Quoteವಿ.ಓ.ಚಿದಂಬರನಾರ್ ಬಂದರಿನಲ್ಲಿ ಔಟರ್ ಹಾರ್ಬರ್ ಕಂಟೈನರ್ ಟರ್ಮಿನಲ್ ನಿರ್ಮಿಸುವ ಮುಂಚೆ ಅಡಿಗಲ್ಲು ಹಾಕಿದರು
Quote10 ರಾಜ್ಯಗಳು / ಕೇಂದ್ರ ಸರ್ಕಾರದ ಪ್ರದೇಶಗಳಲ್ಲಿ 75 ಲೈಟ್‌ಹೌಸ್‌ಗಳಲ್ಲಿ ಪ್ರಯಾಣಿಕ ಸೌಲಭ್ಯಗಳನ್ನು ಸಮರ್ಪಿಸಿದರು
Quoteಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಷದ ಒಳನಾಡಿನ ಜಲಮಾರ್ಗ ನೌಕೆಗೆ ಪ್ರಧಾನಮಂತ್ರಿಯವರು ಲಾಂಚ್ ಮಾಡಿದರು
Quoteವಿವಿಧ ರೈಲು ಮತ್ತು ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು ಲಾಂಚ್ ಮಾಡಿದರು
Quote“ತುತುಕುಡಿಯಲ್ಲಿ ತಮಿಳುನಾಡಿನಲ್ಲಿ ಪ್ರಗತಿಯ ಹೊಸ ಅಧ್ಯಾಯ ಬರೆಯಲಾಗುತ್ತಿದೆ”
Quote“ಇಂದು, ದೇಶವು 'ಸಂಪೂರ್ಣ ಸರ್ಕಾರದ' ವಿಧಾನದೊಂದಿಗೆ ಕೆಲಸ ಮಾಡುತ್ತಿದೆ”
Quote“ಸಂಪರ್ಕವನ್ನು ಸುಧಾರಿಸಲು ಕೇಂದ್ರ ಸರ್ಕಾರದ ಪ್ರಯತ್ನಗಳು ಜನರ ಜೀವನ ಸೌಕರ್ಯವನ್ನು ಹೆಚ್ಚಿಸುತ್ತಿವೆ”
Quote“ಸಮುದ್ರಿ ವಲಯದ ಅಭಿವೃದ್ಧಿಯು ತಮಿಳುನಾಡಿನಂತಹ ರಾಜ್ಯದ ಅಭಿವೃದ್ಧಿಗೆ ಪರಿಣಾಮಕಾರಿ”
Quote“ಏಕ ಸಮಯದಲ್ಲಿ 75 ಸ್ಥಳಗಳಲ್ಲಿ ಅಭಿವೃದ್ಧಿ, ಇದು ಹೊಸ ಭಾರತ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ತೂತುಕುಡಿಯಲ್ಲಿ ರೂ. 17,300 ಕೋಟಿಗೂ ಹೆಚ್ಚಿನ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿಯವರು ವಿ.ಒ. ಚಿದಂಬರನಾರ್ ಬಂದರಿನಲ್ಲಿ ಔಟರ್ ಹಾರ್ಬರ್ ಕಂಟೈನರ್ ಟರ್ಮಿನಲ್ ಗೆ ಶಂಕುಸ್ಥಾಪನೆ ಮಾಡಿದರು. ಹರಿತ್ ನೌಕಾ ಉಪಕ್ರಮದ ಅಡಿಯಲ್ಲಿ ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶ ಒಳನಾಡಿನ ಜಲಮಾರ್ಗ ನೌಕೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು.  10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಲೈಟ್ ಹೌಸ್ ಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ಸಮರ್ಪಿಸಿದರು. ವಂಚಿ ಮಣಿಯಾಚ್ಚಿ - ತಿರುನಲ್ವೇಲಿ ವಿಭಾಗ ಮತ್ತು ಮೆಲಪ್ಪಾಲಯಂ - ಅರಲ್ವಾಯ್ಮೊಳಿ ವಿಭಾಗವನ್ನು ಒಳಗೊಂಡಂತೆ ವಂಚಿ ಮಣಿಯಾಚ್ಚಿ - ನಾಗರ್ಕೋಯಿಲ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ರೈಲು ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ತಮಿಳುನಾಡಿನಲ್ಲಿ ಒಟ್ಟು 4,586 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಾಲ್ಕು ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು.

 

