ಭೂತಾನ್ ಪ್ರಧಾನಮಂತ್ರಿಗಳಾದ ಘನತೆವೆತ್ತ ಡಾ. ಲೋಟೆ ಶೇರಿಂಗ್ ಅವರೇ, ಭೂತಾನ್ ರಾಷ್ಟ್ರೀಯ ಅಸೆಂಬ್ಲಿ ಮತ್ತು ರಾಷ್ಟ್ರೀಯ ಪರಿಷತ್ತಿನ ಗೌರವಾನ್ವಿತ ಸದಸ್ಯರುಗಳೇ, ಭೂತಾನ್ ರಾಯಲ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳೇ ಮತ್ತು ಬೋಧಕ ವರ್ಗದವರೇ,

 

ನನ್ನ ಯುವ ಸ್ನೇಹಿತರೇ, 

 

ಕುಜೋ ಜಂಗ್ಪೋ ಲಾ. ನಮಸ್ಕಾರ್. ಈ ಬೆಳಗಿನಲ್ಲಿ ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಅದ್ಭುತ ಅನುಭವ ನೀಡಿದೆ. ನೀವೆಲ್ಲರೂ ಇಂದು ಭಾನುವಾರ ಆದರೂ ಉಪನ್ಯಾಸಕ್ಕೆ ಹಾಜರಾಗಬೇಕು ಎಂದು ಚಿಂತಿಸುತ್ತಿದ್ದೀರಿ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ಆದರೆ, ನಾನು ಸಂಕ್ಷಿಪ್ತವಾಗಿ ಮತ್ತು ನಿಮಗೆಲ್ಲರಿಗೂ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಸೀಮಿತಗೊಳಿಸುತ್ತೇನೆ.

 

ಸ್ನೇಹಿತರೆ,

 

ಭೂತಾನ್ ಗೆ ಭೇಟಿ ನೀಡುವ ಯಾರೇ ಆದರೂ, ಇಲ್ಲಿನ ಪ್ರಾಕೃತಿಕ ಸೌಂದರ್ಯ, ಜನರ ಆತ್ಮೀಯತೆ ಮತ್ತು ಸರಳತೆಗೆ ಮಾರುಹೋಗುತ್ತಾರೆ. ನಿನ್ನೆ ನಾನು ಹಿಂದಿನ ಭೂತಾನ್‌ನ ವೈಭವ ಮತ್ತು ಅದರ ಆಧ್ಯಾತ್ಮಿಕ ಪರಂಪರೆಯ ಶ್ರೇಷ್ಠತೆಗೆ ಜ್ವಲಂತ ಉದಾಹರಣೆಯಾಗಿರುವ ಸೆಮ್ತೋಕ್ವಾ ಡಿ ಜೋಂಗ್ ನಲ್ಲಿದ್ದೆ,  ಈ ಭೇಟಿಯ ವೇಳೆ, ಭೂತಾನ್ ನ ವರ್ತಮಾನದ ನಾಯಕತ್ವದೊಂದಿಗೆ ಆಪ್ತವಾಗಿ ಮಾತುಕತೆ ನಡೆಸುವ ಅವಕಾಶ ದೊರೆಯಿತು. ನಾನು ಮತ್ತೊಮ್ಮೆ ಭಾರತ-ಭೂತಾನ್ ಬಾಂಧವ್ಯಕ್ಕಾಗಿ ಅವರ ಮಾರ್ಗದರ್ಶನ ಪಡೆದೆ. ಇದು ಸದಾ ಅವರ ವೈಯಕ್ತಿಕ ಕಾಳಜಿಯಿಂದ ಪ್ರಯೋಜನ ಪಡೆದಿದೆ.

|

ಈಗ, ಇಂದು, ನಾನು ಭೂತಾನ್ ಭವಿಷ್ಯದೊಂದಿಗೆ ಇಲ್ಲಿದ್ದೇನೆ,  ನನಗೆ ಇಲ್ಲಿನ ಚೈತನ್ಯಶೀಲತೆ ಮತ್ತು ಚೈತನ್ಯದ ಅನುಭವವಾಗುತ್ತಿದೆ. ಇವೆಲ್ಲವೂ ಇಲ್ಲಿನ ಜನರ ಮತ್ತು ಈ ಶ್ರೇಷ್ಠ ದೇಶದ ಭವಿಷ್ಯದ ಸ್ವರೂಪವನ್ನು ರೂಪಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ಭೂತಾನ್ ನ ಭೂತ, ವರ್ತಮಾನ ಅಥವಾ ಭವಿಷ್ಯವನ್ನೇ ನೋಡುತ್ತಿರಲಿ, ಸಾಮಾನ್ಯ ಮತ್ತು ಸ್ಥಿರವಾದ ಎಳೆಗಳು – ಆಳವಾದ ಆಧ್ಯಾತ್ಮಿಕತೆ ಮತ್ತು ಯುವ ಚೈತನ್ಯ ನೋಡುತ್ತಿರುತ್ತದೆ. ಇವು ನಮ್ಮ ದ್ವಿಪಕ್ಷೀಯ ಸಂಬಂಧದ ಸಾಮರ್ಥ್ಯವೂ ಆಗಿದೆ ಎಂದರು.

 

ಸ್ನೇಹಿತರೇ,

 

ಭಾರತ ಮತ್ತು ಭೂತಾನ್ ನ ಜನರು ಪರಸ್ಪರ ನಂಟು ಹೊಂದಿರುವುದು ಸ್ವಾಭಾವಿಕವಾಗಿದೆ. ನಾವು ನಮ್ಮ ಭೌಗೋಳಿಕತೆಯಿಂದ ಮಾತ್ರವೇ ಆಪ್ತರಾಗಿಲ್ಲ. ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳು ಅನನ್ಯ ಮತ್ತು ಆಳವಾದ ಬಾಂಧವ್ಯವನ್ನು ನಮ್ಮ ಜನ ಮತ್ತು ದೇಶದ ನಡುವೆ ಬೆಸೆದಿದೆ. ರಾಜಕುಮಾರ ಸಿದ್ಧಾರ್ಥ ಗೌತಮ ಬುದ್ಧ ಆದ ಪುಣ್ಯಭೂಮಿ ಭಾರತವಾಗಿದೆ. ಅಲ್ಲಿಂದಲೇ ಬೌದ್ಧಮತದ ಜ್ಯೋತಿ ಮತ್ತು ಆಧ್ಯಾತ್ಮಿಕ ಸಂದೇಶದ ಬೆಳಕು ವಿಶ್ವಾದ್ಯಂತ ಹಬ್ಬಿದ್ದು. ಬೌದ್ಧ ಸನ್ಯಾಸಿಗಳ, ಆಧ್ಯಾತ್ಮಿಕ ನಾಯಕರ, ವಿದ್ವಾಂಸರ ಪರಂಪರೆ ಭೂತಾನ್ ನಲ್ಲ ಉಜ್ವಲ ಬೆಳಕು ಹಚ್ಚಿದೆ. ಅವರು ಭಾರತ ಮತ್ತು ಭೂತಾನ್ ನಡುವೆ ವಿಶೇಷ ನಂಟು ಹೊಂದಿದ್ದಾರೆ.

|

ಇದರ ಫಲಶ್ರುತಿಯಾಗಿ, ನಮ್ಮ ಹಂಚಿಕೆಯ ಮೌಲ್ಯಗಳು ಸಮಾನವಾದ ವಿಶ್ವದೃಷ್ಟಿಯನ್ನು ರೂಪಿಸಿವೆ. ಇದನ್ನು ವಾರಾಣಸಿ ಮತ್ತು ಬೋಧಗಯಾದಲ್ಲಿ ಕಾಣಬಹುದಾಗಿದೆ.  ಡಿಜೋಂಗ್ ಮತ್ತು ಚೋರ್ಟೆನ್’ ನಲ್ಲೂ ಕಾಣಬಹುದು. ಜೊತೆಗೆ ಜನರಾಗಿ ನಾವು ಈ ಶ್ರೇಷ್ಠ ಪರಂಪರೆಯ ಭೂಮಿಯಲ್ಲಿ ಬದುಕುತ್ತಿರುವುದಕ್ಕೆ ಪುಣ್ಯ ಮಾಡಿದ್ದೇವೆ. ಜಗತ್ತಿನ ಬೇರೆ ಯಾವುದೇ ಎರಡು ರಾಷ್ಟ್ರಗಳು ಇಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಎರಡು ರಾಷ್ಟ್ರಗಳು ಇಷ್ಟು ಸ್ವಾಭಾವಿಕ ಸಹಭಾಗಿತ್ವದೊಂದಿಗೆ ತಮ್ಮ ಜನರಿಗೆ ಸಮೃದ್ಧಿ ತರಲು ಸಾಧ್ಯವಿಲ್ಲ.

