'ವಸುಧೈವ ಕುಟುಂಬಕಂ'- ಈ ಎರಡು ಪದಗಳು ಗಾಢವಾದ ತತ್ವವನ್ನು ಸಾರುತ್ತವೆ. ಇದರ ಅರ್ಥ 'ಜಗತ್ತು ಒಂದೇ ಕುಟುಂಬ'. ಗಡಿಗಳು, ಭಾಷೆಗಳು ಮತ್ತು ಸಿದ್ಧಾಂತಗಳನ್ನು ಮೀರಿ ಒಂದು ಸಾರ್ವತ್ರಿಕ ಕುಟುಂಬವಾಗಿ ಪ್ರಗತಿ ಸಾಧಿಸಲು ನಮ್ಮನ್ನು ಪ್ರೋತ್ಸಾಹಿಸುವ ದೃಷ್ಟಿಕೋನ ಇದಾಗಿದೆ. ಭಾರತದ ಜಿ-20 ಅಧ್ಯಕ್ಷತೆಯ ಸಮಯದಲ್ಲಿ, ಇದು ಮಾನವ ಕೇಂದ್ರಿತ ಪ್ರಗತಿಯ ಕರೆಯಾಗಿ ಮಾರ್ಪಟ್ಟಿದೆ. ಒಂದು ಭೂಮಿಯಾಗಿ, ನಮ್ಮ ಗ್ರಹವನ್ನು ಪಾಲನೆ ಮಾಡಲು ನಾವು ಒಟ್ಟಾಗಿ ಬರುತ್ತಿದ್ದೇವೆ. ಒಂದು ಕುಟುಂಬವಾಗಿ, ಬೆಳವಣಿಗೆಯ ಸಾಧನೆಯಲ್ಲಿ ನಾವು ಪರಸ್ಪರರನ್ನು ಬೆಂಬಲಿಸುತ್ತೇವೆ ಮತ್ತು ನಾವು ಹಂಚಿಕೆಯ ಭವಿಷ್ಯದ ಕಡೆಗೆ ಒಟ್ಟಿಗೆ ಸಾಗುತ್ತೇವೆ - ಒಂದು ಭವಿಷ್ಯ - ಇದು ಈ ಅಂತರ್‌ ಸಂಪರ್ಕಿತ ಕಾಲದಲ್ಲಿ ನಿರಾಕರಿಸಲಾಗದ ಸತ್ಯವಾಗಿದೆ.

ಸಾಂಕ್ರಾಮಿಕ ನಂತರದ ವಿಶ್ವ ಕ್ರಮಾಂಕವು ಅದರ ಹಿಂದಿನ ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಇಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಿವೆ.

ಮೊದಲನೆಯದಾಗಿ, ಪ್ರಪಂಚದ ಜಿಡಿಪಿ-ಕೇಂದ್ರಿತ ದೃಷ್ಟಿಕೋನವು ಮಾನವ-ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾಗುವ ಅಗತ್ಯವಿದೆ ಎಂಬ ಅರಿವು ಬೆಳೆಯುತ್ತಿದೆ.

ಎರಡನೆಯದಾಗಿ, ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸಾರ್ಹತೆಯ ಪ್ರಾಮುಖ್ಯತೆಯನ್ನು ಜಗತ್ತು ಗುರುತಿಸುತ್ತಿದೆ.

ಮೂರನೆಯದಾಗಿ, ಜಾಗತಿಕ ಸಂಸ್ಥೆಗಳ ಸುಧಾರಣೆಯ ಮೂಲಕ ಬಹುಪಕ್ಷೀಯತೆಯನ್ನು ಹೆಚ್ಚಿಸಲು ಸಾಮೂಹಿಕ ಕರೆ ಇದೆ.

ನಮ್ಮ ಜಿ-20 ಅಧ್ಯಕ್ಷತೆಯು ಈ ಬದಲಾವಣೆಗಳಿಗೆ ವೇಗವರ್ಧಕದ ಪಾತ್ರವನ್ನು ವಹಿಸಿದೆ.

ಡಿಸೆಂಬರ್ 2022 ರಲ್ಲಿ, ನಾವು ಇಂಡೋನೇಷ್ಯಾದಿಂದ ಅಧ್ಯಕ್ಷತೆಯನ್ನು ವಹಿಸಿಕೊಂಡಾಗ, ನಾನು ಜಿ-20 ರ ಮೂಲಕ ಮನಸ್ಥಿತಿ ಬದಲಾವಣೆಯನ್ನು ವೇಗಗೊಳಿಸಬೇಕು ಎಂದು ಬರೆದಿದ್ದೆ. ಇದು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು, ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳು (ಗ್ಲೋಬಲ್‌ ಸೌತ್)‌ ಮತ್ತು ಆಫ್ರಿಕಾದ ರಾಷ್ಟ್ರಗಳ ನಿರ್ಲಕ್ಷಿತ ಆಕಾಂಕ್ಷೆಗಳನ್ನು ಮುಖ್ಯವಾಹಿನಿಗೆ ತರುವ ಸಂದರ್ಭದಲ್ಲಿ ಅಗತ್ಯವಾಗಿತ್ತು.

ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯು 125 ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ಇದು ನಮ್ಮ ಅಧ್ಯಕ್ಷತೆಯಲ್ಲಿನ ಅತಿಮುಖ್ಯ ಉಪಕ್ರಮಗಳಲ್ಲಿ ಒಂದಾಗಿದೆ. ಗ್ಲೋಬಲ್ ಸೌತ್‌ನಿಂದ ಒಳಹರಿವು ಮತ್ತು ಆಲೋಚನೆಗಳನ್ನು ಸಂಗ್ರಹಿಸಲು ಇದೊಂದು ಪ್ರಮುಖ ಕಾರ್ಯವಾಗಿತ್ತು. ಇದಲ್ಲದೆ, ನಮ್ಮ ಅಧ್ಯಕ್ಷತೆಯು ಆಫ್ರಿಕನ್ ದೇಶಗಳಿಂದ ಅತಿದೊಡ್ಡ ಭಾಗವಹಿಸುವಿಕೆಯನ್ನು ಕಂಡಿರುವುದು ಮಾತ್ರವಲ್ಲ, ಆಫ್ರಿಕನ್ ಒಕ್ಕೂಟವನ್ನು ಜಿ-20 ರ ಖಾಯಂ ಸದಸ್ಯನನ್ನಾಗಿ ಸೇರಿಸಲು ಒತ್ತಾಯಿಸಿದೆ.