|

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಅಭಿವೃದ್ಧಿ ಹೊಂದಿದ ಭಾರತದ ಮಾರ್ಗಸೂಚಿಯತ್ತ ಬಹುವಿಧದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಾಗುತ್ತಿದ್ದಂತೆ ತೂತುಕುಡಿಯಲ್ಲಿ ತಮಿಳುನಾಡು ಪ್ರಗತಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ” ಎಂದು ಹೇಳಿದರು. “ಇಂದಿನ ಅಭಿವೃದ್ಧಿ ಯೋಜನೆಗಳಲ್ಲಿ ಒಂದು ಭಾರತ ಶ್ರೇಷ್ಠ ಭಾರತ (ಏಕ್ ಭಾರತ್ ಶ್ರೇಷ್ಠ ಭಾರತ್) ಎಂಬ ಮನೋಭಾವವನ್ನು ಕಣ್ತುಂಬಿಕೊಳ್ಳಬಹುದು” ಎಂದರು. “ಯೋಜನೆಗಳು ತೂತುಕುಡಿಯಲ್ಲಿದ್ದರೂ, ಇದು ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ವಿಕಸಿತ ಭಾರತದ ಪ್ರಯಾಣ ಮತ್ತು ಅದರಲ್ಲಿ ತಮಿಳುನಾಡಿನ ಪಾತ್ರವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಅವರು 2 ವರ್ಷಗಳ ಹಿಂದೆ ಚಿದಂಬರನಾರ್ ಬಂದರಿನ ಸಾಮರ್ಥ್ಯದ ವಿಸ್ತರಣೆಗಾಗಿ ಅನೇಕ ಯೋಜನೆಗಳಿಗೆ ಚಾಲನೆ ನೀಡಿದಾಗ ಮತ್ತು ಅದನ್ನು ಹಡಗು ಸಾಗಣೆಯ ಪ್ರಮುಖ ಕೇಂದ್ರವನ್ನಾಗಿ ಮಾಡುವ ಭರವಸೆಯನ್ನು ನೀಡಿದ್ದ ಅಂದಿನ ಅವರ ಭೇಟಿಯನ್ನು ಮಗದೊಮ್ಮೆ ನೆನಪಿಸಿಕೊಂಡರು. "ಆ ಭರವಸೆ ಇಂದು ಈಡೇರುತ್ತಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ವಿ.ಒ.ಚಿದಂಬರನಾರ್ ಬಂದರಿನಲ್ಲಿ ಬಂದರಿನ ಹೊರವಲಯದ ಕಂಟೈನರ್ ಟರ್ಮಿನಲ್ ನ ಶಂಕುಸ್ಥಾಪನೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ಈ ಯೋಜನೆಯು 7,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಹೊಂದಿರುತ್ತದೆ” ಎಂದು ತಿಳಿಸಿದರು. “ಇಂದು 900 ಕೋಟಿ ರೂಪಾಯಿಗಳ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಮತ್ತು 13 ಬಂದರುಗಳಲ್ಲಿ 2500 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗಳು ತಮಿಳುನಾಡಿಗೆ ಪ್ರಯೋಜನವನ್ನು ನೀಡುತ್ತವೆ ಮತ್ತು ರಾಜ್ಯದಲ್ಲಿ ಉದ್ಯೋಗದ ವಿವಿಧ ಮಾರ್ಗಗಳನ್ನು ಸೃಷ್ಟಿಸುತ್ತವೆ” ಎಂದು ಅವರು ಹೇಳಿದರು.

 

|

“ಇಂದಿನ ಕೇಂದ್ರ ಸರ್ಕಾರವು ಜನರ ಬೇಡಿಕೆಗಳಂತೆ ಇಂದಿನ – ಮುಂದಿನ ಅಗತ್ಯಗಳ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿವೆ, ಹಿಂದಿನ ಸರ್ಕಾರಗಳು ಎಂದಿಗೂ ಅವುಗಳ ಬಗ್ಗೆ ಗಮನ ಹರಿಸಿಲ್ಲ” ಎಂದು ಪ್ರಧಾನಮಂತ್ರಿ ನೆನಪಿಸಿದರು. "ನಾನು ತಮಿಳುನಾಡಿಗೆ ಭೂಮಿ ಸೇವೆಗಾಗಿ ಮತ್ತು ಅದರ ಭವಿಷ್ಯವನ್ನು ಬದಲಾಯಿಸಲು ಬಂದಿದ್ದೇನೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

ಹಸಿರು ನೌಖೆ (ಹರಿತ್ ನೌಕಾ) ಉಪಕ್ರಮದ ಅಡಿಯಲ್ಲಿ ಭಾರತದ ಮೊದಲ ಹೈಡ್ರೋಜನ್ ಇಂಧನ ಕೋಶದ ಒಳನಾಡಿನ ಜಲಮಾರ್ಗದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, “ಇದು ತಮಿಳುನಾಡಿನ ಜನರು ಕಾಶಿಗಾಗಿ ನೀಡಿದ ಕೊಡುಗೆಯಾಗಿದೆ.  ಕಾಶಿ ತಮಿಳು ಸಂಗಮದಲ್ಲಿ ತಮಿಳುನಾಡಿನ ಜನರ ಉತ್ಸಾಹ, ವಾತ್ಸಲ್ಯವನ್ನು ಕಣ್ಣಾರೆ ಕಂಡಿದ್ದೇನೆ.” ಎಂದು ಹೇಳಿದರು. ವಿ.ಒ.ಚಿದಂಬರನಾರ್ ಬಂದರನ್ನು ದೇಶದ ಮೊದಲ ಗ್ರೀನ್ ಹೈಡ್ರೋಜನ್ ಹಬ್ ಬಂದರು ಮಾಡುವ ಗುರಿಯನ್ನು ಹೊಂದಿರುವ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ಯೋಜನೆಗಳು ಖನಿಜ ದ್ರವ ಬೇರ್ಪಡಿಸುವ ( ನಿರ್ಲವಣೀಕರಣ ) ಘಟಕ, ಜಲಜನಕ ಉತ್ಪಾದನೆ ಮತ್ತು ಬಂಕರ್ ಸೌಲಭ್ಯವನ್ನು ಒಳಗೊಂಡಿವೆ. "ಜಗತ್ತು ಇಂದು ಅನ್ವೇಷಿಸುತ್ತಿರುವ ಪರ್ಯಾಯಗಳಿಗೆ ಸಂಬಂಧಿಸಿದಂತೆ ತಮಿಳುನಾಡು ಬಹಳ ದೂರ ಸಾಗಲಿದೆ" ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಇಂದಿನ ರೈಲು ಮತ್ತು ರಸ್ತೆ ಅಭಿವೃದ್ಧಿ ಯೋಜನೆಗಳನ್ನು ವಿವರಿಸಿದರು ಮತ್ತು “ರೈಲು ಮಾರ್ಗಗಳ ವಿದ್ಯುದೀಕರಣ ಮತ್ತು ದ್ವಿಗುಣಗೊಳಿಸುವಿಕೆಯು ದಕ್ಷಿಣ ತಮಿಳುನಾಡು ಮತ್ತು ಕೇರಳ ನಡುವಿನ ಸಂಪರ್ಕವನ್ನು ಇನ್ನಷ್ಟು ಸುಧಾರಿಸುತ್ತದೆ ಮತ್ತು ತಿರುನಲ್ವೇಲಿ ಮತ್ತು ನಾಗರ್ಕೋಯಿಲ್ ವಲಯಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ” ಎಂದು ಹೇಳಿದರು. ತಮಿಳುನಾಡಿನಲ್ಲಿ 4,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಸ್ತೆಗಳ ಆಧುನೀಕರಣದ ನಾಲ್ಕು ಪ್ರಮುಖ ಯೋಜನೆಗಳನ್ನು ಅವರು ಇಂದು ಚಾಲನೆಗೊಳಿಸಿದರು. “ಇದು ಸಂಪರ್ಕಕ್ಕೆ ಉತ್ತೇಜನ ನೀಡುತ್ತದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ರಾಜ್ಯದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