 

ಸ್ನೇಹಿತರೇ,

 

ಇಂದು, ಭಾರತ ವಿಶಾಲ ವಲಯಗಳಲ್ಲಿ ಐತಿಹಾಸಿಕ ಪರಿವರ್ತನೆಗೆ ಸಾಕ್ಷಿಯಾಗಿದೆ.

 

ಭಾರತ ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮೂಲಸೌಕರ್ಯ ನಿರ್ಮಾಣದ ವೇಗ ದುಪ್ಪಟ್ಟಾಗಿದೆ. ನಾವು ಮುಂದಿನ ಪೀಳಿಗೆಯ ಮೂಲಸೌಕರ್ಯಕ್ಕಾಗಿ 15 ಶತಕೋಟಿ ಡಾಲರ್ ಮುಡಿಪಿಟ್ಟಿದ್ದೇವೆ. ವಿಶ್ವದ ಅತಿ ದೊಡ್ಡ ಆರೋಗ್ಯ ಆರೈಕೆ ಕಾರ್ಯಕ್ರಮದ ತವರಾಗಿರುವ ಭಾರತ, ಆಯುಷ್ಮಾನ್ ಭಾರತ್  ನಿಂದ 500 ದಶಲಕ್ಷ ಭಾರತೀಯರಿಗೆ ಆರೋಗ್ಯದ ಖಾತ್ರಿ ನೀಡಿದೆ.

 

ಭಾರತವು ಜಗತ್ತಿನಲ್ಲೇ ಅತ್ಯಂತ ಅಲ್ಪದರದಲ್ಲಿ ಡಾಟಾ ಸಂಪರ್ಕ ನೀಡುವ ರಾಷ್ಟ್ರವಾಗಿದ್ದು, ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರ ಸಬಲೀಕರಣ ಮಾಡುತ್ತಿದೆ. ಭಾರತವು ವಿಶ್ವದ ಅತಿ ದೊಡ್ಡ ನವೋದ್ಯಮ ವಾತಾವರಣದ ತವರಾಗಿದೆ. ಭಾರತದಲ್ಲಿ ನಾವಿನ್ಯತೆಯನ್ನು ತರಲು ಇದು ಶ್ರೇಷ್ಠ ಸಮಯವಾಗಿದೆ! ಇವು ಮತ್ತು ಇತರ ಹಲವು ಪರಿವರ್ತನೆಗಳು ಭಾರತದ ಯುವಜನರ ಮೇರು ಆಶಯಗಳಾಗಿವೆ.

 

ಸ್ನೇಹಿತರೇ,

 

ಇಂದು, ನಾನು ಭೂತಾನ್ ನ ಉತ್ತಮ ಮತ್ತು ಉಜ್ವಲ ಯುವಜನರೊಂದಿಗೆ ನಿಂತಿದ್ದೇನೆ. ಗೌರವಾನ್ವಿತ ದೊರೆ ನಿನ್ನೆ ನನಗೆ ಅವರು ನಿಮ್ಮೊಂದಿಗೆ ನಿಯಮಿತವಾಗಿ ಸಂವಾದ ನಡೆಸುವುದಾಗಿ ಮತ್ತು ಹಿಂದಿನ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಿದ್ದಾಗಿ ಹೇಳಿದರು, ಭೂತಾನ್‌ನ ಭವಿಷ್ಯದ ನಾಯಕರು, ನಾವೀನ್ಯಕಾರರು, ವ್ಯಾಪಾರಸ್ಥರು, ಕ್ರೀಡಾ ಪಟುಗಳು, ಕಲಾವಿದರು ಮತ್ತು ವಿಜ್ಞಾನಿಗಳು ಹೊರಹೊಮ್ಮುವುದು ನಿಮ್ಮೆಲ್ಲರಿಂದಲೇ.

 

ಕೆಲವೇ ದಿನಗಳ ಹಿಂದೆ, ನನ್ನ ಉತ್ತಮ ಸ್ನೇಹಿತ, ಪ್ರಧಾನಮಂತ್ರಿ ಡಾಕ್ಟರ್ ಶೇರಿಂಗ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದು ನನ್ನ ಹೃದಯ ತಟ್ಟಿತು. ಆ ಪೋಸ್ಟ್ ನಲ್ಲಿ ಅವರು,  ಎಕ್ಸಾಮ್ ವಾರಿಯರ್ಸ್ ಬಗ್ಗೆ ಉಲ್ಲೇಖಿಸಿದ್ದರು, ಮತ್ತು ಈಗಷ್ಟೇ ಒಬ್ಬ ವಿದ್ಯಾರ್ಥಿ ಆ ಪುಸ್ತಕದ ಬಗ್ಗೆ ಉಲ್ಲೇಖಿಸಿದ. ಎಕ್ಸಾಮ್ ವಾರಿಯರ್ಸ್ ಒತ್ತಡವಿಲ್ಲದೆ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಕುರಿತಾದುದಾಗಿದೆ. ಪ್ರತಿಯೊಬ್ಬರೂ ಶಾಲೆ, ಕಾಲೇಜುಗಳಲ್ಲಿ ಮತ್ತು ಬದುಕೆಂಬ ದೊಡ್ಡ ಶಾಲಾ ಕೊಠಡಿಯಲ್ಲಿ ಪರೀಕ್ಷೆ ಎದುರಿಸುತ್ತಾರೆ. ನಾನು ಕೆಲವೊಂದು ವಿಚಾರ ಹೇಳಲೇ? ಎಕ್ಸಾಮ್ ವಾರಿಯರ್ಸ್ ನಲ್ಲಿ ನಾನು ಬರೆದಿರುವ ಬಹುತೇಕ ವಿಚಾರಗಳಲ್ಲಿ ಭಗವಾನ್ ಬುದ್ಧರ ಬೋಧನೆಗಳ ಪ್ರಭಾವ ಇದೆ. ಅದರಲ್ಲೂ ಧನಾತ್ಮಕತೆಯ ಮಹತ್ವ, ಭಯದಿಂದ ಹೊರಬಹುವುದು ಮತ್ತು ಪ್ರಸಕ್ತ ಸನ್ನಿವೇಶದಲ್ಲೇ ಆಗಲೀ, ಪ್ರಕೃತಿ ಮಾತೆಯೊಂದಿಗೇ ಆಗಲಿ ಒಮ್ಮತದಿಂದ ಬಾಳುವುದರ ಮೇಲಿದೆ. ನೀವು ಈ ಶ್ರೇಷ್ಠ ಭೂಮಿಯಲ್ಲಿ ಜನಿಸಿದ್ದೀರಿ. 

 

 ಆದ್ದರಿಂದ, ಈ ಗುಣಲಕ್ಷಣಗಳು ನಿಮಗೆ ಸಹಜವಾಗಿ ಬಂದಿವೆ ಮತ್ತು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಿವೆ. ನಾನು ಚಿಕ್ಕವನಿದ್ದಾಗ, ಈ ಗುಣಲಕ್ಷಣಗಳ ಹುಡುಕಾಟವು ನನ್ನನ್ನು ಹಿಮಾಲಯಕ್ಕೆ ಕರೆದೊಯ್ಯಿತು! ಈ ಪುಣ್ಯಭೂಮಿಯ ಮಕ್ಕಳಾಗಿ, ನಮ್ಮ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನೀವು ಕೊಡುಗೆ ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ.

 

ಹೌದು ನಮ್ಮ ಮುಂದೆ ಸವಾಲುಗಳಿವೆ. ಆದರೆ, ಪ್ರತಿಯೊಂದು ಸವಾಲನ್ನು ಮೆಟ್ಟಿನಿಲ್ಲಲು ನಾವಿನ್ಯಪೂರ್ಣವಾದ ಪರಿಹಾರವನ್ನು ಹುಡುಕಬಲ್ಲ ಯುವ ಮನಸ್ಸುಗಳೂ ನಮ್ಮೊಂದಿಗಿವೆ. ಹೀಗಾಗಿ ಯಾವುದೇ ಮಿತಿ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.

 

ನಾನು ನಿಮ್ಮೆಲ್ಲರಿಗೂ ಹೇಳ ಬಯಸುತ್ತೇನೆ – ಈಗ ಯುವಕರಾಗಿರುವುದಕ್ಕಿಂತ ಉತ್ತಮ ಸಮಯ ನಿಮಗೆ ಇರಲು ಸಾಧ್ಯವಿಲ್ಲ! ಜಗತ್ತು ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ. ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ, ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ನಿಜವಾದ ಗುರಿ ಹುಡುಕಿ ಮತ್ತು ಅದನ್ನು ಪೂರ್ಣ ಉತ್ಸಾಹದಿಂದ ಮುಂದುವರಿಸಿ.

