Quoteಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ದ್ವೀಪಗಳಿಗೆ ಇಡುವುದರಿಂದ ಅವರಿಗೆ ಶಾಶ್ವತವಾಗಿ ಗೌರವ ಸಲ್ಲಿಸಿದಂತಾಗುತ್ತದೆ.
Quoteನಿಜ ಜೀವನದ ನಾಯಕರಿಗೆ ಗೌರವ ಮತ್ತು ಮನ್ನಣೆ ನೀಡಲು ಪ್ರಯತ್ನಶೀಲರಾಗಿರುವ ಪ್ರಧಾನಮಂತ್ರಿ
Quoteನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನೇತಾಜಿ ಕುರಿತ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 23 ರಂದು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ 21 ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಳಿಗ್ಗೆ 11 ಗಂಟೆಗೆ ಭಾಗವಹಿಸಲಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನೇತಾಜಿ ಕುರಿತು ನಿರ್ಮಿಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು 2018 ರಲ್ಲಿ ಪ್ರಧಾನಮಂತ್ರಿ ಅವರು ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಲು ರೋಸ್ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿತ್ತು. ನೇಲ್ ದ್ವೀಪ ಮತ್ತು ಹ್ಯಾವ್ಲಾಕ್ ದ್ವೀಪಗಳನ್ನು ಶಾಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿತ್ತು.

ದೇಶದ ನಿಜ ಜೀವನದ ನಾಯಕರಿಗೆ ಗೌರವ ಮತ್ತು ಮನ್ನಣೆ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಪ್ರಯತ್ನಶೀಲರಾಗಿದ್ದಾರೆ. ಇದೇ ಸ್ಫೂರ್ತಿಯೊಂದಿಗೆ ಸಾಗಿದ್ದಾರೆ. ಈ ದ್ವೀಪ ಸಮೂಹದ 21 ಅತಿ ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ 21 ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಅತಿ ದೊಡ್ಡ ಹೆಸರಿಲ್ಲದ ದ್ವೀಪಕ್ಕೆ ಮೊದಲ ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುತ್ತಿದ್ದು, ಎರಡನೇ ಅತಿ ದೊಡ್ಡ ದ್ವೀಪಕ್ಕೆ ಎರಡನೇ ಪರಮ್ ವೀರ್ ಚಕ್ರ ಪ್ರಶಸ್ತಿ ಪಡೆದವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ ಮತ್ತು ಇದೇ ರೀತಿಯಲ್ಲಿ ಹೆಸರು ಇಡಲಾಗುತ್ತಿದೆ. ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಸರ್ವಶ್ರೇಷ್ಠ ತ್ಯಾಗ ಮಾಡಿದ ನಮ್ಮ ವೀರರಿಗೆ ಈ ಹೆಜ್ಜೆಯು ಶಾಶ್ವತ ಗೌರವವಾಗಿದೆ.  

