ಮನದಾಳದ ಮಾತು

Published By : Admin | December 25, 2016 | 19:40 IST
Quote#MannKiBaat: Prime Minister Modi extends Christmas greetings to the nation
QuotePM Narendra Modi pays tribute to Pt. Madan Mohan Malviya on his Jayanti #MannKiBaat
QuotePM Narendra Modi extends birthday greetings to Bharat Ratna Atal Bihari Vajpayee on his birthday during #MannKiBaat
QuoteCountry cannot forget Atal ji’s contributions. Under his leadership India conducted nuclear tests: PM Modi during #MannKiBaat
Quote#MannKiBaat: Shri Narendra Modi highlights ‘Lucky Grahak’ & ‘Digi Dhan’ Yojana to promote cashless transactions
QuoteAwareness towards online payments and using technology for economic transactions is increasing: PM during #MannKiBaat
QuoteGlad to note that there has been 200 to 300 per cent spurt in cashless transactions: PM Modi #MannKiBaat
QuoteWe should be at the forefront of using digital means to make payments and transactions: PM during #MannKiBaat
QuotePM Modi cautions those spreading lies & misleading honest people on demonetisation during #MannKiBaat
QuoteSupport of people is like blessings of the Almighty: PM Modi during #MannKiBaat
QuoteGovernment is taking regular feedback from people and it is alright to make changes according to it: PM during #MannKiBaat
QuoteWe have formulated a very strict law on ‘Benaami’ property: PM during #MannKiBaat
QuoteIndia is the fastest growing large economy today: PM Modi during #MannKiBaat
Quote#MannKiBaat: Because of the constant efforts of our countrymen, India is growing on various economic parameters, says PM
QuoteAn important bill for ‘Divyang’ people was passed. We are committed to uplifting our ‘Divyang’ citizens: PM #MannKiBaat
QuoteOur sportspersons have made the country proud: PM Modi during #MannKiBaat
QuotePM Narendra Modi extends New Year greetings to people across the country during #MannKiBaat

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ನಿಮ್ಮೆಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಷಯಗಳು. ಇಂದಿನ ದಿನ ಸೇವೆ, ತ್ಯಾಗ ಮತ್ತು ಕರುಣೆಗೆ ಮಹತ್ವ ನೀಡುವಂಥಹ ಸುದಿನವಾಗಿದೆ. ಯೇಸು ಕ್ರಿಸ್ತರು ಹೇಳಿದ್ದರು ಬಡವರಿಗೆ ನಮ್ಮ ಉಪಕಾರ ಬೇಕಿಲ್ಲ ಸ್ವೀಕಾರ ಬೇಕಿದೆ ಎಂದು. ಜೀಸಸ್, ಬಡವರ ಸೇವೆಯನ್ನು ಮಾತ್ರ ಮಾಡಿಲ್ಲ, ಬಡವರಿಂದ ಮಾಡಲಾದ ಸೇವೆಯನ್ನೂ ಪ್ರಶಂಶಿಸಿದ್ದಾರೆ ಎಂದು ಸಂತ ಲ್ಯೂಕ್ ಅವರ ಸುವಾರ್ತೆಯಲ್ಲಿ ಬರೆಯಲಾಗಿದೆ ಮತ್ತು ನಿಜವಾದ ಸಬಲೀಕರಣ ಅಂದ್ರೆ ಇದೇ ಅಲ್ವೇ.

ಇದಕ್ಕೆ ಸಂಬಂಧಿಸಿದ ಒಂದು ಕಥೆಯೂ ತುಂಬಾ ಪ್ರಚಲಿತದಲ್ಲಿದೆ. ಅದರಲ್ಲಿ ಜೀಸಸ್ ಒಂದು ದೇವಾಲಯದ ಖಜಾನೆ ಬಳಿ ನಿಂತಿದ್ದರು. ಎಷ್ಟೋ ಜನ ಶ್ರೀಮಂತರು ಬಂದರು, ಸಾಕಷ್ಟು ದಾನ ನೀಡಿದರು. ನಂತರ ಒಬ್ಬ ಬಡ ವಿಧವೆ ಬಂದಳು ಮತ್ತು ಅವಳು ೨ ತಾಮ್ರದ ನಾಣ್ಯಗಳನ್ನು ಹಾಕಿದಳು. ಒಂದು ರೀತಿ ನೋಡಿದರೆ ೨ ತಾಮ್ರದ ನಾಣ್ಯಗಳು ಪರಿಗಣನೆಗೆ ಬರುವುದಿಲ್ಲ.

ಅಲ್ಲಿ ನೆರೆದ ಭಕ್ತರ ಮನದಲ್ಲಿ ಕೌತುಕತೆ ಹೆಚ್ಚುವುದು ಸಹಜವಾಗೇ ಇತ್ತು. ಆಗ ಜೀಸಸ್ - ಆ ವಿಧವೆ ಮಹಿಳೆ, ಎಲ್ಲರಿಗಿಂತ ಹೆಚ್ಚಿನ ದಾನ ನೀಡಿದ್ದಾಳೆ ಯಾಕೆಂದ್ರೆ ಎಲ್ಲರೂ ಬಹಳಷ್ಟು ದಾನ ಮಾಡಿದರು; ಆದರೆ ಆ ಬಡ ಮಹಿಳೆ ತನ್ನದೆಲ್ಲವನ್ನೂ ದಾನ ಮಾಡಿದಳು ಎಂದು ಹೇಳಿದರು.

ಇಂದು ಡಿಸೆಂಬರ್ ೨೫, ಮಹಾತ್ಮಾ ಮದನ್ ಮೋಹನ್ ಮಾಲವಿಯಾ ಅವರ ಜಯಂತಿ ಕೂಡಾ ಹೌದು. ಭಾರತೀಯ ಜನರ ಮನದಲ್ಲಿ ಸಂಕಲ್ಪ ಮತ್ತು ಆತ್ಮ ವಿಶ್ವಾಸವನ್ನು ಜಾಗೃತಗೊಳಿಸಿದ ಮಾಲವಿಯಾ ಅವರು ಆಧುನಿಕ ಶಿಕ್ಷಣಕ್ಕೂ ಹೊಸ ದಿಕ್ಕನ್ನು ತೋರಿದವರಾಗಿದ್ದಾರೆ. ಅವರ ಜಯಂತಿಯಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ಈಗ ೨ ದಿನಗಳ ಹಿಂದೆಯಷ್ಟೇ ಮಾಲವಿಯಾ ಅವರ ತಪೋಭೂಮಿಯಾದ ಬನಾರಸ್‌ನಲ್ಲಿ ಹಲವಾರು ಪ್ರಗತಿಪರ ಕಾರ್ಯಗಳಿಗೆ ಚಾಲನೆ ನೀಡುವ ಸದವಕಾಶ ದೊರೆತಿತ್ತು. ನಾನು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಮದನ್ ಮೋಹನ್ ಮಾಲವಿಯಾ Cancer centre ಗೆ ಶಿಲಾನ್ಯಾಸ ಕೂಡಾ ಮಾಡಿದೆ. ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಕ್ಯಾನ್ಸರ್ ಸೆಂಟರ್ ಕೇವಲ ಉತ್ತರ ಪ್ರದೇಶದ ಪೂರ್ವ ಭಾಗದವರಿಗೆ ಮಾತ್ರವಲ್ಲ, ಜಾರ್ಖಂಡ್ ಮತ್ತು ಬಿಹಾರದವರೆಗಿನ, ಎಲ್ಲ ಜನರಿಗೆ ಬಹು ದೊಡ್ಡ ವರದಾನವಾಗಲಿದೆ. ಇಂದು, ಭಾರತ ರತ್ನ, ಪೂರ್ವ ಪ್ರಧಾನ ಮಂತ್ರಿ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೌದು. ಈ ದೇಶ ಅಟಲ್ಜಿ ಅವರ ಕೊಡುಗೆಯನ್ನೂ ಎಂದಿಗೂ ಮರೆಯಲಾರದು. ಅವರ ನೇತೃತ್ವದಲ್ಲಿ ನಾವು ಪರಮಾಣು ಶಕ್ತಿಯ ವಿಷಯದಲ್ಲೂ ದೇಶವನ್ನು ಹೆಮ್ಮೆಯ ಉತ್ತುಂಗಕ್ಕೇರಿಸಿದೆವು.

ಪಕ್ಷದ ನೇತಾರನಾಗಿ ಆಗಲಿ, ಸಂಸದನಾಗಿ ಆಗಲಿ, ಮಂತ್ರಿಗಳಾಗಿಯೇ ಆಗಲಿ, ಇಲ್ಲವೇ ಪ್ರಧಾನಮಂತ್ರಿಯಾಗಿಯೇ ಆಗಲಿ - ಎಲ್ಲ ಹಂತದಲ್ಲೂ ಅಟಲ್‌ಜಿಯವರು ಆದರ್ಶಪ್ರಾಯರಾಗಿದ್ದಾರೆ. ಅಟಲ್‌ಜಿಯವರ ಜನ್ಮದಿನದಂದು ನಾನು ಅವರಿಗೆ ವಂದಿಸುತ್ತೇನೆ. ಅವರ ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಒಬ್ಬ ಕಾರ್ಯಕರ್ತನಾಗಿ ಅಟಲ್‌ಜಿಯವರೊಂದಿಗೆ ಕೆಲಸ ಮಾಡುವ ಸೌಭಾಗ್ಯ ನನಗೆ ದೊರೆತಿತ್ತು.

ಎಷ್ಟೋ ನೆನಪುಗಳು ಕಣ್ಣ ಮುಂದೆ ತೇಲಿ ಬರುತ್ತವೆ. ಇಂದು ಬೆಳಿಗ್ಗೆಯೇ ನಾನು ಟ್ವೀಟ್ ಮಾಡಿದಾಗ ಒಂದು ಹಳೆಯ ವಿಡಿಯೋ ಕೂಡಾ ಶೇರ್ ಮಾಡಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅಟಲ್‌ಜಿ ಅವರ ಸ್ನೇಹದ ಸುರಿಮಳೆಯ ಸೌಭಾಗ್ಯ ಹೇಗೆ ಲಭಿಸುತ್ತಿತ್ತು ಎಂಬುದು ಆ ವಿಡಿಯೋ ನೋಡಿದರೆನೇ ಗೊತ್ತಾಗತ್ತೆ.

ಇಂದು ಕ್ರಿಸ್‌ಮಸ್ ದಿನದಂದು, ದೇಶವಾಸಿಗಳಿಗೆ ಉಡುಗೊರೆ ರೂಪದಲ್ಲಿ ೨ ಯೋಜನೆಗಳ ಲಾಭ ದೊರೆಯಲಿದೆ

ಒಂದು ರೀತಿಯಲ್ಲಿ ೨ ನವೀನತರ ಯೋಜನೆಗಳು ಆರಂಭವಾಗಲಿದೆ. ಇಡೀ ದೇಶದಲ್ಲಿ ಹಳ್ಳಿ ಇರಲಿ, ಪಟ್ಟಣವಿರಲಿ, ಓದಿದವರಾಗಲಿ, ಅಶಿಕ್ಷಿತರೇ ಆಗಲಿ - ಕ್ಯಾಷ್ ಲೆಸ್- ನಗದು ರಹಿತ ಅಂದರೆ ಏನು, ನಗದು ರಹಿತ ವ್ಯಾಪಾರ ಹೇಗೆ ನಡೆಯುತ್ತದೆ. ಹಣವಿಲ್ಲದೇ ಹೇಗೆ ಖರೀದಿ ಮಾಡಲಾಗುತ್ತದೆ ಎಂಬ ಕುರಿತು ಜನರಲ್ಲಿ ಕುತೂಹಲ ಮೂಡಿದೆ. ಪ್ರತಿಯೊಬ್ಬರೂ ಪರಸ್ಪರರಿದ ತಿಳಿದುಕೊಳ್ಳಲು ಕಲಿಯಲು ಬಯಸುತ್ತಿದ್ದಾರೆ. ಈ ವಿಚಾರಕ್ಕೆ ಪುಷ್ಟಿ ನೀಡಲು, ಮೊಬೈಲ್ ಬ್ಯಾಂಕಿಂಗ್‌ಗೆ ಬಲ ನೀಡಲು, ಇ-ಪೇಮೆಂಟ್ ಅಭ್ಯಾಸವಾಗಲೀ ಎಂದು ಭಾರತ ಸರ್ಕಾರ, ಗ್ರಾಹಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆಂದೇ ಪ್ರೊತ್ಸಾಹ ನೀಡುವ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗ್ರಾಹಕರಿಗೆ ಪ್ರೊತ್ಸಾಹ ನೀಡಲೆಂದು ಮಾಡಿರುವ ಯೋಜನೆ ‘lucky ಗ್ರಾಹಕ ಯೋಜನೆ. ವ್ಯಾಪಾರಿಗಳಿಗೆ ಪ್ರೊತ್ಸಾಹ ನೀಡುವ ಯೋಜನೆ Digi ಧನ್ ವ್ಯಾಪಾರ ಯೋಜನೆಯಾಗಿದೆ.