 

ಸ್ನೇಹಿತರೇ,

 

ಜಲ ವಿದ್ಯುತ್ ಮತ್ತು ಇಂಧನ ಕ್ಷೇತ್ರದಲ್ಲಿನ ಭಾರತ-ಭೂತಾನ್ ಸಹಕಾರ ಅನುಪಮವಾದ್ದು. ಈ ಶಕ್ತಿ ಮತ್ತು ಇಂಧನದ ಬಾಂಧವ್ಯದ ನಿಜವಾದ ಮೂಲ ನಮ್ಮ ಜನರು. ಹೀಗಾಗಿ ಜನರೇ ಮೊದಲು ಮತ್ತು ನಮ್ಮ ಬಾಂಧವ್ಯದಲ್ಲಿ ಜನರೇ ಕೇಂದ್ರಬಿಂದುವಾಗಿರುತ್ತಾರೆ. ನನ್ನ ಈ ಭೇಟಿಯ ಫಲಶ್ರುತಿಯಲ್ಲಿ ನನಗೆ ಇದು ಸ್ಪಷ್ಟವಾಗಿ ಗೋಚರಿಸಿದೆ. ಸಾಂಪ್ರದಾಯಿಕ ವಲಯದ ಸಹಕಾರದಿಂದಾಚೆ ಹೋದರೆ, ನಾವು ಹೊಸ ಮುಂಚೂಣಿಯಲ್ಲಿನ ಸಹಕಾರವನ್ನು ಬಯಸುತ್ತೇವೆ, ಅದು ಶಾಲೆಯಿಂದ ಬಾಹ್ಯಾಕಾಶದವರೆಗೆ, ಡಿಜಿಟಲ್ ಪಾವತಿಯಿಂದ ಹಿಡಿದು ಪ್ರಕೃತಿವಿಕೋಪ ನಿರ್ವಹಣೆಯವರೆಗೆ ಸಾಗುತ್ತದೆ. ಈ ಎಲ್ಲ ವಲಯದಲ್ಲಿ ನಮ್ಮ ಸಹಕಾರದ ನೇರ ಪರಿಣಾಮ ನಿಮ್ಮಂಥ ಯುವ ಸ್ನೇಹಿತರ ಮೇಲಾಗು ತ್ತದೆ. ಇದಕ್ಕಾಗಿ ನಾನು ಕೆಲವು ಉದಾಹರಣೆಗಳನ್ನು ಕೊಡಲು ಇಚ್ಛಿಸುತ್ತೇನೆ. ಇಂದಿನ ದಿನ ಮತ್ತು ಯುಗದಲ್ಲಿ, ವಿದ್ವಾಂಸರನ್ನು ಮತ್ತು ಶಿಕ್ಷಣ ತಜ್ಞರನ್ನು ಎಲ್ಲೆಗಳನ್ನು ಮೀರಿ ಸಂಪರ್ಕಿಸುವುದು ಬಹಳ ಮುಖ್ಯ, ಇದರಿಂದಾಗಿ ನಮ್ಮ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪ್ರತಿಭೆ ಅವರನ್ನು ವಿಶ್ವದ ಅತ್ಯುತ್ತಮ ವ್ಯಕ್ತಿಗಳೊಂದಿಗೆ ಸಮನಾಗಿ ನಿಲ್ಲಿಸುತ್ತದೆ. ಭಾರತದ ರಾಷ್ಟ್ರೀಯ ಜ್ಞಾನ ಜಾಲ ಮತ್ತು ಭೂತಾನದ ಡ್ರಕ್ರೆನ್ ನಡುವಿನ ಸಹಕಾರವು ನಿನ್ನೆ ಸಾಕಾರಗೊಂಡಿದೆ, ಅದು ಈ ಉದ್ದೇಶವನ್ನು ಈಡೇರಿಸುತ್ತದೆ.

 

ಇದು, ನಮ್ಮ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು, ಆರೋಗ್ಯ ಆರೈಕೆ ಮತ್ತು ಕೃಷಿ ಸಂಸ್ಥೆಗಳ ನಡುವೆ, ಸುರಕ್ಷಿತವಾದ ಮತ್ತು ತ್ವರಿತ ಸಂಪರ್ಕವನ್ನು ಒದಗಿಸುತ್ತದೆ. ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ.

 

 ಸ್ನೇಹಿತರೇ, ಮತ್ತೊಂದು ಉದಾಹರಣೆ ಬಾಹ್ಯಾಕಾಶದ ಮುಂಚೋಣಿಯದಾಗಿದೆ. ಈ ಕ್ಷಣದಲ್ಲಿ, ಭಾರತದ ಎರಡನೇ ಚಂದ್ರಯಾನ, ಚಂದ್ರಯಾನ್ -2 ಪ್ರಗತಿಯಲ್ಲಿದೆ. 2022 ರ ಹೊತ್ತಿಗೆ ನಾವು ಭಾರತೀಯ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯನ ಸಹಿತ ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದ್ದೇವೆ. ಇದೆಲ್ಲವೂ ಭಾರತದ ಸ್ವಂತ ಸಾಧನೆಗಳಾಗಿವೆ. ನಮಗೆ ಬಾಹ್ಯಾಕಾಶ ಕಾರ್ಯಕ್ರಮ ರಾಷ್ಟ್ರೀಯ ಹೆಮ್ಮೆಯ ವಿಚಾರವಷ್ಟೇ ಅಲ್ಲ. ಇದು ರಾಷ್ಟ್ರದ ಅಭಿವೃದ್ಧಿ ಮತ್ತು ಜಾಗತಿಕ ಸಹಕಾರಕ್ಕೆ ಪ್ರಮುಖ ಸಾಧನವಾಗಿದೆ.

 

ಸ್ನೇಹಿತರೆ,

 

ನಿನ್ನೆ ಪ್ರಧಾನಮಂತ್ರಿ ಶೇರಿಂಗ್ ಮತ್ತು ನಾನು ದಕ್ಷಿಣ ಏಷ್ಯಾ ಉಪಗ್ರಹದ ಥಿಂಪು ಭೂ ನಿಲ್ದಾಣವನ್ನು ಉದ್ಘಾಟಿಸುವ ಮೂಲಕ ನಮ್ಮ ಬಾಹ್ಯಾಕಾಶ ಸಹಕಾರವನ್ನು ವಿಸ್ತರಿಸಿದೆವು. ಬಾಹ್ಯಾಕಾಶದ ಮೂಲಕ ಟೆಲಿ ಮೆಡಿಸಿನ್, ದೂರ ಶಿಕ್ಷಣ, ಸಂಪನ್ಮೂಲ ಪತ್ತೆ, ಹವಾಮಾನ ಮುನ್ಸೂಚನೆ ಮತ್ತು ಪ್ರಕೃತಿ ವಿಕೋಪದ ಎಚ್ಚರಿಕೆ ದೂರದ ಪ್ರದೇಶಗಳಿಗೂ ತಲುಪುತ್ತದೆ. ಇನ್ನೂ ಸಂತಸದ ಸಂಗತಿ ಎಂದರೆ, ಭೂತಾನದ ಯುವ ವಿಜ್ಞಾನಿಗಳು ಭೂತಾನದ ಸ್ವಂತ ಸಣ್ಣ ಉಪಗ್ರಹಗಳ ಉಡಾವಣೆಗಾಗಿ ವಿನ್ಯಾಸ ಮಾಡಲು ಭಾರತಕ್ಕೆ ಆಗಮಿಸಿ ಕಾರ್ಯ ನಿರ್ವಹಿಸಬಹುದು. ಶೀಘ್ರವೇ ಒಂದು ದಿನ ನಿಮ್ಮಲ್ಲಿ ನೇಕರು ವಿಜ್ಞಾನಿಗಳು, ಎಂಜಿನಿಯರುಗಳು ಮತ್ತು ನಾವಿನ್ಯದಾರರಾಗುತ್ತೀರಿ ಎಂಬ ವಿಶ್ವಾಸ ನನಗಿದೆ.

