Quoteನಮ್ಮ ಎಲ್ಲ ಆಟಗಾರರಿಗೆ ನಮ್ಮ ಶುಭಾಶಯಗಳನ್ನು ತಿಳಿಸಿ ಅವರನ್ನು ಪ್ರೋತ್ಸಾಹಿಸೋಣ: ಪ್ರಧಾನಿ ಮೋದಿ
Quoteಕಾರ್ಗಿಲ್ ಯುದ್ಧವು ಭಾರತೀಯ ಪಡೆಗಳ ಶೌರ್ಯ ಮತ್ತು ಸಂಯಮದ ಸಂಕೇತವಾಗಿದೆ, ಇದು ಇಡೀ ಜಗತ್ತು ಸಾಕ್ಷಿಯಾಗಿದೆ: ಪ್ರಧಾನಿ ಮೋದಿ
Quoteಅಮೃತ್ ಮಹೋತ್ಸವ್ 'ಸರ್ಕಾರದ ಅಥವಾ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದು ಭಾರತದ ಜನರ ಕಾರ್ಯಕ್ರಮ: ಪ್ರಧಾನಿ ಮೋದಿ
Quote#MyHandloomMyPride: ಖಾದಿ ಮತ್ತು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ನಾಗರಿಕರಲ್ಲಿ ಪ್ರಧಾನಿ ಮೋದಿ ಮನವಿ
Quoteಮನ್ ಕಿ ಬಾತ್ 'ಸಕಾರಾತ್ಮಕತೆ ಮತ್ತು ಸೂಕ್ಷ್ಮತೆಯನ್ನು ಹೊಂದಿದೆ. ಇದು ಸಾಮೂಹಿಕ ಪಾತ್ರವನ್ನು ಹೊಂದಿದೆ: ಪ್ರಧಾನಿ ಮೋದಿ
Quoteಮನ್ ಕಿ ಬಾತ್‌ಗೆ ಸುಮಾರು 75% ಸಲಹೆಗಳು 35 ವರ್ಷದೊಳಗಿನವರು ಎಂದು ತಿಳಿದಿರುವುದು ಸಂತೋಷವಾಗಿದೆ: ಪ್ರಧಾನಿ ಮೋದಿ
Quoteಪ್ರತಿ ಹನಿ ನೀರನ್ನು ಉಳಿಸುವುದು, ಯಾವುದೇ ರೀತಿಯ ನೀರು ವ್ಯರ್ಥವಾಗುವುದನ್ನು ತಡೆಯುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು: ಪ್ರಧಾನಿ ಮೋದಿ

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ!

ಎರಡು ದಿನಗಳ ಹಿಂದೆ ಕೆಲವು ಅದ್ಭುತ ಚಿತ್ರಗಳು, ಕೆಲವು ಅಚ್ಚಳಿಯದ ನೆನಪುಗಳು, ಈಗಲೂ ನನ್ನ ಕಣ್ಣ ಮುಂದೆ ಅಚಲವಾಗಿವೆ. ಆದ್ದರಿಂದ, ಈ ಬಾರಿಯ ಮನದ ಮಾತನ್ನು ಆ ಕ್ಷಣಗಳೊಂದಿಗೆ ಆರಂಭಿಸೋಣ. Tokyo Olympics ನಲ್ಲಿ ಭಾರತೀಯ ಕ್ರೀಡಾಳಗಳು ತ್ರಿವರ್ಣ ಧ್ವಜವನ್ನು ಹಿಡಿದು ಪಥ ಸಂಚಲನದಲ್ಲಿ ಭಾಗವಹಿಸುವುದನ್ನು ನೋಡಿ ನಾನು ಮಾತ್ರವಲ್ಲ ಸಂಪೂರ್ಣ ದೇಶ ಪುಳಕಿತಗೊಂಡಿತು. ಸಂಪೂರ್ಣ ರಾಷ್ಟ್ರ ಒಗ್ಗೂಡಿ ಈ ಯೋಧರಿಗೆ

ವಿಜಯೀ ಭವ ವಿಜಯೀ ಭವ

ಎಂದು ಹೇಳಿದಂತಿತ್ತು.  ಈ ಕ್ರೀಡಾಳುಗಳು ಭಾರತದಿಂದ ಹೊರಡುತ್ತಿದ್ದಾಗ ನನಗೆ ಅವರೊಂದಿಗೆ ಮಾತನಾಡುವ ಮತ್ತು ಅವರ ಬಗ್ಗೆ ತಿಳಿದುಕೊಳ್ಳುವ ಮತ್ತು ದೇಶಕ್ಕೆ ಈ ಬಗ್ಗೆ ತಿಳಿಸುವ ಅವಕಾಶ ಸಿಕ್ಕಿತ್ತು. ಈ ಕ್ರೀಡಾಳುಗಳು ಜೀವನದ ಅನೇಕ ಸವಾಲುಗಳನ್ನು ಎದುರಿಸುತ್ತಾ ಇಲ್ಲಿಗೆ ತಲುಪಿದ್ದಾರೆ. ಇಂದು ಅವರ ಬಳಿ ನಿಮ್ಮ ಪ್ರೀತಿ ಮತ್ತು ಸಹಕಾರದ ಶಕ್ತಿಯಿದೆ – ಆದ್ದರಿಂದ ಬನ್ನಿ ಜೊತೆಗೂಡಿ ನಮ್ಮ ಸ್ಪರ್ಧಾಳುಗಳಿಗೆ ಶುಭ ಹಾರೈಸೋಣ ಮತ್ತು ಅವರಿಗೆ ಸ್ಪೂರ್ತಿ ತುಂಬೋಣ. ಸಾಮಾಜಿಕ ಜಾಲತಾಣದಲ್ಲಿ ಒಲಿಂಪಿಕ್ ಕ್ರೀಡಾಳುಗಳಿಗೆ ಪ್ರೋತ್ಸಾಹಿಸಲು ನಮ್ಮ Victory Punch Campaign ಆರಂಭವಾಗಿದೆ. ನೀವು ನಿಮ್ಮ ತಂಡದೊಂದಿಗೆ ನಿಮ್ಮ Victory Punch share ಮಾಡಿ ಮತ್ತು ಭಾರತವನ್ನು ಪ್ರೋತ್ಸಾಹಿಸಿ.

ಸ್ನೇಹಿತರೆ, ಯಾರು ದೇಶಕ್ಕಾಗಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುತ್ತಾರೋ ಅವರ ಬಗ್ಗೆ ಮನಸ್ಸು ಗೌರವ, ಹೆಮ್ಮೆಯಿಂದ ತುಂಬಿ ಹೋಗುವುದು ಸಹಜ. ದೇಶಭಕ್ತಿಯ  ಭಾವನೆ ನಮ್ಮನ್ನು ಒಗ್ಗೂಡಿಸುತ್ತದೆ. ನಾಳೆ ಅಂದರೆ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವೂ ಹೌದು. ಕಾರ್ಗಿಲ್ ಯುದ್ಧ ಇಡೀ ವಿಶ್ವವೇ ಕಂಡಂತಹ ಭಾರತೀಯ ಸೇನೆಯ ಶೌರ್ಯ ಮತ್ತು ಸಂಯಮದ ಪ್ರತೀಕವಾಗಿದೆ. ಈ ಬಾರಿ ಈ ಗೌರವಯುತ ದಿನವನ್ನು ಅಮೃತಮಹೋತ್ಸವದ ಸಂದರ್ಭದಲ್ಲಿಯೇ ಆಚರಿಸಲಾಗುವುದು. ಆದ್ದರಿಂದ ಇದು ಮತ್ತಷ್ಟು ವಿಶೇಷವೆನಿಸುತ್ತದೆ. ನೀವು ರೋಮಾಂಚಕಾರಿ ಕಾರ್ಗಿಲ್ ಯುದ್ಧದ ಕಥನವನ್ನು ಖಂಡಿತ ಓದಿರಿ ಎಂದು ನಾನು ಬಯಸುತ್ತೇನೆ. ಕಾರ್ಗಿಲ್ ವೀರರಿಗೆ ನಾವೆಲ್ಲ ನಮಿಸೋಣ.  

ಸ್ನೇಹಿತರೆ, ಈ ಬಾರಿ ಅಗಸ್ಟ್ 15 ರಂದು ದೇಶ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಅಡಿಯಿರಿಸುತ್ತಿದೆ. ದೇಶ ದಶಕಗಳವರೆಗೆ ನಿರೀಕ್ಷಿಸಿದಂತಹ ಸ್ವಾತಂತ್ರ್ಯದ 75 ನೇ ಸಂಭ್ರಮದ ವರ್ಷವನ್ನು ನಾವು ಆಚರಿಸುತ್ತಿರುವುದು ನಮ್ಮ ಸೌಭಾಗ್ಯವೇ ಆಗಿದೆ. ಸ್ವಾತಂತ್ರ್ಯದ 75 ನೇ ಸಂಭ್ರಮಾಚರಣೆಗೆ ಮಾರ್ಚ್ 12 ರಂದು ಸಾಬರಮತಿಯ ಬಾಪು ಅವರ ಆಶ್ರಮದಿಂದ ಚಾಲನೆ ನೀಡಲಾಗಿತ್ತು ಎಂಬುದು ನಿಮಗೆ ನೆನಪಿರಬಹುದು. ಇದೇ ದಿನದಂದು ಬಾಪು ಅವರ ದಾಂಡಿ ಯಾತ್ರೆಯ ಆರಂಭದ ನೆನಪನ್ನೂ ಪುನರುಜ್ಜೀವನಗೊಳಿಸಲಾಗಿತ್ತು. ಅಂದಿನಿಂದ ಜಮ್ಮು ಕಾಶ್ಮೀರದಿಂದ ಪುದುಚೇರಿವರೆಗೆ ಮತ್ತು ಗುಜರಾತ್ ನಿಂದ ಈಶಾನ್ಯ ಭಾರತದವರೆಗೆ ದೇಶಾದ್ಯಂತ ಅಮೃತ ಮಹೋತ್ಸವ ಸಂಬಂಧಿತ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವೊಂದು ಘಟನೆಗಳು ಮತ್ತು ಸ್ವಾತಂತ್ರ್ಯ ಯೋಧರ ಕೊಡುಗೆ ಅಪಾರವಾಗಿದ್ದರೂ ಅವರ ಬಗ್ಗೆ, ಆ ಸ್ಥಳದ ಬಗ್ಗೆ ಅಷ್ಟೊಂದು ಚರ್ಚೆಯಾಗಿಲ್ಲ. ಇಂದು ಜನರು ಆ ಕುರಿತು ತಿಳಿಯುತ್ತಿದ್ದಾರೆ.  ಈಗ ಮೊಯಿರಾಂಗ್ ಡೆ ಯನ್ನೇ ತೆಗೆದುಕೊಳ್ಳಿ. ಇದು ಮಣಿಪುರದ ಒಂದು ಪುಟ್ಟ ಗ್ರಾಮ. ಹಿಂದೊಮ್ಮೆ ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಅಂದರೆ ಐ ಎನ್ ಎ ಯ ಒಂದು ಪ್ರಮುಖ ತಾಣವಾಗಿತ್ತು. ಸ್ವಾತಂತ್ರ್ಯಕ್ಕೂ ಮೊದಲು ಇಲ್ಲಿ ಐ ಎನ್ ಎ ಯ ಕರ್ನಲ್ ಶೌಕತ್ ಮಲ್ಲಿಕ್ ಅವರು ಬಾವುಟ ಹಾರಿಸಿದ್ದರು. ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ 14 ಏಪ್ರಿಲ್ ಗೆ ಅದೇ ಮೊಯಿರಾಂಗ್ ನಲ್ಲಿ ಮತ್ತೊಮ್ಮೆ ತ್ರಿವರ್ಣ ಧ್ವಜ ಹಾರಿಸಲಾಯಿತು. ಹೀಗೆ ಅಮೃತ ಮಹೋತ್ಸವದಲ್ಲಿ ದೇಶ ಸ್ಮರಿಸುತ್ತಿರುವ ಅದೆಷ್ಟೋ ಸ್ವಾತಂತ್ರ್ಯ ಸೇನಾನಿಗಳು ಮತ್ತು ಮಹಾಪುರುಷರಿದ್ದಾರೆ. ಸರ್ಕಾರ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳ ಪರವಾಗಿ ಕೂಡಾ ನಿರಂತರವಾಗಿ ಇಂಥ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಥ ಕಾರ್ಯಕ್ರಮವನ್ನು ಅಗಸ್ಟ್ 15 ರಂದು ಆಯೋಜಿಸಲಾಗುತ್ತಿದೆ. ರಾಷ್ಟ್ರಗೀತೆಗೆ ಸಂಬಂಧಿಸಿದ ಒಂದು ಪ್ರಯತ್ನ ಇದಾಗಿದೆ. ಅಂದು ಹೆಚ್ಚೆಚ್ಚು ಭಾರತೀಯರು ಒಗ್ಗೂಡಿ ರಾಷ್ಟ್ರ ಗೀತೆಯನ್ನು ಹಾಡಲಿ ಎಂಬುದು ಸಾಂಸ್ಕೃತಿಕ ಸಚಿವಾಲಯದ ಪ್ರಯತ್ನವಾಗಿದೆ, ಇದಕ್ಕೆಂದು ಒಂದು ಜಾಲತಾಣವನ್ನು ಆರಂಭಿಸಲಾಗಿದೆ –rashtragana.in. ಈ  ಜಾಲತಾಣದ ಮೂಲಕ ನೀವು ರಾಷ್ಟ್ರಗೀತೆ ಹಾಡಿರುವುದನ್ನು ಧ್ವನಿಮುದ್ರಿಸಬಹುದಾಗಿದೆ ಮತ್ತು ಈ ಅಭಿಯಾನದೊಂದಿಗೆ ಕೈಜೋಡಿಸಬಹುದಾಗಿದೆ. ಈ ವಿಶಿಷ್ಟ ಅಭಿಯಾನದಲ್ಲಿ ನೀವು ಖಂಡಿತ ಪಾಲ್ಗೊಳ್ಳುತ್ತೀರೆಂದು ನನಗೆ ವಿಶ್ವಾಸವಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಬಹಳಷ್ಟು ಕಾರ್ಯಕ್ರಮಗಳು ಮತ್ತು ಬಹಳಷ್ಟು ಪ್ರಯತ್ನಗಳು ನಿಮಗೆ ನೋಡಲು ಲಭಿಸುತ್ತವೆ. ‘ಅಮೃತ ಮಹೋತ್ಸವ’ ಯಾವುದೇ ಸರ್ಕಾರಿ ಕಾರ್ಯಕ್ರಮ ಅಲ್ಲ. ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದು ಕೋಟ್ಯಾಂತರ ಭಾರತೀಯರ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬ ಸ್ವತಂತ್ರ ಮತ್ತು ಕೃತಜ್ಞ ಭಾರತೀಯ ಸ್ವಾತಂತ್ರ್ಯ ಸೇನಾನಿಗಳಿಗೆ ಸಲ್ಲಿಸುವ ನಮನವಾಗಿದೆ ಮತ್ತು ಈ ಉತ್ಸವದ ಮೂಲಭಾವನೆಯ ವಿಸ್ತಾರ, ಬಹಳ ವಿಶಾಲವಾಗಿದೆ – ಅದೇನೆಂದರೆ ನಮ್ಮ ಸ್ವಾತಂತ್ರ್ಯ ಯೋಧರು ನಡೆದ ಪಥದಲ್ಲಿ ನಡೆಯುವುದು ಮತ್ತು ಅವರ ಕನಸಿನ ಭಾರತ ನಿರ್ಮಿಸುವುದು. ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ಹೇಗೆ ಒಗ್ಗೂಡಿದ್ದರೋ ಹಾಗೆಯೇ ದೇಶದ ಅಭಿವೃದ್ಧಿಗೆ ನಾವೆಲ್ಲ ಒಗ್ಗೂಡಬೇಕಿದೆ. ದೇಶಕ್ಕಾಗಿಯೇ ಜೀವಿಸಬೇಕು, ದೇಶಕ್ಕಾಗಿ ದುಡಿಯಬೇಕು ಮತ್ತು ಇದರಲ್ಲಿ ಸಣ್ಣ ಪುಟ್ಟ ಪ್ರಯತ್ನಗಳು ಬಹುದೊಡ್ಡ ಪ್ರತಿಫಲ ನೀಡುತ್ತವೆ. ನಿತ್ಯದ ಕೆಲಸ ಕಾರ್ಯಗಳೊಂದಿಗೆ ನಾವು ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬಹುದು. ಉದಾಹರಣಗೆ Vocal for Local. ನಮ್ಮ ದೇಶದ ಸ್ಥಳೀಯ ಉದ್ಯಮಿಗಳು, ಕಲಾವಿದರು, ಶಿಲ್ಪ ಕಲಾವಿದರು, ನೇಕಾರರನ್ನು ಪ್ರೋತ್ಸಾಹಿಸುವುದು ನಮ್ಮ ಸಹಜ ಸ್ವಭಾವವಾಗಬೇಕು. ಅಗಸ್ಟ್ 7 ರಂದು ಆಯೋಜಿಸಲಾಗಿರುವ National Handloom Day ಯಂದು ನಾವು ಇಂಥ ಪ್ರಯತ್ನ ಮಾಡಬಹುದಾಗಿದೆ. National Handloom Day ಗೆ  ಐತಿಹಾಸಿಕ ಹಿನ್ನೆಲೆಯಿದೆ. ಈ ದಿನದಂದು 1905 ರಲ್ಲಿ ಸ್ವದೇಶಿ ಚಳುವಳಿ ಆರಂಭವಾಗಿತ್ತು. 

