1960 ಮೇ 1ನೇ ತಾರೀಕಿಗೆ ಗುಜರಾತ್ ರಾಜ್ಯದ ಸ್ಥಾಪನೆ ಆದಾಗ ಜನಸಾಮಾನ್ಯರಲ್ಲಿದ್ದ ಕನಸು ಆಶಾಭಾವ, ಚಿಂತನೆಗಳೆಲ್ಲ ನನಸಾಗದೆ ದಶಕ ಕಳೆದಾಗ ಜನರಲ್ಲಿ ಭ್ರಮನಿರಸನ ಜೊತೆ ನಿರಾಶೆಯಾಯಿತು.

ಇಂದುಲಾಲ್ ಯಾಜ್ಞಿಕ್, ಜಿವರಾಜ್ ಮೆಹ್ತಾ ಮತ್ತು ಬಲ್ವಂತ್ರಾಜ್ ಮೆಹ್ತಾ ಮುಂತಾದವರ ಬಲಿದಾನ , ಮುಂದಿನ ಜನನಾಯಕರ ಹಣದಾಸೆಯ ಅಧಿಕಾರದ ರಾಜಕೀಯದಲ್ಲಿ ಬೆಲೆಕಳೆದುಕೊಂಡಿತು. 1960ರ ಕೊನೆಗೆ ಮತ್ತು 1970 ಅವಧಿಯಲ್ಲಿ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ದುರಾಡಳಿತ ಗುಜರಾತ್ ರಾಜ್ಯದಲ್ಲಿ ಅತ್ಯಧಿಕವಾಯಿತು. 1971ರಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು, ಮತ್ತು ಕಾಂಗ್ರೇಸ್ ಸರಕಾರ ಬಡತನದಿಂದ ಜನಸಾಮಾನ್ಯರನ್ನು ಮೇಲೆತ್ತುವ ಭರವಸೆ ನೀಡಿತು. ಕಾಂಗ್ರೆಸ್ ಸರಕಾರ ಬಡತನ ಹೊಡೆದೋಡಿಸಿ (ಗರೀಬಿ ಹಠಾವೋ) ಬದಲಾಗಿ ಬಡವರನ್ನು ಹೊಡೆದೋಡಿಸಿ (ಗರೀಬ್ ಹಠಾವೋ) ಎಂದು ತನ್ನ ನಿಲುವು ಬದಲಾಯಿಸಿತು. ಗುಜರಾತಿ ಜನತೆಯ , ಅದರಲ್ಲೂ ಬಡಜನಸಾಮಾನ್ಯರ ಜೀವನ ಆವಶ್ಯಕ ವಸ್ತುಗಳ ಖರೀದಿ ಕೂಡಾ ಸಾಧ್ಯವಾಗದೆ, ಬೆಲೆ ಏರಿಕೆಯಿಂದ ತತ್ತರವಾಯಿತು.

