QuoteBhagavad Gita is a world heritage which has been enlightening generations across the world since thousands of years: PM
QuoteGita teaches us harmony and brotherhood, says PM Modi
QuoteGita is not only a ‘Dharma Granth’ but also a ‘Jeevan Granth’: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೊಸದಿಲ್ಲಿಯ ಇಸ್ಕಾನ್ ಗ್ಲೋರಿ ಆಫ್ ಇಂಡಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ಏರ್ಪಟ್ಟ ಗೀತ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು.

ಅವರು ಇಸ್ಕಾನ್ ಭಕ್ತರು ರೂಪಿಸಿದ ವಿಶಿಷ್ಟ ಭಗವದ್ಗೀತೆಯನ್ನು ಅನಾವರಣ ಮಾಡಿದರು. ಇದು 2.8 ಮೀಟರಿಗೂ ಅಧಿಕ ಅಳತೆಯದಾಗಿದ್ದು, 800 ಕಿಲೋ ಗ್ರಾಂ ಭಾರವಿದೆ.

|

ಈ ಸಂದರ್ಭ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಈ ಭವ್ಯವಾದ ಭಗವದ್ಗೀತೆಯನ್ನು ಅನಾವರಣ ಮಾಡುವುದು ನಿಜವಾಗಿಯೂ ವಿಶೇಷ ಸಂದರ್ಭ ಎಂದರು. ಈ ವಿಶಿಷ್ಟ ಪುಸ್ತಕವು ವಿಶ್ವಕ್ಕೆ ಭಾರತದ ಜ್ಞಾನದ ಸಂಕೇತವಾಗಲಿದೆ ಎಂದರು.

ಲೋಕಮಾನ್ಯ ತಿಲಕರು “ಗೀತ ರಹಸ್ಯ” ವನ್ನು ಜೈಲಿನಲ್ಲಿದ್ದು ಬರೆದುದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಅದರಲ್ಲಿ ಕೃಷ್ಣ ದೇವರ ಸಂದೇಶವಾದ ನಿಷ್ಕಾಮ ಕರ್ಮವನ್ನು ಸರಳ ರೀತಿಯಲ್ಲಿ ವಿವರಿಸಲಾಗಿರುವುದನ್ನೂ ಉಲ್ಲೇಖಿಸಿದರು. ಮಹಾತ್ಮಾ ಗಾಂಧಿ ಅವರೂ ಭಗವದ್ಗೀತಾವನ್ನು ಗಾಂಧಿ ಅವರ ರೀತಿಯಲ್ಲಿ ಅರ್ಥೈಸಿಕೊಂಡು ಬರೆದಿರುವುದನ್ನು ಅವರು ಉಲ್ಲೇಖಿಸಿದರು. ಈ ಪುಸ್ತಕದ ಪ್ರತಿಯನ್ನು ತಾವು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡಿರುವುದಾಗಿಯೂ ತಿಳಿಸಿದರು.

 

|

ಶ್ರೀ ಭಕ್ತಿವೇದಾಂತ ಪ್ರಭುಪಾದಜೀ ಅವರು ಈ ಪುರಾಣದ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲ್ಯಾಘಿಸಿದರು.

|

ಜೀವನದಲ್ಲಿ ನಾವು ದ್ವಂದ್ವವನ್ನು ಎದುರಿಸುವಾಗ ಭಗವದ್ಗೀತೆಯು ಸದಾ ನಮಗೆ ಮಾರ್ಗದರ್ಶಕವಾಗಿರಬಲ್ಲದು ಎಂದು ಹೇಳಿದ ಪ್ರಧಾನಮಂತ್ರಿ ಅವರು ಗೀತೆಯ ಬಹಳ ಪ್ರಸಿದ್ದ ಶ್ಲೋಕವಾದ ಮನುಕುಲದ ಶತ್ರುಗಳ ಜೊತೆ ಹೋರಾಡುವಾಗ ದೈವಿಕ ಶಕ್ತಿ ಸದಾ ಕಾಲ ನಮ್ಮೊಂದಿಗಿರುತ್ತದೆ ಎಂಬುದನ್ನೂ ಸ್ಮರಿಸಿಕೊಂಡರು. ಗೀತೆಯು ಜನರ ಸೇವೆಗೆ ಮತ್ತು ರಾಷ್ಟ್ರದ ಸೇವೆಗೆ ಪ್ರೇರೇಪಿಸುತ್ತದೆ ಎಂದೂ ಹೇಳಿದರು.

|

ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಗಳು ಮನುಕುಲ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ . ಈ ಹಿನ್ನೆಲೆಯಲ್ಲಿ ಅವರು ಯೋಗ ಮತ್ತು ಆಯುರ್ವೇದವನ್ನು ಉದಾಹರಿಸಿದರು.

|

 

 

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
A chance for India’s creative ecosystem to make waves

Media Coverage

A chance for India’s creative ecosystem to make waves
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in an accident in Nuh, Haryana
April 26, 2025

Prime Minister, Shri Narendra Modi, today condoled the loss of lives in an accident in Nuh, Haryana. "The state government is making every possible effort for relief and rescue", Shri Modi said.

The Prime Minister' Office posted on X :

"हरियाणा के नूंह में हुआ हादसा अत्यंत हृदयविदारक है। मेरी संवेदनाएं शोक-संतप्त परिजनों के साथ हैं। ईश्वर उन्हें इस कठिन समय में संबल प्रदान करे। इसके साथ ही मैं हादसे में घायल लोगों के शीघ्र स्वस्थ होने की कामना करता हूं। राज्य सरकार राहत और बचाव के हरसंभव प्रयास में जुटी है: PM @narendramodi"