ಸ್ನೇಹಿತರೆ, ನಮ್ಮ ದೇಶದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೈಮಗ್ಗ, ಉಪಜೀವನದ ಬಹುದೊಡ್ಡ ಸಾಧನವಾಗಿದೆ. ಇದು ಲಕ್ಷಾಂತರ ಮಹಿಳೆಯರು, ನೇಕಾರರು,  ಲಕ್ಷಾಂತರ ಶಿಲ್ಪಿಗಳು ಒಗ್ಗೂಡಿದಂತಹ ಕ್ಷೇತ್ರವಾಗಿದೆ. ನಿಮ್ಮ ಸಣ್ಣ ಪುಟ್ಟ ಪ್ರಯತ್ನಗಳು, ನೇಕಾರರಲ್ಲಿ ಹೊಸ ಆಶಾಭಾವವನ್ನು ಹುಟ್ಟು ಹಾಕುತ್ತದೆ. ನೀವು ಸ್ವತಃ ಏನಾದರೂ ಖರೀದಿಸಿ ಮತ್ತು ಇತರರನ್ನೂ ಪ್ರೋತ್ಸಾಹಿಸಿ. ಸೋದರರೆ, ನಾವು ಸ್ವಾತಂತ್ರ್ಯದ 75 ನೇ ಸಂಭ್ರಮಾಚರಣೆಯಲ್ಲಿರುವಾಗ ಇಷ್ಟಾದರೂ ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. 2014 ರ ನಂತರ ಮನದ ಮಾತಿನಲ್ಲಿ ನಾವು ಖಾದಿ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು. ಇಂದು ದೇಶದಲ್ಲಿ ಖಾದಿ ವ್ಯಾಪಾರ ಬಹಳಷ್ಟು ಹೆಚ್ಚಾಗಿರುವುದು ನಿಮ್ಮದೇ ಪ್ರಯತ್ನದಿಂದಾಗಿದೆ. ಖಾದಿಯ ಒಂದು ಮಳಿಗೆಯಿಂದ ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ವ್ಯಾಪಾರವಾಗಬಲ್ಲದು ಎಂದು ಯಾರಾದರೂ ಊಹಿಸಿದ್ದರೆ! ಆದರೆ ನೀವು ಇದನ್ನು ಮಾಡಿ ತೋರಿದಿರಿ. ನೀವು ಎಲ್ಲಿಯೇ ಆಗಲಿ ಖಾದಿ ಖರೀದಿಸುತ್ತೀರಿ ಎಂದರೆ, ಅದರ ಲಾಭ ನಮ್ಮ ನೇಕಾರ ಸೋದರ ಸೋದರಿಯರಿಗೆ ಲಭಿಸುತ್ತದೆ. ಹಾಗಾಗಿ ಖಾದಿ ಖರೀದಿ ಒಂದು ರೀತಿಯಲ್ಲಿ ಜನಸೇವೆಯೂ ಆಗಿದೆ ಮತ್ತು ದೇಶ ಸೇವೆಯೂ ಆಗಿದೆ. ಸೋದರ ಸೋದರಿಯರೇ ಗ್ರಾಮೀಣ ಭಾಗದಲ್ಲಿ ಸಿದ್ಧಗೊಳ್ಳುವ ಕೈಮಗ್ಗದ ಉತ್ಪನ್ನಗಳನ್ನು ಖಂಡಿತ ಖರೀದಿಸಿ ಮತ್ತು ಅವನ್ನು #MyHandloomMyPride ನಲ್ಲಿ ಶೇರ್ ಮಾಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ.

ಸ್ನೇಹಿತರೇ, ಸ್ವಾತಂತ್ರ್ಯ ಚಳುವಳಿ ಮತ್ತು ಖಾದಿಯ ವಿಷಯ ಬಂದಾಗ, ಪೂಜ್ಯ ಬಾಪೂ ಅವರ ನೆನಪು ಬರುವುದು ಸಹಜ –ಯಾವರೀತಿ, ಬಾಪೂ ಅವರ ನೇತೃತ್ವದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳುವಳಿ ನಡೆಯಿತೋ, ಅಂತೆಯೇ ಇಂದು ಪ್ರತಿಯೊಬ್ಬ ಭಾರತೀಯನೂ ‘ಭಾರತವನ್ನು ಒಂದುಗೂಡಿಸಿ’ ಚಳುವಳಿಯ ನೇತೃತ್ವ ವಹಿಸಬೇಕಾಗಿದೆ. ವೈವಿಧ್ಯತೆಗಳಿಂದ ನಮ್ಮ ಭಾರತವನ್ನು ಒಂದುಗೂಡಿಸುವಂತಹ ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾದರೆ ಬನ್ನಿ, ದೇಶವೇ ನಮ್ಮ ಅತ್ಯಂತ ದೊಡ್ಡ ನಂಬಿಕೆ ಅತ್ಯಂತ ದೊಡ್ಡ ಆದ್ಯತೆ ಎಂಬ ಈ ಅಮೃತ ಸಂಕಲ್ಪವನ್ನು‘ಅಮೃತ ಮಹೋತ್ಸವದಲ್ಲಿ’ ಮಾಡೋಣ.“Nation First, Always First”ಮಂತ್ರದೊಂದಿಗೆ ನಾವು ಮುಂದೆ ಸಾಗಬೇಕಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತು ಆಲಿಸುತ್ತಿರುವ ನನ್ನ ಯುವ ಸ್ನೇಹಿತರಿಗೆ ವಿಶೇಷ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ. ಈಗ ಕೆಲವು ದಿನಗಳ ಹಿಂದೆಯಷ್ಟೇ, ಮೈ ಗೌ ಪರವಾಗಿ ಮನದ ಮಾತು ಶ್ರೋತೃಗಳ ಬಗ್ಗೆ ಒಂದು ಅಧ್ಯಯನ ನಡೆಸಲಾಯಿತು. ಮನದ ಮಾತಿಗಾಗಿ ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರ ಪೈಕಿ ಪ್ರಮುಖವಾಗಿ ಇರುವವರು ಯಾರು ಎಂದು ನೋಡಲಾಯಿತು. ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರಲ್ಲಿ ಸುಮಾರು ಶೇಕಡಾ 75 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅಧ್ಯಯನದ ನಂತರ ತಿಳಿದುಬಂದಿತು, ಅಂದರೆ, ಭಾರತದ ಯುವಶಕ್ತಿ ಮನದ ಮಾತಿಗೆ ದಾರಿ ತೋರಿಸುತ್ತಿದೆ ಎಂದಾಯಿತು. ನಾನು ಇದನ್ನು ಬಹಳ ಉತ್ತಮ ಸಂಕೇತದ ರೂಪದಲ್ಲಿ ನೋಡುತ್ತೇನೆ. ಸಕಾರಾತ್ಮಕತೆ–ಸಂವೇದನಾಶೀಲತೆ ಇರುವಂತಹ ಮಾಧ್ಯಮ ಮನ್ ಕಿ ಬಾತ್ ಆಗಿದೆ.  ಮನದ ಮಾತಿನಲ್ಲಿ ನಾವು ಸಕಾರಾತ್ಮಕ ಮಾತುಗಳನ್ನು ಆಡುತ್ತೇವೆ. ಇದರ Character collective ಆಗಿದೆ. ಸಕಾರಾತ್ಮಕ ಚಿಂತನೆಗಳು ಮತ್ತು ಸಲಹೆಗಳಿಗಾಗಿ ಭಾರತದ ಯುವಜನತೆಯ ಈ ಕ್ರಿಯಾಶೀಲತೆ ನನಗೆ ಸಂತೋಷವನ್ನುಂಟುಮಾಡುತ್ತದೆ. “ಮನದ ಮಾತು” ಮಾಧ್ಯಮದ ಮೂಲಕ ನನಗೆ ಯುವಜನತೆಯ ಮನಸ್ಸನ್ನು ಅರಿಯುವ ಅವಕಾಶ ದೊರೆತಿರುವುದು ನನಗೆ ಸಂತೋಷದ ವಿಚಾರವಾಗಿದೆ.

ಸ್ನೇಹಿತರೇ, ನಿಮ್ಮಿಂದ ದೊರೆಯುವ ಸಲಹೆ ಸೂಚನೆಗಳೇ ಮನದ ಮಾತಿನ ನಿಜವಾದ ಶಕ್ತಿಯಾಗಿದೆ. ನಿಮ್ಮ ಸಲಹೆಗಳೇ ಮನದ ಮಾತಿನ ಮೂಲಕ ಭಾರತದ ವೈವಿಧ್ಯತೆಗಳನ್ನು ತೋರಿಸುತ್ತದೆ, ಭಾರತೀಯರ ಸೇವೆ ಮತ್ತು ತ್ಯಾಗದ ಸುಗುಂಧವನ್ನು ನಾಲ್ಕೂ ದಿಕ್ಕುಗಳಲ್ಲಿ ಹರಡುತ್ತದೆ, ಶ್ರಮವಹಿಸಿ ದುಡಿಯುವ ನಮ್ಮ ಯುವಜನತೆಯ ಆವಿಷ್ಕಾರದಿಂದ ಎಲ್ಲರಿಗೂ ಪ್ರೇರಣೆ ದೊರೆಯುತ್ತದೆ.  ಮನದ ಮಾತಿನಲ್ಲಿ ನೀವು ಅನೇಕ ರೀತಿಯ ವಿಚಾರಗಳನ್ನು ಕಳುಹಿಸುತ್ತೀರಿ. ನಾವು ಎಲ್ಲದರ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಅವುಗಳಲ್ಲಿ ಬಹಳಷ್ಟು ಐಡಿಯಾಗಳನ್ನು ನಾನು ಸಂಬಂಧಿತ ಇಲಾಖೆಗಳಿಗೆ ಖಂಡಿತವಾಗಿಯೂ ಕಳುಹಿಸಿಕೊಡುತ್ತೇನೆ, ಏಕೆಂದರೆ ಅವುಗಳ ಕುರಿತು ಭವಿಷ್ಯದಲ್ಲಿ ಕೆಲಸ ಮಾಡಬಹುದಾಗಿದೆ.

