ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತನಾಮರಲ್ಲಿ ಒಬ್ಬರಾದ ಪಂಡಿತ್ ಜಸ್ರಾಜ್ ಅವರಿಗೆ ಅವರ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸುತ್ತ ಮಾತನಾಡಿದರು.
ಪಂಡಿತ್ ಜಸರಾಜ್ ಅವರ ಚೇತನವನ್ನು, ಅವರ ಮಗಳು ದುರ್ಗಾ ಜಸ್ರಾಜ್ ಹಾಗೂ ಪಂಡಿತ್ ಶಾರಂಗ್ ದೇವ್ ಅವರು ಜೀವಂತವಾಗಿರಿಸುವಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಎಂದು ಪಂಡಿತ್ ಜಸ್ ರಾಜ್ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಆನ್ಲೈನಿನಲ್ಲಿ ಉದ್ಘಾಟಿಸುತ್ತ, ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಭಾರತೀಯ ಋಷಿ ಮುನಿಗಳು ಭಾರತೀಯ ಸಂಗೀತ ಪರಂಪರೆಯ ಕುರಿತು ಮಾತನಾಡಿದರು. ಕಾಸ್ಮಿಕ್ ಶಕ್ತಿಯನ್ನು ಅನುಭವಿಸಲು ಹಾಗೂ ಬ್ರಹ್ಮಾಂಡದಲ್ಲಿ ಚಲಿಸಲು, ಸಂಗೀತದ ಹರಿವನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಭಾರತೀಯ ಸಂಗೀತದ ಹೆಗ್ಗಳಿಕೆಯನ್ನು ಹೇಳಿದರು. ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ವಿಭಿನ್ನವಾಗಿಸುವುದು ಹೇಗೆಂದರೆ, ಈ ಸಂಗೀತವು, ಜಾಗತಿಕ ಕರ್ತವ್ಯಗಳ ಪ್ರಜ್ಞೆಯನ್ನು ಸಮಷ್ಟಿಯೊಂದಿಗೆ ಬಾಂಧವ್ಯ ಬೆಸೆಯುವ ಮಾಧ್ಯಮವಾಗಿದೆ ಎಂದು ಶ್ಲಾಘಿಸಿದರು.
![](https://cdn.narendramodi.in/cmsuploads/0.16340200_1643376195_pm-s-address-at-the-launch-of-pandit-jasraj-cultural-foundationin1.jpg)
ಭಾರತೀಯ ಕಲೆ, ಸಂಸ್ಕೃತಿ ಹಾಗೂ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಸಂರಕ್ಷಿಸುವ ಪಂಡಿತ್ ಜಸ್ರಾಜ್ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ತಂತ್ರಜ್ಞಾನದ ಕಾಲದಲ್ಲಿ ಪ್ರತಿಷ್ಠಾನವು ಎರಡು ಮಹತ್ವದ ಅಂಶಗಳೆಡೆ ಗಮನ ನೀಡಲಿ ಎಂದು ಅವರು ಆಶಿಸಿದರು. ಮೊದಲಿಗೆ ಜಾಗತಿಕ ದಿನಮಾನದಲ್ಲಿ ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದೂಸ್ತಾನಿ ಸಂಗೀತ ಪ್ರಕಾರವು ತನ್ನ ಅಸ್ಮಿತೆಯನ್ನು ಪ್ರತಿಪಾದಿಸಬೇಕು. ಯೋಗ ದಿನಾಚರಣೆಯಿಂದಾಗಿ ಜಗತ್ತಿಗೆ ಭಾರತೀಯ ಪರಂಪರೆಯ ಸಿರಿವಂತಿಕೆಯ ಲಾಭವಾಗಿದೆ. ಹಾಗೆಯೇ ಭಾರತೀಯ ಸಂಗೀತಕ್ಕೂ ತನ್ನದೇ ಆದ ಶಕ್ತಿ, ಸಾಮರ್ಥ್ಯ ಇದೆ. ಮನುಷ್ಯನ ಮನಸಿನಾಳಕ್ಕೆ ಇಳಿಯುವ, ಪರಿವರ್ತಿಸುವ ಸಾಮರ್ಥ್ಯ ಭಾರತೀಯ ಸಂಗೀತಕ್ಕೆ ಇದೆ ಎಂದು ಪ್ರತಿಪಾದಿಸದರು.
ಜಗತ್ತಿನಲ್ಲಿರುವ ಪ್ರತಿ ಮನುಷ್ಯನಿಗೂ ಭಾರತೀಯ ಸಂಗೀತ ಪರಂಪರೆಯನ್ನು ಅರಿಯುವ, ಕಲಿಯುವ ಸಾಧ್ಯತೆ ಇದೆ. ಸಂಗೀತದ ಲಾಭಗಳನ್ನು ಪಡೆಯುವಂತಾಗಬೇಕು. ಹಾಗಾಗಲಿ ಎಂಬ ಹೊಣೆಗಾರಿಕೆ ನಮ್ಮೆಲ್ಲರ ಹೆಗಲಿನ ಮೇಲಿದೆ ಎಂದು ಹೇಳಿದರು.