 

|

ನವಭಾರತದ ಸಂಪೂರ್ಣ-ಸರ್ಕಾರದ ವಿಧಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, “ತಮಿಳುನಾಡಿನಲ್ಲಿ ಉತ್ತಮ ಸಂಪರ್ಕ ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿಸಲು ಕೇಂದ್ರ ರಸ್ತೆ ಮಾರ್ಗಗಳು, ಹೆದ್ದಾರಿಗಳು ಮತ್ತು ಜಲಮಾರ್ಗ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದರು. “ಆದ್ದರಿಂದ, ರೈಲ್ವೆ, ರಸ್ತೆಗಳು ಮತ್ತು ಕಡಲ ಯೋಜನೆಗಳನ್ನು ಒಟ್ಟಿಗೆ ಪ್ರಾರಂಭಿಸಲಾಗುತ್ತಿದೆ. ಬಹು ಮಾದರಿಯ ವಿಧಾನವು ರಾಜ್ಯದ ಅಭಿವೃದ್ಧಿಗೆ ಹೊಸ ವೇಗವನ್ನು ನೀಡುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಮನ್ ಕಿ ಬಾತ್ ನ ಸಂಚಿಕೆಯಲ್ಲಿ ದೇಶದ ಪ್ರಧಾನ ಲೈಟ್ ಹೌಸ್ ಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ತಮ್ಮ ಸಲಹೆಯನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು ಮತ್ತು 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 75 ಲೈಟ್ ಹೌಸ್ ಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ರೂಪಿಸಿ ದೇಶಕ್ಕೆ ಸಮರ್ಪಿಸುತ್ತಿರುವ ಬಗ್ಗೆ ಪ್ರಧಾನಮಂತ್ರಿಯವರು ಹೆಮ್ಮೆ ವ್ಯಕ್ತಪಡಿಸಿದರು. 

"ಏಕಕಾಲದಲ್ಲಿ 75 ಸ್ಥಳಗಳಲ್ಲಿ ಅಭಿವೃದ್ಧಿ, ಇದು ನವ ಭಾರತ" ಎಂದು ಪ್ರಧಾನಮಂತ್ರಿ ಶ್ರೀ ನರೆಂದ್ರ ಮೋದಿಯವರು ಹೇಳಿದರು ಮತ್ತು “ಮುಂಬರುವ ದಿನಗಳಲ್ಲಿ ಈ 75 ಸ್ಥಳಗಳು ಬೃಹತ್ ಪ್ರವಾಸಿ ಕೇಂದ್ರಗಳಾಗಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

|

ಕೇಂದ್ರ ಸರ್ಕಾರದ ಉಪಕ್ರಮಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, “ಕಳೆದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ 1300 ಕಿಮೀ ಉದ್ದದ ರೈಲು ಯೋಜನೆಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು. “2000 ಕಿಮೀ ರೈಲ್ವೆ ವಿದ್ಯುದ್ದೀಕರಣವನ್ನು ಸಾಧಿಸಲಾಯಿತು, ಮೇಲ್ಸೇತುವೆ ಮತ್ತು ಕೆಳಸೇತುವೆಗಳ ರಚನೆ ಮತ್ತು ಅನೇಕ ರೈಲು ನಿಲ್ದಾಣಗಳ ಉನ್ನತೀಕರಣವನ್ನು ಮಾಡಲಾಯಿತು. ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುವ 5 ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಓಡುತ್ತಿವೆ” ಎಂದು ಹೇಳಿದರು. “ಭಾರತ ಸರ್ಕಾರವು ತಮಿಳುನಾಡಿನ ರಸ್ತೆ ಮೂಲಸೌಕರ್ಯದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಸಂಪರ್ಕವನ್ನು ಸುಧಾರಿಸಲು ಕೇಂದ್ರ ಸರ್ಕಾರದ ಪ್ರಯತ್ನಗಳು ಜನಸಾಮಾನ್ಯರ ಜೀವನ ವ್ಯವಸ್ಥೆ-ಸೌಕರ್ಯವನ್ನು ಹೆಚ್ಚಿಸುತ್ತಿವೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