ಈ ದ್ವೀಪಗಳಿಗೆ 21 ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತ ಹೆಸರಿಡಲಾಗುತ್ತಿದೆ. ಮೇಜರ್ ಸೋಮನಾಥ್ ಶರ್ಮಾ, ಸುಬೇದಾರ್ ಮತ್ತು ಹೊನ್ನಿ ಕ್ಯಾಪ್ಟನ್ [ನಂತರ ಲಾನ್ಸ್ ನಾಯಕ್] ಕರಂ ಸಿಂಗ್ ಎಂಎಂ; 2ನೇ ಲೆಪ್ಟಿನೆಂಟ್ ಜನರಲ್ ರಾಮ ರಾಘೋಬ ರಾಣೆ; ನಾಯಕ್ ಜಡುನಾಥ್ ಸಿಂಗ್; ಕಂಪೆನಿ ಹವಾಲ್ದಾರ್ ಮೇಜರ್ ಪಿರು ಸಿಂಗ್: ಕ್ಯಾಪ್ಟನ್ ಜಿಎಸ್ ಸಲಾರಿಯಾ; ಲೆಪ್ಟಿನೆಂಟ್ ಕರ್ನಲ್ [ನಂತರ ಮೇಜರ್] ಧಾನ್ ಸಿಂಗ್ ಥಾಪ; ಸುಬೇದಾರ್ ಜೋಗಿಂದರ್ ಸಿಂಗ್; ಮೇಜರ್ ಶೈತಾನ್ ಸಿಂಗ್; ಸಿಕ್ಯೂಎಂಎಚ್. ಅಬ್ದುಲ್ ಹಮೀದ್; ಲೆಪ್ಟಿನೆಂಟ್ ಕರ್ನಲ್ ಅರ್ದೇಶೀರ್ ಬುರ್ಜೋರ್ಜಿ ತಾರಾಪೊರೆ; ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ; ಮೇಜರ್ ಹೊಶೈರ್ ಸಿಂಗ್; 2 ನೇ ಲೆಪ್ಟಿನೆಂಟ್ ಖೇತ್ರಾಪಲ್; ಫ್ಲೇಯಿಂಗ್ ಆಫಿಸರ್ ನಿರ್ಮಲ್ಜಿತ್ ಸಿಂಗ್ ಸೆಖೋನ್; ಮೇಜರ್ ರಾಮಸ್ವಾಮಿ ಪರಮೇಶ್ವರನ್; ನೈಬ್ ಸುಬೇದರಾರ್ ಬನಾ ಸಿಂಗ್; ಕ್ಯಾಪ್ಟನ್ ವಿಕ್ರಮ್ ಬತ್ರಾ; ಲೆಪ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ; ಸುಬೇದಾರ್ ಮೇಜರ್ [ನಂತರ ರೈಫಲ್ ಮ್ಯಾನ್] ಸಂಜಯ್ ಕುಮಾರ್; ಮತ್ತು ಸುಬೇದಾರ್ ಮೇಜರ್ ನಿವೃತ್ತ [ಹೊನ್ನಿ ಕ್ಯಾಪ್ಟನ್] ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್. 

 

  • BHARAT KUMAR MENON January 23, 2024

    🇮🇳🇮🇳🇮🇳Jai Sree Ram 🙏🙏🙏
  • shraddha singh January 27, 2023

    evrythinh is important for me in this app theres lot to do and lot read and explore thankyou
  • Sripati Singh January 25, 2023

    jai ho, Manniye Pradhanmantri jee
  • MONICA SINGH January 23, 2023

    Jai Hind🙏🌻🇮🇳
  • Dilip Kumar Das Rintu January 23, 2023

    দেশনায়ক, ভারত মাতার বীর সন্তান, ভারতের স্বাধীনতা সংগ্রামের মহানায়ক নেতাজি সুভাষ চন্দ্র বসু'র জন্মদিবসে শত কোটি প্ৰণাম। #NationSalutesNetaji #NetajiSubhasChandraBose #नेताजी_सुभाष_चंद्र_बोस
  • Mahendra singh Solanky January 23, 2023

    आज़ाद हिन्द फौज का गठन करने वाले महान स्वतंत्रता सेनानी नेताजी सुभाष चन्द्र बोस जी की जन्म-जयंती पर उन्हें विनम्र श्रद्धांजलि.. #SubhashChandraBose
  • Prabhat Kumar nawab January 23, 2023

    Good
  • Chandra Bhushan Pandey Savarkar January 22, 2023

    जय श्री परशुराम जय श्री राम जय श्री कृष्ण हर हर महादेव
  • babli vishwakarma January 22, 2023

    जय हो
  • अनूप कुमार January 22, 2023

    23 जनवरी बीर शहीद जाँबाज बेटों के नाम 🙏🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India Eyes Rs 3 Lakh Crore Defence Production By 2025 After 174% Surge In 10 Years

Media Coverage

India Eyes Rs 3 Lakh Crore Defence Production By 2025 After 174% Surge In 10 Years
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಮಾರ್ಚ್ 2025
March 26, 2025

Empowering Every Indian: PM Modi's Self-Reliance Mission