ಮಾನವೀಯತೆಯಲ್ಲಿ ನಮಗೆ ವಿಶ್ವಾಸ

Published By : Admin | May 26, 2015 | 15:04 IST

“ ನಮ್ಮಲ್ಲಿ ಒಬ್ಬೊಬ್ಬರ ವೈಯ್ಯಕ್ತಿಕ ಪಾಸ್ ಪೋರ್ಟ್ ಭಿನ್ನವಿರಬಹುದು, ಆದರೆ ಇವುಗಳು ಸಧೃಢ ಮಾನವೀಯತೆಯ ಬಂಧನಕ್ಕಿಂತ ಮಿಗಿಲಾಗದು” – ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯಾವುದೇ ನೈಸರ್ಗಿಕ ಆಪತ್ತಿನ, ಪ್ರಕೃತಿಕ ವಿಪತ್ತಿನ ಸಂದರ್ಭಗಳಲ್ಲೆಲ್ಲ  ಬಹುತೇಕವಾಗಿ ಹೇಳುತ್ತಿದ್ದ ಮುಖ್ಯ ಸಂದೇಶದ ಸಾರಾಂಶ.

ಯಮನ್, ಸಂದಿಗ್ಧತೆಯ ಉಚ್ಛ್ರಾಯ ಸ್ಥಿತಿಯಲ್ಲಿ  ಹಲವು ದೇಶಗಳು ಅಸಹಾಯಕವಾದರೂ, ಭಾರತ ಸಹಾಯ ಹಸ್ತ ನೀಡಿತು.ಯಾವುದೇ ಒಂದು ಪ್ರಕ್ರಿಯೆಯನ್ನೂ ವ್ಯರ್ಥಗೊಳಿಸಸದೆ, ತನ್ನೆಲ್ಲಾ ಸಾಮರ್ಥ್ಯದಿಂದ ಮಾಡಿದ ಸಕಾರಾತ್ಮಕ ಸಹಾಯದ ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ, ಇಂಥಹ ಸಂದರ್ಭಗಳಲ್ಲಿ ಅನೇಕ ದೇಶಗಳು ಭಾರತದ ಸಹಾಯವನ್ನು ಯಾಚಿಸಿದವು.



ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಪರಿಹಾರ ಮತ್ತು ಸಹಾಯ ಉಪಕ್ರಮಗಳ ಬಗ್ಗೆ ನಿಕಟ ಸಂಪರ್ಕವಿಟ್ಟು ಗಮನಿಸಿ, ಸೂಚನೆ ನೀಡುತ್ತಿದ್ದರು, ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ವಿ.ಕೆ ಸಿಂಗ್ ಅವರು ಸ್ವತಃ ಯಮನ್ ಮತ್ತು ಜಿಬೊಟಿಗೆ ತೆರಳಿ ಪರಿಹಾರ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅಲ್ಲಿಂದ ಪ್ರತಿಯೊಂದೂ ಚಟುವಟಿಕೆಗಳನ್ನು ಯುದ್ದೋಪಾದಿಯಲ್ಲಿ ಸಮರ್ಪಕವಾಗಿ ನೆರವೇರಿಸಿಕೊಟ್ಟರು.

ನೇಪಾಲದ ಪ್ರಕೃತಿಕ ವಿಪತ್ತು.25ನೇ ಎಪ್ರಿಲ್ 2015ರಂದು ಭಾರತವನ್ನು ತಲ್ಲಣಗೊಳಿಸಿದ ಇನ್ನೊಂದು ಘಟನೆ. ಪ್ರಧಾನಿಯವರ ಅಧ್ಯಕ್ಷತೆಯಲ್ಲಿ, ನೇಪಾಲದ ಸಹೋದರ ಮತ್ತು ಸಹೋದರಿಯರ ಸಹಾಯಕ್ಕಾಗಿ ವಿಶೇಷ ಉನ್ನತ ಮಟ್ಟದ ಸಮಿತಿ ನಿರ್ಮಿಸಿ.  ಭೂಕಂಪನದಿಂದ ಹಾನಿಗೊಳಗಾದ ನೆರೆದೇಶಕ್ಕೆ ಹಿರಿಯಣ್ಣನ ಸ್ಥಾನದಲ್ಲಿ ಆಶ್ರಯದಾಸರೆಯಾಗಿ ಮುಂದೆ ನಿಂತು ಸಹಾಯ-ಪರಿಹಾರ ನೀಡಿ ಅವರ ಕಣ್ಣೀರು ಒರೆಸಲು ಪ್ರಯತ್ನಿಸಿತು.l ,



ವಿಶ್ವಸಂಸ್ಥೆ ಪ್ರಶಂಸಿಸಿತು. ಭಾರತದ ಉಪಕಾರದ ಮನೋಭಾವವನ್ನು, ಮಾನವೀಯತೆಯ ನಡೆಯನ್ನು ಯು.ಎಸ್.ಎ ಶ್ಲಾಘಿಸಿತು. ಬಹುತೇಕ ಇಡೀ ವಿಶ್ವವೇ ಹೊಗಳಿತು ಅನ್ನಬಹುದು.

