Quote2018 ರಲ್ಲಿ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮೆ ಯೋಜನೆ “ಆಯುಷ್ಮಾನ್ ಭಾರತ” ದ ಆರಂಭವಾಯಿತು. ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ತಲುಪಿತು : ಪ್ರಧಾನಿ ಮೋದಿ #MannKiBaat
Quoteನಮ್ಮ ಉತ್ಸವಗಳು 'ವೈವಿಧ್ಯದಲ್ಲಿ ಏಕತೆ' ಯನ್ನು ಮತ್ತು 'ಏಕ ಭಾರತ, ಶ್ರೇಷ್ಠ ಭಾರತ' ವನ್ನು ಪ್ರತಿಬಿಂಬಿಸುತ್ತವೆ : ಪ್ರಧಾನಿ ಮೋದಿ #MannKiBaat
Quoteಕಳೆದ ವರ್ಷ UNESCO ಕುಂಭ ಮೇಳವನ್ನು Intangible cultural ಹೆರಿಟೇಜ್ ಆಫ್ ಹ್ಯುಮಾನಿಟಿ ಯ ಸೂಚ್ಯಂಕದಲ್ಲಿ ಗುರುತಿಸಿದೆ. ಇದರ ಜಾಗತಿಕ ಮಹತ್ವದ ಅಂದಾಜನ್ನು ಇದರಿಂದಲೇ ತಿಳಿಯಬಹುದು : #MannKiBaat ನಲ್ಲಿ ಪ್ರಧಾನಿ ಮೋದಿ
Quoteಕುಂಭ್ ಸ್ವತಃ ಸ್ವಭಾವದಲ್ಲಿದೆ. ಇದು ದೈವಿಕ ಮತ್ತು ಸುಂದರವಾಗಿರುತ್ತದೆ: ಪ್ರಧಾನಿ ಮೋದಿ#MannKiBaat
Quoteಈ ಸಮಯದಲ್ಲಿ, ಪ್ರತಿ ಭಕ್ತರಿಗೆ ಸಂಗಮದ ಪವಿತ್ರ ಸ್ನಾನದ ನಂತರ ಅಕ್ಷಯ್ ವಟ್ ನಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತದೆ: ಪ್ರಧಾನಿ ಮೋದಿ#MannKiBaat
Quoteಪುಜ್ಯಾ ಬಾಪುವಿನ ದಕ್ಷಿಣ ಆಫ್ರಿಕಾದೊಂದಿಗೆ ಸಂಪರ್ಕ ಅನನ್ಯ . ಇದು ದಕ್ಷಿಣ ಆಫ್ರಿಕಾದಲ್ಲಿತ್ತು, ಅಲ್ಲಿ ಮೋಹನ್ 'ಮಹಾತ್ಮ' ಆಗಿದ್ದರು: ಪ್ರಧಾನಿ ಮೋದಿ#MannKiBaat
Quoteಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊದಲ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಮತ್ತು ಒಬ್ಬರ ಚರ್ಮದ ಬಣ್ಣವನ್ನು ಆಧರಿಸಿ ಅವರು ತಾರತಮ್ಯವನ್ನು ವಿರೋಧಿಸಿದರು : ಪ್ರಧಾನಿ#MannKiBaat
Quoteಸರ್ದಾರ್ ಪಟೇಲ್ ಅವರ ಜೀವನವನ್ನು ಭಾರತವನ್ನು ಒಗ್ಗೂಡಿಸುವ ಕಡೆಗೆ ಸಮರ್ಪಿಸಿದರು. ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಮೀಸಲಿಟ್ಟಿದ್ದರು: ಪ್ರಧಾನಿ ಮೋದಿ #MannKiBaat
Quoteಗುರು ಗೋಬಿಂದ್ ಸಿಂಗ್ ಜಿ ಅವರು ಪಾಟ್ನಾದಲ್ಲಿ ಜನಿಸಿದರು, ಅವರ ಕರ್ಮಭೂಮಿ ಉತ್ತರ ಭಾರತವಾಗಿದ್ದು, ಅವರು ಮಹಾರಾಷ್ಟ್ರದ ನಂದೇಡ್ನಲ್ಲಿ ಅವರ ಜೀವನವನ್ನು ತ್ಯಾಗ ಮಾಡಿದರು: #MannKiBaat ನಲ್ಲಿ ಪ್ರಧಾನಿ ಮೋದಿ
Quoteಗುರು ಗೋಬಿಂದ್ ಸಿಂಗ್ ಜಿ ಶಾಂತರು ಆದರೆ ಬಡವರ ಮತ್ತು ದುರ್ಬಲರ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸಿದಾಗ, ಗುರು ಗೋಬಿಂದ್ ಸಿಂಗ್ ಜಿ ತಮ್ಮ ಧ್ವನಿಯನ್ನು ಎತ್ತಿದರು ಮತ್ತು ಬಡವರ ಜೊತೆ ದೃಢವಾಗಿ ನಿಂತರು: #MannKiBaatನಲ್ಲಿ ಪ್ರಧಾನಿ ಮೋದಿ
Quoteದುರ್ಬಲ ವರ್ಗಗಳ ಜನರಿಗೆ ಹೋರಾಡುವ ಮೂಲಕ ಬಲವನ್ನು ಪ್ರದರ್ಶಿಸಲಾಗುವುದಿಲ್ಲ ಎಂದು ಗುರು ಗೋಬಿಂದ್ ಸಿಂಗ್ ಜಿ ಯಾವಾಗಲೂ ಹೇಳಿದ್ದಾರೆ: #MannKiBaatನಲ್ಲಿ ಪ್ರಧಾನಿ ಮೋದಿ

ನನ್ನ ಪ್ರಿಯ ದೇಶ ಬಾಂಧವರೇ, ನಮಸ್ಕಾರ. 2018 ನೇ ವರ್ಷದ ಕೊನೆಯ ಘಟ್ಟದಲ್ಲಿದ್ದೇವೆ. 2019 ಕ್ಕೆ ಪ್ರವೇಶಿಸಲಿದ್ದೇವೆ. ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಗತಿಸಿದ ವರ್ಷದ ವಿಚಾರಗಳ ಚರ್ಚೆಯಾಗುತ್ತದೆ. ಅದೇ ವೇಳೆ ಮುಂಬರುವ ವರ್ಷದ ಸಂಕಲ್ಪಗಳ ಚರ್ಚೆ ಕೂಡಾ ಕೇಳಿ ಬರುತ್ತದೆ. ಅದು ವೈಯಕ್ತಿಕ ಜೀವನವಾಗಿರಲಿ, ಸಾಮಾಜಿಕ ಇಲ್ಲವೆ ರಾಷ್ಟ್ರೀಯ ಜೀವನವಾಗಿರಲಿ, ಎಲ್ಲರಿಗೂ ಹಿಂದಿರುಗಿ ನೋಡಲೇಬೇಕಾಗುತ್ತದೆ ಮತ್ತು ಮುಂದೆ ಎಷ್ಟು ದೂರ ಸಾಧ್ಯವೋ ಅಷ್ಟು ದೂರದೃಷ್ಟಿಯಿಟ್ಟು ನೋಡಲೂ ಬೇಕಾಗುತ್ತದೆ. ನೋಡುವ ಪ್ರಯತ್ನವನ್ನೂ ಮಾಡಬೇಕಾಗುತ್ತದೆ. ಆಗಲೇ ಅನುಭವದ ಲಾಭವಾಗುತ್ತದೆ ಅಲ್ಲದೆ ಹೊಸದನ್ನು ಮಾಡುವ ಆತ್ಮ ವಿಶ್ವಾಸವೂ ಹುಟ್ಟುತ್ತದೆ. ನಮ್ಮ ವೈಯಕ್ತಿಕ ಜೀವನದ ಬದಲಾವಣೆಗಾಗಿ ಜೊತೆ ಜೊತೆಗೆ ದೇಶವನ್ನು ಮತ್ತು ನಮ್ಮ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನಾವು ಹೇಗೆ ಕೈಜೋಡಿಸಬಹುದು ಎಂಬುದನ್ನು ಚಿಂತಿಸಬೇಕು. ನಿಮ್ಮೆಲ್ಲರಿಗೂ 2019 ರ ಶುಭಾಶಯಗಳು. ನೀವೆಲ್ಲರೂ 2018 ನೇ ವರ್ಷವನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ಆಲೋಚಿಸಿರಬಹುದು. ಭಾರತ ಒಂದು ದೇಶವಾಗಿ, ತನ್ನ 130 ಕೋಟಿ ಜನತೆಯ ಸಾಮರ್ಥ್ಯ ರೂಪದಲ್ಲಿ, ಹೇಗೆ ನೆನಪಿನಲ್ಲಿಟ್ಟುಕೊಳ್ಳುತ್ತದೆ? ಇದನ್ನು ನೆನೆಯುವುದು ಕೂಡಾ ಮಹತ್ವಪೂರ್ಣ ಅಂಶವಾಗಿದೆ ಹಾಗೂ ನಾವೆಲ್ಲರೂ ಗೌರವ ಪಡುವ ವಿಷಯವಾಗಿದೆ.

2018 ರಲ್ಲಿ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮೆ ಯೋಜನೆ “ಆಯುಷ್ಮಾನ್ ಭಾರತ” ದ ಆರಂಭವಾಯಿತು. ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ತಲುಪಿತು. ಭಾರತ ದಾಖಲೆ ಪ್ರಮಾಣದಲ್ಲಿ ದೇಶವನ್ನು ಬಡತನ ಮುಕ್ತಗೊಳಿಸುವತ್ತ ದಾಪುಗಾಲಿಟ್ಟಿದೆ ಎಂದು ವಿಶ್ವದ ಪ್ರತಿಷ್ಠಿತ ಸಂಸ್ಥೆಗಳು ಮನ್ನಣೆ ನೀಡಿವೆ. ದೇಶಬಾಂಧವರ ಸಂಕಲ್ಪದಿಂದಾಗಿ ಸ್ವಚ್ಛತಾ ಆಂದೋಲನದ ವ್ಯಾಪ್ತಿ ಶೇಕಡಾ 95 ನ್ನೂ ದಾಟಿ ಮುಂದೆ ಸಾಗಿದೆ.

ಸ್ವಾತಂತ್ರ್ಯಾ ನಂತರ ಕೆಂಪು ಕೋಟೆಯಿಂದ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ 75 ನೇ ವರ್ಷಾಚರಣೆ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ದೇಶವನ್ನು ಏಕತೆಯ ಸೂತ್ರದಲ್ಲಿ ಪೋಣಿಸಿದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ವಿಶ್ವದ ಅತ್ಯಂತ ಎತ್ತರವಾದ ‘ಸ್ಟ್ಯಾಚ್ಯೂ ಆಫ್ ಯುನಿಟಿ’ ಸನ್ಮಾನಪೂರ್ವಕವಾಗಿ ದೇಶಕ್ಕೆ ಸಮರ್ಪಿಸಲಾಯಿತು. ವಿಶ್ವದಲ್ಲಿ ದೇಶದ ಹೆಸರು ಉತ್ತುಂಗಕ್ಕೇರಿತು. ದೇಶಕ್ಕೆ ಸಂಯುಕ್ತ ರಾಷ್ಟ್ರದ ಸರ್ವೊಚ್ಚ ಪರಿಸರ ಸನ್ಮಾನ ‘ಚಾಂಪಿಯನ್ಸ್ ಆಫ್ ದಿ ಅರ್ತ್ ಅವಾರ್ಡ್ಸ್’ ನೀಡಿ ಸನ್ಮಾನಿಸಲಾಯಿತು. ಸೌರ ಶಕ್ತಿ ಮತ್ತು ಹವಾಮಾನ ಬದಲಾವಣೆಯಲ್ಲಿ ಭಾರತದ ಪ್ರಯತ್ನಕ್ಕೆ ವಿಶ್ವದಲ್ಲಿ ಸ್ಥಾನ ದೊರೆಯುವಂತಾಯಿತು. ಭಾರತದಲ್ಲಿ ಅಂತಾರಾಷ್ಟ್ರೀಯ ಸೌರ ಒಪ್ಪಂದದ ಮೊದಲ ಮಹಾಸಭೆ ‘ಇಂಟರ್ನ್ಯಾ ಶನಲ್ ಸೋಲಾರ್ ಅಲೈನ್ಸ್’ ಆಯೋಜಿಸಲಾಯಿತು. ನಮ್ಮ ದೇಶದಲ್ಲಿ ಈಸ್ ಆಫ್ ಡುಯಿಂಗ್ ಬಿಸಿನೆಸ್ ರಾಂಕಿಂಗ್ (ವ್ಯಾಪಾರ ಕೈಗೊಳ್ಳುವಲ್ಲಿ ಸರಳತೆ) ನಲ್ಲಿ ಸಾಕಷ್ಟು ಮಹತ್ವದ ಸುಧಾರಣೆ ಯಾಗಿರುವುದು ಎಲ್ಲರ ಸಾಮೂಹಿಕ ಪ್ರಯತ್ನದಿಂದಲೇ. ದೇಶದ ಸುರಕ್ಷಾ ವ್ಯವಸ್ಥೆ ಗೆ ಇನ್ನಷ್ಟು ಪುಷ್ಟಿ ದೊರೆತಿದೆ. ಇದೇ ವರ್ಷ ನಮ್ಮ ದೇಶ ಸಫಲವಾಗಿ ನ್ಯುಕ್ಲಿಯರ್ ಟ್ರಯಾಡ್ ಪೂರ್ತಿಗೊಳಿಸಿದೆ. ಅಂದರೆ ಈಗ ನಾವು ನೆಲ, ಜಲ, ಆಕಾಶ ಮೂರರಲ್ಲೂ ಪರಮಾಣು ಶಕ್ತಿ ಸಂಪನ್ನರಾಗಿದ್ದೇವೆ. ದೇಶದ ಹೆಣ್ಣು ಮಕ್ಕಳು ನಾವಿಕಾ ಸಾಗರ ಪರಿಕ್ರಮಾ ಮೂಲಕ ಸಂಪೂರ್ಣ ವಿಶ್ವದ ಪರ್ಯಟನೆ ಮಾಡಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ.