ಅಂತರ್‌ ಸಂಪರ್ಕಿತ ಜಗತ್ತಿನಲ್ಲಿ ವಲಯಗಳಾದ್ಯಂತ ನಮ್ಮ ಸವಾಲುಗಳು ಪರಸ್ಪರ ಬೆಸೆದಿರುತ್ತವೆ. ಇದು 2030 ರ ಕಾರ್ಯಸೂಚಿಯ ಮಧ್ಯದ ವರ್ಷವಾಗಿದೆ ಮತ್ತು ಎಸ್‌ ಡಿ ಜಿ (ಸುಸ್ಥಿರ ಅಭಿವೃದ್ಧಿ ಗುರಿ) ಗಳ ಪ್ರಗತಿಯು ಹಳಿ ತಪ್ಪುತ್ತಿವೆ ಎಂದು ಅನೇಕರು ಹೆಚ್ಚಿನ ಕಾಳಜಿಯಿಂದ ಗಮನಿಸುತ್ತಿದ್ದಾರೆ. ಎಸ್‌ ಡಿ ಜಿ ಗಳ ಪ್ರಗತಿಯನ್ನು ವೇಗಗೊಳಿಸುವ ಜಿ-20 2023 ಕ್ರಿಯಾ ಯೋಜನೆಯು ಎಸ್‌ ಡಿ ಜಿ ಗಳನ್ನು ಅನುಷ್ಠಾನಗೊಳಿಸುವತ್ತ ಜಿ-20 ರ ಭವಿಷ್ಯದ ದಿಕ್ಕನ್ನು ಮುನ್ನಡೆಸುತ್ತದೆ.

ಭಾರತದಲ್ಲಿ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಪ್ರಾಚೀನ ಕಾಲದಿಂದಲೂ ರೂಢಿಯಾಗಿದೆ ಮತ್ತು ಆಧುನಿಕ ಕಾಲದಲ್ಲೂ ನಾವು ಹವಾಮಾನ ಕ್ರಮಕ್ಕೆ ನಮ್ಮ ಪಾಲಿನ ಕೊಡುಗೆಯನ್ನು ನೀಡುತ್ತಿದ್ದೇವೆ.

ಗ್ಲೋಬಲ್‌ ಸೌತ್‌ ನ ಹಲವು ದೇಶಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಮತ್ತು ಹವಾಮಾನ ಕ್ರಮವು ಇದಕ್ಕೆ ಪೂರಕವಾಗಿರಬೇಕು. ಹವಾಮಾನ ಕ್ರಮದ ಮಹತ್ವಾಕಾಂಕ್ಷೆಗಳು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯ ಮೇಲಿನ ಕ್ರಮಗಳೊಂದಿಗೆ ಹೊಂದಾಣಿಕೆಯಾಗಬೇಕು.

ಏನನ್ನು ಮಾಡಬಾರದು ಎಂಬ ಸಂಪೂರ್ಣ ನಿರ್ಬಂಧಿತ ಮನೋಭಾವದಿಂದ ದೂರ ಸರಿಯುವ ಅವಶ್ಯಕತೆಯಿದೆ ಎಂದು ನಾವು ನಂಬುತ್ತೇವೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಏನು ಮಾಡಬಹುದು ಎಂಬುದರ ಮೇಲೆ ಹೆಚ್ಚು ರಚನಾತ್ಮಕ ನಿಲುವಿನ ಬಗ್ಗೆ ಕೇಂದ್ರೀಕರಿಸಬೇಕು.

ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆಗಾಗಿ ಚೆನ್ನೈ ಹೆಚ್‌ ಎಲ್‌ ಪಿ ಗಳು ನಮ್ಮ ಸಾಗರಗಳನ್ನು ಆರೋಗ್ಯಕರವಾಗಿಡುವುದರ ಮೇಲೆ ಕೇಂದ್ರೀಕರಿಸುತ್ತವೆ.

ಸ್ವಚ್ಛ ಮತ್ತು ಹಸಿರು ಹೈಡ್ರೋಜನ್‌ಗಾಗಿ ಹಸಿರು ಹೈಡ್ರೋಜನ್ ಇನ್ನೋವೇಶನ್ ಸೆಂಟರ್ ನೊಂದಿಗೆ ಜಾಗತಿಕ ಪೂರಕ ವ್ಯವಸ್ಥೆಯು ನಮ್ಮ ಅಧ್ಯಕ್ಷ ಸ್ಥಾನದಿಂದ ಹೊರಹೊಮ್ಮುತ್ತದೆ.

2015 ರಲ್ಲಿ, ನಾವು ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರಾರಂಭಿಸಿದ್ದೇವೆ. ಈಗ, ಜಾಗತಿಕ ಜೈವಿಕ ಇಂಧನ ಒಕ್ಕೂಟದ ಮೂಲಕ, ಮರುಬಳಕೆ ಆರ್ಥಿಕತೆಯ ಪ್ರಯೋಜನಗಳಿಗೆ ಅನುಗುಣವಾಗಿ ಇಂಧನ ಪರಿವರ್ತನೆಗಳನ್ನು ಸಕ್ರಿಯಗೊಳಿಸಲು ನಾವು ಜಗತ್ತನ್ನು ಬೆಂಬಲಿಸುತ್ತೇವೆ.

ಹವಾಮಾನ ಕ್ರಮವನ್ನು ಪ್ರಜಾಪ್ರಭುತ್ವಗೊಳಿಸುವುದು ಆಂದೋಲನಕ್ಕೆ ಆವೇಗವನ್ನು ನೀಡಲು ಉತ್ತಮ ಮಾರ್ಗವಾಗಿದೆ. ವ್ಯಕ್ತಿಗಳು ತಮ್ಮ ದೀರ್ಘಾವಧಿಯ ಆರೋಗ್ಯದ ಆಧಾರದ ಮೇಲೆ ದೈನಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆಯೇ, ಅವರು ಗ್ರಹದ ದೀರ್ಘಾವಧಿಯ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಆಧಾರದ ಮೇಲೆ ಜೀವನಶೈಲಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಯೋಗವು ಸ್ವಾಸ್ಥ್ಯಕ್ಕಾಗಿ ಜಾಗತಿಕ ಜನಾಂದೋಲನವಾದಂತೆಯೇ, ನಾವು ಸುಸ್ಥಿರ ಪರಿಸರಕ್ಕಾಗಿ ಜೀವನಶೈಲಿಯೊಂದಿಗೆ (ಲೈಫ್) ಜಗತ್ತನ್ನು ಹುರಿದುಂಬಿಸಿದ್ದೇವೆ.

ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಸಿರಿಧಾನ್ಯ ಅಥವಾ ಶ್ರೀಅನ್ನ, ಹವಾಮಾನ-ಆಧಾರಿತ ಕೃಷಿಯನ್ನು ಉತ್ತೇಜಿಸುವ ಜೊತೆಗೆ ಇದಕ್ಕೆ ಸಹಾಯ ಮಾಡಬಹುದು. ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದಲ್ಲಿ, ನಾವು ಸಿರಿಧಾನ್ಯವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಆಹಾರ ಭದ್ರತೆ ಮತ್ತು ಪೋಷಣೆಯ ಮೇಲಿನ ಡೆಕ್ಕನ್ ಉನ್ನತ ಮಟ್ಟದ ತತ್ವಗಳು ಸಹ ಈ ದಿಕ್ಕಿನಲ್ಲಿ ಸಹಾಯಕವಾಗಿವೆ.

ತಂತ್ರಜ್ಞಾನವು ಪರಿವರ್ತಕವಾಗಿದೆ ಆದರೆ ಅದನ್ನು ಎಲ್ಲರಿಗೂ ಲಭ್ಯಗೊಳಿಸುವ ಅಗತ್ಯವಿದೆ. ಹಿಂದೆ, ತಾಂತ್ರಿಕ ಪ್ರಗತಿಯ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನವಾಗಿ ದೊರಕಿಲ್ಲ. ಭಾರತವು ಕಳೆದ ಕೆಲವು ವರ್ಷಗಳಿಂದ ತಂತ್ರಜ್ಞಾನವನ್ನು ಅಸಮಾನತೆಯನ್ನು ಕಡಿಮೆ ಮಾಡಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿದೆ.

ಉದಾಹರಣೆಗೆ, ಪ್ರಪಂಚದಾದ್ಯಂತದ ಬ್ಯಾಂಕ್ ವ್ಯವಸ್ಥೆಯಿಂದ ಹೊರಗೆ ಉಳಿದಿರುವ ಅಥವಾ ಡಿಜಿಟಲ್ ಗುರುತುಗಳನ್ನು ಹೊಂದಿಲ್ಲದ ಶತಕೋಟಿ ಜನರನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಮೂಲಕ ಆರ್ಥಿಕವಾಗಿ ಒಳಗೊಳ್ಳಬಹುದು. ನಮ್ಮ ಡಿಪಿಐ ಬಳಸಿ ನಾವು ನಿರ್ಮಿಸಿದ ಪರಿಹಾರಗಳು ಈಗ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಈಗ, ಜಿ-20 ಮೂಲಕ, ಒಳಗೊಳ್ಳುವ ಬೆಳವಣಿಗೆಯ ಶಕ್ತಿಯನ್ನು ಅನ್‌ಲಾಕ್ ಮಾಡಲು ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಡಿಪಿಐ ಅನ್ನು ಅಳವಡಿಸಿಕೊಳ್ಳಲು, ನಿರ್ಮಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತೇವೆ.

ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿರುವುದು ಆಕಸ್ಮಿಕವಲ್ಲ. ನಮ್ಮ ಸರಳ, ಹೆಚ್ಚಿಸಬಲ್ಲ ಮತ್ತು ಸುಸ್ಥಿರ ಪರಿಹಾರಗಳು ನಮ್ಮ ಅಭಿವೃದ್ಧಿಯ ಕಥೆಯನ್ನು ಮುನ್ನಡೆಸಲು ದುರ್ಬಲ ಮತ್ತು ವಂಚಿತರನ್ನು ಸಬಲೀಕರಣಗೊಳಿಸಿವೆ. ಬಾಹ್ಯಾಕಾಶದಿಂದ ಕ್ರೀಡೆ, ಆರ್ಥಿಕತೆ, ಉದ್ಯಮಶೀಲತೆಯವರೆಗೆ ಭಾರತೀಯ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಧ್ಯಕ್ಷತೆಯು ಲಿಂಗ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು, ಕಾರ್ಮಿಕ ಬಲದ ಭಾಗವಹಿಸುವಿಕೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಮತ್ತು ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರಿಗೆ ದೊಡ್ಡ ಪಾತ್ರವನ್ನು ಸಕ್ರಿಯಗೊಳಿಸುತ್ತದೆ.

ಭಾರತಕ್ಕೆ, ಜಿ-20 ಅಧ್ಯಕ್ಷತೆಯು ಕೇವಲ ಉನ್ನತ ಮಟ್ಟದ ರಾಜತಾಂತ್ರಿಕ ಪ್ರಯತ್ನವಲ್ಲ. ಪ್ರಜಾಪ್ರಭುತ್ವದ ತಾಯಿಯಾಗಿ ಮತ್ತು ವೈವಿಧ್ಯತೆಗೆ ಮಾದರಿಯಾಗಿ, ನಾವು ಈ ಅನುಭವದ ಬಾಗಿಲುಗಳನ್ನು ಜಗತ್ತಿಗೆ ತೆರೆದಿದ್ದೇವೆ.

ಇಂದು, ಪ್ರಮಾಣದಲ್ಲಿ ಕೆಲಸಗಳನ್ನು ಸಾಧಿಸುವುದು ಭಾರತದ ಒಂದು ಗುಣಲಕ್ಷಣವಾಗಿದೆ. ಜಿ-20 ಅಧ್ಯಕ್ಷತೆಯು ಇದಕ್ಕೆ ಹೊರತಾಗಿಲ್ಲ. ಅದೊಂದು ಜನ ಪ್ರೇರಿತ ಆಂದೋಲನವಾಗಿ ಮಾರ್ಪಟ್ಟಿದೆ. ನಮ್ಮ ರಾಷ್ಟ್ರದ ಉದ್ದಗಲಕ್ಕೆ 60 ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗಿದೆ, ನಮ್ಮ ಅವಧಿಯ ಅಂತ್ಯದ ವೇಳೆಗೆ 125 ದೇಶಗಳ ಸುಮಾರು 100,000 ಪ್ರತಿನಿಧಿಗಳಿಗೆ ಆತಿಥ್ಯ ನೀಡಲಾಗುವುದು. ಯಾವುದೇ ಅಧ್ಯಕ್ಷತೆಯಲ್ಲೂ ಇಷ್ಟೊಂದು ವಿಶಾಲವಾದ ಮತ್ತು ವೈವಿಧ್ಯಮಯ ಭೌಗೋಳಿಕ ವಿಸ್ತಾರದಲ್ಲಿ ಆಯೋಜನೆಯಾಗಿರಲಿಲ್ಲ.

ಭಾರತದ ಜನಸಂಖ್ಯೆ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಅಭಿವೃದ್ಧಿಯ ಬಗ್ಗೆ ಬೇರೆಯವರಿಂದ ಕೇಳುವುದು ಬೇರೆಯ ವಿಷಯ, ಆದರೆ ಅವುಗಳನ್ನು ನೇರವಾಗಿ ಅನುಭವಿಸುವುದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ನಮ್ಮ ಜಿ-20 ಪ್ರತಿನಿಧಿಗಳು ಇದನ್ನು ಒಪ್ಪುತ್ತಾರೆ ಎಂದು ನನಗೆ ಖಾತ್ರಿಯಿದೆ.

ನಮ್ಮ ಜಿ-20 ಅಧ್ಯಕ್ಷತೆಯು ವಿಭಜನೆಗಳನ್ನು ಬೆಸೆಯಲು, ಅಡೆತಡೆಗಳನ್ನು ಕೆಡವಲು ಮತ್ತು ಸಹಯೋಗದ ಬೀಜಗಳನ್ನು ಬಿತ್ತಲು ಶ್ರಮಿಸುತ್ತದೆ, ಇಲ್ಲಿ ಅಪಸ್ವರದ ವಿರುದ್ಧ ಏಕತೆ ಮೇಲುಗೈ ಸಾಧಿಸುತ್ತದೆ, ಇಲ್ಲಿ ಹಂಚಿಕೆಯ ಅದೃಷ್ಟವು ಪ್ರತ್ಯೇಕತೆಯನ್ನು ನಿವಾರಿಸುತ್ತದೆ. ಜಿ-20 ಅಧ್ಯಕ್ಷರಾಗಿ, ನಾವು ಜಾಗತಿಕ ಕೋಷ್ಟಕವನ್ನು ವಿಸ್ತರಿಸಲು, ಪ್ರತಿ ಧ್ವನಿಯನ್ನು ಕೇಳಲಾಗುತ್ತದೆ ಮತ್ತು ಪ್ರತಿ ದೇಶವು ಕೊಡುಗೆ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿಜ್ಞೆ ಮಾಡಿದ್ದೆವು. ಕ್ರಮಗಳು ಮತ್ತು ಫಲಿತಾಂಶಗಳೊಂದಿಗೆ ನಾವು ನಮ್ಮ ಪ್ರತಿಜ್ಞೆಯನ್ನು ಈಡೇರಿಸಿದ್ದೇವೆ ಎಂಬ ಭರವಸೆ ನನಗಿದೆ.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
270 million pulled out of poverty! How Modi government achieved a remarkable dip in extreme poverty & what’s the road ahead? Explained

Media Coverage

270 million pulled out of poverty! How Modi government achieved a remarkable dip in extreme poverty & what’s the road ahead? Explained
NM on the go

Nm on the go

Always be the first to hear from the PM. Get the App Now!
...
ಏಕ್ತಾ ಕಾ ಮಹಾಕುಂಭ್ - ಹೊಸ ಯುಗದ ಉದಯ
February 27, 2025

- ಶ್ರೀ ನರೇಂದ್ರ ಮೋದಿ,
- ಗೌರವಾನ್ವಿತ ಪ್ರಧಾನಮಂತ್ರಿ

ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಯಶಸ್ವಿಯಾಗಿ ಮುಕ್ತಾಯವಾಗಿದೆ. ಏಕತೆಯ ಮಹಾಯಜ್ಞ ಪೂರ್ಣಗೊಂಡಿದೆ. ಒಂದು ರಾಷ್ಟ್ರದ ಪ್ರಜ್ಞೆ ಜಾಗೃತವಾದಾಗ, ಶತಮಾನಗಳಷ್ಟು ಹಳೆಯದಾದ ಅಧೀನತೆಯ ಮನಸ್ಥಿತಿಯ ಸಂಕೋಲೆಗಳಿಂದ ಮುಕ್ತವಾದಾಗ, ಅದು ನವೀಕೃತ ಶಕ್ತಿಯ ತಾಜಾ ಗಾಳಿಯಲ್ಲಿ ಮುಕ್ತವಾಗಿ ಉಸಿರಾಡುತ್ತದೆ. ಇದರ ಫಲಿತಾಂಶವನ್ನು ಜನವರಿ 13ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕ್ತಾ ಕಾ ಮಹಾಕುಂಭ(ಏಕತೆಯ ಮಹಾಕುಂಭ)ದಲ್ಲಿ ವೀಕ್ಷಿಸಲಾಯಿತು.

|

2024 ಜನವರಿ 22ರಂದು, ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ, ನಾನು ದೇವಭಕ್ತಿ ಮತ್ತು ದೇಶಭಕ್ತಿಯ ಬಗ್ಗೆ ಮಾತನಾಡಿದೆ - ದೈವಿಕ ಮತ್ತು ರಾಷ್ಟ್ರದ ಮೇಲಿನ ಭಕ್ತಿ. ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದ ಸಮಯದಲ್ಲಿ, ದೇವರು ಮತ್ತು ದೇವತೆಗಳು, ಸಂತರು, ಮಹಿಳೆಯರು, ಮಕ್ಕಳು, ಯುವಕರು, ಹಿರಿಯ ನಾಗರಿಕರು ಮತ್ತು ಜೀವನದ ಎಲ್ಲಾ ಹಂತಗಳ ಜನರು ಒಟ್ಟಿಗೆ ಬಂದರು. ಅಲ್ಲಿ ನಾವು ರಾಷ್ಟ್ರದ ಜಾಗೃತ ಪ್ರಜ್ಞೆಯನ್ನು ಕಂಡೆವು. ಇದು ಏಕತಾ ಕಾ ಮಹಾಕುಂಭ, ಅಲ್ಲಿ 140 ಕೋಟಿ ಭಾರತೀಯರ ಭಾವನೆಗಳು ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ, ಈ ಪವಿತ್ರ ಸಂದರ್ಭಕ್ಕಾಗಿ ಒಟ್ಟುಗೂಡಿದವು.