ದಶಕಗಳಿಂದ ಭಾರತದ ಜಲಮಾರ್ಗಗಳು ಮತ್ತು ಸಮುದ್ರ ವಲಯದೊಂದಿಗಿನ ಮಹತ್ತರವಾದ ನಿರೀಕ್ಷೆಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು ಮತ್ತು “ಈ ಕ್ಷೇತ್ರಗಳು ಇಂದು ವಿಕಸಿತ ಭಾರತದ ಅಡಿಪಾಯವಾಗುತ್ತಿವೆ ಮತ್ತು ಇಡೀ ದಕ್ಷಿಣ ಭಾರತದೊಂದಿಗೆ ತಮಿಳುನಾಡು ಹಾಗೂ ಇಲ್ಲಿನ ಪ್ರಜೆಗಳು ಇದರ ದೊಡ್ಡ ಫಲಾನುಭವಿಗಳಾಗಿದ್ದಾರೆ” ಎಂದು ಹೇಳಿದರು. ಪ್ರಧಾನಮಂತ್ರಿಯವರು ತಮಿಳುನಾಡಿನ ಮೂರು ಪ್ರಮುಖ ಬಂದರುಗಳು ಮತ್ತು 12 ಕ್ಕೂ ಹೆಚ್ಚು ಸಣ್ಣ ಬಂದರುಗಳನ್ನು ಮತ್ತು ಎಲ್ಲಾ ದಕ್ಷಿಣದ ರಾಜ್ಯಗಳ ಸಾಧ್ಯತೆಗಳನ್ನು ಮಾಹಿತಿ ವಿವರವಾಗಿ ವಿವರಿಸಿದರು. ಕಳೆದ ದಶಕದಲ್ಲಿ ವಿ.ಒ.ಚಿದಂಬರನಾರ್ ಬಂದರಿನಲ್ಲಿ 35 ಪ್ರತಿಶತದಷ್ಟು ಸಂಚಾರ ದಟ್ಟಣೆಯ ಬೆಳವಣಿಗೆಯ ಬಗ್ಗೆ ತಿಳಿಸುತ್ತಾ, "ಸಾಗರ ವಲಯದ ಅಭಿವೃದ್ಧಿ ಎಂದರೆ ತಮಿಳುನಾಡಿನಂತಹ ರಾಜ್ಯದ ಅಭಿವೃದ್ಧಿ" ಎಂದು ಹೇಳಿದರು. “ಬಂದರು ಕಳೆದ ವರ್ಷ 38 ಮಿಲಿಯನ್ ಟನ್ ಗಳನ್ನು ನಿರ್ವಹಿಸಿದೆ ಮತ್ತು 11 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ” ಎಂದು ಅವರು ಹೇಳಿದರು. ಸಾಗರಮಾಲಾದಂತಹ ಯೋಜನೆಗಳ ಪಾತ್ರವನ್ನು ಮನ್ನಣೆ ನೀಡುತ್ತಾ, "ದೇಶದ ಇತರ ಪ್ರಮುಖ ಬಂದರುಗಳಲ್ಲಿ ಇದೇ ರೀತಿಯ ಫಲಿತಾಂಶಗಳನ್ನು ಕಾಣಬಹುದು" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು, 

 

|

ಭಾರತವು ಜಲಮಾರ್ಗಗಳು ಮತ್ತು ಸಮುದ್ರ ವಲಯಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸುತ್ತಾ “ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತವು 38ನೇ ಸ್ಥಾನಕ್ಕೆ ಜಿಗಿತವನ್ನು ಗಮನಿಸಿದರು ಮತ್ತು ಒಂದು ದಶಕದಲ್ಲಿ ಬಂದರು ಸಾಮರ್ಥ್ಯವು ದ್ವಿಗುಣಗೊಂಡಿದೆ. ಈ ಅವಧಿಯಲ್ಲಿ ರಾಷ್ಟ್ರೀಯ ಜಲಮಾರ್ಗಗಳಲ್ಲಿ ಎಂಟು ಪಟ್ಟು ಹೆಚ್ಚಳವಾಗಿದೆ ಮತ್ತು ಕ್ರೂಸ್ ಪ್ರಯಾಣಿಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ದಾಪುಗಾಲುಗಳು ತಮಿಳುನಾಡಿಗೆ ಮತ್ತು ನಮ್ಮ ಯುವಕರಿಗೆ ಪ್ರಯೋಜನಕಾರಿಯಾಗಲಿವೆ” ಎಂದು ಹೇಳಿದರು. "ತಮಿಳುನಾಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ ಎಂದು ನನಗೆ ಮನವರಿಕೆಯಾಗಿದೆ ಮತ್ತು ರಾಷ್ಟ್ರವು ಮೂರನೇ ಬಾರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದಾಗ ನಾನು ಹೊಸ ಉತ್ಸಾಹದಿಂದ ನಿಮ್ಮ ಸೇವೆ ಮಾಡುತ್ತೇನೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ." ಎಂದು ಹೇಳಿದರು.

