ಕೋವಿಡ್ -19 ಸಾಂಕ್ರಾಮಿಕವು ನೀತಿ ನಿರೂಪಣೆಯ ವಿಷಯದಲ್ಲಿ ವಿಶ್ವದಾದ್ಯಂತದ ಸರ್ಕಾರಗಳಿಗೆ ಸಂಪೂರ್ಣ ಹೊಸ ಸವಾಲುಗಳನ್ನು ತಂದೊಡ್ಡಿದೆ. ಭಾರತ ಸಹ ಇದಕ್ಕೆ ಹೊರತಾಗಿಲ್ಲ. ಸುಸ್ಥಿರತೆಯನ್ನು ಖಾತ್ರಿಪಡಿಸುವಾಗ ಸಾರ್ವಜನಿಕ ಕಲ್ಯಾಣಕ್ಕಾಗಿ ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸುವುದು ದೊಡ್ಡ ಸವಾಲುಗಳ ಪೈಕಿ ಒಂದಾಗಿದೆ.

ವಿಶ್ವಾದ್ಯಂತ ಕಕಾಣುತ್ತಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲೂ, 2020-21ರಲ್ಲಿ ಭಾರತದ ರಾಜ್ಯಗಳು ಗಮನಾರ್ಹವಾಗಿ ಹೆಚ್ಚು ಸಾಲ ಪಡೆಯಲು ಸಾಧ್ಯವಾಯಿತು ಎಂಬುದು ನಿಮಗೆ ತಿಳಿದಿದೆಯೇ? 2020-21ರಲ್ಲಿ ರಾಜ್ಯಗಳು ಹೆಚ್ಚುವರಿ 1.06 ಲಕ್ಷ ಕೋಟಿ ರೂ.ಗಳನ್ನು ಪಡೆಯಲು ಸಾಧ್ಯವಾಯಿತು ಎಂಬುದು ಬಹುಶಃ ನಿಮಗೆ ಆಚ್ಚರಿ ತರಬಹುದು. ಸಂಪನ್ಮೂಲಗಳ ಲಭ್ಯತೆಯಲ್ಲಿ ಈ ಗಮನಾರ್ಹ ಹೆಚ್ಚಳವು ಕೇಂದ್ರ-ರಾಜ್ಯಗಳ ಪಾಲ್ಗೊಳ್ಳುವಿಕೆ ವಿಧಾನದಿಂದ ಸಾಧ್ಯವಾಗಿದೆ.

ಕೋವಿಡ್ -19 ಸಾಂಕ್ರಾಮಿಕಕ್ಕೆ ನಮ್ಮ ಆರ್ಥಿಕ ಸ್ಪಂದನೆಯನ್ನು ನಾವು ಸಮೀಕರಿಸಿದಾಗ, ನಮ್ಮ ಪರಿಹಾರಗಳು 'ಒಂದೇ ಅಳತೆ ಎಲ್ಲಕ್ಕೂ ಸರಿಹೊಂದುತ್ತದೆ' ಮಾದರಿಯನ್ನು ಅನುಸರಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಭೌಗೋಳಿಕ ಆಯಾಮಗಳ ಒಕ್ಕೂಟ ರಾಷ್ಟ್ರಕ್ಕೆ, ರಾಜ್ಯ ಸರ್ಕಾರಗಳಲ್ಲಿ ಸುಧಾರಣೆಗಳನ್ನು ಉತ್ತೇಜಿಸಲು ರಾಷ್ಟ್ರೀಯ ಮಟ್ಟದಲ್ಲಿ ನೀತಿ ನಿರೂಪಣೆಗಳನ್ನು ಹುಡುಕುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಆದರೆ, ನಮ್ಮ ಒಕ್ಕೂಟ ರಾಜಕೀಯದ ದೃಢತೆಯಲ್ಲಿ ನಮಗೆ ನಂಬಿಕೆ ಇದೆ ಮತ್ತು ನಾವು ಕೇಂದ್ರ-ರಾಜ್ಯ ಪಾಲ್ಗೊಳ್ಳುವಿಕೆಯ ಸ್ಫೂರ್ತಿಯೊಂದಿಗೆ ಮುಂದೆ ಸಾಗುತ್ತಿದ್ದೇವೆ.

2020ರ ಮೇ ತಿಂಗಳಲ್ಲಿ, ಆತ್ಮನಿರ್ಭರ ಭಾರತ ಪ್ಯಾಕೇಜ್ ಭಾಗವಾಗಿ, 2020-21ರಲ್ಲಿ ರಾಜ್ಯ ಸರ್ಕಾರಗಳಿಗೆ ಸಾಲ ಪಡೆಯುವ ಮಿತಿಯ ಹೆಚ್ಚಳವನ್ನು ಭಾರತ ಸರ್ಕಾರ ಪ್ರಕಟಿಸಿತು. ಜಿಎಸ್.ಡಿ.ಪಿ.ಯ ಹೆಚ್ಚುವರಿ ಶೇ.2ರಷ್ಟು ಅನುಮತಿಸಲಾಗಿದ್ದು, ಈ ಪೈಕಿ ಶೇ.1ನ್ನು ನಿರ್ದಿಷ್ಟ ಆರ್ಥಿಕ ಸುಧಾರಣೆಗಳನ್ನು ಜಾರಿ ಮಾಡುವ ಷರತ್ತಿಗೆ ಒಳಪಡಿಸಲಾಗಿದೆ. ಸುಧಾರಣೆಯ ಈ ಪ್ರೇರಣೆ ಭಾರತೀಯ ಸಾರ್ವಜನಿಕ ಹಣಕಾಸು ವಿಷಯದಲ್ಲಿ ಅಪರೂಪವಾಗಿದೆ. ಹೆಚ್ಚುವರಿ ಹಣವನ್ನು ಪಡೆಯಲು ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಕ ಉತ್ತೇಜಿಸುತ್ತದೆ. ಈ ಕಸರತ್ತಿನ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ ಆದರೆ ಸದೃಢ ಆರ್ಥಿಕ ನೀತಿಗಳಿಗಾಗಿ, ಸೀಮಿತವಾಗಿ ತೆಗೆದುಕೊಳ್ಳುವವರು ಇದ್ದಾರೆ ಎಂಬ ಕಲ್ಪನೆಗೆ ವ್ಯತಿರಿಕ್ತವಾಗಿ ಸಾಗುತ್ತದೆ.