ಅಫ್ಘಾನ್ ಉಗ್ರರು 8 ತಿಂಗಳ ಕಾಲ ಬಂಧಿಸಿಟ್ಟಿದ್ದ ಫಾದರ್ ಅಲೆಕ್ಸ್ ಪ್ರೇಮ್ ಕುಮಾರ್ ಅವರನ್ನು ಯಶಸ್ವಿಯಾಗಿ ಬಂಧಮುಕ್ತಗೊಳಿಸಿ  2015ರ ಫೆಬ್ರವರಿಯಲ್ಲಿ ತಾಯ್ನಾಡಿಗೆ ಕೆರೆತರಲಾಯಿತು. ಅವರ ಕುಟುಂಬದ ಸಮ್ಮಿಳನ, ಕಟುಂಬದ ಆನಂದ ಮತ್ತು ಕುಟುಂಬದ ನೆಮ್ಮದಿಯ ನಿಟ್ಟುಸಿರು.ಕೇಂದ್ರ ಸರಕಾರಕ್ಕೆ ಅದರಲ್ಲೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಾಲಿಗೆ ಬಹುದೊಡ್ಡ ಯಶಸ್ಸಿನ ಮುಕುಟಗರಿಯಾಗಿದೆ.

ಮಧ್ಯಪ್ರಾಚ್ಯ ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ಮಂದಿ ಕೇಂದ್ರ ಸರಕಾರದ ಕಾರ್ಯಪಡೆಯಿಂದ ಸುರಕ್ಷಿತವಾಗಿ ತಾಯಿನಾಡು ಸೇರಿದರು ಅದರಲ್ಲೂ ಇರಾಕ್ ನಲ್ಲಿ ಉದ್ಯೋಗದ ಮೋಸಕ್ಕೆ ಬಲಿಯಾಗಿ, ದೌರ್ಜನ್ಯಕ್ಕೊಳಗಾದ ಕೇರಳ ಮೂಲದ ನರ್ಸ್ ಗಳನ್ನು ಬಂಧನದಿಂದ ರಕ್ಷಿಸಿ, ಸುರಕ್ಷಿತವಾಗಿ ಮನೆಗೆ ತಲುಪಿಸಿಕೊಟ್ಟರು. ಇದರ ಗಂಭೀರತೆಗೆ ಮತ್ತು ತ್ವರಿತ ಪರಿಹಾರದ ಯಶಸ್ಸಿಗೆ, ಅಂದಿನ ಕೇರಳ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಅವರು ಸ್ವತಃ ನೀಡಿದ ಧನ್ಯವಾದ ಪತ್ರವೇ ಸಾಕ್ಷಿ.

ಹೀಗೆ ಅನೇಕ ಬಾರಿ, ವಿವಿಧ ಸಂದರ್ಭಗಳಲ್ಲಿ, ಪಾಸ್ ಪೊರ್ಟಿನ ಬಣ್ಣಕ್ಕಿಂತ ಮಾನವೀಯತೆಯ ಸಂಬಂಧಗಳು ಮುಖ್ಯವೆಂದು ಪುನರಪಿ ತೋರಿಸಿಕೊಟ್ಟ ಕೇಂದ್ರ ಸರಕಾರದ ಸಾಮಾಜಿಕ ಕಾಳಜಿಯ ಘಟನೆಗಳಲ್ಲಿ ಕೇವಲ ಉದಾಹರಣೆಗಳು ಮಾತ್ರ.

  • Ashok Singh Pawar February 15, 2025

    तस्वीर मैं मोदी जी को देख है इस युग पुरुष को, अपने सामने देखने कि तमन्हा है इस जनम मैं बस यही एक आरजू है जय श्री🙏🙏🙏 राम
  • Dheeraj Thakur February 03, 2025

    जय श्री राम.
  • Dheeraj Thakur February 03, 2025

    जय श्री राम
  • Santosh Dabhade January 26, 2025

    jay ho
  • PAWAN KUMAR SAH January 17, 2025

    प्रयागराज की धरती पर, उमड़ा भक्तों का सैलाब, साधु-संतों के संग गूंजे, हरि का पावन आलाप। कुंभ में आस्था की गंगा, हर हृदय को करे प्रकाश, धर्म, संस्कृति संग एकता का, है यह अनुपम आवास।
  • C. Chandu January 09, 2025

    💐🙏
  • MAHESWARI K January 01, 2025

    விண்வெளி சாதனையில் இந்திய முதல் இடம் காரணம் எனும் மோடி ஜிக்கு வாழ்த்துக்கள்
  • ram Sagar pandey December 27, 2024

    🌹🙏🏻🌹जय श्रीराम🙏💐🌹जय माता दी 🚩🙏🙏🌹🌹🙏🙏🌹🌹जय श्रीकृष्णा राधे राधे 🌹🙏🏻🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹जय श्रीराम 🙏💐🌹
  • Jayanta Kumar Bhadra December 27, 2024

    Jai 🕉 🕉 🕉
  • Chhedilal Mishra December 26, 2024

    Jai shrikrishna
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bharat Tex showcases India's cultural diversity through traditional garments: PM Modi

Media Coverage

Bharat Tex showcases India's cultural diversity through traditional garments: PM Modi
NM on the go

Nm on the go

Always be the first to hear from the PM. Get the App Now!
...

5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

|

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

|

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .