First responsibility of the government must be to work for poor, marginalized & underprivileged but sadly, SP isn’t doing so: Shri Modi
PM attacks SP government, says schools in UP do not have teachers in adequate number
Our Government is committed to welfare of farmers in UP, says Shri Narendra Modi
SP, BSP, Congress favouring each other in some way or the other in these elections, alleges PM Modi
For Uttar Pradesh's growth & development, BJP is the only ray of hope, says Prime Minister Modi

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಕನೌಜ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು . ಉತ್ತರ ಪ್ರದೇಶದ ಜನರಲ್ಲಿ ಅದ್ಭುತವಾದ ಉತ್ಸಾಹವನ್ನು ಗಮನಿಸಿದರು ಮತ್ತು ಜನರು ಯಾರನ್ನು ಬೆಂಬಲಿಸುತ್ತಿದ್ದಾರೆಂದು ಇದು ಸ್ಪಷ್ಟ ಸಂಕೇತವಾಗಿತ್ತು .

ಒಂದೇ ಉಡಾವಣೆಯಲ್ಲಿ 104 ಉಪಗ್ರಹಗಳನ್ನು ಬಿಡುಗಡೆ ಮಡಿದ ಇಸ್ರೋ ವಿಜ್ಞಾನಿಗಳನ್ನು ಶ್ರೀ ಮೋದಿ ಅಭಿನಂದಿಸಿದರು. ವಿಜ್ಞಾನಿಗಳು ಸಂಪೂರ್ಣ ದೇಶವನ್ನು ಹೆಮ್ಮೆಗೊಳಿಸಿದ್ದಾರೆ ಎಂದೂ ಅವರು ಹೇಳಿದರು. 

ಬಡವರಿಗಾಗಿ , ಸಾಮಾನ್ಯ ಹಕ್ಕುಗಳಿಲ್ಲದ ಜನರಿಗಾಗಿ ಮತ್ತು ಅಂಚಿನಲ್ಲಿರುವ ಜನರಿಗಾಗಿ ಕೆಲಸ ಮಾಡುವುದು ಸರ್ಕಾರದ ಸರ್ಕಾರದ ಮೊದಲ ಜವಾಬ್ದಾರಿ ಎಂದು ಪ್ರಧಾನ ಮಂತ್ರಿ ಹೇಳಿದರು . " ಬಡವರಿಗೆ ಆಹಾರ ಒದಗಿಸಲು ಸರ್ಕಾರ ಸಂಪನ್ಮೂಲ ಒದಗಿಸುತ್ತದೆ , ಆದರೆ ಬಡವರಿಗೆ ಆಹಾರ ಒದಗಿಸಲು ಉತ್ತರ ಪ್ರದೇಶದ ಸರ್ಕಾರ ಯಾವುದೇ ಆಸಕ್ತಿಯನ್ನು ಹೊಂದಿಲ್ಲ ," ಎಂದು ಪ್ರಧಾನಿ ಹೇಳಿದರು . " ಉತ್ತರ ಪ್ರದೇಶದ ಸರ್ಕಾರ ಬಡವರ ಸಬಲೀಕರಣದ ವಿರೋಧಿ , ಇದು ದುಃಖಕರ ವಿಷಯ ," ಎಂದು ಅವರು ಹೇಳಿದರು. .

ಪ್ರಧಾನಿ ಮೋದಿ ಉತ್ತರ ಪ್ರದೇಶದ ಬಡವರ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. " ಉತ್ತರ ಪ್ರದೇಶದ ಶಾಲೆಗಳು ಸಾಕ್ಷ್ಟು ಸಂಖ್ಯೆಯಲ್ಲಿ ಶಿಕ್ಷಕರನ್ನು ಹೊಂದಿಲ್ಲ . ಹೀಗೆ ಬಡವರ ಸಬಲೀಕರಣ ಹೇಗೆ ಸಾಧ್ಯ ," ಎಂದು ಹೇಳಿದರು .

ರೈತರ ಕಲ್ಯಾಣ ನನ್ನ ಸರ್ಕಾರಕ್ಕೆ ಪ್ರಮುಖವಾದುದು ಎಂದು ಪ್ರಧಾನಿ ಮೋದಿ ಒಟ್ಟು ನೀಡಿ ಹೇಳಿದರು . " ನಮ್ಮ ಸರ್ಕಾರ ಉತ್ತರ ಪ್ರದೇಶದ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ . ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ , ಸಣ್ಣ ರೈತರ ಎಲ್ಲ ಸಾಲವನ್ನು ಮನ್ನಾ ಮಾಡುತ್ತದೆ ."