 

ಸ್ನೇಹಿತರೇ,

 

ಶತಮಾನಗಳಿಂದ, ಶಿಕ್ಷಣ ಮತ್ತು ಕಲಿಕೆ ಭಾರತ ಮತ್ತು ಭೂತಾನ್ ನಡುವೆ ಕೇಂದ್ರಬಿಂದುವಾಗಿವೆ. ಹಿಂದಿನ ಕಾಲದಲ್ಲಿ, ಬೌದ್ಧ ಬೋಧಕರು ಮತ್ತು ವಿದ್ವಾಂಸರು ನಮ್ಮ ಜನರ ನಡುವಿನ ಕಲಿಕೆಯ ಸೇತುವನ್ನು ನಿರ್ಮಿಸಿದರು. ಇದು ಬೆಲೆಕಟ್ಟಲಾಗದ ಪರಂಪರೆಯಾಗಿದೆ. ಇದನ್ನು ನಾವು ಸಂರಕ್ಷಿಸಿ ಉತ್ತೇಜಿಸಬೇಕು. ಹೀಗಾಗಿಯೇ ಭೂತಾನ್‌ನಿಂದ ಬೌದ್ಧಧರ್ಮದ ಹೆಚ್ಚಿನ ವಿದ್ಯಾರ್ಥಿಗಳನ್ನು ನಳಂದ ವಿಶ್ವವಿದ್ಯಾಲಯದಂತಹ ಸಂಸ್ಥೆಗಳಿಗೆ ನಾವು ಸ್ವಾಗತಿಸುತ್ತೇವೆ – ಐತಿಹಾಸಿಕ ಜಾಗತಿಕ ಕಲಿಕೆಯ ತಾಣ ಮತ್ತು ಬೌದ್ಧ ಸಂಪ್ರದಾಯಗಳು, ಇದು ಸಾವಿರದ ಐನೂರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಸ್ಥಳದಲ್ಲಿಯೇ ಪುನಶ್ಚೇತನಗೊಂಡಿದೆ. ನಮ್ಮ ಈ ಕಲಿಕೆಯ ನಂಟು ಆಧುನಿಕ ಮತ್ತು ಪುರಾತನ ಎರಡೂ ಆಗಿದೆ. 20ನೇ ಶತಮಾನದಲ್ಲಿ, ಹಲವು ಭಾರತೀಯರು ಭೂತಾನ್ ಗೆ ಶಿಕ್ಷಕರಾಗಿ ಬಂದರು. ಹಳೆಯ ತಲೆಮಾರಿನ ಹೆಚ್ಚಿನ ಭೂತಾನ್ ನಾಗರಿಕರು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಕನಿಷ್ಠ ಒಬ್ಬ ಭಾರತೀಯ ಶಿಕ್ಷಕರಿಂದ ಕಲಿತಿದ್ದರು. ಅವರಲ್ಲಿ ಕೆಲವರನ್ನು ಕಳೆದ ವರ್ಷ ಘನತೆವೆತ್ತ ದೊರೆ ಗೌರವಿಸಿದ್ದರು, ಈ ಉದಾರತೆಗೆ ನಾವು ಕೃತಜ್ಞರಾಗಿರುತ್ತೇವೆ.

 

ಸ್ನೇಹಿತರೆ,

 

ಯಾವುದೇ ಸಂದರ್ಭದಲ್ಲಿ, ಭೂತಾನದ ನಾಲ್ಕು ಸಾವಿರ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಬಹುದು. ಈ ಸಂಖ್ಯೆ ಇನ್ನೂ ಹೆಚ್ಚಬಹುದು. ನಾವು ನಮ್ಮ ದೇಶವನ್ನು ಅಭಿವೃದ್ಧಿಯತ್ತ ನಡೆಸಿದಾಗ, ನಾವು ಸದಾ ಬದಲಾಗುತ್ತಿರುವ ತಾಂತ್ರಿಕ ಭೂರಮೆಯೊಂದಿಗೆ ವೇಗವನ್ನು ಉಳಿಸಿಕೊಳ್ಳಬೇಕು. ಆದ್ದರಿಂದ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಶಿಕ್ಷಣದ ಎಲ್ಲಾ ಕ್ಷೇತ್ರಗಳಲ್ಲಿ ನಾವು ಸಹಕರಿಸುವುದು ಮುಖ್ಯವಾಗುತ್ತದೆ.

 

ನಾವು ನಿನ್ನೆ ಭಾರತದ ಪ್ರಮುಖ ಐಐಟಿಗಳು ಮತ್ತು ಈ ಪ್ರತಿಷ್ಠಿತ ವಿಶ್ವವಿದ್ಯಾಲಯದ ನಡುವೆ ಹೊಸ ಅಧ್ಯಾಯ ಆರಂಭಿಸಿದೆವು ಎಂಬ ಸಂತಸ ನನಗಿದೆ. ಇದು ಹೆಚ್ಚು ಸಹಯೋಗದ ಕಲಿಕೆ ಮತ್ತು ಸಂಶೋಧನೆಗೆ ಇಂಬು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.

|

ಸ್ನೇಹಿತರೆ,

 

ಜಗತ್ತಿನ ಯಾವುದೇ ಭಾಗದಲ್ಲಿ, ನೀವು ಭೂತಾನ್‌ ನೊಂದಿಗೆ ಯಾವರೀತಿ ನಂಟು ಹೊಂದಿದ್ದೀರಿ ಎಂಬ ಪ್ರಶ್ನೆಯನ್ನು ನಾವು ಕೇಳಿದರೆ, ಉತ್ತರವು ಒಟ್ಟು ರಾಷ್ಟ್ರೀಯ ಸಂತೋಷದ ಪರಿಕಲ್ಪನೆಯಾಗಿರುತ್ತದೆ. ನನಗೆ ಅಚ್ಚರಿ ಎನಿಸುವುದಿಲ್ಲ. ಭೂತಾನ್ ಸಂತಸದ ಸಾರವನ್ನು ಅರ್ಥಮಾಡಿಕೊಂಡಿದೆ. ಭೂತಾನ್ ಸೌಹಾರ್ದತೆ, ಸಹಾನುಭೂತಿ ಮತ್ತು ಒಗ್ಗೂಡಿ ಬಾಳುವ ಸ್ಫೂರ್ತಿಯನ್ನು ಅರಿತಿದೆ. ನಿನ್ನೆ ನನ್ನನ್ನು ಸ್ವಾಗತಿಸಲು ಬೀದಿಗಳಲ್ಲಿ ಸಾಲುಗಟ್ಟಿದ ನಿಂತಿದ್ದ ಮಕ್ಕಳಿಂದ ಈ ಉತ್ಸಾಹವು ಹೊರಹೊಮ್ಮುತ್ತದೆ. ಅವರ ನಗುವನ್ನು ನಾನು ಸದಾ ಸ್ಮರಿಸುತ್ತೇನೆ.

 

ಸ್ನೇಹಿತರೆ,  

 

ಸ್ವಾಮಿ ವಿವೇಕಾನಂದರು ಹೇಳುತ್ತಾರೆ “ಪ್ರತಿಯೊಂದು ದೇಶಕ್ಕೂ ಹೇಳಲು ಒಂದು ಸಂದೇಶವಿರುತ್ತದೆ, ಪೂರೈಸುವ ಉದ್ದೇಶವಿರುತ್ತದೆ, ಸಾಧಿಸಲು ಒಂದು ಗುರಿ ಇರುತ್ತದೆ”. ಮಾನವತೆಗೆ ಭೂತಾನ್ ಸಂದೇಶ ಎಂದರೆ ಸಂತೋಷ. ಸೌಹಾರ್ದತೆಯಿಂದ ಸಂತಸದ ಸಿಂಚನ ಆಗುತ್ತದೆ. ಜಗತ್ತು ಸಂತಸದೊಂದಿಗೆ ಹೆಚ್ಚಿನದನ್ನು ಮಾಡಬಹುದು. ಸಂತೋಷ, ಬುದ್ದಿಹೀನ ದ್ವೇಷದ ಮೇಲೆ ಮೇಲುಗೈ ಸಾಧಿಸುತ್ತದೆ. ಜನರು ಸಂತೋಷವಾಗಿದ್ದರೆ, ಸಾಮರಸ್ಯ ಇರುತ್ತದೆ, ಎಲ್ಲಿ ಸಾಮರಸ್ಯವಿರುತ್ತದೆಯೋ ಅಲ್ಲಿ, ಶಾಂತಿ ಇರುತ್ತದೆ. ಈ ಶಾಂತಿ ಸುಸ್ಥಿರ ಅಭಿವೃದ್ಧಿಯ ಮೂಲಕ ಸಮಾಜ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಸಂಪ್ರದಾಯಗಳು ಮತ್ತು ಪರಿಸರದೊಂದಿಗಿನ ತಾಕಲಾಟದಲ್ಲೂ ಅಭಿವೃದ್ಧಿಯನ್ನು ಹೆಚ್ಚಾಗಿ ಕಾಣುವ ಕಾಲದಲ್ಲಿ, ಭೂತಾನ್‌ನಿಂದ ಜಗತ್ತು ಕಲಿಯಬೇಕಾದದ್ದು ಸಾಕಷ್ಟಿದೆ. ಇಲ್ಲಿ, ಅಭಿವೃದ್ಧಿ, ಪರಿಸರ ಮತ್ತು ಸಂಸ್ಕೃತಿ ಭಿನ್ನವಾಗಿಲ್ಲ ಬದಲಾಗಿ ಒಟ್ಟಾಗಿವೆ. ಜಲ ಸಂರಕ್ಷಣೆಯೇ ಆಗಿರಲಿ ಅಥವಾ ಸುಸ್ಥಿರ ಕೃಷಿಯೇ ಅಗಿರಲಿ ಅಥವಾ ನಮ್ಮ ಸಮಾಜವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಮಾಡುವುದೇ ಇರಲಿ ನಮ್ಮ ಯುವಜನರ ಸೃಜನಶೀಲತೆ, ಚೈತನ್ಯ ಮತ್ತು ಬದ್ಧತೆಯೊಂದಿಗೆ ನಮ್ಮ ರಾಷ್ಟ್ರಗಳು ಸುಸ್ಥಿರ ಪ್ರಗತಿಗಾಗಿ ಅಗತ್ಯವಾದ್ದೆಲ್ಲವನ್ನೂ ಸಾಧಿಸಬಹುದು.  