ವಾರಣಾಸಿಯಲ್ಲಿ ಭಾರತದ ಮೊದಲ ಜಲಮಾರ್ಗವನ್ನು ಆರಂಭಿಸಲಾಯಿತು. ಇದರಿಂದ ವಾಟರ್ ವೇಸ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದಂತಾಯಿತು. ದೇಶದ ಅತ್ಯಂತ ದೊಡ್ಡ ರೇಲ್ ರೋಡ್ ಸೇತುವೆ ಬೋಗಿಬೀಲ್ ಬ್ರಿಜ್ ನ್ನು ಲೋಕಾರ್ಪಣೆ ಮಾಡಲಾಯಿತು. ಸಿಕ್ಕಿಂನ ಮೊದಲ ಮತ್ತು ದೇಶದ 100 ನೇ ಏರ್ಪೋ ರ್ಟ್ ಪಾಕ್ಯೋಂಗ್ ಆರಂಭಿಸಲಾಯಿತು.

19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಮತ್ತು ವಿಶ್ವಕಪ್ ಬ್ಲೈಂಡ್ ಕ್ರಿಕೆಟ್ ನಲ್ಲಿ ಭಾರತ ಜಯ ಸಾಧಿಸಿತು. ಈ ಬಾರಿ ಏಷ್ಯನ್ ಗೇಮ್ಸ್ ಗಳಲ್ಲಿ ಭಾರತ ಬಹು ದೊಡ್ಡ ಸಂಖ್ಯೆಯಲ್ಲಿ ಪದಕಗಳನ್ನು ಗಳಿಸಿದೆ. ಪ್ಯಾರಾ ಏಷ್ಯನ್ ಗೇಮ್ಸ್ ಗಳಲ್ಲಿ ಕೂಡಾ ಭಾರತ ಉತ್ತಮ ಪ್ರದರ್ಶನ ನೀಡಿದೆ. ಅಂದ ಹಾಗೆ ನಾನು ಭಾರತೀಯರ ಸಾಧನೆಯ, ನಮ್ಮ ಸಾಮೂಹಿಕ ಪ್ರಯತ್ನಗಳ ಸಂಗತಿಗಳನ್ನು ಹೇಳುತ್ತಾ ಹೋದರೆ ನಮ್ಮ ಮನದ ಮಾತು ಸುದೀರ್ಘ ಸಮಯದವರೆಗೂ ಮುಂದುವರೆಯುತ್ತದೆ ಎಂದರೆ ಬಹುಶಃ 2019 ಬಂದೇ ಬಿಡುತ್ತದೆ. ಇದೆಲ್ಲವೂ 130 ಕೋಟಿ ದೇಶ ಬಾಂಧವರ ನಿರಂತರ ಪ್ರಯತ್ನದಿಂದಲೇ ಸಾಧ್ಯವಾಗಿದೆ. 2019 ರಲ್ಲೂ ಭಾರತದ ಪ್ರಗತಿ ಮತ್ತು ಉನ್ನತಿಯ ಈ ಯಾತ್ರೆ ಹೀಗೆ ಮುಂದುವರಿಯಲಿದೆ ಮತ್ತು ನಮ್ಮ ದೇಶ ಸದೃಢವಾಗಿ ಮತ್ತಷ್ಟು ಉತ್ತುಂಗಕ್ಕೇರಲಿದೆ ಎಂಬ ಭರವಸೆ ನನಗಿದೆ.

ಪ್ರಿಯ ದೇಶಬಾಂಧವರೆ, ಈ ಡಿಸೆಂಬರ್ ನಲ್ಲಿ ಕೆಲವರು ಗಣ್ಯರನ್ನು ಕಳೆದುಕೊಂಡಿದ್ದೇವೆ. ಡಿಸೆಂಬರ್ 19 ರಂದು ಚೆನ್ನೈ ನ ಡಾಕ್ಟರ್ ಜಯಾಚಂದ್ರನ್ ಅವರನ್ನು ಕಳೆದುಕೊಂಡೆವು. ಡಾಕ್ಟರ್ ಜಯಾಚಂದ್ರನ್ ಅವರನ್ನು ಜನರು “ಮಕ್ಕಳ್ ಮಾರುಥುವರ್” ಎಂದು ಕರೆಯುತ್ತಿದ್ದರು. ಏಕೆಂದರೆ ಅವರು ಜನರ ಮನದಲ್ಲಿ ನೆಲೆ ನಿಂತಿದ್ದರು. ಡಾಕ್ಟರ್ ಜಯಚಂದ್ರ ಅವರು ಬಡ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧೋಪಚಾರ ದೊರೆಯುವಂತೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದರು. ಅವರು ಜನರ ಶುಶ್ರೂಷೆಗೆ ಎಂದಿಗೂ ಸಿದ್ಧರಾಗಿರುತ್ತಿದ್ದರು ಎಂದು ಜನರು ಹೇಳುತ್ತಾರೆ. ತಮ್ಮ ಬಳಿ ತಪಾಸಣೆಗೆ ಬರುವ ವೃದ್ಧರಿಗೆ ಅವರು ಹೋಗಿ ಬರುವ ಖರ್ಚು ಕೂಡಾ ನೀಡುತ್ತಿದ್ದರಂತೆ. ನಾನು ದಿ ಬೆಟರ್ ಇಂಡಿಯಾ ಡಾಟ್ ಕಾಮ್ ವೆಬ್ ಸೈಟ್ ನಲ್ಲಿ ಸಮಾಜಕ್ಕೆ ಪ್ರೇರಣೆ ನೀಡುವಂತಹ ಅನೇಕ ಇಂಥ ಕೆಲಸಗಳ ಬಗ್ಗೆ ಓದಿದ್ದೇನೆ. ಹೀಗೆಯೇ ಡಿಸೆಂಬರ್ 25 ರಂದು ಸೂಲಗಿತ್ತಿ ನರಸಮ್ಮ ನಿಧನರಾದ ಸುದ್ದಿ ತಿಳಿಯಿತು. ಸೂಲಗಿತ್ತಿ ನರಸಮ್ಮ ಗರ್ಭವತಿ ಮಾತೆಯರಿಗೆ – ಅಕ್ಕ ತಂಗಿಯರಿಗೆ ಪ್ರಸವ ಸಮಯದಲ್ಲಿ ಸಹಾಯ ಮಾಡುತ್ತಿದ್ದಳು. ಅವಳು ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ದುರ್ಗಮ ಮಾರ್ಗದ ಗ್ರಾಮಗಳಲ್ಲಿ ಸಾವಿರಾರು ಮಾತೆಯರಿಗೆ – ಅಕ್ಕ ತಂಗಿಯರಿಗೆ ತನ್ನ ಸೇವೆಯನ್ನು ಒದಗಿಸಿದ್ದಾರೆ. ಈ ವರ್ಷಾರಂಭದಲ್ಲಿ ಅವರನ್ನು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಡಾಕ್ಟರ್ ಜಯಾಚಂದ್ರನ್ ಮತ್ತು ಸೂಲಗಿತ್ತಿ ನರಸಮ್ಮ ಅವರಂತಹ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಹಳಷ್ಟು ಪ್ರೇರಣೆಯನ್ನು ನೀಡುವ ವ್ಯಕ್ತಿತ್ವಗಳಿವೆ. ನಾವು ಆರೋಗ್ಯ ರಕ್ಷಣೆ ಕುರಿತು ಮಾತನಾಡುತಿರುವಾಗ ಉತ್ತರ ಪ್ರದೇಶದ ಬಿಜನೌರ್ ನಲ್ಲಿ ವೈದ್ಯರ ಸಾಮಾಜಿಕ ಪ್ರಯತ್ನದ ಕುರಿತು ಹೇಳ ಬಯಸುತ್ತೇನೆ. ನಗರದ ಕೆಲ ಯುವ ವೈದ್ಯರು ಕ್ಯಾಂಪ್ ಗಳ ಮೂಲಕ ಬಡವರ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ನಮ್ಮ ಪಕ್ಷದ ಕೆಲ ಕಾರ್ಯಕರ್ತರು ನನಗೆ ತಿಳಿಸಿದರು. ಇಲ್ಲಿಯ ‘ಹಾರ್ಟ್ ಲಂಗ್ಸ್ ಕ್ರಿಟಿಕಲ್ ಸೆಂಟರ್’ ವತಿಯಿಂದ ಪ್ರತಿ ತಿಂಗಳು ಇಂಥ ಮೆಡಿಕಲ್ ಕ್ಯಾಂಪ್ ನಡೆಸಲಾಗುತ್ತದೆ. ಇಲ್ಲಿ ಹಲವಾರು ರೋಗಗಳಿಗೆ ಸಂಪೂರ್ಣ ಉಚಿತವಾಗಿ ತಪಾಸಣೆ ಮತ್ತು ಉಪಚಾರ ಕೂಡಾ ಮಾಡಲಾಗುತ್ತದೆ. ಇಂದು ಪ್ರತಿ ತಿಂಗಳೂ ಸಾವಿರಾರು ಬಡವರು ಈ ಕ್ಯಾಂಪ್ ಗಳ ಭವನ್ನು ಪಡೆಯುತ್ತಿದ್ದಾರೆ. ನಿಸ್ವಾರ್ಥ ಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಈ ವೈದ್ಯ ಮಿತ್ರರ ಉತ್ಸಾಹ ನಿಜಕ್ಕೂ ಶ್ಲಾಘನೀಯ. ಸಾಮೂಹಿಕ ಪ್ರಯತ್ನದಿಂದಲೇ ಸ್ವಚ್ಛ ಭಾರತ ಅಭಿಯಾನ ಒಂದು ಸಫಲ ಅಭಿಯಾನವಾಯಿತು ಎಂಬ ವಿಷಯವನ್ನು ಇಂದು ನಾನು ಬಹಳ ಹೆಮ್ಮೆಯಿಂದ ಹೇಳುತ್ತಿದ್ದೇನೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಜಬ್ಬಲ್ಪುಾರದಲ್ಲಿ ಒಂದೇ ಬಾರಿಗೆ 3 ಲಕ್ಷಕ್ಕಿಂತ ಹೆಚ್ಚು ಜನರು ಸ್ವಚ್ಛತೆಯ ಅಭಿಯಾನದಲ್ಲಿ ಪಾಲ್ಗೊಂಡರು ಎಂಬುದನ್ನು ಕೆಲ ಜನರು ನನಗೆ ತಿಳಿಸಿದರು. ಸ್ವಚ್ಛತೆಯ ಈ ಮಹಾ ಯಜ್ಞದಲ್ಲಿ ನಗರ ನಿಗಮ, ಸ್ವಯಂ ಸೇವಾ ಸಂಸ್ಥೆಗಳು, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಜಬ್ಬಲ್ಪು ರದ ಜನತೆ, ಎಲ್ಲರೂ ನಾ ಮುಂದು ತಾ ಮುಂದು ಎನ್ನುವಂತೆ ಭಾಗವಹಿಸಿದರು. ನಾನು ಇದೀಗ ದಿ ಬೆಟರ್ ಇಂಡಿಯಾ ಡಾಟ್ ಕಾಮ್ ಕುರಿತು ಉಲ್ಲೇಖಿಸಿದ್ದೆ.ಅಲ್ಲಿ ನನಗೆ ಡಾ. ಜಯಚಂದ್ರನ್ ಅವರ ಬಗ್ಗೆ ತಿಳಿಯಿತು ಮತ್ತು ನನಗೆ ಸಮಯ ಸಿಕ್ಕಾಗಲೆಲ್ಲ ನಾನು ಖಂಡಿತ ದಿ ಬೆಟರ್ ಇಂಡಿಯಾ ಡಾಟ್ ಕಾಮ್ ಗೆ ಹೋಗಿ ಇಂಥ ಪ್ರೇರಣಾತ್ಮಕ ವಿಷಯಗಳ ಬಗ್ಗೆ ತಿಳಿಯಲು ಪ್ರಯತ್ನಿಸುತ್ತೇನೆ. ಇಂದು ಇಂಥ ಅಪರೂಪದ ಜನರ ಜೀವನದ ಮೂಲಕ ಪ್ರೇರೇಪಿಸಬಲ್ಲ ಬಹಳಷ್ಟು ಕಥೆಗಳನ್ನು ಪರಿಚಯಿಸುವಂತಹ ಅನೇಕ ವೆಬ್ ಸೈಟ್ ಪುಟಗಳಿವೆ ಎಂಬುದು ನನಗೆ ಸಂತಸವೆನಿಸುತ್ತದೆ. ಪಾಸಿಟಿವ್ ಇಂಡಿಯಾ ಡಾಟ್ ಕಾಮ್ ಸಮಾಜದಲ್ಲಿ ಸಕಾರಾತ್ಮಕ ಭಾವನೆಯನ್ನು ಪಸರಿಸುವ ಮತ್ತು ಸಮಾಜವನ್ನು ಸಂವೇದನಶೀಲಗೊಳಿಸುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿ, ಯುವರ್ ಸ್ಟೋರಿ ಡಾಟ್ ಕಾಮ್ ನಲ್ಲಿ ಹೊಸ ಆವಿಷ್ಕಾರಿಗಳು ಮತ್ತು ಉದ್ಯಮಿಗಳ ಸಫಲತೆಯ ಕಥೆಗಳ ಕುರಿತು ಬಹಳ ಚೆನ್ನಾಗಿ ಹೇಳಲಾಗುತ್ತದೆ. ಹಾಗೇ ಸಂಸ್ಕೃತ ಭಾರತಿ ಡಾಟ್ ಇನ್ ಎಂಬ ಮಾಧ್ಯಮದ ಮೂಲಕ ಅತ್ಯಂತ ಸರಳವಾಗಿ ಮನೆಯಲ್ಲಿ ಕುಳಿತುಕೊಂಡೇ ಸಂಸ್ಕೃತ ಭಾಷೆಯನ್ನು ಕಲಿಯಬಹುದು. ನಾವು ಒಂದು ಕೆಲಸ ಮಾಡಬಹುದೇ – ಇಂತಹ ವೆಬ್ ಸೈಟ್ ಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳೋಣ. ಸಕಾರಾತ್ಮಕತೆಯನ್ನು ಒಂದಾಗಿ ಪಸರಿಸೋಣ. ಈ ಮೂಲಕ ಹೆಚ್ಚೆಚ್ಚು ಜನರು ಸಮಾಜದಲ್ಲಿ ಪರಿವರ್ತನೆಯನ್ನು ತರುವ ನಮ್ಮ ನಾಯಕರ ಕುರಿತು ತಿಳಿಯುವರು. ನಕಾರಾತ್ಮಕತೆ ಹಬ್ಬಿಸುವುದು ಬಹಳ ಸುಲಭ. ಆದರೆ ನಮ್ಮ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಬಹಳಷ್ಟು ಒಳ್ಳೇ ಕೆಲಸಗಳು ನಡೆಯುತ್ತಿವೆ ಮತ್ತು ಇವೆಲ್ಲವೂ 130 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದಲೇ ಆಗುತ್ತಿದೆ. ಎಲ್ಲ ಸಮಾಜಗಳಲ್ಲೂ ಕ್ರೀಡೆಗೆ ತನ್ನದೇ ಆದ ಮಹತ್ವವಿರುತ್ತದೆ. ಕ್ರೀಡೆಯಲ್ಲಿ ತೊಡಗಿದಾಗ ನೋಡುಗರ ಮನಸ್ಸು ಕೂಡಾ ಪ್ರಜ್ವಲಿತಗೊಳ್ಳುತ್ತದೆ. ಕ್ರೀಡಾಳುಗಳ ಹೆಸರು, ಸನ್ಮಾನ, ಪರಿಚಯ, ಮುಂತಾದವುಗಳನ್ನು ನಾವೂ ಅನುಭವಿಸುತ್ತೇವೆ. ಆದರೆ ಕೆಲವೊಮ್ಮೆ ಇವೆಲ್ಲವುಗಳ ಹೊರತಾಗಿ ಇನ್ನೂ ಎಷ್ಟೋ ವಿಷಯಗಳು ಕ್ರೀಡಾ ಜಗತ್ತಿಗೂ ಮಿಗಿಲಾದದ್ದು ಮತ್ತು ದೊಡ್ಡದಾದದ್ದಾಗಿರುತ್ತವೆ. ಕರಾಟೆ ಚ್ಯಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದ ಕಾಶ್ಮೀರದ ಓರ್ವ ಮಗಳ ಬಗ್ಗೆ ನಾನು ಹೇಳಬಯಸುತ್ತೇನೆ. ಹನಾಯ ನಿಸಾರ್ 12 ವರ್ಷದ ಬಾಲಕಿ. ಕಾಶ್ಮೀರದ ಅನಂತ್ ನಾಗ್ ನ ನಿವಾಸಿ. ಹನಾಯ ಬಹಳ ಶ್ರಮವಹಿಸಿ, ಏಕಾಗ್ರತೆಯಿಂದ ಕರಾಟೆ ಅಭ್ಯಾಸ ಮಾಡಿ, ಅದರ ಸೂಕ್ಷ್ಮತೆಗಳನ್ನು ಅರಿತು ತನ್ನನ್ನು ತಾನು ಸಾಬೀತು ಮಾಡಿ ತೋರಿಸಿದ್ದಾಳೆ. ಎಲ್ಲ ಭಾರತೀಯರ ಪರವಾಗಿ ಮಗಳ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಹನಾಯಳಿಗೆ ಶುಭಾಷಯಗಳು ಮತ್ತು ಆಶೀರ್ವಾದಗಳು.