ಹದಕೆಟ್ಟ ಪರಿಸ್ಥಿತಿಗೆ ಮಹತ್ವ ನೀಡಿ ಉತ್ತಮ ಪರಿಹಾರ ಕಂಡುಕೊಳ್ಳುವ ಬದಲಾಗಿ, ಆಂತರಿಕ ಗೊಂದಲ, ಜಗಳದಲ್ಲಿ ರಾಜಕಾರಣ ಮಾಡುತ್ತಾ ಗುಜರಾತನ್ನು ಅವ್ಯವಸ್ಥೆಯ ಅಧೋಗತಿಗೊಯಿದರು. ಘನಶ್ಯಾಮ ಓಝಾ ಅವರ ಸರಕಾರವನ್ನು  ಬದಲಾಯಿಸಿ ಚಿಮನ್ ಭಾಯಿ ಪಟೇಲ್ ಅವರ ಸರಕಾರ ಆಡಳಿತ ಹಿಡಿಯಿತು. ಆದರೂ ಅತ್ಯಂತ ಕಳಪೆ ಆಡಳಿತದಲ್ಲಿ ಸುಧಾರಣೆಯ ಗಾಳಿ ಗುಜರಾತಿನಿಂದ ದೂರ ಸಾಗಿತು.  1973 ಡಿಸೆಂಬರ್ ನಲ್ಲಿ ಅಸಮಾಧಾನ ಮುಗಿಲು ಮುಟ್ಟಿತು., ಮೋರ್ಬಿ ಎಂಜಿನೀಯರಿಂಗ್ ಕಾಲೇಜು ಕೆಲವು ವಿದ್ಯಾರ್ಥಿಗಳು ಅವರ ಆಹಾರದ ಶುಲ್ಕ ಮಿತಿಮೀರಿದ್ದನ್ನು ಪ್ರತಿಭಟಿಸಿದರು. ಅತಿ ಬೇಗನೆ ಅವರ ಪ್ರತಿಭಟನೆಗೆ ರಾಜ್ಯ ವ್ಯಾಪ್ತಿ ಸಾಮೂಹಿಕ ಬೆಂಬಲ ದೊರಕಿತು. ಇದರ ಪರಿಣಾಮವಾಗಿ, ಆಂದೋಲನದ ಹಿಂದೆ ಜನಸಂಘದ ಕೈವಾಡಿದೆಯೆಂದು ಶಿಕ್ಷಣ ಮಂತ್ರಿ  ಆರೋಪಿಸುವ ತನಕ ಹೋಯಿತು. 1973ರಲ್ಲಿ ನರೇಂದ್ರ ಮೋದಿ ಸಾಮಾಜಿಕ ಹೋರಾಟದಲ್ಲಿ ಸಕ್ರಿಯ ಆಸಕ್ತಿ ವಹಿಸಿ, ಭ್ರಷ್ಟಾಚಾರ, ಹಣದುಬ್ಬರ, ಮತ್ತು ಜನಸಾಮಾನ್ಯರನ್ನು ಕಾಡುವ ಇತರ ಸಮಸ್ಯೆಗಳ ವಿರುದ್ದ ಸೆಡೆದು ನಿಂತು   ಕಾರ್ಯಪ್ರವೃತ್ತರಾದರು.

ಅಖಿಲಭಾರತ ವಿದ್ಯಾರ್ಥಿ ಪರಿಷತ್ (.ಬಿ.ವಿ.ಪಿ) ಯುವ ಪ್ರಚಾರಕ ಮತ್ತು ಸಹಪ್ರವರ್ತಕ ರಾಗಿ ನವನಿರ್ಮಾಣ ಆಂದೋಲನ ಸೇರಿ ಅದರಲ್ಲಿ ಪ್ರಮುಖ ಪಾತ್ರ ಪಡೆದರು. ನವನಿರ್ಮಾಣ ಆಂದೋಲನ ಅತ್ಯಂತ ಯಶಸ್ವೀ ಸಾಮೂಹಿಕವಾಗಿ, ಜನಸಾಮಾನ್ಯರ ಇತರ ಎಲ್ಲ ಸಮಸ್ಯೆಗಳತ್ತ ಗಮನಹರಿಸಿ, ಅವರುಗಳ ಧ್ವನಿಯಾಯಿತು. ಭ್ರಷ್ಟಾಚಾರ ವಿರೋಧ ಆಂದೋಲನದ ಲೋಕ ನಾಯಕ ಜಯಪ್ರಕಾಶ್ ನಾರಯಾಣ ಅವರ ಬೆಂಬಲ ದೊರಕಿತು. ಅವರನ್ನು ಅಹಮ್ಮದಾಬಾದ್ ಭೇಟಿ ಸಮಯದಲ್ಲಿ ಅತ್ಯಂತ ಸನಿಹದಿಂದ ಭೇಟಿಯಾಗಿ ಅರಿಯುವ , ಒಡನಾಟ ಬೆಳೆಸುವ ಅವಕಾಶ ಸಿಕ್ಕಿತು. 1975, ಜುನ್ 12ಕ್ಕೆ ಗುಜರಾತ್ ಚುನಾವಣೆ ಫಲಿತಾಂಶ, ಪ್ರಕಟವಾಯಿತು, ಅದೇ ದಿನ ಆಶ್ಚರ್ಯವೆಂಬಂತೆ , ಅಲ್ಲಹಾಬಾದ್ ಹೈಕೋರ್ಟು ಚುನಾವಣಾ ಭ್ರಷ್ಟಾಚಾರದಲ್ಲಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ, ಅವರ ಭವಿಶ್ಯಕ್ಕೆ ಪ್ರಶ್ನಾರ್ಥಕ ಚಿಹ್ನೆ ಹಾಕಿತು.

