Quote6ಜಿ ಸಂಶೋಧನೆ ಮತ್ತು ಅಭಿವೃದ್ಧಿ ವೇದಿಕೆ ಮತ್ತು ಭಾರತ್ 6ಜಿ ಕುರಿತ ಸಮಗ್ರ ವರದಿ ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ
Quoteಇದು ದೇಶದಲ್ಲಿ ನಾವೀನ್ಯತೆ,ಸಾಮರ್ಥ್ಯ ವರ್ಧನೆ ಮತ್ತು ತ್ವರಿತ ತಂತ್ರಜ್ಞಾನ ಅಳವಡಿಕೆಯ ವಾತಾವರಣ ಸಶಕ್ತಗೊಳಿಸಲಿದೆ
Quote“ಕಾಲ್ ಬಿಫೋರ್ ಯು ಡಿಗ್’ ಆಪ್ ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ
Quoteಪಿಎಂ ಗತಿ ಶಕ್ತಿ ಅಡಿ “ಸಂಪೂರ್ಣ ಸರ್ಕಾರದ ವಿಧಾನ”ವನ್ನು ಈ ಆಪ್ ಒಳಗೊಂಡಿದೆ
Quoteಇದು ಸಂಭವನೀಯ ವ್ಯಾಪಾರ ನಷ್ಟದಿಂದ ರಕ್ಷಣೆ ನೀಡುತ್ತದೆ ಮತ್ತು ಅಗತ್ಯ ಸೇವೆಗಳಲ್ಲಿ ಕಡಿಮೆ ಅಡಚಣೆಯಿಂದಾಗಿ ನಾಗರಿಕರಿಗೆ ಉಂಟಾಗುವ ಅನಾನುಕೂಲತೆಗಳನ್ನು ತಗ್ಗಿಸಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ 2023 ರ ಮಾರ್ಚ್ 22 ರ ಅಪರಾಹ್ನ 12.30 ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ದೂರ ಸಂಪರ್ಕ ಸಂಘದ [ಐಟಿಯು] ಪ್ರದೇಶ ಕಚೇರಿ ಮತ್ತು ಭಾರತದ ನಾವೀನ್ಯತೆಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು “ಕಾಲ್ ಫಾರ್ ಯು ಡಿಗ್” ಆಪ್ ಲೋಕಾರ್ಪಣೆ ಮಾಡಲಿದ್ದು, ಇದೇ ಸಂದರ್ಭದಲ್ಲಿ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.

ಐಟಿಯು ವಿಶ್ವ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನಗಳ [ಐಸಿಟಿ] ವಲಯದ ವಿಶೇಷ ಸಂಸ್ಥೆಯಾಗಿದೆ. ಜಿನೆವಾದಲ್ಲಿ ಮುಖ್ಯ ಕಚೇರಿ ಇದ್ದು, ಇದರ ಸಂಪರ್ಕ ಜಾಲದಲ್ಲಿ ಕ್ಷೇತ್ರೀಯ ಅಧಿಕಾರಿಗಳು, ಪ್ರದೇಶ ಮತ್ತು ಪ್ರಾದೇಶಿಕ ಅಧಿಕಾರಿಗಳಿದ್ದಾರೆ. ಪ್ರದೇಶ ಕಚೇರಿ ತೆರೆಯುವ ಕುರಿತು 2022 ರ ಮಾರ್ಚ್ ನಲ್ಲಿ ಐಟಿಯು ಜೊತೆ ಆತಿಥ್ಯ ದೇಶವಾಗಿ ಭಾರತ ಸಹಿ ಹಾಕಿತ್ತು. ಭಾರತದ ಪ್ರದೇಶ ಕಚೇರಿಯಲ್ಲಿ ನಾವೀನ್ಯತೆಯ ಕೇಂದ್ರವಿದ್ದು, ಇದು ಐಟಿಯುನ ಇತರೆ ಕಚೇರಿಗಳಿಗಿಂತ ಭಿನ್ನವಾಗಿದೆ. ನವದೆಹಲಿಯ ಮೆಹ್ರೌಲಿಯ ಸೆಂಟರ್ ಫಾರ್ ಡವಲಪ್ಮೆಂಟ್ ಆಫ್ ಟೆಲಿಮೆಟಿಕ್ಸ್ [ಸಿ-ಡಾಟ್] ಕಚೇರಿಯ ಎರಡನೇ ಮಹಡಿಯಲ್ಲಿ ಸುಸಜ್ಜಿತವಾದ ಪ್ರದೇಶ ಕಚೇರಿಯನ್ನು  ಸಜ್ಜುಗೊಳಿಸಲಾಗಿದೆ. ಇದು ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀ ಲಂಕಾ, ಮಾಲ್ಡೀವ್ಸ್, ಆಫ್ಘಾನಿಸ್ತಾನ್ ಮತ್ತು ಇರಾನ್ ದೇಶಗಳಿಗೆ ಸೇವೆ ಸಲ್ಲಿಸಲಿದ್ದು, ಈ ರಾಷ್ಟ್ರಗಳ ನಡುವೆ ಸಮನ್ವಯತೆ ಮತ್ತು ಈ ಪ್ರದೇಶದಲ್ಲಿ ಪರಸ್ಪರ ಲಾಭದಾಯಕ ಆರ್ಥಿಕ ಸಹಕಾರವನ್ನು ಉತ್ತೇಜಿಸಲಿದೆ.