ಹಾಗೆಯೇ 16 ರ ವಯೋಮಾನದ ಯುವತಿ ರಜನಿ ಬಗ್ಗೆ ಮಾಧ್ಯಮಗಳಲ್ಲಿ ಬಹಳ ಚರ್ಚೆಯಾಗಿದೆ. ನೀವು ಖಂಡಿತ ಓದಿರಬಹುದು. ರಜನಿ ಜ್ಯುನಿಯರ್ ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ರಜನಿ ಪದಕ ಗೆಲ್ಲುತ್ತಿದ್ದಂತೆಯೇ ಹತ್ತಿರದ ಒಂದು ಮಳಿಗೆಗೆ ಹೋಗಿ ಒಂದು ಗ್ಲಾಸ್ ಹಾಲನ್ನು ಕುಡಿದಳು. ನಂತರ ತನ್ನ ಪದಕವನ್ನು ಒಂದು ಬಟ್ಟೆಯಲ್ಲಿ ಸುತ್ತಿ ಬ್ಯಾಗ್ ನಲ್ಲಿ ಇಟ್ಟಳು. ಈಗ ನೀವು ರಜನಿ ಒಂದು ಗ್ಲಾಸ್ ಹಾಲು ಏಕೆ ಕುಡಿದಳು ಎಂದು ಯೋಚಿಸುತ್ತಿರಬಹುದು? ಪಾನಿಪತ್ ನ ಒಂದು ಸ್ಟಾಲ್ ನಲ್ಲಿ ಲಸ್ಸಿ ಮಾರುತ್ತಿರುವ ತನ್ನ ತಂದೆ ಜಸ್ಮೇರ್ ಸಿಂಗ್ ಅವರಿಗೆ ಗೌರವ ಸೂಚಿಸಲು ಅವಳು ಹೀಗೆ ಮಾಡಿದಳು. ತಾನು ಈ ಹಂತ ತಲುಪಲು ತನ್ನ ತಂದೆ ಬಹಳ ತ್ಯಾಗ ಮಾಡಿದ್ದಾರೆಂದು ಮತ್ತು ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆಂದು ಅವಳು ಹೇಳಿದಳು. ಜಸ್ಮೇರ್ ಸಿಂಗ್ ಅವರು ಪ್ರತಿದಿನ ಬೆಳಿಗ್ಗೆ ರಜನಿ ಮತ್ತು ಅವಳ ಸೋದರ ಸೋದರಿಯರು ಏಳುವ ಮೊದಲೇ ಕೆಲಸಕ್ಕೆ ಹೋಗುತ್ತಾರೆ. ರಜನಿ ತನ್ನ ತಂದೆ ಬಳಿ ಬಾಕ್ಸಿಂಗ್ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ತಂದೆ ಅದಕ್ಕೆ ಬೇಕಾದ ಎಲ್ಲ ಅವಶ್ಯಕ ಸಾಧನಗಳನ್ನು ಒಗ್ಗೂಡಿಸಿ ಅವಳನ್ನು ಪ್ರೋತ್ಸಾಹಿಸಿದರು. ರಜನಿಗೆ ಬಾಕ್ಸಿಂಗ್ ಅಭ್ಯಾಸವನ್ನು ಹಳೆಯ ಗ್ಲೌಸ್ಗ್ಳನ್ನು ಬಳಸಿಯೇ ಆರಂಭಿಸಬೇಕಾಯಿತು. ಏಕೆಂದರೆ ಆ ದಿನಗಳಲ್ಲಿ ಅವರ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ರಜನಿ ಧೈರ್ಯಗೆಡಲಿಲ್ಲ ಬಾಕ್ಸಿಂಗ್ ಕಲಿಕೆ ಮುಂದುವರಿಸಿದಳು. ಅವಳು ಸರ್ಬಿಯಾದಲ್ಲೂ ಒಂದು ಪದಕ ಗಳಿಸಿದ್ದಾಳೆ. ರಜನಿಗೆ ನಾನು ಶುಭಾಷಯ ಮತ್ತು ಆಶೀರ್ವಾದ ತಿಳಿಸುತ್ತೇನೆ. ರಜನಿಗೆ ಪ್ರೋತ್ಸಾಹಿಸಿದ ಮತ್ತು ಅವಳ ಉತ್ಸಾಹ ಹೆಚ್ಚಿಸಿದ ತಂದೆ ತಾಯಿ ಜಸ್ಮೇರ್ ಸಿಂಗ್ ಮತ್ತು ಉಷಾರಾಣಿ ಅವರನ್ನು ಅಭಿನಂದಿಸುತ್ತೇನೆ. ಇದೇ ತಿಂಗಳು ಪುಣೆಯ ಓರ್ವ 20ರ ವಯಸ್ಸಿನ ಯುವತಿ ವೇದಾಂಗಿ ಕುಲ್ಕರ್ಣಿ ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡಿದ ಎಲ್ಲರಿಗಿಂತ ವೇಗದ ಏಷಿಯನ್ ಆಗಿ ಹೊರಹೊಮ್ಮಿದ್ದಾಳೆ. ಅವಳು 159 ದಿನಗಳವರೆಗೆ ಪ್ರತಿನಿತ್ಯ 300 ಕಿಲೋಮೀಟರ್ ಸೈಕಲ್ ತುಳಿಯುತ್ತಿದ್ದಳು. 300 ಕಿಲೋಮೀಟರ್ ಸೈಕಲ್ ತುಳಿಯುವ ಕುರಿತು ನೀವು ಕಲ್ಪನೆ ಮಾಡಿಕೊಳ್ಳಬಹುದೇ! ಸೈಕಲ್ ತುಳಿಯುವ ಕುರಿತಾದ ಅವಳ ಹುಮ್ಮಸ್ಸು ನಿಜಕ್ಕೂ ಶ್ಲಾಘನೀಯವಾಗಿದೆ. ಇಂಥ ಸಾಧನೆಯ ಬಗ್ಗೆ ಕೇಳಿದಾಗ ನಮಗೆ ಪ್ರೇರಣೆ ದೊರೆಯುವುದಿಲ್ಲವೇ? ಅದರಲ್ಲೂ ವಿಶೇಷವಾಗಿ ನನ್ನ ಯುವ ಮಿತ್ರರು, ಇಂಥ ಘಟನೆಗಳ ಬಗ್ಗೆ ಕೇಳಿದಾಗ ತಾವೂ ಕಠಿಣ ಪರಿಸ್ಥಿತಿಗಳನ್ನು ಮೆಟ್ಟಿ ಏನಾದರೂ ಸಾಧಿಸಬೇಕೆಂಬ ಪ್ರೇರಣೆಯನ್ನು ಪಡೆಯುತ್ತಾರೆ. ಸಂಕಲ್ಪ , ದೃಢ ಸಂಕಲ್ಪವಿದ್ದರೆ, ಅಡೆತಡೆಗಳು ತಾವಾಗೇ ದೂರವಾಗುತ್ತವೆ. ಸಂಕಷ್ಟಗಳು ಎಂದೂ ಅಡೆತಡೆಗಳಾಗುವುದಿಲ್ಲ. ಇಂಥ ಅನೇಕ ಉದಾಹರಣೆಗಳನ್ನು ಕೇಳುತ್ತಿದ್ದರೆ, ನಮ್ಮ ಜೀವನದಲ್ಲೂ ಪ್ರತಿಕ್ಷಣ ಹೊಸ ಪ್ರೇರಣೆ ಮೂಡುತ್ತದೆ.