ಈ ಚುನಾವಣೆಯಲ್ಲಿ ಎಸ್ ಪಿ , ಬಿಎಸ್ ಪಿ , ಕಾಂಗ್ರೆಸ್ ಎಲ್ಲಾ ರೀತಿಯಲ್ಲಿ ಪರಸ್ಪರ ಸಹಾಯ ಮಾಡುತ್ತಿದ್ದಾರೆ . ಹಿಂದೊಮ್ಮೆ , ಅವರು ಪರಸ್ಪರ ನಿಂದಿಸುತ್ತಿದ್ದರು ಅದ್ದರೆ ಈಗ ಪರಿಸ್ಥಿತಿಯನ್ನು ನೋಡಿ . ಅವರು ಪರಸ್ಪರ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವುದನ್ನು ವಿರೋಧಿಸುತ್ತಿದ್ದಾರೆ . " ಉತ್ತರ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬಿಜೆಪಿ ಏಕ ಮಾತ್ರ ಭರವಸೆಯ ಕಿರಣ " ಎಂದು ಶ್ರೀ ಮೋದಿ ಹೇಳಿದರು. 

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರನ್ನು ಟೀಕಿಸುತ್ತಾ , " 1984ರಲ್ಲಿ ಮುಲಾಯಂ ಸಿಂಗ್ ಜಿ ಕಾಂಗ್ರೆಸ್ ವಿರುದ್ಧ ಸ್ಪರ್ದಿಸಿದ್ದರು ಎಂದು ಅಖಿಲೇಶ್ ಜಿ ನಿಮಗೆ ನೆನಪಿದೆಯಾ? ಮತ್ತು ಇಂದು ನೀವು ಅವರೊಂದಿಗೆ ಮೈತ್ರಿ ಮಾಡಿದ್ದೀರಿ ! ಅಧಿಕಾರವನ್ನು ಮರಳಿ ಪಡೆಯಲು ಸಮಾಜವಾದಿ ಪಕ್ಷ ಏನನ್ನೂ ಮಾಡಬಹುದು ಎಂದು ಸ್ಫಷ್ಟವಾಗಿ ಗೋಚರಿಸುತ್ತದೆ ."ಎಂದು ಶ್ರೀ ಮೋದಿ ಹೇಳಿದರು

ಸಮಾಜವಾದಿ ಸರ್ಕಾರ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಮತ್ತು ಭ್ರಷ್ಟಾಚಾರಕ್ಕೆ ಸಹಾಯ ಮಾಡಿದೆ ಎಂದು ಆರೋಪಿಸಿದರು .ಉತ್ತರ ಪ್ರದೇಶದಲ್ಲಿ "ಏನು 'UP" , ಅಪರಾಧ , ಉದ್ಯೋಗ ಅವಕಾಶಗಳಿಗಾಗಿ ಯುವಕರ ವಲಸೆ , ಭ್ರಷ್ಟಾಚಾರ , ಗಲಭೆಗಳು , ಬಡತನ , ಮರಣ ಪ್ರಮಾಣ , ಶಾಲೆ ಬಿಟ್ಟಿರುವವರ ದರ , ಉತ್ತರ ಪ್ರದೇಶದಲ್ಲಿ ಹೆಚ್ಚಿದೆ .

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ನಾವು 3 ಮತ್ತು 4ನೇ ಹಂತದ ಸಂದರ್ಶನವನ್ನು ಸರಕಾರೀ ಉದ್ಯೋಗಗಳಿಂದ ತೆಗೆದುಹಾಕಿದ್ದೇವೆ . " ಹಿಂದೆ 3 ಮತ್ತು 4 ನೇ ಸಂದರ್ಶನದಲ್ಲಿ ಲಂಚ ತೆಗೆದುಕೊಳ್ಳಲಾಗುತ್ತಿತ್ತು . ಈ ಹಂತದ ತೆಗೆದುಹಾಕುವಿಕೆ ಭ್ರಷ್ಟಾಚಾರವನ್ನು ಕೊನೆಗೊಳಿಸಿದೆ" . "125 ಕೋಟಿ ಭಾರತೀಯರ ಆಶೀರ್ವಾದದಿಂದ ನಾನು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಬಲ್ಲೆ " ಎಂದು ಪ್ರಧಾನಿ ಹೇಳಿದರು .

ಭಾಷಣದ  ಪೂರ್ಣ ಪಠ್ಯ ವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಫೆಬ್ರವರಿ 2025
February 16, 2025

Appreciation for PM Modi’s Steps for Transformative Governance and Administrative Simplification