ವಾರಗಳ ನಂತರ ಬಾಬುಭಾಯಿ ಜಶ್ ಭಾಯಿ ಪಟೇಲ್ ನೇತೃತ್ವದ ಸರಕಾರ ಗುಜರಾತಲ್ಲಿ ಅಸ್ಥಿತ್ವಕ್ಕೆ ಬಂತು. ನವನಿರ್ಮಾಣ ಆಂದೋಲನ ನರೇಂದ್ರ ಮೋದಿ ಅವರಲ್ಲಿದ್ದ ಸಾಮಾಜಿಕ ಚಿಂತನೆಗಳನ್ನು ವಿಸ್ತಾರಗೊಳಿಸಿ ಇನ್ನೂ ಸಧೃಡಗೊಳಿಸಿತು. 1975ರಲ್ಲಿ ಗುಜರಾತಿನ ಲೋಕಸಂಘರ್ಷಸಮಿತಿಗೆ ಕಾರ್ಯದರ್ಶಿಯಾಗಿ ನಿಯುಕ್ತಿಗೊಳ್ಳುವ ಮೂಲಕ ನರೇಂದ್ರ ಮೋದಿಯ ರಾಜಕೀಯ ಪ್ರವೇಶವಾಯಿತು. ಇವುಗಳು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಹಲವು ಅನುಭವಗಳನ್ನು ನೀಡಿದ ತಳಪಾಯವಾಗಿದ್ದವು.

2001ರಿಂದ ಇವರು ವಿದ್ಯಾಭ್ಯಾಸ ಸುಧಾರಣೆಗೆ ಒತ್ತು ನೀಡಿದರು, ಅತ್ಯಾಧುನಿಕ ವಿದ್ಯಾಭ್ಯಾಸ ಗುಜರಾತಿನ ಯುವ ಜನತೆಗೆ ಲಭ್ಯವಾಗಲು ಪ್ರಯತ್ನಿಸಿದರು. ನವನಿರ್ಮಾಣ ಆಂದೋಲನದ ಆಶಾವಾದ ಕ್ಷಣಿಕ ಕಾಲಾವಧಿಗಾಯಿತು. ಜೂನ್ 25, 1975ರ ತುರ್ತುಪರಿಸ್ಥಿತಿ, ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂದಿ ಹೇರಿದ್ದ ದೇಶದ ಆಂತರಿಕ ಜನಸಾಮಾನ್ಯನ ಹಕ್ಕುಗಳ, ಸ್ವಾತಂತ್ರ್ಯದ ನಿಷೇಧ, ನರೇಂದ್ರ ಮೋದಿಯವರ ಜೀವನದಲ್ಲಿ ಪ್ರಮುಖ ತಿರುವನ್ನು ತೋರುವ ದಿಕ್ಸೂಚಿಯಾಯಿತು. ಜೀವಿತದಿ, ಹೊಸ ಪಯಣದ ಹಾದಿ ಇವರದಾಯಿತು.

  • krishangopal sharma Bjp January 06, 2025

    नमो नमो 🙏 जय भाजपा 🙏🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷
  • krishangopal sharma Bjp January 06, 2025

    नमो नमो 🙏 जय भाजपा 🙏🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷
  • krishangopal sharma Bjp January 06, 2025

    नमो नमो 🙏 जय भाजपा 🙏🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌷
  • Rahul Naik December 07, 2024

    🙏🙏
  • Chhedilal Mishra December 01, 2024

    Jai shrikrishna
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • manvendra singh September 27, 2024

    जय हो
  • दिग्विजय सिंह राना September 20, 2024

    हर हर महादेव
  • Pawan Sharma September 19, 2024

    ji
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Global aerospace firms turn to India amid Western supply chain crisis

Media Coverage

Global aerospace firms turn to India amid Western supply chain crisis
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.