ಭಾರತೀಯ ಪೊಲೀಸ್ ಸೇವೆಯ 2016ನೇ ತಂಡದ 110ಕ್ಕೂ ಹೆಚ್ಚು ತರಬೇತಿ ನಿರತ ಅಧಿಕಾರಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು
ಪ್ರಶಿಕ್ಷು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಪೊಲೀಸ್ ಕಾರ್ಯನಿರ್ವಹಣೆಯಲ್ಲಿ ಮಾನವೀಯತೆ ಮತ್ತು ತಾಂತ್ರಿಕತೆಯ ಮಹತ್ವವನ್ನು ಪ್ರತಿಪಾದಿಸಿದರು. ಸ್ವಾತಂತ್ರ್ಯ ಬಂದ ದಿನದಿಂದ ಇಂದಿನವರೆಗೆ ಕರ್ತವ್ಯದ ವೇಳೆ ಬಲಿದಾನಗೈದ 33 ಸಾವಿರ ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಅವರು ಸ್ಮರಿಸಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್ ಈ ಸಂವಾದದ ವೇಳೆ ಹಾಜರಿದ್ದರು.