Quote“ಭೂಕಂಪದ ಸಮಯದಲ್ಲಿ ಭಾರತದ ತ್ವರಿತ ಪ್ರತಿಕ್ರಿಯೆ ಇಡೀ ಪ್ರಪಂಚದ ಗಮನವನ್ನು ಸೆಳೆದಿದೆ. ಇದು ನಮ್ಮ ರಕ್ಷಣಾ ಮತ್ತು ಪರಿಹಾರ ತಂಡಗಳ ಸನ್ನದ್ಧತೆಯ ಪ್ರತಿಬಿಂಬವಾಗಿದೆ”
Quote"ಭಾರತವು ಸ್ವಾವಲಂಬನೆಯೊಂದಿಗೆ ತನ್ನ ನಿಸ್ವಾರ್ಥತೆಯನ್ನೂ ಪೋಷಿಸಿದೆ"
Quote"ಜಗತ್ತಿನಲ್ಲಿ ಎಲ್ಲಿ ವಿಪತ್ತು ಸಂಭವಿಸಿದರೂ, ಭಾರತವು ಮೊದಲ ಪ್ರತಿಸ್ಪಂದಕ ಆಗಿರುತ್ತದೆ"
Quote"ತಿರಂಗ'ದೊಂದಿಗೆ ನಾವು ಎಲ್ಲಿಗೆ ತಲುಪುತ್ತೇವೆಯೋ, ಅಲ್ಲಿ ಭಾರತೀಯ ತಂಡಗಳು ಬಂದ ನಂತರ ಪರಿಸ್ಥಿತಿ ಉತ್ತಮವಾಗುತ್ತದೆ ಎಂಬ ಭರವಸೆ ಇರುತ್ತದೆ"
Quote“ಎನ್‌ಡಿಆರ್‌ಎಫ್ ದೇಶದ ಜನರಲ್ಲಿ ಉತ್ತಮ ಹೆಸರು ಗಳಿಸಿದೆ. ದೇಶದ ಜನತೆ ನಿಮ್ಮನ್ನು ನಂಬಿದ್ದಾರೆ"
Quote"ವಿಶ್ವದ ಅತ್ಯುತ್ತಮ ಪರಿಹಾರ ಮತ್ತು ರಕ್ಷಣಾ ತಂಡವಾಗಿ ನಾವು ನಮ್ಮ ಗುರುತನ್ನು ಬಲಪಡಿಸಬೇಕಾಗಿದೆ. ನಮ್ಮ ಸ್ವಂತ ತಯಾರಿ ಉತ್ತಮವಾದಷ್ಟೂ ನಾವು ಜಗತ್ತಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.”

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ‘ಆಪರೇಷನ್ ದೋಸ್ತ್ʼನಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ ನಡೆಸಿದರು.

ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ‘ಆಪರೇಷನ್ ದೋಸ್ತ್ʼನಲ್ಲಿ ಸಿಬ್ಬಂದಿಯ ಮಹತ್ತರ ಕಾರ್ಯಕ್ಕಾಗಿ ಅವರನ್ನು ಶ್ಲಾಘಿಸಿದರು. ವಸುಧೈವ ಕುಟುಂಬಕಂ ಪರಿಕಲ್ಪನೆಯನ್ನು ಪ್ರಧಾನಿ ವಿವರಿಸಿದರು. ಟರ್ಕಿ ಮತ್ತು ಸಿರಿಯಾದಲ್ಲಿ ಭಾರತ ತಂಡವು ಇಡೀ ಜಗತ್ತು ನಮಗೆ ಒಂದೇ ಕುಟುಂಬ ಎಂಬ ಮನೋಭಾವವನ್ನು ಪ್ರತಿಬಿಂಬಿಸಿದೆ ಎಂದು ಪ್ರಧಾನಿ ಹೇಳಿದರು.