ತಮ್ಮ ಪ್ರಸ್ತುತ ಭೇಟಿಯಲ್ಲಿ ತಮಿಳುನಾಡಿನ ವಿವಿಧ ಪ್ರದೇಶಗಳ ಜನರ ಪ್ರೀತಿ, ವಾತ್ಸಲ್ಯ, ಉತ್ಸಾಹ ಮತ್ತು ಆಶೀರ್ವಾದದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿದರು ಮತ್ತು ರಾಜ್ಯದ ಅಭಿವೃದ್ಧಿಯೊಂದಿಗೆ ಜನರ ಪ್ರತಿಯೊಂದು ಪ್ರೀತಿಯನ್ನು ಹೊಂದಿಸುವುದಾಗಿ ಹೇಳಿದರು.

ಸಮಾರೋಪದಲ್ಲಿ, ಪ್ರತಿಯೊಬ್ಬರೂ ತಮ್ಮ ಫೋನ್ ನಲ್ಲಿ ಬೆಳಕು/ದೀಪ(ಲೈಟ್)ಗಳನ್ನು ಸ್ವಿಚ್ ಆನ್ ಮಾಡಲು ಮತ್ತು ತಮಿಳುನಾಡು ಮತ್ತು ಭಾರತ ಸರ್ಕಾರವು ಅಭಿವೃದ್ಧಿಯ ಹಬ್ಬವನ್ನು ಆಚರಿಸುತ್ತಿದೆ ಎಂದು ಸೂಚಿಸಲು ಪ್ರಧಾನಮಂತ್ರಿಯವರು ಕೇಳಿಕೊಂಡರು.

ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್. ಎನ್. ರವಿ, ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವ ಡಾ ಎಲ್ ಮುರುಗನ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ವಿ.ಒ.ಚಿದಂಬರನಾರ್ ಬಂದರಿನಲ್ಲಿ ಔಟರ್ ಹಾರ್ಬರ್ ಕಂಟೈನರ್ ಟರ್ಮಿನಲ್ ಗೆ ಶಂಕುಸ್ಥಾಪನೆ ಮಾಡಿದರು. ಈ ಕಂಟೈನರ್ ಟರ್ಮಿನಲ್ ವಿ.ಒ.ಚಿದಂಬರನಾರ್ ಬಂದರನ್ನು ಪೂರ್ವ ಕರಾವಳಿಯ ಟ್ರಾನ್ಸ್ ಶಿಪ್ಮೆಂಟ್ ಹಬ್ ಆಗಿ ಪರಿವರ್ತಿಸುವತ್ತ ಒಂದು ಹೆಜ್ಜೆಯಾಗಿದೆ. ಈ ಯೋಜನೆಯು ಭಾರತದ ದೀರ್ಘ ಕರಾವಳಿ ಮತ್ತು ಅನುಕೂಲಕರ ಭೌಗೋಳಿಕ ಸ್ಥಳವನ್ನು ಹತೋಟಿಗೆ ತರಲು ಮತ್ತು ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಪ್ರಮುಖ ಮೂಲಸೌಕರ್ಯ ಯೋಜನೆಯು ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಹ ಸೃಷ್ಟಿಸುತ್ತದೆ. ವಿ.ಒ.ಚಿದಂಬರನಾರ್ ಬಂದರನ್ನು ದೇಶದ ಮೊದಲ ಗ್ರೀನ್ ಹೈಡ್ರೋಜನ್ ಹಬ್ ಬಂದರು ಮಾಡುವ ಗುರಿಯನ್ನು ಹೊಂದಿರುವ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ಯೋಜನೆಗಳು ದ್ರವ ಖನಿಜ ಬೇರ್ಪಡಿಸುವ ಘಟಕ, ಹೈಡ್ರೋಜನ್ ಉತ್ಪಾದನೆ, ಬಂಕರ್ ಸೌಲಭ್ಯ ಇತ್ಯಾದಿಗಳನ್ನು ಒಳಗೊಂಡಿವೆ.

 