ಭಾರತ್ 6ಜಿ ಸಮಗ್ರ ವರದಿಯನ್ನು ಸಿದ್ಧಪಡಿಸಲು ತಂತ್ರಜ್ಞಾನ ನಾವೀನ್ಯತೆಯ ತಂಡವನ್ನು 2021 ರ ನವೆಂಬರ್ ನಲ್ಲಿ ರಚಿಸಲಾಗಿತ್ತು. ವಿವಿಧ ಸಚಿವಾಲಯಗಳು/ಇಲಾಖೆಗಳು, ಸಂಶೋಧಕರು ಮತ್ತು ಅಭಿವೃದ್ಧಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಪ್ರಾಮಾಣೀಕರಣ ಸಂಸ್ಥೆಗಳು, ದೂರ ಸಂಪರ್ಕ ಸೇವಾದಾತರನ್ನೊಳಗೊಂಡ ತಂಡದಿಂದ ಭಾರತದಲ್ಲಿ 6ಜಿ ಕ್ರಿಯಾ ಯೋಜನೆ ಮತ್ತು ಕೈಗಾರಿಕಾ ವಲಯದಿಂದ ನೀಲನಕ್ಷೆ ಸಿದ್ಧಪಡಿಸಲು ನಿರ್ಧರಿಸಲಾಗಿತ್ತು. ಶೈಕ್ಷಣಿಕ ಸಂಸ್ಥೆಗಳು, ಉದ್ಯಮಗಳು, ನವೋದ್ಯಮಗಳು, ಎಂಎಸ್ಎಂಇಗಳು ವಿಕಸನವಾಗುತ್ತಿರುವ ಐಸಿಟಿ ತಂತ್ರಜ್ಞಾನವನ್ನು ಪರೀಕ್ಷಿಸಿ ಮೌಲ್ಯ ಮಾಪನ ಮಾಡಲು 6ಜಿ ಪರೀಕ್ಷಾ ವೇದಿಕೆಯನ್ನು ಸ್ಥಾಪಿಸಲಾಗಿದೆ. ಇದು ದೇಶದಲ್ಲಿ ನಾವೀನ್ಯತೆ, ಸಾಮರ್ಥ್ಯ ವರ್ಧನೆ ಮತ್ತು ವೇಗದ ತಂತ್ರಜ್ಞಾನ ಅಳವಡಿಕೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಕಲ್ಪಿಸಲಿದೆ.  