ಇಂದು ಡಿಸೆಂಬರ್ ೨೫, ಕ್ರಿಸ್‌ಮಸ್ ಉಡುಗೊರೆ ರೂಪದಲ್ಲಿ ೧೫ ಸಾವಿರ ಜನರಿಗೆ ಡ್ರಾ ಸಿಸ್ಟೆಮ್‌ನಲ್ಲಿ ಬಹುಮಾನ ದೊರೆಯಲಿದೆ ಮತ್ತು ೧೫ ಸಾವಿರ ಜನರ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಒಂದೊಂದು ಸಾವಿರ ರೂಪಾಯಿ ಜಮೆ ಆಗಲಿದೆ. ಇದು ಇಂದಿಗೆ ಮಾತ್ರ ಸೀಮಿತವಲ್ಲ, ಈ ಯೋಜನೆ ಇಂದು ಆರಂಭಿಸಿ ೧೦೦ ದಿನಗಳವರೆಗೆ ಮುಂದುವರಿಯಲಿದೆ. ಪ್ರತಿದಿನ ೧೫ ಸಾವಿರ ಜನರಿಗೆ ತಲಾ ಸಾವಿರ ರೂಪಾಯಿ ದೊರೆಯಲಿದೆ. ನೂರು ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಕೋಟ್ಯಾಂತರ ರೂಪಾಯಿಯ ಉಡುಗೊರೆ ದೊರೆಯಲಿದೆ. ಆದರೆ ಈ ಉಡುಗೊರೆ ಪಡೆಯಲು ನೀವು mobile banking, e-banking, RuPay Card, UPI, USSD ಹೀಗೆ ಹಣ ಸಂದಾಯದ ಎಷ್ಟು ಮೂಲಗಳಿವೆಯೋ ಅವಗಳನ್ನು ಬಳಸಬೇಕಾಗತ್ತದೆ, ಅದನ್ನಾಧರಿಸಿಯೇ ಡ್ರಾ ಮಾಡಲಾಗುವುದು. ಇದರ ಜೊತೆಗೆ ವಾರಕ್ಕೆ ಒಂದು ಬಾರಿ ಇಂಥ ಗ್ರಾಹಕರಿಗೆ ದೊಡ್ಡ ಡ್ರಾ ಇರುತ್ತದೆ, ಇದರಲ್ಲಿ ಬಹುಮಾನ ಕೂಡಾ ಲಕ್ಷಗಟ್ಟಲೆ ಇರುತ್ತದೆ. ೩ ತಿಂಗಳ ನಂತರ ಏಪ್ರಿಲ್ ೧೪ ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಜಯಂತಿ ಇದೆ. ಅಂದು ಒಂದು ಬಂಪರ್ ಡ್ರಾ ಇರುತ್ತದೆ. ಅದರಲ್ಲಿ ಕೋಟಿಗಟ್ಟಲೆ ಬಹುಮಾನವೂ ಇರುತ್ತದೆ. Digi ಧನ್ ವ್ಯಾಪಾರ ಯೋಜನೆ ಮುಖ್ಯವಾಗಿ ವ್ಯಾಪಾರಿಗಳಿಗೆ ನಿರ್ಮಿಸಲಾಗಿದೆ. ವ್ಯಾಪಾರಸ್ಥರು ಸ್ವತಃ ಈ ಯೋಜನೆಯಲ್ಲಿ ಪಾಲ್ಗೊಳ್ಳಲಿ ಮತ್ತು ತಮ್ಮ ವ್ಯಾಪಾರವನ್ನು Cashless ಮಾಡಲು ಗ್ರಾಹಕರನ್ನು ಪಾಲ್ಗೊಳ್ಳುವಂತೆ ಮಾಡಲಿ. ಇಂಥ ವ್ಯಾಪಾರಸ್ಥರಿಗೂ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು. ಈ ಬಹುಮಾನ ಸಾವಿರಾರು ಸಂಖ್ಯೆಯಲ್ಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರದ ಜೊತೆಗೆ ಬಹುಮಾನವೂ ದೊರೆಯಲಿದೆ. ಸಮಾಜದ ಎಲ್ಲ ವರ್ಗದವರೂ ಅದರಲ್ಲಿ ವಿಶೇಷವಾಗಿ ಬಡವರು ಮತ್ತು ಕೆಳ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಹಾಗಾಗಿ, ಯಾರು ೫೦ ರೂಪಾಯಿಗಿಂತ ಮೇಲ್ಪಟ್ಟು ಮತ್ತು ೩ ಸಾವಿರ ರೂಪಾಯಿಗಿಂತ ಕಡಿಮೆ ಖರೀದಿ ಮಾಡುತ್ತಾರೋ ಅವರಿಗೇ ಇದರ ಲಾಭ ದೊರೆಯುತ್ತದೆ. ೩ ಸಾವಿರಕ್ಕಿಂತ ಹೆಚ್ಚಿನ ಖರೀದಿ ಮಾಡುವವರಿಗೆ ಈ ಬಹುಮಾನ ದೊರೆಯುವುದಿಲ್ಲ. ಕಡು ಬಡವರೂ ಕೂಡ USSD ಬಳಸಿ feature ಫೋನ್ ಇಲ್ಲವೇ ಸಾಧಾರಣ ಫೋನ್ ಬಳಸಿ ಅವಶ್ಯಕ ವಸ್ತುಗಳನ್ನು ಖರೀದಿಸಬಹುದು. ಮಾರಾಟ ಮಾಡಬಹುದು. ಮತ್ತು ಹಣ ಸಂದಾಯ ಕೂಡಾ ಮಾಡಬಹುದು. ಇವರೆಲ್ಲರೂ ಈ ಬಹುಮಾನದ ಯೋಜನೆಯ ಫಲಾನುಭವಿಗಳಾಗಬಹುದು. ಗ್ರಾಮೀಣ ಭಾಗದಲ್ಲೂ ಜನರು AEPS ಮೂಲಕ ಖರೀದಿ ಮತ್ತು ಮಾರಾಟ ಮಾಡಬಹುದು ಮತ್ತು ಬಹುಮಾನ ಗೆಲ್ಲಬಹುದಾಗಿದೆ. ಇಂದು ಭಾರತದಲ್ಲಿ ೩೦ ಕೋಟಿ RUPay Card ಗಳಿವೆ. ಅದರಲ್ಲಿ ೨೦ ಸಾವಿರದಷ್ಟು ಜನ್‌ಧನ್ ಖಾತೆ ಹೊಂದಿದ ಬಡವರ ಬಳಿ ಇವೆ ಎಂದರೆ ಬಹಳಷ್ಟು ಜನರಿಗೆ ಆಶ್ಚರ್ಯವಾಗಬಹುದು, ಈ ೩೦ ಕೋಟಿ ಜನರು ತಕ್ಷಣದಿಂದಲೇ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ದೇಶದ ಜನತೆ ಈ ವ್ಯವಸ್ಥೆಯಲ್ಲಿ ಆಸಕ್ತಿವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಅಕ್ಕಪಕ್ಕದಲ್ಲಿರುವ ಯುವಕರಿಗೆ ಖಂಡಿತ ಇದು ಗೊತ್ತಿರುತ್ತದೆ. ನೀವು ಅವರನ್ನು ಕೇಳಿ ತಿಳಿದುಕೊಳ್ಳಬಹುದು. ನಿಮ್ಮ ಮನೆಯಲ್ಲೂ ೧೦ ನೇ ಇಲ್ಲ ೧೨ನೇ ತರಗತಿಯ ಮಕ್ಕಳಿರಬಹುದು, ಅವರೂ ಇದನ್ನು ನಿಮಗೆ ಕಲಿಸಬಹುದಾಗಿದೆ. ಇದು ತುಂಬಾ ಸರಳವಾಗಿದೆ. ನೀವುಮೊಬೈಲ್ ಫೋನ್‌ನಲ್ಲಿ WhatsApp ಬಳಸಿದಷ್ಟೇ ಸರಳವಾಗಿದೆ

ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿ Technology ಹೇಗೆ ಬಳಸಬೇಕು e-payment ಹೇಗೆ ಮಾಡಬೇಕು, online payment ಹೇಗೆ ಮಾಡಬೇಕು ಎಂಬ ಕುರಿತು ಜಾಗೃತಿ ಬಹಳ ವೇಗವಾಗಿ ಹಬ್ಬುತ್ತಿದೆ. ಕಳೆದ ಕೆಲವೇ ದಿನಗಳಲ್ಲಿ ನಗದು ರಹಿತ ವ್ಯಾಪಾರ, ಸುಮಾರು ಶೇಕಡಾ ೨೦೦ ರಿಂದ ೩೦೦ ರಷ್ಟು ವೃದ್ಧಿಯಾಗಿದೆ. ಇದನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಬಹುದೊಡ್ಡ ನಿರ್ಣಯ ತೆಗೆದುಕೊಂಡಿದೆ. ಇದು ಎಂಥ ದೊಡ್ಡ ನಿರ್ಣಯ ಎಂಬುದರ ಕುರಿತು ವ್ಯಾಪಾರಸ್ಥರು ಊಹಿಸಬಹುದು. ಯಾವ ವ್ಯಪಾರಿ digital ವ್ಯವಹಾರ ಮಾಡುತ್ತಾರೆಯೋ, ತಮ್ಮ ವ್ಯವಹಾರದಲ್ಲಿ ನಗದಿನ ಬದಲಾಗಿ oಟಿಟiಟಿe ಠಿಚಿಥಿmeಟಿಣ ಪದ್ಧತಿ ಅಳವಡಿಸಿಕೊಳ್ಳುತ್ತಾರೆಯೋ ಅಂಥ ವ್ಯಾಪಾರಿಗಳಿಗೆ Income Tax ಮುಕ್ತಗೊಳಿಸಲಾಗಿದೆ.

ನಾನು ದೇಶದ ಎಲ್ಲ ರಾಜ್ಯಗಳನ್ನೂ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೂ ಅಭಿನಂದಿಸುತ್ತೇನೆ. ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಈ ಅಭಿಯಾನವನ್ನು ಮುಂದುವರಿಸಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಶ್ರಿಯುತ ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಒಂದು ಸಮೀತಿ ನಿರ್ಮಿಸಲಾಗಿದೆ. ಅದು ಈ ಕುರಿತಾದ ಅನೇಕ ಯೋಜನೆಗಳ ಬಗ್ಗೆ ಆಲೋಚಿಸುತ್ತಿದೆ. ಅಲ್ಲದೆ ಸರ್ಕಾರಗಳೂ ತಮ್ಮ ವತಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನಾನು ಗಮನಿಸಿದ್ದೇನೆ. ಅಸ್ಸಾಂ ಸರ್ಕಾರ ಆಸ್ತಿ ಮತ್ತು ವ್ಯಾಪಾರದ License ಶುಲ್ಕವನ್ನು digital ಪಾವತಿ ಮಾಡಿದರೆ ಅವರಿಗೆ ಶೇ ೧೦ ರಷ್ಟು ರಿಯಾಯತಿ ನೀಡುವ ನಿರ್ಣಯ ಕೈಗೊಂಡಿದೆ ಎಂದು ನನಗೆ ಯಾರೋ ಹೇಳಿದರು. ಗ್ರಾಮೀಣ ಬ್ಯಾಂಕ್‌ನ ಶಾಖೆಗಳಲ್ಲಿ ಶೇ ೭೫ ರಷ್ಟು ಗ್ರಾಹಕರಿಂದ ಜನವರಿಯಿಂದ ಮಾರ್ಚ ಒಳಗೆ ಕನಿಷ್ಠ ೨ ಬಾರಿ digital ವ್ಯವಹಾರ ಮಾಡಿಸಿದರೆ ಬ್ಯಾಂಕಿನವರಿಗೆ ಸರ್ಕಾರದಿಂದ ೫೦ ಸಾವಿರ ರೂಪಾಯಿ ಬಹುಮಾನ ದೊರೆಯಲಿದೆ. ೩೧ ಮಾರ್ಚ ೨೦೧೭ ರೊಳಗೆ ಒಂದೊಮ್ಮೆ ೧೦೦% digital transaction ನಲ್ಲಿ ತೊಡಗಿಕೊಳ್ಳುವ ಗ್ರಾಮಗಳಿಗೆ ಸರ್ಕಾರದಿಂದ Uttam Panchayat for Digi-Transction ಯೋಜನೆಯಡಿ ೫ ಲಕ್ಷ ರೂಪಾಯಿ ಬಹುಮಾನ ನೀಡಲು ಘೋಷಣೆ ಮಾಡಲಾಗಿದೆ. ಯಾವ ರೈತರು ಬೀಜ ಮತ್ತು ಗೊಬ್ಬರ ಖರೀದಿಗೆ ಸಂಪೂರ್ಣ digital ಪಾವತಿ ಮಾಡುವರೋ ಅಂಥ ಮೊದಲ ೧೦ ರೈತರಿಗೆ Digital Krishak Shiromani ಸನ್ಮಾನದ ಜೊತೆಗೆ ಅಸ್ಸಾಂ ಸರ್ಕಾರದವರು ೫ ಸಾವಿರ ರೂಪಾಯಿ ಬಹುಮಾನ ನೀಡುತ್ತಿದ್ದಾರೆ. ನಾನು ಅಸ್ಸಾಂ ಸರ್ಕಾರವನ್ನು ಮತ್ತು ಇದೇ ರೀತಿಯ ಉಪಕ್ರಮಗಳನ್ನು ತೆಗೆದುಕೊಂಡ ಎಲ್ಲ ಸರ್ಕಾರಗಳನ್ನೂ ಅಭಿನಂದಿಸುತ್ತೇನೆ. ಸಾಕಷ್ಟು ಸಂಘ ಸಂಸ್ಥೆಗಳು ಕೂಡ ಗ್ರಾಮೀಣ ಬಡ ರೈತರಲ್ಲಿ digital ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಸಾಕಷ್ಟು ಸಫಲ ಪ್ರಯತ್ನ ಮಾಡಿವೆ. ಗೊಬ್ಬರಗಳನ್ನು ತಯಾರಿಸುವ GNFC Gujarat Nramada Valley Fertilizer ಮತ್ತು Chemical limited ನವರು ರೈತರಿಗೆ ಅನುಕೂಲವಾಗಲೆಂದು ಗೊಬ್ಬರ ಮಾರಾಟದ ಸ್ಥಳಗಳಲ್ಲಿ ಒಂದು ಸಾವಿರ Pos Machine ಗಳನ್ನು ಅಳವಡಿಸಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ೩೫ ಸಾವಿರ ರೈತರಿಗೆ ೫ ಲಕ್ಷ ಗೊಬ್ಬರದ ಚೀಲಗಳನ್ನು Digital ಪಾವತಿ ಮೂಲಕ ಮಾರಾಟ ಮಾಡಿದ್ದಾರೆ ಮತ್ತು ಇದೆಲ್ಲ ಕೇವಲ ೨ ವಾರದಲ್ಲಿ ಸಾಧಿಸಿದ್ದಾರೆ. ಮೋಜಿನ ಸಂಗತಿ ಎಂದರೆ GNFC ಯವರ ಗೊಬ್ಬರ ಮಾರಾಟದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ ೨೭ ರಷ್ಟು ವೃದ್ಧಿಯಾಗಿದೆ.

ಸೋದರ ಸೋದರಿಯರೇ, ನಮ್ಮ ಅರ್ಥ ವ್ಯವಸ್ಥೆಯಲ್ಲಿ, ನಮ್ಮ ಜೀವನ ವ್ಯವಸ್ಥೆಯಲ್ಲಿ ಅಸಂಘಟಿತ ವಲಯ ಬಹುದೊಡ್ಡದು. ಹೆಚ್ಚಿನ ಪ್ರಮಾಣದಲ್ಲಿ ಇಂಥವರ ಕೂಲಿ ಹಣವನ್ನು ಇಲ್ಲವೇ ಸಂಬಳವನ್ನು ಹಣದ ರೂಪದಲ್ಲಿ ನೀಡಲಾಗುತ್ತದೆ. ಇದರಿಂದಾಗಿ ಕಾರ್ಮಿಕರ ಶೋಷಣೆಯೂ ಆಗುತ್ತದೆ ಎಂಬುದು ನಮಗೆ ಗೊತ್ತು. ನೂರು ರೂಪಾಯಿ ಸಿಗಬೇಕಿದ್ದಲ್ಲಿ ಕೇವಲ ೮೦ ರೂಪಾಯಿ ದೊರೆಯುತ್ತದೆ. ೮೦ ರೂಪಾಯಿ ದೊರೆಯಬೇಕಿದ್ದಲ್ಲಿ ೫೦ ರೂಪಾಯಿ ದೊರೆಯುತ್ತದೆ. ಅಲ್ಲದೆ ಇವರು Insurance ನಂಥ ಆರೋಗ್ಯ ಕ್ಷೇತ್ರದ ಹಲವಾರು ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಆದರೆ ಈಗ ನಗದು ರಹಿತ ಪಾವತಿ ಆಗ್ತಾ ಇದೆ. ಹಣ ನೇರವಾಗಿ ಬ್ಯಾಂಕಿಗೆ ಜಮಾ ಆಗ್ತಾ ಇದೆ. ಒಂದು ರೀತಿ ಅಸಂಘಟಿತ ವಲಯ ಸಂಘಟಿತಗೊಳ್ಳುತ್ತಿದೆ. ಶೋಷಣೆ ಕೊನೆಗೊಳ್ಳುತ್ತಿದೆ. ಪಡೆಯುವ ಹಣದಲ್ಲಿ ಕಡಿತಗೊಳ್ಳುವುದೂ ಕೊನೆಗೊಳ್ಳುತ್ತಿದೆ. ಕಾರ್ಮಿಕರಿಗೆ ಬಡವರಿಗೆ ತಮ್ಮ ಪೂರ್ಣ ಹಣ ಸಿಗುವುದು ಸಾಧ್ಯವಾಗುತ್ತಿದೆ. ಜೊತೆಗೆ ತಮ್ಮ ಹಕ್ಕಿನ ಇತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ನಮ್ಮ ದೇಶ, ಅತೀ ಹೆಚ್ಚು ಯುವಕರಿರುವಂಥ ದೇಶ. Technology ಎಂಬುದು ನಮಗೆ ಸಹಜ ಸಾಧ್ಯ. ಭಾರತದಂತಹ ದೇಶ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕು. ನಮ್ಮ ಯುವಕರು ಸ್ಟಾರ್‍ಟ್ ಅಪ್‌ನಿಂದಾಗಿ ಬಹಳ ಪ್ರಗತಿ ಸಾಧಿಸಿದ್ದಾರೆ. ಈ digital movement ಒಂದು ಸುವರ್ಣಾವಕಾಶವಾಗಿದೆ. ನಮ್ಮ ಯುವಕರು ಹೊಸ ಹೊಸ idea ಗಳು technology ಗಳಿಂದ, ಹೊಸ ಪದ್ಧತಿಗಳಿಂದ ಈ ಕ್ಷೇತ್ರಕ್ಕೆ ಎಷ್ಟು ಬಲ ನೀಡಲು ಸಾಧ್ಯವೋ ಅಷ್ಟು ನೀಡಬೇಕು. ಆದರೆ ದೇಶವನ್ನು ಕಪ್ಪು ಹಣ ಮತ್ತು ಭೃಷ್ಟಾಚಾರದಿಂದ ಮುಕ್ತಗೊಳಿಸುವ ಈ ಅಭಿಯಾನದಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಒಗ್ಗೂಡಬೇಕಾಗಿದೆ.

ನನ್ನ ಪ್ರೀತಿಯ ದೇಶ ಬಾಂಧವರೇ, ನಾನು ಪ್ರತಿ ಬಾರಿಯೂ ಮನದಾಳದ ಮಾತಿಗೆ ಮೊದಲು ನಿಮ್ಮ ಸಲಹೆ ಸೂಚನೆಗಳನ್ನು ನೀಡಿ, ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ ಎಂದು ಆಗ್ರಹಿಸುತ್ತೇನೆ. ಈ ಬಾರಿ MyGov ಮತ್ತು NarendraModiApp ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಲಹೆಗಳು ಬಂದವು, ಅವುಗಳಲ್ಲಿ ಶೇ ೮೦ ರಿಂದ ೯೦ ರಷ್ಟು ಕಪ್ಪು ಹಣ, ಭ್ರಷ್ಟಾಚಾರ ನಿರ್ಮೂಲನೆ ಹೋರಾಟದ ಕುರಿತಾಗಿವೆ ಮತ್ತು ನೋಟು ಅಮಾನ್ಯಗೊಳಿಸಿದ ಕುರಿತು ಜನರು ಚರ್ಚೆ ಮಾಡಿದ್ದಾರೆ. ಈ ಎಲ್ಲ ಪತ್ರಗಳನ್ನು ಅವಲೋಕಿಸಿದಾಗ ಮೇಲ್ನೋಟಕ್ಕೆ ಅವನ್ನು ೩ ವಿಭಾಗಗಳಾಗಿ ವಿಂಗಡಿಸುತ್ತಿದ್ದೇನೆ. ಕೆಲ ಜನರು, ಸಾಮಾನ್ಯ ಜನತೆಗೆ ಹೇಗೆ ಕಷ್ಟವಾಗುತ್ತಿದೆ, ಯಾವ ರೀತಿಯ ಅನಾನುಕೂಲಗಳಾಗುತ್ತಿವೆ ಎಂಬುದರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. ದೇಶದ ಏಳ್ಗೆಗಾಗಿ ಇಷ್ಟೊಳ್ಳೆ ಪವಿತ್ರ ಕೆಲಸ ಮಾಡಿದರೂ ಎಲ್ಲಲ್ಲಿ ಎಂತೆಂಥ ಗಲಾಟೆಗಳು ನಡೆಯುತ್ತಿವೆ, ಹೇಗೆ ಅನ್ಯಾಯದ ಹೊಸ ರೂಪಗಳ ಅವಿಷ್ಕಾರವಾಗುತ್ತಿದೆ ಎಂಬುದರ ಕುರಿತು ಪತ್ರ ಬರೆದ ಇನ್ನೊಂದು ಗುಂಪು ಉಲ್ಲೇಖಿಸಿದೆ. ಈಗಾಗಲೇ ತೆಗೆದುಕೊಂಡ ಕ್ರಮಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಈ ಹೋರಾಟವನ್ನು ಮುಂದುವರಿಸಬೇಕು, ಕಪ್ಪು ಹಣ, ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಆಗಬೇಕು, ಅದಕ್ಕಾಗಿ ಇನ್ನಷ್ಟು ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಲ್ಲಿ ಹಿಂಜರಿಯಬಾರದು ಎಂದು ಹುರಿದುಂಬಿಸಿ ಬರೆದ ಜನರೂ ಇದ್ದಾರೆ.

ಇಷ್ಟೊಂದು ಪತ್ರಗಳನ್ನು ಬರೆದು ನನಗೆ ಸಹಾಯ ಮಾಡಿದ್ದಕ್ಕೆ ನಾನು ದೇಶದ ಜನತೆಗೆ ಋಣಿಯಾಗಿದ್ದೇನೆ. ಶ್ರೀಯುತ ಗುರುಮಣಿ ಕೇವಲ್ ಅವರು Mygov ಗೆ ಪತ್ರ ಬರೆದು, ಕಪ್ಪು ಹಣದ ತಡೆಗೆ ಕೈಗೊಂಡ ಕ್ರಮ ಪ್ರಶಂಸನಾರ್ಹವಾಗಿದೆ, ಆದರೆ ಸಾಮಾನ್ಯ ನಾಗರಿಕನಿಗೆ ತೊಂದರೆಗಳಾಗುತ್ತಿವೆ. ಆದರೆ ನಾವೆಲ್ಲರೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ. ಅಲ್ಲದೆ ಈ ಹೋರಾಟದಲ್ಲಿ ನಮ್ಮ ಪಾಲುದಾರಿಕೆ ಬಗ್ಗೆ ನಮಗೆ ಸಂತೋಷವಿದೆ. ನಾವು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸೈನಿಕರಂತೆ ಹೋರಾಡುತ್ತಿದ್ದೇವೆ ಎಂದಿದ್ದಾರೆ.