ಎರಡನೆಯದಾಗಿ, ಪ್ರಧಾನಮಂತ್ರಿ ಅವರು ಇಂದಿನ ಯುಗವು ತಂತ್ರಜ್ಞಾನ ಯುಗವಾಗಿದೆ. ಬದುಕಿನ ಎಲ್ಲ ಆಯಾಮಗಳನ್ನೂ ತಂತ್ರಜ್ಞಾನದಿಂದ ಪ್ರಭಾವಿತಗೊಂಡಿದೆ. ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಕ್ರಾಂತಿ, ಸಂಗೀತ ಕ್ಷೇತ್ರದಲ್ಲಿಯೂ ಆಗಬೇಕು. ಸಂಗೀತಕ್ಕೆಂದೇ ಮೀಸಲಾಗಿರಿಸಬಹುದಾದ ಕೆಲವು ಸ್ಟಾರ್ಟ್ಅಪ್ಗಳನ್ನು ಮಾಡಲು ಕರೆ ನೀಡಿದರು. ಭಾರತೀಯ ವಾದ್ಯಗಳು, ಸಂಗೀತದ ರಿವಾಜುಗಳನ್ನು ಒಳಗೊಂಡಿರಬೇಕು ಎಂಬ ಸಲಹೆಯನ್ನೂ ನೀಡಿದರು.
ಕಾಶಿಯಂಥ ನಗರವನ್ನು ಪುನಃಶ್ಚೇತನಗೊಳಿಸಿದ್ದನ್ನು, ಪುನರ್ನಿರ್ಮಾಣ ಮಾಡಿರುವುದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಯವರು ದೇಶದಲ್ಲಿ ಹಾಗೆ ಕಲೆ ಮತ್ತು ಸಂಸ್ಕೃತಿಯ ಕೇಂದ್ರಗಳನ್ನು ಪುನರ್ಸ್ಥಾಪಿಸುವ ಕುರಿತು ಮಾತನಾಡಿದರು. ಪ್ರಕೃತಿ ರಕ್ಷಣೆ ಹಾಗೂ ನಿಸರ್ಗ ಪ್ರೀತಿಯಿಂದ ಜಗತ್ತಿಗೇ ಆಭರತವು ತನ್ನ ಭವಿತವ್ಯವನ್ನು ಸುರಕ್ಷಿತಗೊಳಿಸಿರುವ ಪರಿಯನ್ನು ತೋರಿದೆ. ಪರಂಪರೆಯೊಂದಿಗೆ ಭಾರತದ ಪ್ರಗತಿಯನ್ನು ತೋರುತ್ತಿರುವುದು, ‘ಸಬ್ಕಾ ಪ್ರಯಾಸ್’ ಪ್ರತಿಯೊಬ್ಬರ ಪರಿಶ್ರಮದ ಫ್ರತಿಫಲವೇ ಆಗಿದೆ ಎಂದು ಪ್ರತಿಪಾದಿಸಿದರು.
आज पंडित जसराज जी की जन्मजयंती के पुण्य अवसर भी है।
— PMO India (@PMOIndia) January 28, 2022
इस दिन, पंडित जसराज कल्चरल फ़ाउंडेशन की स्थापना के इस अभिनव कार्य के लिए मैं आप सभी को बधाई देता हूँ।
विशेष रूप से मैं दुर्गा जसराज जी और पंडित सारंगदेव जी को शुभकामनाएँ देता हूँ: PM @narendramodi
संगीत एक बहुत गूढ़ विषय है।
— PMO India (@PMOIndia) January 28, 2022
मैं इसका बहुत जानकार तो नहीं हूँ, लेकिन हमारे ऋषियों ने स्वर और नाद को लेकर जितना व्यापक ज्ञान दिया है, वो अद्भुत है: PM @narendramodi
आज के ग्लोबलाइजेशन के जमाने में, भारतीय संगीत भी अपनी ग्लोबल पहचान बनाए, ग्लोबली अपना प्रभाव पैदा करे, ये हम सबका दायित्व है: PM @narendramodi
— PMO India (@PMOIndia) January 28, 2022
जब टेक्नोलॉजी का प्रभाव हर क्षेत्र में है, तो संगीत के क्षेत्र में भी टेक्नोलॉजी और आईटी का रिवॉल्यूशन होना चाहिए।
— PMO India (@PMOIndia) January 28, 2022
भारत में ऐसे स्टार्ट अप तैयार हों जो पूरी तरह संगीत को डेडिकेटेड हों, भारतीय वाद्य यंत्रों पर आधारित हों, भारत के संगीत की परंपराओं पर आधारित हों: PM @narendramodi
विरासत भी, विकास भी के मंत्र पर चल रहे भारत की इस यात्रा में 'सबका प्रयास' शामिल होना चाहिए: PM @narendramodi
— PMO India (@PMOIndia) January 28, 2022
आज हम काशी जैसे अपनी कला और संस्कृति के केन्द्रों का पुनर्जागरण कर रहे हैं, पर्यावरण संरक्षण और प्रकृति प्रेम को लेकर हमारी जो आस्था रही है, आज भारत उसके जरिए विश्व को सुरक्षित भविष्य का रास्ता दिखा रहा है: PM @narendramodi
— PMO India (@PMOIndia) January 28, 2022