|

ಸ್ನೇಹಿತರೆ,

 

ಭೂತಾನ್ ಗೆ ಕಳೆದ ಬಾರಿ ನಾನು ಭೇಟಿ ನೀಡಿದ ವೇಳೆ, ಪ್ರಜಾಪ್ರಭುತ್ವದ ದೇವಾಲಯ ಭೂತಾನ್ ಸಂಸತ್ತಿಗೆ ಭೇಟಿ ನೀಡುವ ಗೌರವ ಸಿಕ್ಕಿತ್ತು. ಇಂದು, ಕಲಿಕೆಯ ಈ ದೇಗುಲಕ್ಕೆ ಭೇಟಿ ನೀಡುವ ಗೌರವ ಪಡೆದಿದ್ದೇನೆ. ಇಂದು ಸಭಿಕರಲ್ಲಿ ಭೂತಾನ್ ಸಂಸತ್ತಿನ ಗೌರವಾನ್ವಿತ ಸದಸ್ಯರೂ ಇದ್ದಾರೆ. ಅವರೆಲ್ಲ ಉಪಸ್ಥಿತಿಗೆ ನಾನು ವಿಶೇಷವಾಗಿ ಧನ್ಯವಾದ ಅರ್ಪಿಸುತ್ತೇನೆ. ಪ್ರಜಾಪ್ರಭುತ್ವ ಮತ್ತು ಶಿಕ್ಷಣ ನಮಗೆ ಮುಕ್ತವಾಗಿರುವ ಗುರಿ ನೀಡುತ್ತದೆ. ಒಂದರ ಹೊರತು ಮತ್ತೊಂದು ಪರಿಪೂರ್ಣವಾಗಲು ಸಾಧ್ಯವಿಲ್ಲ. ಎರಡೂ ನಮ್ಮ ಪೂರ್ಣ ಸಾಮರ್ಥ್ಯದ ಮತ್ತು ಉತ್ತಮ ಕಾರ್ಯ ಸಾಧನೆಗೆ ನೆರವಾಗುತ್ತವೆ. ಈ ಕಲಿಕಾ ಪೀಠ ಮತ್ತೊಮ್ಮೆ ನಮ್ಮ ಪ್ರಶ್ನಿಸಿ ತಿಳಿವ ಮನೋಭಾವವನ್ನು ಮುಕ್ತಗೊಳಿಸುತ್ತದೆ ಮತ್ತು ನಮ್ಮೊಳಗಿನ ವಿದ್ಯಾರ್ಥಿಯನ್ನು ಜೀವಂತವಾಗಿರಿಸುತ್ತದೆ.

 

 ಈ ಪ್ರಯತ್ನಗಳಲ್ಲಿ ಭೂತಾನ್ ಔನ್ನತ್ಯ ಪಡೆಯುತ್ತಿದ್ದಂತೆ, ನಿಮ್ಮ 130 ಕೋಟಿ ಭಾರತೀಯ ಸ್ನೇಹಿತರು ನಿಮ್ಮನ್ನು ಕೇವಲ ಹೆಮ್ಮೆ ಮತ್ತು ಸಂತೋಷದಿಂದಷ್ಟೇ ನೋಡಿ ಹುರಿದುಂಬಿಸುವುದಿಲ್ಲ. ಜೊತೆಗೆ ನಿಮ್ಮೊಂದಿಗೆ ಪಾಲುದಾರರಾಗುತ್ತಾರೆ, ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ನಿಮ್ಮಿಂದ ಕಲಿಯುತ್ತಾರೆ. ಈ ಮಾತುಗಳೊಂದಿಗೆ, ನಾನು ಭೂತಾನ್ ರಾಯಲ್ ವಿಶ್ವವಿದ್ಯಾಲಯದ ಕುಲಪತಿಗಳಾದ ಘನತೆವೆತ್ತ ದೊರೆ, ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಬೋಧಕವರ್ಗದವರಿಗೆ ಮತ್ತು ಯುವ ಮಿತ್ರರಾದ ನಿಮ್ಮೆಲ್ಲರಿಗೂ  ಧನ್ಯವಾದ ಅರ್ಪಿಸುತ್ತೇನೆ.

 

ನೀವೆಲ್ಲರೂ ನಿಮ್ಮ ಆಮಂತ್ರಣದೊಂದಿಗೆ ನನ್ನನ್ನು ಗೌರವಿಸಿದ್ದೀರಿ ಮತ್ತು ನನಗಾಗಿ ಇಷ್ಟೊಂದು ಸಮಯ, ಗಮನ ಮತ್ತು ವಾತ್ಸಲ್ಯವನ್ನು ನೀಡಿದ್ದೀರಿ. ನಾನು ಅತೀವ ಆನಂದ ಮತ್ತು ನಿಮ್ಮೆಲ್ಲರ ಧನಾತ್ಮಕ ಚೈತನ್ಯದೊಂದಿಗೆ ತವರಿಗೆ ಮರಳುತ್ತೇನೆ.

  

ತುಂಬಾ ತುಂಭಾ ಧನ್ಯವಾದಗಳು.

  

ತಶಿ ದೆಲೇಕ್! 

 

 

 

 

 

 

 

 

 

 

 

 

 

 

 

 

 

  • Reena chaurasia August 29, 2024

    बीजेपी
  • Babla sengupta January 03, 2024

    Babla sengupta
  • Mahendra singh Solanki Loksabha Sansad Dewas Shajapur mp November 12, 2023

    Jay shree Ram
  • Manda krishna BJP Telangana Mahabubabad District mahabubabad September 19, 2022

    💐🇮🇳💐🇮🇳💐🇮🇳
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'Operation Sindoor on, if they fire, we fire': India's big message to Pakistan

Media Coverage

'Operation Sindoor on, if they fire, we fire': India's big message to Pakistan
NM on the go

Nm on the go

Always be the first to hear from the PM. Get the App Now!
...
PM Modi's address to the nation
May 12, 2025
QuoteToday, every terrorist knows the consequences of wiping Sindoor from the foreheads of our sisters and daughters: PM
QuoteOperation Sindoor is an unwavering pledge for justice: PM
QuoteTerrorists dared to wipe the Sindoor from the foreheads of our sisters; that's why India destroyed the very headquarters of terror: PM
QuotePakistan had prepared to strike at our borders,but India hit them right at their core: PM
QuoteOperation Sindoor has redefined the fight against terror, setting a new benchmark, a new normal: PM
QuoteThis is not an era of war, but it is not an era of terrorism either: PM
QuoteZero tolerance against terrorism is the guarantee of a better world: PM
QuoteAny talks with Pakistan will focus on terrorism and PoK: PM

ಪ್ರಿಯ ದೇಶವಾಸಿಗಳೇ,

ನಮಸ್ಕಾರ !...

ಕಳೆದ ಕೆಲ ದಿನಗಳಲ್ಲಿ ದೇಶದ ಶಕ್ತಿ ಮತ್ತು ಸಂಯಮ ಎರಡನ್ನೂ ನಾವೆಲ್ಲರೂ ನೋಡಿದ್ದೇವೆ. ಮೊದಲನೆಯದಾಗಿ, ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಭಾರತದ ಬಲಿಷ್ಠ ಪಡೆಗಳಿಗೆ, ನಮ್ಮ ಸಶಸ್ತ್ರ ಪಡೆಗಳಿಗೆ, ನಮ್ಮ ಗುಪ್ತಚರ ಸಂಸ್ಥೆಗಳಿಗೆ ಮತ್ತು ನಮ್ಮ ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ.

ಆಪರೇಷನ್ ಸಿಂಧೂರದ ಉದ್ದೇಶಗಳನ್ನು ಸಾಧಿಸಲು ನಮ್ಮ ವೀರ ಸೈನಿಕರು ಅಪಾರ ಧೈರ್ಯವನ್ನು ಪ್ರದರ್ಶಿಸಿದರು.