ಪ್ರಯಾಗರಾಜ್‌ನ ಈ ಪವಿತ್ರ ಪ್ರದೇಶದಲ್ಲಿ ಶೃಂಗವರ್‌ಪುರವಿದೆ, ಇದು ಏಕತೆ, ಸಾಮರಸ್ಯ ಮತ್ತು ಪ್ರೀತಿಯ ಪವಿತ್ರ ಭೂಮಿಯಾಗಿದೆ, ಅಲ್ಲಿ ಪ್ರಭು ಶ್ರೀರಾಮ ಮತ್ತು ನಿಷಾದರಾಜ್ ಭೇಟಿಯಾಗಿದ್ದರು. ಅವರ ಸಭೆಯು ಭಕ್ತಿ ಮತ್ತು ಸದ್ಭಾವನೆಯ ಸಂಗಮವನ್ನು ಸಂಕೇತಿಸುತ್ತದೆ. ಇಂದಿಗೂ, ಪ್ರಯಾಗರಾಜ್ ನಮಗೆ ಅದೇ ಮನೋಭಾವದಿಂದ ಸ್ಫೂರ್ತಿ ನೀಡುತ್ತದೆ.

|

45 ದಿನಗಳ ಕಾಲ, ದೇಶದ ಮೂಲೆ ಮೂಲೆಯಿಂದ ಕೋಟ್ಯಂತರ ಜನರು ಸಂಗಮಕ್ಕೆ ಹೋಗುವುದನ್ನು ನಾನು ನೋಡಿದೆ. ಸಂಗಮದಲ್ಲಿ ಭಾವನೆಗಳ ಅಲೆ ಏರುತ್ತಲೇ ಇತ್ತು. ಪ್ರತಿಯೊಬ್ಬ ಭಕ್ತರೂ ಒಂದೇ ಉದ್ದೇಶದಿಂದ ಬಂದರು - ಅದು ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದಾಗಿತ್ತು. ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮವು ಪ್ರತಿಯೊಬ್ಬ ಯಾತ್ರಿಕರನ್ನು ಉತ್ಸಾಹ, ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿತು.

|

ಪ್ರಯಾಗರಾಜ್‌ನಲ್ಲಿ ನಡೆಯುವ ಈ ಮಹಾಕುಂಭವು ಆಧುನಿಕ ನಿರ್ವಹಣಾ ವೃತ್ತಿಪರರು, ಯೋಜನೆ ಮತ್ತು ನೀತಿ ತಜ್ಞರಿಗೆ ಅಧ್ಯಯನದ ವಿಷಯವಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಈ ಪ್ರಮಾಣದ ಯಾವುದೇ ಸಮಾನಾಂತರ ಅಥವಾ ಉದಾಹರಣೆ ಇಲ್ಲ.

ನದಿಗಳ ಸಂಗಮದ ದಡದಲ್ಲಿರುವ ಪ್ರಯಾಗರಾಜ್‌ನಲ್ಲಿ ಕೋಟ್ಯಂತರ ಜನರು ಹೇಗೆ ಒಟ್ಟುಗೂಡಿದರು ಎಂಬುದನ್ನು ಜಗತ್ತು ಆಶ್ಚರ್ಯದಿಂದ ನೋಡಿತು. ಈ ಜನರಿಗೆ ಯಾವುದೇ ಔಪಚಾರಿಕ ಆಹ್ವಾನಗಳು ಇರಲಿಲ್ಲ, ಯಾವಾಗ ಹೋಗಬೇಕೆಂಬುದರ ಬಗ್ಗೆ ಯಾವುದೇ ಪೂರ್ವ ಸಂವಹನವಿರಲಿಲ್ಲ. ಆದರೂ ಕೋಟ್ಯಂತರ ಜನರು ತಮ್ಮದೇ ಆದ ಇಚ್ಛೆಯಿಂದ ಮಹಾಕುಂಭಕ್ಕೆ ಹೊರಟರು ಮತ್ತು ಪವಿತ್ರ ನೀರಿನಲ್ಲಿ ಪುಣ್ಯಸ್ನಾನ ಮಾಡಿ ಆನಂದ ಅನುಭವಿಸಿದರು.

|

ಪವಿತ್ರ ಸ್ನಾನದ ನಂತರ ಅಪಾರ ಸಂತೋಷ ಮತ್ತು ತೃಪ್ತಿ ಹೊರಸೂಸಿದ ಆ ಮುಖಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಮಹಿಳೆಯರು, ಹಿರಿಯರು, ನಮ್ಮ ದಿವ್ಯಾಂಗ ಸಹೋದರ ಸಹೋದರಿಯರು - ಎಲ್ಲರೂ ಸಂಗಮ ತಲುಪಲು ಒಂದು ಮಾರ್ಗ ಕಂಡುಕೊಂಡರು.

|

ಭಾರತದ ಯುವಕರ ಅಗಾಧ ಭಾಗವಹಿಸಿದ್ದನ್ನು ನೋಡುವುದೇ ನನಗೆ ವಿಶೇಷವಾಗಿ ಹೃದಯಸ್ಪರ್ಶಿಯಾಗಿತ್ತು. ಮಹಾಕುಂಭದಲ್ಲಿ ಯುವ ಪೀಳಿಗೆಯ ಉಪಸ್ಥಿತಿಯು ಭಾರತದ ಯುವಕರು ನಮ್ಮ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಜ್ಯೋತಿ ಹೊತ್ತವರಾಗಿರುತ್ತಾರೆ ಎಂಬ ಆಳವಾದ ಸಂದೇಶವನ್ನು ರವಾನಿಸುತ್ತದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದಾರೆ.