ನಾಲ್ಕು ಸುಧಾರಣೆಗಳಿಗೆ ಹೆಚ್ಚುವರಿಯಾಗಿ ಸಾಲಗಳನ್ನು ಜೋಡಿಸಲಾಗಿದ್ದು, (ಜಿಡಿಪಿಯ ಶೇ.0.25 ಪ್ರತಿಯೊಂದಕ್ಕೂ ಸಂಬಂಧಿಸಿದೆ) ಎರಡು ಗುಣಲಕ್ಷಣಗಳನ್ನು ಹೊಂದಿವೆ. ಮೊದಲನೆಯದಾಗಿ, ಪ್ರತಿಯೊಂದು ಸುಧಾರಣೆಗಳೂ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಬಡವರು, ದುರ್ಬಲರು ಮತ್ತು ಮಧ್ಯಮ ವರ್ಗದವರಿಗೆ ಸುಲಭವಾದ ಜೀವನವನ್ನು ಸುಧಾರಿಸಲು ಸಂಬಂಧಿಸಿದ್ದಾಗಿವೆ. ಎರಡನೆಯದಾಗಿ, ಅದು ಹಣಕಾಸಿನ ಸುಸ್ಥಿರತೆಯನ್ನೂ ಉತ್ತೇಜಿಸುತ್ತದೆ.

'ಒಂದು ರಾಷ್ಟ್ರ ಒಂದು ಪಡಿತರ ಚೀಟಿ' ನೀತಿಯಡಿಯಲ್ಲಿ ಮೊದಲ ಸುಧಾರಣೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌.ಎಫ್‌.ಎಸ್‌.ಎ.)ಯ ಅಡಿಯಲ್ಲಿ ರಾಜ್ಯದ ಎಲ್ಲಾ ಪಡಿತರ ಚೀಟಿಗಳನ್ನೂ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಸಂಖ್ಯೆಯೊಂದಿಗೆ ಸಂಪರ್ಕಿಸಲಾಗಿದೆಯೆ ಮತ್ತು ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಡಿವೈಸ್ ಹೊಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇದರಿಂದಾಗುವ ಪ್ರಮುಖ ಪ್ರಯೋಜನ ವಲಸೆ ಕಾರ್ಮಿಕರು ದೇಶದ ಯಾವುದೇ ಸ್ಥಳದಲ್ಲಿ ತಮ್ಮ ಪಡಿತರ ಆಹಾರವನ್ನು ಪಡೆದುಕೊಳ್ಳಬಹುದು. ನಾಗರಿಕರಿಗೆ ಆಗುವ ಈ ಪ್ರಯೋಜನದ ಜೊತೆಗೆ, ನಕಲಿ ಕಾರ್ಡ್ ಗಳ ಮತ್ತು ನಕಲಿ ಸದಸ್ಯರ ನಿರ್ಮೂಲನೆಯೊಂದಿಗೆ ಆರ್ಥಿಕ ಪ್ರಯೋಜನವೂ ಇದೆ. 17 ರಾಜ್ಯಗಳು ಈ ಸುಧಾರಣೆಯನ್ನು ಪೂರ್ಣಗೊಳಿಸಿದ್ದು, ಅವುಗಳಿಗೆ 37,600 ಕೋಟಿ ರೂ. ಮೊತ್ತದ ಹೆಚ್ಚುವರಿ ಸಾಲ ಮಂಜೂರು ಮಾಡಲಾಗಿದೆ.

ಎರಡನೇ ಸುಧಾರಣೆ, ಸುಗಮ ವಾಣಿಜ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ರಾಜ್ಯಗಳು 7 ಕಾಯಿದೆಗಳ ಅಡಿಯಲ್ಲಿ ವ್ಯವಹಾರ-ಸಂಬಂಧಿತ ಪರವಾನಗಿಗಳ ನವೀಕರಣವನ್ನು ಅಲ್ಪ ಶುಲ್ಕ ಪಾವತಿಯ ಮೇಲೆ ಸ್ವಯಂಚಾಲಿತ, ಆನ್‌ ಲೈನ್ ಮತ್ತು ತಾರತಮ್ಯವಿಲ್ಲದೆ ಮಾಡಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಮತ್ತೊಂದು ಅವಶ್ಯಕತೆಯೆಂದರೆ ಗಣಕೀಕೃತ ಯಾದೃಚ್ಛಿಕ ತಪಾಸಣೆ ವ್ಯವಸ್ಥೆಯ ಅನುಷ್ಠಾನ ಮತ್ತು ಇನ್ನೂ 12 ಕಾಯಿದೆಗಳ ಅಡಿಯಲ್ಲಿ ಕಿರುಕುಳ ಮತ್ತು ಭ್ರಷ್ಟಾಚಾರವನ್ನು ತಗ್ಗಿಸಲು ತಪಾಸಣೆಯ ಪೂರ್ವ ಸೂಚನೆ ನೀಡುವುದಾಗಿದೆ. ಈ ಸುಧಾರಣೆ (19 ಕಾನೂನುಗಳನ್ನು ಒಳಗೊಂಡಿರುತ್ತದೆ) ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ನಿರ್ದಿಷ್ಟವಾಗಿ ನೆರವಾಗುತ್ತದೆ, ಅವರು 'ಇನ್ಸ್‌ ಪೆಕ್ಟರ್ ರಾಜ್' ನ ಹೊರೆಯಿಂದ ಹೆಚ್ಚು ಬಳಲುತ್ತಿದ್ದಾರೆ. ಇದು ಸುಧಾರಿತ ಹೂಡಿಕೆಯ ವಾತಾವರಣ, ಹೆಚ್ಚಿನ ಹೂಡಿಕೆ ಮತ್ತು ತ್ವರಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 20 ರಾಜ್ಯಗಳು ಈ ಸುಧಾರಣೆಯನ್ನು ಪೂರ್ಣಗೊಳಿಸಿದ್ದು ಹೆಚ್ಚುವರಿ ರೂ. 39,521 ಕೋಟಿ ರೂ. ಸಾಲ ಪಡೆಯಲು ಅನುಮತಿ ಪಡೆದಿವೆ.