|

ಪ್ರಧಾನಮಂತ್ರಿಯವರು ಹಸಿರು ನೌಕಾ ಉಪಕ್ರಮದ ಅಡಿಯಲ್ಲಿ ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶ ಒಳನಾಡಿನ ಜಲಮಾರ್ಗ ನೌಕೆಯನ್ನು ಪ್ರಾರಂಭಿಸಿದರು. ಈ ಹಡಗನ್ನು ಕೊಚ್ಚಿನ್ ಶಿಪ್ಯಾರ್ಡ್ ತಯಾರಿಸಿದೆ ಮತ್ತು ಶುದ್ಧ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಮತ್ತು ರಾಷ್ಟ್ರದ ನಿವ್ವಳ-ಶೂನ್ಯ ಬದ್ಧತೆಗಳೊಂದಿಗೆ ಹೊಂದಾಣಿಕೆ ಮಾಡಲು ಪ್ರವರ್ತಕ ಹೆಜ್ಜೆಯನ್ನು ಒತ್ತಿಹೇಳುತ್ತದೆ. ಪ್ರಧಾನಮಂತ್ರಿಯವರು 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಾದ್ಯಂತ 75 ಲೈಟ್ ಹೌಸ್ ಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ವಂಚಿ ಮಣಿಯಾಚ್ಚಿ-ತಿರುನೆಲ್ವೇಲಿ ವಿಭಾಗ ಮತ್ತು ಮೆಲಪ್ಪಾಲಯಂ-ಅರಲ್ವಾಯ್ಮೊಳಿ ವಿಭಾಗ ಸೇರಿದಂತೆ ವಂಚಿ ಮಣಿಯಾಚ್ಚಿ - ನಾಗರ್ಕೋಯಿಲ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 1,477 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ದ್ವಿಗುಣ ಯೋಜನೆಯು ಕನ್ಯಾಕುಮಾರಿ, ನಾಗರ್ ಕೋಯಿಲ್ ಮತ್ತು ತಿರುನಲ್ವೇಲಿಯಿಂದ ಚೆನ್ನೈ ಕಡೆಗೆ ಹೋಗುವ ರೈಲುಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಮಿಳುನಾಡಿನಲ್ಲಿ ಒಟ್ಟು 4,586 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಾಲ್ಕು ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು. ಈ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ-844ರ ಜಿಟ್ಟಂಡಹಳ್ಳಿ-ಧರ್ಮಪುರಿ ವಿಭಾಗದ ಚತುಷ್ಪಥ, ರಾಷ್ಟ್ರೀಯ ಹೆದ್ದಾರಿ-81ರ ಮೀನ್ಸುರುಟ್ಟಿ-ಚಿದಂಬರಂ ವಿಭಾಗದ ಸುಸಜ್ಜಿತ ಭುಜಗಳೊಂದಿಗೆ ದ್ವಿಪಥ, ರಾಷ್ಟ್ರೀಯ ಹೆದ್ದಾರಿ-83 ರ ಒಡ್ಡಂಚತ್ರಂ-ಮಡತುಕುಲಂ ವಿಭಾಗದ ನಾಲ್ಕು-ಪಥಗಳು ಮತ್ತು ರಾಷ್ಟ್ರೀಯ ಹೆದ್ದಾರಿ-83 ರ ನಾಗಪಟ್ಟಿಣಂ-ತಂಜಾವೂರು ವಿಭಾಗದ ಸುಸಜ್ಜಿತ  ದ್ವಿಪಥ ಹೊಂದಿರುತ್ತವೆ. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸಲು, ಪ್ರಯಾಣದ ಸಮಯವನ್ನು ಕಡಿಮೆ ಮಾಡಲು, ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಈ ಪ್ರದೇಶದಲ್ಲಿ ತೀರ್ಥಯಾತ್ರೆಗೆ ಭೇಟಿ ನೀಡಲು ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿವೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • Vijay bapu kamble August 31, 2024

    इचलकरंजी विधानसभा मतदारसंघ 279 बूथ प्रमुख भाजप बूथ क्रमांक 55 श्री विजय बापू कांबळे चंदुर भाजप कार्यकर्ता माननीय श्री पंतप्रधान नरेंद्र मोदी जी यांचे नमो ॲप ला मिळालेले गुण अकरा लाख गुण मिळाले आहेत
  • Vivek Kumar Gupta May 10, 2024

    नमो .......................🙏🙏🙏🙏🙏
  • Vivek Kumar Gupta May 10, 2024

    नमो ....................................🙏🙏🙏🙏🙏
  • Pradhuman Singh Tomar April 30, 2024