ಪಿಎಂ ಗತಿಶಕ್ತಿ ಅಡಿಯಲ್ಲಿ ಸಮಗ್ರ ಯೋಜನೆ ಮತ್ತು ಮೂಲ ಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನ ಕುರಿತು ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ನಿದರ್ಶನವಾಗಿ ಕಾಲ್ ಬಿಫೋರ್ ಯು ಡಿಗ್ [ಸಿಬಿಯುಡಿ] ಆಪ್, ಆಪ್ಟಿಕಲ್ ಫೈಬರ್ ಕೇಬಲ್ ಗಳಂತಹ ಅಂಗರ್ತವಾಗಿರುವ ಸ್ವತ್ತುಗಳಿಗೆ ಹಾನಿಯಾಗುವುದನ್ನು ತಡೆಗಟ್ಟುವ ಸಾಧನವಾಗಿ ಕಾರ್ಯನಿರ್ವಹಿಸಲಿದೆ. ಸಮನ್ವಯತೆಯಿಲ್ಲದೇ ಅಗೆಯುವ ಮತ್ತು ಉತ್ಖನನದಿಂದಾಗಿ ಪ್ರತಿವರ್ಷ 3000 ಕೋಟಿ ರೂಪಾಯಿ ನಷ್ಟಕ್ಕೆ ಕಾರಣವಾಗುತ್ತಿದೆ. ಸಿಬಿಯುಡಿ ಮೊಬೈಲ್ ಆಫ್ ಉತ್ಖನನ ಮಾಡುವವರು ಮತ್ತು ಭೂ ಮಾಲೀಕರಿಗೆ ಎಸ್ಎಂಎಸ್/ಇಮೇಲ್ ಸೂಚನೆಗಳನ್ನು ಇದು ಕಳುಹಿಸುತ್ತದೆ ಮತ್ತು ಕರೆ ಮಾಡುತ್ತದೆ. ಯೋಜನಾಬದ್ಧವಾಗಿ ಉತ್ಖನನ ಮಾಡಿದರೆ ಭೂ ಗರ್ಭದಲ್ಲಿನ ಆಸ್ತಿಗಳ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿದಂತಾಗುತ್ತದೆ.

ದೇಶದ ಆಡಳಿತದಲ್ಲಿ ಸಂಪೂರ್ಣವಾಗಿ ಸರ್ಕಾರದ ವಿಧಾನವನ್ನು ಅಳವಡಿಸಿಕೊಂಡಿರುವುದನ್ನು ವಿವರಿಸುವ ಸಿಬಿಯುಡಿ ವ್ಯವಹಾರಗಳನ್ನು ಸುಲಭಗೊಳಿಸುವ ಮೂಲಕ ಎಲ್ಲಾ ಪಾಲುದಾರರಿಗೆ ಪ್ರಯೋಜನ ಒದಗಿಸುತ್ತದೆ. ಇದು ಸಂಭವನೀಯ ವ್ಯಾಪಾರ ನಷ್ಟದಿಂದ ರಕ್ಷಣೆ ನೀಡುತ್ತದೆ ಮತ್ತು ರಸ್ತೆ, ದೂರ ಸಂಪರ್ಕ, ನೀರು, ಅನಿಲ ಮತ್ತು ವಿದ್ಯುತ್ ನಂತಹ ಅಗತ್ಯ ಸೇವೆಗಳಲ್ಲಿ ಕಡಿಮೆ ಅಡಚಣೆಯಿಂದಾಗಿ ನಾಗರಿಕರಿಗೆ ಆಗುವ ಅನಾನುಕೂಲತೆಯನ್ನು ತಗ್ಗಿಸುತ್ತದೆ.

ಐಟಿಯು ಪ್ರದೇಶ ಕಚೇರಿಗಳ ವ್ಯಾಪ್ತಿಯ ಮಾಹಿತಿ ತಂತ್ರಜ್ಞಾನ/ದೂರ ಸಂಪರ್ಕ ಸಚಿವರು, ಐಟಿಯುನ ಮಹಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರೆ ಹಿರಿಯ ಅಧಿಕಾರಿಗಳು, ರಾಯಭಾರಿಗಳು, ಕೈಗಾರಿಕಾ ನಾಯಕರು, ನವೋದ್ಯಮಗಳು ಮತ್ತು ಎಂಎಸ್ಎಂಇ, ಶಿಕ್ಷಣ ವಲಯದ ನಾಯಕರು, ವಿಧ್ಯಾರ್ಥಿಗಳು ಮತ್ತು ಇತರೆ ಪಾಲುದಾರರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