ನೈಸರ್ಗಿಕ ವಿಕೋಪದ ಸಮಯದಲ್ಲಿ ತ್ವರಿತ ಪ್ರತಿಕ್ರಿಯೆಯ ಪ್ರಾಮುಖ್ಯತೆಯನ್ನು ವಿವರಿಸಿದ ಪ್ರಧಾನಿಯವರು, 'ಗೋಲ್ಡನ್ ಅವರ್' ಅನ್ನು ಉಲ್ಲೇಖಿಸಿದರು ಮತ್ತು ಟರ್ಕಿಯಲ್ಲಿ ಎನ್‌ಡಿಆರ್‌ಎಫ್ ತಂಡದ ತ್ವರಿತ ಪ್ರತಿಕ್ರಿಯೆಯು ಇಡೀ ಪ್ರಪಂಚದ ಗಮನವನ್ನು ಸೆಳೆಯಿತು ಎಂದು ಹೇಳಿದರು. ತ್ವರಿತ ಪ್ರತಿಕ್ರಿಯೆಯು ತಂಡದ ಸನ್ನದ್ಧತೆ ಮತ್ತು ತರಬೇತಿ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

Quote

ಅವರ ಶ್ರಮಕ್ಕಾಗಿ ತಂಡದ ಸದಸ್ಯರನ್ನು ಆಶೀರ್ವದಿಸಿದ ತಾಯಿಯ ಚಿತ್ರಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಸಂತ್ರಸ್ತ ಪ್ರದೇಶಗಳಲ್ಲಿ ನಡೆಸಲಾದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಪ್ರತಿ ಚಿತ್ರವನ್ನು ವೀಕ್ಷಿಸಿದ ನಂತರ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಟ್ಟಿದ್ದಾನೆ ಎಂದರು. ಸಾಟಿಯಿಲ್ಲದ ವೃತ್ತಿಪರತೆ ಮತ್ತು ಮಾನವ ಸ್ಪರ್ಶವನ್ನು ಒತ್ತಿ ಹೇಳಿದ ಪ್ರಧಾನಿ, ಒಬ್ಬ ವ್ಯಕ್ತಿಯು ಆಘಾತದಲ್ಲಿದ್ದಾಗ ಮತ್ತು ಎಲ್ಲವನ್ನೂ ಕಳೆದುಕೊಂಡಾಗ ಅದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ತಂಡವು ತೋರಿದ ಸಹಾನುಭೂತಿಯ ಕೆಲಸಗಳನ್ನು ಪ್ರಧಾನಿ ಶ್ಲಾಘಿಸಿದರು.

2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದ ಸಮಯದಲ್ಲಿ ಸ್ವಯಂಸೇವಕರಾಗಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಅವಶೇಷಗಳನ್ನು ತೆಗೆದು ಕೆಳಗಿರುವ ಜನರನ್ನು ಹುಡುಕುವ ಕೆಲಸದ ಕಷ್ಟವನ್ನು ಒತ್ತಿಹೇಳಿದರು. ಭುಜ್‌ನಲ್ಲಿ ಆಸ್ಪತ್ರೆಯೇ ಕುಸಿದುಬಿದ್ದಿದ್ದರಿಂದ ಇಡೀ ವೈದ್ಯಕೀಯ ವ್ಯವಸ್ಥೆಗೆ ಹೇಗೆ ಹಾನಿಯಾಯಿತು ಎಂಬುದನ್ನು ವಿವರಿಸಿದರು. 1979 ರಲ್ಲಿ ನಡೆದ ಮಚ್ಚು ಅಣೆಕಟ್ಟು ದುರಂತವನ್ನು ಸಹ ಪ್ರಧಾನಿ ನೆನಪಿಸಿಕೊಂಡರು. ಈ ವಿಪತ್ತುಗಳ ಸಂದರ್ಭಲ್ಲಿನ ನನ್ನ ಅನುಭವಗಳ ಆಧಾರದ ಮೇಲೆ, ನಿಮ್ಮ ಶ್ರಮ, ಉತ್ಸಾಹ ಮತ್ತು ಭಾವನೆಗಳನ್ನು ನಾನು ಪ್ರಶಂಸಿಸುತ್ತೇನೆ. ಇಂದು ನಾನು ನಿಮ್ಮೆಲ್ಲರಿಗೂ ವಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

