ಗೌರವಾನ್ವಿತರೇ,

ನಮಸ್ಕಾರ!

ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಗೆ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ.

ಕಳೆದ 2 ದಿನಗಳಲ್ಲಿ, ಈ ಶೃಂಗಸಭೆಯಲ್ಲಿ 120 ಕ್ಕೂ ಹೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳು ಭಾಗವಹಿಸಿವೆ - ಇದು ಜಾಗತಿಕ ದಕ್ಷಿಣದ ಅತಿದೊಡ್ಡ ವರ್ಚುವಲ್ ಸಭೆಯಾಗಿದೆ.

ಈ ಸಮಾರೋಪ ಅಧಿವೇಶನದಲ್ಲಿ ನಿಮ್ಮ ನಿಮ್ಮೊಂದಿಗಿರಲು ನಾನು ಹೆಮ್ಮೆಪಡುತ್ತೇನೆ.

ಗೌರವಾನ್ವಿತರೇ,

ಕಳೆದ 3 ವರ್ಷಗಳು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಷ್ಟಕರವಾಗಿದ್ದವು.

ಕೋವಿಡ್ ಸಾಂಕ್ರಾಮಿಕ ರೋಗದ ಸವಾಲುಗಳು, ಇಂಧನ, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ನಮ್ಮ ಅಭಿವೃದ್ಧಿ ಪ್ರಯತ್ನಗಳ ಮೇಲೆ ಪರಿಣಾಮ ಬೀರಿವೆ.

ಆದಾಗ್ಯೂ, ಹೊಸ ವರ್ಷದ ಪ್ರಾರಂಭವು ಹೊಸ ಭರವಸೆಯ ಸಮಯವಾಗಿದೆ. ಆದ್ದರಿಂದ ನಾನು ಮೊದಲು ನಿಮ್ಮೆಲ್ಲರಿಗೂ ಸಂತೋಷದ, ಆರೋಗ್ಯಕರ, ಶಾಂತಿಯುತ, ಸುರಕ್ಷಿತ ಮತ್ತು ಯಶಸ್ವಿ 2023 ಗಾಗಿ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಗೌರವಾನ್ವಿತರೇ,

ನಾವೆಲ್ಲರೂ ಜಾಗತೀಕರಣದ ತತ್ವವನ್ನು ಮೆಚ್ಚುತ್ತೇವೆ. ಭಾರತದ ತತ್ವಶಾಸ್ತ್ರವು ಯಾವಾಗಲೂ ಜಗತ್ತನ್ನು ಒಂದು ಕುಟುಂಬವಾಗಿ ನೋಡಿದೆ.
ಆದಾಗ್ಯೂ, ಅಭಿವೃದ್ಧಿಶೀಲ ದೇಶಗಳು ಹವಾಮಾನ ಬಿಕ್ಕಟ್ಟು ಅಥವಾ ಸಾಲದ ಬಿಕ್ಕಟ್ಟನ್ನು ಸೃಷ್ಟಿಸದ ಜಾಗತೀಕರಣವನ್ನು ಬಯಸುತ್ತವೆ.

ಲಸಿಕೆಗಳ ಅಸಮಾನ ವಿತರಣೆ ಅಥವಾ ಅತಿಯಾದ ಕೇಂದ್ರೀಕೃತ ಜಾಗತಿಕ ಪೂರೈಕೆ ಸರಪಳಿಗಳಿಗೆ ಕಾರಣವಾಗದ ಜಾಗತೀಕರಣವನ್ನು ನಾವು ಬಯಸುತ್ತೇವೆ.

ಒಟ್ಟಾರೆ ಮನುಕುಲಕ್ಕೆ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ತರುವ ಜಾಗತೀಕರಣವನ್ನು ನಾವು ಬಯಸುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು 'ಮಾನವ ಕೇಂದ್ರಿತ ಜಾಗತೀಕರಣ'ವನ್ನು ಬಯಸುತ್ತೇವೆ.

ಗೌರವಾನ್ವಿತರೇ,

ನಾವು ಅಭಿವೃದ್ಧಿಶೀಲ ರಾಷ್ಟ್ರಗಳು ಅಂತಾರಾಷ್ಟ್ರೀಯ ಭೂದೃಶ್ಯದ ಹೆಚ್ಚುತ್ತಿರುವ ವಿಘಟನೆಯ ಬಗ್ಗೆ ಕಾಳಜಿ ವಹಿಸುತ್ತೇವೆ.

ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ನಮ್ಮ ಅಭಿವೃದ್ಧಿ ಆದ್ಯತೆಗಳ ಮೇಲೆ ಕೇಂದ್ರೀಕರಿಸುವುದರಿಂದ ನಮ್ಮನ್ನು ಬೇರೆಡೆಗೆ ಸೆಳೆಯುತ್ತವೆ.

ಅವು ಆಹಾರ, ಇಂಧನ, ರಸಗೊಬ್ಬರಗಳು ಮತ್ತು ಇತರ ಸರಕುಗಳ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಏರಿಳಿತಗಳಿಗೆ ಕಾರಣವಾಗುತ್ತವೆ.

