ಚಿಂತನೆಗಾಗಿ ಆಹಾರ

Published By : Admin | September 16, 2016 | 23:56 IST

ಭಾರತಪ್ರಧಾನ ಮಂತ್ರಿ ಏನು ತಿನ್ನಲು ಇಷ್ಟ ಪಡುತ್ತಾರೆ? ಅವರು ಭಾವನೆಗಳನ್ನೇ ಆಸ್ವಾಧಿಸುತ್ತಾರಾ? ಅನ್ನುವ ಪ್ರಶ್ನೆ ಬರುವುದು ಸಹಜ.

 

ಇದರ ಬಗ್ಗೆ ಖುದ್ದು  ನರೇಂದ್ರ ಮೋದಿಯವರೇ ಒಂದು ಒಳ ನೋಟ ಬೀರಿದ್ದಾರೆ.

 

ಅವರು ಹೇಳುವ ಪ್ರಕಾರ ” ಸಾರ್ವಜನಿಕ ಜೀವನದಲ್ಲಿರೋ ವ್ಯಕ್ತಿಗಳ ಕೆಲಸ, ಜೀವನ ವ್ಯವಸ್ಥಿತವಾಗಿರುವುದಿಲ್ಲ. ಯಾರು ಸಾರ್ವಜನಿಕರಾಗಿ ಸಕ್ರಿಯವಾಗಿರಲು ಬಯಸುತ್ತಾರೋ ಅವರಿಗೆ ಗಟ್ಟಿ ಹೊಟ್ಟೆ ಅಗತ್ಯವಿರುತ್ತದೆ.

 

35 ವರ್ಷಗಳ ಕಾಲ, ಹಲವು ಸಂಘಟನಾತ್ಮಕ ವಿಭಾಗದಲ್ಲಿಯೂ ಕೆಲಸ ಮಾಡಿದ್ದೇನೆ. ಆಗ ನಾನು ರಾಷ್ಟ್ರದೆಲ್ಲೆಡೆ ಪ್ರಯಾಣ ಮಾಡಬೇಕಾಗುತ್ತಿತ್ತು. ಅಲ್ಲಿ ನನಗೆ ಯಾವ ಆಹಾರ ಸಿಗುತ್ತದೆಯೋ, ಆ ಆಹಾರವನ್ನೇ ತಿನ್ನಬೇಕಾಗಿತ್ತು. ಹೀಗಾಗಿ ನಾನು ಯಾರ ಬಳಿಯೂ ವಿಶೇಷವಾಗಿದ್ದನ್ನು  ಮಾಡಿಕೊಡಿ ಅಂತ ಕೇಳುತ್ತಿರಲಿಲ್ಲ.

 

ನಾನು ಕಿಚಡಿಯನ್ನು ತುಂಬಾ ಇಷ್ಟಪಡುತ್ತೇನೆ. ಆದ್ರೆ ತಿನ್ನುವಾಗ ಯಾವುದು ಲಭ್ಯವಾಗುವುದೋ ಅದನ್ನೇ ಸ್ವೀಕರಿಸುತ್ತೇನೆ.

 

ಅವರ ಪ್ರಕಾರ “ ನನ್ನ ಆರೋಗ್ಯವನ್ನುದೇಶದ ಒಂದು ಹೊರೆಯನ್ನಾಗಿಸಲು ಬಯಸಲ್ಲ. ಕೊನೆಯ ಉಸಿರಿರುವವರೆಗೆ ನಾನು ಆರೋಗ್ಯಕರ ಮನುಷ್ಯನಾಗಿ ಉಳಿಯಲು ಬಯಸುತ್ತೇನೆ’ಎಂದು ಹೇಳುತ್ತಾರೆ.

 

ಪ್ರಧಾನಿ ಪಾತ್ರ ನಿರ್ವಹಿಸುವವರು ಸಾಕಷ್ಟು  ಪ್ರಯಾಣವನ್ನು  ಮಾಡಬೇಕಾಗುತ್ತದೆ, ಜೊತೆಗೆ ಔತಣ ಕೂಟದಲ್ಲಿಯೂ ಭಾಗಿಯಾಗಬೇಕು. ಮೋದಿ ಪ್ರತಿ ಔತಣಕೂಟದಲ್ಲಿ ಭಾಗಿಯಾದಾಗಲೂ ಸ್ಥಳೀಯ ಸಸ್ಯಾಹಾರಿ ಖಾಧ್ಯಗಳನ್ನೇ ಇಷ್ಟಪಡುತ್ತಾರೆ. ಯಾವುದೇ ದುರಭ್ಯಾಸಗಳಿಲ್ಲದ ಪ್ರಧಾನಿಯವರ ಗ್ಲಾಸ್ ನಲ್ಲಿ ನೀರು ಬಿಟ್ಟರೆ ತಂಪುಪಾನೀಯವಿರುತ್ತೆ, ಹೊರತು ಮದ್ಯವಲ್ಲ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bharat Tex showcases India's cultural diversity through traditional garments: PM Modi

Media Coverage

Bharat Tex showcases India's cultural diversity through traditional garments: PM Modi
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.