QuotePM Modi thanks Australian PM Scott Morrison for returning 29 ancient artefacts to India
QuotePM Modi, Australian PM review progress made under the Comprehensive Strategic Partnership

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾನ್ಯ ಸ್ಕಾಟ್ ಮಾರಿಸನ್ ಅವರಿಂದು 2ನೇ ಭಾರತ- ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಿದರು, ಈ ವೇಳೆ, ಅವರು ಎರಡೂ ದೇಶಗಳ ನಡುವಿನ ಬಹುಮುಖಿ ಬಾಂಧವ್ಯದ ಪರಾಮರ್ಶೆ ನಡೆಸಿ, ಪ್ರಾದೇಶಿಕ ಮತ್ತು ಜಾಗತಿಕ ಬೆಳೆವಣಿಗೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. 

ಮೊದಲಿಗೆ ಪ್ರಧಾನಮಂತ್ರಿ ಮೋದಿ ಅವರು ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್ ಲ್ಯಾಂಡ್ ನಲ್ಲಿ ಭೀಕರ ಪ್ರವಾಹದಿಂದ ಉಂಟಾದ ಹಾನಿ ಮತ್ತು ಜೀವ ಹಾನಿಗೆ ತಮ್ಮ ಸಂತಾಪ ವ್ಯಕ್ತಪಡಿಸಿದರು. 
ಇಬ್ಬರೂ ನಾಯಕರು 2020ರ ಜೂನ್ ನಲ್ಲಿ ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಸ್ಥಾಪಿಸಲಾದ ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವದ ಅಡಿಯಲ್ಲಿ ಸಾಧಿಸಲಾಗಿರುವ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಮೋದಿ ಅವರು, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶಿಕ್ಷಣ ಮತ್ತು ನಾವಿನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ನಿರ್ಣಾಯಕ ಖನಿಜಗಳು, ಜಲ ನಿರ್ವಹಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನ, ಕೋವಿಡ್ -19ಕ್ಕೆ ಸಂಬಂಧಿಸಿದ ಸಂಶೋಧನೆ ಇತ್ಯಾದಿ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಬಾಂಧವ್ಯ ವರ್ಧನೆಯ ವ್ಯಾಪ್ತಿಯ ಬಗ್ಗೆ ಪ್ರಧಾನಿ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದರು. 
ಪ್ರಧಾನಮಂತ್ರಿ ಮೋದಿ ಅವರು 29 ಭಾರತದ ಪ್ರಾಚೀನ ಕಲಾಕೃತಿಗಳನ್ನು ಹಿಂತಿರುಗಿಸಿದ್ದಕ್ಕಾಗಿ  ಮಾನ್ಯ ಸ್ಕಾಟ್ ಮಾರಿಸನ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಕಲಾಕೃತಿಗಳಲ್ಲಿ ದೇಶದ ವಿವಿಧ ಭಾಗಗಳ ಶಿಲ್ಪಗಳು, ಚಿತ್ರಗಳು ಮತ್ತು ಛಾಯಾಚಿತ್ರಗಳು ಸೇರಿದ್ದು, ಇದರಲ್ಲಿ ಕೆಲವು 9 ಮತ್ತು 10ನೇ ಶತಮಾನದ್ದಾಗಿವೆ.  ಈ ಕಲಾಕೃತಿಗಳಲ್ಲಿ 12ನೇ ಶತಮಾನದ ಚೋಳರ ಕಾಲದ ಕಂಚಿನ ಪ್ರತಿಮೆಗಳು, 11-12ನೇ ಶತಮಾನದ ರಾಜಾಸ್ಥಾನದ ಜೈನ ಶಿಲ್ಪಗಳು, ಗುಜರಾತ್ ನ 12-13ನೇ ಶತಮಾನದ ಬಳಪದ ಕಲ್ಲಿನ ದೇವಿ ಮಹಿಷಾಸುರಮರ್ದಿನಿ, 18-19ನೇ ಶತಮಾನದ ಚಿತ್ರಗಳು ಮತ್ತು  ಆರಂಭಿಕ ಕಾಲದ ಜಿಲಿಟಿನ್ ಬೆಳ್ಳಿಯ ಛಾಯಾಚಿತ್ರಗಳೂ ಸೇರಿವೆ.