ಗುರುಮಣಿ ಕೇವಲ್ ಅವರೇನು ಬರೆದಿದ್ದಾರೆಯೋ ದೇಶದ ಮೂಲೆ ಮೂಲೆಯಿಂದ ಇದೇ ಭಾವನೆ ಹೊರ ಹೊಮ್ಮುತ್ತಿದೆ. ನಾವೆಲ್ಲ ಇದನ್ನು ಅನುಭವಿಸುತ್ತಿದ್ದೇವೆ. ಆದರೆ ಜನತೆ ಕಷ್ಟ ಅನುಭವಿಸುತ್ತಿದ್ದರೆ, ತೊಂದರೆ ಪಡುತ್ತಿದ್ದರೆ ಅದನ್ನು ಕಂಡು ಯಾರಿಗೆ ತಾನೇ ಸಂಕಟವಾಗುವುದಿಲ್ಲ. ನಿಮಗೆ ಎಷ್ಟು ಸಂಕಟವಾಗುತ್ತದೆಯೋ ಅಷ್ಟೇ ನನಗೂ ಆಗುತ್ತದೆ. ಆದರೆ ಒಂದು ಉತ್ತಮ ಧ್ಯೇಯಕ್ಕಾಗಿ, ಉಚ್ಚ ಮಟ್ಟದ ಉದ್ದೇಶವನ್ನು ಸಾಧಿಸಲು ನಿಷ್ಠೆಯಿಂದ ಕೆಲಸ ಮಾಡಿದರೆ ಈ ಕಷ್ಟ, ದುಖಃ ಮತ್ತು ತೊಂದರೆಗಳ ಮಧ್ಯೆಯೂ ದೇಶದ ಜನತೆ ಧೈರ್ಯದಿಂದ ಎದೆಯೊಡ್ಡಿ ನಿಂತಿರುತ್ತಾರೆ. ಈ ಜನರೇ ನಿಜವಾಗಿಯೂ Agents of Change ಅಂದರೆ ಬದಲಾವಣೆಯ ಹರಿಕಾರರಾಗಿದ್ದಾರೆ. ನಾನು ಜನತೆಗೆ ಇನ್ನೊಂದು ಕಾರಣಕ್ಕಾಗಿಯೂ ಅಭಿನಂದಿಸುತ್ತೇನೆ. ಅವರು ಕೇವಲ ಕಷ್ಟಗಳನ್ನು ಅನುಭವಿಸುವುದಷ್ಟೇ ಅಲ್ಲದೇ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಆ ಆಯ್ದ ಜನರಿಗೆ ಸರಿಯಾದ ಉತ್ತರವನ್ನೂ ನೀಡಿದ್ದಾರೆ. ಎಷ್ಟೊಂದು ಗಾಳಿ ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಮೂಲಭೂತವಾದದ ಲೇಪವನ್ನು ಹಚ್ಚುವ ಪ್ರಯತ್ನಗಳೂ ನಡೆದವು. ಯಾರೋ ನೋಟಿನ ಮೇಲೆ ಬರೆದ Spelling ತಪ್ಪಾಗಿದೆ ಎಂದು ಗುಲ್ಲು ಹಬ್ಬಿಸಿದರೆ, ಇನ್ನಾರೋ ಉಪ್ಪಿನ ಬೆಲೆ ಹೆಚ್ಚಾಗಿದೆ ಎಂದು, ಮತ್ತಾರೋ ೨೦೦೦ ಮುಖ ಬೆಲೆಯ ನೋಟುಗಳೂ ರದ್ದಾಗಲಿವೆ ಎಂದು ೫೦೦ ಮತ್ತು ೧೦೦ ಮುಖ ಬೆಲೆಯ ನೋಟುಗಳು ರದ್ದಾಗಲಿವೆ ಎಂದು ಪುಕಾರು ಹುಟ್ಟಿಸಿದ್ದರು. ಆದರೆ ನಾನು ಗಮನಿಸಿದ್ದೇನೆ ವಿಭಿನ್ನ ಪ್ರತೀತಿ, ಪುಕಾರುಗಳ ಹೊರತಾಗಿಯೂ ದೇಶದ ಜನತೆಯ ಮನಸ್ಸನ್ನು ಯಾರೂ ಕದಡಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ, ಎಷ್ಟೋ ಜನ ಮೈದಾನಕ್ಕೆ ಇಳಿದು ತಮ್ಮ Creativity ಮೂಲಕ, ತಮ್ಮ ಬುದ್ಧಿ ಶಕ್ತಿಯ ಮೂಲಕ, ಪುಕಾರು ಹುಟ್ಟಿಸುವವರ ಮುಖವಾಡವನ್ನೂ ಕಳಚಿ ಸತ್ಯವನ್ನು ಹಿಡಿದೆತ್ತಿದರು. ಜನರ ಈ ಸಾಮರ್ಥ್ಯಕ್ಕೆ ನೂರಾರು ನಮನಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ೧೨೫ ಕೋಟಿ ಜನತೆ ನಮ್ಮೊಂದಿಗೆ ಇದ್ದಾಗ ಯಾವುದೂ ಅಸಂಭವವಲ್ಲ ಎಂಬುದು ನನ್ನ ಅನುಭವಕ್ಕೆ ಬರುತ್ತಿದೆ. ನಾನು ಪ್ರತಿಕ್ಷಣವೂ ಅದನ್ನು ಅನುಭವಿಸುತ್ತಿದ್ದೇನೆ. ಜನತಾ ಜನಾರ್ಧನರೇ ಈಶ್ವರನ ಸ್ವರೂಪವಾದ್ದರಿಂದ ಅವರ ಆಶೀರ್ವಾದ ಆ ಪರಮಾತ್ಮನ ಆಶೀರ್ವಾದವಾಗಿ ಪರಿಣಮಿಸುತ್ತದೆ. ದೇಶದ ಜನರಿಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಮಹಾಯಜ್ಞದಲ್ಲಿ ಸಂಪೂರ್ಣ ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ಅವರಿಗೆ ನಮಸ್ಕರಿಸುತ್ತೇನೆ. ಸದನದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ರಾಜಕೀಯ ಪಕ್ಷಗಳ ಮತ್ತು Political Funding ನ ಸಂಬಂಧದಲ್ಲೂ ವಿಸ್ತೃತ ಚರ್ಚೆ ನಡೆಯಲಿ ಎಂದು ನಾನು ಬಯಸುತ್ತಿದ್ದೆ. ಒಂದೊಮ್ಮೆ ಸದನದ ಕಲಾಪ ನಡೆದಿದ್ದರೆ ಉತ್ತಮ ಚರ್ಚೆ ನಡೆಯುತ್ತಿತ್ತು. ಯಾರಾದರೂ ರಾಜಕೀಯ ಪಕ್ಷಗಳಿಗೆ ಎಲ್ಲವೂ ಮುಕ್ತವಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದರೆ ಅದೆಲ್ಲ ಸುಳ್ಳು. ಎಲ್ಲರಿಗೂ ಕಾನೂನು ಒಂದೇ. ವ್ಯಕ್ತಿಯಾಗಲೀ, ಸಂಘಟನೆಯಾಗಲೀ ಇಲ್ಲವೇ ರಾಜಕೀಯ ಪಕ್ಷವಾಗಲೀ ಎಲ್ಲರೂ ಕಾನೂನು ಪಾಲನೆ ಮಾಡಲೇಬೇಕು. ಯಾರು ಮುಕ್ತವಾಗಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಸಮರ್ಥನೆಯನ್ನು ಮಾಡಲಾರರೋ ಅವರು ಸರ್ಕಾರದ ಲೋಪ ದೋಷಗಳನ್ನು ಹುಡುಕುವುದರಲ್ಲೇ ನಿರತರಾಗಿರುತ್ತಾರೆ. ಪದೇ ಪದೇ ಯಾಕೆ ನಿಮಯ ಬದಲಾವಣೆ ಮಾಡಲಾಗುತ್ತದೆ ಎಂಬ ಮಾತೂ ಬರುತ್ತದೆ. ಈ ಸರ್ಕಾರ ಇರುವುದು ಜನತಾ ಜನಾರ್ಧನರಿಗಾಗಿ. ಜನತೆಯಿಂದ ನಿರಂತರವಾಗಿ feedback ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಜನತಾ ಜನಾರ್ಧನರಿಗೆ ಎಲ್ಲಿ ಕಷ್ಟಗಳಾಗುತ್ತಿದೆ, ಯಾವ ನಿಯಮದಿಂದಾಗಿ ತೊಂದರೆ ಆಗುತ್ತಿದೆ, ಅದಕ್ಕೆ ಯಾವ ಮಾರ್ಗೋಪಾಯವಿದೆ ಎಂದು ಸರ್ಕಾರ ಸಂವೇದನಶೀಲವಾಗಿರುವುದರಿಂದ, ಜನತಾ ಜನಾರ್ಧನರ ಸುಖ ಸೌಲಭ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಏನೆಲ್ಲ ನಿಯಮಗಳನ್ನು ಬದಲಿಸಬೇಕಾಗುತ್ತದೆಯೋ ಅದನ್ನು ಬದಲಿಸುತ್ತದೆ. ಇನ್ನೊಂದೆಡೆ ನಾನು ಕಳೆದ ತಿಂಗಳು ೮ ನೇ ತಾರೀಖಿನಂದು, ಮೊದಲನೇ ದಿನವೇ ಹೇಳಿದ್ದೆ, ಈ ಹೋರಾಟ ಅಸಾಮಾನ್ಯವಾದುದು ಎಂದು. ೭೦ ವರ್ಷಗಳಿಂದ ಮೋಸ ಮತ್ತು ಭ್ರಷ್ಟಾಚಾರದ ವ್ಯವಹಾರಗಳಲ್ಲಿ ಯಾವೆಲ್ಲ ಶಕ್ತಿಗಳು ಕೈಗೂಡಿಸಿವೆ? ಅವರ ಶಕ್ತಿ ಎಷ್ಟು? ಇಂಥವರೊಂದಿಗೆ ನಾನು ಪೋಟಿಗೆ ಇಳಿದಾಗ ಅವರು ಕೂಡ ಸರ್ಕಾರವನ್ನು ಸೋಲಿಸಲು ನಿತ್ಯವೂ ಹೊಸ ಮಾರ್ಗಗಳನ್ನು ಅನುಸರಿಸುತ್ತಾರೆ. ಅವರು ಹೊಸ ದಾರಿಗಳನ್ನು ಹುಡುಕಿದಾಗ ನಾವು ತಿರುಗೇಟು ನೀಡಲು ಹೊಸ ಮಾರ್ಗ ಕಂಡುಕೊಳ್ಳಲೇಬೇಕಲ್ಲವೇ. ನೀನು ಸೇರಾದ್ರೆ ನಾನು ಸವ್ವಾ ಸೇರು. ಯಾಕೆಂದ್ರೆ ನಾವು ಭ್ರಷ್ಟಾಚಾರಿಗಳನ್ನು, ಕಪ್ಪು ಹಣವನ್ನು ಮತ್ತು ಅಕ್ರಮಗಳನ್ನು ನಾಶಪಡಿಸಲು ನಿರ್ಧರಿಸಿದ್ದೇವೆ, ಇನ್ನೊಂದೆಡೆ ಎಷ್ಟೋ ಜನರು ಬರೆದ ಪತ್ರಗಳಲ್ಲಿ ಯಾವ ರೀತಿಯ ಗಲಾಟೆಗಳು ಆಗುತ್ತಿವೆ, ಎಂಥ ಹೊಸ ಮಾರ್ಗಗಳನ್ನು ಹುಡುಕಲಾಗುತ್ತಿದೆ ಎಂಬ ಚರ್ಚೆ ಆಗಿದೆ.