ನನ್ನ ಪ್ರಿಯ ದೇಶಬಾಂಧವರೇ, ಜನವರಿಯಲ್ಲಿ ಉತ್ಸಾಹ ಮತ್ತು ಉಲ್ಲಾಸದಿಂದ ತುಂಬಿದ ಬಹಳಷ್ಟು ಹಬ್ಬಗಳು ಬರಲಿವೆ. ಉದಾಹರಣೆಗೆ ಲೊಹ್ರಿ, ಪೊಂಗಲ್, ಮಕರ ಸಂಕ್ರಾಂತಿ, ಉತ್ತರಾಯಣ, ಮಾಘ ಬಿಹು, ಮಾಘೀ ; ಈ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಂಪೂರ್ಣ ಭಾರತದಲ್ಲಿ ವಿಭಿನ್ನ ಪಾರಂಪರಿಕ ನೃತ್ಯಗಳ ರಂಗು ಕಾಣಸಿಗುತ್ತದೆ, ಇನ್ನೊಂದೆಡೆ ಫಸಲು ಕೈಗೆ ಬಂದ ಸಂತಸಕ್ಕೆ ಲೊಹ್ಡಿ ಬೆಳಗಿಸುತ್ತಾರೆ. ಇನ್ನೊಂದೆಡೆ ಆಕಾಶದಲ್ಲಿ ರಂಗುರಂಗಿನ ಗಾಳಿಪಟಗಳು ಹಾರುತ್ತಿರುವುದು ಕಾಣುತ್ತದೆ. ಎಷ್ಟೋ ಜಾತ್ರೆಗಳು ಮೈದಳೆಯುತ್ತವೆ. ಇನ್ನೊಂದೆಡೆ ಕ್ರೀಡೆಯ ಧೂಳು ಎದ್ದೇಳುತ್ತದೆ. ಮತ್ತೊಂದೆಡೆ ಪರಸ್ಪರ ಎಳ್ಳು ಬೆಲ್ಲ ಹಂಚಿಕೊಳ್ಳುತ್ತಾರೆ. ಜನರು ಒಬ್ಬರಿಗೊಬ್ಬರು ಎಳ್ಳು ಬೆಲ್ಲ ತೆಗೆದುಕೊಳ್ಳಿ ಮತ್ತು ಒಳ್ಳೊಳ್ಳೆ ಮಾತಾಡಿ ಎಂದು ಹಾರೈಸುತ್ತಾರೆ. ಈ ಎಲ್ಲ ಹಬ್ಬಗಳ ಹೆಸರುಗಳು ಬೇರೆ ಬೇರೆಯಾಗಿರಬಹುದು ಆದರೆ ಅವುಗಳೆಲ್ಲವನ್ನು ಆಚರಿಸುವವರ ಭಾವನೆಗಳು ಒಂದೇ ಆಗಿವೆ. ಈ ಉತ್ಸವಗಳು ಒಂದಲ್ಲಾ ಒಂದು ರೀತಿ ಫಸಲಿಗೆ ಮತ್ತು ಒಕ್ಕಲುತನಕ್ಕೆ ಸಂಬಂಧಿಸಿದ್ದಾಗಿದೆ. ರೈತರಿಗೆ ಸಂಬಂಧಿಸಿದ್ದು ಮತ್ತು ಗ್ರಾಮಗಳಿಗೆ ಸಂಬಂಧಿಸಿದ್ದಾಗಿದೆ. ಗದ್ದೆ ಹೊಲಗಳಿಗೆ ಸಂಬಂಧಿಸಿದ್ದಾಗಿವೆ. ಇದೇ ಸಂದರ್ಭದಲ್ಲಿ ಸೂರ್ಯ ಉತ್ತರಾಭಿಮುಖವಾಗಿ ಮಕರ ರಾಶಿ ಪ್ರವೇಶಿಸುತ್ತಾನೆ. ಇದರ ನಂತರದಿಂದ ದಿನಗಳು ನಿಧಾನವಾಗಿ ದೀರ್ಘವಾಗುತ್ತವೆ ಮತ್ತು ಚಳಿಗಾಲದ ಬೆಳೆಯ ಕಟಾವು ಮಾಡಲಾಗುತ್ತದೆ. ನಮ್ಮ ಅನ್ನದಾತ ಕೃಷಿಕ ಸೋದರ ಸೋದರಿಯರಿಗೆ ಅನಂತ ಅನಂತ ಶುಭಾಷಯಗಳು. ವಿವಿಧತೆಯಲ್ಲಿ ಏಕತೆ, ಒಂದು ಭಾರತ ಶ್ರೇಷ್ಠ ಭಾರತ ಎಂಬ ಭಾವನೆಯ ಸುಗಂಧವನ್ನು ನಮ್ಮ ಹಬ್ಬಗಳು ತಮ್ಮಲ್ಲಿ ಹುದುಗಿಸಿಕೊಂಡಿವೆ. ನಮ್ಮ ಹಬ್ಬ ಹರಿದಿನಗಳು ಪ್ರಕೃತಿಯೊಂದಿಗೆ ಹೇಗೆ ಅತ್ಯಂತ ಹತ್ತಿರದ ಸಂಬಂಧ ಹೊಂದಿವೆ ಎಂಬುದನ್ನು ನಾವು ಕಾಣಬಹುದು. ಭಾರತೀಯ ಸಂಸ್ಕೃತಿಯಲ್ಲಿ ಸಮಾಜ ಮತ್ತು ಪ್ರಕೃತಿಯನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ಇಲ್ಲಿ ವ್ಯಕ್ತಿ ಮತ್ತು ಸಮಷ್ಟಿ ಒಂದೇ ಆಗಿದೆ. ಪ್ರಕೃತಿಯೊಂದಿಗೆ ನಮ್ಮ ನಿಕಟ ಸಂಬಂಧಕ್ಕೆ ಒಂದು ಉತ್ತಮ ಉದಾಹರಣೆ ಹಬ್ಬಗಳನ್ನಾಧರಿಸಿದ ಕ್ಯಾಲೆಂಡರ್. ಇದರಲ್ಲಿ ವರ್ಷಪೂರ್ತಿ ಆಚರಿಸುವ ಹಬ್ಬ ಹರಿದಿನಗಳ ಜೊತೆಗೆ ಗ್ರಹ ನಕ್ಷತ್ರಗಳ ಲೆಕ್ಕಾಚಾರವನ್ನೂ ನೀಡಲಾಗಿರುತ್ತದೆ. ಈ ಪಾರಂಪರಿಕ ಕ್ಯಾಲೆಂಡರ್ ನಿಂದ ಪ್ರಾಕೃತಿಕ ಮತ್ತು ಖಗೋಳ ಶಾಸ್ತ್ರದ ಪ್ರಕಾರ ನಡೆಯುವ ಘಟನೆಗಳ ಜೊತೆ ನಮ್ಮ ಸಂಬಂಧ ಎಷ್ಟು ಪುರಾತನವಾದದ್ದು ಎಂಬುದು ತಿಳಿಯುತ್ತದೆ. ಚಂದ್ರ ಮತ್ತು ಸೂರ್ಯನ ಚಲನೆಯ ಆಧಾರದ ಮೇಲೆ ಚಾಂದ್ರಮಾನ ಮತ್ತು ಸೌರಮಾನ ಕ್ಯಾಲೆಂಡರ್ ಪ್ರಕಾರ ಹಬ್ಬ ಹರಿದಿನಗಳ ತಿಥಿ ನಿರ್ಧಾರವಾಗುತ್ತದೆ. ಯಾರು ಯಾವ ಕ್ಯಾಲೆಂಡರ್ ಅನುಸರಿಸುತ್ತಾರೆ ಎಂಬುದರ ಮೇಲೆ ಇದು ನಿರ್ಧರಿಸಿರುತ್ತದೆ. ಎಷ್ಟೋ ಪ್ರದೇಶಗಳಲ್ಲಿ ಗ್ರಹ ನಕ್ಷತ್ರಗಳ ಸ್ಥಿತಿಯನ್ನಾಧರಿಸಿ ಹಬ್ಬಗಳ ಆಚರಣೆ ಕೈಗೊಳ್ಳಲಾಗುತ್ತದೆ. ಗುಡಿ ಪಾಡ್ವಾ, ಚೇಟಿಚಂಡ್, ಉಗಾದಿ ಇವೆಲ್ಲವೂ ಚಾಂದ್ರಮಾನ ಕ್ಯಾಲೆಂಡರ್ ಅನುಸಾರ ಆಚರಿಸುವ ಹಬ್ಬಗಳು. ಅದೇ ರೀತಿ ತಮಿಳಿನ ಪುಥಾಂಡು, ವಿಶು, ವೈಶಾಖ, ಬೈಸಾಖಿ, ಪೊಯಿಲಾ ಬೈಸಾಖ್, ಬಿಹು ಈ ಎಲ್ಲ ಹಬ್ಬಗಳನ್ನು ಸೌರಮಾನ ಕ್ಯಾಲೆಂಡರ್ ಆಧರಿಸಿ ಆಚರಿಸಲಾಗುತ್ತದೆ. ನಮ್ಮ ಹಲವಾರು ಹಬ್ಬಗಳಲ್ಲಿ ನದಿಗಳು ಮತ್ತು ಜಲ ಸಂಪತ್ತನ್ನು ರಕ್ಷಿಸುವ ವಿಶಿಷ್ಟ ಭಾವ ಮಿಳಿತವಾಗಿದೆ. ಛಟ್ ಪರ್ವ, ನದಿಗಳು, ಕೆರೆ ತೊರೆಗಳಲ್ಲಿ ಸೂರ್ಯ ಉಪಾಸನೆಯ ವಿಶಿಷ್ಟ ಆಚರಣೆ ಹೊಂದಿವೆ. ಮಕರ ಸಂಕ್ರಾಂತಿಯಂದು ಲಕ್ಷಾಂತರ, ಕೋಟ್ಯಾಂತರ ಜನರು ನದಿಗಳಲ್ಲಿ ಮಿಂದೇಳುತ್ತಾರೆ. ನಮ್ಮ ಹಬ್ಬ ಹರಿದಿನಗಳು ನಮಗೆ ಸಾಮಾಜಿಕ ಮೌಲ್ಯಗಳ ಶಿಕ್ಷಣವನ್ನೂ ನೀಡುತ್ತವೆ. ಒಂದೆಡೆ ಇವುಗಳ ಪೌರಾಣಿಕ ಮಹತ್ವವಿದ್ದರೆ, ಇನ್ನೊಂದೆಡೆ ಜೀವನ ಪಾಠ, ಪರಸ್ಪರ ಸೋದರ ಭಾವದಿಂದ ಇರುವ ಪ್ರೇರಣೆಯನ್ನು ಅತ್ಯಂತ ಸರಳ ರೀತಿಯಲ್ಲಿ ಕಲಿಸುತ್ತವೆ. ನಿಮ್ಮೆಲ್ಲರಿಗೂ 2019 ರ ಹೊಸ ವರ್ಷದ ಶುಭಾಷಯಗಳು, ಮತ್ತು ಮುಂಬರುವ ಹಬ್ಬಗಳ ಸಂಪೂರ್ಣ ಆನಂದವನ್ನು ಪಡೆಯಿರಿ ಎಂದು ಹಾರೈಸುತ್ತೇನೆ. ಭಾರತದ ವಿವಿಧತೆ ಮತ್ತು ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಎಲ್ಲರೂ ನೋಡಲಿ ಎಂಬುದಕ್ಕಾಗಿ ಈ ಹಬ್ಬಗಳಲ್ಲಿ ತೆಗೆದುಕೊಂಡಂತಹ ಫೋಟೊಗಳನ್ನು ಎಲ್ಲರೊಂದಿಗೆ ಶೇರ್ ಮಾಡಿ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತಿಯಲ್ಲಿ ನಾವು ಹೆಮ್ಮೆ ಪಟ್ಟು, ಇಡೀ ಜಗತ್ತಿಗೆ ಅಭಿಮಾನದಿಂದ ತೋರಿಸಿಕೊಳ್ಳುವ ಎಷ್ಟೊಂದು ವಿಷಯಗಳಿವೆ. ಅವುಗಳಲ್ಲಿ ಒಂದು- ಕುಂಭಮೇಳ. ನೀವು ಕುಂಭ ಮೇಳದ ಬಗ್ಗೆ ಬಹಳಷ್ಟು ಕೇಳಿರಬಹುದು, ಚಲನಚಿತ್ರಗಳಲ್ಲಿ ಕೂಡ ಇದರ ಭವ್ಯತೆ ಮತ್ತು ವಿಶಾಲತೆಯ ಬಗ್ಗೆ ಬಹಳಷ್ಟು ನೋಡಿರಲೂ ಬಹುದು ಮತ್ತು ಅದು ಸತ್ಯ ಕೂಡ. ಕುಂಭ ಮೇಳದ ಸ್ವರೂಪ ಬೃಹತ್ತಾದುದು. ಎಷ್ಟು ದಿವ್ಯವೋ ಅಷ್ಟೇ ಭವ್ಯ. ದೇಶದಲ್ಲಿ ಮತ್ತು ಜಗತ್ತಿನೆಲ್ಲೆಡೆಯಿಂದ ಜನರು ಬರುತ್ತಾರೆ, ಬಂದು ಕುಂಭ ಮೇಳದಲ್ಲಿ ಭಾಗಿಯಾಗುತ್ತಾರೆ. ಕುಂಭಮೇಳದಲ್ಲಿ ಭಕ್ತಿ ಮತ್ತು ಶ್ರದ್ಧೆಯ ಜನಸಾಗರ ಉಕ್ಕಿ ಹರಿಯುತ್ತದೆ. ಒಂದೇ ಕಡೆ, ಒಂದೇ ಸಮಯದಲ್ಲಿ ದೇಶ ವಿದೇಶಗಳ ಲಕ್ಷಾಂತರ, ಕೋಟ್ಯಾಂತರ ಜನ ಸೇರುತ್ತಾರೆ. ಕುಂಭಮೇಳದ ಪರಂಪರೆಯು ನಮ್ಮ ಮಹಾನ್ ಸಾಂಸ್ಕೃತಿಕ ಪರಂಪರೆಯಿಂದ ಫಲಿತವವಾಗಿದೆ ಮತ್ತು ಮೂಡಿಬಂದಿದೆ. ಈ ಬಾರಿ ಜನವರಿ 15 ರಿಂದ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲ್ಪಡುವ ವಿಶ್ವ ಪ್ರಸಿದ್ಧ ಕುಂಭ ಮೇಳಕ್ಕೆ ನೀವೂ ಸಹ ಬಹುಶಃ ಬಹಳ ಉತ್ಸುಕತೆಯಿಂದ ಕಾಯುತ್ತಿರಬಹುದು. ಕುಂಭ ಮೇಳಕ್ಕೆ ಈಗಿಂದಲೇ ಸಾಧು ಸಂತರು ತಲುಪುವ ವಿಧಿಗಳು ಆರಂಭಗೊಂಡಿದೆ. ಕಳೆದ ವರ್ಷ UNESCO ಕುಂಭ ಮೇಳವನ್ನು Intangible cultural ಹೆರಿಟೇಜ್ ಆಫ್ ಹ್ಯುಮಾನಿಟಿ ಯ ಸೂಚ್ಯಂಕದಲ್ಲಿ ಗುರುತಿಸಿದೆ. ಇದರ ಜಾಗತಿಕ ಮಹತ್ವದ ಅಂದಾಜನ್ನು ಇದರಿಂದಲೇ ತಿಳಿಯಬಹುದು. ಕೆಲವು ದಿನಗಳ ಹಿಂದೆ ಹಲವು ದೇಶಗಳ ರಾಯಭಾರಿಗಳು ಕುಂಭಮೇಳದ ತಯಾರಿಯನ್ನು ವೀಕ್ಷಿಸಿದರು. ಅಲ್ಲಿ ಒಮ್ಮೆಲೇ ಹಲವು ದೇಶಗಳ ಧ್ವಜಗಳು ಹಾರಾಡಿದವು. ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲಾಗುವ ಈ ಕುಂಭ ಮೇಳದಲ್ಲಿ 150ಕ್ಕೂ ಹೆಚ್ಚು ದೇಶಗಳ ಜನರು ಆಗಮಿಸುವ ನಿರೀಕ್ಷೆ ಇದೆ ಕುಂಭಮೇಳದ ದಿವ್ಯತೆಯಿಂದ ಭಾರತದ ಭವ್ಯತೆ ಇಡೀ ಜಗತ್ತಿಗೆ ತನ್ನ ಬಣ್ಣವನ್ನು ಹರಡುತ್ತದೆ. ಕುಂಭ ಮೇಳವು ಆತ್ಮ ಶೋಧನೆಯ ಒಂದು ಮಾಧ್ಯಮವಾಗಿದೆ. ಅಲ್ಲಿ ಬರುವ ಪ್ರತಿವ್ಯಕ್ತಿಗೂ ವಿಭಿನ್ನ ರೀತಿಯ ಅನುಭವ ಆಗುತ್ತದೆ. ಸಾಂಸಾರಿಕ ವಿಷಯಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ವಿಶೇಷವಾಗಿ ಯುವಕರಿಗೆ ಇದು ಒಂದು ದೊಡ್ಡ ಕಲಿಕೆಯ ಅನುಭವ ಆಗುತ್ತದೆ. ನಾನು ಸ್ವತಃ ಕೆಲವು ದಿನಗಳ ಹಿಂದೆ ಪ್ರಯಾಗ್ ರಾಜ್ ಗೆ ಹೋಗಿದ್ದೆ. ಕುಂಭ ಮೇಳದ ತಯಾರಿ ಬಹಳ ಜೋರಾಗಿ ನಡೆಯುತ್ತಿರುವುದನ್ನು ನೋಡಿದೆ . ಪ್ರಯಾಗ್ ರಾಜ್ ದ ಜನತೆ ಸಹ ಕುಂಭ ಮೇಳದ ಬಗ್ಗೆ ಬಹಳ ಉತ್ಸಾಹಿತರಾಗಿದ್ದಾರೆ. ಅಲ್ಲಿ ನಾನು ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಿದೆ. ಭಕ್ತರಿಗೆ ಇದರಿಂದ ಸಾಕಷ್ಟು ಸಹಾಯ ಆಗುತ್ತದೆ. ಈ ಸಾರಿ ಕುಂಭ ಮೇಳದಲ್ಲಿ ಸ್ವಚ್ಚತೆಯ ಬಗ್ಗೆ ಬಹಳಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಶ್ರದ್ಧೆಯ ಜೊತೆಜೊತೆಗೆ ಸ್ವಚ್ಚತೆ ಇದ್ದರೆ ಇದರ ಬಗ್ಗೆ ಒಳ್ಳೆಯ ಸಂದೇಶ ದೂರ ದೂರದವರೆಗೆ ತಲುಪುತ್ತದೆ. ಈ ಬಾರಿ ಪ್ರತಿ ಭಕ್ತನೂ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಮೇಲೆ ಅಕ್ಷಯ ಮರ ದ ಪುಣ್ಯ ದರ್ಶನವನ್ನೂ ಮಾಡಬಹುದು. ಜನರ ಭಕ್ತಿಯ ಸಂಕೇತವಾದ ಈ ಅಕ್ಷಯ ಮರ ಹಲವಾರು ವರ್ಷಗಳಿಂದ ಕೋಟೆಯ ಒಳಗಡೆಯೇ ಇತ್ತು ,ಭಕ್ತರು ಇದರ ದರ್ಶನವನ್ನು ಬಯಸಿದರು ದೊರಕುತ್ತಿರಲಿಲ್ಲ ಈಗ ಇದರ ದರ್ಶನ ಎಲ್ಲರಿಗೂ ಮುಕ್ತವಾಗಿದೆ. ಹೆಚ್ಹಿನ ಸಂಖ್ಯೆಯಲ್ಲಿ ಜನರು ಕುಂಭ ಮೇಳಕ್ಕೆ ಬರಲು ಪ್ರೇರಣೆ ಸಿಗುವಂತಾಗಲು ನೀವು ಕುಂಭ ಮೇಳಕ್ಕೆ ಹೋದಾಗ ಅದರ ಬೇರೆ ಬೇರೆ ಮಗ್ಗುಲುಗಳು ಮತ್ತು ಅವುಗಳ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅವಶ್ಯವಾಗಿ ಹಂಚಿಕೊಳ್ಳಿ. ಆಧ್ಯಾತ್ಮಿಕವಾದ ಈ ಕುಂಭ ಮೇಳ ಭಾರತೀಯತೆಯ ದರ್ಶನದ ಮಹಾ ಕುಂಭವಾಗಲಿ,
ಶ್ರದ್ದೆಯ ಈ ಕುಂಭಮೇಳ ರಾಷ್ಟ್ರೀಯತೆಯ ಮಹಾ ಕುಂಭವಾಗಲಿ, ರಾಷ್ಟ್ರೀಯ ಏಕತೆಯ ಮಹಾಕುಂಭವಾಗಲಿ,
ಶ್ರಧ್ಧಾಳುಗಳ ಈ ಕುಂಭ ಅಂತರಾಷ್ಟ್ರೀಯ ಪ್ರವಾಸಿಗಳ ಮಹಾ ಕುಂಭವಾಗಲಿ,
ಕಲಾತ್ಮಕತೆಯ ಈ ಕುಂಭಮೇಳ, ಸೃಜನಶೀಲ ಶಕ್ತಿಯ ಮಹಾ ಕುಂಭವಾಗಲಿ.