ಇಂದು ನಾನು ಅವರ ಧೈರ್ಯಕ್ಕೆ, ಅವರ ಪರಾಕ್ರಮಕ್ಕೆ, ಅವರ ಶೌರ್ಯಕ್ಕೆ... ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ನಾನು ಈ ಶೌರ್ಯವನ್ನು ದೇಶದ ಪ್ರತಿಯೊಬ್ಬ ಮಗಳಿಗೂ ಅರ್ಪಿಸುತ್ತೇನೆ.

ಸ್ನೇಹಿತರೇ,

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ತೋರಿಸಿದ ಬರ್ಬರತೆ ದೇಶ ಮತ್ತು ಜಗತ್ತನ್ನು ಬೆಚ್ಚಿಬೀಳಿಸಿತ್ತು. ಮುಗ್ಧ ನಾಗರಿಕರು ರಜಾದಿನಗಳನ್ನು ಆಚರಿಸುತ್ತಾ ಅವರ ಕುಟುಂಬಗಳ ಮುಂದಿದ್ದರು. ಆದರೆ, ಮಕ್ಕಳ ಮುಂದೆ ಕ್ರೂರವಾಗಿ ಕೊಲ್ಲುವುದರೊಂದಿಗೆ ಧರ್ಮದ ಬಗ್ಗೆ ಕೇಳುವುದು ಭಯೋತ್ಪಾದನೆಯ ಅತ್ಯಂತ ಭೀಕರ ಮುಖವಾಗಿತ್ತು. ಅದು ಕ್ರೌರ್ಯ. ಇದು ದೇಶದ ಸಾಮರಸ್ಯವನ್ನು ಮುರಿಯುವ ಪ್ರಯತ್ನವೂ ಆಗಿತ್ತು.

ನನಗೆ ವೈಯಕ್ತಿಕವಾಗಿ, ಈ ನೋವು ಅಪಾರವಾಗಿತ್ತು. ಈ ಭಯೋತ್ಪಾದಕ ದಾಳಿಯ ನಂತರ, ಇಡೀ ರಾಷ್ಟ್ರ, ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಸಮಾಜ, ಪ್ರತಿಯೊಂದು ವರ್ಗ, ಪ್ರತಿಯೊಂದು ರಾಜಕೀಯ ಪಕ್ಷ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮಕ್ಕಾಗಿ ಒಂದೇ ಧ್ವನಿಯಲ್ಲಿ ನಿಂತವು. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ.

ಇಂದು ಪ್ರತಿಯೊಬ್ಬ ಭಯೋತ್ಪಾದಕನಿಗೂ, ಪ್ರತಿಯೊಂದು ಭಯೋತ್ಪಾದಕ ಸಂಘಟನೆಗೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹಣೆಯಿಂದ ಸಿಂಧೂರವನ್ನು ತೆಗೆದುಹಾಕುವುದರಿಂದ ಉಂಟಾಗುವ ಪರಿಣಾಮವೇನೆಂದು ತಿಳಿದಿದೆ.

ಸ್ನೇಹಿತರೇ,

ಆಪರೇಷನ್ ಸಿಂಧೂರ... ಇದು ಕೇವಲ ಹೆಸರಲ್ಲ, ಇದು ದೇಶದ ಕೋಟ್ಯಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ.

'ಸಿಂಧೂರ' ಕಾರ್ಯಾಚರಣೆ... ನ್ಯಾಯದ ಅವಿಚ್ಛಿನ್ನ ಪ್ರತಿಜ್ಞೆಯಾಗಿದೆ. ಮೇ 6ರ ತಡರಾತ್ರಿ ಮತ್ತು ಮೇ 7ರ ಬೆಳಿಗ್ಗೆ ಈ ಪ್ರತಿಜ್ಞೆಯು ಫಲಿತಾಂಶವಾಗಿ ಬದಲಾಗುವುದನ್ನು ಇಡೀ ಜಗತ್ತು ನೋಡಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಪಡೆಗಳು ನಿಖರವಾದ ದಾಳಿ ನಡೆಸಿವೆ.

ಭಾರತ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದೆಂದು ಭಯೋತ್ಪಾದಕರು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ, ದೇಶವು ಒಗ್ಗಟ್ಟಾದಾಗ ದೇಶ ಮೊದಲು ಎಂಬ ಮನೋಭಾವದಿಂದ ತುಂಬಿದಾಗ ರಾಷ್ಟ್ರವು ಸರ್ವೋಚ್ಚವಾಗಿರುತ್ತದೆ, ನಂತರ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ, ಫಲಿತಾಂಶಗಳನ್ನು ಸಾಧಿಸಲಾಗುತ್ತದೆ.

ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದಾಗ, ಭಯೋತ್ಪಾದಕ ಸಂಘಟನೆಗಳ ಕಟ್ಟಡಗಳು ನಾಶವಾದವು. ಅಷ್ಟೇ ಅಲ್ಲದೆ, ಅವುಗಳ ನೈತಿಕ ಸ್ಥೈರ್ಯವೂ ಕಂಪನವಾಯಿತು.

ಬಹಾವಲ್ಪುರ್ ಮತ್ತು ಮುರಿಡ್ಕೆಯಂತಹ ಭಯೋತ್ಪಾದಕ ಅಡಗುತಾಣಗಳು ಒಂದು ರೀತಿಯಲ್ಲಿ ಜಾಗತಿಕ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳಾಗಿವೆ. ಜಗತ್ತಿನ ಎಲ್ಲೆಡೆ ನಡೆದ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿ... ಅದು ಸೆಪ್ಟೆಂಬರ್ 11 ಆಗಿರಲಿ ಅಥವಾ ಲಂಡನ್ ಟ್ಯೂಬ್ ಬಾಂಬ್ ದಾಳಿಯಾಗಿರಲಿ ಅಥವಾ ದಶಕಗಳಲ್ಲಿ ಭಾರತದಲ್ಲಿ ನಡೆದಿರುವ ಪ್ರಮುಖ ಭಯೋತ್ಪಾದಕ ದಾಳಿಗಳಾಗಿರಲಿ ಅಥವಾ ಎಲ್ಲೋ, ಮತ್ತೊಂದರಲ್ಲೋ , ಈ ಭಯೋತ್ಪಾದಕ ಅಡಗುತಾಣಗಳೊಂದಿಗೆ ಸಂಬಂಧ ಹೊಂದಿವೆ. ಭಯೋತ್ಪಾದಕರು ನಮ್ಮ ಸಹೋದರಿಯರ ಸಿಂಧೂರವನ್ನು ನಾಶಪಡಿಸಿದ್ದರು. ಅದಕ್ಕಾಗಿಯೇ ಭಾರತವು ಈ ಭಯೋತ್ಪಾದನೆಯ ಪ್ರಧಾನ ಕಚೇರಿಗಳನ್ನು ನಾಶಪಡಿಸಿತು.

ಭಾರತ ನಡೆಸಿದ ಈ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಭೀಕರ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಕಳೆದ ಎರಡೂವರೆ ಮೂರು ದಶಕಗಳಿಂದ ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದ ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದ ಅನೇಕ ಭಯೋತ್ಪಾದಕ ನಾಯಕರನ್ನು ಭಾರತ ಒಂದೇ ಏಟಿನಲ್ಲಿ ನಿರ್ಮೂಲನೆ ಮಾಡಿತು.

ಸ್ನೇಹಿತರೇ,

ಭಾರತದ ಈ ಕ್ರಮದಿಂದ ಪಾಕಿಸ್ತಾನ ತೀವ್ರ ನಿರಾಶೆಗೊಂಡಿದೆ.

ಅವರು ಹತಾಶೆಯಿಂದ ಸುತ್ತುವರೆದಿದ್ದಾರೆ ಮತ್ತು ಕೋಪಗೊಂಡಿದ್ದಾರೆ ಮತ್ತು ಈ ಹತಾಶೆಯಲ್ಲಿ ಅವರು ಮತ್ತೊಂದು ಧೈರ್ಯಶಾಲಿ ಕೃತ್ಯವನ್ನು ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಕ್ರಮವನ್ನು ಬೆಂಬಲಿಸುವ ಬದಲು, ಪಾಕಿಸ್ತಾನ ಭಾರತದ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸಿತು.

ಪಾಕಿಸ್ತಾನ ನಮ್ಮ ಶಾಲೆಗಳು ಮತ್ತು ಕಾಲೇಜುಗಳನ್ನು ಗುರಿಯಾಗಿಸಿಕೊಂಡಿತು. ಗುರುದ್ವಾರಗಳು, ದೇವಾಲಯಗಳು, ಸಾಮಾನ್ಯ ನಾಗರಿಕರ ಮನೆಗಳು. ಪಾಕಿಸ್ತಾನ ನಮ್ಮ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿತು. ಆದರೆ ಇದರಲ್ಲಿ ಪಾಕಿಸ್ತಾನದ ಮನಸ್ಥಿತಿ ಬಹಿರಂಗವಾಯಿತು. ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಭಾರತದ ಮುಂದೆ ಹೇಗೆ ಒಣಹುಲ್ಲಿನಂತೆ ಬಿದ್ದವು ಎಂಬುದನ್ನು ಜಗತ್ತು ನೋಡಿತು.

ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಆಕಾಶದಲ್ಲಿಯೇ ನಾಶಪಡಿಸಿತು. ಪಾಕಿಸ್ತಾನ ಗಡಿಯಲ್ಲಿ ದಾಳಿ ಮಾಡಲು ಸಿದ್ಧತೆ ನಡೆಸುತ್ತಿತ್ತು. ಆದರೆ ಭಾರತ ಪಾಕಿಸ್ತಾನದ ಎದೆಗೆ ಹೊಡೆದಿದೆ. ಭಾರತೀಯ ಡ್ರೋನ್‌ಗಳು... ಭಾರತೀಯ ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದವು. ಪಾಕಿಸ್ತಾನಿ ವಾಯುಪಡೆಯ ಆ ವಾಯುನೆಲೆಗಳು ಹಾನಿಗೊಳಗಾದವು.

ಅದರ ಬಗ್ಗೆ ಪಾಕಿಸ್ತಾನ ತುಂಬಾ ಹೆಮ್ಮೆಪಡುತ್ತಿತ್ತು. ಮೊದಲ ಮೂರು ದಿನಗಳಲ್ಲಿ ಭಾರತ ಪಾಕಿಸ್ತಾನವನ್ನು ಊಹಿಸಿಯೂ ಇಲ್ಲದಷ್ಟು ನಾಶಮಾಡಿತು.

ಭಾರತದ ಆಕ್ರಮಣಕಾರಿ ಕ್ರಮದ ನಂತರ ಪಾಕಿಸ್ತಾನ ತಪ್ಪಿಸಿಕೊಳ್ಳಲು ದಾರಿಗಳನ್ನು ಹುಡುಕಲು ಪ್ರಾರಂಭಿಸಿತು. ಪಾಕಿಸ್ತಾನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಜಗತ್ತನ್ನು ಬೇಡಿಕೊಳ್ಳುತ್ತಿತ್ತು ಮತ್ತು ಈ ಬಲವಂತದ ಮೇರೆಗೆ, ತೀವ್ರವಾಗಿ ಥಳಿಸಿದ ನಂತರ, ಮೇ 10 ರ ಮಧ್ಯಾಹ್ನ, ಪಾಕಿಸ್ತಾನಿ ಸೇನೆಯು ನಮ್ಮ ಡಿಜಿಎಂಒಗಳು ಅವರನ್ನು ಸಂಪರ್ಕಿಸಿತು.

ಆ ಹೊತ್ತಿಗೆ ನಾವು ಭಯೋತ್ಪಾದನೆಯ ಮೂಲಸೌಕರ್ಯವನ್ನು ದೊಡ್ಡ ಪ್ರಮಾಣದಲ್ಲಿ ನಾಶಪಡಿಸಿದ್ದೆವು. ಭಯೋತ್ಪಾದಕರು ಕೊಲ್ಲಲ್ಪಟ್ಟರು. ನಾವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ನಾಶಮಾಡಿದ್ದೆವು. ಹಾಗಾಗಿ, ಪಾಕಿಸ್ತಾನದಿಂದ ಮನವಿ ಬಂದಾಗ, ಇದನ್ನು ಪಾಕಿಸ್ತಾನದಿಂದ ಹೇಳಿದಾಗ, ಅವರ ಕಡೆಯಿಂದ ಇನ್ನು ಮುಂದೆ ಯಾವುದೇ ಭಯೋತ್ಪಾದಕ ಚಟುವಟಿಕೆ ಮತ್ತು ಮಿಲಿಟರಿ ಸಾಹಸ ಇರುವುದಿಲ್ಲ ಎಂದು ಹೇಳಿದ್ದರಿಂದ ಭಾರತವೂ ಅದನ್ನು ಪರಿಗಣಿಸಿತು.

ಮತ್ತು ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಮತ್ತು ಸೇನಾ ನೆಲೆಗಳ ವಿರುದ್ಧದ ನಮ್ಮ ಪ್ರತೀಕಾರದ ಕ್ರಮವನ್ನು ನಾವು ಮುಂದೂಡಿದ್ದೇವೆ.

ಮುಂದಿನ ದಿನಗಳಲ್ಲಿ ಈ ಮಾನದಂಡದ ಆಧಾರದ ಮೇಲೆ ನಾವು ಪಾಕಿಸ್ತಾನದ ಪ್ರತಿಯೊಂದು ಹೆಜ್ಜೆಯನ್ನೂ ಅಳೆಯುತ್ತೇವೆ.

ದೇಶವಾಸಿಗಳೇ,

ಭಾರತದ ಮೂರೂ ಸೇನೆಗಳು, ನಮ್ಮ ವಾಯುಪಡೆ, ನಮ್ಮ ಸೇನೆ ಮತ್ತು ನಮ್ಮ ನೌಕಾಪಡೆ, ನಮ್ಮ ಗಡಿ ಭದ್ರತಾ ಪಡೆ-ಬಿಎಸ್‌ ಎಫ್‌, ಭಾರತದ ಅರೆ ಸೇನಾ ಪಡೆ ಸತತವಾಗಿ ನಿಗಾ ವಹಿಸಿವೆ. ಸರ್ಜಿಕಲ್‌ ಸ್ಟ್ರೈಕ್‌ ಮತ್ತು ವಾಯು ದಾಳಿಯ ಬಳಿಕ ಈಗ ಆಪರೇಷನ್‌ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯಾಗಿದೆ. ಆಪರೇಷನ್ ಸಿಂಧೂರವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ಆರಂಭವನ್ನು ಮಾಡಿದೆ. ಹೊಸ ಮಾನದಂಡವನ್ನು ಹೊಸ ಅಧ್ಯಾಯವನ್ನು ಸ್ಥಾಪಿಸಿದೆ. ಮೊದಲನೆಯದು , ಭಾರತದ ಮೇಲೆ ಭಯೋತ್ಪಾದಕ ದಾಳಿಯಾದರೆ ದಿಟ್ಟ ಉತ್ತರವನ್ನು ನೀಡಲಾಗುವುದು. ನಾವು ನಮ್ಮ ರೀತಿಯಲ್ಲಿ ನಮ್ಮ ಷರತ್ತುಗಳ ಮೇಲೆ ಉತ್ತರಗಳನ್ನು ನೀಡುತ್ತೇವೆ. ಭಯೋತ್ಪಾದನೆಯ ಮೂಲವನ್ನು ಬುಡ ಸಮೇತವಾಗಿ ನಿಗ್ರಹಗೊಳಿಸಲು ಕಠಿಣ ಕಾರ್ಯಾಚರಣೆಯನ್ನು ಕೈಗೊಳ್ಳುತ್ತೇವೆ. ಎರಡನೇಯದು ಯಾವುದೇ ಪರಮಾಣು ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಪರಮಾಣು ಬೆದರಿಕೆಯ ಅಡಿಯಲ್ಲಿ ಬೆಳೆಯುತ್ತಿರುವ ಭಯೋತ್ಪಾದಕ ತಾಣಗಳ ಮೇಲೆ ಭಾರತವು, ನಿಖರವಾದ ಮತ್ತು ನಿರ್ಣಾಯಕವಾದ ದಾಳಿಗಳನ್ನು ಕೈಗೊಳ್ಳಲಿದೆ. ಮೂರನೇಯದು , ಭಯೋತ್ಪಾದನೆ ಹಾಗೂ ಭಯೋತ್ಪಾದನೆಗೆ ಸಹಕರಿಸುವ ಎಲ್ಲ ಶಕ್ತಿಗಳನ್ನು ಸಹ ಒಂದೇ ದೃಷ್ಟಿಯಲ್ಲಿ ನೋಡಲಾಗುವುದು. ಅವರು ಸಹ ದೇಶದ ಆತಂಕವಾದಿಗಳಾಗಿದ್ದಾರೆ .

