ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

June 28th, 11:15 am

ಶ್ರವಣಬೆಳಗೊಳದ ಸ್ವಾಮಿ ಚಾರುಕೀರ್ತಿ ಜಿ ಮುಖ್ಯಸ್ಥರಾದ ಪರಮ ಶ್ರದ್ಧೆಯ ಆಚಾರ್ಯ ಶ್ರೀ ಪ್ರಜ್ಞಾಸಾಗರ ಮಹಾರಾಜ್ ಜಿ, ನನ್ನ ಸಹೋದ್ಯೋಗಿ ಗಜೇಂದ್ರ ಸಿಂಗ್ ಶೇಖಾವತ್ ಜಿ, ನನ್ನ ಸಹ ಸಂಸದ ನವೀನ್ ಜೈನ್ ಜಿ, ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್‌ ಅಧ್ಯಕ್ಷ ಪ್ರಿಯಾಂಕ್ ಜೈನ್ ಜಿ, ಕಾರ್ಯದರ್ಶಿ ಮಮತಾ ಜೈನ್ ಜಿ, ಇತರೆ ಗೌರವಾನ್ವಿತ ಗಣ್ಯರೆ, ಪೂಜ್ಯ ಸಾಧು ಸಂತರೆ, ಮಹಿಳೆಯರೆ ಮತ್ತು ಮಹನೀಯರೆ, ಜೈ ಜಿನೇಂದ್ರ!

ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

June 28th, 11:01 am

ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರ ಶತಮಾನೋತ್ಸವ ಆಚರಣೆಯ ಪಾವಿತ್ರ್ಯವನ್ನು ಪ್ರಸ್ತಾಪಿಸಿದ ಅವರು, ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಒಂದು ಮಹತ್ವದ ಸಂದರ್ಭಕ್ಕೆ ದೇಶ ಸಾಕ್ಷಿಯಾಗುತ್ತಿದೆ. ಪೂಜ್ಯ ಆಚಾರ್ಯರ ಅಮರ ಸ್ಫೂರ್ತಿಯಿಂದ ತುಂಬಿರುವ ಈ ಕಾರ್ಯಕ್ರಮವು ಅಸಾಧಾರಣ ಮತ್ತು ಉನ್ನತಿಗೇರಿಸುವ ವಾತಾವರಣವನ್ನು ಸೃಷ್ಟಿಸುತ್ತಿದೆ. ಇಲ್ಲಿ ನೆರೆದಿರುವ ಎಲ್ಲಾ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಜೂನ್ 28 ರಂದು ನವದೆಹಲಿಯಲ್ಲಿ ಆಚಾರ್ಯ ವಿದ್ಯಾನಂದ ಜೀ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಜೂನ್ 28 ರಂದು ನವದೆಹಲಿಯಲ್ಲಿ ಆಚಾರ್ಯ ವಿದ್ಯಾನಂದ ಜೀ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

June 27th, 05:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 28 ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮಹಾವೀರ ಜಯಂತಿಯಂದು ಭಗವಾನ್ ಮಹಾವೀರರ ಆದರ್ಶಗಳ ಗಾಢವಾದ ಪ್ರಭಾವವನ್ನು ಪ್ರಧಾನಮಂತ್ರಿ ಸ್ಮರಿಸಿದರು

April 10th, 03:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾವೀರ ಜಯಂತಿಯ ಸಂದರ್ಭದಲ್ಲಿ ಭಗವಾನ್ ಮಹಾವೀರರ ಎಲ್ಲಾ ಕಾಲಕ್ಕೂ ಒಪ್ಪಿತವಾಗಿರುವ ಬೋಧನೆಗಳನ್ನು ಸ್ಮರಿಸಿದರು, ಅವರ ಬೋಧನೆಗಳು ಸ್ವತಃ ತಮ್ಮ ಜೀವನದ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಸ್ಮರಿಸಿದರು.