ನನ್ನ ಪ್ರೀತಿಯ ದೇಶವಾಸಿಗಳೇ, ಜನವರಿ 26 ರ ಗಣತಂತ್ರ ದಿವಸದ ಸಮಾರಂಭದ ಕುರಿತು ನಮ್ಮೆಲ್ಲರ ಮನದಲ್ಲಿ ತುಂಬಾ ಉತ್ಸುಕತೆ ಇರುತ್ತದೆ. ಆ ದಿನ ನಾವು, ನಮಗೆ ನಮ್ಮ ಸಂವಿಧಾನವನ್ನು ಕೊಟ್ಟ ಮಹಾ ಪುರುಷರನ್ನು ನೆನಪಿಸಿಕೊಳ್ಳುತ್ತೇವೆ. ಈ ವರ್ಷ ನಾವು ಪೂಜ್ಯ ಬಾಪೂ ರವರ 150 ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ ಶ್ರೀ ಸಿರಿಲ್ ರಾಮಾಫೋಸ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಬರುತ್ತಿರುವುದು ನಮ್ಮ ಸೌಭಾಗ್ಯ. ಪೂಜ್ಯ ಬಾಪೂ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಒಂದು ಅವಿನಾಭಾವ ಸಂಬಂಧವಿದೆ. ಈ ದಕ್ಷಿಣ ಆಫ್ರಿಕಾದಿಂದಲೇ ಮೋಹನ್ ‘ಮಹಾತ್ಮ’ ನಾದರು. ದಕ್ಷಿಣ ಆಫ್ರಿಕಾದಲ್ಲಿಯೇ ಮಹಾತ್ಮಾ ಗಾಂಧಿಯವರು ತಮ್ಮ ಮೊದಲ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಮತ್ತು ವರ್ಣಬೇಧ ನೀತಿಯ ವಿರುದ್ಧ ಸಿಡಿದು ನಿಂತಿದ್ದರು. ಅವರು ಫೀನಿಕ್ಸ್ ಮತ್ತು ಟಾಲ್ ಸ್ಟಾಯ್ ಫಾರ್ಮ್ಸ್ ಗಳನ್ನು ಸ್ಥಾಪನೆ ಮಾಡಿದ್ದರು. ಅಲ್ಲಿಂದಲೇ ಇದೇ ವಿಶ್ವದಲ್ಲಿ ಶಾಂತಿ, ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಿದರು. 2018 ನ್ನು ನೆಲ್ಸನ್ ಮಂಡೇಲಾ ಅವರ ಜನ್ಮ ಶತಾಬ್ದಿಯ ರೂಪದಲ್ಲಿ ಆಚರಿಸಲಾಗುತ್ತಿದೆ. ಅವರು ‘ಮಡೀಬಾ’ ಎನ್ನುವ ಹೆಸರಿನಿದ ಸಹ ಗುರುತಿಸಿಸಲ್ಪಡುತ್ತಾರೆ. ನೆಲ್ಸನ್ ಮಂಡೇಲಾ ಅವರು ಇಡೀ ವಿಶ್ವದಲ್ಲಿ ವರ್ಣ ಬೇಧ ನೀತಿಯ ವಿರುದ್ಧದ ಸಂಘರ್ಷದಲ್ಲಿ ಒಂದು ಮಾದರಿ ಆಗಿದ್ದರು ಎಂಬುದು ನಮಗೆಲ್ಲರಿಗೂ ಗೊತ್ತು. ಮಂಡೇಲಾ ಅವರಿಗೆ ಪ್ರೆರಣಾದಾಯಕರಾಗಿದ್ದವರು ಯಾರು? ಅವರಿಗೆ ಅಷ್ಟೊಂದು ವರ್ಷ ಜೈಲುವಾಸ ಅನುಭವಿಸಲು ಸಹನಶಕ್ತಿ ಮತ್ತು ಪ್ರೇರಣೆ ಪೂಜ್ಯಬಾಪೂರವರಿಂದಲೇ ಸಿಕ್ಕಿತ್ತು. ಮಂಡೇಲರವರು “ಮಹಾತ್ಮಾ ಅವರು ನಮ್ಮ ಇತಿಹಾಸದ ಅವಿಚ್ಚಿನ್ನ ಅಂಗವಾಗಿದ್ದಾರೆ. ಏಕೆಂದರೆ, ಇಲ್ಲಿಯೇ ಅವರು ಸತ್ಯದೊಂದಿಗೆ ತಮ್ಮ ಮೊದಲ ಪ್ರಯೋಗವನ್ನು ಮಾಡಿದ್ದರು, ಇಲ್ಲಿಯೇ ಅವರು ನ್ಯಾಯಕ್ಕಾಗಿ ತಮ್ಮ ಧ್ರುಡತೆಯ ಒಂದು ವಿಲಕ್ಷಣವಾದ ಪ್ರದರ್ಶನ ನೀಡಿದ್ದರು, ಇಲ್ಲಿಯೇ ಅವರು ತಮ್ಮ ಸತ್ಯಾಗ್ರಹದ ರೂಪು ರೇಷೆ ಮತ್ತು ಸಂಘರ್ಷದ ವಿಧಾನವನ್ನು ವಿಕಸಿತಗೊಳಿಸಿದ್ದರು” ಎಂದು ಬಾಪೂ ಅವರ ಬಗ್ಗೆ ಹೇಳಿದ್ದರು. ಅವರು ಬಾಪೂ ಅವರನ್ನು ಅದರ್ಶ ವ್ಯಕ್ತಿಯಾಗಿ ಪರಿಗಣಿಸಿದ್ದರು ಬಾಪೂ ಮತ್ತು ಮಂಡೇಲಾ ಇವರಿಬ್ಬರೂ ಇಡೀ ವಿಶ್ವಕ್ಕೆ ಬರೀ ಪ್ರೆರಣಾದಾಯಕರು ಮಾತ್ರವಲ್ಲದೆ ಅವರ ಆದರ್ಶ, ಪ್ರೇಮ ಮತ್ತು ಕರುಣೆ ತುಂಬಿದ ಸಮಾಜದ ನಿರ್ಮಾಣಕ್ಕೆ ಸಹ ಯಾವಾಗಲೋ ನಮ್ಮನ್ನು ಪ್ರೋತ್ಸಾಹಿಸುತ್ತಿರುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಮುಂಚೆ ನರ್ಮದಾ ತೀರದ ಕೆವಡಿಯದಲ್ಲಿ DGP conference ನಡೆಯಿತು. ಎಲ್ಲಿ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ statue of liberty ಎಲ್ಲಿ ಇದೆಯೋ, ಅಲ್ಲಿ ದೇಶದ ವರಿಷ್ಠ ಪೋಲಿಸ್ ಅಧಿಕಾರಿಗಳ ಜೊತೆ ಸಾರ್ಥಕವಾದ ಚರ್ಚೆ ನಡೆಯಿತು. ದೇಶ ಮತ್ತು ದೇಶವಾಸಿಗಳಿಗೆ ಸುರಕ್ಷತೆಯನ್ನು ಹೆಚ್ಚು ಬಲ ಪಡಿಸುವ ಸಲುವಾಗಿ ಯಾವ ರೀತಿಯ ಹೆಜ್ಜೆ ಇಡಬೇಕು ಎನ್ನುವುದರ ಬಗ್ಗೆ ದೀರ್ಘವಾಗಿ ಮಾತುಕತೆಗಳು ನಡೆದವು. ಅದೇ ಕಾರಣದಿಂದ ನಾನು ದೇಶದ ಏಕತೆಗಾಗಿ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ಪ್ರದಾನಮಾಡಲು ಪ್ರಾರಂಭಿಸುವ ಬಗ್ಗೆ ಘೋಷಣೆ ಸಹಾ ಮಾಡಿದ್ದೆ. ಯಾವುದಾದರೊಂದು ರೂಪದಲ್ಲಿ ರಾಷ್ಟ್ರೀಯ ಏಕತೆಗಾಗಿ ತಮ್ಮ ಕೊಡುಗೆಯನ್ನು ಯಾರು ನೀಡಿರುತ್ತಾರೋ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಸರ್ದಾರ್ ಪಟೇಲರು ತಮ್ಮ ಇಡೀ ಜೀವನವನ್ನು ದೇಶದ ಏಕತೆಗಾಗಿ ಸಮರ್ಪಿಸಿಕೊಂಡಿದ್ದರು. ಅವರು ಯಾವಾಗಲೂ ಭಾರತದ ಅಖಂಡತೆಯನ್ನು ಕಾಪಾಡುವುದರಲ್ಲಿ ತೊಡಗಿಸಿಕೊಂಡಿದ್ದರು. ಭಾರತದ ಶಕ್ತಿ ಇಲ್ಲಿಯ ವಿವಿಧತೆಯಲ್ಲಿಯೇ ಅಡಗಿದೆ ಎಂದು ಸರದಾರರು ನಂಬಿದ್ದರು. ಸರ್ದಾರ್ ಪಟೇಲರ ಈ ಭಾವನೆಯನ್ನು ಗೌರವಿಸುತ್ತಾ ಏಕತೆಗಾಗಿ ಇರುವ ಈ ಪ್ರಶಸ್ತಿಯ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೆದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ, 13 ಜನವರಿ ಗುರು ಗೋವಿಂದ ಸಿಂಗ ರ ಜಯಂತಿಯ ಪುಣ್ಯ ದಿನ. ಗುರು ಗೋವಿಂದ ಸಿಂಗರು ಜನಿಸಿದ್ದು ಪಟ್ನಾದಲ್ಲಿ. ಜೀವನದ ಅಧಿಕ ಸಮಯದವರೆಗೆ ಅವರ ಕರ್ಮ ಭೂಮಿ ಉತ್ತರ ಭಾರತವಾಗಿತ್ತು ಮತ್ತು ಮಹಾರಾಷ್ಟ್ರದ ನಾಂದೇಡ್ ನಲ್ಲಿ ಅವರು ತಮ್ಮ ಕೊನೆಯುಸಿರೆಳೆದರು. ಜನ್ಮಸ್ಥಳ ಪಟ್ನಾ, ಕರ್ಮ ಭೂಮಿ ಉತ್ತರ ಭಾರತ ಮತ್ತು ಜೀವನದ ಕೊನೆಯ ಕ್ಷಣಗಳು ನಾಂದೇಡ್ ನಲ್ಲಿ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇಡೀ ಭಾರತ ದೇಶಕ್ಕೆ ಅವರ ಆಶೀರ್ವಾದ ಲಭಿಸಿತು. ಅವರ ಜೀವನ ಕಾಲವನ್ನು ನೋಡಿದರೆ ಅದರಲ್ಲಿ ಇಡೀ ಭಾರತದ ನೋಟ ಸಿಗುತ್ತದೆ. ತಮ್ಮ ತಂದೆ ಗುರು ತೇಜ್ ಬಹದ್ದೂರ್ ರು ಹುತಾತ್ಮರಾದ ಮೇಲೆ ಗುರು ಗೋವಿಂದ ಸಿಂಗ ರು 9 ನೇ ವರ್ಷದ ಸಣ್ಣ ವಯಸ್ಸಿನಲ್ಲಿಯೇ ಗುರುವಿಯ ಪದವಿ ಪಡೆದವರು. ಗುರು ಗೋವಿಂದ ಸಿಂಗರಿಗೆ ನ್ಯಾಯಕ್ಕಾಗಿ ಹೋರಾಟ ಮಾಡುವ ಸಾಹಸ ಸಿಖ್ ಗುರುಗಳ ಪರಂಪರೆಯಿಂದಲೇ ಬಂದಿತ್ತು. ಅವರು ಶಾಂತ ಹಾಗೂ ಸರಳ ವ್ಯಕ್ತಿತ್ವದ ಧಣಿಯಾಗಿದ್ದರು. ಆದರೆ ಯಾವಾಗ ಬಡವರು ಮತ್ತು ದುರ್ಬಲರ ಧ್ವನಿಯನ್ನು ದಮನ ಮಾಡುವ ಪ್ರಯತ್ನ ಆಗುತ್ತಿತ್ತೋ, ಅವರೊಂದಿಗೆ ಅನ್ಯಾಯವಾಗುತ್ತಿತ್ತೋ ಆಗೆಲ್ಲಾ ಗುರು ಗೋವಿಂದ ಸಿಂಗರು ಬಡವರು ಮತ್ತು ದುರ್ಬಲರಿಗಾಗಿ ಧ್ರುದತೆಯಿಂದ ತಮ್ಮ ಧ್ವನಿ ಎತ್ತಿದ್ದರು ಮತ್ತು ಆದ್ದರಿಂದ
ಲಕ್ಷ ಲಕ್ಷ ಜನರೊಂದಿಗೆ ಒಬ್ಬನೇ ಹೋರಾಡುವೆನು
ಹದ್ದಿನಿಂದ ಹಕ್ಕಿಗಳನ್ನು ರಕ್ಷಿಸಬಲ್ಲೆನು
ಅದರಿಂದಲೇ ಗೋವಿಂದ ಸಿಂಹ ಎಂದು ಕರೆಸಿಕೊಳ್ಳುವೆನು

