ಸೆಪ್ಟೆಂಬರ್ ತಿಂಗಳನ್ನು ಪೋಷಣ ಮಾಸವಾಗಿ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ. ರಾಷ್ಟ್ರ ಮತ್ತು ಪೋಷಣೆ ಪರಸ್ಪರ ಸಂಬಂಧ ಹೊಂದಿವೆ ಎಂದು ಅವರು ಹೇಳಿದರು. “ಯಥಾ ಅನ್ನಂ ತಥಾ ಮನ್ನಮ್” ಎಂಬ ಸುಭಾಷಿತವನ್ನು ಸ್ಮರಿಸಿಕೊಂಡ ಅವರು, ಇದರರ್ಥ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯು ನಮ್ಮ ಆಹಾರ ಸೇವನೆಯ ಗುಣಮಟ್ಟಕ್ಕೆ ಸಂಬಂಧಿಸಿದೆ ಎಂದರು. ಮಕ್ಕಳು ಮತ್ತು ವಿದ್ಯಾರ್ಥಿಗಳು ಅವರ ಅತ್ಯುತ್ತಮ ಸಾಮರ್ಥ್ಯವನ್ನು ತೋರಿಸಲು ಪೌಷ್ಠಿಕಾಂಶ ಮತ್ತು ಸರಿಯಾದ ಪೋಷಣೆ ದೊಡ್ಡ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶ ಸಿಗಬೇಕಾದರೆ, ತಾಯಿಯು ಸರಿಯಾದ ಪೋಷಣೆಯನ್ನು ಪಡೆಯಬೇಕು ಎಂದು ಅವರು ಒತ್ತಿ ಹೇಳಿದರು. ಕೇವಲ ತಿನ್ನುವುದರಿಂದ ಪೌಷ್ಠಿಕಾಂಶ ದೊರೆಯುವುದಿಲ್ಲ. ಬದಲಿಗೆ ಲವಣಗಳು, ಜೀವಸತ್ವಗಳು ಮುಂತಾದ ಪೋಷಕಾಂಶಗಳು ನಾವು ತಿನ್ನುವ ಆಹಾರದಲ್ಲಿರಬೇಕು ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ವಿಶೇಷವಾಗಿ ಪೌಷ್ಠಿಕ ಸಪ್ತಾಹ ಮತ್ತು ಪೌಷ್ಠಿಕ ಮಾಸಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವು ಪೌಷ್ಠಿಕಾಂಶದ ಬಗೆಗಿನ ಅರಿವನ್ನು ಬೃಹತ್ ಆಂದೋಲನವನ್ನಾಗಿ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಮಕ್ಕಳಲ್ಲಿ ಪೌಷ್ಠಿಕಾಂಶದ ಬಗ್ಗೆ ಅರಿವು ಮೂಡಿಸಲು ಸ್ಪರ್ಧೆಗಳ ಮೂಲಕ ಶಾಲೆಗಳನ್ನು ಈ ಸಾಮೂಹಿಕ ಆಂದೋಲನದೊಂದಿಗೆ ಸಂಯೋಜಿಸಲಾಗಿದೆ ಎಂದು ಅವರು ಹೇಳಿದರು.

ಒಂದು ತರಗತಿಗೆ, ಒಬ್ಬ ಕ್ಲಾಸ್ ಮಾನಿಟರ್ ಇರುವಂತೆ, ನ್ಯೂಟ್ರಿಷನ್ ಮಾನಿಟರ್ ಇರಬೇಕು ಎಂದು ಪ್ರಧಾನಿ ಹೇಳಿದರು. ಅದೇ ರೀತಿ, ರಿಪೋರ್ಟ್ ಕಾರ್ಡ್‌ನಂತೆಯೇ, ನ್ಯೂಟ್ರಿಷನ್ ಕಾರ್ಡ್ ಅನ್ನು ಸಹ ಪರಿಚಯಿಸಬೇಕು. ಪೌಷ್ಠಕಾಂಶ ತಿಂಗಳ ಅವಧಿಯಲ್ಲಿ, MyGov ಪೋರ್ಟಲ್‌ನಲ್ಲಿ ಆಹಾರ ಮತ್ತು ಪೌಷ್ಠಿಕಾಂಶ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಕೇಳುಗರು ಅದರಲ್ಲಿ ಭಾಗವಹಿಸಬೇಕು ಎಂದು ಅವರು ಕೇಳಿಕೊಂಡರು.