ಭಗವಾನ್ ಮಹಾವೀರ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ

April 10th, 08:44 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾವೀರ ಜಯಂತಿಯ ಸಂದರ್ಭದಲ್ಲಿ ಭಗವಾನ್ ಮಹಾವೀರರಿಗೆ ಗೌರವ ನಮನ ಸಲ್ಲಿಸಿದರು. ಭಗವಾನ್ ಮಹಾವೀರರು ಯಾವಾಗಲೂ ಅಹಿಂಸೆ, ಸತ್ಯ ಮತ್ತು ಸಹಾನುಭೂತಿಗೆ ಒತ್ತು ನೀಡಿದ್ದರು ಮತ್ತು ಅವರ ಆದರ್ಶಗಳು ವಿಶ್ವದಾದ್ಯಂತ ಅಸಂಖ್ಯಾತ ಜನರಿಗೆ ಶಕ್ತಿಯನ್ನು ನೀಡುತ್ತವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕಳೆದ ವರ್ಷ ಸರ್ಕಾರವು ಪ್ರಾಕೃತ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿತು, ಈ ನಿರ್ಧಾರವು ಸಾಕಷ್ಟು ಮೆಚ್ಚುಗೆಯನ್ನು ಪಡೆಯಿತು ಎಂದು ಪ್ರಧಾನಿ ಹೇಳಿದರು.

ನವಕಾರ್ ಮಹಾಮಂತ್ರ ದಿವಸ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

April 09th, 08:15 am

ಮನಸ್ಸು ಶಾಂತವಾಗಿದೆ, ಮನಸ್ಸು ಸ್ಥಿರವಾಗಿದೆ, ಶಾಂತಿಯೊಂದೇ ಅದ್ಭುತ ಅನುಭೂತಿ, ಮಾತಿಗೆ ಮೀರಿದ, ಆಲೋಚನೆಗೆ ಮೀರಿದ ನವಕಾರ್ ಮಹಾಮಂತ್ರವು ಇನ್ನೂ ಮನಸ್ಸಿನಲ್ಲಿ ಅನುರಣಿಸುತ್ತಿದೆ. ನಮೋ ಅರಿಹಂತನಾಮ್. ನಮೋ ಸಿದ್ಧಾನಾಮ್. ನಮೋ ಆರ್ಯನಾಮ್. ನಮೋ ಉವಜ್ಜಾಯನಾಮ್ । ನಮೋ ಲೋಯೇ ಸವ್ವಸಾಹೂನಾಮ್ । (ನಮೋ ಅರಿಹಂತಾನಂ॥ ನಮೋ ಸಿದ್ಧಾನಂ॥ ನಮೋ ಆಯಾರಿಯಾಣಂ॥ ನಮೋ ಉವಾಜ್ಞಾಯಾಣಂ ॥ ನಮೋ ಏಲ ॥ ಸವ್ವಸಾಹೂಣಂ॥) ಒಂದು ಧ್ವನಿ, ಒಂದು ಹರಿವು, ಒಂದು ಶಕ್ತಿ, ಯಾವುದೇ ಏರಿಳಿತವಿಲ್ಲ, ಇಳಿಕೆಗಳಿಲ್ಲ, ಕೇವಲ ಸ್ಥಿರತೆ, ಕೇವಲ ಸಮಚಿತ್ತತೆ. ಅಂತಹ ಒಂದು ಪ್ರಜ್ಞೆ, ಒಂದೇ ರೀತಿಯ ಲಯ, ಒಳಗೆ ಇದೇ ಬೆಳಕು. ನವಕಾರ್ ಮಹಾಮಂತ್ರದ ಈ ಆಧ್ಯಾತ್ಮಿಕ ಶಕ್ತಿಯನ್ನು ನಾನು ಇನ್ನೂ ನನ್ನೊಳಗೆ ಅನುಭವಿಸುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ, ಬೆಂಗಳೂರಿನಲ್ಲಿ ಇದೇ ರೀತಿಯ ಸಾಮೂಹಿಕ ಮಂತ್ರ ಪಠಣಕ್ಕೆ ನಾನು ಸಾಕ್ಷಿಯಾಗಿದ್ದೆ, ಇಂದು ನನಗೆ ಅದೇ ಭಾವನೆ ಮತ್ತು ಅದೇ ಆಳವಿದೆ. ಈ ಬಾರಿ ಲಕ್ಷಾಂತರ ಪುಣ್ಯಾತ್ಮರು ಒಂದೇ ಪ್ರಜ್ಞೆಯೊಂದಿಗೆ ಸಂಪರ್ಕ ಹೊಂದಿದ್ದಾರೆ, ಒಟ್ಟಿಗೆ ಮಾತನಾಡುವ ಪದಗಳು, ಒಟ್ಟಿಗೆ ಶಕ್ತಿ ಜಾಗೃತಗೊಂಡಿವೆ, ಭಾರತ ಮತ್ತು ವಿದೇಶಗಳಲ್ಲಿ, ಇದು ನಿಜವಾಗಿಯೂ ಹಿಂದೆಂದೂ ಕಾಣದ ಅಪೂರ್ವ ಕ್ಷಣವಾಗಿದೆ.