ಸ್ನೇಹಿತರೆ, ನಾನು ನಿಮಗೆ “ಸಾಯಿ ಪ್ರಣೀತ್” ಅವರ ಪ್ರಯತ್ನಗಳ ಬಗ್ಗೆ ಹೇಳಲು ಬಯಸುತ್ತೇನೆ. ಸಾಯಿ ಪ್ರಣೀತ್ ಅವರು ಓರ್ವ ಸಾಫ್ಟ್ ವೇರ್ ಇಂಜನಿಯರ್ ಆಗಿದ್ದಾರೆ ಇವರು ಆಂಧ್ರಪ್ರದೇಶದ ನಿವಾಸಿಯಾಗಿದ್ದಾರೆ. ಕಳೆದ ವರ್ಷ ಅಲ್ಲಿ ಪ್ರತಿಕೂಲ ಹವಾಮಾನದ ಹೊಡೆತದಿಂದಾಗಿ ರೈತರಿಗೆ ಬಹಳಷ್ಟು ನಷ್ಟವಾಗಿದ್ದನ್ನು ಇವರು ನೋಡಿದರು. ಹವಾಮಾನ ವಿಜ್ಞಾನದಲ್ಲಿ ಇವರಿಗೆ ಬಹಳ ವರ್ಷಗಳಿಂದ ಆಸಕ್ತಿ ಇತ್ತು. ಆದ್ದರಿಂದ ಇವರು ತಮ್ಮ ಆಸಕ್ತಿ ಮತ್ತು ಪ್ರತಿಭೆಯನ್ನು ರೈತರ ಒಳಿತಿಗಾಗಿ ಉಪಯೋಗಿಸಬೇಕೆಂದು ನಿರ್ಧಾರ ಮಾಡಿದರು. ಅವರು ಈಗ ಬೇರೇ ಬೇರೆ ದತ್ತಾಂಶ ಮೂಲಗಳಿಂದ ಹವಾಮಾನ ದತ್ತಾಂಶ ಖರೀದಿಸುತ್ತಾರೆ, ಅದನ್ನು ವಿಶ್ಲೇಷಿಸುತ್ತಾರೆ ಮತ್ತು ಸ್ಥಳೀಯ ಭಾಷೆಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಅಗತ್ಯ ಮಾಹಿತಿಯನ್ನು ತಲುಪಿಸುತ್ತಾರೆ. ಹವಾಮಾನ ಅಪ್ಡೇಟ್ ಗಳು ಮಾತ್ರವಲ್ಲದೇ, ಪ್ರಣೀತ್ ಅವರು ವಿವಿಧ ವಾತಾವರಣ ಪರಿಸ್ಥಿತಿಗಳಲ್ಲಿ ಜನರು ಏನು ಮಾಡಬೇಕೆಂಬ ಕುರಿತು ಮಾರ್ಗದರ್ಶನ ಕೂಡಾ ನೀಡುತ್ತಾರೆ. ವಿಶೇಷವಾಗಿ ಪ್ರವಾಹದಿಂದ ರಕ್ಷಿಸಿಕೊಳ್ಳಲು ಅಥವಾ ಚಂಡಮಾರುತ ಅಪ್ಪಳಿಸಿದಾಗ ಅಥವಾ ಸಿಡಿಲು ಬಡಿದಾಗ ಯಾವರೀತಿ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂಬ ಕುರಿತು ಇವರು ಜನರಿಗೆ ತಿಳಿಸುತ್ತಿರುತ್ತಾರೆ.

ಸ್ನೇಹಿತರೇ, ಒಂದೆಡೆ ಈ ಯುವ ಸಾಫ್ಟ್ ವೇರ್ ಇಂಜಿನಿಯರ್ ನ  ಪ್ರಯತ್ನ ಮನಮುಟ್ಟುವಂತಿದ್ದರೆ ಮತ್ತೊಂದೆಡೆ ನಮ್ಮ ಇನ್ನೊಬ್ಬ ಸ್ನೇಹಿತ ಮಾಡಿರುವ ತಂತ್ರಜ್ಞಾನದ ಬಳಕೆ ಕೂಡಾ ನಿಮ್ಮನ್ನು ಆಶ್ಟರ್ಯಚಕಿತರನ್ನಾಗಿಸುತ್ತದೆ. ಒಡಿಶ್ಶಾದ ಸಂಬಲ್ಪುರ್ ಜಿಲ್ಲೆಯ ಒಂದು ಗ್ರಾಮದ ನಿವಾಸಿ ಶ್ರೀಮಾನ್ ಇಸಾಕ್ ಮುಂಡಾ ಅವರೇ ಈ ಸ್ನೇಹಿತ. ಇಸಾಕ್ ಅವರು ಮೊದಲು ದಿನಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಆದರೆ ಅವರು ಈಗ ಒಂದು ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದಾರೆ. ತಮ್ಮ ಯೂಟ್ಯೂಬ್ ವಾಹಿನಿಯ ಮೂಲಕ ಅವರು ಅಪಾರ ಹಣ ಗಳಿಸುತ್ತಿದ್ದಾರೆ. ಅವರು ತಮ್ಮ ವಿಡಿಯೋಗಳಲ್ಲಿ ಸ್ಥಳೀಯ ತಿನಿಸು, ಸಾಂಪ್ರದಾಯಿಕ ಅಡುಗೆ ಮಾಡುವ ವಿಧಾನ, ತಮ್ಮ ಗ್ರಾಮ, ತಮ್ಮ ಜೀವನ ಶೈಲಿ, ಕುಟುಂಬ ಮತ್ತು ತಿಂಡಿ-ತಿನಿಸುಗಳ ಹವ್ಯಾಸವನ್ನು ಪ್ರಮುಖವಾಗಿ ತಿಳಿಸುತ್ತಾರೆ. ಒಡಿಶ್ಸಾದ ಪ್ರಸಿದ್ಧ ತಿನಿಸು ಪಖಾಲ್ ಸಂಬಂಧಿತ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದಾಗ, ಓರ್ವ ಯೂಟ್ಯೂಬರ್ ರೂಪದಲ್ಲಿ ಅವರ ಪಯಣ 2020 ರ ಮಾರ್ಚ್ ತಿಂಗಳಲ್ಲಿ ಆರಂಭವಾಯಿತು, ಆಗಿನಿಂದ ಅವರು ನೂರಾರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ಈ ಪ್ರಯತ್ನ ಅನೇಕ ಕಾರಣಗಳಿಂದಾಗಿ ವಿಭಿನ್ನವೆನಿಸಿದೆ. ಇದಕ್ಕೆ ವಿಶೇಷ ಕಾರಣವೆಂದರೆ ಇದರಿಂದಾಗಿ ನಗರಗಳಲ್ಲಿ ವಾಸಿಸುವ ಜನರಿಗೆ ತಮಗೆ ಸ್ವಲ್ಪ ಮಾತ್ರವೂ ತಿಳಿದಿರದ ಆ ಜೀವನ ಶೈಲಿ ನೋಡುವ ಅವಕಾಶ ದೊರೆಯುತ್ತದೆ. ಇಸಾಕ್ ಮುಂಡಾ ಅವರು ಸಂಸ್ಕೃತಿ ಮತ್ತು ಪಾಕಪದ್ಧತಿ ಎರಡನ್ನೂ ಸಮಾನವಾಗಿ ಬೆರೆಸಿ ಸೆಲೆಬ್ರೇಟ್ ಮಾಡುತ್ತಿದ್ದಾರೆ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿಯನ್ನೂ ನೀಡುತ್ತಿದ್ದಾರೆ.  

ಸ್ನೇಹಿತರೇ, ನಾವು ತಂತ್ರಜ್ಞಾನ ಕುರಿತು ಚರ್ಚಿಸುತ್ತಿರುವಾಗ, ಮತ್ತೊಂದು ಆಸಕ್ತಿದಾಯಕ ವಿಷಯ ಹೇಳಲು ನಾನು ಬಯಸುತ್ತೇನೆ. ಇತ್ತೀಚೆಗೆ ಐಐಟಿ ಮದ್ರಾಸಿನ ವಿದ್ಯಾರ್ಥಿ ಆರಂಭಿಸಿದ ಒಂದು ಸ್ಟಾರ್ಟ್ ಅಪ್ ಕಂಪೆನಿಯು ಒಂದು 3D printed house  ಮಾಡಿರುವ ವಿಷಯ ಕುರಿತು ನೀವು ಓದಿರಬಹುದು, ನೋಡಿರಬಹುದು. 3D printing ಮಾಡಿ ಮನೆಯ ನಿರ್ಮಾಣ, ಇದು ಸಾಧ್ಯವಾಗಿದ್ದಾದರೂ ಹೇಗೆ? ವಾಸ್ತವದಲ್ಲಿ ಈ start-up ಎಲ್ಲಕ್ಕಿಂತ ಮೊದಲು 3D printer ನಲ್ಲಿ ಒಂದು 3 ಆಯಾಮಗುಳುಳ್ಳ ವಿನ್ಯಾಸವನ್ನು ಫೀಡ್ ಮಾಡಿತು ಮತ್ತು ನಂತರ ವಿಶೇಷ ರೀತಿಯಲ್ಲಿ concrete ಮೂಲಕ ಒಂದರ ಮೇಲೆ ಒಂದರಂತೆ ಒಂದು 3D structure fabricate ಮಾಡಲಾಯಿತು. ದೇಶಾದ್ಯಂತ ಈ ರೀತಿಯ ಅನೇಕ ಪ್ರಯೋಗಗಳು ನಡೆಯುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಸಣ್ಣ ಸಣ್ಣ ಕಟ್ಟಡ ನಿರ್ಮಾಣಗಳಿಗೂ ಕೂಡಾ ವರ್ಷಗಳ ಸಮಯ ಹಿಡಿಯುತ್ತಿದ್ದಂತಹ ಕಾಲವೊಂದಿತ್ತು. ಆದರೆ ಈಗ ತಂತ್ರಜ್ಞಾನದ ಕಾರಣದಿಂದಾಗಿ, ಭಾರತದ ಸ್ಥಿತಿ ಬದಲಾಗುತ್ತಿದೆ. ಕೆಲವು ದಿನಗಳ ಹಿಂದೆ ನಾವು ಇಂತಹ ವಿಶ್ವದ ಆವಿಷ್ಕಾರಕ ಕಂಪೆನಿಗಳನ್ನು ಆಹ್ವಾನಿಸಲು ಒಂದು Global Housing Technology Challenge launch ಮಾಡಿದೆವು. ಇದು ದೇಶದಲ್ಲಿ ತನ್ನದೇ ಆದ ಬೇರೆ ಬೇರೆ ರೀತಿಯ ವಿಶೇಷ ಪ್ರಯಾಸವಾಗಿತ್ತು, ಆದ್ದರಿಂದ ನಾವು ಇದಕ್ಕೆ Light House Projects ಎಂಬ ಹೆಸರನ್ನು ಇಟ್ಟೆವು. ಪ್ರಸಕ್ತವಾಗಿ ದೇಶದಲ್ಲಿ 6 ಬೇರೆ ಬೇರೆ ಸ್ಥಳಗಳಲ್ಲಿ Light House Projects ಗಳಲ್ಲಿ ಶೀಘ್ರಗತಿಯಲ್ಲಿ ಕೆಲಸ ನಡೆಯುತ್ತಿದೆ. ಈ Light House Projectsನಲ್ಲಿ  ನವೀನ ತಂತ್ರಜ್ಞಾನ ಮತ್ತು ಆವಿಷ್ಕಾರಾತ್ಮಕ ವಿಧಾನಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ನಿರ್ಮಾಣದ ಸಮಯಾವಧಿ ಕಡಿಮೆಯಾಗುತ್ತದೆ. ಇದರೊಂದಿಗೆ ನಿರ್ಮಾಣವಾಗುವ ಮನೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ, ಖರ್ಚು ಕಡಿಮೆ ಇರುತ್ತದೆ ಮತ್ತು ಆರಾಮದಾಯಕವಾಗಿರುತ್ತವೆ. ನಾನು ಇತ್ತೀಚೆಗೆ ಡ್ರೋನ್ ಗಳ ಮೂಲಕ ಈ ಯೋಜನೆಗಳನ್ನು ಪರಿಶೀಲಿಸಿದೆ ಮತ್ತು ಕಾರ್ಯದ ಪ್ರಗತಿಯನ್ನು ನೇರವಾಗಿ ವೀಕ್ಷಿಸಿದೆ.

ಇಂದೋರ್ ನ project ನಲ್ಲಿ ಇಟ್ಟಿಗೆ ಮತ್ತು ಮಾರ್ಟರ್ ಗೋಡೆಗಳ ಜಾಗದಲ್ಲಿ Pre-Fabricated Sandwich Panel System ನ ಉಪಯೋಗ ಮಾಡಲಾಗುತ್ತಿದೆ. ರಾಜ್ ಕೋಟ್ ನಲ್ಲಿ Light House, French Technology ನಿಂದ ತಯಾರಾಗುತ್ತಿದೆ ಇದರಲ್ಲಿ ಸುರಂಗದ ಮೂಲಕ Monolithic Concrete construction technology ಉಪಯೋಗಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ತಯಾರಿಸಲಾಗುವ ಮನೆಯು ಆಪತ್ತುಗಳನ್ನು ಎದುರಿಸಲು ಹೆಚ್ಚು ಸಮರ್ಥವಾಗಿರುತ್ತವೆ. ಚೆನ್ನೈನಲ್ಲಿ ಅಮೆರಿಕಾ ಮತ್ತು ಫಿನ್ಲ್ಯಾಂಡ್ ಗಳ ತಂತ್ರಜ್ಞಾನಗಳು, Pre-Cast Concrete System ಗಳ ಉಪಯೋಗ ಮಾಡಲಾಗುತ್ತಿದೆ. ಇದರಿಂದಾಗಿ ಮನೆಗಳು ಶೀಘ್ರವಾಗಿ ನಿರ್ಮಾಣವಾಗುತ್ತವೆ ಮತ್ತು ತಗಲುವ ವೆಚ್ಚ ಕೂಡಾ ಕಡಿಮೆ ಇರುತ್ತದೆ. ರಾಂಚಿಯಲ್ಲಿ ಜರ್ಮನಿಯ 3DConstruction System ಉಪಯೋಗಿಸಿ ಮನೆ ನಿರ್ಮಾಣವಾಗುತ್ತದೆ. ಇದರಲ್ಲಿ ಪ್ರತಿಯೊಂದು ಕೋಣೆಯನ್ನು ಭಿನ್ನವಾಗಿ ತಯಾರಿಸಲಾಗುತ್ತದೆ ಹೇಗೆಂದರೆ ಸಂಪೂರ್ಣ ನಿರ್ಮಾಣವನ್ನು ಬ್ಲಾಕ್ ಟಾಯ್ಸ್ ಜೋಡಿಸಿದ ರೀತಿಯಲ್ಲಿ ನಿರ್ಮಿಸಲಾಗುತ್ತದೆ. ಅಗರ್ತಲಾದಲ್ಲಿನ್ಯೂ ಜಿಲ್ಯಾಂಡ್ ನ ತಂತ್ರಜ್ಞಾನ ಉಪಯೋಗಿಸಿ, ಸ್ಟೀಲ್ ಫ್ರೇಮ್ ನಿಂದ ಮನೆಯನ್ನು ನಿರ್ಮಿಸಲಾಗುತ್ತದೆ ಇದು ಭಾರೀ ಭೂಕಂಪವನ್ನು ಕೂಡಾ ತಾಳಿಕೊಳ್ಳುತ್ತದೆ. ಹಾಗೆಯೇ ಲಕ್ನೋದಲ್ಲಿ ಕೆನಡಾದ ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ. ಇದರಲ್ಲಿ ಪ್ಲಾಸ್ಟರ್ ಮತ್ತು ಪೈಂಟ್ ನ ಅಗತ್ಯವಿರುವುದಿಲ್ಲ ಮತ್ತು ಮನೆಯನ್ನು ವೇಗವಾಗಿ ನಿರ್ಮಿಸಲು ಮೊದಲೆ ತಯಾರಿಸಲಾದ ಗೋಡೆಗಳನ್ನು ಉಪಯೋಗಿಸಲಾಗುತ್ತದೆ.