ಏಕತಾ ಪ್ರತಿಮೆಯ ಸ್ಥಳದಲ್ಲಿ, ಒಂದು ವಿಶಿಷ್ಟವಾದ ಪೌಷ್ಟಿಕಾಂಶ ಉದ್ಯಾನವನವನ್ನು ಸಹ ರೂಪಿಸಲಾಗಿದೆ. ಅಲ್ಲಿ ಜನರು ವಿನೋದ ಮತ್ತು ಉಲ್ಲಾಸದ ಜೊತೆಗೆ ಪೌಷ್ಠಿಕಾಂಶ ಸಂಬಂಧಿತ ಶಿಕ್ಷಣವನ್ನು ಪಡೆಯಬಹುದು ಎಂದು ಪ್ರಧಾನಿ ಹೇಳಿದರು.

ಭಾರತವು ಆಹಾರ ಮತ್ತು ಪಾನೀಯದಲ್ಲಿ ಸಾಕಷ್ಟು ವೈವಿಧ್ಯತೆಯನ್ನು ಹೊಂದಿದೆ ಎಂದು ಹೇಳಿದ ಪ್ರಧಾನಿ, ಆಯಾ ಋತುವಿನಲ್ಲಿ ಸಿಗುವ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆದ ಸ್ಥಳೀಯ ಆಹಾರ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿ ಸಮತೋಲಿತ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಕ್ರಮವನ್ನು ರೂಪಿಸಬೇಕು. ಪ್ರತಿ ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪೌಷ್ಠಿಕಾಂಶದ ಮೌಲ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ‘ಭಾರತದ ಕೃಷಿ ನಿಧಿ’ಯನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿ. ಪೌಷ್ಠಿಕಾಂಶದ ತಿಂಗಳಲ್ಲಿ ಕೇಳುಗರಿಗೆ ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯವಾಗಿರುವಂತೆ ಪ್ರಧಾನಿ ಒತ್ತಾಯಿಸಿದರು.

  • DASARI SAISIMHA February 27, 2025

    🪷🚩
  • Priya Satheesh January 09, 2025

    🐯
  • கார்த்திக் November 15, 2024

    🪷ஜெய் ஸ்ரீ ராம்🪷जय श्री राम🪷જય શ્રી રામ🪷 🪷ಜೈ ಶ್ರೀ ರಾಮ್🪷ଜୟ ଶ୍ରୀ ରାମ🪷Jai Shri Ram 🌺🌺 🌸জয় শ্ৰী ৰাম🌸ജയ് ശ്രീറാം 🌸 జై శ్రీ రామ్ 🌸🌺
  • ram Sagar pandey November 02, 2024

    🌹🌹🙏🙏🌹🌹जय श्रीकृष्णा राधे राधे 🌹🙏🏻🌹जय माँ विन्ध्यवासिनी👏🌹💐जय माता दी 🚩🙏🙏🌹🌹🙏🙏🌹🌹🌹🌹🙏🙏🌹🌹
  • Devendra Kunwar September 29, 2024

    BJP
  • Pradhuman Singh Tomar July 24, 2024

    bjp
  • Dr Swapna Verma March 12, 2024

    jay shree ram
  • rida rashid February 19, 2024

    जय हिंद
  • ज्योती चंद्रकांत मारकडे February 06, 2024

    जय हो
  • Babla sengupta December 24, 2023

    Babla sengupta
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
PM Modi urges states to unite as ‘Team India’ for growth and development by 2047

Media Coverage

PM Modi urges states to unite as ‘Team India’ for growth and development by 2047
NM on the go

Nm on the go

Always be the first to hear from the PM. Get the App Now!
...
Madhya Pradesh Chief Minister meets Prime Minister
May 25, 2025

The Chief Minister of Madhya Pradesh, Dr Mohan Yadav met the Prime Minister, Shri Narendra Modi in New Delhi today.

The Prime Minister’s Office handle posted on X:

“Chief Minister of Madhya Pradesh, @DrMohanYadav51, met Prime Minister @narendramodi.

@CMMadhyaPradesh”