರಧಾನಮಂತ್ರಿಯವರು ಕಾರ್ಮಿಕರ(ಉದ್ಯೋಗಿ) ರಾಜ್ಯ ವಿಮಾ ನಿಗಮದ ಸುಮಾರು ರೂ.2280 ಕೋಟಿಗಳ 21 ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ರಾಷ್ಟ್ರಕ್ಕೆ ಸಮರ್ಪಿತವಾಗಲಿರುವ ಯೋಜನೆಗಳಲ್ಲಿ 2 ವೈದ್ಯಕೀಯ ಕಾಲೇಜುಗಳು ಮತ್ತು ಪಾಟ್ನಾ (ಬಿಹಾರ) ಮತ್ತು ಅಲ್ವಾರ್ (ರಾಜಸ್ಥಾನ) ಆಸ್ಪತ್ರೆಗಳು ಸೇರಿವೆ;  8 ಆಸ್ಪತ್ರೆಗಳು ಕೊರ್ಬಾ (ಛತ್ತೀಸ್‌ಗಢ), ಉದಯಪುರ (ರಾಜಸ್ಥಾನ), ಆದಿತ್ಯಪುರ (ಜಾರ್ಖಂಡ್), ಫುಲ್ವಾರಿ ಷರೀಫ್ (ಬಿಹಾರ), ತಿರುಪ್ಪೂರ್ (ತಮಿಳುನಾಡು), ಕಾಕಿನಾಡ (ಆಂಧ್ರಪ್ರದೇಶ) ಮತ್ತು ಛತ್ತೀಸ್‌ಗಢದ ರಾಯ್‌ಗಢ್ & ಭಿಲೈ;  ಮತ್ತು ರಾಜಸ್ಥಾನದ ನೀಮ್ರಾನಾ, ಅಬು ರೋಡ್ ಮತ್ತು ಭಿಲ್ವಾರಾದಲ್ಲಿ 3 ಔಷಧಾಲಯಗಳು ಸೇರಿವೆ.  ರಾಜಸ್ಥಾನದ ಅಲ್ವಾರ್, ಬೆಹ್ರೋರ್ ಮತ್ತು ಸೀತಾಪುರ, ಸೆಲಾಕಿ (ಉತ್ತರಾಖಂಡ), ಗೋರಖ್‌ಪುರ (ಉತ್ತರ ಪ್ರದೇಶ), ಕೊರಟ್ಟಿ ಮತ್ತು ಕೇರಳದ ನವೈಕುಲಂ ಮತ್ತು ಪೈಡಿಭೀಮವರಂ (ಆಂಧ್ರಪ್ರದೇಶ) ಮುಂತಾದ 8 ಸ್ಥಳಗಳಲ್ಲಿನ ಇಎಸ್‌ಐ ಔಷಧಾಲಯಗಳನ್ನು ಉದ್ಘಾಟಿಸಲಿರುವರು.

ಈ ಪ್ರದೇಶದಲ್ಲಿ ನವೀಕರಿಸಬಹುದಾದ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, 300 ಎಂ.ಡಬ್ಲ್ಯೂ ಭುಜ್-II ಸೌರ ವಿದ್ಯುತ್ ಯೋಜನೆ ಸೇರಿದಂತೆ ವಿವಿಧ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಅಡಿಪಾಯ ಹಾಕಲಿದ್ದಾರೆ;  ಗ್ರಿಡ್ ಸಂಪರ್ಕಿತ 600 ಎಂ.ಡಬ್ಲ್ಯೂ ಸೌರ  ವಿದ್ಯುತ್ ಯೋಜನೆ;  ಖಾವ್ಡಾ ಸೌರ ವಿದ್ಯುತ್ ಯೋಜನೆ;  200 ಎಂ. ಡಬ್ಲ್ಯೂ ದಯಾಪುರ್-II ಪವನ ಶಕ್ತಿ ಯೋಜನೆ ಇತರ ಯೋಜನೆಗಳಾಗಿವೆ.

ರೂ. 9000 ಕೋಟಿ ವೆಚ್ಚದ 8.4 ಎಂ.ಎಂ.ಟಿ.ಪಿ.ಎ ಸ್ಥಾಪಿತ ಸಾಮರ್ಥ್ಯದ 1194 ಕಿಮೀ ಉದ್ದದ ಹೊಸ ಮುಂದ್ರಾ-ಪಾಣಿಪತ್ ಪೈಪ್‌ಲೈನ್ ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗುಜರಾತ್ ಕರಾವಳಿಯ ಮುಂದ್ರಾದಿಂದ ಹರಿಯಾಣದ ಪಾಣಿಪತ್‌ನಲ್ಲಿರುವ ಇಂಡಿಯನ್ ಆಯಿಲ್‌ನ ಸಂಸ್ಕರಣಾಗಾರಕ್ಕೆ ಕಚ್ಚಾ ತೈಲವನ್ನು ಸಾಗಿಸಲು ಈ ಯೋಜನೆ ನಿಯೋಜಿಸಲಾಗಿದೆ

ಈ ಪ್ರದೇಶದಲ್ಲಿ ರಸ್ತೆ ಮತ್ತು ರೈಲು ಮೂಲಸೌಕರ್ಯವನ್ನು ಬಲಪಡಿಸುವುದು, ಸುರೇಂದ್ರನಗರ-ರಾಜ್‌ಕೋಟ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವಿಕೆಯ ಯೋಜನೆಗಳನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ;  ಭಾವನಗರದ ನಾಲ್ಕು ಲೇನಿಂಗ್- ಹಳೆಯ ರಾ.ಹೆ.-8ಇ ನ ತಲಾಜಾ (ಪ್ಯಾಕೇಜ್-I);  ರಾ.ಹೆ-751 ರ ಪಿಪ್ಲಿ-ಭಾವನಗರ (ಪ್ಯಾಕೇಜ್-I).  ಅವರು ರಾ.ಹೆ.-27 ರ ಸಂತಾಲ್‌ಪುರ ಭಾಗಕ್ಕೆ ಸಮಖಿಯಲಿಯ ಸುಸಜ್ಜಿತ ರಸ್ತೆಬದಿಯೊಂದಿಗೆ ಆರು ಲೇನಿಂಗ್‌ ಪಥಕ್ಕೆ ಅಡಿಪಾಯ ಹಾಕಲಿದ್ದಾರೆ.

 

  • krishangopal sharma Bjp January 14, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷
  • krishangopal sharma Bjp January 14, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷🌹🌹🌷
  • krishangopal sharma Bjp January 14, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 14, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹
  • krishangopal sharma Bjp January 14, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷
  • रीना चौरसिया November 03, 2024

    ram
  • Jitender Kumar Haryana BJP State President July 02, 2024

    Can I get some financial help here any congress or BJP policy
  • Pradhuman Singh Tomar April 11, 2024

    BJP
  • Sunil Kumar Sharma April 09, 2024

    जय भाजपा 🚩 जय भारत
  • Sunil Kumar Sharma April 09, 2024

    जय भाजपा 🚩 जय भारत
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's first microbiological nanosat, developed by students, to find ways to keep astronauts healthy

Media Coverage

India's first microbiological nanosat, developed by students, to find ways to keep astronauts healthy
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಫೆಬ್ರವರಿ 2025
February 20, 2025

Citizens Appreciate PM Modi's Effort to Foster Innovation and Economic Opportunity Nationwide