ಸ್ನೇಹಿತರೇ, ಇಂದು ಈ project Incubation Centres ನಂತೆ ಕೆಲಸ ಮಾಡಬೇಕೆಂದು ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಇದರಿಂದ ನಮ್ಮ Planners, Architects, Engineers ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಕುರಿತು ತಿಳಿದುಕೊಳ್ಳಬಹುದು ಮತ್ತು ಅವುಗಳನ್ನು ಪ್ರಯೋಗ ಮಾಡಿ ನೋಡಲೂ ಬಹುದು. ರಾಷ್ಟ್ರದ ಹಿತದೃಷ್ಟಿಯಿಂದ ನಮ್ಮ ಯುವಕರನ್ನು ತಂತ್ರಜ್ಞಾನದ ಹೊಸ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸಲು ನಾನು ನಾನು ಈ ಮಾತನ್ನು ವಿಶೇಷವಾಗಿ ನಮ್ಮ ಯುವ ಜನತೆಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನನ್ನ ಪ್ರಿಯ ದೇಶಬಾಂಧವರೆ, ನೀವು “To Learn is to Grow” ಎಂಬ ಇಂಗ್ಲೀಷ್ ನಾನ್ನುಡಿಯೊಂದನ್ನು ಕೇಳಿರಬಹುದು. ಅಂದರೆ ಕಲಿಕೆಯೇ ಅಭಿವೃದ್ಧಿಗೆ ಸೋಪಾನ. ನಾವು ಏನನ್ನಾದರೂ ಹೊಸತನ್ನು ಕಲಿತಾಗ ನಮಗೆ ಅಭಿವೃದ್ಧಿಯ ಹೊಸ ಮಾರ್ಗಗಳು ತೆರೆದುಕೊಳ್ಳಲಾರಂಭಿಸುತ್ತವೆ. ನಾವು ಗುಂಪಿನಿಂದ ಭಿನ್ನವಾಗಿ ಏನನ್ನಾದರೂ ಹೊಸತನ್ನು ಮಾಡುವ ಪ್ರಯತ್ನ ಮಾಡಿದಾಗಲೆಲ್ಲ ಮಾನವ ಕುಲಕ್ಕೆ ಹೊಸ ಮಾರ್ಗಗಳು ತೆರೆದುಕೊಂಡಿವೆ. ಒಂದು ನವಯುಗದ ಆರಂಭವಾಗಿದೆ. ಎಲ್ಲಿಯೇ ಹೊಸತು ಕಂಡುಬಂದಾಗ ಅದರ ಪರಿಣಾಮ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ ಎಂಬುದನ್ನು ನೀವು ನೋಡಿರಬಹದು.

ಸೇಬು -Apple ನೊಂದಿಗೆ ಸಂಬಂಧ ಕಲ್ಪಿಸುವ ಯಾವ ರಾಜ್ಯವಿದೆ ಎಂದು ನಾನು ನಿಮ್ಮನ್ನ ಕೇಳಿದರೆ, ಖಂಡಿತ ನಿಮ್ಮ ಮನದಲ್ಲಿ ಎಲ್ಲಕ್ಕಿಂತ ಮೊದಲು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದ ಹೆಸರು ಹೊಳೆಯುತ್ತದೆ. ಆದರೆ ಈ ಪಟ್ಟಿಯಲ್ಲಿ ಮಣಿಪುರವನ್ನೂ ಸೇರಿಸಿ ಎಂದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಹೊಸತೇನಾದರೂ ಮಾಡಬೇಕೆಂಬ ಹುರುಪಿನಿಂದ ಕೆಲ ಯುವಕರು ಮಣಿಪುರದಲ್ಲಿ ಇಂಥ ಸಾಹಸವನ್ನು ಮಾಡಿ ತೋರಿದ್ದಾರೆ. ಈ ಮಧ್ಯೆ ಮಣಿಪುರದ ಉಕ್ರೂಲ್ ಜಿಲ್ಲೆಯಲ್ಲಿ “ಸೇಬು ಕೃಷಿ” ವೇಗ ಪಡೆದುಕೊಂಡಿದೆ. ಇಲ್ಲಿಯ ರೈತರು ತಮ್ಮ ತೋಟಗಳಲ್ಲಿ ಸೇಬನ್ನು ಬೆಳೆಯುತ್ತಿದ್ದಾರೆ. ಇವರು ಹಿಮಾಚಲ ಪ್ರದೇಶಕ್ಕೆ ತೆರಳಿ ಸೇಬು ಕೃಷಿಯಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಟಿ ಎಸ್ ರಿಂಗ್ ಫಾಮೀ ಯಂಗ್ ಅವರು ಕೂಡಾ ಒಬ್ಬರು. ಇವರು ವೃತ್ತಿಯಿಂದ ಒಬ್ಬ Aeronautical Engineer. ತಮ್ಮ ಪತ್ನಿ ಟಿ ಎಸ್ ಎಂಜೆಲ್ ಅವರೊಂದಿಗೆ ಸೇರಿ ಸೇಬು ಕೃಷಿ ಕೈಗೊಂಡಿದ್ದಾರೆ. ಇದೇ ರೀತಿ ಅವುಂಗ್ಶಿ ಶಿಮರೆ ಆಗಸ್ಟೀನಾ (Avungshee Shimre Augasteena) ಅವರು ಕೂಡಾ ತಮ್ಮ ತೋಟದಲ್ಲಿ ಸೇಬನ್ನು ಬೆಳೆದಿದ್ದಾರೆ. ಅವುಂಗ್ಶಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಅದನ್ನು ತೊರೆದು ತಮ್ಮ ಗ್ರಾಮಕ್ಕೆ ಹಿಂದಿರುಗಿ ಸೇಬು ಕೃಷಿ ಆರಂಭಿಸಿದರು. ಮಣಿಪುರದಲ್ಲಿ ಇಂದು ಇಂಥ ಹಲವಾರು ಸೇಬು ಕೃಷಿಕರು ಹೊಸತನ್ನು ಮಾಡಿ ತೋರಿಸಿದ್ದಾರೆ. 

ಸ್ನೇಹಿತರೆ, ನಮ್ಮ ಬುಡಕಟ್ಟು ಸಮುದಾಯದಲ್ಲಿ, ಬೋರೆಹಣ್ಣು ಬಹಳ ಜನಪ್ರಿಯ. ಬುಡಕಟ್ಟು ಸಮುದಾಯದವರು ಸದಾ ಬೋರೆಹಣ್ಣು ಕೃಷಿ ಕೈಗೊಳ್ಳುತ್ತಲೇ ಇದ್ದಾರೆ. ಕೊವಿಡ್ – 19 ಸಾಂಕ್ರಮಿಕ ರೋಗದ ನಂತರ ಈ ಕೃಷಿ ವಿಶೇಷವಾಗಿ ಹೆಚ್ಚುತ್ತಲೇ ಸಾಗಿದೆ. ತ್ರಿಪುರಾದ “ಉನಾಕೋಟಿ” ಯ ಇಂಥ 32 ರ ವಯೋಮಾನದ ನಮ್ಮ ಯುವ ಸ್ನೇಹಿತ ವಿಕ್ರಂಜೀತ್ ಚಕಮಾ ಅವರು ಬೋರೆಹಣ್ಣಿನ ಕೃಷಿ ಆರಂಭಿಸಿ ಬಹಳ ಆದಾಯವನ್ನೂ ಗಳಿಸಿದ್ದಾರೆ ಮತ್ತು ಇತರರನ್ನೂ ಬೋರೆಹಣ್ಣಿನ ಕೃಷಿ ಕೈಗೊಳ್ಳುವಂತೆ ಪ್ರೇರೆಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಇಂಥವರ ಸಹಾಯಕ್ಕಾಗಿ ಮುಂದೆ ಬಂದಿದೆ. ಬೋರೆಹಣ್ಣಿನ ಕೃಷಿಕರ ಬೇಡಿಕೆಯನ್ನು ಪೂರೈಸಲೆಂದೇ ಸರ್ಕಾರ ಇದಕ್ಕೆಂದೇ ವಿಶೇಷ ನರ್ಸರಿಗಳನ್ನು ಸಿದ್ಧಪಡಿಸಿದೆ. ಈ ಕೃಷಿಯಲ್ಲಿ ಆವಿಷ್ಕಾರಗಳು ಆಗುತ್ತಿರುವಂತೆ ಉಪ ಉತ್ಪನ್ನಗಳ ತಯಾರಿಕೆಯಲ್ಲೂ ಕ್ರೀಯಾಶೀಲತೆ ಕಂಡುಬರುತ್ತಿದೆ. 

ಸ್ನೇಹಿತರೆ, ನನಗೆ ಉತ್ತರ ಪ್ರದೇಶದ ಲಖೀಂಪುರ್ ಖೀರಿಯಲ್ಲಿ ಕೈಗೊಳ್ಳಲಾದ ಒಂದು ಪ್ರಯತ್ನದ ಬಗ್ಗೆ ತಿಳಿದುಬಂದಿದೆ. ಕೊವಿಡ್ ಸಮಯದಲ್ಲಿ ಲಖೀಂಪುರ್ ಖೀರಿಯಲ್ಲಿ ಒಂದು ವಿನೂತನ ಪ್ರಯತ್ನ ನಡೆದಿದೆ. ಅಲ್ಲಿ ಮಹಿಳೆಯರಿಗೆ ಬಾಳೆಯ ತ್ಯಾಜ್ಯ ದಿಂಡುಗಳಿಂದ ನಾರು ಸಿದ್ಧಪಡಿಸುವ ತರಬೇತಿ ನೀಡಲಾಗುತ್ತಿದೆ. ಕಸದಿಂದ ರಸ ತಯಾರಿಸುವ ಮಾರ್ಗ ಇದಾಗಿದೆ. ಬಾಳೆ ದಿಂಡುಗಳನ್ನು ಕತ್ತರಿಸಿ ಯಂತ್ರದ ಸಹಾಯದಿಂದ ಬಾಳೆ ನಾರು ಸಿದ್ಧಪಡಿಸಲಾಗುತ್ತದೆ. ಇದು ಸೆಣಬಿನಂತಿರುತ್ತದೆ. ಈ ನಾರಿನಿಂದ handbag, ಚಾಪೆ, ಕಾರ್ಪೆಟ್ (ಕಂಬಳಿ) ಇಂಥ ಹಲವಾರು ವಸ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಿಂದ ಕೃಷಿ ತ್ಯಾಜ್ಯದ ಉಪಯೋಗ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮೀಣ ನಮ್ಮ ಸೋದರಿಯರು ಹೆಣ್ಣು ಮಕ್ಕಳಿಗೆ ಮತ್ತೊಂದು ದುಡಿಮೆಯ ಮಾರ್ಗ ದೊರೆತಿದೆ. ಬಾಳೆ ನಾರಿನ ಈ ಕೆಲಸದಿಂದ ಸ್ಥಳೀಯ ಮಹಿಳೆಯರಿಗೆ ದಿನಕ್ಕೆ 400 ರಿಂದ 600 ರೂಪಾಯಿಯ ದುಡಿಮೆ ಲಭಿಸುತ್ತದೆ.  ಲಖೀಂಪುರ್ ಖೀರಿಯಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಬಾಳೆ ಕೃಷಿ ಕೈಗೊಳ್ಳಲಾಗುತ್ತದೆ.  ಬಾಳೆ ಕೃಷಿ ನಂತರ ಬಾಳೆ ದಿಂಡನ್ನು ಕತ್ತರಿಸಿ ಸಾಗಿಸಲು ಕೃಷಿಕರು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತಿತ್ತು. ಈಗ ಅವರಿಗೆ ಈ ಹಣ ಉಳಿತಾಯವಾಗುತ್ತದೆ. ಅಂದರೆ ಆಮ್ ಕೆ ಆಮ್ ಗುಟಲಿಯೋಂಕೆ ದಾಮ್ (ಮಾವಿನ ಹಣ್ಣಿನ ಜೊತೆಗೆ ವಾಟೆಯೂ ಲಾಭ ನೀಡಿದಂತೆ) ಎಂಬ ನಾಣ್ಣುಡಿ ಇಲ್ಲಿ ಸೂಕ್ತವೆನಿಸುತ್ತದೆ.