ದುರ್ಬಲರ ವಿರುದ್ಧ ಹೋರಾಡಿ ಶಕ್ತಿಯ ಪ್ರದರ್ಶನ ಮಾಡಲಾಗದು ಎಂದು ಅವರು ಹೇಳುತ್ತಿದ್ದರು. ಮಾನವನ ದುಃಖ ಗಳನ್ನೂ ದೂರಮಾಡುವುದು ಎಲ್ಲಕ್ಕಿಂತ ದೊಡ್ಡ ಸೇವೆ ಎಂದು ಶ್ರೀ ಗೋವಿಂದ ಸಿಂಗರು ಹೇಳುತ್ತಿದ್ದರು. ಅವರು ಶೌರ್ಯ, ವೀರತ್ವ, ತ್ಯಾಗ, ಧರ್ಮಪರಾಯಣತೆ, ಇವುಗಳಿಂದ ತುಂಬಿದ್ದ ದಿವ್ಯ ಪುರುಷರಾಗಿದ್ದರು. ಇವರಿಗೆ ಶಾಸ್ತ್ರ, ಶಸ್ತ್ರ, ಎರಡರ ಬಗ್ಗೆಯೂ ಅಲೌಕಿಕ ಜ್ನಾನವಿತ್ತು. ಅವರೊಬ್ಬ ಗುರಿಕಾರರಾಗಿದ್ದರು. ಜೊತೆಗೆ ಗುರುಮುಖಿ, ಬೃಜ್ ಭಾಷೆ, ಸಂಸ್ಕೃತ, ಪಾರ್ಸಿ, ಹಿಂದಿ ಮತ್ತು ಉರ್ದು ಸಹಿತ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ನಾನು ಮತ್ತೊಮ್ಮೆ ಗುರು ಗೋವಿಂದ ಸಿಂಗರಿಗೆ ವಂದಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗದ ಬಹಳಷ್ಟು ಒಳ್ಳೆಯ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅಂತಹದೇ ಒಂದು ಪ್ರಯತ್ನ FSSAI ಅಂದರೆ Food Safety and Standard Authority of India ದ ಮುಖಾಂತರ ನಡೆಯುತ್ತಿದೆ. ಮಹಾತ್ಮಾ ಗಾಂಧಿಯವರ 150- ನೇ ವರ್ಷಾಚರಣೆಯ ಅಂಗವಾಗಿ ದೇಶದೆಲ್ಲೆಡೆ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೇ ಸರಣಿಯಲ್ಲಿ FSSAI ಸೇಫ್ ಮತ್ತು healthy ಡಯಟ್ ಹ್ಯಾಬಿಟ್ – ಆಹಾರದ ಒಳ್ಳೆಯ ಅಭ್ಯಾಸಗಳಿಗೆ ಆದ್ಯತೆ ನೀಡುವುದರಲ್ಲಿ ತೊಡಗಿಕೊಂಡಿದೆ. ‘Eat Right India” ಅಭಿಯಾನದ ಅಡಿಯಲ್ಲಿ ದೇಶದೆಲ್ಲೆಡೆ ಸ್ವಸ್ಥ ಭಾರತ ಯಾತ್ರೆಗಳನ್ನು ನಡೆಸಲಾಗುತ್ತಿದೆ. ಈ ಅಭಿಯಾನವು ಜನವರಿ 27 ರ ವರೆಗೆ ನಡೆಯುತ್ತದೆ. ಕೆಲವೊಮ್ಮೆ ಸಹಕಾರಿ ಸಂಘಟನೆಗಳು ಒಂದು ನಿರ್ವಾಹಕದ ರೀತಿಯಲ್ಲಿ ಇರುತ್ತದೆ. ಆದರೆ FSSAI ಇದರಿಂದ ಮುಂದಕ್ಕೆ ಹೋಗಿ ಜನ ಜಾಗೃತಿ ಮತ್ತು ಲೋಕ ಶಿಕ್ಷಣದ ಕೆಲಸ ಮಾಡುತ್ತಿದೆ. ಎಂದು ಭಾರತ ಸ್ವಚ್ಚವಾಗುತ್ತದೋ, ಆರೋಗ್ಯಪೂರ್ಣವಾಗುತ್ತದೆಯೋ ಆಗ ಭಾರತ ಸಮೃದ್ಧವೂ ಆಗುತ್ತದೆ. ಒಳ್ಳೆಯ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಎಲ್ಲಕ್ಕಿಂತ ಮುಖ್ಯ. ಈ ಸಂದರ್ಭದಲ್ಲಿ ಈ ಕಾರ್ಯಕ್ರಮಗಳಿಗೆ FSSAI ಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಬನ್ನಿ, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಎನ್ನುವುದು ನಿಮ್ಮಲ್ಲಿ ನನ್ನ ಪ್ರಾರ್ಥನೆ. ನೀವೂ ಕೂಡ ಇದರಲ್ಲಿ ಭಾಗವಹಿಸಿ ಮತ್ತು ಮುಖ್ಯವಾಗಿ ಮಕ್ಕಳಿಗೆ ಇದನ್ನೆಲ್ಲಾ ತೋರಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಆಹಾರದ ಮಹತ್ವದ ಬಗ್ಗೆ ಶಿಕ್ಷಣವು ಬಾಲ್ಯದಿಂದಲೇ ಅವಶ್ಯಕವಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, 2018 ರಲ್ಲಿ ಇದು ಕೊನೆಯ ಕಾರ್ಯಕ್ರಮ. 2019 ರಲ್ಲಿ ನಾವು ಮತ್ತೆ ಸಿಗೋಣ, ಮತ್ತೆ ಮನದ ಮಾತುಗಳನ್ನು ಆಡೋಣ. ವ್ಯಕ್ತಿಯ ಜೀವನವಿರಲಿ, ದೇಶದ ಜೀವನವಿರಲಿ, ಸಮಾಜದ ಜೀವನವಿರಲಿ, ಇದಕ್ಕೆಲ್ಲ ಪ್ರೇರಣೆ ಪ್ರಗತಿಯ ಆಧಾರವಾಗಿರುತ್ತದೆ. ಬನ್ನಿ, ಹೊಸ ಪ್ರೇರಣೆಯೇ, ಹೊಸ ಆಶಾಭಾವ, ಹೊಸ ಸಂಕಲ್ಪ, ಹೊಸ ಸಿದ್ಧಿ, ಹೊಸ ಎತ್ತರ, ಇವೆಲ್ಲದರ ಜೊತೆ ಮುಂದೆ ಸಾಗೋಣ ಬೆಳೆಯುತ್ತಾ ಸಾಗೋಣ, ನಾವೂ ಬದಲಾಗೋಣ, ದೇಶವನ್ನೂ ಬದಲಾಯಿಸೋಣ.

