QuoteBhagavad Gita is a world heritage which has been enlightening generations across the world since thousands of years: PM
QuoteGita teaches us harmony and brotherhood, says PM Modi
QuoteGita is not only a ‘Dharma Granth’ but also a ‘Jeevan Granth’: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೊಸದಿಲ್ಲಿಯ ಇಸ್ಕಾನ್ ಗ್ಲೋರಿ ಆಫ್ ಇಂಡಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ಏರ್ಪಟ್ಟ ಗೀತ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು.

ಅವರು ಇಸ್ಕಾನ್ ಭಕ್ತರು ರೂಪಿಸಿದ ವಿಶಿಷ್ಟ ಭಗವದ್ಗೀತೆಯನ್ನು ಅನಾವರಣ ಮಾಡಿದರು. ಇದು 2.8 ಮೀಟರಿಗೂ ಅಧಿಕ ಅಳತೆಯದಾಗಿದ್ದು, 800 ಕಿಲೋ ಗ್ರಾಂ ಭಾರವಿದೆ.

|

ಈ ಸಂದರ್ಭ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಈ ಭವ್ಯವಾದ ಭಗವದ್ಗೀತೆಯನ್ನು ಅನಾವರಣ ಮಾಡುವುದು ನಿಜವಾಗಿಯೂ ವಿಶೇಷ ಸಂದರ್ಭ ಎಂದರು. ಈ ವಿಶಿಷ್ಟ ಪುಸ್ತಕವು ವಿಶ್ವಕ್ಕೆ ಭಾರತದ ಜ್ಞಾನದ ಸಂಕೇತವಾಗಲಿದೆ ಎಂದರು.

ಲೋಕಮಾನ್ಯ ತಿಲಕರು “ಗೀತ ರಹಸ್ಯ” ವನ್ನು ಜೈಲಿನಲ್ಲಿದ್ದು ಬರೆದುದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಅದರಲ್ಲಿ ಕೃಷ್ಣ ದೇವರ ಸಂದೇಶವಾದ ನಿಷ್ಕಾಮ ಕರ್ಮವನ್ನು ಸರಳ ರೀತಿಯಲ್ಲಿ ವಿವರಿಸಲಾಗಿರುವುದನ್ನೂ ಉಲ್ಲೇಖಿಸಿದರು. ಮಹಾತ್ಮಾ ಗಾಂಧಿ ಅವರೂ ಭಗವದ್ಗೀತಾವನ್ನು ಗಾಂಧಿ ಅವರ ರೀತಿಯಲ್ಲಿ ಅರ್ಥೈಸಿಕೊಂಡು ಬರೆದಿರುವುದನ್ನು ಅವರು ಉಲ್ಲೇಖಿಸಿದರು. ಈ ಪುಸ್ತಕದ ಪ್ರತಿಯನ್ನು ತಾವು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡಿರುವುದಾಗಿಯೂ ತಿಳಿಸಿದರು.

 

|

ಶ್ರೀ ಭಕ್ತಿವೇದಾಂತ ಪ್ರಭುಪಾದಜೀ ಅವರು ಈ ಪುರಾಣದ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲ್ಯಾಘಿಸಿದರು.

|

ಜೀವನದಲ್ಲಿ ನಾವು ದ್ವಂದ್ವವನ್ನು ಎದುರಿಸುವಾಗ ಭಗವದ್ಗೀತೆಯು ಸದಾ ನಮಗೆ ಮಾರ್ಗದರ್ಶಕವಾಗಿರಬಲ್ಲದು ಎಂದು ಹೇಳಿದ ಪ್ರಧಾನಮಂತ್ರಿ ಅವರು ಗೀತೆಯ ಬಹಳ ಪ್ರಸಿದ್ದ ಶ್ಲೋಕವಾದ ಮನುಕುಲದ ಶತ್ರುಗಳ ಜೊತೆ ಹೋರಾಡುವಾಗ ದೈವಿಕ ಶಕ್ತಿ ಸದಾ ಕಾಲ ನಮ್ಮೊಂದಿಗಿರುತ್ತದೆ ಎಂಬುದನ್ನೂ ಸ್ಮರಿಸಿಕೊಂಡರು. ಗೀತೆಯು ಜನರ ಸೇವೆಗೆ ಮತ್ತು ರಾಷ್ಟ್ರದ ಸೇವೆಗೆ ಪ್ರೇರೇಪಿಸುತ್ತದೆ ಎಂದೂ ಹೇಳಿದರು.

|

ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಗಳು ಮನುಕುಲ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ . ಈ ಹಿನ್ನೆಲೆಯಲ್ಲಿ ಅವರು ಯೋಗ ಮತ್ತು ಆಯುರ್ವೇದವನ್ನು ಉದಾಹರಿಸಿದರು.

|

 

 

Click here to read PM's speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
‘India has every right to defend itself’: Germany backs New Delhi after Operation Sindoor

Media Coverage

‘India has every right to defend itself’: Germany backs New Delhi after Operation Sindoor
NM on the go

Nm on the go

Always be the first to hear from the PM. Get the App Now!
...
Administrator of the Union Territory of Dadra & Nagar Haveli and Daman & Diu meets Prime Minister
May 24, 2025

The Administrator of the Union Territory of Dadra & Nagar Haveli and Daman & Diu, Shri Praful K Patel met the Prime Minister, Shri Narendra Modi in New Delhi today.

The Prime Minister’s Office handle posted on X:

“The Administrator of the Union Territory of Dadra & Nagar Haveli and Daman & Diu, Shri @prafulkpatel, met PM @narendramodi.”