|

ಕಷ್ಟದ ಸಂದರ್ಭಗಳಲ್ಲಿ ತಮಗೆ ತಾವೇ ಸಹಾಯ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವವರನ್ನು ಸ್ವಾವಲಂಬಿಗಳು ಎಂದು ಕರೆಯಲಾಗುತ್ತದೆ. ಆದರೆ ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುವವರನ್ನು ನಿಸ್ವಾರ್ಥಿಗಳು ಎಂದು ಕರೆಯಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಇದು ವ್ಯಕ್ತಿಗಳಿಗೆ ಮಾತ್ರವಲ್ಲ ರಾಷ್ಟ್ರಗಳಿಗೂ ಅನ್ವಯಿಸುತ್ತದೆ ಎಂದರು. ಅದಕ್ಕಾಗಿಯೇ ಕಳೆದ ಕೆಲವು ವರ್ಷಗಳಲ್ಲಿ ಭಾರತವು ತನ್ನ ಸ್ವಾವಲಂಬನೆಯ ಜೊತೆಗೆ ತನ್ನ ನಿಸ್ವಾರ್ಥತೆಯನ್ನು ಪೋಷಿಸಿದೆ. ನಾವು 'ತಿರಂಗ'ದೊಂದಿಗೆ ಎಲ್ಲಿಗೆ ತಲುಪಿದರೂ, ಅಲ್ಲಿ ಭಾರತೀಯ ತಂಡಗಳು ಬಂದ ನಂತರ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ ಎಂಬ ಭರವಸೆ ಇರುತ್ತದೆ ಎಂದ ಪ್ರಧಾನಿಯವರು ಉಕ್ರೇನ್‌ನಲ್ಲಿ ತಿರಂಗಾ ವಹಿಸಿದ ಪಾತ್ರದ ಮೇಲೆ ಬೆಳಕು ಚೆಲ್ಲಿದರು.

|

ತ್ರಿವರ್ಣ ಧ್ವಜವು ಸ್ಥಳೀಯ ಜನರಲ್ಲಿ ಗಳಿಸಿದ ಗೌರವದ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಗಂಗಾ ಕಾರ್ಯಾಚರಣೆಯ ಸಂದರ್ಭದಲ್ಲಿ ಉಕ್ರೇನ್‌ನಲ್ಲಿರುವ ಪ್ರತಿಯೊಬ್ಬರಿಗೂ ತ್ರಿವರ್ಣ ಧ್ವಜವು ಹೇಗೆ ಗುರಾಣಿಯಾಗಿ ಕಾರ್ಯನಿರ್ವಹಿಸಿತು ಎಂಬುದನ್ನು ಪ್ರಧಾನಿ ನೆನಪಿಸಿಕೊಂಡರು. ಅಂತೆಯೇ, ಆಪರೇಷನ್ ದೇವಿ ಶಕ್ತಿಯಲ್ಲಿ ಅಫ್ಘಾನಿಸ್ತಾನದಿಂದ ಅತ್ಯಂತ ಪ್ರತಿಕೂಲ ಸಂದರ್ಭಗಳಲ್ಲಿ ಜನರನ್ನು ಸ್ಥಳಾಂತರಿಸಲಾಯಿತು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತವು ಪ್ರತಿಯೊಬ್ಬ ನಾಗರಿಕರನ್ನು ಮರಳಿ ಅವರ ಊರಿಗೆ ಕರೆತಂದಾಗ ಮತ್ತು ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸುವ ಮೂಲಕ ಜಾಗತಿಕ ಅಭಿಮಾನವನ್ನು ಗಳಿಸಿದಾಗಲೂ ಅದೇ ಬದ್ಧತೆ ಸ್ಪಷ್ಟವಾಗಿತ್ತು ಎಂದು ಪ್ರಧಾನಿ ಹೇಳಿದರು.