ಈ ಭೌಗೋಳಿಕ ರಾಜಕೀಯ ವಿಘಟನೆಯನ್ನು ಪರಿಹರಿಸಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಬ್ರೆಟನ್ ವುಡ್ಸ್ ಸಂಸ್ಥೆಗಳು ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಮೂಲಭೂತ ಸುಧಾರಣೆ ನಮಗೆ ತುರ್ತಾಗಿ ಅಗತ್ಯವಿದೆ.

ಈ ಸುಧಾರಣೆಗಳು ಅಭಿವೃದ್ಧಿಶೀಲ ಜಗತ್ತಿನ ಕಾಳಜಿಗಳಿಗೆ ಧ್ವನಿ ನೀಡುವತ್ತ ಗಮನ ಹರಿಸಬೇಕು ಮತ್ತು 21 ನೇ ಶತಮಾನದ ವಾಸ್ತವಗಳನ್ನು ಪ್ರತಿಬಿಂಬಿಸಬೇಕು.

ಭಾರತದ ಜಿ 20 ಅಧ್ಯಕ್ಷತೆಯು ಈ ಪ್ರಮುಖ ವಿಷಯಗಳ ಬಗ್ಗೆ ಜಾಗತಿಕ ದಕ್ಷಿಣದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತದೆ.

ಗೌರವಾನ್ವಿತರೇ,

ತನ್ನ ಅಭಿವೃದ್ಧಿ ಪಾಲುದಾರಿಕೆಯಲ್ಲಿ, ಭಾರತದ ವಿಧಾನವು ಸಮಾಲೋಚನಾತ್ಮಕ, ಫಲಿತಾಂಶ ಆಧಾರಿತ, ಬೇಡಿಕೆ ಚಾಲಿತ, ಜನ ಕೇಂದ್ರಿತ ಮತ್ತು ಪಾಲುದಾರ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುತ್ತದೆ.

ಜಾಗತಿಕ ದಕ್ಷಿಣದ ದೇಶಗಳು ಪರಸ್ಪರರ ಅಭಿವೃದ್ಧಿಯ ಅನುಭವಗಳಿಂದ ಕಲಿಯಲು ಬಹಳಷ್ಟಿದೆ ಎಂದು ನಾನು ದೃಢವಾಗಿ ನಂಬುತ್ತೇನೆ.

ಭಾರತವು " ಜಾಗತಿಕ-ದಕ್ಷಿಣ ಉತೃಷ್ಟತಾ ಕೇಂದ್ರ" ಅನ್ನು ಸ್ಥಾಪಿಸಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ.

ಈ ಸಂಸ್ಥೆಯು ನಮ್ಮ ಯಾವುದೇ ದೇಶಗಳ ಅಭಿವೃದ್ಧಿ ಪರಿಹಾರಗಳು ಅಥವಾ ಉತ್ತಮ ಅಭ್ಯಾಸಗಳ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳುತ್ತದೆ, ಇದನ್ನು ಜಾಗತಿಕ ದಕ್ಷಿಣದ ಇತರ ಸದಸ್ಯರಲ್ಲಿ ಅಳೆಯಬಹುದು ಮತ್ತು ಕಾರ್ಯಗತಗೊಳಿಸಬಹುದು.

ಉದಾಹರಣೆಗೆ, ವಿದ್ಯುನ್ಮಾನ ಪಾವತಿಗಳು, ಆರೋಗ್ಯ, ಶಿಕ್ಷಣ ಅಥವಾ ಇ-ಆಡಳಿತದಂತಹ ಕ್ಷೇತ್ರಗಳಲ್ಲಿ ಭಾರತ ಅಭಿವೃದ್ಧಿಪಡಿಸಿದ ಡಿಜಿಟಲ್ ಸಾರ್ವಜನಿಕ ಸರಕುಗಳು ಇತರ ಅನೇಕ ಅಭಿವೃದ್ಧಿಶೀಲ ದೇಶಗಳಿಗೆ ಉಪಯುಕ್ತವಾಗಬಹುದು.

ಭಾರತವು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪರಮಾಣು ಶಕ್ತಿಯಂತಹ ಕ್ಷೇತ್ರಗಳಲ್ಲಿಯೂ ಹೆಚ್ಚಿನ ದಾಪುಗಾಲು ಇಟ್ಟಿದೆ. ಇತರ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ನಮ್ಮ ಪರಿಣತಿಯನ್ನು ಹಂಚಿಕೊಳ್ಳಲು ನಾವು 'ಜಾಗತಿಕ-ದಕ್ಷಿಣ ವಿಜ್ಞಾನ ಮತ್ತು ತಂತ್ರಜ್ಞಾನ ಉಪಕ್ರಮ'ವನ್ನು ಪ್ರಾರಂಭಿಸುತ್ತೇವೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಭಾರತದ 'ಲಸಿಕೆ ಮೈತ್ರಿ' ಉಪಕ್ರಮವು 100 ಕ್ಕೂ ಹೆಚ್ಚು ದೇಶಗಳಿಗೆ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಪೂರೈಸಿತು.

ನಾನು ಈಗ ಹೊಸ 'ಆರೋಗ್ಯ ಮೈತ್ರಿ' ಯೋಜನೆಯನ್ನು ಘೋಷಿಸಲು ಬಯಸುತ್ತೇನೆ. ಈ ಯೋಜನೆಯ ಅಡಿಯಲ್ಲಿ, ನೈಸರ್ಗಿಕ ವಿಪತ್ತುಗಳು ಅಥವಾ ಮಾನವೀಯ ಬಿಕ್ಕಟ್ಟಿನಿಂದ ಬಾಧಿತವಾದ ಯಾವುದೇ ಅಭಿವೃದ್ಧಿಶೀಲ ದೇಶಕ್ಕೆ ಭಾರತವು ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಒದಗಿಸುತ್ತದೆ.

ಗೌರವಾನ್ವಿತರೇ,

ನಮ್ಮ ರಾಜತಾಂತ್ರಿಕ ಧ್ವನಿಯನ್ನು ಸಮನ್ವಯಗೊಳಿಸಲು, ನಮ್ಮ ವಿದೇಶಾಂಗ ಸಚಿವಾಲಯಗಳ ಯುವ ಅಧಿಕಾರಿಗಳನ್ನು ಸಂಪರ್ಕಿಸಲು ನಾನು ' ಜಾಗತಿಕ-ದಕ್ಷಿಣ ಯುವ ರಾಜತಾಂತ್ರಿಕರ ವೇದಿಕೆ'ಯನ್ನು ಪ್ರಸ್ತಾಪಿಸುತ್ತೇನೆ.

ಅಭಿವೃದ್ಧಿಶೀಲ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತವು ' ಜಾಗತಿಕ-ದಕ್ಷಿಣ ವಿದ್ಯಾರ್ಥಿವೇತನಗಳು' ಅನ್ನು ಸಹ ಸ್ಥಾಪಿಸಲಿದೆ.

ಗೌರವಾನ್ವಿತರೇ,

ಇಂದಿನ ಅಧಿವೇಶನದ ವಿಷಯವು ಭಾರತದ ಪ್ರಾಚೀನ ಜ್ಞಾನದಿಂದ ಪ್ರೇರಿತವಾಗಿದೆ.

ಮನುಕುಲಕ್ಕೆ ತಿಳಿದಿರುವ ಅತ್ಯಂತ ಹಳೆಯ ಗ್ರಂಥವಾದ ಋಗ್ವೇದದ ಒಂದು ಪ್ರಾರ್ಥನೆಯು ಹೀಗೆ ಹೇಳುತ್ತದೆ:

ಸಂವಧ್ವಂ ಸಂವಾದ್ ಸಾನ್ ವೊ ಮಾನಸಿ ಜತಮ್

ಇದರರ್ಥ: ನಾವು ಒಟ್ಟಿಗೆ ಬರೋಣ, ಒಟ್ಟಿಗೆ ಮಾತನಾಡೋಣ ಮತ್ತು ನಮ್ಮ ಮನಸ್ಸು ಸಾಮರಸ್ಯದಿಂದ ಇರಲಿ.

ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, 'ಧ್ವನಿಯ ಏಕತೆ, ಉದ್ದೇಶದ ಏಕತೆ'.

ಈ ಉತ್ಸಾಹದಲ್ಲಿ, ನಿಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ.

ಧನ್ಯವಾದಗಳು!

 

 

 

  • अनन्त राम मिश्र January 22, 2023

    जय हो
  • Arti D Patel January 20, 2023

    स्पोर्ट्स एक स्किल है और ये एक स्वभाव भी है। स्पोर्ट्स एक टैलेंट है, और ये एक संकल्प भी है। - प्रधानमंत्री श्री @narendramodi जी #HamaraAppNamoApp
  • Pardeep Lohaniwal January 20, 2023

    Jai Shree Ram ji 🙏🙏
  • Pardeep Lohaniwal January 20, 2023

    jai Mata Di 🙏
  • Gautam ramdas Khandagale January 20, 2023

    jay namo
  • Jayakumar G January 19, 2023

    🙏🙏🙏
  • January 17, 2023

    Dear Sir/Ma
  • Babaji Namdeo Palve January 16, 2023

    हार्दिक शुभ कामनाए सर बहुत बहुत बाधाई सर
  • Umakant Mishra January 14, 2023

    happy makar Sankranti
  • Sanjay Zala January 14, 2023

    🌈 🌈 Remembers In A Best Wishes Of A Over All In A _ 'WORLDWIDE' Cosponsored On A _ 'KITES' Festival Absolutely In A 🌈 🌈
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
For PM Modi, women’s empowerment has always been much more than a slogan

Media Coverage

For PM Modi, women’s empowerment has always been much more than a slogan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಮಾರ್ಚ್ 2025
March 08, 2025

Citizens Appreciate PM Efforts to Empower Women Through Opportunities