ನವಕರ್ ಮಹಾಮಂತ್ರ ದಿನವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

April 09th, 07:47 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನವಕರ್ ಮಹಾಮಂತ್ರ ದಿನವನ್ನು ಉದ್ಘಾಟಿಸಿದರು ಮತ್ತು ಅದರಲ್ಲಿ ಭಾಗವಹಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನವಕರ್ ಮಂತ್ರದ ಆಳವಾದ ಆಧ್ಯಾತ್ಮಿಕ ಅನುಭವವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆಯನ್ನು ತರುವ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಪದಗಳು ಮತ್ತು ಆಲೋಚನೆಗಳನ್ನು ಮೀರಿದ, ಮನಸ್ಸು ಮತ್ತು ಪ್ರಜ್ಞೆಯೊಳಗೆ ಆಳವಾಗಿ ಪ್ರತಿಧ್ವನಿಸುವ ಅಸಾಧಾರಣ ಶಾಂತಿಯ ಭಾವನೆಯ ಬಗ್ಗೆ ಅವರು ಮಾತನಾಡಿದರು. ನವಕರ್ ಮಂತ್ರದ ಮಹತ್ವವನ್ನು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು, ಅದರ ಪವಿತ್ರ ಶ್ಲೋಕಗಳನ್ನು ಪಠಿಸಿದರು ಮತ್ತು ಮಂತ್ರವನ್ನು ಶಕ್ತಿಯ ನಿರಂತರ ಹರಿವು, ಸ್ಥಿರತೆ, ಸಮಚಿತ್ತತೆ ಮತ್ತು ಪ್ರಜ್ಞೆ ಮತ್ತು ಆಂತರಿಕ ಬೆಳಕಿನ ಸಾಮರಸ್ಯದ ಲಯವನ್ನು ಸಾಕಾರಗೊಳಿಸುತ್ತದೆ ಎಂದು ವಿವರಿಸಿದರು. ತಮ್ಮ ವೈಯಕ್ತಿಕ ಅನುಭವದ ಬೆಳಕು ಚೆಲ್ಲುತ್ತಾ, ನವಕರ್ ಮಂತ್ರದ ಆಧ್ಯಾತ್ಮಿಕ ಶಕ್ತಿಯನ್ನು ತಮ್ಮೊಳಗೆ ಹೇಗೆ ಅನುಭವಿಸುತ್ತಿದ್ದಾರೆ ಎಂಬುದನ್ನು ಅವರು ಹಂಚಿಕೊಂಡರು. ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಸಾಮೂಹಿಕ ಮಂತ್ರ ಪಠಣ ಕಾರ್ಯಕ್ರಮವನ್ನು ವೀಕ್ಷಿಸಿದ ಅವರು, ಅದು ತನ್ನ ಮೇಲೆ ಗಾಢ ಪ್ರಭಾವ ಬೀರಿತು ಎಂದರು. ದೇಶ ಮತ್ತು ವಿದೇಶಗಳಾದ್ಯಂತ ಲಕ್ಷಾಂತರ ಸದ್ಗುಣಶೀಲ ಆತ್ಮಗಳು ಏಕೀಕೃತ ಪ್ರಜ್ಞೆಯಲ್ಲಿ ಒಟ್ಟಿಗೆ ಸೇರುವ ಅಪ್ರತಿಮ ಅನುಭವವನ್ನು ಪ್ರಧಾನಿ ಪ್ರಮುಖವಾಗಿ ಉಲ್ಲೇಖಿಸಿದರು. ಸಾಮೂಹಿಕ ಶಕ್ತಿ ಮತ್ತು ಮೇಳೈಸಿದ ಪದಗಳ ಬಗ್ಗೆ ಅವರು ಉಲ್ಲೇಖಿಸಿ, ಇದು ನಿಜವಾಗಿಯೂ ಅಸಾಧಾರಣ ಮತ್ತು ಅಭೂತಪೂರ್ವ ಎಂದು ವಿವರಿಸಿದರು.