|

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿದಾಗ ಮೊದಲು ಪ್ರತಿಕ್ರಿಯಿಸಿದವರಲ್ಲಿ ಭಾರತವು ಒಂದಾಗಿತ್ತು. 'ಆಪರೇಷನ್ ದೋಸ್ತ್' ಮೂಲಕ ಮಾನವೀಯತೆಗೆ ಭಾರತದ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದರು. ನೇಪಾಳದಲ್ಲಿ ಭೂಕಂಪ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದಲ್ಲಿನ ಬಿಕ್ಕಟ್ಟಿನ ಉದಾಹರಣೆಗಳನ್ನು ನೀಡಿದ ಅವರು ಇಲ್ಲೆಲ್ಲಾ ಸಹಾಯ ಮಾಡಲು ಮೊದಲು ಮುಂದೆ ಬಂದದ್ದು ಭಾರತ ಎಂದು ಹೇಳಿದರು. ಭಾರತೀಯ ಪಡೆಗಳು ಮತ್ತು ಎನ್‌ಡಿಆರ್‌ಎಫ್‌ ಮೇಲೆ ಇತರ ದೇಶಗಳ ವಿಶ್ವಾಸವೂ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಹಲವು ವರ್ಷಗಳಿಂದ ಎನ್‌ಡಿಆರ್‌ಎಫ್‌ ದೇಶದ ಜನರಲ್ಲಿ ಉತ್ತಮ ಹೆಸರು ಗಳಿಸಿದೆ ಎಂದು ಪ್ರಧಾನಮಂತ್ರಿ ಹರ್ಷ ವ್ಯಕ್ತಪಡಿಸಿದರು. ದೇಶದ ಜನರು ಎನ್‌ಡಿಆರ್‌ಎಫ್ ಅನ್ನು ನಂಬುತ್ತಾರೆ ಎಂದು ಅವರು ಹೇಳಿದರು. ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಲುಪಿದಾಗ ಜನರಲ್ಲಿ ನಂಬಿಕೆ ಮತ್ತು ಭರವಸೆ ಮೂಡುತ್ತದೆ. ಸ್ವತಃ ಇದೇ ಒಂದು ದೊಡ್ಡ ಸಾಧನೆಯಾಗಿದೆ ಎಂದರು. ಕೌಶಲ್ಯವಿರುವ ಪಡೆಗೆ ಸಂವೇದನಾಶೀಲತೆಯನ್ನು ಸೇರಿಸಿದಾಗ, ಆ ಪಡೆಯ ಬಲವು ಹಲವಾರು ಪಟ್ಟು ಹೆಚ್ಚಾಗುತ್ತದೆ ಎಂದು ಪ್ರಧಾನಿ ಹೇಳಿದರು.

ದುರಂತದ ಸಮಯದಲ್ಲಿ ಪರಿಹಾರ ಮತ್ತು ರಕ್ಷಣೆಗಾಗಿ ಭಾರತದ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ವಿಶ್ವದ ಅತ್ಯುತ್ತಮ ಪರಿಹಾರ ಮತ್ತು ರಕ್ಷಣಾ ತಂಡವಾಗಿ ನಾವು ನಮ್ಮ ಗುರುತನ್ನು ಬಲಪಡಿಸಬೇಕಾಗಿದೆ. ನಮ್ಮ ಸ್ವಂತ ತಯಾರಿ ಉತ್ತಮವಾದಷ್ಟೂ ನಾವು ಜಗತ್ತಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು. ಎನ್‌ಡಿಆರ್‌ಎಫ್ ತಂಡದ ಪ್ರಯತ್ನಗಳು ಮತ್ತು ಅನುಭವಗಳನ್ನು ಶ್ಲಾಘಿಸಿದ ಪ್ರಧಾನಿಯವರು, ಸಿಬ್ಬಂದಿಯು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದರೂ, ಕಳೆದ 10 ದಿನಗಳಿಂದ ಮನಸ್ಸು ಮತ್ತು ಹೃದಯದ ಮೂಲಕ ನಾನು ಅವರೊಂದಿಗೆ ಸಂಪರ್ಕ ಹೊಂದಿದ್ದೆ ಎಂದು ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • Arun Guptaa Modi Ka Pariwar Beohari (484774) March 29, 2025