    BJP
  • Krishna Jadon April 29, 2024

    BJP
  • B M S Balyan April 13, 2024

    विकसित ओर सुदृढ़ भारत। विकसित ओर सुदृढ़ भारत बनाने के लिए बहुत प्रयास करना पड़ेगा और बहुत मेहनत करनी पड़ेगी इस देश में समस्याएं बहुत है उन पर भी ध्यान देना है इस देश की शांति बनाए रखने के लिए भी बहुत मेहनत करनी है। यहां पर अहंकार की बहुत बड़ी प्रॉब्लम है हर किसी को अहंकार है उसे डेवलपमेंट से कोई मतलब नहीं है अगर उनकी अहंकार बीच में आ जाती है तो वह डेवलपमेंट को नहीं चाहते। इस देश में गद्दारों की भी कमी नहीं है यहां पर घरों में एजेंट बैठे हैं जो नौकरी करते है बिजनेस करते हैं पर उन लोगों के सम्बन्ध अभी भी बाहरी ताकतों से जुड़े हैं यह वह समय है जब हम कुछ सही कर सकते हैं अगर समय चला गया तो बहुत मुश्किल हो जाएगी जो भी हमने मेहनत करी है इस देश में सब बेकार हो जायेगी। समस्याओं की कमी नहीं है कोई ना कोई ना कोई समस्या चलती रहती है और उन समस्याओं को खत्म करते हे तो दूसरी समस्या पैदा हो जाती है अभी भी बहुत सारी सुविधाओं की जरूरत है पापुलेशन पर कंट्रोल होना बहुत जरूरी है। गांव में अभी भी बहुत सारी सुविधाओं का आना बाकी है गांव को मॉडर्न बनाना है बेसिक सुविधाओं से उनको पूरा करना है ।गांव को भी वर्ल्ड क्लास सुविधा प्रदान करनी है । गांव में टेक्नोलॉजी का उपयोग करना हैं एडवांस टेक्नोलॉजी और कंप्यूटर सेंटर खोलने जरूरी है जिससे कि गांव के नागरिक भी आगे आने चाहिए और देश में क्या डेवलपमेंट हो रहा है उसको वह समझ सके ओर आगे बड़ सके। गांव में सुरक्षा की भी एक प्रॉब्लम है उसको भी बढ़ाना है जिससे कि गांव का व्यक्ति भी सुरक्षित महसूस करें और उसे भी लगे कि मैं यहां एक सुरक्षित भारत का नागरिक हूं और एक नए भारत का नागरिक हूं। उनके लिए भी हमें हेल्प सेंटर खोलने है जहां पर वह कानून की सुविधा प्राप्त कर सके ऑनलाइन जिससे वह तुरंत सहायता ले सके। किसानों के लिए केंद्र खोलने हैं जहां पर वह अपनी लागत को कम करने का तरीका सीख सके अपनी फसल को बढ़ाने का तरीका सीख सके अपनी फसल को बेचने का तरीका सीख सके और ऐसे सेंटर खोलने जहां पर उनकी फसल आराम से बिक जाए और हर गांव को एक सलाहकार दिया जाएगा जो उन को एडवाइज करें ओर इस बात की गारंटी दे की फसल को हम खरीदेंगे और इतने दामों पर खरीदेंगे उनके लिए मॉनिटरिंग सिस्टम बनाया जाए वाटर हार्वेस्टिंग सिस्टम बनाया जाए और एक हेल्प सेंटर खोला जाए जो इन सब चीजों के लिए जिम्मेदार हो और किसानों को आगे बढ़ाने में जिम्मेदारी लें। सुरक्षा की गारंटी दी जाए आज तक किसी पार्टी ने सुरक्षा की गारंटी नहीं दिए पर भाजपा ने दि सभी पार्टी बड़ी-बड़ी बात करती है बोलती भी है पर सुरक्षा नहीं देती हम आपको सुरक्षा भी दे रहे हैं स्वास्थ्य बीमा भी दे रहे हैं फसल बीमा भी दे रहे है सुविधा भी दे रहे हैं तो उसके लिए मॉनिटरिंग सिस्टम भी प्रदान कर रहे हैं जहां पर आप अपनी शिकायत दर्ज कर सकते हैं और बता सकते हैं कि आपको यह सुविधा अभी तक नहीं मिली। अगर कहीं कोई आपसे रिश्वत मांगी जा रही है उसकी आप कंप्लेंट कर सके वह भी ऑनलाइन हो जाए जिस की फ्यूचर में भविष्य में इसका संज्ञान लिया जा सके। सुरक्षा की कमी की वजह से इस देश में अभी भी बहुत सारे लोग आजाद देश में रहते हुए भी गुलाम की तरह ही रहे हैं जो अपनी बातों को खुलकर नहीं बता पाते या कानून की सहायताएं उन्हें पूर्ण रूप से नहीं मिल पाती करप्शन अपना रूप बदलता रहता है उसके लिए हमें पब्लिक के सपोर्ट की जरूरत है पब्लिक ही सबसे पहले बता सकती है कि कहां पर क्या करप्शन है और क्यों है इसके लिए पब्लिक पोर्टल बनाई गई है जनसुनवाई केंद्र खोले गए हैं कंप्लेंट करना जरूरी है इस चीज को खत्म करने में गवर्नमेंट की सहायता कर सकते हैं। अभी भी हमें हर वर्ग के लिए काम करना है जो भी डेवलपमेंट हमने किए हैं वह अभी भी कम है अभी भी हमें बहुत से लोगों के लिए काम करना है और इस देश को वर्ल्ड क्लास देश बनाने के लिए बहुत कुछ करना बाकी है अभी भी बहुत सारी समस्याएं हैं हमने हर तरह की सुविधा जन-जन तक पहुंचने का प्रयास किया है फिर भी अभी बहुत सारी जगह ऐसी हैं जहां अभी भी समस्या है वहां पर अभी और प्रयास करने की और उन सुविधाओं को और बेहतर बनाने की हमारे को जरूरत है कोशिश करनी है। सुविधा हमने प्रदान कराई हे वो उज्जवला योजना, महिला सम्मान, कन्या योजना कन्या शादी समारोह, प्रेगनेंसी मे मेडिकल की सुविधा, आयुष्मान हेल्थ कार्ड, घरों की योजना, स्वच्छता अभियान, जल योजना, जनधन योजना है पर अभी भी बहुत सारी समस्या बाकी है जो योजना हमने बनाई है टेक्नोलॉजी को उपयोग करके यह सब देखना है कि मॉनिटर करना कि हमारी योजना कहां-कहां तक पहुंच चुकी है और अभी भी कितने लोगों तक पहुंची नहीं है बाकी है। हर तरह की वर्ल्ड क्लास सूविधा प्रदान करने