ಈ ಮಹಾಕುಂಭಕ್ಕೆ ಪ್ರಯಾಗ್‌ರಾಜ್‌ಗೆ ಆಗಮಿಸಿದ ಜನರ ಸಂಖ್ಯೆ ನಿಸ್ಸಂದೇಹವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಆದರೆ ಭೌತಿಕವಾಗಿ ಹಾಜರಿದ್ದವರನ್ನು ಮೀರಿ, ಪ್ರಯಾಗ್‌ರಾಜ್‌ಗೆ ತಲುಪಲು ಸಾಧ್ಯವಾಗದ ಕೋಟ್ಯಂತರ ಜನರು ಈ ಸಂದರ್ಭದೊಂದಿಗೆ ಭಾವನಾತ್ಮಕವಾಗಿಯೂ ಆಳವಾದ ಸಂಪರ್ಕ ಹೊಂದಿದ್ದರು. ಯಾತ್ರಿಕರು ತಂದ ಪವಿತ್ರ ನೀರು ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಆನಂದದ ಮೂಲವಾಯಿತು. ಮಹಾಕುಂಭದಿಂದ ಹಿಂದಿರುಗಿದ ಅನೇಕರನ್ನು ಅವರ ಹಳ್ಳಿಗಳಲ್ಲಿ ಗೌರವದಿಂದ ಸ್ವೀಕರಿಸಲಾಯಿತು, ಸಮಾಜವು ಸಹ ಗೌರವಿಸಿತು.

|

ಕಳೆದ ಕೆಲವು ವಾರಗಳಲ್ಲಿ ನಡೆದದ್ದು ಅಭೂತಪೂರ್ವ ಮತ್ತು ಮುಂಬರುವ ಶತಮಾನಗಳಿಗೆ ಭದ್ರ ಅಡಿಪಾಯ ಹಾಕಿದೆ.

ಯಾರೂ ಊಹಿಸಿದ್ದಕ್ಕಿಂತ ಹೆಚ್ಚಿನ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸಿದರು. ಕುಂಭಮೇಳದ ಹಿಂದಿನ ಅನುಭವಗಳ ಆಧಾರದ ಮೇಲೆ ಆಡಳಿತವು ಹಾಜರಾತಿಯನ್ನು ಅಂದಾಜು ಮಾಡಿತ್ತು.

ಈ ಏಕ್ತಾ ಕಾ ಮಹಾಕುಂಭದಲ್ಲಿ ಅಮೆರಿಕದ ಜನಸಂಖ್ಯೆಯ ಸುಮಾರು 2 ಪಟ್ಟು ಜನರು ಭಾಗವಹಿಸಿದ್ದರು.

ಆಧ್ಯಾತ್ಮಿಕ ವಿದ್ವಾಂಸರು ಕೋಟ್ಯಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ವಿಶ್ಲೇಷಿಸಿದರೆ, ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವ ಭಾರತವು ಈಗ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ಕಂಡುಕೊಂಡರು. ಇದು ಹೊಸ ಭಾರತದ ಭವಿಷ್ಯವನ್ನು ಬರೆಯುವ ಹೊಸ ಯುಗದ ಉದಯ ಎಂದು ನಾನು ನಂಬುತ್ತೇನೆ.

|

ಸಾವಿರಾರು ವರ್ಷಗಳಿಂದ, ಮಹಾಕುಂಭವು ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸಿದೆ. ಪ್ರತಿ ಪೂರ್ಣಕುಂಭದಲ್ಲೂ ಸಂತರು, ವಿದ್ವಾಂಸರು ಮತ್ತು ಚಿಂತಕರು ತಮ್ಮ ಕಾಲದಲ್ಲಿ ಸಮಾಜದ ಸ್ಥಿತಿಗತಿ ಕುರಿತು ಚರ್ಚಿಸಲು ಸಭೆ ಸೇರುತ್ತಿದ್ದರು. ಅವರ ಪ್ರತಿಬಿಂಬಗಳು ರಾಷ್ಟ್ರ ಮತ್ತು ಸಮಾಜಕ್ಕೆ ಹೊಸ ದಿಕ್ಕು ತೋರಿದ್ದವು. ಪ್ರತಿ 6 ವರ್ಷಗಳಿಗೊಮ್ಮೆ, ಅರ್ಧಕುಂಭದ ಸಮಯದಲ್ಲಿ, ಈ ವಿಚಾರಗಳನ್ನು ಪರಿಶೀಲಿಸಲಾಗುತ್ತಿತ್ತು. 144 ವರ್ಷಗಳ ಕಾಲ ನಡೆದ 12 ಪೂರ್ಣಕುಂಭ ಕಾರ್ಯಕ್ರಮಗಳ ನಂತರ, ಬಳಕೆಯಲ್ಲಿಲ್ಲದ ಸಂಪ್ರದಾಯಗಳನ್ನು ಕೈಬಿಡಲಾಯಿತು, ಹೊಸ ವಿಚಾರಗಳನ್ನು ಸ್ವೀಕರಿಸಲಾಯಿತು ಮತ್ತು ಹೊಸ ಸಂಪ್ರದಾಯಗಳನ್ನು ಸೃಷ್ಟಿಸಲಾಯಿತು.

144 ವರ್ಷಗಳ ನಂತರ, ಈ ಮಹಾಕುಂಭದಲ್ಲಿ, ನಮ್ಮ ಸಂತರು ಮತ್ತೊಮ್ಮೆ ಭಾರತದ ಅಭಿವೃದ್ಧಿ ಪ್ರಯಾಣಕ್ಕಾಗಿ ನಮಗೆ ಹೊಸ ಸಂದೇಶ ನೀಡಿದ್ದಾರೆ. ಆ ಸಂದೇಶ ಅಭಿವೃದ್ಧಿ ಹೊಂದಿದ ಭಾರತ – ವಿಕಿಸಿತ ಭಾರತ.

ಈ ಏಕ್ತಾ ಕಾ ಮಹಾಕುಂಭದಲ್ಲಿ, ಪ್ರತಿಯೊಬ್ಬ ಯಾತ್ರಿಕರು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಯುವಕರಾಗಿರಲಿ ಅಥವಾ ವೃದ್ಧರಾಗಿರಲಿ, ಹಳ್ಳಿಗಳಿಂದ ಅಥವಾ ನಗರಗಳಿಂದ, ಭಾರತದಿಂದ ಅಥವಾ ವಿದೇಶಗಳಿಂದ, ಪೂರ್ವ ಅಥವಾ ಪಶ್ಚಿಮದಿಂದ, ಉತ್ತರ ಅಥವಾ ದಕ್ಷಿಣದಿಂದ, ಜಾತಿ, ಧರ್ಮ ಮತ್ತು ಸಿದ್ಧಾಂತ ಲೆಕ್ಕಿಸದೆ ಒಟ್ಟುಗೂಡಿದರು. ಇದು ಕೋಟ್ಯಂತರ ಜನರಲ್ಲಿ ವಿಶ್ವಾಸ ತುಂಬಿದ ಏಕ ಭಾರತ - ಶ್ರೇಷ್ಠ ಭಾರತ ದೃಷ್ಟಿಕೋನದ ಸಾಕಾರವಾಗಿತ್ತು. ಈಗ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಧ್ಯೇಯಕ್ಕಾಗಿ ನಾವು ಒಂದೇ ಉತ್ಸಾಹದಲ್ಲಿ ಒಟ್ಟಿಗೆ ಸೇರಬೇಕು.

