ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಥೈಲ್ಯಾಂಡ್ ಭೇಟಿಗೆ ಮುನ್ನದ ಹೇಳಿಕೆ

ನವೆಂಬರ್ 3 ರಂದು ನಡೆಯಲಿರುವ 16 ನೇ ಆಸಿಯಾನ್-ಇಂಡಿಯಾ ಶೃಂಗಸಭೆ ಮತ್ತು 14 ನೇ ಪೂರ್ವ ಏಷ್ಯಾ ಶೃಂಗಸಭೆ ಮತ್ತು ನವೆಂಬರ್ 4 ರಂದು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ಕುರಿತು ಮಾತುಕತೆ ನಡೆಸುವ ರಾಷ್ಟ್ರಗಳ 3 ನೇ ಶೃಂಗಸಭೆಯಲ್ಲಿ ಭಾಗವಹಿಸಲು ನಾನು ನಾಳೆ ಬ್ಯಾಂಕಾಕ್‌ಗೆ ಪ್ರಯಾಣಿಸಲಿದ್ದೇನೆ.

ಭೇಟಿಯ ಸಮಯದಲ್ಲಿ, ಇವು ಮತ್ತು ಸಂಬಂಧಿತ ಶೃಂಗಸಭೆ ಸಭೆಗಳಿಗಾಗಿ ನಾನು ಬ್ಯಾಂಕಾಕ್‌ನಲ್ಲಿ ಹಲವಾರು ಇತರ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸುತ್ತೇನೆ.

ಆಸಿಯಾನ್-ಸಂಬಂಧಿತ ಶೃಂಗಸಭೆಗಳು ನಮ್ಮ ರಾಜತಾಂತ್ರಿಕ ದಿನಚರಿಯ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಆಕ್ಟ್ ಈಸ್ಟ್ ಪಾಲಿಸಿಯಲ್ಲಿರುವ ಒಂದು ಪ್ರಮುಖ ಅಂಶವಾಗಿದೆ.

ಆಸಿಯಾನ್‌ನೊಂದಿಗಿನ ನಮ್ಮ ಸಹಭಾಗಿತ್ವವು ಸಂಪರ್ಕ, ಸಾಮರ್ಥ್ಯ-ನಿರ್ಮಾಣ, ವಾಣಿಜ್ಯ ಮತ್ತು ಸಂಸ್ಕೃತಿಯ ಪ್ರಮುಖ ಆಧಾರಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. ನಾವು 2018 ರ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ವಿಶೇಷ ಸ್ಮರಣಾರ್ಥ ಶೃಂಗಸಭೆಯಲ್ಲಿ ಆಸಿಯಾನ್‌ನೊಂದಿಗಿನ ನಮ್ಮ ಸಂವಾದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ, ಈ ಸಂದರ್ಭದಲ್ಲಿ ಎಲ್ಲಾ ಹತ್ತು ಆಸಿಯಾನ್ ರಾಜ್ಯಗಳ ನಾಯಕರನ್ನು ನಮ್ಮ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳನ್ನಾಗಿ ಗೌರವಿಸಲಾಯಿತು.

ನಾನು ನಮ್ಮ ಸಹಕಾರಿ ಚಟುವಟಿಕೆಗಳನ್ನು ಆಸಿಯಾನ್ ಪಾಲುದಾರರೊಂದಿಗೆ ಪರಿಶೀಲಿಸುತ್ತಿದ್ದೇನೆ ಮತ್ತು ಆಸಿಯಾನ್ ಮತ್ತು ಆಸಿಯಾನ್ ನೇತೃತ್ವದ ಕಾರ್ಯವಿಧಾನಗಳನ್ನು ಬಲಪಡಿಸುವ ಯೋಜನೆಗಳನ್ನು ಪರಿಶೀಲಿಸುತ್ತೇನೆ. ಇವುಗಳು ಸಂಪರ್ಕ ಹೆಚ್ಚಿಸುತ್ತವೆ (ಸಮುದ್ರ, ಭೂಮಿ, ಗಾಳಿ, ಡಿಜಿಟಲ್ ಮತ್ತು ಜನರಿಂದ ಜನರಿಗೆ), ಆರ್ಥಿಕ ಸಹಭಾಗಿತ್ವವನ್ನು ಮತ್ತಷ್ಟು ಆಳವಾಗಿಸುತ್ತದೆ ಮತ್ತು ಕಡಲ ಸಹಕಾರವನ್ನು ವಿಸ್ತರಿಸುತ್ತವೆ.

ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್) ಇಂದು ಪ್ರಾದೇಶಿಕ ಸಹಕಾರಿ ವಾಸ್ತುಶಿಲ್ಪದಲ್ಲಿ ಪ್ರಮುಖ ಅಂಶವಾಗಿದೆ, ಇದು ಗಣನೀಯವಾದ, ನಾಯಕರ ನೇತೃತ್ವದ ರಚನೆಯಾಗಿದ್ದು, ಇದು ಆಸಿಯಾನ್ ಅನ್ನು ಕೇಂದ್ರೀಕರಿಸಿದೆ, ಮತ್ತು ಈ ಪ್ರದೇಶದ ಪ್ರಮುಖ ದೇಶಗಳಲ್ಲಿ ಅಥವಾ ಅದರಲ್ಲಿ ಪ್ರಮುಖ ಹಿತಾಸಕ್ತಿಗಳನ್ನು ಒಳಗೊಂಡಿದೆ. ನಾವು ಇಎಎಸ್‌ನ ಕಾರ್ಯಸೂಚಿಯಲ್ಲಿ ಗಮನಾರ್ಹ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಪರಿಶೀಲಿಸುತ್ತೇವೆ ಮತ್ತು ನಮ್ಮ ಪ್ರಸ್ತುತ ಕಾರ್ಯಕ್ರಮಗಳು ಮತ್ತು ಯೋಜನೆಗಳ ಸ್ಥಿತಿಯನ್ನು ಪರಿಶೀಲಿಸುತ್ತೇವೆ. ನಮ್ಮ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಬಗ್ಗೆಯೂ ನಾನು ಗಮನ ಹರಿಸುತ್ತೇನೆ, ಅದರ ಮೇಲೆ ಆಸಿಯಾನ್ ಪಾಲುದಾರರು ಮತ್ತು ಇತರರೊಂದಿಗೆ ಇಎಎಸ್‌ನಲ್ಲಿ ಬಲವಾದ ಒಗ್ಗಟ್ಟನ್ನು ಗಮನಿಸಲು ನನಗೆ ಸಂತೋಷವಾಗಿದೆ.
ಆರ್‌ಸಿಇಪಿ ಶೃಂಗಸಭೆಯಲ್ಲಿ, ಆರ್‌ಸಿಇಪಿ ಮಾತುಕತೆಗಳಲ್ಲಿನ ಪ್ರಗತಿಯನ್ನು ಪರಿಶೀಲಿಸುತ್ತೇವೆ. ಈ ಶೃಂಗಸಭೆಯಲ್ಲಿ ಸರಕುಗಳು, ಸೇವೆಗಳು ಮತ್ತು ಹೂಡಿಕೆಗಳಲ್ಲಿ, ವ್ಯಾಪಾರದಲ್ಲಿ ಭಾರತದ ಕಾಳಜಿ ಮತ್ತು ಹಿತಾಸಕ್ತಿಗಳು ಸೇರಿದಂತೆ ಎಲ್ಲಾ ಅಂಶಗಳನ್ನು ನಾವು ಪರಿಗಣಿಸುತ್ತೇವೆ.

ನನ್ನ ಭೇಟಿಯ ಇತರ ಅಂಶಗಳು ನವೆಂಬರ್ 4 ರಂದು ಥೈಲ್ಯಾಂಡ್ ನ ಪ್ರಧಾನ ಮಂತ್ರಿ ಏಷಿಯಾನ್ ಅಧ್ಯಕ್ಷರಾಗಿ ಆಯೋಜಿಸಿರುವ ‘ನಾಯಕರುಗಳ ವಿಶೇಷ ಭೋಜನಕೂಟದಲ್ಲಿ’ ಸುಸ್ಥಿರತೆ ಕುರಿತು ಭಾಗವಹಿಸುವುದು.

ನವೆಂಬರ್ 2 ರಂದು ಭಾರತೀಯ ಸಮುದಾಯವು ಥೈಲ್ಯಾಂಡ್‌ನಲ್ಲಿ ಆಯೋಜಿಸಿರುವ ಸ್ವಾಗತ ಕಾರ್ಯಕ್ರಮಕ್ಕೂ ನಾನು ಹಾಜರಾಗುತ್ತೇನೆ. ಭಾರತೀಯ ಮೂಲದ ಜನರು, ಮತ್ತು ಅನಿವಾಸಿ ಭಾರತೀಯರು ಥೈಲ್ಯಾಂಡ್‌ಗೆ ಮತ್ತು ಥೈಲ್ಯಾಂಡ್ ದೇಶದೊಂದಿಗೆ ಭಾರತ ಹಂಚಿಕೊಳ್ಳುವ ಪ್ರಮುಖ ಸಂಬಂಧಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ”

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Over 28 lakh companies registered in India: Govt data

Media Coverage

Over 28 lakh companies registered in India: Govt data
NM on the go

Nm on the go

Always be the first to hear from the PM. Get the App Now!
...
Prime Minister pays homage to Chhatrapati Shivaji Maharaj on his Jayanti
February 19, 2025

The Prime Minister, Shri Narendra Modi has paid homage to Chhatrapati Shivaji Maharaj on his Jayanti.

Shri Modi wrote on X;

“I pay homage to Chhatrapati Shivaji Maharaj on his Jayanti.

His valour and visionary leadership laid the foundation for Swarajya, inspiring generations to uphold the values of courage and justice. He inspires us in building a strong, self-reliant and prosperous India.”

“छत्रपती शिवाजी महाराज यांच्या जयंतीनिमित्त मी त्यांना अभिवादन करतो.

त्यांच्या पराक्रमाने आणि दूरदर्शी नेतृत्वाने स्वराज्याची पायाभरणी केली, ज्यामुळे अनेक पिढ्यांना धैर्य आणि न्यायाची मूल्ये जपण्याची प्रेरणा मिळाली. ते आपल्याला एक बलशाली, आत्मनिर्भर आणि समृद्ध भारत घडवण्यासाठी प्रेरणा देत आहेत.”