15ನೇ ಹಣಕಾಸು ಆಯೋಗ ಮತ್ತು ಹಲವಾರು ಅಕಾಡಮಿಗಳು ಸದೃಢ ಆಸ್ತಿ ತೆರಿಗೆಯ ಮಹತ್ವವನ್ನು ಪ್ರತಿಪಾದಿಸಿವೆ. ಮೂರನೇ ಸುಧಾರಣೆಗೆ ರಾಜ್ಯಗಳು, ನಗರ ಪ್ರದೇಶಗಳಲ್ಲಿ ಕ್ರಮವಾಗಿ ಆಸ್ತಿ ವಹಿವಾಟಿನ ಮುದ್ರಾಂಕ ಶುಲ್ಕ ಮಾರ್ಗಸೂಚಿ ಮೌಲ್ಯಗಳೊಂದಿಗೆ ಆಸ್ತಿ ತೆರಿಗೆ ಮತ್ತು ನೀರು ಹಾಗೂ ಒಳ ಚರಂಡಿಯ ಫ್ಲೋರ್ ದರಗಳನ್ನು ಅಧಿಸೂಚಿಸುವುದು ಅಗತ್ಯವಾಗಿರುತ್ತದೆ. ಇದು ನಗರ ಬಡ ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತದೆ, ಉತ್ತಮ ಮೂಲಸೌಕರ್ಯಗಳನ್ನು ಬೆಂಬಲಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಸ್ತಿ ತೆರಿಗೆ ಅದರ ಘಟನೆಯಲ್ಲಿ ಪ್ರಗತಿಪರವಾಗಿದೆ ಮತ್ತು ಆದ್ದರಿಂದ ನಗರ ಪ್ರದೇಶಗಳಲ್ಲಿನ ಬಡವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಈ ಸುಧಾರಣೆಯು ಪದೇ ಪದೇ ವೇತನ ಪಾವತಿಯಲ್ಲಿ ವಿಳಂಬವನ್ನು ಎದುರಿಸುತ್ತಿರುವ ಪುರಸಭೆಯ ಸಿಬ್ಬಂದಿಗೆ ಪ್ರಯೋಜನವನ್ನು ನೀಡುತ್ತದೆ. 11 ರಾಜ್ಯಗಳು ಈ ಸುಧಾರಣೆಗಳನ್ನು ಪೂರ್ಣಗೊಳಿಸಿದ್ದು, ಹೆಚ್ಚುವರಿ ರೂ. 15,957 ಕೋಟಿ ರೂ. ಸಾಲ ಮಂಜೂರಾತಿ ಪಡೆದಿವೆ.

ನಾಲ್ಕನೇ ಸುಧಾರಣೆ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಬದಲು ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಪರಿಚಯಿಸುವುದಾಗಿದೆ. ವರ್ಷಾಂತ್ಯಕ್ಕೆ ಪ್ರಾಯೋಗಿಕ ಆಧಾರದ ಮೇಲೆ ಒಂದು ಜಿಲ್ಲೆಯಲ್ಲಿ ವಾಸ್ತವ ಅನುಷ್ಠಾನದೊಂದಿಗೆ ರಾಜ್ಯವ್ಯಾಪಿ ಯೋಜನೆಯನ್ನು ರೂಪಿಸುವ ಅವಶ್ಯಕತೆಯಾಗಿದೆ. ಜಿ.ಎಸ್‌.ಡಿ.ಪಿ.ಯ ಶೇ.0.15 ಹೆಚ್ಚುವರಿ ಸಾಲವನ್ನು ಇದಕ್ಕೆ ಸಂಪರ್ಕಿಸಲಾಗಿದೆ. ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳನ್ನು ತಗ್ಗಿಸಲು ಮತ್ತು ಆದಾಯ ಮತ್ತು ವೆಚ್ಚಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಒಂದು ಅಂಶವನ್ನು ಸಹ ಒದಗಿಸಲಾಗಿದೆ (ಪ್ರತಿಯೊಂದಕ್ಕೂ ಜಿ.ಎಸ್‌.ಡಿ.ಪಿ.ಯ ಶೇ.0.05). ಇದು ವಿತರಣಾ ಕಂಪನಿಗಳ ಹಣಕಾಸನ್ನು ಸುಧಾರಿಸುತ್ತದೆ, ನೀರು ಮತ್ತು ಇಂಧನ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ತಮ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಕ್ಷಮತೆಯ ಮೂಲಕ ಸೇವೆಯ ಗುಣಮಟ್ಟವನ್ನು ಸುಧಾರಿಸುತ್ತದೆ. 13 ರಾಜ್ಯಗಳು ಕನಿಷ್ಠ ಒಂದು ಅಂಶವನ್ನಾದರೂ ಅನುಷ್ಠಾನ ಮಾಡಿದ್ದರೆ, 6 ರಾಜ್ಯಗಳು ಡಿಬಿಟಿಯನ್ನು ಅನುಷ್ಠಾನ ಮಾಡಿವೆ. ಇದರ ಫಲವಾಗಿ 13,201 ಕೋಟಿ ಹೆಚ್ಚುವರಿ ಸಾಲ ಪಡೆಯಲು ಅನುಮತಿಸಲಾಗಿದೆ.

ಒಟ್ಟಾರೆಯಾಗಿ 23 ರಾಜ್ಯಗಳು ಸಂಭಾವ್ಯ 2.14 ಲಕ್ಷ ಕೋಟಿ ರೂ. ಪೈಕಿ ಹೆಚ್ಚುವರಿಯಾಗಿ 1.06 ಲಕ್ಷ ಕೋಟಿ ಸಾಲವನ್ನು ಪಡೆದಿವೆ, ಇದರ ಫಲವಾಗಿ, 2020-21ರಲ್ಲಿ ರಾಜ್ಯಗಳಿಗೆ ಮಂಜೂರು ಮಾಡಿರುವ ಸರಾಸರಿ ಸಾಲದ ಅನುಮತಿ (ಷರತ್ತುಬದ್ಧ ಮತ್ತು ಷರತ್ತು ರಹಿತ) ಜಿಎಸ್.ಡಿ.ಪಿ.ಯ ಪ್ರಾಥಮಿಕ ಅಂದಾಜಿನ ಶೇ.4.5ರಷ್ಟಾಗಿದೆ.