|

ಚಿಕ್ಕ ಹುಡುಗನಾಗಿದ್ದಾಗ, ಶ್ರೀಕೃಷ್ಣನು ತನ್ನ ತಾಯಿ ಯಶೋಧೆಗೆ ತನ್ನ ಬಾಯಿಯೊಳಗಿನ ಇಡೀ ಬ್ರಹ್ಮಾಂಡದ ಚಿತ್ರವನ್ನು ಬಹಿರಂಗಪಡಿಸಿದ ಘಟನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದೇ ರೀತಿ, ಈ ಮಹಾಕುಂಭದಲ್ಲಿ, ಭಾರತದ ಜನರು ಮತ್ತು ಇಡೀ ವಿಶ್ವದ ಜನರು ಭಾರತದ ಸಾಮೂಹಿಕ ಶಕ್ತಿಯ ಬೃಹತ್ ಸಾಮರ್ಥ್ಯ ಕಂಡಿದ್ದಾರೆ. ನಾವು ಈಗ ಈ ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮನ್ನು ಅರ್ಪಿಸಿಕೊಳ್ಳಬೇಕು.

ಈ ಹಿಂದೆ, ಭಕ್ತಿ ಚಳವಳಿಯ ಸಂತರು ಭಾರತದಾದ್ಯಂತ ನಮ್ಮ ಸಾಮೂಹಿಕ ಸಂಕಲ್ಪದ ಬಲವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಸ್ವಾಮಿ ವಿವೇಕಾನಂದರಿಂದ ಶ್ರೀ ಅರಬಿಂದೋವರೆಗೆ, ಪ್ರತಿಯೊಬ್ಬ ಮಹಾನ್ ಚಿಂತಕರೂ ನಮ್ಮ ಸಾಮೂಹಿಕ ಸಂಕಲ್ಪದ ಶಕ್ತಿಯನ್ನು ನಮಗೆ ನೆನಪಿಸಿದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರು ಸಹ ಇದನ್ನೇ ಅನುಭವಿಸಿದರು. ಸ್ವಾತಂತ್ರ್ಯಾ ನಂತರ, ಈ ಸಾಮೂಹಿಕ ಶಕ್ತಿಯನ್ನು ಸರಿಯಾಗಿ ಗುರುತಿಸಿ ಎಲ್ಲರ ಕಲ್ಯಾಣವನ್ನು ಹೆಚ್ಚಿಸುವಲ್ಲಿ ಬಳಸಿದ್ದರೆ, ಅದು ಹೊಸದಾಗಿ ಸ್ವತಂತ್ರ ರಾಷ್ಟ್ರಕ್ಕೆ ಒಂದು ದೊಡ್ಡ ಶಕ್ತಿಯಾಗುತ್ತಿತ್ತು. ದುರದೃಷ್ಟವಶಾತ್, ಇದನ್ನು ಮೊದಲೇ ಮಾಡಲಾಗಿಲ್ಲ. ಆದರೆ ಈಗ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಜನರ ಈ ಸಾಮೂಹಿಕ ಶಕ್ತಿ ಹೇಗೆ ಒಟ್ಟಿಗೆ ಬರುತ್ತಿದೆ ಎಂಬುದನ್ನು ವೀಕ್ಷಿಸಲು ನನಗೆ ಸಂತೋಷವಾಗಿದೆ.

|

ವೇದಗಳಿಂದ ವಿವೇಕಾನಂದರವರೆಗೆ, ಪ್ರಾಚೀನ ಗ್ರಂಥಗಳಿಂದ ಆಧುನಿಕ ಉಪಗ್ರಹಗಳವರೆಗೆ, ಭಾರತದ ಶ್ರೇಷ್ಠ ಸಂಪ್ರದಾಯಗಳು ಈ ರಾಷ್ಟ್ರವನ್ನು ರೂಪಿಸಿವೆ. ಒಬ್ಬ ನಾಗರಿಕನಾಗಿ, ನಮ್ಮ ಪೂರ್ವಜರು ಮತ್ತು ಸಂತರ ನೆನಪುಗಳಿಂದ ನಾವು ಹೊಸ ಸ್ಫೂರ್ತಿ ಪಡೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಈ ಏಕ್ತಾ ಕಾ ಮಹಾಕುಂಭವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಲು ನಮಗೆ ಸಹಾಯ ಮಾಡಲಿ. ಏಕತೆಯನ್ನು ನಮ್ಮ ಮಾರ್ಗದರ್ಶಿ ತತ್ವವನ್ನಾಗಿ ಮಾಡಿಕೊಳ್ಳೋಣ. ರಾಷ್ಟ್ರ ಸೇವೆಯೇ ದೈವಿಕ ಸೇವೆ ಎಂಬ ತಿಳಿವಳಿಕೆಯೊಂದಿಗೆ ನಾವು ಕೆಲಸ ಮಾಡೋಣ.

ಕಾಶಿಯಲ್ಲಿ ನನ್ನ ಚುನಾವಣಾ ಪ್ರಚಾರ ಸಮಯದಲ್ಲಿ, "ಗಂಗಾ ಮಾತೆ ನನ್ನನ್ನು ಕರೆದಿದ್ದಾಳೆ" ಎಂದು ನಾನು ಹೇಳಿದ್ದೆ. ಇದು ಕೇವಲ ಭಾವನೆಯಲ್ಲ, ನಮ್ಮ ಪವಿತ್ರ ನದಿಗಳ ಸ್ವಚ್ಛತೆಯ ಕಡೆಗೆ ಜವಾಬ್ದಾರಿಯ ಕರೆಯೂ ಆಗಿತ್ತು. ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದಲ್ಲಿ ನಿಂತಾಗ, ನನ್ನ ಸಂಕಲ್ಪ ಇನ್ನಷ್ಟು ಬಲವಾಯಿತು. ನಮ್ಮ ನದಿಗಳ ಸ್ವಚ್ಛತೆಯು ನಮ್ಮ ಸ್ವಂತ ಜೀವನಕ್ಕೆ ಆಳವಾಗಿ ಸಂಬಂಧಿಸಿದೆ. ನಮ್ಮ ನದಿಗಳು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಅವುಗಳನ್ನು ಜೀವ ನೀಡುವ ತಾಯಂದಿರಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಮಹಾಕುಂಭವು ನಮ್ಮ ನದಿಗಳ ಸ್ವಚ್ಛತೆಯ ಕಡೆಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡಿದೆ.