 

  • N S Nandiesha reddy February 29, 2024

    Modi once again
  • Pt Deepak Rajauriya jila updhyachchh bjp fzd December 23, 2023

    जय
  • Vinay Jaiswal March 24, 2023

    जय हो नमों नामों 🙏
  • Gandhi Kumar March 23, 2023

    இந்து என்ற சொல்லால் என் இதயம் எல்லாம் நிறைந்து இருக்கின்ற இந்திய பிரதமர் நரேந்திர மோடி தமிழ்நாட்டில் ஜாதி ஒழிந்தது அந்த இந்து என்ற சொல்லால் இந்திய பிரதமரை எந்நாளும் நான் மறக்க மாட்டேன் ஜாதி தலைவிரித்து ஆடியது ஜாதிகள் இல்லையடி பாப்பா 50 ஆண்டு காலம் சொல்லி வந்தார்கள் இதைக் கேட்டே ஆண்டுகளில் அது மறைய தொடங்கியிருக்கிறது வாழ்க நரேந்திர மோடி
  • PRATAP SINGH March 22, 2023

    🇮🇳🇮🇳🇮🇳🇮🇳🇮🇳🇮🇳 वंदे मातरम् वंदे मातरम् 🇮🇳🇮🇳🇮🇳🇮🇳🇮🇳🇮🇳
  • अनन्त राम मिश्र March 22, 2023

    आप सभी को चैत्र नवरात्रि नवबर्ष की अनन्त हार्दिक शुभकामनाएं और हार्दिक बधाई!आप सभी के उज्जवल भविष्य की मंगल कामनाएं!
  • Kumar Pankaj March 22, 2023

    good morning sir thanks 🙏 happy birthday 🎈 COVID-19 to you.
  • Kuldeep Yadav March 22, 2023