ಸ್ನೇಹಿತರೆ, ಒಂದೆಡೆ ಬಾಳೆ ನಾರಿನಿಂದ ಉತ್ಪನ್ನವನ್ನು ತಯಾರಿಸಲಾಗುತ್ತಿದ್ದರೆ ಮತ್ತೊಂದೆಡೆ ಬಾಳೆ ಹಿಟ್ಟಿನಿಂದ ದೋಸೆ ಮತ್ತು ಗುಲಾಬ್ ಜಾಮೂನ್ ನಂತಹ ಸ್ವಾದಿಷ್ಟ ತಿಂಡಿಗಳನ್ನೂ ಸಿದ್ಧಪಡಿಸಲಾಗುತ್ತಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಹಿಳೆಯರು ಈ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಈ ಕೆಲಸವೂ ಕೊರೊನಾ ಸಮಯದಲ್ಲೇ ಆರಂಭವಾಯಿತು. ಈ ಮಹಿಳೆಯರು ಬಾಳೆ ಹಿಟ್ಟಿನಿಂದ ಕೇವಲ ದೋಸೆ ಮತ್ತು ಗುಲಾಬ್ ಜಾಮೂನ್ ನಂತಹ ಖಾದ್ಯಗಳನ್ನು ಸಿದ್ಧಪಡಿಸುವುದಲ್ಲದೆ ಇದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು. ಹೆಚ್ಚೆಚ್ಚು ಜನರಿಗೆ ಬಾಳೆ ಹಿಟ್ಟಿನ ಬಗ್ಗೆ ತಿಳಿದಾಗ ಅದರ ಬೇಡಿಕೆಯೂ ಹೆಚ್ಚಿತು ಮತ್ತು ಈ ಮಹಿಳೆಯರ ಆದಾಯವೂ ಹೆಚ್ಚಿತು. ಲಖೀಂ ಪುರ್ ಖೀರಿಯಂತೆ ಇಲ್ಲಿಯೂ ಈ ಆವಿಷ್ಕಾರಿ ಯೋಜನೆಯ ನಾಯಕತ್ವವನ್ನು ಮಹಿಳೆಯರೇ ವಹಿಸಿದ್ದಾರೆ.

ಸ್ನೇಹಿತರೆ, ಇಂಥ ಉದಾಹರಣೆಗಳು ಜೀವನದಲ್ಲಿ ಹೊಸತನ್ನು ಮಾಡುವ ಪ್ರೇರಣೆ ನೀಡುತ್ತವೆ. ನಿಮ್ಮ ಸುತ್ತ ಮುತ್ತ ಇಂಥ ಬಹಳಷ್ಟು ಜನರಿರಬಹುದು. ನಿಮ್ಮ ಕುಟುಂಬ ಮನದ ಮಾತನ್ನಾಡುವಾಗ ಇವರನ್ನೂ ನಿಮ್ಮ ಮಾತುಕತೆಯಲ್ಲಿ ಸೇರಿಸಿ. ಕಾಲಾವಕಾಶ ಮಾಡಿಕೊಂಡು ಮಕ್ಕಳೊಂದಿಗೆ ಇಂಥ ಪ್ರಯತ್ನಗಳನ್ನು ನೋಡಿ ಬನ್ನಿ. ಅವಕಾಶ ಸಿಕ್ಕರೆ ನೀವೂ ಇಂಥದ್ದನ್ನು ಮಾಡಿ. ಹಾಂ ಇದೆಲ್ಲವನ್ನು ನೀವು ನನ್ನ ಜೊತೆ, ನಮೋ ಆಪ್ ಅಥವಾ ಮೈ ಗೌ ನಲ್ಲಿ ಹಂಚಿಕೊಂಡರೆ ನನಗೆ ಅಪಾರ ಸಂತೋಷವಾಗುತ್ತದೆ.       

ನನ್ನ ಪ್ರಿಯ ದೇಶಬಾಂಧವರೆ, ನಮ್ಮ ಸಂಸ್ಕೃತ ಗ್ರಂಥಗಳಲ್ಲಿ ಒಂದು ಶ್ಲೋಕವಿದೆ.

ಆತ್ಮಾರ್ಥಂ ಜೀವ ಲೋಕೆ ಅಸ್ಮಿನ್, ಕೊ ನ ಜೀವತಿ ಮಾನವಃ.

ಪರಮ್ ಪರೋಪಕಾರಾರ್ಥಂ, ಯೋ ಜೀವತಿ ಸ ಜೀವತಿ.

ಅಂದರೆ, ತಮಗಾಗಿ ಈ ಲೋಕದಲ್ಲಿ ಎಲ್ಲರೂ ಜೀವಿಸುತ್ತಾರೆ. ಆದರೆ ಯಾರು ಪರೋಪಕಾರಕ್ಕಾಗಿ ಜೀವಿಸುತ್ತಾರೋ ಅವರೇ ವಾಸ್ತವದಲ್ಲಿ ಜೀವಿಸಿದಂತೆ, ಭಾರತ ಮಾತೆಯ ಮಕ್ಕಳ ಪರೋಪಕಾರದ ಪ್ರಯತ್ನಗಳ ಮಾತೇ – ‘ಮನದ ಮಾತು’. ಇಂದು ಇಂಥ ಮತ್ತಷ್ಟು ಸ್ನೇಹಿತರ ಬಗ್ಗೆ ಮಾತನಾಡೋಣ. ಒಬ್ಬ ಸ್ನೇಹಿತರು ಚಂಡೀಗಡದವರಾಗಿದ್ದಾರೆ. ಚಂಡೀಗಡದಲ್ಲಿ ನಾನು ಕೆಲ ವರ್ಷಗಳು ವಾಸವಿದ್ದೆ. ಇದು ಬಹಳ ಸುಂದರ ಮತ್ತು ಆರಾಮದಾಯಕ ನಗರವಾಗಿದೆ. ಇಲ್ಲಿ ನೆಲೆಸಿರುವ ಜನರು ಹೃದಯವೈಶಾಲ್ಯ ಉಳ್ಳವರು. ನೀವು ಖಾದ್ಯಪ್ರಿಯರಾಗಿದ್ದರೆ ನಿಮಗೆ ಇಲ್ಲಿ ಪರಮಾನಂದವಾಗುತ್ತದೆ. ಇದೇ ಚಂಡೀಗಢದ ಸೆಕ್ಟರ್ 29 ರಲ್ಲಿ ಸಂಜಯ್ ರಾಣಾ ಅವರು ಆಹಾರ ಮಳಿಗೆ ಇಟ್ಟುಕೊಂಡಿದ್ದಾರೆ. ಸೈಕಲ್ ಮೇಲೆ ಛೋಲೆ ಬಟುರಾ ಮಾರಾಟ ಮಾಡುತ್ತಾರೆ. ಒಂದು ದಿನ ಅವರ ಮಗಳು ರಿದ್ಧಿಮಾ ಮತ್ತು ಸೋದರ ಸೊಸೆ ರಿಯಾ ಒಂದು ಆಲೋಚನೆಯೊಂದಿಗೆ ಅವರ ಬಳಿ ಬಂದರು. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತವಾಗಿ ಛೋಲೆ ಬಟುರಾ ವಿತರಿಸುವಂತೆ ಇಬ್ಬರೂ ಹೇಳಿದರು. ಇದಕ್ಕೆ ಅವರು ಸಂತೋಷದಿಂದ ಒಪ್ಪಿದರು. ಕೂಡಲೇ ಈ ಸತ್ಕಾರ್ಯವನ್ನು ಆರಂಭಿಸಿದರು. ಸಂಜಯ್ ರಾಣಾ ಅವರ ಛೋಲೆ ಬಟುರಾವನ್ನು  ಉಚಿತವಾಗಿ ಸವಿಯಲು ಅಂದೇ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದು ತೋರಿಸಬೇಕು. ಲಸಿಕೆ ಸಂದೇಶವನ್ನು ತೋರಿಸಿದ ಕೂಡಲೇ ನಿಮಗೆ ಅವರು ಸ್ವಾದಿಷ್ಟವಾದ ಛೋಲೆ ಬಟುರಾ ಸವಿಯಲು ನೀಡುತ್ತಾರೆ. ಸಮಾಜದ ಒಳಿತಿಗೆ ಹಣಕ್ಕಿಂತ ಹೆಚ್ಚು ಸೇವಾ ಮನೋಭಾವ, ಕರ್ತವ್ಯಪರತೆ ಹೆಚ್ಚು ಅವಶ್ಯಕ ಎಂದು ಹೇಳಲಾಗುತ್ತದೆ. ನಮ್ಮ ಸೋದರ ಸಂಜಯ್ ಇದು ಸರಿ ಎಂದು ಸಾಬೀತುಪಡಿಸುತ್ತಿದ್ದಾರೆ.

ಸ್ನೇಹಿತರೆ, ಮತ್ತೊಂದು ಕೆಲಸದ ಬಗ್ಗೆ ನಾನು ಇಂದು ಚರ್ಚಿಸಲು ಬಯಸುತ್ತೇನೆ. ಈ ಕೆಲಸ ನಡೆಯುತ್ತಿರುವುದು ತಮಿಳುನಾಡಿನ ನೀಲಗಿರಿಯಲ್ಲಿ. ಅಲ್ಲಿ ರಾಧಿಕಾ ಶಾಸ್ರ್ತಿ ಅವರು AmbuRx(ಆಂಬುರೆಕ್ಸ್) ಯೋಜನೆ ಆರಂಭಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ಸುಲಭವಾದ ಸಾರಿಗೆ ವ್ಯವಸ್ಥೆ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ರಾಧಿಕಾ ಅವರು ಕೂನೂರಿನಲ್ಲಿ ಒಂದು Cafe ನಡೆಸುತ್ತಾರೆ. ಅವರು ತಮ್ಮ ಕೆಫೆಯ AmbuRx ಗಾಗಿ ಹಣ ಸಂಗ್ರಹಿಸಿದರು. ಇಂದು ನೀಲಗಿರಿಯ ಗುಡ್ಡಗಳಲ್ಲಿ 6 AmbuRx ಸೇವಾ ನಿರತವಾಗಿವೆ ಮತ್ತು ತುರ್ತು ಸಮಯದಲ್ಲಿ ದೂರದೂರದ ರೋಗಿಗಳಿಗೂ ಸೇವೆ ನೀಡುತ್ತಿವೆ. ಆಂಬುರೆಕ್ಸ್ ನಲ್ಲಿ Stretcher, Oxygen Cylinder, First Aid Box ನಂತಹ ಅನೇಕ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಗಿದೆ.

ಸ್ನೇಹಿತರೇ, ಸಂಜಯ್ ಆಗಲಿ ಅಥವಾ ರಾಧಿಕಾ ಅವರೇ ಆಗಲಿ, ನಾವು ನಮ್ಮ ಕೆಲಸ, ನಮ್ಮ ಉದ್ಯೋಗ ಮಾಡುತ್ತಲೇ ಸೇವಾ ಕಾರ್ಯ ಕೂಡಾ ಮಾಡಬಹುದು ಎನ್ನುವುದು ಇಂತಹ ಉದಾಹರಣೆಗಳಿಂದ ನಮಗೆ ತಿಳಿದುಬರುತ್ತದೆ.

ಸ್ನೇಹಿತರೇ, ಕೆಲವು ದಿನಗಳ ಹಿಂದೆ ಅತ್ಯಂತ ಆಸಕ್ತಿದಾಯಕ ಮತ್ತು ಭಾವನಾತ್ಮಕ ಘಟನೆಯೊಂದು ನಡೆಯಿತು, ಇದರಿಂದಾಗಿ ಭಾರತ-ಜಾರ್ಜಿಯಾ ಮೈತ್ರಿಗೆ ಒಂದು ಶಕ್ತಿ ತುಂಬಿದಂತಾಗಿದೆ. ಈ ಸಮಾರಂಭದಲ್ಲಿ ಭಾರತವು ಸೈಂಟ್ ಕ್ವೀನ್ ಕೆಟೆವಾನ್ (Saint Queen Ketevan) ಅವರ ಪವಿತ್ರ ರೆಲಿಕ್ (Holy Relic) ಅಂದರೆ ಅವರ ಪವಿತ್ರ ಸ್ಮರಣ ಚಿಹ್ನೆಯನ್ನು ಜಾರ್ಜಿಯಾ ಸರ್ಕಾರ ಮತ್ತು ಅದರ ಜನತೆಗೆ ಹಸ್ತಾಂತರಿಸಿತು, ಇದಕ್ಕಾಗಿ ನಮ್ಮ ವಿದೇಶಾಂಗ ಸಚಿವರು ಸ್ವತಃ ಅಲ್ಲಿಗೆ ತೆರಳಿದ್ದರು.  ಬಹಳ ಭಾವನಾತ್ಮಕ ವಾತಾವರಣದಲ್ಲಿ ನಡೆದ ಈ ಸಮಾರಂಭದಲ್ಲಿ ಜಾರ್ಜಿಯಾದ ರಾಷ್ಟ್ರಪತಿ, ಪ್ರಧಾನಮಂತ್ರಿ, ಅನೇಕ ಧರ್ಮ ಗುರುಗಳು, ಮತ್ತು ಭಾರೀ ಸಂಖ್ಯೆಯಲ್ಲಿ ಜಾರ್ಜಿಯಾದ ಜನತೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರಶಂಸಿಸುತ್ತಾ ಆಡಿದ ಮಾತುಗಳು, ಬಹಳ ಸ್ಮರಣೀಯವಾಗಿವೆ. ಈ ಒಂದು ಸಮಾರಂಭವು ಉಭಯ ದೇಶಗಳೊಂದಿಗೆ, ಗೋವಾ ಮತ್ತು ಜಾರ್ಜಿಯಾ ನಡುವಿನ ಸಂಬಂಧವನ್ನು ಕೂಡಾ ಬಲಪಡಿಸಿದೆ. ಏಕೆಂದರೆ, ಸೈಂಟ್ ಕ್ವೀನ್ ಕೆಟೆವಾನ್ (Saint Queen Ketevan) ರವರ ಈ ಪವಿತ್ರ ಅವಶೇಷ 2005 ರಲ್ಲಿ ಗೋವಾದ Saint Augustine Church ನಿಂದ ದೊರೆತಿತ್ತು.

