ಕೆವಾಡಿಯಾದಲ್ಲಿ ನಿನ್ನೆ ಜರುಗಿದ ಡಿಜಿಪಿ/ಐಜಿಪಿಗಳ ಸಮಾವೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕಾಗಿ ವಾರ್ಷಿಕ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದರು. ರಾಷ್ಟ್ರೀಯ ಏಕೀಕರಣದ ನಿಟ್ಟಿನಲ್ಲಿ ಮಹತ್ವಪೂರ್ಣ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
“ಸರ್ದಾರ್ ಪಟೇಲ್ ಅವರು ತಮ್ಮ ಪೂರ್ತಿ ಜೀವನವನ್ನು ಭಾರತದ ಒಗ್ಗೂಡುವಿಕೆಗಾಗಿ ಸಮರ್ಪಿಸಿದ್ದಾರೆ. ರಾಷ್ಟ್ರೀಯ ಏಕೀಕರಣಕ್ಕಾಗಿ ವಾರ್ಷಿಕ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ನೀಡುವುದು ಅವರಿಗೆ ನೀಡುವ ಗೌರವ ನಮನವಾಗಿದೆ ಮತ್ತು ಈ ಮೂಲಕ ಹಲವರಿಗೆ ಭಾರತದ ಏಕತೆ ಮತ್ತು ರಾಷ್ಟ್ರೀಯ ಏಕೀಕರಣದ ನಿಟ್ಟಿನಲ್ಲಿ ಇನ್ನೂ ಹೆಚ್ಚು ಕೆಲಸಮಾಡಲು ಪ್ರಶಸ್ತಿಯು ಪ್ರೇರಣೆ ನೀಡುತ್ತದೆ. “ ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Sardar Patel devoted his life towards unifying India. The Sardar Patel Award for National Integration will be a fitting tribute to him and will inspire more people to work towards furthering India’s unity and national integration.
— Narendra Modi (@narendramodi) December 23, 2018