ನಮ್ಮಂತೆಯೇ ಸಂಕೀರ್ಣ ಸವಾಲುಗಳನ್ನು ಹೊಂದಿರುವ ದೊಡ್ಡ ರಾಷ್ಟ್ರಕ್ಕೆ, ಇದು ಒಂದು ವಿಶಿಷ್ಟ ಅನುಭವವಾಗಿತ್ತು. ವಿವಿಧ ಕಾರಣಗಳಿಗಾಗಿ, ಯೋಜನೆಗಳು ಮತ್ತು ಸುಧಾರಣೆಗಳು ವರ್ಷಗಳವರೆಗೆ ಕಾರ್ಯನಿರ್ವಹಿಸದೆ ಇರುವುದನ್ನು ನಾವು ಬಹಳ ನೋಡಿದ್ದೇವೆ. ಸಾಂಕ್ರಾಮಿಕದ ನಡುವೆಯೂ ಅಲ್ಪಾವಧಿಯಲ್ಲಿಯೇ ಸಾರ್ವಜನಿಕ ಸ್ನೇಹಿ ಸುಧಾರಣೆಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳು ಒಗ್ಗೂಡಿದ ಹಿಂದಿನ ಕಾಲದಿಂದ ಇದು ಆಹ್ಲಾದಕರ ನಿರ್ಗಮನವಾಗಿತ್ತು. ಎಲ್ಲರೊಂದಿಗೆ ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ ಎಂಬ ನಮ್ಮ ದೃಷ್ಟಿಕೋನದಿಂದ ಇದು ಸಾಧ್ಯವಾಗಿದೆ. ಈ ಸುಧಾರಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹೆಚ್ಚುವರಿ ನಿಧಿಯ ಪ್ರೋತ್ಸಾಹಕವಿಲ್ಲದೆ, ಈ ನೀತಿಗಳನ್ನು ಜಾರಿಗೊಳಿಸಲು ವರ್ಷಗಳೇ ಬೇಕಾಗುತ್ತಿತ್ತು ಎನ್ನುತ್ತಾರೆ. ಭಾರತವು 'ರಹಸ್ಯ ಮತ್ತು ಕಡ್ಡಾಯವಾಗಿ ಸುಧಾರಣೆಗಳ' ಮಾದರಿಯನ್ನು ಕಂಡಿದೆ. ಇದು 'ದೃಢ ನಿಶ್ಚಯ ಮತ್ತು ಪ್ರೋತ್ಸಾಹಕದಿಂದ ಸುಧಾರಣೆಗಳ' ಹೊಸ ಮಾದರಿಯಾಗಿದೆ. ನಮ್ಮ ನಾಗರಿಕರ ಸುಧಾರಣೆಗಾಗಿ ಕಠಿಣ ಸಮಯದ ನಡುವೆಯೂ ಈ ನೀತಿಗಳನ್ನು ರೂಪಿಸುವಲ್ಲಿ ಮುಂದಾಳತ್ವ ವಹಿಸಿದ ಎಲ್ಲ ರಾಜ್ಯಗಳಿಗೆ ನಾನು ಆಭಾರಿಯಾಗಿದ್ದೇನೆ. 130 ಕೋಟಿ ಭಾರತೀಯರ ಶೀಘ್ರ ಪ್ರಗತಿಗಾಗಿ ನಾವು ಒಟ್ಟಾಗಿ ಶ್ರಮಿಸುವುದನ್ನು ಮುಂದುವರಿಸುತ್ತೇವೆ.

  • Jitendra Kumar April 17, 2025

    🙏🇮🇳❤️🎉
  • Dheeraj Thakur March 25, 2025

    जय श्री राम।
  • Dheeraj Thakur March 25, 2025

    जय श्री राम
  • KANODI GANGADHAR March 20, 2025

    JAI BHARATH MAATHA KI JAI BJP JAI
  • Prasanth reddi March 14, 2025

    జై శ్రీ రామ్.. జై బీజేపీ... 🙏🚩🪷✌️
  • Chhedilal Mishra December 07, 2024

    Jai shrikrishna
  • कृष्ण सिंह राजपुरोहित भाजपा विधान सभा गुड़ामा लानी November 19, 2024

    जय श्री राम 🚩
  • Jitender Kumar Haryana BJP State President October 09, 2024

    ❤️🇮🇳
  • Jitender Kumar Haryana BJP State President October 09, 2024

    🙏❤️🇮🇳
  • manvendra singh September 24, 2024

    jai hind jai bharat 🙏🏽🙏🏽💐🙏🏽🙏🏽💐
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Major Boost for Make-in-India: Defence Exports Surge 35-Fold In 11 Years Under Modi Govt, Says Rajnath Singh

Media Coverage

Major Boost for Make-in-India: Defence Exports Surge 35-Fold In 11 Years Under Modi Govt, Says Rajnath Singh
NM on the go

Nm on the go

Always be the first to hear from the PM. Get the App Now!
...
ಏಕ್ತಾ ಕಾ ಮಹಾಕುಂಭ್ - ಹೊಸ ಯುಗದ ಉದಯ
February 27, 2025

- ಶ್ರೀ ನರೇಂದ್ರ ಮೋದಿ,
- ಗೌರವಾನ್ವಿತ ಪ್ರಧಾನಮಂತ್ರಿ

ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಯಶಸ್ವಿಯಾಗಿ ಮುಕ್ತಾಯವಾಗಿದೆ. ಏಕತೆಯ ಮಹಾಯಜ್ಞ ಪೂರ್ಣಗೊಂಡಿದೆ. ಒಂದು ರಾಷ್ಟ್ರದ ಪ್ರಜ್ಞೆ ಜಾಗೃತವಾದಾಗ, ಶತಮಾನಗಳಷ್ಟು ಹಳೆಯದಾದ ಅಧೀನತೆಯ ಮನಸ್ಥಿತಿಯ ಸಂಕೋಲೆಗಳಿಂದ ಮುಕ್ತವಾದಾಗ, ಅದು ನವೀಕೃತ ಶಕ್ತಿಯ ತಾಜಾ ಗಾಳಿಯಲ್ಲಿ ಮುಕ್ತವಾಗಿ ಉಸಿರಾಡುತ್ತದೆ. ಇದರ ಫಲಿತಾಂಶವನ್ನು ಜನವರಿ 13ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕ್ತಾ ಕಾ ಮಹಾಕುಂಭ(ಏಕತೆಯ ಮಹಾಕುಂಭ)ದಲ್ಲಿ ವೀಕ್ಷಿಸಲಾಯಿತು.

|

2024 ಜನವರಿ 22ರಂದು, ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ, ನಾನು ದೇವಭಕ್ತಿ ಮತ್ತು ದೇಶಭಕ್ತಿಯ ಬಗ್ಗೆ ಮಾತನಾಡಿದೆ - ದೈವಿಕ ಮತ್ತು ರಾಷ್ಟ್ರದ ಮೇಲಿನ ಭಕ್ತಿ. ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದ ಸಮಯದಲ್ಲಿ, ದೇವರು ಮತ್ತು ದೇವತೆಗಳು, ಸಂತರು, ಮಹಿಳೆಯರು, ಮಕ್ಕಳು, ಯುವಕರು, ಹಿರಿಯ ನಾಗರಿಕರು ಮತ್ತು ಜೀವನದ ಎಲ್ಲಾ ಹಂತಗಳ ಜನರು ಒಟ್ಟಿಗೆ ಬಂದರು. ಅಲ್ಲಿ ನಾವು ರಾಷ್ಟ್ರದ ಜಾಗೃತ ಪ್ರಜ್ಞೆಯನ್ನು ಕಂಡೆವು. ಇದು ಏಕತಾ ಕಾ ಮಹಾಕುಂಭ, ಅಲ್ಲಿ 140 ಕೋಟಿ ಭಾರತೀಯರ ಭಾವನೆಗಳು ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ, ಈ ಪವಿತ್ರ ಸಂದರ್ಭಕ್ಕಾಗಿ ಒಟ್ಟುಗೂಡಿದವು.