ಸ್ನೇಹಿತರೇ, ಇವೆಲ್ಲವೂ ಏನು, ಯಾವಾಗ ಮತ್ತು ಹೇಗಾಯಿತು ಎಂಬ ಪ್ರಶ್ನೆ ನಿಮ್ಮ ಮನದಲ್ಲಿರಬಹುದು. ವಾಸ್ತವದಲ್ಲಿ ಇದು ಸುಮಾರು ನಾಲ್ಕುನೂರರಿಂದ ಐದು ನೂರು ವರ್ಷಗಳಷ್ಟು ಹಳೆಯ ಮಾತು. ರಾಣಿ ಕೆಟೆವಾನ್ ಅವರು ಜಾರ್ಜಿಯಾದ ರಾಜಪರಿವಾರದ ಪುತ್ರಿಯಾಗಿದ್ದರು. ಹತ್ತು ವರ್ಷಗಳ ಕಾರಾಗೃಹವಾಸದ ನಂತರ ಅವರು 1624 ರಲ್ಲಿ ಹುತಾತ್ಮರಾದರು. ಒಂದು ಪ್ರಾಚೀನ ಪೋರ್ಚುಗೀಸ್ ದಾಖಲೆಯ ಪ್ರಕಾರ Saint Queen Ketevan ಅವರ ಚಿತಾಭಸ್ಮವನ್ನು ಹಳೆಯ ಗೋವಾದ Saint Augustine Convent  ನಲ್ಲಿ ಇರಿಸಲಾಗಿತ್ತು. ಆದರೆ, ಗೋವಾದಲ್ಲಿ ಸಮಾಧಿ ಮಾಡಲಾದ ಅವರ  ಅವಶೇಷಗಳು 1930 ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಕಾಣೆಯಾದವು ಎಂದು ಬಹಳ ಕಾಲದಿಂದ ನಂಬಲಾಗಿತ್ತು.

ಭಾರತ ಸರ್ಕಾರ ಮತ್ತು ಜಾರ್ಜಿಯಾದ ಇತಿಹಾಸ ತಜ್ಞರು, ಸಂಶೋಧಕರು, ಪುರಾತತ್ವ ಶಾಸ್ತ್ರಜ್ಞರು ಮತ್ತು ಜಾರ್ಜಿಯಾದ ಚರ್ಚಿನ ದಶಕಗಳ ದಣಿವರಿಯದ ಪ್ರಯತ್ನಗಳ ನಂತರ 2005 ರಲ್ಲಿ ಆ ಪವಿತ್ರ ಅವಶೇಷಗಳನ್ನು ಕಂಡುಹಿಡಿಯುವಲ್ಲಿ ಸಫಲತೆ ದೊರೆಯಿತು. ಇದು ಜಾರ್ಜಿಯಾದ ಜನತೆಗೆ ಬಹಳ ಭಾವನಾತ್ಮಕ ವಿಷಯವಾಗಿದೆ. ಆದ್ದರಿಂದ ಅವರ ಐತಿಹಾಸಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಈ ಅವಶೇಷಗಳ ಒಂದು ಭಾಗವನ್ನು ಜಾರ್ಜಿಯಾದ ಜನತೆಗೆ ಉಡುಗೊರೆಯಾಗಿ ನೀಡುವ ನಿರ್ಣಯ ಕೈಗೊಂಡಿತು. ಭಾರತ ಮತ್ತು ಜಾರ್ಜಿಯಾದ ಇತಿಹಾಸದ ಈ ವಿಶಿಷ್ಟ ಭಾಗವನ್ನು ಕಾಪಾಡಿಕೊಂಡಿದ್ದಕ್ಕಾಗಿ ನಾನು ಇಂದು ಗೋವಾದ ಜನತೆಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಗೋವಾ ಅನೇಕ ಮಹಾನ್ ಆಧ್ಯಾತ್ಮಿಕ ಪರಂಪರೆಯುಳ್ಳ ಭೂಮಿಯಾಗಿದೆ. Saint Augustine Church, UNESCOದ ವಿಶ್ವ ಪಾರಂಪರಿಕ ತಾಣ – ಗೋವಾದ ಚರ್ಚ್ ಗಳು ಮತ್ತು ಕಾನ್ವೆಂಟ್ ಗಳ ಒಂದು ಭಾಗವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೆ, ನಾನು ಈಗ ನಿಮ್ಮನ್ನು ಜಾರ್ಜಿಯಾದಿಂದ ನೇರವಾಗಿ ಸಿಂಗಪುರಕ್ಕೆ ಕರೆದೊಯ್ಯುತ್ತೇನೆ. ಇಲ್ಲಿ ಈ ತಿಂಗಳ ಆರಂಭದಲ್ಲಿ ಮತ್ತೊಂದು ಗೌರವನೀಯ ಅವಕಾಶ ಎದುರಾಯಿತು. ಸಿಂಗಪುರದ ಪ್ರಧಾನಮಂತ್ರಿ ನನ್ನ ಮಿತ್ರ ಲೀ ಸೇನ್ ಲೂಂಗ್ (Lee Hsien Loong)ಅವರು ಇತ್ತೀಚೆಗೆ ನವೀಕರಿಸಲಾದ ಸಿಲಾಟ್ ರೋಡ್ ಗುರುದ್ವಾರವನ್ನು ಉದ್ಘಾಟಿಸಿದರು. ಅವರು ಸಾಂಪ್ರದಾಯಿಕ ಸಿಖ್ ಪೇಟಾ ಕೂಡಾ ಧರಿಸಿದ್ದರು. ಈ ಗುರುದ್ವಾರವನ್ನು ಸುಮಾರು ನೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಮತ್ತು ಇಲ್ಲಿ  ಸೋದರ ಮಹಾರಾಜ್ ಸಿಂಗ್ ಅವರಿಗೆ ಸಮರ್ಪಿಸಲಾದ ಒಂದು ಸ್ಮಾರಕ ಕೂಡಾ ಇದೆ. ಸೋದರ ಮಹಾರಾಜಾ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದರು ಮತ್ತು ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಸಂದರ್ಭದಲ್ಲಿ ಇದು ಮತ್ತಷ್ಟು ಪ್ರೇರಣಾದಾಯಕವಾಗಿದೆ. ಇಂತಹ ವಿಚಾರಗಳು, ಇಂತಹ ಪ್ರಯತ್ನಗಳು ಎರಡು ದೇಶಗಳ ನಡುವೆ, ಮತ್ತು ಜನತೆ ನಡುವಿನ ಸಂಪರ್ಕಕ್ಕೆ ಮತ್ತಷ್ಟು ಬಲ ತುಂಬುತ್ತವೆ. ಸೌಹಾರ್ದಪೂರ್ಣ ವಾತಾವರಣದಲ್ಲಿ ಜೀವಿಸುವುದು ಮತ್ತು ಪರಸ್ಪರರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಎಷ್ಟೊಂದು ಮಹತ್ವದ ವಿಷಯವಾಗಿರುತ್ತದೆ ಎನ್ನುವುದು ಇದರಿಂದ ತಿಳಿದುಬರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನದ ಮಾತಿನಲ್ಲಿ' ನಲ್ಲಿ ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ನನ್ನ ಮನಸ್ಸಿಗೆ ಬಹಳ ನಿಕಟವಾಗಿರುವ ಮತ್ತೊಂದು ವಿಷಯವಿದೆ, ಅದೆಂದರೆ ನೀರಿನ ಸಂರಕ್ಷಣೆಯ ವಿಷಯ. ನಾನು ನನ್ನ ಬಾಲ್ಯವನ್ನು ಕಳೆದ ಸ್ಥಳದಲ್ಲಿ ನೀರಿನ ಕೊರತೆ ಯಾವಾಗಲೂ ಇದ್ದೇ ಇರುತ್ತಿತ್ತು. ನಾವು ಮಳೆಗಾಗಿ ಹಂಬಲಿಸುತ್ತಿದ್ದೆವು ಮತ್ತು ಆದ್ದರಿಂದ ಪ್ರತಿಯೊಂದು ಹನಿ ನೀರನ್ನೂ ಉಳಿಸುವುದು ನಮ್ಮ ಸಂಸ್ಕಾರದ ಒಂದು ಭಾಗವಾಗಿದೆ. ಈಗ "ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ನೀರಿನ ಸಂರಕ್ಷಣೆ" ಎಂಬ ಈ ಮಂತ್ರವು ಅಲ್ಲಿನ ಜನಜೀವನದ ಚಿತ್ರವನ್ನೇ ಬದಲಾಯಿಸಿ ಬಿಟ್ಟಿದೆ. ನೀರಿನ ಪ್ರತಿಯೊಂದು ಹನಿಯನ್ನೂ ಉಳಿಸುವುದು, ಮತ್ತು ಯಾವುದೇ ರೀತಿಯಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯುವುದು, ಇದು ನಮ್ಮ ಜೀವನ ಶೈಲಿಯ ಸಹಜ ಭಾಗವಾಗಬೇಕು. ನಮ್ಮ ಕುಟುಂಬಗಳಲ್ಲಿ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ಇಂತಹ ಸಂಪ್ರದಾಯ ಆಚರಣೆಯಾಗಬೇಕು.

ಸ್ನೇಹಿತರೇ, ಪ್ರಕೃತಿ ಮತ್ತು ಪರಿಸರದ ರಕ್ಷಣೆ ಭಾರತದ ಸಾಂಸ್ಕೃತಿಕ ಜೀವನದಲ್ಲಿ, ನಮ್ಮ ದೈನಂದಿನ ಜೀವನದಲ್ಲಿ, ಹಾಸುಹೊಕ್ಕಾಗಿದೆ. ಹಾಗೆಯೇ, ಮಳೆ ಮತ್ತು ಮುಂಗಾರು ಯಾವಾಗಲೂ ನಮ್ಮ ಚಿಂತನೆಗಳಲ್ಲಿ, ನಮ್ಮ ತತ್ವಶಾಸ್ತ್ರದಲ್ಲಿ ಮತ್ತು ನಮ್ಮ ನಾಗರಿಕತೆಯನ್ನು ರೂಪಿಸುತ್ತಾ ಬಂದಿದೆ. ಋತುಸಂಹಾರ ಮತ್ತು ಮೇಘದೂತದಲ್ಲಿ ಮಹಾಕವಿ ಕಾಳಿದಾಸ ಮಳೆಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ. ಸಾಹಿತ್ಯ ಪ್ರೇಮಿಗಳ ನಡುವೆ ಈ ಕವಿತೆಗಳು ಇಂದಿಗೂ ಬಹಳ ಜನಪ್ರಿಯವಾಗಿವೆ. ಋಗ್ವೇದದ ಪರ್ಜನ್ಯ ಸೂಕ್ತಂನಲ್ಲಿ ಮಳೆಯ ಸೌಂದರ್ಯದ ಬಹಳ ಸುಂದರವಾದ ವರ್ಣನೆಯಿದೆ. ಇದೇ ರೀತಿ, ಶ್ರೀಮದ್ಭಾಗವತದಲ್ಲಿ ಕೂಡಾ ಕಾವ್ಯಾತ್ಮಕವಾಗಿ ಭೂಮಿ, ಸೂರ್ಯ ಮತ್ತು ಮಳೆಯ ನಡುವಿನ ಸಂಬಂಧಗಳ ಕುರಿತು ವಿಸ್ತಾರವಾಗಿ ವಿವರಿಸಲಾಗಿದೆ. 

ಅಷ್ಟೌ ಮಾಸಾನ್ ನಿಪೀತಂ ಯದ್ಧ್, ಭೂಮ್ಯಾಃ, ಚ, ಓದ್-ಮಯಮ್ ವಸು.

ಸ್ವರ್ಗೋಭಿಃ ಮೋಕ್ತುಮ್ ಆರೇಭೇ, ಪರ್ಜನ್ಯಃ ಕಾಲ ಆಗತೇ.

(अष्टौ मासान् निपीतं यद्, भूम्याः च, ओद-मयम् वसु |

स्वगोभिः मोक्तुम् आरेभे, पर्जन्यः काल आगते ||)

ಅಂದರೆ, ಸೂರ್ಯನು ಎಂಟು ತಿಂಗಳ ಕಾಲ ನೀರಿನ ರೂಪದಲ್ಲಿ ಭೂಮಿಯ ಸಂಪತ್ತನ್ನು ಸಂಗ್ರಹಿಸಿದ್ದನು, ಈಗ ಮುಂಗಾರು ಋತುವಿನಲ್ಲಿ, ಸೂರ್ಯ ಈ ಸಂಗ್ರಹಗೊಂಡ ಸಂಪತ್ತನ್ನು ಭೂಮಿಗೆ ಹಿಂದಿರುಗಿಸುತ್ತಿದ್ದಾನೆ. ವಾಸ್ತವದಲ್ಲಿ, ಮುಂಗಾರು ಮತ್ತು ಮಳೆಯ ಋತು ಕೇವಲ ಸುಂದರ ಮತ್ತು ಆಹ್ಲಾದಕರ ಮಾತ್ರವಲ್ಲ, ಇದು ಪೋಷಣೆ ನೀಡುವ, ಜೀವನ ನೀಡುವಂತಹದ್ದೂ ಕೂಡಾ ಆಗಿದೆ. ನಮಗೆ ದೊರೆಯುವ ಮಳೆಯ ನೀರನ್ನು ನಮ್ಮ ಭಾವೀ ಪೀಳಿಗೆಗಾಗಿ ಉಳಿಸಬೇಕು ಈ ಅಂಶವನ್ನು ನಾವು ಯಾವಾಗಲೂ ಮರೆಯಬಾರದು.