ನವದೆಹಲಿಯಲ್ಲಿ ಏಪ್ರಿಲ್ 9 ರಂದು ನವ್ ಕಾರ್ ಮಹಾಮಂತ್ರ ದಿವಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ

April 07th, 05:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ್ ಕಾರ್ ಮಹಾಮಂತ್ರ ದಿವಸ ಅಂಗವಾಗಿ ಏಪ್ರಿಲ್ 9 ರಂದು ಬೆಳಗ್ಗೆ 8 ಗಂಟೆ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರು ನೆರೆದಿರುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

PM Modi meets Upadhyay Shri Rishi Pravin Ji

November 14th, 06:29 pm

Prime Minister Shri Narendra Modi today met Upadhyay Shri Rishi Pravin Ji and remarked that Shri Pravin is widely respected for his study of Jain texts and culture.

Prime Minister meets Jainacharya Ratnasundersurishwarji Maharaj Saheb

November 08th, 04:37 pm

The Prime Minister Shri Narendra Modi meets with Jainacharya Ratnasundersurishwarji Maharaj Saheb today. The Prime Minister also commended Jainacharya Ratnasundersurishwarji Maharaj Saheb's contribution towards social service and spirituality.

ಭಾರತ ಮತ್ತು ಅದರ ಸರ್ಕಾರವು ದುರ್ಬಲವಾಗಿರಬೇಕೆಂದು ಅನೇಕ ಜನರು ಬಯಸುತ್ತಾರೆ ಇದರಿಂದ ಅವರು ಅದರ ಲಾಭವನ್ನು ಪಡೆಯಬಹುದು: ಬಳ್ಳಾರಿಯಲ್ಲಿ ಪ್ರಧಾನಿ