    આદરણીય પ્રધામંત્રીશ્રી નરેન્દ્ર મોદીજી ને મારા નમસ્કાર મારુ નામ કુલદીપ અરવિંદભાઈ યાદવ છે. મારી ઉંમર ૨૪ વર્ષ ની છે. એક યુવા તરીકે તમને થોડી નાની બાબત વિશે જણાવવા માંગુ છું. ઓબીસી કેટેગરી માંથી આવતા કડીયા કુંભાર જ્ઞાતિના આગેવાન અરવિંદભાઈ બી. યાદવ વિશે. અમારી જ્ઞાતિ પ્યોર બીજેપી છે. છતાં અમારી જ્ઞાતિ ના કાર્યકર્તાને પાર્ટીમાં સ્થાન નથી મળતું. એવા એક કાર્યકર્તા વિશે જણાવું. ગુજરાત રાજ્ય ના અમરેલી જિલ્લામાં આવેલ સાવરકુંડલા શહેર ના દેવળાના ગેઈટે રહેતા અરવિંદભાઈ યાદવ(એ.બી.યાદવ). જન સંઘ વખત ના કાર્યકર્તા છેલ્લાં ૪૦ વર્ષ થી સંગઠનની જવાબદારી સંભાળતા હતા. ગઈ ૩ ટર્મ થી શહેર ભાજપના મહામંત્રી તરીકે જવાબદારી કરેલી. ૪૦ વર્ષ માં ૧ પણ રૂપિયાનો ભ્રષ્ટાચાર નથી કરેલો અને જે કરતા હોય એનો વિરોધ પણ કરેલો. આવા પાયાના કાર્યકર્તાને અહીંના ભ્રષ્ટાચારી નેતાઓ એ ઘરે બેસાડી દીધા છે. કોઈ પણ પાર્ટીના કાર્યકમ હોય કે મિટિંગ એમાં જાણ પણ કરવામાં નથી આવતી. એવા ભ્રષ્ટાચારી નેતા ને શું ખબર હોય કે નરેન્દ્રભાઇ મોદી દિલ્હી સુધી આમ નમ નથી પોચિયા એની પાછળ આવા બિન ભ્રષ્ટાચારી કાર્યકર્તાઓ નો હાથ છે. આવા પાયાના કાર્યકર્તા જો પાર્ટી માંથી નીકળતા જાશે તો ભવિષ્યમાં કોંગ્રેસ જેવો હાલ ભાજપ નો થાશે જ. કારણ કે જો નીચે થી સાચા પાયા ના કાર્યકર્તા નીકળતા જાશે તો ભવિષ્યમાં ભાજપને મત મળવા બોવ મુશ્કેલ છે. આવા ભ્રષ્ટાચારી નેતાને લીધે પાર્ટીને ભવિષ્યમાં બોવ મોટું નુકશાન વેઠવું પડશે. એટલે પ્રધામંત્રીશ્રી નરેન્દ્ર મોદીજી ને મારી નમ્ર અપીલ છે કે આવા પાયા ના અને બિન ભ્રષ્ટાચારી કાર્યકર્તા ને આગળ મૂકો બાકી ભવિષ્યમાં ભાજપ પાર્ટી નો નાશ થઈ જાશે. એક યુવા તરીકે તમને મારી નમ્ર અપીલ છે. આવા કાર્યકર્તાને દિલ્હી સુધી પોચડો. આવા કાર્યકર્તા કોઈ દિવસ ભ્રષ્ટાચાર નઈ કરે અને લોકો ના કામો કરશે. સાથે અતિયારે અમરેલી જિલ્લામાં બેફામ ભ્રષ્ટાચાર થઈ રહીયો છે. રોડ રસ્તા ના કામો સાવ નબળા થઈ રહિયા છે. પ્રજાના પરસેવાના પૈસા પાણીમાં જાય છે. એટલા માટે આવા બિન ભ્રષ્ટાચારી કાર્યકર્તા ને આગળ લાવો. અમરેલી જિલ્લામાં નમો એપ માં સોવ થી વધારે પોઇન્ટ અરવિંદભાઈ બી. યાદવ(એ. બી.યાદવ) ના છે. ૭૩ હજાર પોઇન્ટ સાથે અમરેલી જિલ્લામાં પ્રથમ છે. એટલા એક્ટિવ હોવા છતાં પાર્ટીના નેતાઓ એ અતિયારે ઝીરો કરી દીધા છે. આવા કાર્યકર્તા ને દિલ્હી સુધી લાવો અને પાર્ટીમાં થતો ભ્રષ્ટાચારને અટકાવો. જો ખાલી ભ્રષ્ટાચાર માટે ૩૦ વર્ષ નું બિન ભ્રષ્ટાચારી રાજકારણ મૂકી દેતા હોય તો જો મોકો મળે તો દેશ માટે શું નો કરી શકે એ વિચારી ને મારી નમ્ર અપીલ છે કે રાજ્ય સભા માં આવા નેતા ને મોકો આપવા વિનંતી છે એક યુવા તરીકે. બાકી થોડા જ વર્ષો માં ભાજપ પાર્ટી નું વર્ચસ્વ ભાજપ ના જ ભ્રષ્ટ નેતા ને લીધે ઓછું થતું જાશે. - અરવિંદ બી. યાદવ (એ.બી યાદવ) પૂર્વ શહેર ભાજપ મહામંત્રી જય હિન્દ જય ભારત જય જય ગરવી ગુજરાત આપનો યુવા મિત્ર લી. કુલદીપ અરવિંદભાઈ યાદવ
  • Babaji Namdeo Palve March 22, 2023

    सर नमस्कार गुढीपाडव्याच्या हार्दिक शुभेच्छासर हार्दिक शुभ कामनाए सर
  • Manju uniyal March 22, 2023

    भारत माता की तरफ से शुभ कामना विजय भवः
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India Doubles GDP In 10 Years, Outpacing Major Economies: IMF Data

Media Coverage

India Doubles GDP In 10 Years, Outpacing Major Economies: IMF Data
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಮಾರ್ಚ್ 2025
March 23, 2025

Appreciation for PM Modi’s Effort in Driving Progressive Reforms towards Viksit Bharat