QuoteBiofuels can power India’s growth in 21st century: PM Modi
QuoteBiofuels can help reduce import dependency on crude oil. They can contribute to a cleaner environment: PM Modi
QuoteBiofuels can generate additional income for farmers and boost rural employment: PM Modi
QuoteUnder the ethanol blending programme, by mixing ethanol with petrol, nearly Rs. 4,000 crore have been saved; this has also benefitted farmers: PM Modi
QuoteWe are working to make BioCNG from trash; CNG usage is being ramped up in public transport; we are trying to reduce dependence on CNG import: PM

ವಿಶ್ವ ಜೈವಿಕ ಇಂಧನ ದಿನದ ಅಂಗವಾಗಿ ಹೊಸದಿಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ರೈತರು, ವಿಜ್ಞಾನಿಗಳು, ಉದ್ಯಮಪತಿಗಳು, ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು ಮತ್ತು ಶಾಸಕರನ್ನು ಒಳಗೊಂಡ ವೈವಿಧ್ಯಮಯ ಸಭಾ ಸದರನ್ನು ಉದ್ದೇಶಿಸಿ ಅವರು ಮಾತನಾಡಿದರು.

|

ಜೈವಿಕ ಇಂಧನಗಳು 21 ನೇ ಶತಮಾನದಲ್ಲಿ ಭಾರತಕ್ಕೆ ಹೊಸ ವೇಗವನ್ನು , ಚಲನೆಯನ್ನು ತಂದುಕೊಡಬಲ್ಲವು ಎಂದು ಅವರು ಹೇಳಿದರು. ಬೆಳೆಗಳಿಂದ ಉತ್ಪಾದನೆಯಾಗುವ ಇಂಧನ ಇದಾಗಿದೆ, ಮತ್ತು ಇದು ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ವಾಸಿಸುತ್ತಿರುವ ಜನರ ಬದುಕನ್ನು ಬದಲಿಸಬಲ್ಲುದು ಎಂದರು.

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಜೈವಿಕ ಇಂಧನಗಳಿಂದ ಎಥೆನಾಲ್ ಉತ್ಪಾದಿಸುವ ಯೋಜನೆ ಆರಂಭವಾಯಿತು. 2014 ರ ಬಳಿಕ ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿ ಪ್ರಗತಿಪಥವನ್ನು ರೂಪಿಸಲಾಯಿತು ಎಂದರು. ಈ ಪ್ರಯತ್ನದಿಂದ ರೈತರಿಗೆ ಲಾಭವಾಗಿದ್ದಲ್ಲದೆ, ಈ ಕ್ರಮ ಕಳೆದ ವರ್ಷ 4,000 ಕೋಟಿ ರೂ.ಗಳ ವಿದೇಶೀ ವಿನಿಮಯವನ್ನು ಉಳಿಸಲು ಸಹಾಯ ಮಾಡಿತು. ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಇದನ್ನು 12,000 ಕೋ.ರೂ.ಗಳಿಗೇರಿಸಲು ಗುರಿ ನಿಗದಿ ಮಾಡಲಾಗಿದೆ ಎಂದೂ ಪ್ರಧಾನ ಮಂತ್ರಿಗಳು ಹೇಳಿದರು.

|

ಜೀವರಾಶಿಯನ್ನು ಜೈವಿಕ ಅನಿಲವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ಹೆಚ್ಚು ಹೂಡಿಕೆ ಮಾಡುತ್ತಿದೆ. 12 ಆಧುನಿಕ ತೈಲ ಶುದ್ದೀಕರಣಾಗಾರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

ಜನಧನ್, ವಂಧನ್ ಮತ್ತು ಗೋಬರ್ಧನ್ ಗಳಂತಹ ಯೋಜನೆಗಳು ಬಡವರ, ಬುಡಕಟ್ಟು ಜನರ ಮತ್ತು ರೈತರ ಜೀವನವನ್ನು ಬದಲಾಯಿಸಲು ಸಹಾಯ ಮಾಡುತ್ತಿವೆ . ಜೈವಿಕ ಇಂಧನಗಳ ಪರಿವರ್ತನಾ ಸಾಮರ್ಥ್ಯವನ್ನು ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು, ಉದ್ಯಮಪತಿಗಳು ಮತ್ತು ಜನರ ಸಹಭಾಗಿತ್ವದಿಂದ ಅನಾವರಣಗೊಳಿಸಬಹುದು ಎಂದ ಅವರು ಹಾಜರಿದ್ದ ಎಲ್ಲರೂ ಜೈವಿಕ ಇಂಧನಗಳ ಲಾಭವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

|

ಪ್ರಧಾನ ಮಂತ್ರಿಗಳು ಈ ಸಂಧರ್ಭದಲ್ಲಿ “ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ 2018 ” ರ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದರು. ಜೊತೆಗೆ ಪರಿಸರ ಏಕಗವಾಕ್ಷ ಹಬ್ ನ ಕ್ರಿಯಾತ್ಮಕ ಮತ್ತು ಪ್ರತಿಕ್ರಿಯಾತ್ಮಕ ಸೌಲಭ್ಯ ವ್ಯವಸ್ಥೆಯನ್ನು (ಪರಿವೇಶ್ ) ಕಾರ್ಯಾರಂಭಗೊಳಿಸಿದರು.

|

 

बायोफ्यूल सिर्फ विज्ञान नहीं है बल्कि वो मंत्र है जो 21वीं सदी के भारत को नई ऊर्जा देने वाला है

बायोफ्यूल यानि फसलों से निकला ईंधन, कूड़े-कचरे से निकला ईंधन

ये गांव से लेकर शहर तक के जीवन को बदलने वाला है

आम के आम, गुठली के दाम की जो पुरानी कहावत है, उसका ये आधुनिक रूप है: PM

— PMO India (@PMOIndia) August 10, 2018

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's defence exports surge to record Rs 23,622 crore in 2024-25: Rajnath Singh

Media Coverage

India's defence exports surge to record Rs 23,622 crore in 2024-25: Rajnath Singh
NM on the go

Nm on the go

Always be the first to hear from the PM. Get the App Now!
...
PM reflects on Navratri's sacred journey with worship of Maa Ambe
April 02, 2025

The Prime Minister Shri Narendra Modi today reflected on Navratri’s sacred journey with worship of Maa Ambe. Urging everyone to listen, he shared a prayer dedicated to the forms of Devi Maa.

In a post on X, he wrote:

“नवरात्रि में मां अम्बे की उपासना सभी भक्तों को भावविभोर कर देती है। देवी मां के स्वरूपों को समर्पित यह स्तुति अलौकिक अनुभूति देने वाली है। आप भी सुनिए…”