April 28th, 02:28 pm

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಎನ್‌ಡಿಎ ಪರ ಪ್ರಚಾರಕ್ಕೆ ಚಾಲನೆ ನೀಡಿದರು. ಬಳ್ಳಾರಿಯಲ್ಲಿ ನಡೆದ ಬೃಹತ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಬಳ್ಳಾರಿಯಲ್ಲಿ ಜನರು ತಮ್ಮ ನೆಚ್ಚಿನ ನಾಯಕನ ಮಾತು ಕೇಳಲು ಉತ್ಸಾಹ ತೋರಿದರು. ಪ್ರಧಾನಿ ಮೋದಿಯವರು, “ಇಂದು, ಭಾರತವು ವೇಗವಾಗಿ ಮುನ್ನಡೆಯುತ್ತಿರುವಾಗ, ಕೆಲವು ದೇಶಗಳು ಮತ್ತು ಸಂಸ್ಥೆಗಳು ಅದರಿಂದ ಅಸಮಾಧಾನಗೊಂಡಿವೆ. ದುರ್ಬಲ ಭಾರತ, ದುರ್ಬಲ ಸರ್ಕಾರ, ಅವರ ಹಿತಾಸಕ್ತಿಗಳಿಗೆ ಸರಿಹೊಂದುತ್ತದೆ. ಅಂತಹ ಸಂದರ್ಭಗಳಲ್ಲಿ, ಈ ಘಟಕಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಕುಶಲತೆಯಿಂದ ಬಳಸುತ್ತವೆ. ಕಾಂಗ್ರೆಸ್ ಕೂಡ ಅತಿರೇಕದ ಭ್ರಷ್ಟಾಚಾರದಲ್ಲಿ ಅಭಿವೃದ್ಧಿ ಹೊಂದಿತು, ಆದ್ದರಿಂದ ಅವರು ಸುಮ್ಮನಿದ್ದರು. ಆದರೆ, ದೃಢನಿಶ್ಚಯದ ಬಿಜೆಪಿ ಸರ್ಕಾರ ಒತ್ತಡಕ್ಕೆ ಮಣಿಯುವುದಿಲ್ಲ, ಹೀಗಾಗಿ ಅಂತಹ ಶಕ್ತಿಗಳಿಗೆ ಸವಾಲುಗಳನ್ನು ಒಡ್ಡುತ್ತಿದೆ. ನಾನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ತಿಳಿಸಲು ಬಯಸುತ್ತೇನೆ, ಅವರ ಪ್ರಯತ್ನಗಳನ್ನು ಲೆಕ್ಕಿಸದೆಯೇ ... ಭಾರತವು ಪ್ರಗತಿಯನ್ನು ಮುಂದುವರೆಸುತ್ತದೆ ಮತ್ತು ಕರ್ನಾಟಕವೂ ಸಹ ಮುಂದುವರಿಯುತ್ತದೆ.

ನಿಮ್ಮ ಪ್ರತಿ ಮತವೂ ಮೋದಿಯವರ ನಿರ್ಣಯಗಳನ್ನು ಬಲಪಡಿಸುತ್ತದೆ: ದಾವಣಗೆರೆಯಲ್ಲಿ ಪ್ರಧಾನಿ ಮೋದಿ

April 28th, 12:20 pm

ದಾವಣಗೆರೆಯಲ್ಲಿ ದಿನದ ಮೂರನೇ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಒಂದೆಡೆ ಬಿಜೆಪಿ ಸರ್ಕಾರ ದೇಶವನ್ನು ಮುನ್ನಡೆಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಕರ್ನಾಟಕವನ್ನು ಹಿಂದಕ್ಕೆ ತಳ್ಳುತ್ತಿದೆ. ಮೋದಿಯವರ ಮಂತ್ರವು 24/7 ಫಾರ್ 2047 ಆಗಿದ್ದರೆ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಿರಂತರ ಅಭಿವೃದ್ಧಿಗೆ ಒತ್ತು ನೀಡಿದರೆ, ಕಾಂಗ್ರೆಸ್‌ನ ಕೆಲಸದ ಸಂಸ್ಕೃತಿ - 'ಬ್ರೇಕ್ ಕರೋ, ಬ್ರೇಕ್ ಲಗಾವೋ'.

ಕಾಂಗ್ರೆಸ್ ನಮ್ಮ ರಾಜರು ಮತ್ತು ಮಹಾರಾಜರನ್ನು ಅವಮಾನಿಸಿದೆ, ಆದರೆ ನಿಜಾಮರು ಮತ್ತು ನವಾಬರ ವಿಷಯಕ್ಕೆ ಬಂದಾಗ ಅವರ ಬಾಯಿಗೆ ಮುದ್ರೆ ಹಾಕಲಾಗಿದೆ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ

April 28th, 12:00 pm

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದಲ್ಲಿ ಎನ್‌ಡಿಎ ಪರ ಪ್ರಚಾರಕ್ಕೆ ಚಾಲನೆ ನೀಡಿದರು. ಬೆಳಗಾವಿಯಲ್ಲಿ ನಡೆದ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಪ್ರಗತಿಯತ್ತ ಸಾಗಿದಾಗ ಎಲ್ಲರೂ ಸಂತೋಷದಿಂದ ಇರುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ 'ಪರಿವಾರ್ಹಿತ್'ನಲ್ಲಿ ಎಷ್ಟು ತೊಡಗಿದೆಯೆಂದರೆ ಅದು ಭಾರತ ಮಾಡುವ ಪ್ರತಿಯೊಂದು ಅಭಿವೃದ್ಧಿಯ ದಾಪುಗಾಲಿನಿಂದ ವಿಚಲಿತಗೊಳ್ಳುತ್ತದೆ.