ನನ್ನ ಪ್ರಿಯ ದೇಶಬಾಂಧವರನ್ನು ಒಂದು ವಿಷಯದ ಕುರಿತು ಹಾರ್ದಿವಾಗಿ ಅಭಿನಂದಿಸಬಯಸುತ್ತೇನೆ. ದಿನವೂ ಜನರು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ, ಹಣವನ್ನು ವಶಪಡಿಸಿಕೊಳ್ಳಲಾಗುತ್ತಿದೆ, ದಾಳಿಗಳು ನಡೆದಿವೆ. ಒಳ್ಳೊಳ್ಳೆ ಜನರೇ ಸಿಕ್ಕಿ ಬೀಳುತ್ತಿದ್ದಾರೆ, ಇದೆಲ್ಲವನ್ನೂ ನೀವು ಟಿವಿ ವಾಹಿನಿಗಳ ಸುದ್ದಿಯಲ್ಲಿ ನೋಡ್ತಾ ಇರಬಹುದು. ಇದು ಹೇಗೆ ಸಾಧ್ಯವಾಯ್ತು, ನಾನು ಒಳಗುಟ್ಟು ಹೇಳಿಬಿಡಲೇ, ಗುಟ್ಟು ಏನಪ್ಪಾ ಅಂದ್ರೆ ಎಲ್ಲ ಮಾಹಿತಿ ನನಗೆ ಜನರಿಂದಲೇ ದೊರೆಯುತ್ತಿದೆ. ಸರ್ಕಾರೀ ವ್ಯವಸ್ಥೆಯಿಂದ ಏನೆಲ್ಲ ಮಾಹಿತಿ ಲಭ್ಯವಾಗುತ್ತದೆಯೋ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಾಮಾನ್ಯ ನಾಗರಿಕರಿಂದ ಮಾಹಿತಿ ದೊರೆಯುತ್ತಿದೆ. ಜನಸಾಮಾನ್ಯರ ಜಾಗರೂಕತೆಯಿಂದಲೇ ನಮಗೆ ಹೆಚ್ಚಿನ ಸಫಲತೆ ದೊರೆಯುತ್ತಿದೆ. ಯಾರೇ ಆಗಲಿ ಕಲ್ಪನೆ ಮಾಡಬಹುದು - ನನ್ನ ದೇಶದ ಜಾಗೃತ ನಾಗರಿಕರು ಇಂಥ ವಿಷಯಗಳನ್ನು ಬಯಲಿಗೆಳೆಯಲು ಎಂಥ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂದು. ಬರುವ ಮಾಹಿತಿಯಿಂದ ನಮಗೆ ಸಾಕಷ್ಟು ಸಫಲತೆಯೂ ಸಿಗುತ್ತಿದೆ. ಸರ್ಕಾರ ಇದಕ್ಕಾಗಿ ಇಂಥ ಮಾಹಿತಿಗಳನ್ನು ಪಡೆಯಲೆಂದೇ ಒಂದು e-mail address ಸೃಷ್ಟಿಸಿದೆ, ಅದರಲ್ಲೂ ಮಾಹಿತಿಯನ್ನು ಕಳುಹಿಸಬಹುದು. MyGov ಗೆ ಕೂಡ ಕಳುಹಿಸಬಹುದು. ಸರ್ಕಾರ ಇಂಥ ಎಲ್ಲ ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಡಲು ಬದ್ಧವಾಗಿದೆ. ನಿಮ್ಮ ಸಹಕಾರ ಇದ್ದಾಗ ಹೋರಾಡುವುದು ಇನ್ನೂ ಸುಲಭ ಎಂದು ನನಗೆ ವಿಶ್ವಾಸವಿದೆ.

೩ ನೇ ವಿಭಾಗದ ಪತ್ರ ಬರೆಯುವ ಜನರ ಗುಂಪು ತುಂಬಾ ದೊಡ್ಡ ಸಂಖ್ಯೆಯಲ್ಲಿದೆ. ಮೋದಿಯವರೇ ದಣಿಯಬೇಡಿ, ನಿಲ್ಲಬೇಡಿ, ಎಷ್ಟು ಕಠಿಣ ಕ್ರಮ ತೆಗೆದುಕೊಳ್ಳಬಹುದೋ ತೆಗೆದುಕೊಳ್ಳಿ, ಆದರೆ ಇದೀಗ ಒಮ್ಮೆ ಈ ಮಾರ್ಗದಲ್ಲಿ ಮುನ್ನಡೆದಿದ್ದೇವೆ ಎಂದರೆ ಗುರಿ ತಲುಪಲೇಬೇಕಿದೆ ಎಂದು ಅವರು ಬರೆಯುತ್ತಾರೆ. ಇಂಥ ಪತ್ರ ಬರೆದ ಎಲ್ಲರಿಗೆ ವಿಶೇಷ ಧನ್ಯವಾದಗಳು. ಯಾಕೆಂದ್ರೆ ಅವರ ಪತ್ರದಲ್ಲಿ ವಿಶ್ವಾಸವೂ ಇದೆ, ಆಶೀರ್ವಾದವೂ ಇದೆ. ಇದು ಪೂರ್ಣ ವಿರಾಮವಲ್ಲ, ಇದು ಕೇವಲ ಆರಂಭ ಅಷ್ಟೇ ಎಂದು ನಿಮಗೆ ವಿಶ್ವಾಸ ನೀಡಬಯಸುತ್ತೇನೆ. ಈ ಯುದ್ಧವನ್ನು ಗೆಲ್ಲಲೇಬೇಕಿದೆ ದಣಿಯುವ ಅಥವಾ ನಿಲ್ಲುವ ಪ್ರಶ್ನೆಯೇ ಇಲ್ಲ, ಇನ್ನು ೧೨೫ ಕೋಟಿ ಜನರ ಆಶೀರ್ವಾದವಿರುವ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ.

ನಿಮಗೆ ಗೊತ್ತಿರಬೇಕು, ನಮ್ಮ ದೇಶದಲ್ಲಿ ಬೇನಾಮಿ ಸ್ವತ್ತಿನ ಒಂದು ಕಾನೂನಿದೆ. ೧೯೮೮ ರಲ್ಲಿ ಈ ಕಾನೂನು ಜಾರಿಗೆ ಬಂದಿತ್ತು. ಆದರೆ ಎಂದೂ ಅದರ ನಿಯಮಗಳು ಜಾರಿಗೆ ಬರಲೇ ಇಲ್ಲ. ಅದನ್ನು Notify ಮಾಡಲೇ ಇಲ್ಲ, ಅದು ತಣ್ಣಗೇ ಉಳಿದುಬಿಟ್ಟಿತ್ತು. ನಾವು ಅದನ್ನು ಹೊರ ತೆಗೆದಿದ್ದೇವೆ ಮತ್ತು ಬೇನಾಮಿ ಸ್ವತ್ತಿನ ವಿರುದ್ಧ ಬಹಳ ತೀಕ್ಷ್ಣವಾದ ಕಾನೂನು ಜಾರಿಗೆ ತಂದಿದ್ದೇವೆ. ಮುಂಬರುವ ದಿನಗಳಲ್ಲಿ ಈ ಕಾನೂನು ತನ್ನ ಕೆಲಸ ಮಾಡಲಿದೆ. ದೇಶದ ಹಿತಕ್ಕಾಗಿ, ಜನರ ಹಿತಕ್ಕಾಗಿ, ಏನೇನು ಮಾಡಬೇಕಿದೆಯೋ ಅದು ನಮ್ಮ ಆದ್ಯತೆಯಾಗಿದೆ.

ನನ್ನ ಪ್ರೀತಿಯ ದೇಶಬಾಂಧವರೇ, ಕಳೆದ ಬಾರಿ ಮನದಾಳದ ಮಾತಿನಲ್ಲಿ ನಾನು ಹೇಳಿದ್ದೆ, ಈ ಕಠಿಣ ಪರಿಸ್ಥಿತಿಗಳ ನಡುವೆಯೂ ನಮ್ಮ ರೈತಬಾಂಧವರು ಬಿತ್ತನೆಯ ಪ್ರಮಾಣದಲ್ಲಿ ಕಳೆದ ವರ್ಷದ ದಾಖಲೆ ಮುರಿದಿದ್ದಾರೆ ಕೃಷಿ ಕ್ಷೇತ್ರದ ದೃಷ್ಟಿಯಿಂದ ಇದೊಂದು ಶುಭ ಸಂಕೇತವಾಗಿದೆ. ಈ ದೇಶದ ಕಾರ್ಮಿಕನಾಗಲೀ, ರೈತನಾಗಲೀ, ಯುವಕರಾಗಲಿ ಇವರೆಲ್ಲರ ಶ್ರಮ ಹೊಸ ರಂಗು ಮೂಡಿಸಿದೆ. ಕಳೆದ ದಿನಗಳಲ್ಲಿ ವಿಶ್ವದ ಆರ್ಥಿಕ ವೇದಿಕೆಯಲ್ಲಿ ಭಾರತ ಹಲವಾರು ಕ್ಷೇತ್ರಗಳಲ್ಲಿ ತನ್ನ ಹೆಸರನ್ನು ಬಹಳ ಗೌರವದಿಂದ ದಾಖಲಿಸಿಕೊಂಡಿದೆ. ನಮ್ಮ ದೇಶದ ಜನರ ಸತತ ಪ್ರಯತ್ನದ ಫಲವಾಗಿ ಬೇರೆ ಬೇರೆ ಸೂಚ್ಯಂಕಗಳ ಮೂಲಕ ಭಾರತ ವಿಶ್ವ ರಾಂಕಿಂಗ್ ನಲ್ಲಿ ಮೇಲ್ದರ್ಜೆಗೇರುತ್ತಿರುವುದು ಕಂಡು ಬರುತ್ತಿದೆ. World Bank ನ Business Report ನಲ್ಲಿ ಭಾರತದ ರಾಂಕಿಂಗ್ ಹೆಚ್ಚಿದೆ. ನಾವು ಭಾರತದ ವ್ಯಾಪಾರಿ ವಿಧಾನಗಳನ್ನು ವಿಶ್ವದ ಅತ್ಯುತ್ತಮ ವಿಧಾನಗಳಿಗೆ ಸರಿ ದೂಗುವಂತೆ ಬಹಳ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲಿ ಸಫಲತೆಯೂ ದೊರೆಯುತ್ತಿದೆ. UNCTAD ಮೂಲಕ ಪ್ರಕಟಿಸಲಾದ world investment report ಅನುಸಾರ ೨೦೧೬-೧೮ ರ ಸಾಲಿನ ಅತ್ಯುನ್ನತ ಆತಿಥೇಯ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತದ ಸ್ಥಾನ ೩ ಕ್ಕೇರಿದೆ. World Economic Forum ನ global competitiveness Report ನಲ್ಲಿ ಭಾರತ ೩೨ ನೇ ಸ್ಥಾನಕ್ಕೇರಿದೆ. Global innovationindex 2016 ರಲ್ಲಿ ನಾವು ೧೬ ಸ್ಥಾನಗಳ ಏರಿಕೆ ಸಾಧಿಸಿದ್ದೇವೆ. ಮತ್ತು World Bank ನ Logistics Performance Index ೨೦೧೬ ರಲ್ಲಿ ೧೯ ರಾಂಕ್ ಗಳ ಏರಿಕೆ ಆಗಿದೆ. ಇನ್ನೂ ಇಂತಹ ಹಲವಾರು report ಗಳ ಅಂಕಿ ಅಂಶಗಳು ಭಾರತ ಪ್ರಗತಿಯತ್ತ ಸಾಗಿದೆ ಎಂಬುದನ್ನೇ ಸೂಚಿಸುತ್ತಿವೆ.