|

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಸಮುದಾಯದ ಕಾಳಜಿ ವಹಿಸಿದ  ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಮಾರಿಸನ್ ಅವರಿಗೆ ಧನ್ಯವಾದ ಅರ್ಪಿಸಿದರು.
ಮುಕ್ತ, ಅಂತರ್ಗತ ಮತ್ತು ಸಮೃದ್ಧ ಭಾರತ-ಪೆಸಿಫಿಕ್ ಅನ್ನು ಒಳಗೊಂಡ ಹಂಚಿಕೆಯ ಮೌಲ್ಯಗಳು ಮತ್ತು ಸಮಾನ ಹಿತಾಸಕ್ತಿಗಳ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ವ್ಯೂಹಾತ್ಮಕ ಸಮಾನ ಲಕ್ಷಣವನ್ನು ಇಬ್ಬರೂ ನಾಯಕರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಆಳವಾದ ಸಮಗ್ರ ವ್ಯೂಹಾತ್ಮಕ ಸಹಯೋಗದ ವಿವಿಧ ಅಂಶಗಳನ್ನು ಒಳಗೊಂಡ ಜಂಟಿ ಹೇಳಿಕೆಯನ್ನು ನೀಡಲಾಯಿತು. ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವದ ಅಡಿಯಲ್ಲಿ ಪ್ರಧಾನ ಮಂತ್ರಿಗಳ ನಡುವೆ ವಾರ್ಷಿಕ ಶೃಂಗಸಭೆಗಳನ್ನು ನಡೆಸಲು ಎರಡೂ ಕಡೆಯವರು ಸಮ್ಮತಿಸಿ, ದ್ವಿಪಕ್ಷೀಯ ಸಂಬಂಧಕ್ಕೆ ವಿಶೇಷ ಆಯಾಮವನ್ನೂ ಆ ಮೂಲಕ ಸೇರಿಸಿದರು.

 

 

 

  • ranjeet kumar May 06, 2022

    nmo🎉
  • Chowkidar Margang Tapo April 30, 2022

    vande mataram.
  • Vivek Kumar Gupta April 23, 2022

    जय जयश्रीराम
  • Vivek Kumar Gupta April 23, 2022

    नमो नमो.
  • Vivek Kumar Gupta April 23, 2022

    जयश्रीराम
  • Vivek Kumar Gupta April 23, 2022

    नमो नमो
  • Vivek Kumar Gupta April 23, 2022

    नमो
  • ranjeet kumar April 20, 2022

    jay🙏🎉🎉
  • Anil Bidlan April 18, 2022

    माननीय प्रधानमंत्री महोदय नमस्कार मैं आपसे प्रार्थना करता हूं कि मैं भारतीय जनता पार्टी का कार्यकर्ता हूं मेरी किसी ने भी कोई सुनाई नहीं कर रहा जिसमें मेहनत मजदूरी करके m.a. पास कर रखी है किसी प्रकार के कोई भी मेरे काम नहीं हो रहे हैं जिसमें कि सरकार के द्वारा दी गई सुविधाएं कोई भी सुविधा का लाभ नहीं मिल रहा मुझे जिसमें अंतोदय परिवार के अंदर आता हूं उसका भी कोई शमा समस्या का हल नहीं हुआ कोई भी लाभ नहीं मिल रहा जिसमें मेरी श्रमिक की कॉपी बनी हुई है लेबर डिपार्टमेंट की इसमें सरकार के द्वारा कुछ सुविधाएं उपलब्ध होती है छात्रवृत्ति की बच्चों की जिसमें मैंने दोनों बच्चों के फार्म लगाए हुए हैं छात्रवृत्ति के 2019 से लेकर अब तक मुझे कोई भी सुविधा का लाभ नहीं मिल रहा बार-बार फार्म को रिजेक्ट कर देते हैं सही फार्म को भी रिजेक्ट कर देते कम से कम मैनेज 6-7 बार सीएम विंडो की दुकान लगा चुका हूं और फार्म 10 15 बार बार चुका हूं कोई भी लाभ प्राप्त नहीं हो रहा है सुविधा का लाभ नहीं मिल रहा मैं आपके आगे हाथ जोड़कर प्रार्थना करता हूं कि मुझे कोई न कोई समस्या का हल जरूर निकालें और मुझे कोई न कोई सरकारी नौकरी दिलाएं
  • ranjeet kumar April 16, 2022

    nmo
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'Operation Brahma': First Responder India Ships Medicines, Food To Earthquake-Hit Myanmar

Media Coverage

'Operation Brahma': First Responder India Ships Medicines, Food To Earthquake-Hit Myanmar
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಮಾರ್ಚ್ 2025
March 30, 2025

Citizens Appreciate Economic Surge: India Soars with PM Modi’s Leadership