ನವೆಂಬರ್ 15 ಭಗವಾನ್ ಬಿರ್ಸಾ ಮುಂಡಾ ಅವರ – ಜಂಜಾತಿಯ ಗೌರವ ದಿನವಾಗಿ ಆಚರಣೆ
ಬುಡಕಟ್ಟು ಸಂಸ್ಕೃತಿ ಮತ್ತು ಇತಿಹಾಸ ಸಂರಕ್ಷಣೆ ಮತ್ತು ಉತ್ತೇಜನದಲ್ಲಿ ಪ್ರಮುಖ ಪಾತ್ರವಹಿಸಲಿರುವ ಮ್ಯೂಸಿಯಂ
ಮ್ಯೂಸಿಯಂ ಭಗವಾನ್ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಪ್ರತಿಮೆ ಒಳಗೊಂಡಿದೆ
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗೂ ಪ್ರಾಮುಖ್ಯತೆ

ಭಾರತ ಸರ್ಕಾರ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಜಂಜಾತಿಯ ಗೌರವ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದೆ. ಅದರ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ನವೆಂಬರ್ 15ರಂದು ಬೆಳಗ್ಗೆ 9.45ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿ ಅವರು, ಬಡುಕಟ್ಟು ಸಮುದಾಯಗಳ ಅಮೂಲ್ಯ ಕೊಡುಗೆಯನ್ನು, ವಿಶೇಷವಾಗಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬಲಿದಾನ ಮಾಡಿದ್ದನ್ನು ಸದಾ ಸ್ಮರಿಸುತ್ತಾರೆ. 2016ರ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಮಂತ್ರಿ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ವಹಿಸಿದ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು ಮತ್ತು ಧೀರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಮ್ಯೂಸಿಯಂ ಕಟ್ಟಡಗಳನ್ನು ಲೋಕಾರ್ಪಣೆ ಮಾಡಬೇಕು. ಇದರಿಂದ ಮುಂಬರುವ ಪೀಳಿಗೆ ಬುಡಕಟ್ಟು ಜನರು ದೇಶಕ್ಕೆ ನೀಡಿರುವ ಕೊಡುಗೆಯನ್ನು ತಿಳಿಯಲು ಸಹಕಾರಿಯಾಗಲಿದೆ ಎಂದಿದ್ದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಈವರೆಗೆ 10 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ. ಈ ಮ್ಯೂಸಿಯಂಗಳು ನಾನಾ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ಸಹಾಯಕವಾಗಲಿದೆ.   

ಭಗವಾನ್ ಬಿರ್ಸಾ ಮುಂಡಾ ಅವರ ಮ್ಯೂಸಿಯಂ ಅನ್ನು ಜಾರ್ಖಂಡ್ ಸರ್ಕಾರದ ಸಹಯೋಗದಲ್ಲಿ ಭಗವಾನ್ ಬಿರ್ಸಾ ಮುಂಡಾ ಬಲಿದಾನಗೈಯ್ದ ರಾಂಚಿಯ ಹಳೆಯ ಕಾರಾಗೃಹದ ಜಾಗದಲ್ಲಿ ನಿರ್ಮಿಸಲಾಗಿದೆ. ಇದು ಬುಡಕಟ್ಟು ಸಮುದಾಯ ಮತ್ತು ರಾಷ್ಟ್ರಕ್ಕೆ ಸಲ್ಲಿಸಿದ ಬಲಿದಾನಕ್ಕೆ ಸೂಚಿಸುವ ಗೌರವವಾಗಿದೆ. ಬುಡಕಟ್ಟು ಸಂಸ್ಕೃತಿ ಮತ್ತು ಇತಿಹಾಸ, ಸಂರಕ್ಷಣೆ ಮತ್ತು ಉತ್ತೇಜನ ನಿಟ್ಟಿನಲ್ಲಿ ಈ ಮ್ಯುಸಿಯಂ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ ಇದು ನಮ್ಮ ಅರಣ್ಯಗಳನ್ನು, ಭೂಮಿ ಹಕ್ಕುಗಳನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಲು ಆದಿವಾಸಿಗಳು ಹೇಗೆ ಹೋರಾಟ ಮಾಡಿದರು ಎಂಬುದನ್ನು ಸೂಚಿಸುತ್ತದೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಶೌರ್ಯ ಮತ್ತು ಬಲಿದಾನವನ್ನು ಬಿಂಬಿಸುತ್ತದೆ.  

ಭಗವಾನ್ ಬಿರ್ಸಾ ಮುಂಡಾ ಅವರೊಂದಿಗೆ ಮ್ಯೂಸಿಯಂನಲ್ಲಿ ನಾನಾ ಚಳವಳಿಗಳಲ್ಲಿ ಭಾಗಿಯಾಗಿದ್ದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಾದ ಶಾಹಿದ್ ಬುಧು ಭಗತ್, ಸಿಧು-ಕನ್ಹು, ನೀಲಂಬರ್-ಪೀತಾಂಬರ, ದಿವಾ-ಕಿಸುನ್, ತೆಲಂಗಾ ಖಾದಿಯಾ, ಗಯಾ ಮುಂಡಾ, ಜಾತ್ರಾ ಭಗತ್, ಪೊಟೊ ಹೆಚ್, ಭಾಗೀರಥ ಮಾಂಝಿ, ಗಂಗಾ ನಾರಾಯಣ ಸಿಂಗ್ ಮತ್ತಿತರರ ಕೊಡುಗೆಯನ್ನೂ ಬಿಂಬಿಸಲಾಗುತ್ತಿದೆ. ಮ್ಯೂಸಿಯಂ ಭಗವಾನ್ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಮೂರ್ತಿ ಒಳಗೊಂಡಿದೆ ಮತ್ತು ಆ ಭಾಗದ ಇತರ ಸ್ವಾತಂತ್ರ್ಯ ಹೋರಾಟಗಾರರ 9 ಅಡಿ ಎತ್ತರದ ಮೂರ್ತಿಗಳಿವೆ.

ಅದಕ್ಕೆ ಹೊಂದಿಕೊಂಡ 25 ಎಕರೆ ಪ್ರದೇಶದಲ್ಲಿ ಸ್ಮೃತಿ ಉದ್ಯಾನವನ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಸಂಗೀತ ಕಾರಂಜಿ, ಫುಡ್ ಕೋರ್ಟ್, ಮಕ್ಕಳ ಉದ್ಯಾನವನ, ಇನ್ಫಿನಿಟಿ ಪೋಲ್, ಉದ್ಯಾನವನ ಮತ್ತು ಇತರ ಮನರಂಜನಾ ಸೌಕರ್ಯಗಳಿವೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಕಾರ್ಯಕ್ರಮದಲ್ಲಿ ಭಾಗವಹಿಸುವರು.  

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”