ಪ್ರಧಾನಿ ಮೋದಿ ಅವರು ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಮತ್ತು ಕರ್ನಾಟಕದ ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು

April 28th, 11:00 am

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದಲ್ಲಿ ಎನ್‌ಡಿಎ ಪರ ಪ್ರಚಾರಕ್ಕೆ ಚಾಲನೆ ನೀಡಿದರು. ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ನಡೆದ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಪ್ರಗತಿಯತ್ತ ಸಾಗಿದಾಗ ಎಲ್ಲರೂ ಸಂತೋಷದಿಂದ ಇರುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ 'ಪರಿವಾರ್ಹಿತ್'ನಲ್ಲಿ ಎಷ್ಟು ತೊಡಗಿದೆಯೆಂದರೆ ಅದು ಭಾರತ ಮಾಡುವ ಪ್ರತಿಯೊಂದು ಅಭಿವೃದ್ಧಿಯ ದಾಪುಗಾಲಿನಿಂದ ವಿಚಲಿತಗೊಳ್ಳುತ್ತದೆ.

ಛತ್ತೀಸ್ ಗಢದಲ್ಲಿ ಆಚಾರ್ಯ ಶ್ರೀ ವಿದ್ಯಾಸಾಗರ್ ಜೀ ಮಹಾರಾಜ್ ಅವರ ಆಶೀರ್ವಾದ ಪಡೆದ ಪ್ರಧಾನಮಂತ್ರಿ

November 05th, 12:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ತೀಸ್ ಗಢದ ಜೈನ ದೇವಾಲಯದಲ್ಲಿ ದಿಗಂಬರ ಜೈನ ಆಚಾರ್ಯ ಶ್ರೀ ವಿದ್ಯಾಸಾಗರ್ ಜೀ ಮಹಾರಾಜ್ ಅವರ ಆಶೀರ್ವಾದ ಪಡೆದರು.

PM greets people on the occasion of Samvatsari

August 31st, 08:51 am

The Prime Minister, Shri Narendra Modi has greeted the people on the occasion of Samvatsari.

ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆ 'ಜಿತೊ ಕನೆಕ್ಟ್ 2022' ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

May 06th, 02:08 pm

ಈ ಜಿತೊ ಕನೆಕ್ಟ್ ಶೃಂಗಸಭೆಯನ್ನು ಸ್ವಾತಂತ್ರ್ಯದ 75 ನೇ ವರ್ಷವಾದ ಅಮೃತ ಮಹೋತ್ಸವದಲ್ಲಿ ನಡೆಸಲಾಗುತ್ತಿದೆ. ದೇಶವು ಇಲ್ಲಿಂದ ಸ್ವಾತಂತ್ರ್ಯದ 'ಅಮೃತ್ ಕಾಲ್' ಅನ್ನು ಪ್ರವೇಶಿಸುತ್ತಿದೆ. ಈಗ ದೇಶವು ಮುಂದಿನ 25 ವರ್ಷಗಳಲ್ಲಿ ಸುವರ್ಣ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಹೊಂದಿದೆ. ಆದ್ದರಿಂದ, ನೀವು ನಿರ್ಧರಿಸಿದ ವಿಷಯವು ಸ್ವತಃ ತುಂಬಾ ಸೂಕ್ತವಾಗಿದೆ - ಒಟ್ಟಿಗೆ, ಕಡೆಗೆ, ನಾಳೆ ! ಇದು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಕ್ಷಿಪ್ರಗತಿಯ ಅಭಿವೃದ್ಧಿಯ ಮಂತ್ರವಾದ 'ಸಬ್ ಕಾ ಪ್ರಯಾಸ'ದ (ಎಲ್ಲರ ಪ್ರಯತ್ನ) ಸ್ಫೂರ್ತಿ ಎಂದು ನಾನು ಹೇಳಬಲ್ಲೆ. ಮುಂದಿನ ಮೂರು ದಿನಗಳಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ಸರ್ವತೋಮುಖ ಮತ್ತು ಸರ್ವವ್ಯಾಪಿ ಅಭಿವೃದ್ಧಿಯ ಕಡೆಗೆ ಇರಲಿ, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಹಿಂದೆ ಉಳಿಯುವುದಿಲ್ಲ! ಈ ಶೃಂಗಸಭೆಯು ಈ ಭಾವನೆಯನ್ನು ಬಲಪಡಿಸುವುದನ್ನು ಮುಂದುವರಿಸಲಿ! ಈ ಶೃಂಗಸಭೆಯಲ್ಲಿ ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಆದ್ಯತೆಗಳು ಮತ್ತು ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯಲಿವೆ. ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳು!

