Quoteಶಿಲ್ಲಾಂಗ್ ನ ನಿಯ್ ಗ್ರಿಮ್ಸ್ ನಲ್ಲಿ 7500ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 7ರಂದು ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಜನೌಷಧಿ ದಿನ’ದ ಆಚರಣೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಶಿಲ್ಲಾಂಗ್ ನ ನಯ್ ಗ್ರಿಮ್ಸ್ ನಲ್ಲಿ 7500ನೇ ಜನೌಷಧ ಕೇಂದ್ರವನ್ನೂ ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಬಾಧ್ಯಸ್ಥರ ಅದ್ಭುತ ಕಾರ್ಯವನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನೂ ಪ್ರದಾನ ಮಾಡಲಿದ್ದಾರೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ

ಗುಣಮಟ್ಟದ ಔಷಧಗಳನ್ನು ಕೈಗೆಟುಕುವ ದರದಲ್ಲಿ ಪೂರೈಸಲು ಈ ಉಪಕ್ರಮ ಪ್ರಯತ್ನಿಸುತ್ತದೆ. ಈ ಯೋಜನೆಯಡಿ ಮಳಿಗೆಗಳ ಸಂಖ್ಯೆ 7499ಕ್ಕೆ ಏರಿದ್ದು, ದೇಶದ ಎಲ್ಲಾ ಜಿಲ್ಲೆಗಳೂ ಕೇಂದ್ರಗಳಿವೆ. 2020-21ರ ಆರ್ಥಿಕ ವರ್ಷದಲ್ಲಿ (ಮಾರ್ಚ್ 4, 2021 ರವರೆಗೆ) ಆಗಿರುವ ಔಷಧ ಮಾರಾಟದಿಂದಾಗಿ ಶ್ರೀಸಾಮಾನ್ಯರಿಗೆ ಅಂದಾಜು 3600 ಕೋಟಿ ರೂ. ಉಳಿತಾಯವಾಗಿದೆ, ಏಕೆಂದರೆ ಈ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳ ದರಕ್ಕಿಂತ ಶೇ. 50 ರಿಂದ ಶೇ.90ರಷ್ಟು ಅಗ್ಗವಾಗಿವೆ.

ಜನೌಷಧಿ ದಿವಸದ ಬಗ್ಗೆ

ಜನೌಷಧಿಯ ಬಗ್ಗೆ ಹೆಚ್ಚಿನ ಜಾಗತಿಯನ್ನು ಉಂಟು ಮಾಡುವ ಸಲುವಾಗಿ, ಮಾರ್ಚ್ 1ರಿಂದ 7ರವರೆಗೆ ಇಡೀ ವಾರ ‘ಜನೌಷಧಿ ಸಪ್ತಾಹ’ವನ್ನು ‘ಜನೌಷಧಿ-ಸೇವೆಯೂ - ಉದ್ಯೋಗವೂ’ ಎಂಬ ಹೆಸರಲ್ಲಿ ದೇಶದಾದ್ಯಂತ ಆಚರಿಸಲಾಗುತ್ತದೆ. ಸಪ್ತಾಹದ ಕೊನೆಯ ದಿನ ಅಂದರೆ ಮಾರ್ಚ್ 7ರಂದು ‘ಜನೌಷಧ ದಿನ’ ಆಚರಿಸಲಾಗುತ್ತದೆ.

  • शिवकुमार गुप्ता February 02, 2022

    जय भारत
  • शिवकुमार गुप्ता February 02, 2022

    जय हिंद
  • शिवकुमार गुप्ता February 02, 2022

    जय श्री सीताराम
  • शिवकुमार गुप्ता February 02, 2022

    जय श्री राम
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How India is upgrading its ‘first responder’ status with ‘Operation Brahma’ after Myanmar quake

Media Coverage

How India is upgrading its ‘first responder’ status with ‘Operation Brahma’ after Myanmar quake
NM on the go

Nm on the go

Always be the first to hear from the PM. Get the App Now!
...
PM reflects on the immense peace that fills the mind with worship of Devi Maa in Navratri
April 01, 2025

The Prime Minister Shri Narendra Modi today reflected on the immense peace that fills the mind with worship of Devi Maa in Navratri. He also shared a Bhajan by Pandit Bhimsen Joshi.

He wrote in a post on X:

“नवरात्रि पर देवी मां की आराधना मन को असीम शांति से भर देती है। माता को समर्पित पंडित भीमसेन जोशी जी का यह भावपूर्ण भजन मंत्रमुग्ध कर देने वाला है…”