ನನ್ನ ಪ್ರೀತಿಯ ದೇಶ ಬಾಂಧವರೇ, ಈ ಬಾರಿ ಸಂಸತ್ತಿನ ಕಲಾಪ ದೇಶದ ಜನತೆಯ ಮುನಿಸಿಗೆ ಕಾರಣವಾಗಿದೆ. ಸಂಸತ್ತಿನ ಆಗು ಹೋಗುಗಗಳ ಬಗೆಗೆ ನಾಲ್ಕೂ ದಿಕ್ಕುಗಳಿಂದ ರೋಷ ವ್ಯಕ್ತವಾಗಿದೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರೂ ಕೂಡ ತಮ್ಮ ಮುನಿಸನ್ನು ಬಹಿರಂಗವಾಗೇ ವ್ಯಕ್ತಪಡಿಸಿದ್ದಾರೆ. ಆದರೇ, ಇಂಥ ಪರಿಸ್ಥಿತಿಯಲ್ಲೂ ಕೆಲವೊಮ್ಮೆ ಒಳ್ಳೇದು ಘಟಿಸಿದಾಗ ಮನಸ್ಸಿಗೆ ಒಂದು ಬಗೆಯ ಸಂತೋಷ ಲಭಿಸುತ್ತದೆ. ಸಂಸತ್ತಿನ ಸದ್ದು ಗದ್ದಲದ ಮಧ್ಯೆಯೇ ಆದ ಒಂದು ಉತ್ತಮ ಕೆಲಸದತ್ತ ದೇಶದ ಗಮನ ಹರಿದಿಲ್ಲ. ಸೋದರ ಸೋದರಿಯರೇ, ಇಂದು ನನಗೆ ಈ ವಿಷಯ ತಿಳಿಸಲು ತುಂಬಾ ಗರ್ವವೆನಿಸುತ್ತದೆ ಮತ್ತು ಹರ್ಷದಾಯಯಕವೆನಿಸುತ್ತಿದೆ. ದಿವ್ಯಾಂಗರ ಕುರಿತಾದ ನಿಶ್ಚಿತ ಗುರಿಯೊಂದಿಗೆ ನಮ್ಮ ಸರ್ಕಾರ ಮುಂದುವರಿದಿತ್ತು. ಅದಕ್ಕೆ ಸಂಬಂಧಿಸಿದ ಒಂದು ಮಸೂದೆ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿತು. ಇದಕ್ಕಾಗಿ ನಾನು ರಾಜ್ಯ ಸಭೆ ಮತ್ತು ಲೋಕ ಸಭೆಯ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ದೇಶದ ಕೋಟ್ಯಂತರ ದಿವ್ಯಾಂಗರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ದಿವ್ಯಾಂಗರ ಕುರಿತು ನಮ್ಮ ಸರ್ಕಾರ ಬದ್ಧವಾಗಿದೆ. ನಾನು ಸ್ವತಃ ಈ ವಿಷಯದ ಅಭಿಯಾನಕ್ಕೆ ವೇಗ ನೀಡಲು ಪ್ರಯತ್ನ ಮಾಡಿದ್ದೇನೆ. ದಿವ್ಯಾಂಗರಿಗೆ ಅವರ ಹಕ್ಕು ಮತ್ತು ಸನ್ಮಾನ ಸಿಗಲಿ ಎಂಬುದು ನನ್ನ ಉದ್ದೇಶವಾಗಿತ್ತು. ಪ್ಯಾರಾ ಒಲಿಂಪಿಕ್ಸ ನಲ್ಲಿ ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ದಿವ್ಯಾಂಗ ಸೋದರ ಸೋದರಿಯರು ನಮ್ಮ ಪ್ರಯತ್ನ ಮತ್ತು ಭರವಸೆಗಳಿಗೆ ಇಂಬು ನೀಡಿದರು. ಅವರು ತಮ್ಮ ವಿಜಯದಿಂದ ದೇಶದ ಗೌರವವವನ್ನು ಹೆಚ್ಚಿಸುವುದಲ್ಲದೆ ತಮ್ಮ ಸಾಮರ್ಥ್ಯದಿಂದ ಜನರನ್ನು ಬೆರಗುಗೊಳಿಸಿದರು. ನಮ್ಮ ದಿವ್ಯಾಂಗ ಸೋದರ ಸೋದರಿಯರು ದೇಶದ ಇತರ ನಾಗರಿಕರಂತೆ ಅಮೂಲ್ಯ ಆಸ್ತಿ ಆಗಿದ್ದಾರೆ, ಅದ್ಭುತ ಶಕ್ತಿಯಾಗಿದ್ದಾರೆ. ಈ ಕಾನೂನು ಜಾರಿಗೆ ಬರುವ ಮೂಲಕ ದಿವ್ಯಾಂಗರಿಗೆ ಉದ್ಯೋಗಾವಕಾಶಗಳು ಹೆಚ್ಚಿವೆ ಎಂಬುದರ ಕುರಿತು ಇಂದು ನಾನು ತುಂಬಾ ಸಂತೋಷದಿಂದಿದ್ದೇನೆ. ಸರ್ಕಾರಿ ಉದ್ಯೋಗಗಳಲ್ಲಿ ಇವರಿಗೆ ಮೀಸಲಾತಿಯನ್ನು ಶೇ ೪ ರಷ್ಟು ಹೆಚ್ಚಿಸಲಾಗಿದೆ. ಈ ಕಾನೂನಿನಲ್ಲಿ ದಿವ್ಯಾಂಗರ ಶಿಕ್ಷಣ, ಸೌಲಭ್ಯ ಮತ್ತು ದೂರುಗಳಿಗಾಗಿ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ಕಳೆದ ೨ ವರ್ಷಗಳಲ್ಲಿ ದಿವ್ಯಾಂಗರಿಗಾಗಿ ೪೩೫೦ ಕ್ಯಾಂಪ್ ಆಯೋಜಿಸಿದೆ ಎನ್ನುವುದರಿಂದ ದಿವ್ಯಾಂಗರ ಬಗ್ಗೆ ಸರ್ಕಾರ ಎಷ್ಟು ಸಂವೇದನಶೀಲವಾಗಿದೆ ಎಂಬುದನ್ನು ನೀವು ಅಂದಾಜಿಸಬಹುದಾಗಿದೆ. ೩೫೨ಕೋಟಿ ರೂಪಾಯಿಯ ಮೊತ್ತದ ವೆಚ್ಚದಲ್ಲಿ ೫ ಲಕ್ಷ ೮೦ ಸಾವಿರ ದಿವ್ಯಾಂಗ ಸೋದರ ಸೋದರಿಯರಿಗೆ ಪರಿಕರಗಳನ್ನು ಹಂಚಲಾಗಿದೆ. ಸರ್ಕಾರ ವಿಶ್ವಸಂಸ್ಥೆಯ ಭಾವನೆಗಳಿಗನುಸಾರ ಹೊಸ ಕಾನೂನನ್ನು ರಚಿಸಿದೆ. ಈ ಹಿಂದೆ ದಿವ್ಯಾಂಗರ ಶ್ರೇಣಿ ೭ ಬಗೆ ಯದ್ದಾಗಿತ್ತು, ಆದರೆ ಈಗ ಕಾನೂನು ನಿರ್ಮಿಸಿ ೨೧ ಬಗೆಗಳಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ೧೪ ಹೊಸ ಶ್ರೇಣಿಗಳನ್ನು ಸೇರಿಸಲಾಗಿದೆ. ದಿವ್ಯಾಂಗರ ಇಂಥ ಎಷ್ಟೋ ಶ್ರೇಣಿಗಳನ್ನು ಸೇರಿಸುವ ಮೂಲಕ ಹಲವರಿಗೆ ಮೊದಲ ಬಾರಿಗೆ ನ್ಯಾಯ ದೊರೆತಿದೆ ಮತ್ತು ಅವಕಾಶ ದೊರೆತಂತಾಗಿದೆ. ಉದಾಹರಣೆಗೆ Thalassemia, Parkinson’s, ಕುಬ್ಜರು ಮುಂತಾದವರನ್ನು ಈ ಶ್ರೇಣಿಯಲ್ಲಿ ಸೇರಿಸಲಾಗಿದೆ. ನನ್ನ ಯುವ ಸ್ನೇಹಿತರೇ, ಕಳೆದ ಕೆಲವು ವಾರಗಳಲ್ಲಿ ಕ್ರೀಡಾ ಜಗತ್ತಿನಲ್ಲಿ ನಮ್ಮೆಲ್ಲರಿಗೂ ಗೌರವ ಹೆಚ್ಚಿಸುವಂಥ ಸುದ್ದಿಗಳು ಕೇಳಿ ಬಂದವು. ಭಾರತೀಯರಾಗಿರುವ ನಮ್ಮೆಲ್ಲರಿಗೂ ಹೆಮ್ಮೆಯೆನಿಸುವುದು ಸ್ವಾಭಾವಿಕವೇ. ಭಾರತೀಯ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ೪-೦ ಅಂಕಗಳಿಂದ ಸಿರೀಸ್‌ನಲ್ಲಿ ಜಯ ಲಭಿಸಿದೆ. ಇದರಲ್ಲಿ ಕೆಲವು ಯುವ ಕ್ರೀಡಾಳುಗಳ ಪ್ರದರ್ಶನ ಪ್ರಶಂಸನೀಯವಾಗಿದೆ. ನಮ್ಮ ಯುವಕ ಕರುಣ್ ನಾಯರ್ ತ್ರಿಶತಕ ಬಾರಿಸಿದ್ದಾನೆ. ಕೆ ಎಲ್ ರಾಹುಲ್ ೧೯೯ ರನ್‌ಗಳನ್ನು ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೋಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಅತ್ಯುತ್ತಮ ನಾಯಕತ್ವವನ್ನೂ ಪ್ರದರ್ಶಿಸಿದರು. ಭಾರತೀಯ ಕ್ರಿಕೆಟ್ ತಂಡದ off-spinner ಆರ್ ಅಶ್ವಿನ್ ಅವರನ್ನು ಐ ಸಿ ಸಿ ೨೦೧೬ ರ ‘Cricketer Of the year ’ ಮತ್ತು ‘Test Cricketer ಎಂದು ಘೋಷಿಸಿದೆ. ಇವರೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಕಿ ಕ್ಷೇತ್ರದಲ್ಲೂ ೧೫ ವರ್ಷಗಳ ನಂತರ ಬಹಳ ಉತ್ತಮ ಅದ್ಭುತ ಸುದ್ದಿ ಬಂದಿದೆ. Junior Hockey Team World Cup ಮೇಲೆ ತನ್ನ ಹಿಡಿತ ಸಾಧಿಸಿದೆ. ೧೫ ವರ್ಷಗಳ ನಂತರ Junior Hockey Team ಗೆ World Cup ಗೆಲ್ಲುವ ಅವಕಾಶ ಲಭಿಸಿದೆ. ಈ ವಿಜಯಕ್ಕೆ ಯುವ ಕ್ರೀಡಾಳುಗಳಿಗೆ ಅಭಿನಂದನೆ. ಈ ವಿಜಯ ಭಾರತೀಯ ಹಾಕಿ ತಂಡದ ಭವಿಷ್ಯಕ್ಕೆ ಶುಭ ಸಂಕೇತವಾಗಿದೆ. ಕಳೆದ ತಿಂಗಳು ನಮ್ಮ ಮಹಿಳಾ ಕ್ರೀಡಾಳುಗಳು ಕೂಡಾ ಅದ್ಭುತ ಪ್ರದರ್ಶನ ನೀಡಿದರು. ಭಾರತದ ಮಹಿಳಾ ಹಾಕಿ ತಂಡ Asian Champions Trophy ಗೆದ್ದಿದೆ ಅಲ್ಲದೆ ಇತ್ತೀಚೆಗೆ ಕೆಲ ದಿನಗಳ ಹಿಂದೆಯಷ್ಟೇ Under 18 Asia Cup ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ ಗಿಟ್ಟಿಸಿಕೊಂಡಿದೆ. ನಾನು ಕ್ರಿಕೆಟ್ ಮತ್ತು ಹಾಕಿ ತಂಡದ ಎಲ್ಲ ಕ್ರೀಡಾಳುಗಳಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶ ಬಾಂಧವರೆ, ೨೦೧೭ ನೇ ವರ್ಷ ಹೊಸ ಉತ್ಸಾಹ ಹೊಸ ಹುರುಪಿನಿಂದ ತುಂಬಿರಲಿ. ನಿಮ್ಮ ಎಲ್ಲ ಸಂಕಲ್ಪಗಳು ಸಿದ್ಧಿಸಲಿ. ವಿಕಾಸದ ಹೊಸ ಉತ್ತುಂಗವನ್ನು ತಲುಪೋಣ. ಸುಖ ಶಾಂತಿಯುತ ಜೀವನ ನಡೆಸುವ ಅವಕಾಶ ಕಡುಬಡವರಿಗೂ ಲಭಿಸಲಿ. ೨೦೧೭ರ ನೂತನ ಸಂವತ್ಸರದ ಅನಂತ ಅನಂತ ಶುಭಾಷಯಗಳು. ಅನಂತ ಧನ್ಯವಾದಗಳು

  • Jayanta Kumar Bhadra February 11, 2025

    Jay 🕉 🕉 🕉 namaste namaste
  • krishangopal sharma Bjp January 21, 2025

    नमो नमो 🙏 जय भाजपा 🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹
  • krishangopal sharma Bjp January 21, 2025

    नमो नमो 🙏 जय भाजपा 🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹
  • krishangopal sharma Bjp January 21, 2025

    नमो नमो 🙏 जय भाजपा 🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 21, 2025

    नमो नमो 🙏 जय भाजपा 🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 21, 2025

    नमो नमो 🙏 जय भाजपा 🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • Priya Satheesh January 14, 2025

    🐯
  • Chhedilal Mishra December 05, 2024

    Jai shrikrishna
  • Reena chaurasia August 28, 2024

    bjo
  • Pradhuman Singh Tomar August 01, 2024

    bjp
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"Huge opportunity": Japan delegation meets PM Modi, expressing their eagerness to invest in India
NM on the go