ಪ್ರಯಾಗರಾಜ್‌ನ ಈ ಪವಿತ್ರ ಪ್ರದೇಶದಲ್ಲಿ ಶೃಂಗವರ್‌ಪುರವಿದೆ, ಇದು ಏಕತೆ, ಸಾಮರಸ್ಯ ಮತ್ತು ಪ್ರೀತಿಯ ಪವಿತ್ರ ಭೂಮಿಯಾಗಿದೆ, ಅಲ್ಲಿ ಪ್ರಭು ಶ್ರೀರಾಮ ಮತ್ತು ನಿಷಾದರಾಜ್ ಭೇಟಿಯಾಗಿದ್ದರು. ಅವರ ಸಭೆಯು ಭಕ್ತಿ ಮತ್ತು ಸದ್ಭಾವನೆಯ ಸಂಗಮವನ್ನು ಸಂಕೇತಿಸುತ್ತದೆ. ಇಂದಿಗೂ, ಪ್ರಯಾಗರಾಜ್ ನಮಗೆ ಅದೇ ಮನೋಭಾವದಿಂದ ಸ್ಫೂರ್ತಿ ನೀಡುತ್ತದೆ.

|

45 ದಿನಗಳ ಕಾಲ, ದೇಶದ ಮೂಲೆ ಮೂಲೆಯಿಂದ ಕೋಟ್ಯಂತರ ಜನರು ಸಂಗಮಕ್ಕೆ ಹೋಗುವುದನ್ನು ನಾನು ನೋಡಿದೆ. ಸಂಗಮದಲ್ಲಿ ಭಾವನೆಗಳ ಅಲೆ ಏರುತ್ತಲೇ ಇತ್ತು. ಪ್ರತಿಯೊಬ್ಬ ಭಕ್ತರೂ ಒಂದೇ ಉದ್ದೇಶದಿಂದ ಬಂದರು - ಅದು ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದಾಗಿತ್ತು. ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮವು ಪ್ರತಿಯೊಬ್ಬ ಯಾತ್ರಿಕರನ್ನು ಉತ್ಸಾಹ, ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿತು.

|

ಪ್ರಯಾಗರಾಜ್‌ನಲ್ಲಿ ನಡೆಯುವ ಈ ಮಹಾಕುಂಭವು ಆಧುನಿಕ ನಿರ್ವಹಣಾ ವೃತ್ತಿಪರರು, ಯೋಜನೆ ಮತ್ತು ನೀತಿ ತಜ್ಞರಿಗೆ ಅಧ್ಯಯನದ ವಿಷಯವಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಈ ಪ್ರಮಾಣದ ಯಾವುದೇ ಸಮಾನಾಂತರ ಅಥವಾ ಉದಾಹರಣೆ ಇಲ್ಲ.

ನದಿಗಳ ಸಂಗಮದ ದಡದಲ್ಲಿರುವ ಪ್ರಯಾಗರಾಜ್‌ನಲ್ಲಿ ಕೋಟ್ಯಂತರ ಜನರು ಹೇಗೆ ಒಟ್ಟುಗೂಡಿದರು ಎಂಬುದನ್ನು ಜಗತ್ತು ಆಶ್ಚರ್ಯದಿಂದ ನೋಡಿತು. ಈ ಜನರಿಗೆ ಯಾವುದೇ ಔಪಚಾರಿಕ ಆಹ್ವಾನಗಳು ಇರಲಿಲ್ಲ, ಯಾವಾಗ ಹೋಗಬೇಕೆಂಬುದರ ಬಗ್ಗೆ ಯಾವುದೇ ಪೂರ್ವ ಸಂವಹನವಿರಲಿಲ್ಲ. ಆದರೂ ಕೋಟ್ಯಂತರ ಜನರು ತಮ್ಮದೇ ಆದ ಇಚ್ಛೆಯಿಂದ ಮಹಾಕುಂಭಕ್ಕೆ ಹೊರಟರು ಮತ್ತು ಪವಿತ್ರ ನೀರಿನಲ್ಲಿ ಪುಣ್ಯಸ್ನಾನ ಮಾಡಿ ಆನಂದ ಅನುಭವಿಸಿದರು.

|

ಪವಿತ್ರ ಸ್ನಾನದ ನಂತರ ಅಪಾರ ಸಂತೋಷ ಮತ್ತು ತೃಪ್ತಿ ಹೊರಸೂಸಿದ ಆ ಮುಖಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಮಹಿಳೆಯರು, ಹಿರಿಯರು, ನಮ್ಮ ದಿವ್ಯಾಂಗ ಸಹೋದರ ಸಹೋದರಿಯರು - ಎಲ್ಲರೂ ಸಂಗಮ ತಲುಪಲು ಒಂದು ಮಾರ್ಗ ಕಂಡುಕೊಂಡರು.

|

ಭಾರತದ ಯುವಕರ ಅಗಾಧ ಭಾಗವಹಿಸಿದ್ದನ್ನು ನೋಡುವುದೇ ನನಗೆ ವಿಶೇಷವಾಗಿ ಹೃದಯಸ್ಪರ್ಶಿಯಾಗಿತ್ತು. ಮಹಾಕುಂಭದಲ್ಲಿ ಯುವ ಪೀಳಿಗೆಯ ಉಪಸ್ಥಿತಿಯು ಭಾರತದ ಯುವಕರು ನಮ್ಮ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಜ್ಯೋತಿ ಹೊತ್ತವರಾಗಿರುತ್ತಾರೆ ಎಂಬ ಆಳವಾದ ಸಂದೇಶವನ್ನು ರವಾನಿಸುತ್ತದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದಾರೆ.

