QuoteBhagavad Gita is a world heritage which has been enlightening generations across the world since thousands of years: PM
QuoteGita teaches us harmony and brotherhood, says PM Modi
QuoteGita is not only a ‘Dharma Granth’ but also a ‘Jeevan Granth’: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೊಸದಿಲ್ಲಿಯ ಇಸ್ಕಾನ್ ಗ್ಲೋರಿ ಆಫ್ ಇಂಡಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ಏರ್ಪಟ್ಟ ಗೀತ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು.

ಅವರು ಇಸ್ಕಾನ್ ಭಕ್ತರು ರೂಪಿಸಿದ ವಿಶಿಷ್ಟ ಭಗವದ್ಗೀತೆಯನ್ನು ಅನಾವರಣ ಮಾಡಿದರು. ಇದು 2.8 ಮೀಟರಿಗೂ ಅಧಿಕ ಅಳತೆಯದಾಗಿದ್ದು, 800 ಕಿಲೋ ಗ್ರಾಂ ಭಾರವಿದೆ.

|

ಈ ಸಂದರ್ಭ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಈ ಭವ್ಯವಾದ ಭಗವದ್ಗೀತೆಯನ್ನು ಅನಾವರಣ ಮಾಡುವುದು ನಿಜವಾಗಿಯೂ ವಿಶೇಷ ಸಂದರ್ಭ ಎಂದರು. ಈ ವಿಶಿಷ್ಟ ಪುಸ್ತಕವು ವಿಶ್ವಕ್ಕೆ ಭಾರತದ ಜ್ಞಾನದ ಸಂಕೇತವಾಗಲಿದೆ ಎಂದರು.

ಲೋಕಮಾನ್ಯ ತಿಲಕರು “ಗೀತ ರಹಸ್ಯ” ವನ್ನು ಜೈಲಿನಲ್ಲಿದ್ದು ಬರೆದುದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಅದರಲ್ಲಿ ಕೃಷ್ಣ ದೇವರ ಸಂದೇಶವಾದ ನಿಷ್ಕಾಮ ಕರ್ಮವನ್ನು ಸರಳ ರೀತಿಯಲ್ಲಿ ವಿವರಿಸಲಾಗಿರುವುದನ್ನೂ ಉಲ್ಲೇಖಿಸಿದರು. ಮಹಾತ್ಮಾ ಗಾಂಧಿ ಅವರೂ ಭಗವದ್ಗೀತಾವನ್ನು ಗಾಂಧಿ ಅವರ ರೀತಿಯಲ್ಲಿ ಅರ್ಥೈಸಿಕೊಂಡು ಬರೆದಿರುವುದನ್ನು ಅವರು ಉಲ್ಲೇಖಿಸಿದರು. ಈ ಪುಸ್ತಕದ ಪ್ರತಿಯನ್ನು ತಾವು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡಿರುವುದಾಗಿಯೂ ತಿಳಿಸಿದರು.

 

|

ಶ್ರೀ ಭಕ್ತಿವೇದಾಂತ ಪ್ರಭುಪಾದಜೀ ಅವರು ಈ ಪುರಾಣದ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲ್ಯಾಘಿಸಿದರು.

|

ಜೀವನದಲ್ಲಿ ನಾವು ದ್ವಂದ್ವವನ್ನು ಎದುರಿಸುವಾಗ ಭಗವದ್ಗೀತೆಯು ಸದಾ ನಮಗೆ ಮಾರ್ಗದರ್ಶಕವಾಗಿರಬಲ್ಲದು ಎಂದು ಹೇಳಿದ ಪ್ರಧಾನಮಂತ್ರಿ ಅವರು ಗೀತೆಯ ಬಹಳ ಪ್ರಸಿದ್ದ ಶ್ಲೋಕವಾದ ಮನುಕುಲದ ಶತ್ರುಗಳ ಜೊತೆ ಹೋರಾಡುವಾಗ ದೈವಿಕ ಶಕ್ತಿ ಸದಾ ಕಾಲ ನಮ್ಮೊಂದಿಗಿರುತ್ತದೆ ಎಂಬುದನ್ನೂ ಸ್ಮರಿಸಿಕೊಂಡರು. ಗೀತೆಯು ಜನರ ಸೇವೆಗೆ ಮತ್ತು ರಾಷ್ಟ್ರದ ಸೇವೆಗೆ ಪ್ರೇರೇಪಿಸುತ್ತದೆ ಎಂದೂ ಹೇಳಿದರು.

|

ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಗಳು ಮನುಕುಲ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ . ಈ ಹಿನ್ನೆಲೆಯಲ್ಲಿ ಅವರು ಯೋಗ ಮತ್ತು ಆಯುರ್ವೇದವನ್ನು ಉದಾಹರಿಸಿದರು.

|

 

 

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How has India improved its defence production from 2013-14 to 2023-24 since the launch of

Media Coverage

How has India improved its defence production from 2013-14 to 2023-24 since the launch of "Make in India"?
NM on the go

Nm on the go

Always be the first to hear from the PM. Get the App Now!
...
PM speaks with HM King Philippe of Belgium
March 27, 2025

The Prime Minister Shri Narendra Modi spoke with HM King Philippe of Belgium today. Shri Modi appreciated the recent Belgian Economic Mission to India led by HRH Princess Astrid. Both leaders discussed deepening the strong bilateral ties, boosting trade & investment, and advancing collaboration in innovation & sustainability.

In a post on X, he said:

“It was a pleasure to speak with HM King Philippe of Belgium. Appreciated the recent Belgian Economic Mission to India led by HRH Princess Astrid. We discussed deepening our strong bilateral ties, boosting trade & investment, and advancing collaboration in innovation & sustainability.

@MonarchieBe”