|

ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸುವುದು ಸುಲಭದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನಮ್ಮ ಭಕ್ತಿಯಲ್ಲಿ ಯಾವುದೇ ನ್ಯೂನತೆಗಳಿದ್ದರೆ ನಮ್ಮನ್ನು ಕ್ಷಮಿಸುವಂತೆ ನಾನು ಗಂಗಾ ಮಾತೆ, ಯಮುನಾ ಮಾತೆ ಮತ್ತು ಸರಸ್ವತಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ. ಜನತಾ ಜನಾರ್ದನರನ್ನು ನಾನು ದೈವತ್ವದ ಸಾಕಾರವಾಗಿ ನೋಡುತ್ತೇನೆ. ಅವರಿಗೆ ಸೇವೆ ಸಲ್ಲಿಸುವ ನಮ್ಮ ಪ್ರಯತ್ನಗಳಲ್ಲಿ ಯಾವುದೇ ನ್ಯೂನತೆಗಳಿದ್ದರೆ, ನಾನು ಜನರ ಕ್ಷಮೆ ಕೋರುತ್ತೇನೆ.

ಮಹಾಕುಂಭಕ್ಕೆ ಕೋಟ್ಯಂತರ ಜನರು ಭಕ್ತಿಯಿಂದ ಬಂದರು. ಅವರಿಗೆ ಸೇವೆ ಸಲ್ಲಿಸುವುದು ಕೂಡ ಅದೇ ರೀತಿಯ ಭಕ್ತಿಯಿಂದ ನಿರ್ವಹಿಸಲಾದ ಜವಾಬ್ದಾರಿಯಾಗಿತ್ತು. ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ, ಯೋಗಿ ಜಿ ಅವರ ನೇತೃತ್ವದಲ್ಲಿ ಆಡಳಿತ ಮತ್ತು ಜನರು ಒಟ್ಟಾಗಿ ಈ ಏಕ್ತಾ ಕಾ ಮಹಾಕುಂಭವನ್ನು ಯಶಸ್ವಿಗೊಳಿಸಿದರು ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ, ಏಕ್ತಾ ಕಾ ಮಹಾಕುಂಭದಲ್ಲಿ ಆಡಳಿತಗಾರರಾಗದೆ, ಬದಲಾಗಿ, ಎಲ್ಲರೂ ಶ್ರದ್ಧಾಭರಿತ ಸೇವಕರಾಗಿದ್ದರು. ನೈರ್ಮಲ್ಯ ಕಾರ್ಮಿಕರು, ಪೊಲೀಸರು, ದೋಣಿ ಚಾಲಕರು, ಚಾಲಕರು, ಆಹಾರ ಪೂರೈಸುವ ಸ್ವಯಂಸೇವಕರು - ಎಲ್ಲರೂ ದಣಿವರಿಯದೆ ಕೆಲಸ ಮಾಡಿದರು. ಅನೇಕ ಅನನುಕೂಲತೆಗಳನ್ನು ಎದುರಿಸುತ್ತಿದ್ದರೂ ಪ್ರಯಾಗರಾಜ್ ಜನರು ಯಾತ್ರಿಕರನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ ರೀತಿ ವಿಶೇಷವಾಗಿ ಸ್ಫೂರ್ತಿದಾಯಕವಾಗಿತ್ತು. ಅವರಿಗೆ ಮತ್ತು ಉತ್ತರ ಪ್ರದೇಶದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.

|

ನಮ್ಮ ದೇಶದ ಉಜ್ವಲ ಭವಿಷ್ಯದ ಬಗ್ಗೆ ನನಗೆ ಯಾವಾಗಲೂ ಅಚಲ ವಿಶ್ವಾಸವಿದೆ. ಈ ಮಹಾಕುಂಭ ವೀಕ್ಷಿಸುವುದು ನನ್ನ ನಂಬಿಕೆಯನ್ನು ಹಲವು ಪಟ್ಟು ಬಲಪಡಿಸಿದೆ.

140 ಕೋಟಿ ಭಾರತೀಯರು ಏಕ್ತಾ ಕಾ ಮಹಾಕುಂಭವನ್ನು ಜಾಗತಿಕ ಸಂದರ್ಭವನ್ನಾಗಿ ಪರಿವರ್ತಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ನಮ್ಮ ಜನರ ಸಮರ್ಪಣೆ, ಭಕ್ತಿ ಮತ್ತು ಪ್ರಯತ್ನಗಳಿಂದ ಪ್ರೇರಿತನಾಗಿ, 12 ಜ್ಯೋತಿರ್ಲಿಂಗಗಳಲ್ಲಿ

ಮೊದಲನೆಯದಾದ ಶ್ರೀ ಸೋಮನಾಥನನ್ನು ಶೀಘ್ರದಲ್ಲೇ ಭೇಟಿ ಮಾಡಿ, ಈ ಸಾಮೂಹಿಕ ರಾಷ್ಟ್ರೀಯ ಪ್ರಯತ್ನಗಳ ಫಲವನ್ನು ಅವರಿಗೆ ಅರ್ಪಿಸುತ್ತೇನೆ, ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ.

ಮಹಾಕುಂಭದ ಭೌತಿಕ ರೂಪವು ಮಹಾಶಿವರಾತ್ರಿಯಂದು ಯಶಸ್ವಿಯಾಗಿ ಪರಾಕಾಷ್ಠೆ ತಲುಪಿರಬಹುದು, ಆದರೆ ಗಂಗೆಯ ಶಾಶ್ವತ ಹರಿವಿನಂತೆಯೇ, ಮಹಾಕುಂಭವು ಜಾಗೃತಗೊಳಿಸಿದ ಆಧ್ಯಾತ್ಮಿಕ ಶಕ್ತಿ, ರಾಷ್ಟ್ರೀಯ ಪ್ರಜ್ಞೆ ಮತ್ತು ಏಕತೆ ಮುಂದಿನ ಪೀಳಿಗೆಗಾಗಿ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.