ಇಂದಿನ ಮಾತನ್ನು ಇಂತಹ ರೋಚಕ ವಿಷಯಗಳೊಂದಿಗೆ ಏಕೆ ಮುಗಿಸಬಾರದೆಂದು ನನಗೆ ಅನ್ನಿಸಿತು, ನಿಮ್ಮೆಲ್ಲರಿಗೂ ಮುಂಬರುವ ಹಬ್ಬಗಳಿಗಾಗಿ ಅನೇಕಾನೇಕ ಶುಭಾಶಯಗಳು. ಹಬ್ಬ ಮತ್ತು ಉತ್ಸವಾಚರಣೆಗಳ ಸಮಯದಲ್ಲಿ, ಕೊರೋನಾ ಇನ್ನೂ ನಮ್ಮ ಮಧ್ಯದಿಂದ ಹೋಗಿಲ್ಲ ಎಂಬುದನ್ನು ಖಂಡಿತಾ ನೆನಪಿಟ್ಟುಕೊಳ್ಳಿ. ಕೊರೋನಾ ಸಂಬಂಧಿತ ಶಿಷ್ಠಾಚಾರಗಳನ್ನು ನೀವು ಮರೆಯಬಾರದು. ನೀವೆಲ್ಲರೂ ಆರೋಗ್ಯವಾಗಿರಿ ಮತ್ತು ಸಂತೋಷವಾಗಿ ಇರಿ.

ಅನೇಕಾನೇಕ ಧನ್ಯವಾದಗಳು.

 

  • Priya Satheesh January 15, 2025

    🐯
  • krishangopal sharma Bjp January 13, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌹🌷🌷🌹🌷🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 13, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌹🌷🌷🌹🌷🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 13, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌹🌷🌷🌹🌷🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • கார்த்திக் November 14, 2024

    🌺🙏🌸🙏🏿🌺🙏🏽💮🙏🏼🌺🙏🏻🌸🙏🏾💮🙏🌺🙏🏿🌸🙏🌺 🌺🙏🌸🙏🏿🌺🙏🏽💮🙏🏼🌺🙏🏻🌸🙏🏾💮🙏🌺🙏🏿🌸🙏🌺 🌺🙏🌸🙏🏿🌺🙏🏽💮🙏🏼🌺🙏🏻🌸🙏🏾💮🙏🌺🙏🏿🌸🙏🌺
  • Devendra Kunwar September 29, 2024

    BJP
  • ram Sagar pandey September 06, 2024

    जय श्रीराम 🙏💐🌹जय श्रीराम 🙏💐🌹जय श्रीराम 🙏💐🌹जय श्रीराम 🙏💐🌹जय श्रीराम 🙏💐🌹
  • vandana Shree September 03, 2024

    🙏
  • Ambuja sahu September 03, 2024

    biswaguru narendra modi ji ko mera koti koti pranam 🙏
  • amit kashyap September 03, 2024

    https://www.narendramodi.in/bjpsadasyata2024/2ZDDLA कृपया इस लिंक से जुड़े और अपनों को शेयर भी करे जिससे मुझे कुछ मदद हो जायेगी इसने कोई पैसा नहीं लगता है
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"Huge opportunity": Japan delegation meets PM Modi, expressing their eagerness to invest in India
NM on the go

Nm on the go

Always be the first to hear from the PM. Get the App Now!
...
Text of PM’s speech at TV9 Summit 2025
March 28, 2025
QuoteToday, the world's eyes are on India: PM
QuoteIndia's youth is rapidly becoming skilled and driving innovation forward: PM
Quote"India First" has become the mantra of India's foreign policy: PM
QuoteToday, India is not just participating in the world order but also contributing to shaping and securing the future: PM
QuoteIndia has given Priority to humanity over monopoly: PM
QuoteToday, India is not just a Nation of Dreams but also a Nation That Delivers: PM

श्रीमान रामेश्वर गारु जी, रामू जी, बरुन दास जी, TV9 की पूरी टीम, मैं आपके नेटवर्क के सभी दर्शकों का, यहां उपस्थित सभी महानुभावों का अभिनंदन करता हूं, इस समिट के लिए बधाई देता हूं।

TV9 नेटवर्क का विशाल रीजनल ऑडियंस है। और अब तो TV9 का एक ग्लोबल ऑडियंस भी तैयार हो रहा है। इस समिट में अनेक देशों से इंडियन डायस्पोरा के लोग विशेष तौर पर लाइव जुड़े हुए हैं। कई देशों के लोगों को मैं यहां से देख भी रहा हूं, वे लोग वहां से वेव कर रहे हैं, हो सकता है, मैं सभी को शुभकामनाएं देता हूं। मैं यहां नीचे स्क्रीन पर हिंदुस्तान के अनेक शहरों में बैठे हुए सब दर्शकों को भी उतने ही उत्साह, उमंग से देख रहा हूं, मेरी तरफ से उनका भी स्वागत है।

साथियों,

आज विश्व की दृष्टि भारत पर है, हमारे देश पर है। दुनिया में आप किसी भी देश में जाएं, वहां के लोग भारत को लेकर एक नई जिज्ञासा से भरे हुए हैं। आखिर ऐसा क्या हुआ कि जो देश 70 साल में ग्यारहवें नंबर की इकोनॉमी बना, वो महज 7-8 साल में पांचवे नंबर की इकोनॉमी बन गया? अभी IMF के नए आंकड़े सामने आए हैं। वो आंकड़े कहते हैं कि भारत, दुनिया की एकमात्र मेजर इकोनॉमी है, जिसने 10 वर्षों में अपने GDP को डबल किया है। बीते दशक में भारत ने दो लाख करोड़ डॉलर, अपनी इकोनॉमी में जोड़े हैं। GDP का डबल होना सिर्फ आंकड़ों का बदलना मात्र नहीं है। इसका impact देखिए, 25 करोड़ लोग गरीबी से बाहर निकले हैं, और ये 25 करोड़ लोग एक नियो मिडिल क्लास का हिस्सा बने हैं। ये नियो मिडिल क्लास, एक प्रकार से नई ज़िंदगी शुरु कर रहा है। ये नए सपनों के साथ आगे बढ़ रहा है, हमारी इकोनॉमी में कंट्रीब्यूट कर रहा है, और उसको वाइब्रेंट बना रहा है। आज दुनिया की सबसे बड़ी युवा आबादी हमारे भारत में है। ये युवा, तेज़ी से स्किल्ड हो रहा है, इनोवेशन को गति दे रहा है। और इन सबके बीच, भारत की फॉरेन पॉलिसी का मंत्र बन गया है- India First, एक जमाने में भारत की पॉलिसी थी, सबसे समान रूप से दूरी बनाकर चलो, Equi-Distance की पॉलिसी, आज के भारत की पॉलिसी है, सबके समान रूप से करीब होकर चलो, Equi-Closeness की पॉलिसी। दुनिया के देश भारत की ओपिनियन को, भारत के इनोवेशन को, भारत के एफर्ट्स को, जैसा महत्व आज दे रहे हैं, वैसा पहले कभी नहीं हुआ। आज दुनिया की नजर भारत पर है, आज दुनिया जानना चाहती है, What India Thinks Today.

|

साथियों,

भारत आज, वर्ल्ड ऑर्डर में सिर्फ पार्टिसिपेट ही नहीं कर रहा, बल्कि फ्यूचर को शेप और सेक्योर करने में योगदान दे रहा है। दुनिया ने ये कोरोना काल में अच्छे से अनुभव किया है। दुनिया को लगता था कि हर भारतीय तक वैक्सीन पहुंचने में ही, कई-कई साल लग जाएंगे। लेकिन भारत ने हर आशंका को गलत साबित किया। हमने अपनी वैक्सीन बनाई, हमने अपने नागरिकों का तेज़ी से वैक्सीनेशन कराया, और दुनिया के 150 से अधिक देशों तक दवाएं और वैक्सीन्स भी पहुंचाईं। आज दुनिया, और जब दुनिया संकट में थी, तब भारत की ये भावना दुनिया के कोने-कोने तक पहुंची कि हमारे संस्कार क्या हैं, हमारा तौर-तरीका क्या है।

साथियों,

अतीत में दुनिया ने देखा है कि दूसरे विश्व युद्ध के बाद जब भी कोई वैश्विक संगठन बना, उसमें कुछ देशों की ही मोनोपोली रही। भारत ने मोनोपोली नहीं बल्कि मानवता को सर्वोपरि रखा। भारत ने, 21वीं सदी के ग्लोबल इंस्टीट्यूशन्स के गठन का रास्ता बनाया, और हमने ये ध्यान रखा कि सबकी भागीदारी हो, सबका योगदान हो। जैसे प्राकृतिक आपदाओं की चुनौती है। देश कोई भी हो, इन आपदाओं से इंफ्रास्ट्रक्चर को भारी नुकसान होता है। आज ही म्यांमार में जो भूकंप आया है, आप टीवी पर देखें तो बहुत बड़ी-बड़ी इमारतें ध्वस्त हो रही हैं, ब्रिज टूट रहे हैं। और इसलिए भारत ने Coalition for Disaster Resilient Infrastructure - CDRI नाम से एक वैश्विक नया संगठन बनाने की पहल की। ये सिर्फ एक संगठन नहीं, बल्कि दुनिया को प्राकृतिक आपदाओं के लिए तैयार करने का संकल्प है। भारत का प्रयास है, प्राकृतिक आपदा से, पुल, सड़कें, बिल्डिंग्स, पावर ग्रिड, ऐसा हर इंफ्रास्ट्रक्चर सुरक्षित रहे, सुरक्षित निर्माण हो।

साथियों,

भविष्य की चुनौतियों से निपटने के लिए हर देश का मिलकर काम करना बहुत जरूरी है। ऐसी ही एक चुनौती है, हमारे एनर्जी रिसोर्सेस की। इसलिए पूरी दुनिया की चिंता करते हुए भारत ने International Solar Alliance (ISA) का समाधान दिया है। ताकि छोटे से छोटा देश भी सस्टेनबल एनर्जी का लाभ उठा सके। इससे क्लाइमेट पर तो पॉजिटिव असर होगा ही, ये ग्लोबल साउथ के देशों की एनर्जी नीड्स को भी सिक्योर करेगा। और आप सबको ये जानकर गर्व होगा कि भारत के इस प्रयास के साथ, आज दुनिया के सौ से अधिक देश जुड़ चुके हैं।

साथियों,

बीते कुछ समय से दुनिया, ग्लोबल ट्रेड में असंतुलन और लॉजिस्टिक्स से जुड़ी challenges का सामना कर रही है। इन चुनौतियों से निपटने के लिए भी भारत ने दुनिया के साथ मिलकर नए प्रयास शुरु किए हैं। India–Middle East–Europe Economic Corridor (IMEC), ऐसा ही एक महत्वाकांक्षी प्रोजेक्ट है। ये प्रोजेक्ट, कॉमर्स और कनेक्टिविटी के माध्यम से एशिया, यूरोप और मिडिल ईस्ट को जोड़ेगा। इससे आर्थिक संभावनाएं तो बढ़ेंगी ही, दुनिया को अल्टरनेटिव ट्रेड रूट्स भी मिलेंगे। इससे ग्लोबल सप्लाई चेन भी और मजबूत होगी।

|

साथियों,

ग्लोबल सिस्टम्स को, अधिक पार्टिसिपेटिव, अधिक डेमोक्रेटिक बनाने के लिए भी भारत ने अनेक कदम उठाए हैं। और यहीं, यहीं पर ही भारत मंडपम में जी-20 समिट हुई थी। उसमें अफ्रीकन यूनियन को जी-20 का परमानेंट मेंबर बनाया गया है। ये बहुत बड़ा ऐतिहासिक कदम था। इसकी मांग लंबे समय से हो रही थी, जो भारत की प्रेसीडेंसी में पूरी हुई। आज ग्लोबल डिसीजन मेकिंग इंस्टीट्यूशन्स में भारत, ग्लोबल साउथ के देशों की आवाज़ बन रहा है। International Yoga Day, WHO का ग्लोबल सेंटर फॉर ट्रेडिशनल मेडिसिन, आर्टिफिशियल इंटेलीजेंस के लिए ग्लोबल फ्रेमवर्क, ऐसे कितने ही क्षेत्रों में भारत के प्रयासों ने नए वर्ल्ड ऑर्डर में अपनी मजबूत उपस्थिति दर्ज कराई है, और ये तो अभी शुरूआत है, ग्लोबल प्लेटफॉर्म पर भारत का सामर्थ्य नई ऊंचाई की तरफ बढ़ रहा है।

साथियों,

21वीं सदी के 25 साल बीत चुके हैं। इन 25 सालों में 11 साल हमारी सरकार ने देश की सेवा की है। और जब हम What India Thinks Today उससे जुड़ा सवाल उठाते हैं, तो हमें ये भी देखना होगा कि Past में क्या सवाल थे, क्या जवाब थे। इससे TV9 के विशाल दर्शक समूह को भी अंदाजा होगा कि कैसे हम, निर्भरता से आत्मनिर्भरता तक, Aspirations से Achievement तक, Desperation से Development तक पहुंचे हैं। आप याद करिए, एक दशक पहले, गांव में जब टॉयलेट का सवाल आता था, तो माताओं-बहनों के पास रात ढलने के बाद और भोर होने से पहले का ही जवाब होता था। आज उसी सवाल का जवाब स्वच्छ भारत मिशन से मिलता है। 2013 में जब कोई इलाज की बात करता था, तो महंगे इलाज की चर्चा होती थी। आज उसी सवाल का समाधान आयुष्मान भारत में नजर आता है। 2013 में किसी गरीब की रसोई की बात होती थी, तो धुएं की तस्वीर सामने आती थी। आज उसी समस्या का समाधान उज्ज्वला योजना में दिखता है। 2013 में महिलाओं से बैंक खाते के बारे में पूछा जाता था, तो वो चुप्पी साध लेती थीं। आज जनधन योजना के कारण, 30 करोड़ से ज्यादा बहनों का अपना बैंक अकाउंट है। 2013 में पीने के पानी के लिए कुएं और तालाबों तक जाने की मजबूरी थी। आज उसी मजबूरी का हल हर घर नल से जल योजना में मिल रहा है। यानि सिर्फ दशक नहीं बदला, बल्कि लोगों की ज़िंदगी बदली है। और दुनिया भी इस बात को नोट कर रही है, भारत के डेवलपमेंट मॉडल को स्वीकार रही है। आज भारत सिर्फ Nation of Dreams नहीं, बल्कि Nation That Delivers भी है।