    नमो नमो 🙏
  • Mahendra singh Solanki Loksabha Sansad Dewas Shajapur mp November 30, 2023

    नमो नमो नमो नमो नमो नमो नमो नमो
  • Aishwariya Rawat March 05, 2023

    jai hind
  • CHANDRA KUMAR February 25, 2023

    बीजेपी और लोकसभा चुनाव 2024 वर्ष 2023 में 7 राज्यों में विधानसभा चुनाव होनेवाला है। बीजेपी को चुनाव में जीत सुनिश्चित करने के लिए कुछ विशेष कार्य करना चाहिए : 1. सबसे पहले शोर मचाइए, बीजेपी भारतीय नौजवानों को रोजगार देने के लिए जोर लगा दिया है। अब सभी युवाओं को रोजगार मिलेगा। 2. यूपीएससी और एसएससी में हाल ही में सरकारी पदों पर नियुक्ति हेतु परीक्षा के लिए ऑनलाइन एप्लीकेशन जमा लिया गया। आपको क्या लगता है, देश के सभी नागरिक को यह बात मालूम हुआ, की बीजेपी सरकार में भी नियुक्ति परीक्षा जारी है। थोड़ा सा विवाद पैदा कीजिए, यूपीएससी परीक्षा में आवेदन की तिथि बढ़ा दीजिए और 50 पद बढ़ा दीजिए। अंग्रेजी भाषा, सिर्फ इस वर्ष के लिए पूरी तरह से हटा दीजिए। फिर देखिए, पूरे देश को मालूम हो जायेगा की बीजेपी रोजगार दे रही है। एसएससी की नियुक्ति हेतु आवेदन की तिथि बढ़ा दीजिए, उम्र सीमा में छूट बढ़ा दीजिए, सामान्य जाति के युवाओं के लिए भी। इससे सामान्य जाति का युवा बीजेपी को वोट देगा। बाकी जाति के युवा को इससे नाराजगी भी नहीं होगी। 2. सभी विपक्षी दलों का कहना है, बीजेपी सरकारी कंपनी का निजीकरण करके पैसा कमा रही है। बीजेपी पूरा देश बेच देगा। अब बीजेपी को इस निजीकरण, देश बेचो कैंपेन को बंद करने के लिए, 100 सरकारी कंपनी बनाने का घोषणा कर देना चाहिए। 3. नई 100 सरकारी कंपनी का शिलान्यास, उन जिलों में करना चाहिए, जहां थोड़ा सा प्रयास करने मात्र से ही विधानसभा और लोकसभा सीट पर जीत मिल जाए। और आसपास के जिले के युवा को रोजगार मिलेगा तो आसपास के जिले में भी बीजेपी का मत प्रतिशत बढ़ेगा। 4. नई सरकारी कंपनी में नियुक्ति का कार्य सेंट्रल स्टाफ सिलेक्शन कमीशन को दे दिया जाए। 5. इस नई सरकारी कंपनी को अलग अलग क्षेत्र जैसे कृषि, बागवानी आदि में पोस्ट प्रोडक्शन क्वालिटी एन्हांसमेंट पर कार्य करके, सबसे अच्छा कृषि उत्पाद विकसित देशों के बाजारों तक पहुंचाने का कार्य करे। 6. इस नई सौ सरकारी कंपनी में निर्यात को बढ़ावा देने वाला उद्योग से जोड़ा जाए और नए उद्योग स्थापित किया जाए। 7. बीजेपी को चाहिए की नई सरकारी कंपनी बनाकर, रोजगार और बाजार को गतिशीलता प्रदान करके, भारतीय अर्थव्यवस्था को गति प्रदान करे। अंग्रेज केवल टैक्स लेकर भारतीय अर्थव्यवस्था को जोंक की तरह चूस लिया। अब केवल टैक्स नहीं लिया जाए। बल्कि भारत सरकार को अर्थव्यवस्था में सक्रियता पूर्वक भागीदारी निभाया जाए और चीन की तरह निर्यात केंद्रित उत्पाद बनाकर मुद्रा भंडार बढ़ाया जाए। 8. सीधे सब्सिडी देने में पैसा खर्च करने से अर्थव्यवस्था में डाला गया पैसा, विदेशी माल खरीदने में चला जाता है। इससे भारतीय अर्थव्यवस्था को ज्यादा लाभ नहीं होता है। अतः अब सभी प्रकार की सेवा, शुल्क सहित कर दिया जाए, लोकसभा चुनाव 2024 में जीत मिलने के बाद। 9. अभी तो बीजेपी को 100 नई सरकारी कंपनी खोलकर अधिक से अधिक संख्या में कम ग्रेड पे जैसे 1,2,3 पर नियुक्ति किया जाए। किस पद पर रोजगार दिए, यह मायने नहीं रखता है, कितना रोजगार दिए यह मायने रखता है। इसीलिए तो नीतीश कुमार ने बिहार में कम वेतन पर ज्यादा शिक्षक को नियुक्त कर रखा है, और लगातार चुनाव जीत रहा है। 10. माहौल बदलिए , चुनाव जीतिए।
  • THENNARASU February 24, 2023

