ಸ್ವಾಧೀನ ನಿಯಂತ್ರಣ ನೀತಿಗಳ ಉದಾರೀಕರಣ ಮತ್ತು ಭೂ ದತ್ತಾಂಶ ಮಾಹಿತಿ ಉತ್ಪಾದನೆ ಆತ್ಮ ನಿರ್ಭರ್ ಭಾರತ್ ನಿರ್ಮಾಣದಲ್ಲಿ ನಮ್ಮ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದ ರೈತರು, ನವೋದ್ಯಮಗಳು, ಖಾಸಗಿ ವಲಯ, ಸಾರ್ವಜನಿಕ ಕ್ಷೇತ್ರ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಅನ್ವೇಷಣೆಗಳನ್ನು ಮಾಡಲು ಮತ್ತು ಪರಿಹಾರಗಳನ್ನು ಕಲ್ಪಿಸಲು ಈ ಸುಧಾರಣೆ ಲಾಭ ತರಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಪ್ರಧಾನಮಂತ್ರಿಯವರು, “ನಮ್ಮ ಸರ್ಕಾರ ಡಿಜಿಟಲ್ ಇಂಡಿಯಾಗೆ ಭಾರೀ ಉತ್ತೇಜನ ನೀಡುವ ನಿರ್ಧಾರ ತೆಗೆದುಕೊಂಡಿದೆ. ಅನಿಯಂತ್ರಿತ ನೀತಿಗಳ ಉದಾರೀಕರಣ ಮತ್ತು ಭೂ ಪ್ರಾದೇಶಿಕ ದತ್ತಾಂಶ ಮಾಹಿತಿ ಉತ್ಪಾದನೆ ನಮ್ಮ ದೃಷ್ಟಿಯಲ್ಲಿ ಆತ್ಮನಿರ್ಭರ್ ಭಾರತ್ ನಿರ್ಮಿಸುವಲ್ಲಿ ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ.

ಸುಧಾರಣಾ ಕ್ರಮಗಳನ್ನು ಬಂಧಮುಕ್ತಗೊಳಿಸಿದರೆ ನಮ್ಮ ದೇಶದ ನವೋದ್ಯಮಗಳು, ಖಾಸಗಿ ವಲಯ, ಸಾರ್ವಜಿಕ ವಲಯ ಮತ್ತು ಸಂಶೋಧನಾ ಸಂಸ್ಥೆಗಳಿಗೆ ನಾವೀನ್ಯತೆಗಳನ್ನು ಕೈಗೊಳ್ಳಲು ಅತ್ಯಂತ ಉತ್ತಮ ಅವಕಾಶಗಳನ್ನು ಕಲ್ಪಿಸಿದಂತಾಗುತ್ತದೆ ಮತ್ತು ಇದರಿಂದ ಎತ್ತರಕ್ಕೆ ಏರಬಹುದಾದ ಪರಿಹಾರಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ. ಜತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಆರ್ಥಿಕ ಬೆಳಣಿಗೆ ತ್ವರಿತಗೊಳ್ಳಲಿದೆ ಎಂದು ಹೇಳಿದ್ದಾರೆ.

ಭೂ ಪ್ರಾದೇಶಿಕ ಮತ್ತು ದೂರ ಸಂವೇದಿ ದತ್ತಾಂಶ ಮಾಹಿತಿಯ ಸಾಮರ್ಥ್ಯವನ್ನು ವೃದ್ಧಿಸಿದರೆ ಭಾರತದ ರೈತರು ಸಹ ಪ್ರಯೋಜನ ಪಡೆಯಲಿದ್ದಾರೆ. ದತ್ತಾಂಶವನ್ನು ಪ್ರಜಾತಂತ್ರಗೊಳಿಸಿದರೆ ಅದರಿಂದ ಹೊಸ ತಂತ್ರಜ್ಞಾನಗಳನ್ನು ಹೊಂದಲು ಮತ್ತು ವೇದಿಕೆಗಳನ್ನು ಪಡೆಯಲು ಸಹಕಾರಿಯಾಗಲಿದೆ. ಕೃಷಿ ಮತ್ತ ಸಂಬಂಧಿತ ಕ್ಷೇತ್ರದಲ್ಲಿ ದಕ್ಷತೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದಿದ್ದಾರೆ.

ಅನಿಯಂತ್ರಣ ವ್ಯವಸ್ಥೆ ಮೂಲಕ ಭಾರತದಲ್ಲಿ ವ್ಯವಹಾರವನ್ನು ಸುಲಭಗೊಳಿಸುವ, ಈ ರೀತಿಯ ಸುಧಾರಣೆಗಳನ್ನು ತರುವ ನಮ್ಮ ಬದ್ಧತೆಯ ಪ್ರತೀಕ ಇದಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.

 

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Regional rural banks are helping Indias growth story

Media Coverage

Regional rural banks are helping Indias growth story
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಜೂನ್ 2025
June 16, 2025

Citizens Appreciate India's Unstoppable Rise: PM Modi’s Leadership Redefines Global Ties