ಇಡೀ ವಿಶ್ವ, ಪಾಕಿಸ್ತಾನದ ಹೇಯ ಕೃತ್ಯವನ್ನು ಮತ್ತೊಮ್ಮೆ ನೋಡಿದೆ. ಆಪರೇಷನ್‌ ಸಿಂಧೂರ್‌ ದಾಳಿಯಲ್ಲಿ ಸಾವಿಗೀಡಾದ ಭಯೋತ್ಪಾದಕರಿಗೆ ವಿದಾಯ ನೀಡುವಲ್ಲಿ ಪಾಕಿಸ್ತಾನ ಸೇನೆಯ ಉನ್ನತ ಅಧಿಕಾರಿಗಳು ನಿರತರಾಗಿದ್ದರು. ಪಾಕ್‌ ನ ಪ್ರಾಯೋಜಿತ ಭಯೋತ್ಪಾದನೆಗೆ ಇದೊಂದು ಬಹುದೊಡ್ಡ ಸಾಕ್ಷಿಯಾಗಿದೆ.

ನಾವು ಭಾರತ ಮತ್ತು ನಮ್ಮ ನಾಗರಿಕರನ್ನು ಯಾವುದೇ ರೀತಿಯ ಅಪಾಯದಿಂದ ರಕ್ಷಿಸುವುದಕ್ಕೋಸ್ಕರ ನಿರಂತರವಾಗಿ ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತೇವೆ.

ಸ್ನೇಹಿತರೆ,

ಯುದ್ಧದ ಮೈದಾನದಲ್ಲಿ ನಾವು ಪ್ರತಿ ಬಾರಿ ಪಾಕಿಸ್ತಾನವನ್ನು ದೂಳೀಪಟ ಮಾಡಿದ್ದೇವೆ ಮತ್ತು ಈ ಬಾರಿ ಆಪರೇಷನ್‌ ಸಿಂಧೂರ್‌, ಹೊಸ ಆಯಾಮಕ್ಕೆ ಸೇರ್ಪಡೆಯಾಗಿದೆ.

ನಾವು ಮರುಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ನಮ್ಮ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ಜತೆಗೇ, ಹೊಸ ತಲೆಮಾರಿನ ಯುದ್ಧಕ್ರಮದಲ್ಲೂ ನಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದೇವೆ.

ಈ ಆಪರೇಷನ್‌ ಮೂಲಕ, ನಮ್ಮ ಮೇಡ್‌ ಇನ್‌ ಇಂಡಿಯಾ ಶಸ್ತ್ರಾಸ್ತ್ರಗಳ ದಕ್ಷತೆಯೂ ಸಾಬೀತಾಗಿದೆ.

21ನೇ ಶತಮಾನದ ಯುದ್ಧದಲ್ಲಿ ಮೇಡ್‌ ಇನ್‌ ಇಂಡಿಯಾ ರಕ್ಷಣಾ ಸಲಕರಣೆಗಳ ಸಮಯ ಈಗ ಬಂದಿದೆ ಎನ್ನುವುದನ್ನು ಇಂದು ವಿಶ್ವ ನೋಡುತ್ತಿದೆ.

ಸ್ನೇಹಿತರೇ,

ಎಲ್ಲ ರೀತಿಯ ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಒಗ್ಗೂಡಿರುವುದು ನಮ್ಮ ಅತ್ಯಂತ ದೊಡ್ಡ ಶಕ್ತಿಯಾಗಿದೆ.

ನಿಶ್ಚಿತವಾಗಿ ಈ ಸಮಯ ಯುದ್ಧದ ಕಾಲವಲ್ಲ,

ಆದರೆ ಈ ಕಾಲ ಭಯೋತ್ಪಾದನೆಯ ಸಮಯವೂ ಅಲ್ಲ.

ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದು ಉತ್ತಮ ಜಗತ್ತನ್ನು ಸುನಿಶ್ಚಿತಗೊಳಿಸುತ್ತದೆ.

ದೇಶವಾಸಿಗಳೇ,

ಪಾಕಿಸ್ತಾನಿ ಯೋಧರು, ಪಾಕಿಸ್ತಾನದ ಸರ್ಕಾರ ಯಾವ ರೀತಿಯಲ್ಲಿ ಭಯೋತ್ಪಾದನೆಗೆ ಪುಷ್ಟಿ ನೀಡುತ್ತಿವೆ ಎಂದರೆ, ಒಂದು ದಿನ ಅದು ಪಾಕಿಸ್ತಾನವನ್ನೇ ಅಂತ್ಯಗೊಳಿಸುತ್ತದೆ.

ಪಾಕಿಸ್ತಾನಕ್ಕೆ ಇದರಿಂದ ರಕ್ಷಿಸಿಕೊಳ್ಳಬೇಕು ಎಂದಾದರೆ ಅದು ತನ್ನ ಭಯೋತ್ಪಾದನೆಗೆ ಮೂಲಸೌಕರ್ಯ ಒದಗಿಸುವ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಬೇಕು. ಇದನ್ನು ಬಿಟ್ಟು ಶಾಂತಿಯ ಬೇರೆ ಯಾವುದೇ ಮಾರ್ಗವಿಲ್ಲ.

ಭಯೋತ್ಪಾದನೆ ಮತ್ತು ಮಾತುಕತೆ ಜತೆಯಾಗಿ ನಡೆಯಲು ಸಾಧ್ಯವಿಲ್ಲ ಎನ್ನುವುದು ಭಾರತದ ಅತ್ಯಂತ ಸ್ಪಷ್ಟ ನಿಲುವಾಗಿದೆ.

ಭಯೋತ್ಪಾದನೆ ಮತ್ತು ವ್ಯಾಪಾರ ಜತೆಯಾಗಿ ನಡೆಯಲು ಸಾಧ್ಯವಿಲ್ಲ ಮತ್ತು,

ನೀರು ಮತ್ತು ರಕ್ತ ಒಟ್ಟಿಗೇ ಹರಿಯಲು ಸಾಧ್ಯವಿಲ್ಲ.

ನಮ್ಮ ಪ್ರಕಟಿತ ನೀತಿಯೆಂದರೆ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುತ್ತದೆ ಎಂದಾದರೆ, ಅದು ಭಯೋತ್ಪಾದನೆಯ ಕುರಿತಾಗಿಯೇ ಆಗಿರುತ್ತದೆ. ಪಾಕಿಸ್ತಾನದೊಂದಿಗೆ ಮಾತುಕತೆಯಾಗುವುದಾದರೆ ಪಾಕ್‌ ಆಕ್ರಮಿತ ಕಾಶ್ಮೀರ-ಪಿಓಕೆಯ ಕುರಿತಾಗಿಯೇ ಇರುತ್ತದೆ ಎನ್ನುವುದನ್ನು ನಾನು ಇಂದು ಜಾಗತಿಕ ಸಮುದಾಯಕ್ಕೂ ತಿಳಿಸುತ್ತೇನೆ.

ಪ್ರೀತಿಯ ದೇಶವಾಸಿಗಳೇ,

ಇಂದು ಬುದ್ಧ ಪೂರ್ಣಿಮೆಯಾಗಿದೆ. ಭಗವಾನ್‌ ಬುದ್ಧ ನಮಗೆ ಶಾಂತಿಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಶಾಂತಿಯ ಮಾರ್ಗ ಸಹ ಶಕ್ತಿಯಿಂದ ಕೂಡಿದ್ದು ಸಾಗುತ್ತದೆ. ಮಾನವೀಯತೆ, ಶಾಂತಿ ಮತ್ತು ಸಮೃದ್ಧಿಯೆಡೆಗೆ ಮುನ್ನಡೆಯುತ್ತದೆ.

ಪ್ರತಿ ಭಾರತೀಯನು ಶಾಂತಿಯಿಂದ ಬದುಕಬೇಕು, ವಿಕಸಿತ ಭಾರತದ ಕನಸುಗಳನ್ನು ಪೂರ್ಣಗೊಳಿಸಬೇಕು.

ಇದರಿಂದಾಗಿ, ಭಾರತ ಶಕ್ತಿಶಾಲಿಯಾಗುವುದು ಅಗತ್ಯವಾಗಿದೆ.

ಮತ್ತು ಅವಶ್ಯಕತೆಯಿರುವಾಗ ಈ ಶಕ್ತಿಯ ಬಳಕೆ ಮಾಡುವುದು ಕೂಡ ಅಗತ್ಯ.

ಕೆಲವು ದಿನಗಳಿಂದ ಭಾರತವು ಇದನ್ನೇ ಮಾಡಿದೆ.

ನಾನು ಮತ್ತೊಮ್ಮೆ ಭಾರತದ ಸೇನೆ ಮತ್ತು ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸುತ್ತೇನೆ. ನಮ್ಮ ದೇಶವಾಸಿಗಳ ಧೈರ್ಯ ಮತ್ತು ಏಕತೆಗೆ ವಂದಿಸುತ್ತೇನೆ.

ಧನ್ಯವಾದ,

ಭಾರತ ಮಾತಾ ಕೀ ಜೈ!!!

ಭಾರತ ಮಾತಾ ಕೀ ಜೈ!!!

ಭಾರತ ಮಾತಾ ಕೀ ಜೈ!!!