ಅನಂತಾನಂತ ಧನ್ಯವಾದಗಳು.

 

  • Priya Satheesh January 15, 2025

    🐯
  • krishangopal sharma Bjp January 12, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌷🌹🌷🌹🌷🌷🌹🌷🌹🌹🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 12, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌷🌹🌷🌹🌷🌷🌹🌷🌹🌹🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 12, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌷🌹🌷🌹🌷🌷🌹🌷🌹🌹🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • ram Sagar pandey November 04, 2024

    🌹🌹🙏🙏🌹🌹जय श्रीकृष्णा राधे राधे 🌹🙏🏻🌹जय माता दी 🚩🙏🙏जय श्रीराम 🙏💐🌹
  • Pradhuman Singh Tomar July 25, 2024

    bjp
  • Pawan Jain April 17, 2024

    नमो नमो
  • rida rashid February 19, 2024

    Jay shree ram
  • Maruti Wagh February 16, 2024

    👍
  • Subhamay Sarkar February 09, 2024

    জয় শ্রী রাম
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"Huge opportunity": Japan delegation meets PM Modi, expressing their eagerness to invest in India
NM on the go

Nm on the go

Always be the first to hear from the PM. Get the App Now!
...
Text of PM’s speech at TV9 Summit 2025
March 28, 2025
QuoteToday, the world's eyes are on India: PM
QuoteIndia's youth is rapidly becoming skilled and driving innovation forward: PM
Quote"India First" has become the mantra of India's foreign policy: PM
QuoteToday, India is not just participating in the world order but also contributing to shaping and securing the future: PM
QuoteIndia has given Priority to humanity over monopoly: PM
QuoteToday, India is not just a Nation of Dreams but also a Nation That Delivers: PM

श्रीमान रामेश्वर गारु जी, रामू जी, बरुन दास जी, TV9 की पूरी टीम, मैं आपके नेटवर्क के सभी दर्शकों का, यहां उपस्थित सभी महानुभावों का अभिनंदन करता हूं, इस समिट के लिए बधाई देता हूं।

TV9 नेटवर्क का विशाल रीजनल ऑडियंस है। और अब तो TV9 का एक ग्लोबल ऑडियंस भी तैयार हो रहा है। इस समिट में अनेक देशों से इंडियन डायस्पोरा के लोग विशेष तौर पर लाइव जुड़े हुए हैं। कई देशों के लोगों को मैं यहां से देख भी रहा हूं, वे लोग वहां से वेव कर रहे हैं, हो सकता है, मैं सभी को शुभकामनाएं देता हूं। मैं यहां नीचे स्क्रीन पर हिंदुस्तान के अनेक शहरों में बैठे हुए सब दर्शकों को भी उतने ही उत्साह, उमंग से देख रहा हूं, मेरी तरफ से उनका भी स्वागत है।

साथियों,

आज विश्व की दृष्टि भारत पर है, हमारे देश पर है। दुनिया में आप किसी भी देश में जाएं, वहां के लोग भारत को लेकर एक नई जिज्ञासा से भरे हुए हैं। आखिर ऐसा क्या हुआ कि जो देश 70 साल में ग्यारहवें नंबर की इकोनॉमी बना, वो महज 7-8 साल में पांचवे नंबर की इकोनॉमी बन गया? अभी IMF के नए आंकड़े सामने आए हैं। वो आंकड़े कहते हैं कि भारत, दुनिया की एकमात्र मेजर इकोनॉमी है, जिसने 10 वर्षों में अपने GDP को डबल किया है। बीते दशक में भारत ने दो लाख करोड़ डॉलर, अपनी इकोनॉमी में जोड़े हैं। GDP का डबल होना सिर्फ आंकड़ों का बदलना मात्र नहीं है। इसका impact देखिए, 25 करोड़ लोग गरीबी से बाहर निकले हैं, और ये 25 करोड़ लोग एक नियो मिडिल क्लास का हिस्सा बने हैं। ये नियो मिडिल क्लास, एक प्रकार से नई ज़िंदगी शुरु कर रहा है। ये नए सपनों के साथ आगे बढ़ रहा है, हमारी इकोनॉमी में कंट्रीब्यूट कर रहा है, और उसको वाइब्रेंट बना रहा है। आज दुनिया की सबसे बड़ी युवा आबादी हमारे भारत में है। ये युवा, तेज़ी से स्किल्ड हो रहा है, इनोवेशन को गति दे रहा है। और इन सबके बीच, भारत की फॉरेन पॉलिसी का मंत्र बन गया है- India First, एक जमाने में भारत की पॉलिसी थी, सबसे समान रूप से दूरी बनाकर चलो, Equi-Distance की पॉलिसी, आज के भारत की पॉलिसी है, सबके समान रूप से करीब होकर चलो, Equi-Closeness की पॉलिसी। दुनिया के देश भारत की ओपिनियन को, भारत के इनोवेशन को, भारत के एफर्ट्स को, जैसा महत्व आज दे रहे हैं, वैसा पहले कभी नहीं हुआ। आज दुनिया की नजर भारत पर है, आज दुनिया जानना चाहती है, What India Thinks Today.

|

साथियों,

भारत आज, वर्ल्ड ऑर्डर में सिर्फ पार्टिसिपेट ही नहीं कर रहा, बल्कि फ्यूचर को शेप और सेक्योर करने में योगदान दे रहा है। दुनिया ने ये कोरोना काल में अच्छे से अनुभव किया है। दुनिया को लगता था कि हर भारतीय तक वैक्सीन पहुंचने में ही, कई-कई साल लग जाएंगे। लेकिन भारत ने हर आशंका को गलत साबित किया। हमने अपनी वैक्सीन बनाई, हमने अपने नागरिकों का तेज़ी से वैक्सीनेशन कराया, और दुनिया के 150 से अधिक देशों तक दवाएं और वैक्सीन्स भी पहुंचाईं। आज दुनिया, और जब दुनिया संकट में थी, तब भारत की ये भावना दुनिया के कोने-कोने तक पहुंची कि हमारे संस्कार क्या हैं, हमारा तौर-तरीका क्या है।

साथियों,

अतीत में दुनिया ने देखा है कि दूसरे विश्व युद्ध के बाद जब भी कोई वैश्विक संगठन बना, उसमें कुछ देशों की ही मोनोपोली रही। भारत ने मोनोपोली नहीं बल्कि मानवता को सर्वोपरि रखा। भारत ने, 21वीं सदी के ग्लोबल इंस्टीट्यूशन्स के गठन का रास्ता बनाया, और हमने ये ध्यान रखा कि सबकी भागीदारी हो, सबका योगदान हो। जैसे प्राकृतिक आपदाओं की चुनौती है। देश कोई भी हो, इन आपदाओं से इंफ्रास्ट्रक्चर को भारी नुकसान होता है। आज ही म्यांमार में जो भूकंप आया है, आप टीवी पर देखें तो बहुत बड़ी-बड़ी इमारतें ध्वस्त हो रही हैं, ब्रिज टूट रहे हैं। और इसलिए भारत ने Coalition for Disaster Resilient Infrastructure - CDRI नाम से एक वैश्विक नया संगठन बनाने की पहल की। ये सिर्फ एक संगठन नहीं, बल्कि दुनिया को प्राकृतिक आपदाओं के लिए तैयार करने का संकल्प है। भारत का प्रयास है, प्राकृतिक आपदा से, पुल, सड़कें, बिल्डिंग्स, पावर ग्रिड, ऐसा हर इंफ्रास्ट्रक्चर सुरक्षित रहे, सुरक्षित निर्माण हो।

साथियों,

भविष्य की चुनौतियों से निपटने के लिए हर देश का मिलकर काम करना बहुत जरूरी है। ऐसी ही एक चुनौती है, हमारे एनर्जी रिसोर्सेस की। इसलिए पूरी दुनिया की चिंता करते हुए भारत ने International Solar Alliance (ISA) का समाधान दिया है। ताकि छोटे से छोटा देश भी सस्टेनबल एनर्जी का लाभ उठा सके। इससे क्लाइमेट पर तो पॉजिटिव असर होगा ही, ये ग्लोबल साउथ के देशों की एनर्जी नीड्स को भी सिक्योर करेगा। और आप सबको ये जानकर गर्व होगा कि भारत के इस प्रयास के साथ, आज दुनिया के सौ से अधिक देश जुड़ चुके हैं।

साथियों,

बीते कुछ समय से दुनिया, ग्लोबल ट्रेड में असंतुलन और लॉजिस्टिक्स से जुड़ी challenges का सामना कर रही है। इन चुनौतियों से निपटने के लिए भी भारत ने दुनिया के साथ मिलकर नए प्रयास शुरु किए हैं। India–Middle East–Europe Economic Corridor (IMEC), ऐसा ही एक महत्वाकांक्षी प्रोजेक्ट है। ये प्रोजेक्ट, कॉमर्स और कनेक्टिविटी के माध्यम से एशिया, यूरोप और मिडिल ईस्ट को जोड़ेगा। इससे आर्थिक संभावनाएं तो बढ़ेंगी ही, दुनिया को अल्टरनेटिव ट्रेड रूट्स भी मिलेंगे। इससे ग्लोबल सप्लाई चेन भी और मजबूत होगी।

|

साथियों,

ग्लोबल सिस्टम्स को, अधिक पार्टिसिपेटिव, अधिक डेमोक्रेटिक बनाने के लिए भी भारत ने अनेक कदम उठाए हैं। और यहीं, यहीं पर ही भारत मंडपम में जी-20 समिट हुई थी। उसमें अफ्रीकन यूनियन को जी-20 का परमानेंट मेंबर बनाया गया है। ये बहुत बड़ा ऐतिहासिक कदम था। इसकी मांग लंबे समय से हो रही थी, जो भारत की प्रेसीडेंसी में पूरी हुई। आज ग्लोबल डिसीजन मेकिंग इंस्टीट्यूशन्स में भारत, ग्लोबल साउथ के देशों की आवाज़ बन रहा है। International Yoga Day, WHO का ग्लोबल सेंटर फॉर ट्रेडिशनल मेडिसिन, आर्टिफिशियल इंटेलीजेंस के लिए ग्लोबल फ्रेमवर्क, ऐसे कितने ही क्षेत्रों में भारत के प्रयासों ने नए वर्ल्ड ऑर्डर में अपनी मजबूत उपस्थिति दर्ज कराई है, और ये तो अभी शुरूआत है, ग्लोबल प्लेटफॉर्म पर भारत का सामर्थ्य नई ऊंचाई की तरफ बढ़ रहा है।

साथियों,

21वीं सदी के 25 साल बीत चुके हैं। इन 25 सालों में 11 साल हमारी सरकार ने देश की सेवा की है। और जब हम What India Thinks Today उससे जुड़ा सवाल उठाते हैं, तो हमें ये भी देखना होगा कि Past में क्या सवाल थे, क्या जवाब थे। इससे TV9 के विशाल दर्शक समूह को भी अंदाजा होगा कि कैसे हम, निर्भरता से आत्मनिर्भरता तक, Aspirations से Achievement तक, Desperation से Development तक पहुंचे हैं। आप याद करिए, एक दशक पहले, गांव में जब टॉयलेट का सवाल आता था, तो माताओं-बहनों के पास रात ढलने के बाद और भोर होने से पहले का ही जवाब होता था। आज उसी सवाल का जवाब स्वच्छ भारत मिशन से मिलता है। 2013 में जब कोई इलाज की बात करता था, तो महंगे इलाज की चर्चा होती थी। आज उसी सवाल का समाधान आयुष्मान भारत में नजर आता है। 2013 में किसी गरीब की रसोई की बात होती थी, तो धुएं की तस्वीर सामने आती थी। आज उसी समस्या का समाधान उज्ज्वला योजना में दिखता है। 2013 में महिलाओं से बैंक खाते के बारे में पूछा जाता था, तो वो चुप्पी साध लेती थीं। आज जनधन योजना के कारण, 30 करोड़ से ज्यादा बहनों का अपना बैंक अकाउंट है। 2013 में पीने के पानी के लिए कुएं और तालाबों तक जाने की मजबूरी थी। आज उसी मजबूरी का हल हर घर नल से जल योजना में मिल रहा है। यानि सिर्फ दशक नहीं बदला, बल्कि लोगों की ज़िंदगी बदली है। और दुनिया भी इस बात को नोट कर रही है, भारत के डेवलपमेंट मॉडल को स्वीकार रही है। आज भारत सिर्फ Nation of Dreams नहीं, बल्कि Nation That Delivers भी है।