Nm on the go

Always be the first to hear from the PM. Get the App Now!
...
Today, India is not just a Nation of Dreams but also a Nation That Delivers: PM Modi in TV9 Summit
March 28, 2025
QuoteToday, the world's eyes are on India: PM
QuoteIndia's youth is rapidly becoming skilled and driving innovation forward: PM
Quote"India First" has become the mantra of India's foreign policy: PM
QuoteToday, India is not just participating in the world order but also contributing to shaping and securing the future: PM
QuoteIndia has given Priority to humanity over monopoly: PM
QuoteToday, India is not just a Nation of Dreams but also a Nation That Delivers: PM

श्रीमान रामेश्वर गारु जी, रामू जी, बरुन दास जी, TV9 की पूरी टीम, मैं आपके नेटवर्क के सभी दर्शकों का, यहां उपस्थित सभी महानुभावों का अभिनंदन करता हूं, इस समिट के लिए बधाई देता हूं।

TV9 नेटवर्क का विशाल रीजनल ऑडियंस है। और अब तो TV9 का एक ग्लोबल ऑडियंस भी तैयार हो रहा है। इस समिट में अनेक देशों से इंडियन डायस्पोरा के लोग विशेष तौर पर लाइव जुड़े हुए हैं। कई देशों के लोगों को मैं यहां से देख भी रहा हूं, वे लोग वहां से वेव कर रहे हैं, हो सकता है, मैं सभी को शुभकामनाएं देता हूं। मैं यहां नीचे स्क्रीन पर हिंदुस्तान के अनेक शहरों में बैठे हुए सब दर्शकों को भी उतने ही उत्साह, उमंग से देख रहा हूं, मेरी तरफ से उनका भी स्वागत है।

साथियों,

आज विश्व की दृष्टि भारत पर है, हमारे देश पर है। दुनिया में आप किसी भी देश में जाएं, वहां के लोग भारत को लेकर एक नई जिज्ञासा से भरे हुए हैं। आखिर ऐसा क्या हुआ कि जो देश 70 साल में ग्यारहवें नंबर की इकोनॉमी बना, वो महज 7-8 साल में पांचवे नंबर की इकोनॉमी बन गया? अभी IMF के नए आंकड़े सामने आए हैं। वो आंकड़े कहते हैं कि भारत, दुनिया की एकमात्र मेजर इकोनॉमी है, जिसने 10 वर्षों में अपने GDP को डबल किया है। बीते दशक में भारत ने दो लाख करोड़ डॉलर, अपनी इकोनॉमी में जोड़े हैं। GDP का डबल होना सिर्फ आंकड़ों का बदलना मात्र नहीं है। इसका impact देखिए, 25 करोड़ लोग गरीबी से बाहर निकले हैं, और ये 25 करोड़ लोग एक नियो मिडिल क्लास का हिस्सा बने हैं। ये नियो मिडिल क्लास, एक प्रकार से नई ज़िंदगी शुरु कर रहा है। ये नए सपनों के साथ आगे बढ़ रहा है, हमारी इकोनॉमी में कंट्रीब्यूट कर रहा है, और उसको वाइब्रेंट बना रहा है। आज दुनिया की सबसे बड़ी युवा आबादी हमारे भारत में है। ये युवा, तेज़ी से स्किल्ड हो रहा है, इनोवेशन को गति दे रहा है। और इन सबके बीच, भारत की फॉरेन पॉलिसी का मंत्र बन गया है- India First, एक जमाने में भारत की पॉलिसी थी, सबसे समान रूप से दूरी बनाकर चलो, Equi-Distance की पॉलिसी, आज के भारत की पॉलिसी है, सबके समान रूप से करीब होकर चलो, Equi-Closeness की पॉलिसी। दुनिया के देश भारत की ओपिनियन को, भारत के इनोवेशन को, भारत के एफर्ट्स को, जैसा महत्व आज दे रहे हैं, वैसा पहले कभी नहीं हुआ। आज दुनिया की नजर भारत पर है, आज दुनिया जानना चाहती है, What India Thinks Today.

|

साथियों,

भारत आज, वर्ल्ड ऑर्डर में सिर्फ पार्टिसिपेट ही नहीं कर रहा, बल्कि फ्यूचर को शेप और सेक्योर करने में योगदान दे रहा है। दुनिया ने ये कोरोना काल में अच्छे से अनुभव किया है। दुनिया को लगता था कि हर भारतीय तक वैक्सीन पहुंचने में ही, कई-कई साल लग जाएंगे। लेकिन भारत ने हर आशंका को गलत साबित किया। हमने अपनी वैक्सीन बनाई, हमने अपने नागरिकों का तेज़ी से वैक्सीनेशन कराया, और दुनिया के 150 से अधिक देशों तक दवाएं और वैक्सीन्स भी पहुंचाईं। आज दुनिया, और जब दुनिया संकट में थी, तब भारत की ये भावना दुनिया के कोने-कोने तक पहुंची कि हमारे संस्कार क्या हैं, हमारा तौर-तरीका क्या है।

साथियों,

अतीत में दुनिया ने देखा है कि दूसरे विश्व युद्ध के बाद जब भी कोई वैश्विक संगठन बना, उसमें कुछ देशों की ही मोनोपोली रही। भारत ने मोनोपोली नहीं बल्कि मानवता को सर्वोपरि रखा। भारत ने, 21वीं सदी के ग्लोबल इंस्टीट्यूशन्स के गठन का रास्ता बनाया, और हमने ये ध्यान रखा कि सबकी भागीदारी हो, सबका योगदान हो। जैसे प्राकृतिक आपदाओं की चुनौती है। देश कोई भी हो, इन आपदाओं से इंफ्रास्ट्रक्चर को भारी नुकसान होता है। आज ही म्यांमार में जो भूकंप आया है, आप टीवी पर देखें तो बहुत बड़ी-बड़ी इमारतें ध्वस्त हो रही हैं, ब्रिज टूट रहे हैं। और इसलिए भारत ने Coalition for Disaster Resilient Infrastructure - CDRI नाम से एक वैश्विक नया संगठन बनाने की पहल की। ये सिर्फ एक संगठन नहीं, बल्कि दुनिया को प्राकृतिक आपदाओं के लिए तैयार करने का संकल्प है। भारत का प्रयास है, प्राकृतिक आपदा से, पुल, सड़कें, बिल्डिंग्स, पावर ग्रिड, ऐसा हर इंफ्रास्ट्रक्चर सुरक्षित रहे, सुरक्षित निर्माण हो।

साथियों,

भविष्य की चुनौतियों से निपटने के लिए हर देश का मिलकर काम करना बहुत जरूरी है। ऐसी ही एक चुनौती है, हमारे एनर्जी रिसोर्सेस की। इसलिए पूरी दुनिया की चिंता करते हुए भारत ने International Solar Alliance (ISA) का समाधान दिया है। ताकि छोटे से छोटा देश भी सस्टेनबल एनर्जी का लाभ उठा सके। इससे क्लाइमेट पर तो पॉजिटिव असर होगा ही, ये ग्लोबल साउथ के देशों की एनर्जी नीड्स को भी सिक्योर करेगा। और आप सबको ये जानकर गर्व होगा कि भारत के इस प्रयास के साथ, आज दुनिया के सौ से अधिक देश जुड़ चुके हैं।

साथियों,

बीते कुछ समय से दुनिया, ग्लोबल ट्रेड में असंतुलन और लॉजिस्टिक्स से जुड़ी challenges का सामना कर रही है। इन चुनौतियों से निपटने के लिए भी भारत ने दुनिया के साथ मिलकर नए प्रयास शुरु किए हैं। India–Middle East–Europe Economic Corridor (IMEC), ऐसा ही एक महत्वाकांक्षी प्रोजेक्ट है। ये प्रोजेक्ट, कॉमर्स और कनेक्टिविटी के माध्यम से एशिया, यूरोप और मिडिल ईस्ट को जोड़ेगा। इससे आर्थिक संभावनाएं तो बढ़ेंगी ही, दुनिया को अल्टरनेटिव ट्रेड रूट्स भी मिलेंगे। इससे ग्लोबल सप्लाई चेन भी और मजबूत होगी।

|

साथियों,

ग्लोबल सिस्टम्स को, अधिक पार्टिसिपेटिव, अधिक डेमोक्रेटिक बनाने के लिए भी भारत ने अनेक कदम उठाए हैं। और यहीं, यहीं पर ही भारत मंडपम में जी-20 समिट हुई थी। उसमें अफ्रीकन यूनियन को जी-20 का परमानेंट मेंबर बनाया गया है। ये बहुत बड़ा ऐतिहासिक कदम था। इसकी मांग लंबे समय से हो रही थी, जो भारत की प्रेसीडेंसी में पूरी हुई। आज ग्लोबल डिसीजन मेकिंग इंस्टीट्यूशन्स में भारत, ग्लोबल साउथ के देशों की आवाज़ बन रहा है। International Yoga Day, WHO का ग्लोबल सेंटर फॉर ट्रेडिशनल मेडिसिन, आर्टिफिशियल इंटेलीजेंस के लिए ग्लोबल फ्रेमवर्क, ऐसे कितने ही क्षेत्रों में भारत के प्रयासों ने नए वर्ल्ड ऑर्डर में अपनी मजबूत उपस्थिति दर्ज कराई है, और ये तो अभी शुरूआत है, ग्लोबल प्लेटफॉर्म पर भारत का सामर्थ्य नई ऊंचाई की तरफ बढ़ रहा है।

साथियों,

21वीं सदी के 25 साल बीत चुके हैं। इन 25 सालों में 11 साल हमारी सरकार ने देश की सेवा की है। और जब हम What India Thinks Today उससे जुड़ा सवाल उठाते हैं, तो हमें ये भी देखना होगा कि Past में क्या सवाल थे, क्या जवाब थे। इससे TV9 के विशाल दर्शक समूह को भी अंदाजा होगा कि कैसे हम, निर्भरता से आत्मनिर्भरता तक, Aspirations से Achievement तक, Desperation से Development तक पहुंचे हैं। आप याद करिए, एक दशक पहले, गांव में जब टॉयलेट का सवाल आता था, तो माताओं-बहनों के पास रात ढलने के बाद और भोर होने से पहले का ही जवाब होता था। आज उसी सवाल का जवाब स्वच्छ भारत मिशन से मिलता है। 2013 में जब कोई इलाज की बात करता था, तो महंगे इलाज की चर्चा होती थी। आज उसी सवाल का समाधान आयुष्मान भारत में नजर आता है। 2013 में किसी गरीब की रसोई की बात होती थी, तो धुएं की तस्वीर सामने आती थी। आज उसी समस्या का समाधान उज्ज्वला योजना में दिखता है। 2013 में महिलाओं से बैंक खाते के बारे में पूछा जाता था, तो वो चुप्पी साध लेती थीं। आज जनधन योजना के कारण, 30 करोड़ से ज्यादा बहनों का अपना बैंक अकाउंट है। 2013 में पीने के पानी के लिए कुएं और तालाबों तक जाने की मजबूरी थी। आज उसी मजबूरी का हल हर घर नल से जल योजना में मिल रहा है। यानि सिर्फ दशक नहीं बदला, बल्कि लोगों की ज़िंदगी बदली है। और दुनिया भी इस बात को नोट कर रही है, भारत के डेवलपमेंट मॉडल को स्वीकार रही है। आज भारत सिर्फ Nation of Dreams नहीं, बल्कि Nation That Delivers भी है।

साथियों,

जब कोई देश, अपने नागरिकों की सुविधा और समय को महत्व देता है, तब उस देश का समय भी बदलता है। यही आज हम भारत में अनुभव कर रहे हैं। मैं आपको एक उदाहरण देता हूं। पहले पासपोर्ट बनवाना कितना बड़ा काम था, ये आप जानते हैं। लंबी वेटिंग, बहुत सारे कॉम्प्लेक्स डॉक्यूमेंटेशन का प्रोसेस, अक्सर राज्यों की राजधानी में ही पासपोर्ट केंद्र होते थे, छोटे शहरों के लोगों को पासपोर्ट बनवाना होता था, तो वो एक-दो दिन कहीं ठहरने का इंतजाम करके चलते थे, अब वो हालात पूरी तरह बदल गया है, एक आंकड़े पर आप ध्यान दीजिए, पहले देश में सिर्फ 77 पासपोर्ट सेवा केंद्र थे, आज इनकी संख्या 550 से ज्यादा हो गई है। पहले पासपोर्ट बनवाने में, और मैं 2013 के पहले की बात कर रहा हूं, मैं पिछले शताब्दी की बात नहीं कर रहा हूं, पासपोर्ट बनवाने में जो वेटिंग टाइम 50 दिन तक होता था, वो अब 5-6 दिन तक सिमट गया है।