ಜಿತೊ ಕನೆಕ್ಟ್ 2022’ ಉದ್ಘಾಟನಾ ಗೋಷ್ಠಿ ಉದ್ದೇಶಿಸಿ ಪ್ರಧಾನಿ ಭಾಷಣ

May 06th, 10:17 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ‘ಜಿತೊ ಕನೆಕ್ಟ್ 2022’ ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.

ಮೇ 6 ರಂದು ನಡೆಯವ 'ಜೆ.ಐ.ಟಿ.ಒ. ಕನೆಕ್ಟ್ 2022' ರ ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಪ್ರಧಾನಮಂತ್ರಿ

May 05th, 07:22 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 6 ಮೇ 2022 ರಂದು ಬೆಳಗ್ಗೆ 10:30 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್‌ ಇದರ 'ಜೆ.ಐ.ಟಿ.ಒ ಕನೆಕ್ಟ್ 2022' ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಸರ್ದಾರ್ ಧಾಮ ಭವನ ಲೋಕಾರ್ಪಣೆ ಮತ್ತು ಸರ್ದಾರ್ ಧಾಮ ಹಂತ ll ರ ಭೂಮಿ ಪೂಜನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

September 11th, 11:01 am

ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಾಜರಿರುವ ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ಭಾಯಿ ರೂಪಾನಿ ಜೀ, ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯಿ, ಸಂಪುಟದ ನನ್ನ ಸಹೋದ್ಯೋಗಿಗಳಾದ, ಸಚಿವರಾದ ಶ್ರೀ ಪರಶೋತ್ತಮ ರೂಪಾಲ ಜೀ, ಶ್ರೀ ಮನ್ಸುಖ್ ಭಾಯಿ ಮಾಂಡವೀಯ ಜೀ, ಅನುಪ್ರಿಯ ಪಟೇಲ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಗುಜರಾತ್ ಪ್ರದೇಶ ಬಿ.ಜೆ.ಪಿ. ಅಧ್ಯಕ್ಷರಾದ ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರಕಾರದ ಎಲ್ಲಾ ಸಚಿವರೇ, ಇಲ್ಲಿ ಹಾಜರಿರುವ ಎಲ್ಲಾ ಸಂಸತ್ ಸದಸ್ಯರೇ, ಗುಜರಾತಿನ ಶಾಸಕರೇ, ಸರ್ದಾರ್ ಧಾಮದ ಎಲ್ಲಾ ಟ್ರಸ್ಟೀಗಳೇ, ನನ್ನ ಸ್ನೇಹಿತರಾದ ಶ್ರೀ ಗಾಗಿಭಾಯಿ, ಟ್ರಸ್ಟಿನ ಎಲ್ಲಾ ಗೌರವಾನ್ವಿತ ಸದಸ್ಯರೇ, ಈ ಶ್ರೇಷ್ಠ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಸ್ನೇಹಿತರೇ, ಮತ್ತು ಸಹೋದರರೇ ಹಾಗು ಸಹೋದರಿಯರೇ!.