साथियों,

जब कोई देश, अपने नागरिकों की सुविधा और समय को महत्व देता है, तब उस देश का समय भी बदलता है। यही आज हम भारत में अनुभव कर रहे हैं। मैं आपको एक उदाहरण देता हूं। पहले पासपोर्ट बनवाना कितना बड़ा काम था, ये आप जानते हैं। लंबी वेटिंग, बहुत सारे कॉम्प्लेक्स डॉक्यूमेंटेशन का प्रोसेस, अक्सर राज्यों की राजधानी में ही पासपोर्ट केंद्र होते थे, छोटे शहरों के लोगों को पासपोर्ट बनवाना होता था, तो वो एक-दो दिन कहीं ठहरने का इंतजाम करके चलते थे, अब वो हालात पूरी तरह बदल गया है, एक आंकड़े पर आप ध्यान दीजिए, पहले देश में सिर्फ 77 पासपोर्ट सेवा केंद्र थे, आज इनकी संख्या 550 से ज्यादा हो गई है। पहले पासपोर्ट बनवाने में, और मैं 2013 के पहले की बात कर रहा हूं, मैं पिछले शताब्दी की बात नहीं कर रहा हूं, पासपोर्ट बनवाने में जो वेटिंग टाइम 50 दिन तक होता था, वो अब 5-6 दिन तक सिमट गया है।

साथियों,

ऐसा ही ट्रांसफॉर्मेशन हमने बैंकिंग इंफ्रास्ट्रक्चर में भी देखा है। हमारे देश में 50-60 साल पहले बैंकों का नेशनलाइजेशन किया गया, ये कहकर कि इससे लोगों को बैंकिंग सुविधा सुलभ होगी। इस दावे की सच्चाई हम जानते हैं। हालत ये थी कि लाखों गांवों में बैंकिंग की कोई सुविधा ही नहीं थी। हमने इस स्थिति को भी बदला है। ऑनलाइन बैंकिंग तो हर घर में पहुंचाई है, आज देश के हर 5 किलोमीटर के दायरे में कोई न कोई बैंकिंग टच प्वाइंट जरूर है। और हमने सिर्फ बैंकिंग इंफ्रास्ट्रक्चर का ही दायरा नहीं बढ़ाया, बल्कि बैंकिंग सिस्टम को भी मजबूत किया। आज बैंकों का NPA बहुत कम हो गया है। आज बैंकों का प्रॉफिट, एक लाख 40 हज़ार करोड़ रुपए के नए रिकॉर्ड को पार कर चुका है। और इतना ही नहीं, जिन लोगों ने जनता को लूटा है, उनको भी अब लूटा हुआ धन लौटाना पड़ रहा है। जिस ED को दिन-रात गालियां दी जा रही है, ED ने 22 हज़ार करोड़ रुपए से अधिक वसूले हैं। ये पैसा, कानूनी तरीके से उन पीड़ितों तक वापिस पहुंचाया जा रहा है, जिनसे ये पैसा लूटा गया था।

साथियों,

Efficiency से गवर्नमेंट Effective होती है। कम समय में ज्यादा काम हो, कम रिसोर्सेज़ में अधिक काम हो, फिजूलखर्ची ना हो, रेड टेप के बजाय रेड कार्पेट पर बल हो, जब कोई सरकार ये करती है, तो समझिए कि वो देश के संसाधनों को रिस्पेक्ट दे रही है। और पिछले 11 साल से ये हमारी सरकार की बड़ी प्राथमिकता रहा है। मैं कुछ उदाहरणों के साथ अपनी बात बताऊंगा।

|

साथियों,

अतीत में हमने देखा है कि सरकारें कैसे ज्यादा से ज्यादा लोगों को मिनिस्ट्रीज में accommodate करने की कोशिश करती थीं। लेकिन हमारी सरकार ने अपने पहले कार्यकाल में ही कई मंत्रालयों का विलय कर दिया। आप सोचिए, Urban Development अलग मंत्रालय था और Housing and Urban Poverty Alleviation अलग मंत्रालय था, हमने दोनों को मर्ज करके Housing and Urban Affairs मंत्रालय बना दिया। इसी तरह, मिनिस्ट्री ऑफ ओवरसीज़ अफेयर्स अलग था, विदेश मंत्रालय अलग था, हमने इन दोनों को भी एक साथ जोड़ दिया, पहले जल संसाधन, नदी विकास मंत्रालय अलग था, और पेयजल मंत्रालय अलग था, हमने इन्हें भी जोड़कर जलशक्ति मंत्रालय बना दिया। हमने राजनीतिक मजबूरी के बजाय, देश की priorities और देश के resources को आगे रखा।

साथियों,

हमारी सरकार ने रूल्स और रेगुलेशन्स को भी कम किया, उन्हें आसान बनाया। करीब 1500 ऐसे कानून थे, जो समय के साथ अपना महत्व खो चुके थे। उनको हमारी सरकार ने खत्म किया। करीब 40 हज़ार, compliances को हटाया गया। ऐसे कदमों से दो फायदे हुए, एक तो जनता को harassment से मुक्ति मिली, और दूसरा, सरकारी मशीनरी की एनर्जी भी बची। एक और Example GST का है। 30 से ज्यादा टैक्सेज़ को मिलाकर एक टैक्स बना दिया गया है। इसको process के, documentation के हिसाब से देखें तो कितनी बड़ी बचत हुई है।

साथियों,

सरकारी खरीद में पहले कितनी फिजूलखर्ची होती थी, कितना करप्शन होता था, ये मीडिया के आप लोग आए दिन रिपोर्ट करते थे। हमने, GeM यानि गवर्नमेंट ई-मार्केटप्लेस प्लेटफॉर्म बनाया। अब सरकारी डिपार्टमेंट, इस प्लेटफॉर्म पर अपनी जरूरतें बताते हैं, इसी पर वेंडर बोली लगाते हैं और फिर ऑर्डर दिया जाता है। इसके कारण, भ्रष्टाचार की गुंजाइश कम हुई है, और सरकार को एक लाख करोड़ रुपए से अधिक की बचत भी हुई है। डायरेक्ट बेनिफिट ट्रांसफर- DBT की जो व्यवस्था भारत ने बनाई है, उसकी तो दुनिया में चर्चा है। DBT की वजह से टैक्स पेयर्स के 3 लाख करोड़ रुपए से ज्यादा, गलत हाथों में जाने से बचे हैं। 10 करोड़ से ज्यादा फर्ज़ी लाभार्थी, जिनका जन्म भी नहीं हुआ था, जो सरकारी योजनाओं का फायदा ले रहे थे, ऐसे फर्जी नामों को भी हमने कागजों से हटाया है।

साथियों,

 

हमारी सरकार टैक्स की पाई-पाई का ईमानदारी से उपयोग करती है, और टैक्सपेयर का भी सम्मान करती है, सरकार ने टैक्स सिस्टम को टैक्सपेयर फ्रेंडली बनाया है। आज ITR फाइलिंग का प्रोसेस पहले से कहीं ज्यादा सरल और तेज़ है। पहले सीए की मदद के बिना, ITR फाइल करना मुश्किल होता था। आज आप कुछ ही समय के भीतर खुद ही ऑनलाइन ITR फाइल कर पा रहे हैं। और रिटर्न फाइल करने के कुछ ही दिनों में रिफंड आपके अकाउंट में भी आ जाता है। फेसलेस असेसमेंट स्कीम भी टैक्सपेयर्स को परेशानियों से बचा रही है। गवर्नेंस में efficiency से जुड़े ऐसे अनेक रिफॉर्म्स ने दुनिया को एक नया गवर्नेंस मॉडल दिया है।

साथियों,

पिछले 10-11 साल में भारत हर सेक्टर में बदला है, हर क्षेत्र में आगे बढ़ा है। और एक बड़ा बदलाव सोच का आया है। आज़ादी के बाद के अनेक दशकों तक, भारत में ऐसी सोच को बढ़ावा दिया गया, जिसमें सिर्फ विदेशी को ही बेहतर माना गया। दुकान में भी कुछ खरीदने जाओ, तो दुकानदार के पहले बोल यही होते थे – भाई साहब लीजिए ना, ये तो इंपोर्टेड है ! आज स्थिति बदल गई है। आज लोग सामने से पूछते हैं- भाई, मेड इन इंडिया है या नहीं है?

साथियों,

आज हम भारत की मैन्युफैक्चरिंग एक्सीलेंस का एक नया रूप देख रहे हैं। अभी 3-4 दिन पहले ही एक न्यूज आई है कि भारत ने अपनी पहली MRI मशीन बना ली है। अब सोचिए, इतने दशकों तक हमारे यहां स्वदेशी MRI मशीन ही नहीं थी। अब मेड इन इंडिया MRI मशीन होगी तो जांच की कीमत भी बहुत कम हो जाएगी।

|

साथियों,

आत्मनिर्भर भारत और मेक इन इंडिया अभियान ने, देश के मैन्युफैक्चरिंग सेक्टर को एक नई ऊर्जा दी है। पहले दुनिया भारत को ग्लोबल मार्केट कहती थी, आज वही दुनिया, भारत को एक बड़े Manufacturing Hub के रूप में देख रही है। ये सक्सेस कितनी बड़ी है, इसके उदाहरण आपको हर सेक्टर में मिलेंगे। जैसे हमारी मोबाइल फोन इंडस्ट्री है। 2014-15 में हमारा एक्सपोर्ट, वन बिलियन डॉलर तक भी नहीं था। लेकिन एक दशक में, हम ट्वेंटी बिलियन डॉलर के फिगर से भी आगे निकल चुके हैं। आज भारत ग्लोबल टेलिकॉम और नेटवर्किंग इंडस्ट्री का एक पावर सेंटर बनता जा रहा है। Automotive Sector की Success से भी आप अच्छी तरह परिचित हैं। इससे जुड़े Components के एक्सपोर्ट में भी भारत एक नई पहचान बना रहा है। पहले हम बहुत बड़ी मात्रा में मोटर-साइकल पार्ट्स इंपोर्ट करते थे। लेकिन आज भारत में बने पार्ट्स UAE और जर्मनी जैसे अनेक देशों तक पहुंच रहे हैं। सोलर एनर्जी सेक्टर ने भी सफलता के नए आयाम गढ़े हैं। हमारे सोलर सेल्स, सोलर मॉड्यूल का इंपोर्ट कम हो रहा है और एक्सपोर्ट्स 23 गुना तक बढ़ गए हैं। बीते एक दशक में हमारा डिफेंस एक्सपोर्ट भी 21 गुना बढ़ा है। ये सारी अचीवमेंट्स, देश की मैन्युफैक्चरिंग इकोनॉमी की ताकत को दिखाती है। ये दिखाती है कि भारत में कैसे हर सेक्टर में नई जॉब्स भी क्रिएट हो रही हैं।

साथियों,

TV9 की इस समिट में, विस्तार से चर्चा होगी, अनेक विषयों पर मंथन होगा। आज हम जो भी सोचेंगे, जिस भी विजन पर आगे बढ़ेंगे, वो हमारे आने वाले कल को, देश के भविष्य को डिजाइन करेगा। पिछली शताब्दी के इसी दशक में, भारत ने एक नई ऊर्जा के साथ आजादी के लिए नई यात्रा शुरू की थी। और हमने 1947 में आजादी हासिल करके भी दिखाई। अब इस दशक में हम विकसित भारत के लक्ष्य के लिए चल रहे हैं। और हमें 2047 तक विकसित भारत का सपना जरूर पूरा करना है। और जैसा मैंने लाल किले से कहा है, इसमें सबका प्रयास आवश्यक है। इस समिट का आयोजन कर, TV9 ने भी अपनी तरफ से एक positive initiative लिया है। एक बार फिर आप सभी को इस समिट की सफलता के लिए मेरी ढेर सारी शुभकामनाएं हैं।

मैं TV9 को विशेष रूप से बधाई दूंगा, क्योंकि पहले भी मीडिया हाउस समिट करते रहे हैं, लेकिन ज्यादातर एक छोटे से फाइव स्टार होटल के कमरे में, वो समिट होती थी और बोलने वाले भी वही, सुनने वाले भी वही, कमरा भी वही। TV9 ने इस परंपरा को तोड़ा और ये जो मॉडल प्लेस किया है, 2 साल के भीतर-भीतर देख लेना, सभी मीडिया हाउस को यही करना पड़ेगा। यानी TV9 Thinks Today वो बाकियों के लिए रास्ता खोल देगा। मैं इस प्रयास के लिए बहुत-बहुत अभिनंदन करता हूं, आपकी पूरी टीम को, और सबसे बड़ी खुशी की बात है कि आपने इस इवेंट को एक मीडिया हाउस की भलाई के लिए नहीं, देश की भलाई के लिए आपने उसकी रचना की। 50,000 से ज्यादा नौजवानों के साथ एक मिशन मोड में बातचीत करना, उनको जोड़ना, उनको मिशन के साथ जोड़ना और उसमें से जो बच्चे सिलेक्ट होकर के आए, उनकी आगे की ट्रेनिंग की चिंता करना, ये अपने आप में बहुत अद्भुत काम है। मैं आपको बहुत बधाई देता हूं। जिन नौजवानों से मुझे यहां फोटो निकलवाने का मौका मिला है, मुझे भी खुशी हुई कि देश के होनहार लोगों के साथ, मैं अपनी फोटो निकलवा पाया। मैं इसे अपना सौभाग्य मानता हूं दोस्तों कि आपके साथ मेरी फोटो आज निकली है। और मुझे पक्का विश्वास है कि सारी युवा पीढ़ी, जो मुझे दिख रही है, 2047 में जब देश विकसित भारत बनेगा, सबसे ज्यादा बेनिफिशियरी आप लोग हैं, क्योंकि आप उम्र के उस पड़ाव पर होंगे, जब भारत विकसित होगा, आपके लिए मौज ही मौज है। आपको बहुत-बहुत शुभकामनाएं।

धन्यवाद।