साथियों,

ऐसा ही ट्रांसफॉर्मेशन हमने बैंकिंग इंफ्रास्ट्रक्चर में भी देखा है। हमारे देश में 50-60 साल पहले बैंकों का नेशनलाइजेशन किया गया, ये कहकर कि इससे लोगों को बैंकिंग सुविधा सुलभ होगी। इस दावे की सच्चाई हम जानते हैं। हालत ये थी कि लाखों गांवों में बैंकिंग की कोई सुविधा ही नहीं थी। हमने इस स्थिति को भी बदला है। ऑनलाइन बैंकिंग तो हर घर में पहुंचाई है, आज देश के हर 5 किलोमीटर के दायरे में कोई न कोई बैंकिंग टच प्वाइंट जरूर है। और हमने सिर्फ बैंकिंग इंफ्रास्ट्रक्चर का ही दायरा नहीं बढ़ाया, बल्कि बैंकिंग सिस्टम को भी मजबूत किया। आज बैंकों का NPA बहुत कम हो गया है। आज बैंकों का प्रॉफिट, एक लाख 40 हज़ार करोड़ रुपए के नए रिकॉर्ड को पार कर चुका है। और इतना ही नहीं, जिन लोगों ने जनता को लूटा है, उनको भी अब लूटा हुआ धन लौटाना पड़ रहा है। जिस ED को दिन-रात गालियां दी जा रही है, ED ने 22 हज़ार करोड़ रुपए से अधिक वसूले हैं। ये पैसा, कानूनी तरीके से उन पीड़ितों तक वापिस पहुंचाया जा रहा है, जिनसे ये पैसा लूटा गया था।

साथियों,

Efficiency से गवर्नमेंट Effective होती है। कम समय में ज्यादा काम हो, कम रिसोर्सेज़ में अधिक काम हो, फिजूलखर्ची ना हो, रेड टेप के बजाय रेड कार्पेट पर बल हो, जब कोई सरकार ये करती है, तो समझिए कि वो देश के संसाधनों को रिस्पेक्ट दे रही है। और पिछले 11 साल से ये हमारी सरकार की बड़ी प्राथमिकता रहा है। मैं कुछ उदाहरणों के साथ अपनी बात बताऊंगा।

|

साथियों,

अतीत में हमने देखा है कि सरकारें कैसे ज्यादा से ज्यादा लोगों को मिनिस्ट्रीज में accommodate करने की कोशिश करती थीं। लेकिन हमारी सरकार ने अपने पहले कार्यकाल में ही कई मंत्रालयों का विलय कर दिया। आप सोचिए, Urban Development अलग मंत्रालय था और Housing and Urban Poverty Alleviation अलग मंत्रालय था, हमने दोनों को मर्ज करके Housing and Urban Affairs मंत्रालय बना दिया। इसी तरह, मिनिस्ट्री ऑफ ओवरसीज़ अफेयर्स अलग था, विदेश मंत्रालय अलग था, हमने इन दोनों को भी एक साथ जोड़ दिया, पहले जल संसाधन, नदी विकास मंत्रालय अलग था, और पेयजल मंत्रालय अलग था, हमने इन्हें भी जोड़कर जलशक्ति मंत्रालय बना दिया। हमने राजनीतिक मजबूरी के बजाय, देश की priorities और देश के resources को आगे रखा।

साथियों,

हमारी सरकार ने रूल्स और रेगुलेशन्स को भी कम किया, उन्हें आसान बनाया। करीब 1500 ऐसे कानून थे, जो समय के साथ अपना महत्व खो चुके थे। उनको हमारी सरकार ने खत्म किया। करीब 40 हज़ार, compliances को हटाया गया। ऐसे कदमों से दो फायदे हुए, एक तो जनता को harassment से मुक्ति मिली, और दूसरा, सरकारी मशीनरी की एनर्जी भी बची। एक और Example GST का है। 30 से ज्यादा टैक्सेज़ को मिलाकर एक टैक्स बना दिया गया है। इसको process के, documentation के हिसाब से देखें तो कितनी बड़ी बचत हुई है।

साथियों,

सरकारी खरीद में पहले कितनी फिजूलखर्ची होती थी, कितना करप्शन होता था, ये मीडिया के आप लोग आए दिन रिपोर्ट करते थे। हमने, GeM यानि गवर्नमेंट ई-मार्केटप्लेस प्लेटफॉर्म बनाया। अब सरकारी डिपार्टमेंट, इस प्लेटफॉर्म पर अपनी जरूरतें बताते हैं, इसी पर वेंडर बोली लगाते हैं और फिर ऑर्डर दिया जाता है। इसके कारण, भ्रष्टाचार की गुंजाइश कम हुई है, और सरकार को एक लाख करोड़ रुपए से अधिक की बचत भी हुई है। डायरेक्ट बेनिफिट ट्रांसफर- DBT की जो व्यवस्था भारत ने बनाई है, उसकी तो दुनिया में चर्चा है। DBT की वजह से टैक्स पेयर्स के 3 लाख करोड़ रुपए से ज्यादा, गलत हाथों में जाने से बचे हैं। 10 करोड़ से ज्यादा फर्ज़ी लाभार्थी, जिनका जन्म भी नहीं हुआ था, जो सरकारी योजनाओं का फायदा ले रहे थे, ऐसे फर्जी नामों को भी हमने कागजों से हटाया है।

साथियों,

 

हमारी सरकार टैक्स की पाई-पाई का ईमानदारी से उपयोग करती है, और टैक्सपेयर का भी सम्मान करती है, सरकार ने टैक्स सिस्टम को टैक्सपेयर फ्रेंडली बनाया है। आज ITR फाइलिंग का प्रोसेस पहले से कहीं ज्यादा सरल और तेज़ है। पहले सीए की मदद के बिना, ITR फाइल करना मुश्किल होता था। आज आप कुछ ही समय के भीतर खुद ही ऑनलाइन ITR फाइल कर पा रहे हैं। और रिटर्न फाइल करने के कुछ ही दिनों में रिफंड आपके अकाउंट में भी आ जाता है। फेसलेस असेसमेंट स्कीम भी टैक्सपेयर्स को परेशानियों से बचा रही है। गवर्नेंस में efficiency से जुड़े ऐसे अनेक रिफॉर्म्स ने दुनिया को एक नया गवर्नेंस मॉडल दिया है।

साथियों,

पिछले 10-11 साल में भारत हर सेक्टर में बदला है, हर क्षेत्र में आगे बढ़ा है। और एक बड़ा बदलाव सोच का आया है। आज़ादी के बाद के अनेक दशकों तक, भारत में ऐसी सोच को बढ़ावा दिया गया, जिसमें सिर्फ विदेशी को ही बेहतर माना गया। दुकान में भी कुछ खरीदने जाओ, तो दुकानदार के पहले बोल यही होते थे – भाई साहब लीजिए ना, ये तो इंपोर्टेड है ! आज स्थिति बदल गई है। आज लोग सामने से पूछते हैं- भाई, मेड इन इंडिया है या नहीं है?

साथियों,

आज हम भारत की मैन्युफैक्चरिंग एक्सीलेंस का एक नया रूप देख रहे हैं। अभी 3-4 दिन पहले ही एक न्यूज आई है कि भारत ने अपनी पहली MRI मशीन बना ली है। अब सोचिए, इतने दशकों तक हमारे यहां स्वदेशी MRI मशीन ही नहीं थी। अब मेड इन इंडिया MRI मशीन होगी तो जांच की कीमत भी बहुत कम हो जाएगी।

|

साथियों,

आत्मनिर्भर भारत और मेक इन इंडिया अभियान ने, देश के मैन्युफैक्चरिंग सेक्टर को एक नई ऊर्जा दी है। पहले दुनिया भारत को ग्लोबल मार्केट कहती थी, आज वही दुनिया, भारत को एक बड़े Manufacturing Hub के रूप में देख रही है। ये सक्सेस कितनी बड़ी है, इसके उदाहरण आपको हर सेक्टर में मिलेंगे। जैसे हमारी मोबाइल फोन इंडस्ट्री है। 2014-15 में हमारा एक्सपोर्ट, वन बिलियन डॉलर तक भी नहीं था। लेकिन एक दशक में, हम ट्वेंटी बिलियन डॉलर के फिगर से भी आगे निकल चुके हैं। आज भारत ग्लोबल टेलिकॉम और नेटवर्किंग इंडस्ट्री का एक पावर सेंटर बनता जा रहा है। Automotive Sector की Success से भी आप अच्छी तरह परिचित हैं। इससे जुड़े Components के एक्सपोर्ट में भी भारत एक नई पहचान बना रहा है। पहले हम बहुत बड़ी मात्रा में मोटर-साइकल पार्ट्स इंपोर्ट करते थे। लेकिन आज भारत में बने पार्ट्स UAE और जर्मनी जैसे अनेक देशों तक पहुंच रहे हैं। सोलर एनर्जी सेक्टर ने भी सफलता के नए आयाम गढ़े हैं। हमारे सोलर सेल्स, सोलर मॉड्यूल का इंपोर्ट कम हो रहा है और एक्सपोर्ट्स 23 गुना तक बढ़ गए हैं। बीते एक दशक में हमारा डिफेंस एक्सपोर्ट भी 21 गुना बढ़ा है। ये सारी अचीवमेंट्स, देश की मैन्युफैक्चरिंग इकोनॉमी की ताकत को दिखाती है। ये दिखाती है कि भारत में कैसे हर सेक्टर में नई जॉब्स भी क्रिएट हो रही हैं।

साथियों,

TV9 की इस समिट में, विस्तार से चर्चा होगी, अनेक विषयों पर मंथन होगा। आज हम जो भी सोचेंगे, जिस भी विजन पर आगे बढ़ेंगे, वो हमारे आने वाले कल को, देश के भविष्य को डिजाइन करेगा। पिछली शताब्दी के इसी दशक में, भारत ने एक नई ऊर्जा के साथ आजादी के लिए नई यात्रा शुरू की थी। और हमने 1947 में आजादी हासिल करके भी दिखाई। अब इस दशक में हम विकसित भारत के लक्ष्य के लिए चल रहे हैं। और हमें 2047 तक विकसित भारत का सपना जरूर पूरा करना है। और जैसा मैंने लाल किले से कहा है, इसमें सबका प्रयास आवश्यक है। इस समिट का आयोजन कर, TV9 ने भी अपनी तरफ से एक positive initiative लिया है। एक बार फिर आप सभी को इस समिट की सफलता के लिए मेरी ढेर सारी शुभकामनाएं हैं।

मैं TV9 को विशेष रूप से बधाई दूंगा, क्योंकि पहले भी मीडिया हाउस समिट करते रहे हैं, लेकिन ज्यादातर एक छोटे से फाइव स्टार होटल के कमरे में, वो समिट होती थी और बोलने वाले भी वही, सुनने वाले भी वही, कमरा भी वही। TV9 ने इस परंपरा को तोड़ा और ये जो मॉडल प्लेस किया है, 2 साल के भीतर-भीतर देख लेना, सभी मीडिया हाउस को यही करना पड़ेगा। यानी TV9 Thinks Today वो बाकियों के लिए रास्ता खोल देगा। मैं इस प्रयास के लिए बहुत-बहुत अभिनंदन करता हूं, आपकी पूरी टीम को, और सबसे बड़ी खुशी की बात है कि आपने इस इवेंट को एक मीडिया हाउस की भलाई के लिए नहीं, देश की भलाई के लिए आपने उसकी रचना की। 50,000 से ज्यादा नौजवानों के साथ एक मिशन मोड में बातचीत करना, उनको जोड़ना, उनको मिशन के साथ जोड़ना और उसमें से जो बच्चे सिलेक्ट होकर के आए, उनकी आगे की ट्रेनिंग की चिंता करना, ये अपने आप में बहुत अद्भुत काम है। मैं आपको बहुत बधाई देता हूं। जिन नौजवानों से मुझे यहां फोटो निकलवाने का मौका मिला है, मुझे भी खुशी हुई कि देश के होनहार लोगों के साथ, मैं अपनी फोटो निकलवा पाया। मैं इसे अपना सौभाग्य मानता हूं दोस्तों कि आपके साथ मेरी फोटो आज निकली है। और मुझे पक्का विश्वास है कि सारी युवा पीढ़ी, जो मुझे दिख रही है, 2047 में जब देश विकसित भारत बनेगा, सबसे ज्यादा बेनिफिशियरी आप लोग हैं, क्योंकि आप उम्र के उस पड़ाव पर होंगे, जब भारत विकसित होगा, आपके लिए मौज ही मौज है। आपको बहुत-बहुत शुभकामनाएं।

धन्यवाद।