ಈ ಮಹಾಕುಂಭಕ್ಕೆ ಪ್ರಯಾಗ್‌ರಾಜ್‌ಗೆ ಆಗಮಿಸಿದ ಜನರ ಸಂಖ್ಯೆ ನಿಸ್ಸಂದೇಹವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಆದರೆ ಭೌತಿಕವಾಗಿ ಹಾಜರಿದ್ದವರನ್ನು ಮೀರಿ, ಪ್ರಯಾಗ್‌ರಾಜ್‌ಗೆ ತಲುಪಲು ಸಾಧ್ಯವಾಗದ ಕೋಟ್ಯಂತರ ಜನರು ಈ ಸಂದರ್ಭದೊಂದಿಗೆ ಭಾವನಾತ್ಮಕವಾಗಿಯೂ ಆಳವಾದ ಸಂಪರ್ಕ ಹೊಂದಿದ್ದರು. ಯಾತ್ರಿಕರು ತಂದ ಪವಿತ್ರ ನೀರು ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಆನಂದದ ಮೂಲವಾಯಿತು. ಮಹಾಕುಂಭದಿಂದ ಹಿಂದಿರುಗಿದ ಅನೇಕರನ್ನು ಅವರ ಹಳ್ಳಿಗಳಲ್ಲಿ ಗೌರವದಿಂದ ಸ್ವೀಕರಿಸಲಾಯಿತು, ಸಮಾಜವು ಸಹ ಗೌರವಿಸಿತು.

|

ಕಳೆದ ಕೆಲವು ವಾರಗಳಲ್ಲಿ ನಡೆದದ್ದು ಅಭೂತಪೂರ್ವ ಮತ್ತು ಮುಂಬರುವ ಶತಮಾನಗಳಿಗೆ ಭದ್ರ ಅಡಿಪಾಯ ಹಾಕಿದೆ.

ಯಾರೂ ಊಹಿಸಿದ್ದಕ್ಕಿಂತ ಹೆಚ್ಚಿನ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸಿದರು. ಕುಂಭಮೇಳದ ಹಿಂದಿನ ಅನುಭವಗಳ ಆಧಾರದ ಮೇಲೆ ಆಡಳಿತವು ಹಾಜರಾತಿಯನ್ನು ಅಂದಾಜು ಮಾಡಿತ್ತು.

ಈ ಏಕ್ತಾ ಕಾ ಮಹಾಕುಂಭದಲ್ಲಿ ಅಮೆರಿಕದ ಜನಸಂಖ್ಯೆಯ ಸುಮಾರು 2 ಪಟ್ಟು ಜನರು ಭಾಗವಹಿಸಿದ್ದರು.

ಆಧ್ಯಾತ್ಮಿಕ ವಿದ್ವಾಂಸರು ಕೋಟ್ಯಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ವಿಶ್ಲೇಷಿಸಿದರೆ, ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವ ಭಾರತವು ಈಗ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ಕಂಡುಕೊಂಡರು. ಇದು ಹೊಸ ಭಾರತದ ಭವಿಷ್ಯವನ್ನು ಬರೆಯುವ ಹೊಸ ಯುಗದ ಉದಯ ಎಂದು ನಾನು ನಂಬುತ್ತೇನೆ.

|

ಸಾವಿರಾರು ವರ್ಷಗಳಿಂದ, ಮಹಾಕುಂಭವು ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸಿದೆ. ಪ್ರತಿ ಪೂರ್ಣಕುಂಭದಲ್ಲೂ ಸಂತರು, ವಿದ್ವಾಂಸರು ಮತ್ತು ಚಿಂತಕರು ತಮ್ಮ ಕಾಲದಲ್ಲಿ ಸಮಾಜದ ಸ್ಥಿತಿಗತಿ ಕುರಿತು ಚರ್ಚಿಸಲು ಸಭೆ ಸೇರುತ್ತಿದ್ದರು. ಅವರ ಪ್ರತಿಬಿಂಬಗಳು ರಾಷ್ಟ್ರ ಮತ್ತು ಸಮಾಜಕ್ಕೆ ಹೊಸ ದಿಕ್ಕು ತೋರಿದ್ದವು. ಪ್ರತಿ 6 ವರ್ಷಗಳಿಗೊಮ್ಮೆ, ಅರ್ಧಕುಂಭದ ಸಮಯದಲ್ಲಿ, ಈ ವಿಚಾರಗಳನ್ನು ಪರಿಶೀಲಿಸಲಾಗುತ್ತಿತ್ತು. 144 ವರ್ಷಗಳ ಕಾಲ ನಡೆದ 12 ಪೂರ್ಣಕುಂಭ ಕಾರ್ಯಕ್ರಮಗಳ ನಂತರ, ಬಳಕೆಯಲ್ಲಿಲ್ಲದ ಸಂಪ್ರದಾಯಗಳನ್ನು ಕೈಬಿಡಲಾಯಿತು, ಹೊಸ ವಿಚಾರಗಳನ್ನು ಸ್ವೀಕರಿಸಲಾಯಿತು ಮತ್ತು ಹೊಸ ಸಂಪ್ರದಾಯಗಳನ್ನು ಸೃಷ್ಟಿಸಲಾಯಿತು.

144 ವರ್ಷಗಳ ನಂತರ, ಈ ಮಹಾಕುಂಭದಲ್ಲಿ, ನಮ್ಮ ಸಂತರು ಮತ್ತೊಮ್ಮೆ ಭಾರತದ ಅಭಿವೃದ್ಧಿ ಪ್ರಯಾಣಕ್ಕಾಗಿ ನಮಗೆ ಹೊಸ ಸಂದೇಶ ನೀಡಿದ್ದಾರೆ. ಆ ಸಂದೇಶ ಅಭಿವೃದ್ಧಿ ಹೊಂದಿದ ಭಾರತ – ವಿಕಿಸಿತ ಭಾರತ.