की योजनाएं गांव गांव कस्बे कस्बे तक यह सुविधा पहुंचाई जाएगी। उद्योग धंधों को हर आदमी की पहुंच तक लाना है उनको शिक्षित करना है उनको तरीके सीखने हे की कैसे वो अपना रोजगार शुरू कर सके। कैसे वह अपने उद्योग शुरू कर सके और किस तरह से वह सरकार से उद्योग चलाने में सहायता प्राप्त कर सकते हैं किस तरह से उन्हें लोन मिल सकता है यह सब चीज अभी भी पहुंचानी बाकी है सिखानी बाकी उसके लिए हमें मॉनिटरिंग सिस्टम बनाने हैं मॉनिटरिंग सिस्टम और कंट्रोल सिस्टम के थ्रू हमें हर आदमी तक इन सुविधाओं को पहुंचना है टेक्नोलॉजी का उपयोग करना है। हर आदमी को सुरक्षा की गारंटी देनी है कुछ भी गलत होने पर उसकी जिम्मेदारी हमारी होगी यूपी को आप देख सकते हैं किसी भी समूह की ज़ोर जबर्दस्ती नहीं चलती है कोई भी व्यक्ति विशेष समूह अपनी मन मर्जी नहीं चला सकता है अगर कोई चलाएगा और कानून के खिलाफ जाकर या कानून का पालन किये बिना अगर कोई भी व्यक्ति ऐसा करेगा तो जेल जाएगा चाहे वह कोई भी हो। उस पर गलत बोलने की या गलत करने की हिम्मत नहीं है किसी को भी हिम्मत नहीं है अगर कोई करेगा तो उसको हम सबक सिखाएंगे जिससे कि वह या कोई और दोबारा से ऐसी कोई गलती ना करें या करने की कोई और कोशिश ना करें। हमें हर वर्ग के लिए काम करना है हमारे पास अभी भी बहुत सारी योजनाएं हैं जिससे कि हर वर्ग के पास हर तरह की सुविधा पहूचाई जा सके और जीवन को आसान बना सके अब हमारा फोकस रहेगा कि आम जनता का जीवन आसान कैसे बन जाए उनकी भविष्य को सुनहरा कैसा बनाया जाए उनके जीवन को सरल कैसा बनाया जाए हर तरह की सुविधाएं हर आदमी तक कैसे पहुंचा जाए ।मोटरसाइकिल, कार, एसी वाला घर यह सब सुविधाएं हर आदमी तक कैसे पहुंचे उनकी सोर्स आफ इनकम कैसे बढ़ेगी कमाई का जरिए कैसे बढ़ाए इन सब चीजों पर हमें फोकस करना होगा इन सब पर फोकस करना होगा हमें अभी भी बहुत काम करना है हमें अभी भी गरीब लोगों के लिए काम करना है हमें अभी भी पिछडे लोगों के लिए काम करना है हमें अभी भी मिडिल क्लास और सर्विस क्लास लोगों के लिए काम करना है हर वर्ग के लोगों तक सुविधा पहुंचानी है जिससे कि उनकी लाइफ सरल हो सके हमें अभी भी कुछ ऐसा करना है जिससे कि लोगों की सोर्स आफ इनकम बन सके उनकी कमाई का जरिया हमेशा के लिए बन जाए उनको उस चीज की टेंशन ना रहे हैं कि वह कल क्या करेंगे कैसे काम आएंगे और किस तरह से उनका जीवन निकलेगा उनके लिए हमें काम करना है। करप्शन को जीरो करना है करप्शन को हमेशा हमेशा के लिए खत्म करना है जिससे की मेहनत करने वालों की कमाई को कोई चालाक आदमी ना खा सके टेक्नोलॉजी का उपयोग करना है जिससे कि लोगों को हर सुविधा मिल सके और करप्शन फ्री देश बन सके जब पीस होगी सिक्योरिटी होगी तभी आप अपने टैलेंट का सही इस्तेमाल कर सकते हैं और जीरो करप्शन होगा तभी आप विश्वास कर सकते हैं कि आपका टैलेंट का सही उपयोग हो पाएगा और जब भी आप मेहनत करेंगे और आगे बढ़ेंगे और देश को भी आगे बढ़ाएंगे करप्शन को खत्म करने के लिए टेक्नोलॉजी का उपयोग करा जाएगा लोगों से मदद ली जाएगी । टेक्नोलॉजी का विकास करा जाएगा क्योंकि टेक्नोलॉजी आज के युग में बहुत जरूरी है एडवांस टेक्नोलॉजी का उपयोग करा जाएगा सेमीकंडक्टर का उपयोग करा जाएगा ऑटोमेशंस का उपयोग कर जाएगा ड्रोन का उपयोग कर जाएगा रोबोट का उपयोग करा जाएगा । जोब क्रिएट करे जाएंगे लोगों को नई टेक्नोलॉजी सिखाई जाएगी स्किल सेंटर्स ओपन कर जाएंगे हमें अपने देश को बेटर और बहुत बैटर बनाना है अब हमारा कंपटीशन डेवलपड कंट्रीज के साथ है। जय हिन्द जय भारत लेखक भूपेंद्र बालयाण
  • Shabbir meman April 10, 2024

    🙏🙏
  • Sunil Kumar Sharma April 09, 2024

    जय भाजपा 🚩 जय भारत
  • Jayanta Kumar Bhadra April 07, 2024

    Jai hind sir
  • Jayanta Kumar Bhadra April 07, 2024

    Jai Sri Krishna
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bharat Tex showcases India's cultural diversity through traditional garments: PM Modi

Media Coverage

Bharat Tex showcases India's cultural diversity through traditional garments: PM Modi
NM on the go

Nm on the go

Always be the first to hear from the PM. Get the App Now!
...
Prime Minister welcomes Amir of Qatar H.H. Sheikh Tamim Bin Hamad Al Thani to India
February 17, 2025

The Prime Minister, Shri Narendra Modi extended a warm welcome to the Amir of Qatar, H.H. Sheikh Tamim Bin Hamad Al Thani, upon his arrival in India.

|

The Prime Minister said in X post;

“Went to the airport to welcome my brother, Amir of Qatar H.H. Sheikh Tamim Bin Hamad Al Thani. Wishing him a fruitful stay in India and looking forward to our meeting tomorrow.

|

@TamimBinHamad”