    JAI HIND BJP4INDIA
  • SRS SwayamSewak RSS February 24, 2023

    शुक्रवार 17/02/2023 को वुमैन सेल फेस आठ मोहाली से बुड्ढे को फोन आया कि सोनिका और गिन्नी ने आपके खिलाफ शिकायत की है। वैसे तो शिकायत पुरानी है लेकिन हमारे पास अभी आयी है। क्या आपका मामला सुलट गया है? बुड्ढे ने उन्हें बताया कि मामला नहीं सुलटा बल्कि और उलझ गया है। बुड्ढे ने उनको बोला कि मैं आपसे सोमवार 20/02/2023 को मिलकर विस्तार से बताउँगा। बूढा सोमवार को वुमैन सेल फेस आठ मोहाली गया। वहाँ शिकायतकर्ता सोनिका भी आयी हुई थी। वुमैन सेल में दोनों ने अपनी अपनी व्यथा बताई। बुड्ढे (उम्र 67 साल) ने वुमैन सेल को बताया कि उसने अपने उस मकान के लिए (जो उसने अपनी सेवानिवृत्ति के उपरांत मिले पैसों से खरीदा) कोर्ट में टाइटल सूट फाइल किया हुआ है जिस पर सोनिका कब्जा करके बैठी हैं। और सोनिका (उम्र इकसठ साल) ने बताया कि उसने कोर्ट में डीवी एक्ट में केस फाइल किया हुआ हैं। बुड्ढे ने उन्हें बताया कि उसके केस की डेट एक मार्च है। सोनिका ने बताया कि उसका केस बाईस फरवरी को लगा है। दोनों ने अपनी उपस्थिति दर्ज करवायी और वापस आ गये। 🌚 गौरतलब यह है कि इन दोनों के बच्चे उच्च शिक्षित हैं। बेटा एम ए एल एल बी पंजाब हरियाणा हाईकोर्ट में अधिवक्ता है और बेटी दिल्ली के जे एन यू से पी एच डी है। दोनों बच्चों ने मिलकर अपने माँ बाप की वृद्धावस्था नारकीय कर दी है। 🌚 मैनें कहा कि तेरे को कुछ मैं भी बता दूँ।
  • Tribhuwan Kumar Tiwari February 23, 2023

    वंदेमातरम
  • Umakant Mishra February 22, 2023

    Jay Shri ram
  • Amit Singh Rajput February 22, 2023

    क्या क्या मांगू मां शारदा से आपके लिए आ दत है सब कुछ है आपके पास जब तक जब तक राज करो
  • DINESH RAM GAONKAR February 22, 2023

    Mera Bharat Mahan🪷🪷
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves $2.7 billion outlay to locally make electronics components

Media Coverage

Cabinet approves $2.7 billion outlay to locally make electronics components
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮಾರ್ಚ್ 2025
March 29, 2025

Citizens Appreciate Promises Kept: PM Modi’s Blueprint for Progress