ಈ ಏಕ್ತಾ ಕಾ ಮಹಾಕುಂಭದಲ್ಲಿ, ಪ್ರತಿಯೊಬ್ಬ ಯಾತ್ರಿಕರು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಯುವಕರಾಗಿರಲಿ ಅಥವಾ ವೃದ್ಧರಾಗಿರಲಿ, ಹಳ್ಳಿಗಳಿಂದ ಅಥವಾ ನಗರಗಳಿಂದ, ಭಾರತದಿಂದ ಅಥವಾ ವಿದೇಶಗಳಿಂದ, ಪೂರ್ವ ಅಥವಾ ಪಶ್ಚಿಮದಿಂದ, ಉತ್ತರ ಅಥವಾ ದಕ್ಷಿಣದಿಂದ, ಜಾತಿ, ಧರ್ಮ ಮತ್ತು ಸಿದ್ಧಾಂತ ಲೆಕ್ಕಿಸದೆ ಒಟ್ಟುಗೂಡಿದರು. ಇದು ಕೋಟ್ಯಂತರ ಜನರಲ್ಲಿ ವಿಶ್ವಾಸ ತುಂಬಿದ ಏಕ ಭಾರತ - ಶ್ರೇಷ್ಠ ಭಾರತ ದೃಷ್ಟಿಕೋನದ ಸಾಕಾರವಾಗಿತ್ತು. ಈಗ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಧ್ಯೇಯಕ್ಕಾಗಿ ನಾವು ಒಂದೇ ಉತ್ಸಾಹದಲ್ಲಿ ಒಟ್ಟಿಗೆ ಸೇರಬೇಕು.

|

ಚಿಕ್ಕ ಹುಡುಗನಾಗಿದ್ದಾಗ, ಶ್ರೀಕೃಷ್ಣನು ತನ್ನ ತಾಯಿ ಯಶೋಧೆಗೆ ತನ್ನ ಬಾಯಿಯೊಳಗಿನ ಇಡೀ ಬ್ರಹ್ಮಾಂಡದ ಚಿತ್ರವನ್ನು ಬಹಿರಂಗಪಡಿಸಿದ ಘಟನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದೇ ರೀತಿ, ಈ ಮಹಾಕುಂಭದಲ್ಲಿ, ಭಾರತದ ಜನರು ಮತ್ತು ಇಡೀ ವಿಶ್ವದ ಜನರು ಭಾರತದ ಸಾಮೂಹಿಕ ಶಕ್ತಿಯ ಬೃಹತ್ ಸಾಮರ್ಥ್ಯ ಕಂಡಿದ್ದಾರೆ. ನಾವು ಈಗ ಈ ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮನ್ನು ಅರ್ಪಿಸಿಕೊಳ್ಳಬೇಕು.

ಈ ಹಿಂದೆ, ಭಕ್ತಿ ಚಳವಳಿಯ ಸಂತರು ಭಾರತದಾದ್ಯಂತ ನಮ್ಮ ಸಾಮೂಹಿಕ ಸಂಕಲ್ಪದ ಬಲವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಸ್ವಾಮಿ ವಿವೇಕಾನಂದರಿಂದ ಶ್ರೀ ಅರಬಿಂದೋವರೆಗೆ, ಪ್ರತಿಯೊಬ್ಬ ಮಹಾನ್ ಚಿಂತಕರೂ ನಮ್ಮ ಸಾಮೂಹಿಕ ಸಂಕಲ್ಪದ ಶಕ್ತಿಯನ್ನು ನಮಗೆ ನೆನಪಿಸಿದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರು ಸಹ ಇದನ್ನೇ ಅನುಭವಿಸಿದರು. ಸ್ವಾತಂತ್ರ್ಯಾ ನಂತರ, ಈ ಸಾಮೂಹಿಕ ಶಕ್ತಿಯನ್ನು ಸರಿಯಾಗಿ ಗುರುತಿಸಿ ಎಲ್ಲರ ಕಲ್ಯಾಣವನ್ನು ಹೆಚ್ಚಿಸುವಲ್ಲಿ ಬಳಸಿದ್ದರೆ, ಅದು ಹೊಸದಾಗಿ ಸ್ವತಂತ್ರ ರಾಷ್ಟ್ರಕ್ಕೆ ಒಂದು ದೊಡ್ಡ ಶಕ್ತಿಯಾಗುತ್ತಿತ್ತು. ದುರದೃಷ್ಟವಶಾತ್, ಇದನ್ನು ಮೊದಲೇ ಮಾಡಲಾಗಿಲ್ಲ. ಆದರೆ ಈಗ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಜನರ ಈ ಸಾಮೂಹಿಕ ಶಕ್ತಿ ಹೇಗೆ ಒಟ್ಟಿಗೆ ಬರುತ್ತಿದೆ ಎಂಬುದನ್ನು ವೀಕ್ಷಿಸಲು ನನಗೆ ಸಂತೋಷವಾಗಿದೆ.

|

ವೇದಗಳಿಂದ ವಿವೇಕಾನಂದರವರೆಗೆ, ಪ್ರಾಚೀನ ಗ್ರಂಥಗಳಿಂದ ಆಧುನಿಕ ಉಪಗ್ರಹಗಳವರೆಗೆ, ಭಾರತದ ಶ್ರೇಷ್ಠ ಸಂಪ್ರದಾಯಗಳು ಈ ರಾಷ್ಟ್ರವನ್ನು ರೂಪಿಸಿವೆ. ಒಬ್ಬ ನಾಗರಿಕನಾಗಿ, ನಮ್ಮ ಪೂರ್ವಜರು ಮತ್ತು ಸಂತರ ನೆನಪುಗಳಿಂದ ನಾವು ಹೊಸ ಸ್ಫೂರ್ತಿ ಪಡೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಈ ಏಕ್ತಾ ಕಾ ಮಹಾಕುಂಭವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಲು ನಮಗೆ ಸಹಾಯ ಮಾಡಲಿ. ಏಕತೆಯನ್ನು ನಮ್ಮ ಮಾರ್ಗದರ್ಶಿ ತತ್ವವನ್ನಾಗಿ ಮಾಡಿಕೊಳ್ಳೋಣ. ರಾಷ್ಟ್ರ ಸೇವೆಯೇ ದೈವಿಕ ಸೇವೆ ಎಂಬ ತಿಳಿವಳಿಕೆಯೊಂದಿಗೆ ನಾವು ಕೆಲಸ ಮಾಡೋಣ.