साथियों,

जब कोई देश, अपने नागरिकों की सुविधा और समय को महत्व देता है, तब उस देश का समय भी बदलता है। यही आज हम भारत में अनुभव कर रहे हैं। मैं आपको एक उदाहरण देता हूं। पहले पासपोर्ट बनवाना कितना बड़ा काम था, ये आप जानते हैं। लंबी वेटिंग, बहुत सारे कॉम्प्लेक्स डॉक्यूमेंटेशन का प्रोसेस, अक्सर राज्यों की राजधानी में ही पासपोर्ट केंद्र होते थे, छोटे शहरों के लोगों को पासपोर्ट बनवाना होता था, तो वो एक-दो दिन कहीं ठहरने का इंतजाम करके चलते थे, अब वो हालात पूरी तरह बदल गया है, एक आंकड़े पर आप ध्यान दीजिए, पहले देश में सिर्फ 77 पासपोर्ट सेवा केंद्र थे, आज इनकी संख्या 550 से ज्यादा हो गई है। पहले पासपोर्ट बनवाने में, और मैं 2013 के पहले की बात कर रहा हूं, मैं पिछले शताब्दी की बात नहीं कर रहा हूं, पासपोर्ट बनवाने में जो वेटिंग टाइम 50 दिन तक होता था, वो अब 5-6 दिन तक सिमट गया है।

साथियों,

ऐसा ही ट्रांसफॉर्मेशन हमने बैंकिंग इंफ्रास्ट्रक्चर में भी देखा है। हमारे देश में 50-60 साल पहले बैंकों का नेशनलाइजेशन किया गया, ये कहकर कि इससे लोगों को बैंकिंग सुविधा सुलभ होगी। इस दावे की सच्चाई हम जानते हैं। हालत ये थी कि लाखों गांवों में बैंकिंग की कोई सुविधा ही नहीं थी। हमने इस स्थिति को भी बदला है। ऑनलाइन बैंकिंग तो हर घर में पहुंचाई है, आज देश के हर 5 किलोमीटर के दायरे में कोई न कोई बैंकिंग टच प्वाइंट जरूर है। और हमने सिर्फ बैंकिंग इंफ्रास्ट्रक्चर का ही दायरा नहीं बढ़ाया, बल्कि बैंकिंग सिस्टम को भी मजबूत किया। आज बैंकों का NPA बहुत कम हो गया है। आज बैंकों का प्रॉफिट, एक लाख 40 हज़ार करोड़ रुपए के नए रिकॉर्ड को पार कर चुका है। और इतना ही नहीं, जिन लोगों ने जनता को लूटा है, उनको भी अब लूटा हुआ धन लौटाना पड़ रहा है। जिस ED को दिन-रात गालियां दी जा रही है, ED ने 22 हज़ार करोड़ रुपए से अधिक वसूले हैं। ये पैसा, कानूनी तरीके से उन पीड़ितों तक वापिस पहुंचाया जा रहा है, जिनसे ये पैसा लूटा गया था।

साथियों,

Efficiency से गवर्नमेंट Effective होती है। कम समय में ज्यादा काम हो, कम रिसोर्सेज़ में अधिक काम हो, फिजूलखर्ची ना हो, रेड टेप के बजाय रेड कार्पेट पर बल हो, जब कोई सरकार ये करती है, तो समझिए कि वो देश के संसाधनों को रिस्पेक्ट दे रही है। और पिछले 11 साल से ये हमारी सरकार की बड़ी प्राथमिकता रहा है। मैं कुछ उदाहरणों के साथ अपनी बात बताऊंगा।

|

साथियों,

अतीत में हमने देखा है कि सरकारें कैसे ज्यादा से ज्यादा लोगों को मिनिस्ट्रीज में accommodate करने की कोशिश करती थीं। लेकिन हमारी सरकार ने अपने पहले कार्यकाल में ही कई मंत्रालयों का विलय कर दिया। आप सोचिए, Urban Development अलग मंत्रालय था और Housing and Urban Poverty Alleviation अलग मंत्रालय था, हमने दोनों को मर्ज करके Housing and Urban Affairs मंत्रालय बना दिया। इसी तरह, मिनिस्ट्री ऑफ ओवरसीज़ अफेयर्स अलग था, विदेश मंत्रालय अलग था, हमने इन दोनों को भी एक साथ जोड़ दिया, पहले जल संसाधन, नदी विकास मंत्रालय अलग था, और पेयजल मंत्रालय अलग था, हमने इन्हें भी जोड़कर जलशक्ति मंत्रालय बना दिया। हमने राजनीतिक मजबूरी के बजाय, देश की priorities और देश के resources को आगे रखा।

साथियों,

हमारी सरकार ने रूल्स और रेगुलेशन्स को भी कम किया, उन्हें आसान बनाया। करीब 1500 ऐसे कानून थे, जो समय के साथ अपना महत्व खो चुके थे। उनको हमारी सरकार ने खत्म किया। करीब 40 हज़ार, compliances को हटाया गया। ऐसे कदमों से दो फायदे हुए, एक तो जनता को harassment से मुक्ति मिली, और दूसरा, सरकारी मशीनरी की एनर्जी भी बची। एक और Example GST का है। 30 से ज्यादा टैक्सेज़ को मिलाकर एक टैक्स बना दिया गया है। इसको process के, documentation के हिसाब से देखें तो कितनी बड़ी बचत हुई है।

साथियों,

सरकारी खरीद में पहले कितनी फिजूलखर्ची होती थी, कितना करप्शन होता था, ये मीडिया के आप लोग आए दिन रिपोर्ट करते थे। हमने, GeM यानि गवर्नमेंट ई-मार्केटप्लेस प्लेटफॉर्म बनाया। अब सरकारी डिपार्टमेंट, इस प्लेटफॉर्म पर अपनी जरूरतें बताते हैं, इसी पर वेंडर बोली लगाते हैं और फिर ऑर्डर दिया जाता है। इसके कारण, भ्रष्टाचार की गुंजाइश कम हुई है, और सरकार को एक लाख करोड़ रुपए से अधिक की बचत भी हुई है। डायरेक्ट बेनिफिट ट्रांसफर- DBT की जो व्यवस्था भारत ने बनाई है, उसकी तो दुनिया में चर्चा है। DBT की वजह से टैक्स पेयर्स के 3 लाख करोड़ रुपए से ज्यादा, गलत हाथों में जाने से बचे हैं। 10 करोड़ से ज्यादा फर्ज़ी लाभार्थी, जिनका जन्म भी नहीं हुआ था, जो सरकारी योजनाओं का फायदा ले रहे थे, ऐसे फर्जी नामों को भी हमने कागजों से हटाया है।

साथियों,

 

हमारी सरकार टैक्स की पाई-पाई का ईमानदारी से उपयोग करती है, और टैक्सपेयर का भी सम्मान करती है, सरकार ने टैक्स सिस्टम को टैक्सपेयर फ्रेंडली बनाया है। आज ITR फाइलिंग का प्रोसेस पहले से कहीं ज्यादा सरल और तेज़ है। पहले सीए की मदद के बिना, ITR फाइल करना मुश्किल होता था। आज आप कुछ ही समय के भीतर खुद ही ऑनलाइन ITR फाइल कर पा रहे हैं। और रिटर्न फाइल करने के कुछ ही दिनों में रिफंड आपके अकाउंट में भी आ जाता है। फेसलेस असेसमेंट स्कीम भी टैक्सपेयर्स को परेशानियों से बचा रही है। गवर्नेंस में efficiency से जुड़े ऐसे अनेक रिफॉर्म्स ने दुनिया को एक नया गवर्नेंस मॉडल दिया है।

साथियों,

पिछले 10-11 साल में भारत हर सेक्टर में बदला है, हर क्षेत्र में आगे बढ़ा है। और एक बड़ा बदलाव सोच का आया है। आज़ादी के बाद के अनेक दशकों तक, भारत में ऐसी सोच को बढ़ावा दिया गया, जिसमें सिर्फ विदेशी को ही बेहतर माना गया। दुकान में भी कुछ खरीदने जाओ, तो दुकानदार के पहले बोल यही होते थे – भाई साहब लीजिए ना, ये तो इंपोर्टेड है ! आज स्थिति बदल गई है। आज लोग सामने से पूछते हैं- भाई, मेड इन इंडिया है या नहीं है?

साथियों,

आज हम भारत की मैन्युफैक्चरिंग एक्सीलेंस का एक नया रूप देख रहे हैं। अभी 3-4 दिन पहले ही एक न्यूज आई है कि भारत ने अपनी पहली MRI मशीन बना ली है। अब सोचिए, इतने दशकों तक हमारे यहां स्वदेशी MRI मशीन ही नहीं थी। अब मेड इन इंडिया MRI मशीन होगी तो जांच की कीमत भी बहुत कम हो जाएगी।

|

साथियों,

आत्मनिर्भर भारत और मेक इन इंडिया अभियान ने, देश के मैन्युफैक्चरिंग सेक्टर को एक नई ऊर्जा दी है। पहले दुनिया भारत को ग्लोबल मार्केट कहती थी, आज वही दुनिया, भारत को एक बड़े Manufacturing Hub के रूप में देख रही है। ये सक्सेस कितनी बड़ी है, इसके उदाहरण आपको हर सेक्टर में मिलेंगे। जैसे हमारी मोबाइल फोन इंडस्ट्री है। 2014-15 में हमारा एक्सपोर्ट, वन बिलियन डॉलर तक भी नहीं था। लेकिन एक दशक में, हम ट्वेंटी बिलियन डॉलर के फिगर से भी आगे निकल चुके हैं। आज भारत ग्लोबल टेलिकॉम और नेटवर्किंग इंडस्ट्री का एक पावर सेंटर बनता जा रहा है। Automotive Sector की Success से भी आप अच्छी तरह परिचित हैं। इससे जुड़े Components के एक्सपोर्ट में भी भारत एक नई पहचान बना रहा है। पहले हम बहुत बड़ी मात्रा में मोटर-साइकल पार्ट्स इंपोर्ट करते थे। लेकिन आज भारत में बने पार्ट्स UAE और जर्मनी जैसे अनेक देशों तक पहुंच रहे हैं। सोलर एनर्जी सेक्टर ने भी सफलता के नए आयाम गढ़े हैं। हमारे सोलर सेल्स, सोलर मॉड्यूल का इंपोर्ट कम हो रहा है और एक्सपोर्ट्स 23 गुना तक बढ़ गए हैं। बीते एक दशक में हमारा डिफेंस एक्सपोर्ट भी 21 गुना बढ़ा है। ये सारी अचीवमेंट्स, देश की मैन्युफैक्चरिंग इकोनॉमी की ताकत को दिखाती है। ये दिखाती है कि भारत में कैसे हर सेक्टर में नई जॉब्स भी क्रिएट हो रही हैं।

साथियों,

TV9 की इस समिट में, विस्तार से चर्चा होगी, अनेक विषयों पर मंथन होगा। आज हम जो भी सोचेंगे, जिस भी विजन पर आगे बढ़ेंगे, वो हमारे आने वाले कल को, देश के भविष्य को डिजाइन करेगा। पिछली शताब्दी के इसी दशक में, भारत ने एक नई ऊर्जा के साथ आजादी के लिए नई यात्रा शुरू की थी। और हमने 1947 में आजादी हासिल करके भी दिखाई। अब इस दशक में हम विकसित भारत के लक्ष्य के लिए चल रहे हैं। और हमें 2047 तक विकसित भारत का सपना जरूर पूरा करना है। और जैसा मैंने लाल किले से कहा है, इसमें सबका प्रयास आवश्यक है। इस समिट का आयोजन कर, TV9 ने भी अपनी तरफ से एक positive initiative लिया है। एक बार फिर आप सभी को इस समिट की सफलता के लिए मेरी ढेर सारी शुभकामनाएं हैं।

मैं TV9 को विशेष रूप से बधाई दूंगा, क्योंकि पहले भी मीडिया हाउस समिट करते रहे हैं, लेकिन ज्यादातर एक छोटे से फाइव स्टार होटल के कमरे में, वो समिट होती थी और बोलने वाले भी वही, सुनने वाले भी वही, कमरा भी वही। TV9 ने इस परंपरा को तोड़ा और ये जो मॉडल प्लेस किया है, 2 साल के भीतर-भीतर देख लेना, सभी मीडिया हाउस को यही करना पड़ेगा। यानी TV9 Thinks Today वो बाकियों के लिए रास्ता खोल देगा। मैं इस प्रयास के लिए बहुत-बहुत अभिनंदन करता हूं, आपकी पूरी टीम को, और सबसे बड़ी खुशी की बात है कि आपने इस इवेंट को एक मीडिया हाउस की भलाई के लिए नहीं, देश की भलाई के लिए आपने उसकी रचना की। 50,000 से ज्यादा नौजवानों के साथ एक मिशन मोड में बातचीत करना, उनको जोड़ना, उनको मिशन के साथ जोड़ना और उसमें से जो बच्चे सिलेक्ट होकर के आए, उनकी आगे की ट्रेनिंग की चिंता करना, ये अपने आप में बहुत अद्भुत काम है। मैं आपको बहुत बधाई देता हूं। जिन नौजवानों से मुझे यहां फोटो निकलवाने का मौका मिला है, मुझे भी खुशी हुई कि देश के होनहार लोगों के साथ, मैं अपनी फोटो निकलवा पाया। मैं इसे अपना सौभाग्य मानता हूं दोस्तों कि आपके साथ मेरी फोटो आज निकली है। और मुझे पक्का विश्वास है कि सारी युवा पीढ़ी, जो मुझे दिख रही है, 2047 में जब देश विकसित भारत बनेगा, सबसे ज्यादा बेनिफिशियरी आप लोग हैं, क्योंकि आप उम्र के उस पड़ाव पर होंगे, जब भारत विकसित होगा, आपके लिए मौज ही मौज है। आपको बहुत-बहुत शुभकामनाएं।

धन्यवाद।