ಕಾಶಿಯಲ್ಲಿ ನನ್ನ ಚುನಾವಣಾ ಪ್ರಚಾರ ಸಮಯದಲ್ಲಿ, "ಗಂಗಾ ಮಾತೆ ನನ್ನನ್ನು ಕರೆದಿದ್ದಾಳೆ" ಎಂದು ನಾನು ಹೇಳಿದ್ದೆ. ಇದು ಕೇವಲ ಭಾವನೆಯಲ್ಲ, ನಮ್ಮ ಪವಿತ್ರ ನದಿಗಳ ಸ್ವಚ್ಛತೆಯ ಕಡೆಗೆ ಜವಾಬ್ದಾರಿಯ ಕರೆಯೂ ಆಗಿತ್ತು. ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದಲ್ಲಿ ನಿಂತಾಗ, ನನ್ನ ಸಂಕಲ್ಪ ಇನ್ನಷ್ಟು ಬಲವಾಯಿತು. ನಮ್ಮ ನದಿಗಳ ಸ್ವಚ್ಛತೆಯು ನಮ್ಮ ಸ್ವಂತ ಜೀವನಕ್ಕೆ ಆಳವಾಗಿ ಸಂಬಂಧಿಸಿದೆ. ನಮ್ಮ ನದಿಗಳು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಅವುಗಳನ್ನು ಜೀವ ನೀಡುವ ತಾಯಂದಿರಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಮಹಾಕುಂಭವು ನಮ್ಮ ನದಿಗಳ ಸ್ವಚ್ಛತೆಯ ಕಡೆಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡಿದೆ.

|

ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸುವುದು ಸುಲಭದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನಮ್ಮ ಭಕ್ತಿಯಲ್ಲಿ ಯಾವುದೇ ನ್ಯೂನತೆಗಳಿದ್ದರೆ ನಮ್ಮನ್ನು ಕ್ಷಮಿಸುವಂತೆ ನಾನು ಗಂಗಾ ಮಾತೆ, ಯಮುನಾ ಮಾತೆ ಮತ್ತು ಸರಸ್ವತಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ. ಜನತಾ ಜನಾರ್ದನರನ್ನು ನಾನು ದೈವತ್ವದ ಸಾಕಾರವಾಗಿ ನೋಡುತ್ತೇನೆ. ಅವರಿಗೆ ಸೇವೆ ಸಲ್ಲಿಸುವ ನಮ್ಮ ಪ್ರಯತ್ನಗಳಲ್ಲಿ ಯಾವುದೇ ನ್ಯೂನತೆಗಳಿದ್ದರೆ, ನಾನು ಜನರ ಕ್ಷಮೆ ಕೋರುತ್ತೇನೆ.

ಮಹಾಕುಂಭಕ್ಕೆ ಕೋಟ್ಯಂತರ ಜನರು ಭಕ್ತಿಯಿಂದ ಬಂದರು. ಅವರಿಗೆ ಸೇವೆ ಸಲ್ಲಿಸುವುದು ಕೂಡ ಅದೇ ರೀತಿಯ ಭಕ್ತಿಯಿಂದ ನಿರ್ವಹಿಸಲಾದ ಜವಾಬ್ದಾರಿಯಾಗಿತ್ತು. ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ, ಯೋಗಿ ಜಿ ಅವರ ನೇತೃತ್ವದಲ್ಲಿ ಆಡಳಿತ ಮತ್ತು ಜನರು ಒಟ್ಟಾಗಿ ಈ ಏಕ್ತಾ ಕಾ ಮಹಾಕುಂಭವನ್ನು ಯಶಸ್ವಿಗೊಳಿಸಿದರು ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ, ಏಕ್ತಾ ಕಾ ಮಹಾಕುಂಭದಲ್ಲಿ ಆಡಳಿತಗಾರರಾಗದೆ, ಬದಲಾಗಿ, ಎಲ್ಲರೂ ಶ್ರದ್ಧಾಭರಿತ ಸೇವಕರಾಗಿದ್ದರು. ನೈರ್ಮಲ್ಯ ಕಾರ್ಮಿಕರು, ಪೊಲೀಸರು, ದೋಣಿ ಚಾಲಕರು, ಚಾಲಕರು, ಆಹಾರ ಪೂರೈಸುವ ಸ್ವಯಂಸೇವಕರು - ಎಲ್ಲರೂ ದಣಿವರಿಯದೆ ಕೆಲಸ ಮಾಡಿದರು. ಅನೇಕ ಅನನುಕೂಲತೆಗಳನ್ನು ಎದುರಿಸುತ್ತಿದ್ದರೂ ಪ್ರಯಾಗರಾಜ್ ಜನರು ಯಾತ್ರಿಕರನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ ರೀತಿ ವಿಶೇಷವಾಗಿ ಸ್ಫೂರ್ತಿದಾಯಕವಾಗಿತ್ತು. ಅವರಿಗೆ ಮತ್ತು ಉತ್ತರ ಪ್ರದೇಶದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.

|

ನಮ್ಮ ದೇಶದ ಉಜ್ವಲ ಭವಿಷ್ಯದ ಬಗ್ಗೆ ನನಗೆ ಯಾವಾಗಲೂ ಅಚಲ ವಿಶ್ವಾಸವಿದೆ. ಈ ಮಹಾಕುಂಭ ವೀಕ್ಷಿಸುವುದು ನನ್ನ ನಂಬಿಕೆಯನ್ನು ಹಲವು ಪಟ್ಟು ಬಲಪಡಿಸಿದೆ.

140 ಕೋಟಿ ಭಾರತೀಯರು ಏಕ್ತಾ ಕಾ ಮಹಾಕುಂಭವನ್ನು ಜಾಗತಿಕ ಸಂದರ್ಭವನ್ನಾಗಿ ಪರಿವರ್ತಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ನಮ್ಮ ಜನರ ಸಮರ್ಪಣೆ, ಭಕ್ತಿ ಮತ್ತು ಪ್ರಯತ್ನಗಳಿಂದ ಪ್ರೇರಿತನಾಗಿ, 12 ಜ್ಯೋತಿರ್ಲಿಂಗಗಳಲ್ಲಿ

ಮೊದಲನೆಯದಾದ ಶ್ರೀ ಸೋಮನಾಥನನ್ನು ಶೀಘ್ರದಲ್ಲೇ ಭೇಟಿ ಮಾಡಿ, ಈ ಸಾಮೂಹಿಕ ರಾಷ್ಟ್ರೀಯ ಪ್ರಯತ್ನಗಳ ಫಲವನ್ನು ಅವರಿಗೆ ಅರ್ಪಿಸುತ್ತೇನೆ, ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ.

ಮಹಾಕುಂಭದ ಭೌತಿಕ ರೂಪವು ಮಹಾಶಿವರಾತ್ರಿಯಂದು ಯಶಸ್ವಿಯಾಗಿ ಪರಾಕಾಷ್ಠೆ ತಲುಪಿರಬಹುದು, ಆದರೆ ಗಂಗೆಯ ಶಾಶ್ವತ ಹರಿವಿನಂತೆಯೇ, ಮಹಾಕುಂಭವು ಜಾಗೃತಗೊಳಿಸಿದ ಆಧ್ಯಾತ್ಮಿಕ ಶಕ್ತಿ, ರಾಷ್ಟ್ರೀಯ ಪ್ರಜ್ಞೆ ಮತ್ತು ಏಕತೆ ಮುಂದಿನ ಪೀಳಿಗೆಗಾಗಿ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.